Homeಮುಖಪುಟಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ.

- Advertisement -
- Advertisement -

| ಯೋಗೇಂದ್ರ ಯಾದವ್ |

ಒಂದು ಅಸಾಮಾನ್ಯ ಅಸಾಧಾರಣ ಚುನಾವಣೆಯ ಅಸಾಧಾರಣ ಫಲಿತಾಂಶ ನಮ್ಮೆದುರಿಗಿದೆ. ಬಿಜೆಪಿಯ ಗೆಲುವಿನ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ ಎನ್ನುವ ಕಾರಣಕ್ಕಷ್ಟೇ ಈ ಚುನಾವಣೆ ಅಸಾಧಾರಣವಾಗಿಲ್ಲ. ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರವು ಬಹುಮತದಿಂದ ಆಯ್ಕೆಗೊಂಡಿದ್ದಕ್ಕೂ ಈ ಚುನಾವಣೆ ಅಸಾಧಾರಣವಾಗಿಲ್ಲ. ಈ ಚುನಾವಣೆಯ ಪರಿಣಾಮಗಳು ನಮ್ಮ ಪ್ರಜಾಪ್ರಭುತ್ವದ ದೀರ್ಘಕಾಲೀನ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಕಾರಣಕ್ಕೆ ಈ ಚುನಾವಣೆ ಅಸಾಧಾರಣವಾಗಿದೆ.

ಒಂದಂತೂ ಸುಸ್ಪಷ್ಟ – ಈ ಚುನಾವಣೆಯಲ್ಲಿ ಬಿಜೆಪಿಗಿಂತ ನರೇಂದ್ರ ಮೋದಿಯವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಿಸ್ಸಂದೇಹವಾಗಿ ಈ ಚುನಾವಣೆಯಲ್ಲಿ ಬಹಳಷ್ಟು ತಾರತಮ್ಯವಾಗಿದೆ, ನಿಸ್ಸಂದೇಹವಾಗಿಯೂ ಚುನಾವಣಾ ಆಯೋಗವು ಅಂಪೈರ್ ಆಗಿರಬೇಕಾದ ಸಮಯದಲ್ಲಿ ಆಟಗಾರನಾಗಿ ನಿಂತಿದ್ದಿದೆ. ಆದರೆ ಬಿಜೆಪಿಯ ಗೆಲುವಿಗೆ ಈ ನೆಪಗಳನ್ನಷ್ಟೇ ಹೇಳಲಾಗದು. ವಾಸ್ತವವೇನೆಂದರೆ, ಮೋದಿ ಗೆದ್ದಿದ್ದು ಈ ಜನತೆ ಅವರಿಗೆ ಇನ್ನೊಂದು ಅವಕಾಶ ನೀಡಲಿಚ್ಛಿಸುತ್ತಾರೆ ಎನ್ನುವ ಕಾರಣದಿಂದ. ಈ ಜನಾದೇಶ ಕಲಿಸಿದ ಪಾಠಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ ಅದರೊಂದಿಗೆ ಇದರಿಂದ ಆಗುವ ಅಪಾಯಗಳನ್ನೂ ನೋಡಬೇಕಿದೆ.

