Homeಕರ್ನಾಟಕನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

ನೋ ಡಿಸಿಎಂ, ನಿಷ್ಠರೇ ಡ್ರಾಪ್,ಮುಸುಕಿನ ಗುದ್ದಾಟಕ್ಕೆ ಕೊನೆಯಿಲ್ಲ ಯಡಿಯೂರಪ್ಪನವರ ಸಂಪುಟ ಸಂಕಟ ಏನು?

- Advertisement -
- Advertisement -

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ.

ಇವ್ಯಾವುವೂ ಅನಿರೀಕ್ಷಿತವಲ್ಲ. ಅನರ್ಹ ಶಾಸಕರು ಗೆಲ್ಲದಿದ್ದರೆ ಒಂಥರಾ ಕಷ್ಟ; ಗೆದ್ದರೆ ಇನ್ನೊಂಥರಾ ಕಷ್ಟ ಎಂಬುದು ಬಿಜೆಪಿಯೊಳಗೆ ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. ಆದರೆ, ಕೆಲವೇ ತಿಂಗಳ ಕೆಳಗೆ ಫಟಾಫಟ್ ತೀರ್ಮಾನಗಳನ್ನು ನಿಷ್ಠುರವಾಗಿ ಮಾಡುತ್ತಿದ್ದ ಬಿಜೆಪಿ ಹೈಕಮಾಂಡ್ ಇದೀಗ ಎಲ್ಲವನ್ನೂ ಎಳೆಯುತ್ತಿರುವುದಕ್ಕೆ ಮಾತ್ರ ವಿಶೇಷ ಕಾರಣಗಳಿವೆ. ಮೋದಿ – ಷಾ ಜೋಡಿಯನ್ನು ಮಣಿಸಲು ಯಡಿಯೂರಪ್ಪನವರ ಥರದ ಸೀಸನ್ಡ್ ರಾಜಕಾರಣಿಗಳು ಅವರದ್ದೇ ಪಟ್ಟುಗಳನ್ನು ಹಾಕಲು ಶುರು ಮಾಡಿದ್ದಾರೆ. ಪ್ರಧಾನಮಂತ್ರಿ ಮೋದಿಯ ಎದುರೇ ಯಡಿಯೂರಪ್ಪನವರು ಸಾರ್ವಜನಿಕ ಸಭೆಯಲ್ಲಿ ಕೇಂದ್ರದಿಂದ ಅನುದಾನ ಸರಿಯಾಗಿ ಬಂದಿಲ್ಲ ಎಂಬಂತೆ ಮಾತಾಡಿದ್ದು, ಎರಡು ಬಿಜೆಪಿ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಲೀಡ್ ನ್ಯೂಸ್ ಬರುವಂತೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ನಡೆದ ಘಟನೆಗಳಲ್ಲ. ಹಾಗೆಯೇ ತಾನಿಷ್ಟು ಕಷ್ಟಪಟ್ಟು ಕರ್ನಾಟಕದೊಳಗೆ ಬಿಜೆಪಿ ಸರ್ಕಾರ ತಂದಿದ್ದೇನೆ; ಇದರ ಚುಕ್ಕಾಣಿ ಹಿಡಿದಿರುವ ತನ್ನ ಮಾತು ನಡೆಯದಿದ್ದರೆ ಪಟ್ಟು ಸಡಿಲಿಸುವವನಲ್ಲ ಎಂಬ ಸೂಚನೆಯನ್ನೂ ಕೊಟ್ಟಾಗಿದೆ.

