ಬಿಜೆಪಿ ಹೈಕಮಾಂಡ್ ಗುಜರಾತ್ ಮುಖ್ಯಮಂತ್ರಿಯನ್ನು ತೆಗೆದುಹಾಕಿ ಆ ಸ್ಥಾನಕ್ಕೆ ಬೇರೆ ಜನರನ್ನು ನೇಮಕ ಮಾಡಲಿದೆ ಎಂದು ಸೂಚಿಸುವ ಸುದ್ದಿ ಮಾಡಿದ್ದಕ್ಕೆ ನ್ಯೂಸ್ ಪೋರ್ಟಲ್ ಒಂದರ ಸಂಪಾದಕರ ಮೇಲೆ ದೇಶದ್ರೋಹದ ಕೇಸು ದಾಖಲಿಸಲಾಗಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124-ಎ (ದೇಶದ್ರೋಹ) ಅಡಿಯಲ್ಲಿ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ನ್ಯೂಸ್ ಪೋರ್ಟಲ್ ಫೇಸ್ ಆಫ್ ನೇಷನ್ ಸಂಪಾದಕ ಧವಲ್ ಪಟೇಲ್ ವಿರುದ್ಧ ಶುಕ್ರವಾರ ಅಹಮದಾಬಾದ್ ಅಪರಾಧ ಶಾಖೆಯಿಂದ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯನ್ನು ತಮ್ಮ ಹುದ್ದೆಯಿಂದ ತೆಗೆದುಹಾಕಿ, ಅವರ ಸ್ಥಾನಕ್ಕೆ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ನೇಮಕ ಮಾಡಲಿದೆ ಎಂದು ಸೂಚಿಸುವ ಸುದ್ದಿಯನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ದೇಶದ್ರೋಹದ ಆರೋಪದಡಿ ಗುಜರಾತಿ ಸುದ್ದಿ ಪೋರ್ಟಲ್ನ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ಕೊರೊನಾ ವೈರಸ್ ಸಾಂಕ್ರಾಮಿಕದ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ, ಪಟೇಲನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ, ಬಂಧಿಸಲಾಗಿಲ್ಲ ಮತ್ತು ಎಸ್ವಿಪಿ ಆಸ್ಪತ್ರೆಗೆ ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿದೆ” ಎಂದು ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಬಿ.ವಿ.ಗೋಹಿಲ್ ಹೇಳಿದ್ದಾರೆ.
ಎಫ್ಐಆರ್ ಪ್ರಕಾರ, ಪಟೇಲ್ ತಮ್ಮ ಸುದ್ದಿ ಪೋರ್ಟಲ್ನಲ್ಲಿ ಮೇ 7 ರಂದು ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆಯನ್ನು ಸೂಚಿಸುವ ವರದಿಯನ್ನು ಪ್ರಕಟಿಸಿದ್ದರು. ಮಾಂಡವಿಯಾ ಅವರನ್ನು ಬಿಜೆಪಿ ಹೈಕಮಾಂಡ್ ಕರೆ ಮಾಡಿದೆ ಎಂದು ಚರ್ಚಿಸಲಾಗಿದೆ, ರಾಜ್ಯದಲ್ಲಿ ಕೊರೊನಾ ವೈರಸ್ ಬಿಕ್ಕಟ್ಟನ್ನು ರೂಪಾನಿ ನಿಭಾಯಿಸಿದ ಬಗ್ಗೆ ಹೈಕಮಾಂಡ್ ಸಂತೋಷವಾಗಿಲ್ಲ ಎಂದು ಲೇಖನದಲ್ಲಿ ಹೇಳಲಾಗಿತ್ತು.
ಓದಿ: ಮುಖ್ಯಮಂತ್ರಿ ಜೊತೆ ಸಭೆ ನಡೆಸಿದ ಕೆಲವೇ ಗಂಟೆಗಳಲ್ಲಿ ಗುಜರಾತ್ ಶಾಸಕನಿಗೆ ಕೊರೊನಾ ಪಾಸಿಟಿವ್!
ಸದ್ದು…ಈ ಸುದ್ದಿಗಳೇನಾದವು ವಿಶೇಷ ಕಾರ್ಯಕ್ರಮದ ಸಂಚಿಕೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ದೇಶದ್ರೋಹದ ಕಾನೂನಿನ ದುರುಪಯೋಗ.