ಮೊದಲ ಪಾಠ ವಿರೋಧಪಕ್ಷಗಳಿಗಾಗಿ ಇದೆ. ಪ್ರಶ್ನೆ ಇರುವುದು, ಜನರು ಮೋದಿಗೆ ಇನ್ನೊಂದು ಅವಕಾಶ ಕೋಡಬೇಕೆಂದು ಯಾವ ಕಾರಣಕ್ಕೆ ಇಚ್ಛಿಸಿದರು? ಗೆಲುವಿನ ಅಂತರ ನೋಡಿದರೆ ಈ ಜನಾದೇಶ ಮೋದಿ ಸರಕಾರದ 5 ವರ್ಷಗಳ ರೆಕಾರ್ಡ್ ಮೇಲೆ ಸ್ವೀಕೃತಿಯ ಮೊಹರ್ ಹಾಕಿದಂತೆ ಎಂಬ ಭ್ರಮೆ ಉಂಟಾಗಬಹುದು. ಆದರೆ ಇದು ಸತ್ಯವಲ್ಲ. 2014 ಮತ್ತು 2019ರ ಗೆಲುವುಗಳು ಒಂದೆ ತರಹದ್ದು ಅನಿಸುತ್ತವೆ. ಆದರೆ ಈ ಎರಡೂ ಚುನಾವಣೆಗಳ ಇತಿಹಾಸದಲ್ಲಿ ಬಹಳ ದೊಡ್ಡ ಅಂತರವಿದೆ. 2014ರಲ್ಲಿ ಜನರ ಮನಸ್ಸಿನಲ್ಲಿ ಮತ್ತೊಂದು ಕಾಂಗ್ರೆಸ್‍ನ ಭ್ರಷ್ಟ ಮತ್ತು ನಿರುಪಯುಕ್ತ ಸರಕಾರದ ಬಗ್ಗೆ ಆಕ್ರೋಶವಿತ್ತು. ಹಾಗೂ ಎರಡನೆಯದಾಗಿ, ಮೋದಿಯವರ ಬಗ್ಗೆ ಆಶಾಭಾವನೆ ಇತ್ತು. ಈ ಸಲ ಮೋದಿ ಸರಕಾರದೊಂದಿಗೆ ಆಶಾಭಂಗ ಶುರು ಆಗಿತ್ತು, ಸಂದೇಹಗಳಿದ್ದವು, ಆತಂಕಗಳೂ ಇದ್ದವು. ಆದರೆ ಮತದಾರರು ವಿರೋಧಪಕ್ಷಗಳ ಕಡೆ ನೋಡಿದಾಗ ಅಲ್ಲಿ ಯಾವ ಭರವಸೆಯೂ ಕಂಡುಬರುತ್ತಿಲ್ಲ.

ಕೊನೆಗೆ ಮೋದಿ ವಿರುದ್ಧದ ಅಸಂತೋಷ ಮುಚ್ಚಿಹೋಯಿತು ಹಾಗೂ ವಿರೋಧಪಕ್ಷಗಳ ಮೇಲಿನ ಅವಿಶ್ವಾಸ ಕೆಲಸ ಮಾಡಿತು. ಈ ಜನಾದೇಶ ಎಷ್ಟು ಮೋದಿಯವರದ್ದಾಗಿದೆಯೋ ಅಷ್ಟೇ ವಿರೋಧಪಕ್ಷಗಳ ನಿರುಪಯುಕ್ತತೆಯ ವಿರುದ್ಧದ್ದೂ ಆಗಿದೆ.

ಎರಡನೆಯ ಪಾಠ, ಚುನಾವಣೆ ಗೆಲ್ಲುವ ಹಳೆಯ ತಂತ್ರಗಳು ಈಗ ಕೆಲಸ ಮಾಡುವುದಿಲ್ಲ. ಬರೀ ಮೋದಿ ವಿರೋಧದ ರಾಜಕೀಯ ಜನತೆ ಸ್ವೀಕರಿಸುವುದಿಲ್ಲ. ಇದರಿಂದ ನರೇಂದ್ರ ಮೋದಿಯವರಿಗಿಂತ ಮೋದಿ ವಿರೋಧಗಳಿಗೇ ಹೆಚ್ಚಿನ ನಷ್ಟವಿದೆ. ಅತ್ತ ಉತ್ತರಪ್ರದೇಶದ ಫಲಿತಾಂಶದಿಂದ ಸ್ಪಷ್ಟವಾಗಿದ್ದೇನೆಂದರೆ, ಜಾತಿಯ ಲೆಕ್ಕಾಚಾರಗಳನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವುದು ಅಸಾಧ್ಯ. ಕೇವಲ ದಲಿತ, ಮುಸ್ಲಿಮ್ ಹಾಗೂ ಯಾದವ್ ಸಮೀಕರಣದ ಮಾತುಗಳನ್ನಾಡಿದರೆ ಈ ಜಾತಿಗಳ ಮತಗಳೂ ದಕ್ಕುವುದಿಲ್ಲ. ಪಕ್ಷಗಳ ಮೈತ್ರಿ ಉಪಯುಕ್ತ ಹಾಗೂ ಅವಶ್ಯಕವೂ ಇದೆ, ಆದರೆ ಬರೀ ಮೈತ್ರಿ ರಚಿಸುವುದರಿಂದ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಾಳೆಯ ಮೇಲೆ ಎಷ್ಟು ಬಲಶಾಲಿಯಾಗಿ ತೋರುತ್ತಿತ್ತು, ಮಹಾರಾಷ್ಟ್ರದ ಮೈತ್ರಿಯೂ ಗಟ್ಟಿಯಾಗಿತ್ತು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯ ಮೈತ್ರಿಗಳೂ ತುಂಬಾ ದೊಡ್ಡವು, ಆದರೆ ಇವ್ಯಾವೂ ಕೆಲಸ ಮಾಡಲಿಲ್ಲ.