ಇಷ್ಟು ಗಡುಸಾಗಿ ಯಡಿಯೂರಪ್ಪನವರ ಸಂಪುಟ ರಚನೆಯ ಸಂದರ್ಭದಲ್ಲಿ ಇರಲಿಲ್ಲ. ಹಾಗಾಗಿಯೇ ಮೂವರು ಡಿಸಿಎಂಗಳನ್ನು ಹೇರಿಸಿಕೊಳ್ಳಬೇಕಾಗಿ ಬಂದಿತ್ತು. ಉಪಮುಖ್ಯಮಂತ್ರಿ ನೇಮಕಕ್ಕೆ ಮುಂಚೆಯೇ ಸಂಪುಟ ಸಚಿವರ ಪಟ್ಟಿ ಹೊರಬಿದ್ದಾಗಲೇ ಸೀನಿಯರ್‍ಗಳಲ್ಲದ ಮೂವರು ಹೆಸರು ಮುಖ್ಯಮಂತ್ರಿ ನಂತರ ಇರುವಂತೆ ನೋಡಿಕೊಳ್ಳಲಾಗಿತ್ತು. ಅಂದರೆ, ಪಟ್ಟಿಯ ಅನುಕ್ರಮಣಿಕೆಯನ್ನೂ ಹೈಕಮಾಂಡ್‍ನ ಸಂತೋಷಕ್ಕೆ ತಕ್ಕಂತೆ ಮಾಡಿ ಕಳಿಸುವ ಮಟ್ಟಕ್ಕೆ ಯಡಿಯೂರಪ್ಪನವರ ಮೇಲೆ ನಿಯಂತ್ರಣ ಸಾಧಿಸಲಾಗಿತ್ತು.

ಆದರೆ ಈಗಿನ ಯಡಿಯೂರಪ್ಪನವರು ಬೇರೆ. ಕಾಂಗ್ರೆಸ್, ಜೆಡಿಎಸ್‍ಗಳಿಂದ ಎತ್ತಾಕಿಕೊಂಡು ಬಂದವರ ಪೈಕಿ ಬಹುತೇಕರನ್ನು ಅವರು ಗೆಲ್ಲಿಸಿಕೊಂಡಿದ್ದಾರೆ. ಮಂಡ್ಯ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಬಿಜೆಪಿ ಪ್ರಥಮ ಬಾರಿಗೆ ಖಾತೆ ತೆರೆದಿದೆ. ಮಹಾರಾಷ್ಟ್ರ ಮುಖಭಂಗದ ನಂತರ ದೆಹಲಿ ಚಾಣಕ್ಯರ ಸಾಮಥ್ರ್ಯದ ಮಿತಿಯೂ ಬಯಲಿಗೆ ಬಂದಿದೆ. ಹಾಗಾಗಿ ಯಡಿಯೂರಪ್ಪನವರೂ ಪಟ್ಟು ಹಾಕತೊಡಗಿದ್ದಾರೆ. ಇದನ್ನು ಈಗಿಂದೀಗಲೇ ಮಣಿಸಲಾಗದು ಎಂಬುದರ ಅರಿವು ಇರುವ ಬಿಜೆಪಿಯ ದೆಹಲಿ ತ್ರೈಕಮಾಂಡ್ ಸಚಿವ ಸಂಪುಟ ವಿಸ್ತರಣೆಯನ್ನೇ ಎಳೆಯುತ್ತಿದ್ದಾರೆ.

