Homeಮುಖಪುಟಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಅಸಾಧಾರಣ ಫಲಿತಾಂಶ: ನಾಲ್ಕು ಪಾಠಗಳು, ಅಪಾಯ ಮತ್ತ ಪರ್ಯಾಯದ ಅಗತ್ಯ

ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ.

- Advertisement -
- Advertisement -

| ಯೋಗೇಂದ್ರ ಯಾದವ್ |

ಒಂದು ಅಸಾಮಾನ್ಯ ಅಸಾಧಾರಣ ಚುನಾವಣೆಯ ಅಸಾಧಾರಣ ಫಲಿತಾಂಶ ನಮ್ಮೆದುರಿಗಿದೆ. ಬಿಜೆಪಿಯ ಗೆಲುವಿನ ಅಂತರ ಎಲ್ಲರನ್ನೂ ಚಕಿತಗೊಳಿಸಿದೆ ಎನ್ನುವ ಕಾರಣಕ್ಕಷ್ಟೇ ಈ ಚುನಾವಣೆ ಅಸಾಧಾರಣವಾಗಿಲ್ಲ. ಮೊದಲ ಬಾರಿ ಕಾಂಗ್ರೆಸ್ಸೇತರ ಸರಕಾರವು ಬಹುಮತದಿಂದ ಆಯ್ಕೆಗೊಂಡಿದ್ದಕ್ಕೂ ಈ ಚುನಾವಣೆ ಅಸಾಧಾರಣವಾಗಿಲ್ಲ. ಈ ಚುನಾವಣೆಯ ಪರಿಣಾಮಗಳು ನಮ್ಮ ಪ್ರಜಾಪ್ರಭುತ್ವದ ದೀರ್ಘಕಾಲೀನ ಭವಿಷ್ಯವನ್ನು ನಿರ್ಧರಿಸಲಿವೆ ಎನ್ನುವ ಕಾರಣಕ್ಕೆ ಈ ಚುನಾವಣೆ ಅಸಾಧಾರಣವಾಗಿದೆ.

ಒಂದಂತೂ ಸುಸ್ಪಷ್ಟ – ಈ ಚುನಾವಣೆಯಲ್ಲಿ ಬಿಜೆಪಿಗಿಂತ ನರೇಂದ್ರ ಮೋದಿಯವರಿಗೆ ಸ್ಪಷ್ಟ ಜನಾದೇಶ ಸಿಕ್ಕಿದೆ. ನಿಸ್ಸಂದೇಹವಾಗಿ ಈ ಚುನಾವಣೆಯಲ್ಲಿ ಬಹಳಷ್ಟು ತಾರತಮ್ಯವಾಗಿದೆ, ನಿಸ್ಸಂದೇಹವಾಗಿಯೂ ಚುನಾವಣಾ ಆಯೋಗವು ಅಂಪೈರ್ ಆಗಿರಬೇಕಾದ ಸಮಯದಲ್ಲಿ ಆಟಗಾರನಾಗಿ ನಿಂತಿದ್ದಿದೆ. ಆದರೆ ಬಿಜೆಪಿಯ ಗೆಲುವಿಗೆ ಈ ನೆಪಗಳನ್ನಷ್ಟೇ ಹೇಳಲಾಗದು. ವಾಸ್ತವವೇನೆಂದರೆ, ಮೋದಿ ಗೆದ್ದಿದ್ದು ಈ ಜನತೆ ಅವರಿಗೆ ಇನ್ನೊಂದು ಅವಕಾಶ ನೀಡಲಿಚ್ಛಿಸುತ್ತಾರೆ ಎನ್ನುವ ಕಾರಣದಿಂದ. ಈ ಜನಾದೇಶ ಕಲಿಸಿದ ಪಾಠಗಳ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಿದೆ ಅದರೊಂದಿಗೆ ಇದರಿಂದ ಆಗುವ ಅಪಾಯಗಳನ್ನೂ ನೋಡಬೇಕಿದೆ.