ಮೂರನೇ ಪಾಠ, ಜನಾದೇಶದ ನಿರ್ಮಾಣ ಮಾಡಬೇಕೆಂದರೆ, ಜನತೆಯನ್ನು ದೇಶದೊಂದಿಗೆ ಬೆಸೆಯುವುದು ಅತ್ಯವಶ್ಯಕ. ಮೋದಿಯವರು ದೇಶದ ಸರಾಸರಿ ನಾಗರಿಕನೊಂದಿಗೆ ಸಂವಾದ ಮಾಡಿದರು. ನಿಸ್ಸಂದೇಹವಾಗಿಯೂ ಅವರ ಸಂವಾದದಲ್ಲಿ ಸುಳ್ಳೇ ಹೆಚ್ಚಿತ್ತು. ನಿಸ್ಸಂದೇಹವಾಗಿಯೂ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಮಾತುಗಳೇ ಹೆಚ್ಚಿದ್ದವು. ಈ ಸಲ ಅವರ ಮಾತುಗಳಲ್ಲಿ ನಿರೀಕ್ಷೆಗಳಿಗಿಂತ ಆತಂಕವನ್ನು ಸೃಷ್ಟಿಸುವ ಪ್ರಯತ್ನವೇ ಹೆಚ್ಚಿತ್ತು, ಒಡೆದು ಆಳುವ ನೀತಿಯೂ ಇತ್ತು. ಪ್ರಧಾನ ಮಂತ್ರಿಯವರು ನಿಸ್ಸಂದೇಹವಾಗಿಯೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆಗೆ ತಕ್ಕದ್ದಲ್ಲದ್ದ ಬಹಳಷ್ಟು ಮಾತುಗಳನ್ನಾಡಿದರು. ನಿಸ್ಸಂದೇಹವಾಗಿಯೂ ದೇಶದ ಹೆಚ್ಚಿನ ಮಾಧ್ಯಮಗಳು ಮೋದಿಯವರ ಪರವಾಗಿ ಕೆಲಸ ಮಾಡಿದ್ದವು. ಆದರೆ ಈ ಎಲ್ಲವುಗಳ ಸಹಾಯದಿಂದ ಮೋದಿಯವರು ಒಬ್ಬ ಸರಾಸರಿ ಮತದಾರನಿಗೆ ಅವನು/ಳು ತನ್ನ ಲಾಭ-ನಷ್ಟಗಳಿಗಾಗಿ ಅಲ್ಲದೇ, ದೇಶಕ್ಕಾಗಿ ಮತ ನೀಡುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಿದರು. ವಿರೋಧಪಕ್ಷಗಳ ಬಳಿ ಮತದಾರರ ಸಲುವಾಗಿ ಇಂತಹ ಯಾವುದೇ ದೊಡ್ಡ ಸಂದೇಶವೂ ಇದ್ದಿಲ್ಲ, ಯಾವ ದೊಡ್ಡ ಕನಸೂ ಇದ್ದಿಲ್ಲ ಮತ್ತು ಯಾವ ನಿರೀಕ್ಷೆಯೂ ಇದ್ದಿಲ್ಲ.