ಹಳೇ ಡಿಸಿಎಂಗಳಾದ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪರಿಗೆ ಏನೇ ಅಸಮಾಧಾನವಿದ್ದರೂ ತಮ್ಮನ್ನೂ ಡಿಸಿಎಂ ಮಾಡಿ ಎಂದು ಕೇಳುವ ಸ್ಥಿತಿಯಲ್ಲೇನೂ ಇಲ್ಲ. ಆದರೆ, ಸವದಿ, ಅಶ್ವತ್ಥನಾರಾಯಣ ಮತ್ತು ಕಾರಜೋಳ ಡಿಸಿಎಂ ಪದವಿಯಿಂದ ಇಳಿದರೆ ಅವರಿಗೆ ಸಂತೋಷವೇ. ಹೊಸ ಡಿಸಿಎಂಗಳಾಗಲು ತುದಿಗಾಲಲ್ಲಿ ನಿಂತಿರುವವರೆಂದರೆ ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ. ಇಬ್ಬರಲ್ಲಿ ಯಾರೊಬ್ಬರಿಗೆ ಕೊಟ್ಟರೂ ಇನ್ನೊಬ್ಬರು ಮುನಿಸಿಕೊಳ್ಳುತ್ತಾರೆ. ಆದರೆ ಅವರಿಬ್ಬರೂ ಡಿಸಿಎಂಗೆ ಪಟ್ಟು ಹಾಕಿದಷ್ಟೂ ಯಡಿಯೂರಪ್ಪನವರಿಗೆ ಒಳ್ಳೆಯದೇ. ಈ ರೀತಿ ನಾಲ್ಕೈದು ಡಿಸಿಎಂಗಳಿರುವ ಹಾಸ್ಯಾಸ್ಪದ ಸನ್ನಿವೇಶಕ್ಕಿಂತ ಇರುವ ಡಿಸಿಎಂಗಳನ್ನೂ ತೆಗೆಯಿರಿ ಎಂದು ವಾದ ಮಂಡಿಸಲು ಅನುಕೂಲವಾಗುತ್ತದೆ. ಆದರೆ, ಕೆಲವೇ ತಿಂಗಳ ಹಿಂದಷ್ಟೇ ಮೇಲಿನಿಂದ ಹೇರಲಾದ ಡಿಸಿಎಂಗಳನ್ನು ಇಷ್ಟು ಬೇಗ ತೆಗೆದುಬಿಡಲು ಹೈಕಮಾಂಡ್ ಒಪ್ಪುವುದೂ ಕಷ್ಟ.

ಬಿಜೆಪಿ ಮೂಲಗಳ ಪ್ರಕಾರ, ಯಡಿಯೂರಪ್ಪನವರ ಆಲೋಚನೆ ಹೀಗಿದೆ. ಬೇರೆ ಬೇರೆ ಕಾರಣಗಳಿಂದ ಯಡಿಯೂರಪ್ಪನವರು 2-3 ಲಿಂಗಾಯಿತ ಸಚಿವರನ್ನು ಕೈಬಿಡುವ ಸಾಧ್ಯತೆ ಇದೆ. ಸಿ.ಸಿ.ಪಾಟೀಲ್ ಡ್ರಾಪ್ ಆಗುವುದು ಬಹುತೇಕ ಖಚಿತ. ಅದಲ್ಲದೇ ಯಡಿಯೂರಪ್ಪನವರ ಆಪ್ತರಾಗಿರುವ ಬೊಮ್ಮಾಯಿ ಮತ್ತು ಮಾಧುಸ್ವಾಮಿಯವರ ಬಗ್ಗೆಯೂ ಸಿಎಂ ಒಲವು ಕಡಿಮೆ ಇದೆ. ಇದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಸಂಗತಿಗಳು ಆಶ್ಚರ್ಯಕರವಾಗಿದೆ. ಇಬ್ಬರೂ ವೀರಶೈವ ಮಹಾಸಭಾ ಲಾಬಿಯೊಳಗೆ ತಮ್ಮನ್ನು ವೀರಶೈವ ಸಮಾಜದಲ್ಲಿ ಯಡಿಯೂರಪ್ಪನವರ ನಂತರದ ನಂ.2 ಸ್ಥಾನದಲ್ಲಿ ಕಲ್ಪಿಸಿಕೊಂಡು ಆ ರೀತಿ ಪ್ರೊಜೆಕ್ಟ್ ಮಾಡಿಕೊಳ್ಳುತ್ತಿದ್ದಾರೆಂದು ಸಿಎಂ ಬಳಗಕ್ಕೆ ಅನಿಸಿದೆ. ಆ ಜಾಗದಲ್ಲಿ ತಮ್ಮ ಎರಡನೆಯ ಪುತ್ರನನ್ನು ಈಗಾಗಲೇ ಕಲ್ಪಿಸಿಕೊಂಡಿರುವ ಯಡಿಯೂರಪ್ಪನವರಿಗೆ ಈಗಲೇ ಮುನ್ನೆಚ್ಚರಿಕೆ ವಹಿಸಬೇಕೆನಿಸಿದ್ದರೆ ಆಶ್ಚರ್ಯವಿಲ್ಲ.

