Homeರಾಜಕೀಯಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

ಆಧಾರ ಕಳೆದುಕೊಂಡ ಟ್ರಾಯ್ ಅಧ್ಯಕ್ಷ

- Advertisement -
- Advertisement -

ನಮ್ಮ ಪ್ರಧಾನ ಸೇವಕ ನರೇಂದ್ರ ಮೋದಿ ಸೇರಿದಂತೆ ಸಿನಿಮಾ ಸ್ಟಾರ್‍ಗಳು, ಆಟಗಾರರು ಫಿಟ್ನೆಸ್ ಚಾಲೆಂಜ್ ಮಾಡ್ಕಂಡು ಒಂದಷ್ಟು ದಿನ ಆಟ ಆಡಿದ್ರು, ಅಲ್ಲದೆ ಒಂದು ವಾರದಿಂದ ಕಿಕಿ ಚಾಲೆಂಜ್ ಅಂತ ಹೊಸದೊಂದು ಚಾಲೆಂಜ್ ಟ್ರೆಂಡ್ ಶುರು ಮಾಡ್ಕೊಂಡು ಜನ ಬಿಸಿಯಾಗಿದ್ದಾರೆ. ಇದನ್ನ ನೋಡಿ ಸುಮ್ಮನಿರಲಾರದ ಟ್ರಾಯ್ ಅಧ್ಯಕ್ಷ ಕಂ ಯುಐಡಿಎಐ(ವಿಶಿಷ್ಟ ಗುರುತು ಪ್ರಾಧಿಕಾರ)ನ ಮಾಜಿ ಸಿಇಓ ಆರ್.ಎಸ್.ಶರ್ಮ ಇರಲಾರದೋರು ಇರುವೆ ಬಿಡ್ಕಂಡ್ರು ಅನ್ನೋ ಹಾಗೆ ಹೊಸ ಚಾಲೆಂಜ್ ಶುರು ಮಾಡೋಕೋಗಿ ನಮ್ ಜನರ ಮುಂದೆ ಕಾಮೆಡಿ ಪೀಸಾಗಿದ್ದಾರೆ.
ಅಂತದ್ದೇನಪ್ಪಾ ಮಾಡಿದ್ರು ನಮ್ ಟ್ರಾಯ್ ಅಧ್ಯಕ್ಷರು ಅಂದ್ರೆ, ಆಧಾರ್ ಸಂಖ್ಯೆ ಸೇಫಾಗಿಲ್ಲ ಅನ್ನೋರಿಗೆ ಅಧಾರ್ ಎಷ್ಟು ಸೇಫ್ ಅಂತ ತೋರಿಸ್ತೀನಿ ಅಂತ ಕೆಲವು ದಿನಗಳ ಹಿಂದೆ ತಮ್ಮ ಆಧಾರ್ ನಂಬರ್‍ನ ಟ್ವಿಟರ್‍ನಲ್ಲಿ ಹಂಚಿಕೊಂಡ ಶರ್ಮಾ ಯಾರಿಗಾದ್ರು ಸಾಧ್ಯವಾದ್ರೆ ನನ್ನ ಆಧಾರ್ ನಂಬರ್‍ನ ಬಳಸಿಕೊಂಡು ಹ್ಯಾಕ್ ಮಾಡಿ ಅಂತ ಸವಾಲ್ ಹಾಕಿದ್ರು. ಇದನ್ನ ನೋಡಿದ ಹ್ಯಾಕಿಂಗ್ ಪ್ರವೀಣರು ಸಂಪತ್ತಿಗೆ ಸವಾಲ್ ಅನ್ನೋ ಹಾಗೆ ಮಾಜಿ ಸಿಇಓ ಶರ್ಮಾರವರ ಆಧಾರಗಳನ್ನೆಲ್ಲ ಹೊರತೆಗೆದೇ ಬಿಟ್ಟಿದ್ದಾರೆ. ಶರ್ಮಾರ ಡೀಟೇಲ್ಸ್‍ಗಳನ್ನ ಕದ್ದಿರುವ ಹ್ಯಾಕ್ ಪ್ರವೀಣರು ಅವರ ಪರ್ಸನಲ್ ಡೀಟೆಲ್‍ಗಳನ್ನ ಒಂದೊಂದಾಗಿ ಕಳಿಸಿದ್ದಾರೆ, ಇದು ಆಧಾರ್‍ಸಂಖ್ಯೆ ಗಟ್ಟಿ ಆಧಾರವನ್ನು ಹೊಂದಿಲ್ಲ ಅನ್ನೋದನ್ನ ಖಾತ್ರಿ ಮಾಡಿದೆ.
ಇಷ್ಟಕ್ಕ ಸುಮ್ಮನಾಗದ ಹ್ಯಾಕರ್ಸ್ ಟ್ರಾಯ್ ಅಧ್ಯಕ್ಷರ ಫೋನ್ ನಂಬರ್, ಇ-ಮೇಲ್ ಅಡ್ರೆಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಖಾತೆ ನಂಬರ್, ಹುಟ್ಟಿದ ದಿನಾಂಕ ಎಲ್ಲವನ್ನೂ ಪಡೆದುಕೊಂಢು ಒಂದೊಂದಾಗಿ ಶರ್ಮಾರಿಗೆ ಕಳಿಸಿದ್ದಾರೆ. ಇಷ್ಟಾದರೂ ಎಚ್ಚೆತ್ತುಕೊಂಡು ಸುಮ್ಮನಿರದ ಶರ್ಮಾ ಸಾಹೇಬರು ನಾನು ಹೇಳಿದ್ದು ನನಗೆ ತೊಂದರೆ ಆಗುವಂತದ್ದನ್ನ ಮಾಡಿ ಎಂದು, ಡೀಟೆಲ್ಸ್ ಕೊಡಿ ಎಂದಲ್ಲ ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ. ಇದನ್ನ ನೋಡಿ ರೊಚ್ಚಿಗೆದ್ದ ಹ್ಯಾಕರ್ಸ್ ಅವರ ಖಾತೆಯಿಂದ ಹಣ ಪಡೆದರೆ ಅದನ್ನ ಮತ್ತೆ ಪಾಪಸ್ ಪಡೆಯಬಹುದು ಎಂದು ತಿಳಿದಿದ್ದವರು ಹಣ ತೆಗೆದುಕೊಳ್ಳದೆ ಶರ್ಮಾರ ಪಿಎನ್‍ಬಿ ಅಕೌಂಟಿಗೆ ಒಂದು ರೂಪಾಯಿ ಜಮಾ ಮಾಡಿ ಶರ್ಮಾರನ್ನು ಕೀಟಲೆ ಮಾಡಿದ್ದಾರೆ.
ಶರ್ಮಾರ ಇ-ಮೇಲ್ ಖಾತೆಯಿಂದಲೇ ಅವರ ಪುತ್ರಿಗೆ ಮೇಲ್ ಮಾಡಿರುವ ಖತರ್ನಾಕ್ ಪ್ರವೀಣರು ಸಾಮಾಜಿಕ ಮಾಧ್ಯಮದಲ್ಲಿ ಸವಾಲೆಸೆದು ದೇಶಕ್ಕೆ ಮುಜುಗರ ಉಂಟುಮಾಡಿರುವ ನಿಮ್ಮ ತಂದೆ ಹ್ಯಾಕರ್‍ಗಳಿಗೆ ಭರ್ಜರಿ ಬಹುಮಾನ ನೀಡಿದ್ದಾರೆಂದು ಸಂದೇಶ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಅವರ ಬ್ಯಾಂಕ್ ಖಾತೆಯು ಶೀಘ್ರದಲ್ಲೇ ಹ್ಯಾಕ್ ಆಗಲಿದೆ, ಒಂದು ವೇಳೆ ಅವರು ತನ್ನ ಖಾತೆಯನ್ನು ಅಳಿಸಿ ಹಾಕದಿದ್ದರೆ ಸೂಕ್ಷ್ಮ ದಾಖಲೆಗಳನ್ನೂ ಬಹಿರಂಗ ಪಡಿಸಲಾಗುವುದು ಎಂದೂ, ಈ ಸೂಚನೆಯನ್ನು ಪಾಲಿಸದಿದ್ದರೆ ಮಾಲ್‍ವೇರ್(ಮಾಹಿತಿ ಕದಿಯುವ ಸಾಫ್ಟ್‍ವೇರ್)ಅನ್ನು ಶರ್ಮಾರ ಮೊಬೈಲ್‍ಗೆ ಇನ್‍ಸ್ಟಾಲ್ ಮಾಡಿ ಅವರ ಸಂವಾದವನ್ನು ಕದಿಯಲಾಗುವುದೆಂದು ಎಚ್ಚರಿಕೆ ಸಂದೇಶವನ್ನೂ ಟ್ರಾಯ್ ಅಧ್ಯಕ್ಷರ ಪುತ್ರಿಗೆ ಕಳಿಸಿದ್ದಾರೆ.
ಇಷ್ಟಾದರೂ ಬುದ್ದಿಕಲಿಯದ ಶರ್ಮಾ ಸಾಹೇಬರು ಡಿಜಿಜಲ್ ಯುಗದಲ್ಲಿ ಖಾಸಗೀ ಡಾಟಾವನ್ನು ರಕ್ಷಿಸಿಕೊಳ್ಳುವುದು ಬಹಳ ಮುಖ್ಯವಾದ ವಿಚಾರ, ಅಂತಹ ಡಾಟಾಗಳನ್ನು ಆಧಾರ್ ಲೀಕ್ ಮಾಡಲಾರದು, ನಾನು ಅದರ ಜತೆಗಿದ್ದೇನೆ ಎಂದು ಮತ್ತೆ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಆಧಾರ್‍ಗೆ ಯಾವ ಆಧಾರವೂ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಪ್ರಧಾನ ಸೇವಕ ಮೋದಿ ಸರ್ಕಾರದ ಗೊಡ್ಡು ಆಶ್ವಾಸನೆಗಳಿಂದ ಎಲ್ಲಾ ಖಾಸಗೀ ಡೇಟಾಗಳಿಗೂ ಆಧಾರ್ ಲಿಂಕ್ ಕೊಟ್ಟಿರುವ ಜನರು ತಮ್ಮ ಡೇಟಾಗಳನ್ನು ರಕ್ಷಿಸಿಕೊಳ್ಳಲು ಪೇಚಾಡಬೇಕಾದ ಪರಿಸ್ಥಿತಿಯನ್ನು ಚಾಲೆಂಜಿಂಗ್ ಸ್ಟಾರ್ ಶರ್ಮಾರ ಅವಾಂತರ ಎದುರುಗೊಳಿಸಿದೆ.