ಮೊದಲ ಪಾಠ ವಿರೋಧಪಕ್ಷಗಳಿಗಾಗಿ ಇದೆ. ಪ್ರಶ್ನೆ ಇರುವುದು, ಜನರು ಮೋದಿಗೆ ಇನ್ನೊಂದು ಅವಕಾಶ ಕೋಡಬೇಕೆಂದು ಯಾವ ಕಾರಣಕ್ಕೆ ಇಚ್ಛಿಸಿದರು? ಗೆಲುವಿನ ಅಂತರ ನೋಡಿದರೆ ಈ ಜನಾದೇಶ ಮೋದಿ ಸರಕಾರದ 5 ವರ್ಷಗಳ ರೆಕಾರ್ಡ್ ಮೇಲೆ ಸ್ವೀಕೃತಿಯ ಮೊಹರ್ ಹಾಕಿದಂತೆ ಎಂಬ ಭ್ರಮೆ ಉಂಟಾಗಬಹುದು. ಆದರೆ ಇದು ಸತ್ಯವಲ್ಲ. 2014 ಮತ್ತು 2019ರ ಗೆಲುವುಗಳು ಒಂದೆ ತರಹದ್ದು ಅನಿಸುತ್ತವೆ. ಆದರೆ ಈ ಎರಡೂ ಚುನಾವಣೆಗಳ ಇತಿಹಾಸದಲ್ಲಿ ಬಹಳ ದೊಡ್ಡ ಅಂತರವಿದೆ. 2014ರಲ್ಲಿ ಜನರ ಮನಸ್ಸಿನಲ್ಲಿ ಮತ್ತೊಂದು ಕಾಂಗ್ರೆಸ್‍ನ ಭ್ರಷ್ಟ ಮತ್ತು ನಿರುಪಯುಕ್ತ ಸರಕಾರದ ಬಗ್ಗೆ ಆಕ್ರೋಶವಿತ್ತು. ಹಾಗೂ ಎರಡನೆಯದಾಗಿ, ಮೋದಿಯವರ ಬಗ್ಗೆ ಆಶಾಭಾವನೆ ಇತ್ತು. ಈ ಸಲ ಮೋದಿ ಸರಕಾರದೊಂದಿಗೆ ಆಶಾಭಂಗ ಶುರು ಆಗಿತ್ತು, ಸಂದೇಹಗಳಿದ್ದವು, ಆತಂಕಗಳೂ ಇದ್ದವು. ಆದರೆ ಮತದಾರರು ವಿರೋಧಪಕ್ಷಗಳ ಕಡೆ ನೋಡಿದಾಗ ಅಲ್ಲಿ ಯಾವ ಭರವಸೆಯೂ ಕಂಡುಬರುತ್ತಿಲ್ಲ.

ಕೊನೆಗೆ ಮೋದಿ ವಿರುದ್ಧದ ಅಸಂತೋಷ ಮುಚ್ಚಿಹೋಯಿತು ಹಾಗೂ ವಿರೋಧಪಕ್ಷಗಳ ಮೇಲಿನ ಅವಿಶ್ವಾಸ ಕೆಲಸ ಮಾಡಿತು. ಈ ಜನಾದೇಶ ಎಷ್ಟು ಮೋದಿಯವರದ್ದಾಗಿದೆಯೋ ಅಷ್ಟೇ ವಿರೋಧಪಕ್ಷಗಳ ನಿರುಪಯುಕ್ತತೆಯ ವಿರುದ್ಧದ್ದೂ ಆಗಿದೆ.

