Homeಅಂಕಣಗಳುಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

ಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

- Advertisement -
- Advertisement -

ಆಘಾತವಾಣಿ |

ನಮಸ್ಕಾರ ಆಘಾತವಾಣಿಗೆ ಸ್ವಾಗತ, ವಾರ್ತೆಗಳು ಓದುತ್ತಿರುವವರು ಅಟ್ಯಾಕ್ ಹನ್ಮಂತ.
ಕರ್ನಾಟಕಕ್ಕೆ ಬಂದಿದ್ದ ಸುಳ್ ಫ್ಯಾಕ್ಟರಿ ಪಕೋಡೇಂದ್ರನು ಉಡುಪಿಯಲ್ಲಿ ಭಾಷಣ ಜಡಿದು ಉಡುಪಿ ಕೃಷ್ಣಮಠಕ್ಕೆ ಹೋಗದೆ ಇದ್ದುದರ ಬಗ್ಗೆ ನಾನಾರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಶ್ರೀಮತಿ ಶೋಭಕ್ಕನವರು “ಕೃಷ್ಣಮಠದೊಳಗೆ ಪಕೋಡೇಂದ್ರನಿಗೆ ಜೀವಭಯ ಇದ್ದುದರಿಂದ ಅವರು ಮಠಕ್ಕೆ ಎಡಗಾಲನ್ನೂ ಇಡದೆ ಹಂಗೇ ವಾಪಸ್ ಹೋಗಿದ್ದಾರೆಂದು’’ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಕೃಷ್ಣಮಠದ ಪಿಂಚಣಿಸ್ವಾಮಿಗಳಾದ ‘ತೇಜಾವರ ಶ್ರಿ’ಗಳು “ತನ್ನಂಥ ಕುಪೋಷಣೆ ಪೀಡಿತ ಬಡಕಲು ದೇಹಿಯನ್ನು ಪಕೋಡೇಂದ್ರ ಅವರು ಟೆರರಿಸ್ಟ್ ಎಂದು ಭಯಬಿದ್ದಿರುವುದು ತನಗೆ ಅತ್ಯಂತ ಖೇದವುಂಟಾಗಿದೆ, ಈ ಖೇದವನ್ನು ಹೋಗಲಾಡಿಸಲು ನಾನು ಮುತಾಲಿಕನ ಅರೆಬರೆ ಮೀಸೆಯನ್ನು ತುಟಿಯಿಂದ ಕಿತ್ತು ಯಜ್ಞಕುಂಡಕ್ಕೆ ಹವಿಸ್ಸಾಗಿ ಹಾಕುವ ಮೂಲಕ ದೇವರಿಗೆ ವಿನಂತಿ ಮಾಡುತ್ತೇನೆ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.
< < < <
ಬಿಜೆಪಿ ಪಕ್ಷದಲ್ಲಿ ನೆಪಕ್ಕೊಂದು ಅಧ್ಯಕ್ಷನಿರಲಿ ಎಂದು ಇಟ್ಟುಕೊಳ್ಳದ ‘ಧಡಿಯೂರಪ್ಪ’ನನ್ನು ನಂಬಿಕೊಂಡರೆ ತಮ್ಮ ಕೈಗೆ ಮಟನ್ ಬಿರಿಯಾನಿ ಬೇಯಿಸುವ ಹಂಡೆ ಮಾತ್ರ ಸಿಗಲು ಸಾಧ್ಯ ಎಂದು ಚಿಂತೆಗೊಳಗಾಗಿರುವ ‘ಹಮೀದ್ ಷಾ’ ಇದಕ್ಕೊಂದು ಹೊಸ ಪ್ಲಾನು ರೆಡಿ ಮಾಡಿದ್ದಾರೆಂದು ಗೊತ್ತಾಗಿದೆ. ಎಲ್ಲೇ ಬಿಜೆಪಿ ಪಕ್ಷದ ಪ್ರಚಾರವಿರಲಿ ಅಲ್ಲಿ ಈ ಬುಡ್ಡಾಗಿರಾಕಿಯನ್ನು ಶೋಕೇಸ್ ಪೀಸಿನಂತೆ ಬಳಸಿಕೊಂಡು ಆಕಾಶ ಪಾತಾಳವಾಗಿ, ಪಾತಾಳ ಆಕಾಶವೇನಾದರೂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹಾರೆಸ್ಸೆಸ್’ ವಯೋವೃದ್ಧರ ಕೊಂಪೆಯಿಂದ ‘ಚಂತೋಷ್ ಜೀ’ಯನ್ನು ದರದರನೆ ಕರೆತಂದು ಸಿಎಂ ಮಾಡುವುದಾಗಿ ‘ಹಮೀದ್ ಷಾ’ ಅವರು ನಿದ್ದೆಗಣ್ಣಿನಲ್ಲಿ ಕನವರಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಹಿರಂಗವಾಗಿದೆ.