ಕನಕವೃತ್ತದ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡಿದ್ದಲ್ಲದೇ ವಿಜಯೇಂದ್ರ ಜೊತೆ ಸಹಾ ಸಂಬಂಧ ಕೆಡಿಸಿಕೊಂಡಿರುವುದು ಮಾಧುಸ್ವಾಮಿಯವರಿಗೆ ತೊಡಕು ಎನ್ನಲಾಗುತ್ತಿದೆ. ಹಾವೇರಿ ಜಿಲ್ಲೆಯ ಸಾದರ ಲಿಂಗಾಯಿತ ಬಿ.ಸಿ.ಪಾಟೀಲ್ ಅರ್ಹರಾಗಿ ಸಂಪುಟಕ್ಕೆ ಸೇರುವಾಗ, ಅದೇ ಜಿಲ್ಲೆಯ ಇನ್ನೊಬ್ಬ ಸಾದರ ಲಿಂಗಾಯಿತ ಬೊಮ್ಮಾಯಿಯವರೂ ಇರುವುದು ಅಸಮತೋಲನವಾಗುತ್ತದೆ ಎಂಬ ವಾದವೂ ಇದೆ. ಅಂತಿಮವಾಗಿ ಒಬ್ಬ ಲಿಂಗಾಯಿತರನ್ನು ಕೈಬಿಡುವುದಂತೂ ಖಚಿತವಾಗಿದೆ. ಉಮೇಶ್ ಕತ್ತಿಯನ್ನೂ ತೆಗೆದುಕೊಳ್ಳಲೇಬೇಕಾದ ಸ್ಥಿತಿಯಲ್ಲಿ ಯಡಿಯೂರಪ್ಪನವರು ಇದ್ದಾರೆ. ಹೀಗಾಗಿ ಲಿಂಗಾಯಿತರ ಭಾರದಿಂದ ಸಂಪುಟ ನೆಲಕಚ್ಚದಿರಬೇಕಾದರೆ ಯಾವುದೋ ರೀತಿಯ ಬ್ಯಾಲೆನ್ಸಿಂಗ್ ಕೆಲಸ ಆಗುತ್ತದೆ.

ಹಿಂದಿನ ಸಾರಿ ಇಡೀ ದಕ್ಷಿಣ ಕನ್ನಡ ಜಿಲ್ಲೆಯಿಂದ ಒಬ್ಬರನ್ನೂ ತೆಗೆದುಕೊಂಡಿರಲಿಲ್ಲ; ಜೊತೆಗೆ ದಲಿತ ಬಲಗೈ ಸಮುದಾಯಕ್ಕೂ ಪ್ರಾತಿನಿಧ್ಯ ಕೊಡಲು ಹಿರಿಯ ಶಾಸಕ ಸುಳ್ಯದ ಅಂಗಾರರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ತಮ್ಮ ನೀಲಿ ಕಣ್ಣಿನ ಹುಡುಗ ಲಿಂಬಾವಳಿಯನ್ನೂ ಬೋವಿ ಕೋಟಾದಲ್ಲಿ ತೆಗೆದುಕೊಳ್ಳಬೇಕೆಂದು ನಿಶ್ಚಯಿಸಿದ್ದಾರೆ. ಆದರೆ, ಅದಕ್ಕೆ ಸಿಡಿಗಳು ಹೊರಬೀಳುವ ಗುಮ್ಮ ತೋರಿಸಿ ಅಡ್ಡಿ ಮಾಡಬಹುದು ಎಂಬ ಸಂತೋಷವೂ ಕೆಲವರಲ್ಲಿ ಮನೆ ಮಾಡಿದೆ.