ಎರಡನೆಯ ಪಾಠ, ಚುನಾವಣೆ ಗೆಲ್ಲುವ ಹಳೆಯ ತಂತ್ರಗಳು ಈಗ ಕೆಲಸ ಮಾಡುವುದಿಲ್ಲ. ಬರೀ ಮೋದಿ ವಿರೋಧದ ರಾಜಕೀಯ ಜನತೆ ಸ್ವೀಕರಿಸುವುದಿಲ್ಲ. ಇದರಿಂದ ನರೇಂದ್ರ ಮೋದಿಯವರಿಗಿಂತ ಮೋದಿ ವಿರೋಧಗಳಿಗೇ ಹೆಚ್ಚಿನ ನಷ್ಟವಿದೆ. ಅತ್ತ ಉತ್ತರಪ್ರದೇಶದ ಫಲಿತಾಂಶದಿಂದ ಸ್ಪಷ್ಟವಾಗಿದ್ದೇನೆಂದರೆ, ಜಾತಿಯ ಲೆಕ್ಕಾಚಾರಗಳನ್ನು ಮಾಡಿ ಜನರ ವಿಶ್ವಾಸವನ್ನು ಗಳಿಸುವುದು ಅಸಾಧ್ಯ. ಕೇವಲ ದಲಿತ, ಮುಸ್ಲಿಮ್ ಹಾಗೂ ಯಾದವ್ ಸಮೀಕರಣದ ಮಾತುಗಳನ್ನಾಡಿದರೆ ಈ ಜಾತಿಗಳ ಮತಗಳೂ ದಕ್ಕುವುದಿಲ್ಲ. ಪಕ್ಷಗಳ ಮೈತ್ರಿ ಉಪಯುಕ್ತ ಹಾಗೂ ಅವಶ್ಯಕವೂ ಇದೆ, ಆದರೆ ಬರೀ ಮೈತ್ರಿ ರಚಿಸುವುದರಿಂದ ಸಾಕಾಗುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಹಾಳೆಯ ಮೇಲೆ ಎಷ್ಟು ಬಲಶಾಲಿಯಾಗಿ ತೋರುತ್ತಿತ್ತು, ಮಹಾರಾಷ್ಟ್ರದ ಮೈತ್ರಿಯೂ ಗಟ್ಟಿಯಾಗಿತ್ತು, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿಯ ಮೈತ್ರಿಗಳೂ ತುಂಬಾ ದೊಡ್ಡವು, ಆದರೆ ಇವ್ಯಾವೂ ಕೆಲಸ ಮಾಡಲಿಲ್ಲ.

ಮೂರನೇ ಪಾಠ, ಜನಾದೇಶದ ನಿರ್ಮಾಣ ಮಾಡಬೇಕೆಂದರೆ, ಜನತೆಯನ್ನು ದೇಶದೊಂದಿಗೆ ಬೆಸೆಯುವುದು ಅತ್ಯವಶ್ಯಕ. ಮೋದಿಯವರು ದೇಶದ ಸರಾಸರಿ ನಾಗರಿಕನೊಂದಿಗೆ ಸಂವಾದ ಮಾಡಿದರು. ನಿಸ್ಸಂದೇಹವಾಗಿಯೂ ಅವರ ಸಂವಾದದಲ್ಲಿ ಸುಳ್ಳೇ ಹೆಚ್ಚಿತ್ತು. ನಿಸ್ಸಂದೇಹವಾಗಿಯೂ ಸಕಾರಾತ್ಮಕ ಅಂಶಗಳಿಗಿಂತ ನಕಾರಾತ್ಮಕ ಮಾತುಗಳೇ ಹೆಚ್ಚಿದ್ದವು. ಈ ಸಲ ಅವರ ಮಾತುಗಳಲ್ಲಿ ನಿರೀಕ್ಷೆಗಳಿಗಿಂತ ಆತಂಕವನ್ನು ಸೃಷ್ಟಿಸುವ ಪ್ರಯತ್ನವೇ ಹೆಚ್ಚಿತ್ತು, ಒಡೆದು ಆಳುವ ನೀತಿಯೂ ಇತ್ತು. ಪ್ರಧಾನ ಮಂತ್ರಿಯವರು ನಿಸ್ಸಂದೇಹವಾಗಿಯೂ ಚುನಾವಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿಯ ಹುದ್ದೆಗೆ ಶೋಭೆಗೆ ತಕ್ಕದ್ದಲ್ಲದ್ದ ಬಹಳಷ್ಟು ಮಾತುಗಳನ್ನಾಡಿದರು. ನಿಸ್ಸಂದೇಹವಾಗಿಯೂ ದೇಶದ ಹೆಚ್ಚಿನ ಮಾಧ್ಯಮಗಳು ಮೋದಿಯವರ ಪರವಾಗಿ ಕೆಲಸ ಮಾಡಿದ್ದವು. ಆದರೆ ಈ ಎಲ್ಲವುಗಳ ಸಹಾಯದಿಂದ ಮೋದಿಯವರು ಒಬ್ಬ ಸರಾಸರಿ ಮತದಾರನಿಗೆ ಅವನು/ಳು ತನ್ನ ಲಾಭ-ನಷ್ಟಗಳಿಗಾಗಿ ಅಲ್ಲದೇ, ದೇಶಕ್ಕಾಗಿ ಮತ ನೀಡುತ್ತಿದ್ದಾರೆ ಎಂದು ಭಾವಿಸುವಂತೆ ಮಾಡಿದರು. ವಿರೋಧಪಕ್ಷಗಳ ಬಳಿ ಮತದಾರರ ಸಲುವಾಗಿ ಇಂತಹ ಯಾವುದೇ ದೊಡ್ಡ ಸಂದೇಶವೂ ಇದ್ದಿಲ್ಲ, ಯಾವ ದೊಡ್ಡ ಕನಸೂ ಇದ್ದಿಲ್ಲ ಮತ್ತು ಯಾವ ನಿರೀಕ್ಷೆಯೂ ಇದ್ದಿಲ್ಲ.