< < < <
ಕಾಂಗ್ರೆಸ್ ಪಕ್ಷದ ‘ಲಾಹುಲ್ ಗಾಂಧಿ’ ಬಸವಣ್ಣನವರ ವಚನವನ್ನು ಉಚ್ಚರಿಸಲು ಹೋಗಿ ಇವನರ್ವ, ಇವನರ್ವ ಎಂದು ತೆದ್ದೊದ್ದೊ ಬೊದ್ದೊದ್ದೊ ಮಾಡಿದ ಮೇಲೆ ಕಾಂಗ್ರೆಸ್ಸಿಗರನ್ನು ಬಿಜೆಪಿಗರು ಹುರಿದು ಉಪ್ಪಾಕಿಕೊಂಡು ನುಂಗಿ ನೆಕ್ಕಿದ್ದ ವಿಷಯ ತಮಗೆ ತಿಳಿದಿರಬಹುದು. ಅದೇ ಬಗೆಯಲ್ಲಿ ಉತ್ತರದ ಹಿಂದಿಗರ ಮನೆಯ ಜೀತದಾಳಾದ ‘ಪಕೋಡೇಂದ್ರ’ನು ತಾನೇನೋ ಕನ್ನಡ ಪಂಡಿತನೆಂಬಂತೆ ಪೋಸು ಕೊಡಲು ಹೋಗಿ ‘ಇಲಿ ಇಕ್ಕಳದೊಳಗೆ ಇಡಬಾರದ್ದನ್ನು ಇಟ್ಟಂತೆ’ ಕೊಯಯೊ ಪಯಯೋ ಎಂದು ವದರಿಬಿಟ್ಟಿದ್ದಾನೆ. ‘ಭಗವಾನ್ ಮಂತೆಸಾಮಿ, ದೇವಿ ಮಾರವಬ್ಯಾ, ಮಲ ಮೇವದೇಶ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲ್ ಸಾಮಿ’ ಅಂತೆಲ್ಲ ದೇವರುಗಳ ಹೆಸರು ಹೇಳಿದ್ದನ್ನು ಕೇಳಿದ ಜನ.. ಇವನೇನು ದೇವರ ಹೆಸರು ಹೇಳುತ್ತಿದ್ದಾನೋ, ಈಗಾಗಲೇ ಪರಲೋಕಕ್ಕೆ ಪಾರ್ಸೆಲ್ ಆಗಿರೋ ಇವನ ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಸರು ಹೇಳುತ್ತಿದ್ದಾರೆ ಎಂದು ಗಾಬರಿಯಾಗಿರುವ ಸುದ್ದಿ ಇದೀಗ ತಾನೇ ಬಂದಿದೆ.