ನಾಲ್ಕನೇ ದೊಡ್ಡ ಪಾಠವೆಂದರೆ, ಜನರು ಇಂತಹ ಆಸೆಯ, ನಿರೀಕ್ಷೆಗಳ ಒಂದು ಸಗುಣ ಮುಖವನ್ನು ನೋಡಲಿಚ್ಛಿಸುತ್ತಾರೆ. ತಾವು ಭರವಸೆ ಇಡಬಲ್ಲಂತಹ ಒಬ್ಬ ನಾಯಕನನ್ನು ಬಯಸುತ್ತಾರೆ. ಜನರು ಒಂದು ವೇಳೆ ನರೇಂದ್ರ ಮೋದಿ ಅವರನ್ನು ಇಂತಹ ಮುಖದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ ಜನರಿಗೆ ಇಷ್ಟ ಎಂದು ಇಲ್ಲ. ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ. ಮೋದಿಯಿಂದ ನಿರಾಸೆಗೊಂಡ ಜನರು ರಾಹುಲ್ ಗಾಂಧಿಯ ಕಡೆ ನೋಡಿದಾಗ ಹೆದರಿಕೊಂಡು ಮತ್ತೇ ಮೋದಿಯವರಲ್ಲೇ ಸದ್ಗುಣಗಳನ್ನು ಹುಡುಕತೊಡಗುತ್ತಾರೆ. ಅಲ್ಲಿ ಸತ್ಯ ಕಾಣದಿದ್ದರೂ ಗಟ್ಟಿತನವಂತೂ ಅವರಿಗೆ ಕಾಣಿಸುತ್ತದೆ. ವಿರೋಧಪಕ್ಷಗಳ ಬಳಿ ಸಂದೇಶವೂ ಇರಲಿಲ್ಲ, ಸಂದೇಶಕಾರರೂ ಇರಲಿಲ್ಲ. ನಾವು ನೀವು ಇಷ್ಟಪಡಬಹುದು ಅಥವಾ ಬಿಡಬಹುದು ಆದರೆ, ವಿಶ್ವಾದ್ಯಂತ ನೇರವಾಗಿ ವ್ಯಕ್ತಿತ್ವಗಳ ಸ್ಪರ್ಧೆ ಆಗುತ್ತಿವೆ. ಹಾಗೂ ಇಂದು ದೇಶವು ಒಂದು ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದೆ.

ಈ ಜನಾದೇಶವು ಹೇಳಿದ ಪಾಠಗಳೊಂದಿಗೆ ಇದರ ಅಪಾಯಗಳನ್ನೂ ತಿಳಿದುಕೊಳ್ಳಬೇಕಿದೆ. ಇಂತಹ ಜನಾದೇಶ ಅಹಂಕಾರ ಹುಟ್ಟಿಸಬಲ್ಲುದು. ಹಿಂದು-ಮುಸ್ಲಿಮ್ ದ್ವೇಷ ಹುಟ್ಟಿಸಿ ಗೆದ್ದುಕೊಂಡ ಚುನಾವಣೆ ಭಯವನ್ನೂ ಹುಟ್ಟಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ವಧರ್ಮದ ಎರಡು ದೊಡ್ಡ ಆಧಾರಸ್ತಂಭಗಳಾದ ಲೋಕತಂತ್ರ ಮತ್ತು ವಿವಿಧತೆಗಳಿಗೆ ದೊಡ್ಡ ಅಪಾಯವಿದೆ. ಪ್ರಶ್ನೆ ಇರುವುದು ಈ ಪ್ರಶ್ನೆಗಳನ್ನು ಮುಖಾಮುಖಿ ಎದುರಿಸುವವರ್ಯಾರು? ಸದ್ಯದ ವಿರೋಧಪಕ್ಷಗಳು ಈ ಸ್ಪರ್ಧೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷದ ರೂಪದಲ್ಲಿ ಕಾಂಗ್ರೆಸ್ ಅಂತೂ ಈ ಕೆಲಸದಲ್ಲಿ ಅಪ್ರಸ್ತುತವಷ್ಟೇ ಅಲ್ಲ, ಆ ಕಾರ್ಯಕ್ಕೆ ಒಂದು ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಸ್ವಧರ್ಮದ ರಕ್ಷಣೆಗೆ ಒಂದು ಹೊಸ ಪರ್ಯಾಯದ ಅವಶ್ಯಕತೆ ಇದೆ. ಈ ಪರ್ಯಾಯದ ದಾರಿ ಸುಗಮವಾಗಿರುವುದಿಲ್ಲ. ಅದಕ್ಕೆ ಅಧಿಕಾರ, ಹಣ ಮತ್ತು ಮಾಧ್ಯಮ, ಈ ಮೂರರೊಂದಿಗೂ ಸೆಣಸುವ ಸವಾಲು ಎದುರಾಗುವುದು. ಆದರೆ, ಸ್ವಧರ್ಮದ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳೊಂದಿಗೆ ಈ ದೇಶದ ಮಣ್ಣಿದೆ, ದೇಶದ ಸಂವಿಧಾನವಿದೆ, ರಾಷ್ಟ್ರಪಿತ ಗಾಂಧೀಜಿಯ ಪರಂಪರೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...