ನಾಲ್ಕನೇ ದೊಡ್ಡ ಪಾಠವೆಂದರೆ, ಜನರು ಇಂತಹ ಆಸೆಯ, ನಿರೀಕ್ಷೆಗಳ ಒಂದು ಸಗುಣ ಮುಖವನ್ನು ನೋಡಲಿಚ್ಛಿಸುತ್ತಾರೆ. ತಾವು ಭರವಸೆ ಇಡಬಲ್ಲಂತಹ ಒಬ್ಬ ನಾಯಕನನ್ನು ಬಯಸುತ್ತಾರೆ. ಜನರು ಒಂದು ವೇಳೆ ನರೇಂದ್ರ ಮೋದಿ ಅವರನ್ನು ಇಂತಹ ಮುಖದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂದರೆ ಅದಕ್ಕೆ ಕಾರಣ ಅವರ ಕೆಲಸ ಜನರಿಗೆ ಇಷ್ಟ ಎಂದು ಇಲ್ಲ. ಸತ್ಯವೇನೆಂದರೆ, ನರೇಂದ್ರ ಮೋದಿಯವರಿಂದ ಮೋಹಭಂಗದ ಪ್ರಕ್ರಿಯೆ ಶುರುವಾಗಿತ್ತು. ಆದರೆ ಅವರ ಪರ್ಯಾಯವಾಗಿ ಯಾವುದೇ ವಿಶ್ವಾಸಾರ್ಹ ಮುಖ ಕಾಣಿಸಲಿಲ್ಲ. ಮೋದಿಯಿಂದ ನಿರಾಸೆಗೊಂಡ ಜನರು ರಾಹುಲ್ ಗಾಂಧಿಯ ಕಡೆ ನೋಡಿದಾಗ ಹೆದರಿಕೊಂಡು ಮತ್ತೇ ಮೋದಿಯವರಲ್ಲೇ ಸದ್ಗುಣಗಳನ್ನು ಹುಡುಕತೊಡಗುತ್ತಾರೆ. ಅಲ್ಲಿ ಸತ್ಯ ಕಾಣದಿದ್ದರೂ ಗಟ್ಟಿತನವಂತೂ ಅವರಿಗೆ ಕಾಣಿಸುತ್ತದೆ. ವಿರೋಧಪಕ್ಷಗಳ ಬಳಿ ಸಂದೇಶವೂ ಇರಲಿಲ್ಲ, ಸಂದೇಶಕಾರರೂ ಇರಲಿಲ್ಲ. ನಾವು ನೀವು ಇಷ್ಟಪಡಬಹುದು ಅಥವಾ ಬಿಡಬಹುದು ಆದರೆ, ವಿಶ್ವಾದ್ಯಂತ ನೇರವಾಗಿ ವ್ಯಕ್ತಿತ್ವಗಳ ಸ್ಪರ್ಧೆ ಆಗುತ್ತಿವೆ. ಹಾಗೂ ಇಂದು ದೇಶವು ಒಂದು ವಿಶ್ವಾಸಾರ್ಹ ಮುಖದ ಹುಡುಕಾಟದಲ್ಲಿದೆ.