– ಸೋಮಶೇಖರ್ ಚಲ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR, ಚುನಾವಣಾ ಆಯೋಗದ ಕಾರ್ಯನಿರ್ವಹಣೆ ಕುರಿತು 23 ವಿಪಕ್ಷಗಳಿಂದ ಸಿಜೆಐಗೆ ಜಂಟಿ ಪತ್ರ

ಭಾರತೀಯ ಚುನಾವಣಾ ಆಯೋಗವು (ಇಸಿಐ) ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಹಾಗೂ ಇತರ ಚುನಾವಣೆ ಸಂಬಂಧಿತ ವಿಷಯಗಳ ವಿರುದ್ಧ ಇಂಡಿಯಾ ಮೈತ್ರಿಕೂಟದ ಹೊರಗಿರುವ ದ್ರಾವಿಡ ಮುನ್ನೇತ್ರ ಕಳಗಂ...

SIR: ಮತದಾರರ ಅನುಕೂಲಕ್ಕಾಗಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರದ ಆದೇಶ

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (SIR) ಕಾರ್ಯವು ಜೂನ್ 30ರಿಂದ (ಇಂದಿನಿಂದ) ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ...

SIR: ಕೇಂದ್ರ ಸರ್ಕಾರದ SIRಗೆ ಕೌಂಟರ್‌, ಮಹತ್ವದ ಆದೇಶಗಳನ್ನು ಹೊರಡಿಸಿದ ಕರ್ನಾಟಕ ಸರ್ಕಾರ

ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೂಲಕ ನಡೆಸುತ್ತಿರುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಕುರಿತಂತೆ ದೇಶದಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದ್ದವು. ಸುಪ್ರೀಂ ಕೋರ್ಟ್‌ ಆ ಪ್ರಕ್ರಿಯೆಯನ್ನು ಮಾನ್ಯ ಮಾಡಿತ್ತು. ಕರ್ನಾಟಕದಲ್ಲಿ ನಾಳೆಯಿಂದ (ಜೂನ್.30)‌...

ರಾಮಮಂದಿರದ ದೇಣಿಗೆ ಕಳ್ಳತನ: ಆರೋಪಿಗಳ ಪರ ಯಾವುದೇ ವಕೀಲರು ವಾದಿಸುವಂತಿಲ್ಲ , ವಾದಿಸಿದರೆ ರೂ. 5ಲಕ್ಷ ದಂಡ

ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳ ಪರವಾಗಿ ಯಾವುದೇ ವಕೀಲರು ನ್ಯಾಯಾಲಯದಲ್ಲಿ ವಕಾಲತ್ತು ವಹಿಸಬಾರದು ಎಂದು ಅಯೋಧ್ಯೆ ಬಾರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಸಂಘದ ಈ ತೀರ್ಮಾನವನ್ನು...