ಏನೇ ಇದ್ದರೂ ಅಂತಿಮವಾಗಿ 2-3 ಸೀಟುಗಳನ್ನು ಖಾಲಿ ಇಟ್ಟುಕೊಳ್ಳುವುದಂತೂ ಕಾಯಂ. ಒಂದೆಡೆ ಅತೃಪ್ತರಿಗೆ ಕ್ಯಾರೆಟ್ ತೋರಿಸಲು ಅನುಕೂಲ; ಇನ್ನೊಂದೆಡೆ ‘ಈ ಸರ್ಕಾರ ಬರಲು ಕಾರಣರಾದ ಯಾರನ್ನೂ ಯಡಿಯೂರಪ್ಪನವರು ಕೈಬಿಡಲಿಲ್ಲ’ವೆಂಬ ಖ್ಯಾತಿ ಉಳಿದುಕೊಳ್ಳಬೇಕು. ಹಾಗಾಗಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಇಬ್ಬರಿಗೂ ಸಚಿವ ಸ್ಥಾನ ಕಲ್ಪಿಸುವ ಅಗತ್ಯವಿದೆ. ರಿಜ್ವಾನ್ ಅರ್ಷದ್‍ರ ಎಂಎಲ್‍ಸಿ ಸೀಟು ಖಾಲಿಯಾದಾಗ ಅಲ್ಲಿ ಇಬ್ಬರಲ್ಲೊಬ್ಬರನ್ನು ಕೂರಿಸಿ ಮಂತ್ರಿ ಮಾಡಬಹುದು. ಆದರೆ, ಆಗಲೂ ಇರುವುದು ಒಂದೇ ಸೀಟು ಎಂಬ ಚಿಂತೆ ಈ ಎಲ್ಲರಲ್ಲೂ ಇದೆ. ಶರತ್ ಬಚ್ಚೇಗೌಡರ ಮೇಲೆ ಯಡಿಯೂರಪ್ಪನವರ ಸಿಟ್ಟು ಇನ್ನೂ ಮುಂದುವರೆದಿರುವುದನ್ನು ಶಾಸಕರ ಪ್ರಮಾಣ ಸ್ವೀಕಾರ ಸಂದರ್ಭದಲ್ಲಿ ವ್ಯಕ್ತವಾದುದನ್ನು ನೋಡಿದರೆ ಎಂ.ಟಿ.ಬಿ ಪರವಾಗಿ ಯಡ್ಡಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದ್ದೇ ಇದೆ.

ಆದರೆ, ಅದೇ ಎಂ.ಎಲ್.ಸಿ ಸ್ಥಾನದ ಮೇಲೆ ಕಣ್ಣಿಟ್ಟ ಇನ್ನೂ ಇಬ್ಬರಿದ್ದಾರೆ. ಒಬ್ಬರು ಡಿಸಿಎಂ ಸವದಿ. ಅವರ ಡಿಸಿಎಂ ಪಟ್ಟ ಮುಂದುವರೆಯಲು ಈಗ ಬೇರೆ ಯಾವ ದಾರಿಯೂ ಇಲ್ಲ. ಹಾಗೆಯೇ ತನ್ನಂತಹ ‘ಮುತ್ಸದ್ದಿ’ಗೆ ಸ್ಥಾನ ಕಲ್ಪಿಸದಿದ್ದರೆ ಹೇಗೆ ಎಂಬ ವಾದ ಎಚ್.ವಿಶ್ವನಾಥ್‍ರದ್ದೂ ಇರುತ್ತದೆ. ಅಂತಿಮವಾಗಿ ಸಂಪುಟ ರಚನೆಯಲ್ಲಿ ಯಡಿಯೂರಪ್ಪನವರಿಗೆ ಒಂದಷ್ಟು ಬಿಟ್ಟುಕೊಟ್ಟು ಎಂಎಲ್‍ಸಿ ಸೀಟು ಸವದಿ ಪಾಲಾಗಿ ಉಳಿದವರಿಗೆ ಫಲವತ್ತಾದ ನಿಗಮ ಮಂಡಳಿಗಳ ತುಪ್ಪ ಸವರುವ ಸಾಧ್ಯತೆಯೇ ಎದ್ದು ಕಾಣುತ್ತಿದೆ.
ಅದೇನೇ ಇದ್ದರೂ ಬಿಜೆಪಿಯೊಳಗೆ ಇನ್ನೊಂದು ಸುತ್ತು ಯಡಿಯೂರಪ್ಪ ವರ್ಸಸ್ ತ್ರೈಕಮಾಂಡ್‍ನ ಮುಸುಕಿನ ಗುದ್ದಾಟ ನಡೆಯುವುದಂತೂ ಖಾಯಂ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...