ಈ ಜನಾದೇಶವು ಹೇಳಿದ ಪಾಠಗಳೊಂದಿಗೆ ಇದರ ಅಪಾಯಗಳನ್ನೂ ತಿಳಿದುಕೊಳ್ಳಬೇಕಿದೆ. ಇಂತಹ ಜನಾದೇಶ ಅಹಂಕಾರ ಹುಟ್ಟಿಸಬಲ್ಲುದು. ಹಿಂದು-ಮುಸ್ಲಿಮ್ ದ್ವೇಷ ಹುಟ್ಟಿಸಿ ಗೆದ್ದುಕೊಂಡ ಚುನಾವಣೆ ಭಯವನ್ನೂ ಹುಟ್ಟಿಸುತ್ತದೆ. ಮುಂದಿನ ಐದು ವರ್ಷಗಳಲ್ಲಿ ದೇಶದ ಸ್ವಧರ್ಮದ ಎರಡು ದೊಡ್ಡ ಆಧಾರಸ್ತಂಭಗಳಾದ ಲೋಕತಂತ್ರ ಮತ್ತು ವಿವಿಧತೆಗಳಿಗೆ ದೊಡ್ಡ ಅಪಾಯವಿದೆ. ಪ್ರಶ್ನೆ ಇರುವುದು ಈ ಪ್ರಶ್ನೆಗಳನ್ನು ಮುಖಾಮುಖಿ ಎದುರಿಸುವವರ್ಯಾರು? ಸದ್ಯದ ವಿರೋಧಪಕ್ಷಗಳು ಈ ಸ್ಪರ್ಧೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿವೆ. ದೇಶದ ಪ್ರಮುಖ ರಾಷ್ಟ್ರೀಯ ವಿರೋಧ ಪಕ್ಷದ ರೂಪದಲ್ಲಿ ಕಾಂಗ್ರೆಸ್ ಅಂತೂ ಈ ಕೆಲಸದಲ್ಲಿ ಅಪ್ರಸ್ತುತವಷ್ಟೇ ಅಲ್ಲ, ಆ ಕಾರ್ಯಕ್ಕೆ ಒಂದು ಅಡ್ಡಿಯಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಸ್ವಧರ್ಮದ ರಕ್ಷಣೆಗೆ ಒಂದು ಹೊಸ ಪರ್ಯಾಯದ ಅವಶ್ಯಕತೆ ಇದೆ. ಈ ಪರ್ಯಾಯದ ದಾರಿ ಸುಗಮವಾಗಿರುವುದಿಲ್ಲ. ಅದಕ್ಕೆ ಅಧಿಕಾರ, ಹಣ ಮತ್ತು ಮಾಧ್ಯಮ, ಈ ಮೂರರೊಂದಿಗೂ ಸೆಣಸುವ ಸವಾಲು ಎದುರಾಗುವುದು. ಆದರೆ, ಸ್ವಧರ್ಮದ ರಕ್ಷಣೆಯಲ್ಲಿ ತೊಡಗಿರುವ ಸಿಪಾಯಿಗಳೊಂದಿಗೆ ಈ ದೇಶದ ಮಣ್ಣಿದೆ, ದೇಶದ ಸಂವಿಧಾನವಿದೆ, ರಾಷ್ಟ್ರಪಿತ ಗಾಂಧೀಜಿಯ ಪರಂಪರೆಯಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...