ವೋಟರ್ ಲಿಸ್ಟ್‌ನಿಂದ ಹೆಸರು ಡಿಲೀಟ್: ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ಬ್ರೇಕ್! ಬಂಗಾಳ ಸಿಎಂ ಗೆ ಪತ್ರ ಬರೆದ ಕೇರಳ ಸಿಎಂ

ಹಿರಿಯ ಪತ್ರಕರ್ತ ಮತ್ತು ‘ದಿ ಟೆಲಿಗ್ರಾಫ್’ ಪತ್ರಿಕೆಯ ಮಾಜಿ ಸಂಪಾದಕ ರಾಜಗೋಪಾಲ್ ರಾಮದಾಸ್ ಅವರ ಪಾಸ್‌ಪೋರ್ಟ್ ನವೀಕರಣ ವಿವಾದವು ಸೋಮವಾರ ಮತ್ತಷ್ಟು ತೀವ್ರಗೊಂಡಿದೆ. ಈ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಲು ಮಧ್ಯಪ್ರವೇಶಿಸಬೇಕು ಎಂದು ಕೋರಿ...

ರಾಮ ಮಂದಿರ ದೇಣಿಗೆ ಹಗರಣ: ಅರ್ಜಿ ವಿಚಾರಣೆ ಕೆಲ ದಿನ ತಡವಾದರೆ ‘ಆಕಾಶವೇನೂ ಉರುಳಿ ಬೀಳುವುದಿಲ್ಲ’ ಎಂದ ಸುಪ್ರೀಂ ಕೋರ್ಟ್

ಅಯೋಧ್ಯೆಯ ರಾಮ ಮಂದಿರಕ್ಕೆ ಭಕ್ತರಿಂದ ಬಂದ ದೇಣಿಗೆ ಹಣ ದುರುಪಯೋಗ ಆಗಿರುವ ಕುರಿತು ಸಿಬಿಐ ನೇತೃತ್ವದ ಬಹು-ಸಂಸ್ಥೆಗಳ ಜಂಟಿ ತನಿಖೆಗೆ ಆದೇಶಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ...

ಕಾಕ್ರೋಚ್ ಪಾರ್ಟಿ ಧರಣಿ : ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸೋನಮ್ ವಾಂಗ್‌ಚುಕ್

ನೀಟ್ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ, ಹಲವು ಅಕ್ರಮ, ಶೈಕ್ಷಣಿಕ ಅವ್ಯವಸ್ಥೆಗಳ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಕಾಕ್ರೋಚ್ ಜನತಾ...

SIR ವೇಳೆ ಮತಪಟ್ಟಿಯಿಂದ ಹೆಸರು ಡಿಲೀಟ್: ‘ದಿ ಟೆಲಿಗ್ರಾಫ್’ ಮಾಜಿ ಸಂಪಾದಕ ರಾಜಗೋಪಾಲ್ ಪಾಸ್‌ಪೋರ್ಟ್ ನವೀಕರಣಕ್ಕೆ ತಡೆ

ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿದ ಕಾರಣ ಪಾಸ್‌ಪೋರ್ಟ್ ನವೀಕರಿಸಲು ಆಗುತ್ತಿಲ್ಲ ಎಂದು ದೇಶದ ಖ್ಯಾತ ಇಂಗ್ಲಿಷ್ ದಿನಪತ್ರಿಕೆ ‘ದಿ ಟೆಲಿಗ್ರಾಫ್’ನ ಮಾಜಿ ಸಂಪಾದಕ ಆರ್. ರಾಜಗೋಪಾಲ್...

‘ಈಗಲೂ ಮಮತಾ ಬ್ಯಾನರ್ಜಿಯೇ ನಮ್ಮ ನಾಯಕಿ’ : ಟಿಎಂಸಿ ಬಂಡಾಯ ಬಣದ ಅಧ್ಯಕ್ಷ ಅರೂಪ್ ರಾಯ್ ಹೇಳಿಕೆ

"ಮಮತಾ ಬ್ಯಾನರ್ಜಿ ಅವರೇ ಇಂದಿಗೂ ನಮ್ಮ ನಾಯಕಿ. ಅವರೇ ಈ ಪಕ್ಷವನ್ನು ಸ್ಥಾಪಿಸಿದವರು. ಅವರೇ ನಮ್ಮ ಪಕ್ಷದ ಕಾಂದಾರಿ (ಮಾರ್ಗದರ್ಶಕರು ಅಥವಾ ಪಕ್ಷವನ್ನು ಮುನ್ನಡೆಸುವವರು). ಮಮತಾ ಬ್ಯಾನರ್ಜಿ ಅವರಿಂದಾಗಿಯೇ ನಾವು ಈ ಪಕ್ಷವನ್ನು...

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...