ಮಮತಾ ಬ್ಯಾನರ್ಜಿಗೆ ಬಿಗ್ ಶಾಕ್: ನೇಮಕಗೊಂಡ ತಿಂಗಳಲ್ಲೇ ಟಿಎಂಸಿ ರಾಜ್ಯಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ರಾಜೀನಾಮೆ

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ...

ಜಿಲ್ಲಾ ನ್ಯಾಯಾಧೀಶೆ ತಬಸ್ಸುಮ್ ಖಾನ್‌ಗೆ ಬಲಪಂಥೀಯರಿಂದ ಬೆದರಿಕೆ : ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್

ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ...

ಎಸ್ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ ಪಕ್ಷಪಾತದ ಬಗ್ಗೆ ಸಿಜೆಐಗೆ ಪ್ರತಿಪಕ್ಷಗಳಿಂದ ಪತ್ರ: ‘ಪ್ರಜಾಪ್ರಭುತ್ವ ಅಪಾಯದಲ್ಲಿದೆ’ ಎಂದು ಆರೋಪ

ದೇಶದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರತೀಯ ಚುನಾವಣಾ ಆಯೋಗವು (ECI) ಪಕ್ಷಪಾತ ಧೋರಣೆ ತಳೆದಿದೆ ಎಂದು ಆರೋಪಿಸಿ, 24 ವಿರೋಧ ಪಕ್ಷಗಳ ನಾಯಕರು ಹಾಗೂ ಒಬ್ಬರು ಸ್ವತಂತ್ರ...

ಬೆಂಗಳೂರು| ಕೆ.ಆರ್. ವೃತ್ತದ ಬಳಿ ಬಿಎಂಟಿಸಿ ಬಸ್‌ಗಳ ನಡುವೆ ಅಪಘಾತ; ಹಲವರಿಗೆ ಗಾಯ

ಇಂದು ಬೆಳಿಗ್ಗೆ ವಿಧಾನಸೌಧದಿಂದ ಸ್ವಲ್ಪ ದೂರದಲ್ಲಿರುವ ಜನನಿಬಿಡ ಕೆ.ಆರ್. ವೃತ್ತ ಜಂಕ್ಷನ್ ಬಳಿ ಎರಡು ಬಿಎಂಟಿಸಿ ಬಸ್‌ಗಳು ಡಿಕ್ಕಿ ಹೊಡೆದ ಪರಿಣಾಮ ಹಲವಾರು ಪ್ರಯಾಣಿಕರು ಗಾಯಗೊಂಡರು. ಡಿಕ್ಕಿಯ ಪರಿಣಾಮ ಬಸ್ಸಿನೊಳಗೆ ಹಲವಾರು ಪ್ರಯಾಣಿಕರು...

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಲೋಪ ಆರೋಪ; ಕೋಲಾರ-ಮೈಸೂರಿನ ಅಧಿಕಾರಿಗಳಿಗೆ ನೋಟಿಸ್ ಜಾರಿ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಗೆ ಸಂಬಂಧಿಸಿದಂತೆ, ಕೋಲಾರ ಮತ್ತು ಮೈಸೂರಿನಲ್ಲಿ ನಡೆದ ಕಾರ್ಯವಿಧಾನದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿಬಂದೆ. ಕೋಲಾರದಲ್ಲಿ, ಪರಿಷ್ಕರಣಾ ಕಾರ್ಯದ ಸಮಯದಲ್ಲಿ ಕರ್ತವ್ಯ...