< < < <
ಕರ್ನಾಟಕದ ಚುನಾವಣೆಯ ಖರ್ಚಿಗೆ ಕಾಸು ಪೀಕಲೆಂದು ಗಣಿರೆಡ್ಡಿಗಳನ್ನೆಲ್ಲ ಸಿಬಿಐ ಕೋರ್ಟಿನ ನೇಣಿನ ಕುಣಿಕೆಯಿಂದ ಬಿಡಿಸಿ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವ ‘ಭಾರತೀಯ ಜನಾರ್ದನರೆಡ್ಡಿ ಪಾರ್ಟಿಯು’ ಮಿನಿಮಂ ಲೆವೆಲ್ ನಾಚಿಕೆ ಮಾನಮರ್ಯಾದೆಯಿಲ್ಲದೆ ಬಳ್ಳಾರಿ ಅದಿರಿನ ಭೂದರೋಡೆಯ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ಜನಾರ್ದನ ರೆಡ್ಡಿ ಪಕ್ಷದ ಶಾಸಕರೆಲ್ಲರಿಗೂ ಗಣಿರೆಡ್ಡಿಗಳು ಶರ್ಟುಪ್ಯಾಂಟು ಅಂದ್ರುವೇರು ಹೊಲಿಸಿಕೊಟ್ಟು ಅವರ ಪತ್ನಿಯರಿಗೆ ಲಂಗಜಾಕೀಟನ್ನೂ ಹೊಲಿಸಿಕೊಟ್ಟಿದ್ದಾರೆಂದು ಇನ್ನೂ ವರದಿಯಾಗಿಲ್ಲ. ಈ ಸುದ್ದಿ ತಿಳಿದ ಬ್ಲೂಜೆಪಿ ಶಾಸಕರ ಪತ್ನಿಯರು ತಮ್ಮ ಮನೆಯ ಬಟ್ಟೆ ಬೀರುವಿನ ಕದ ತೆರೆದು ಅಯ್ಯೋ ನನ್ನತ್ರ ಒಂದು ಸೀರೇನೂ ಇಲ್ಲ ಎಂದು ಗೋಳಾಡುತ್ತಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.
< < < <
ದಲಿತರ ಮನೆಗಳಿಗೆ ಹೋಗಿ ಎಮ್ಮೆ ಮೇದಂತೆ ಮೇಯ್ದು ಬರುವುದನ್ನು ರೂಢಿ ಮಾಡಿಕೊಂಡಿರುವ ‘ಭಾರತೀಯ ಜಲ್ಸಾ ಪಾರ್ಟಿ’ಯ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ನ್ಯೂಸೊಂದು ಓಡೋಡಿ ಬಂದಿದೆ. ಬ್ಲೂಜೆಪಿ ಪಕ್ಷದ ಶಾಸಕರು ದಲಿತರ ಮನೆಗಳಿಗೆ ಶ್ರೀರಾಮಚಂದ್ರನಂತೆ ಹೋಗಿ ಅಲ್ಲೇ ಕೂಳುಬಾಕರಂತೆ ಗಡದ್ದಾಗಿ ಉಂಡು, ದಲಿತರಿಗೆ ಆಶೀರ್ವಾದ ಮಾಡಿ ಬರುತ್ತಿದ್ದಾರೆ ಎಂದಿದ್ದಾನೆ ಶಾಸಕ. ಈ ಸುದ್ದಿ ಕೇಳಿದ ಉತ್ತರಪ್ರದೇಶದ ದಲಿತರು, ಇನ್ನೊಂದ್ಸಲ ಯಾವೋನಾದ್ರೂ ‘ಉಣ್ಣಕ್ಕೆ ಏನಾರ ಐತಾ’ ಅಂತ ‘ಉಣ್ಣಲು’ ಬಂದರೆ ಬರ್ರಿ ಊಟ ಮಾಡ್ರಿ ಅಂತ ಒಳಗೆ ಕರೆದು ಅಗುಣಿ ಹಾಕಿ ಆ ಬ್ಲೂಜೆಪಿ ಶಾಸಕರನ್ನು ಕಚಪಚ ಪಚಪಚ ಎಂದು ತುಳಿದು ಕಾಲು ಹಿಡಿದು ತಿಪ್ಪೆಗೆಸೆಯಬೇಕೆಂದು ಇನ್ನೂ ಪ್ರತಿಜ್ಞೆ ಮಾಡಿಲ್ಲವೆಂದು ವರದಿಯಾಗಿದೆ.
< < < <
ಹೋದಲ್ಲಿ ಬಂದಲ್ಲಿ ಹಾರೆಕೋಲು ಹಿಡಿದುಕೊಂಡು ಓಡಾಡುತ್ತ ಬ್ಲೂಜೆಪಿ ಪಕ್ಷದವರ ಪೃಷ್ಟಕ್ಕೆ ಹೆಟ್ಟಿಕೊಂಡು ಓಡಾಡುತ್ತಿರುವ ಪ್ರಕಾಶ್ ರೈ ಅವರು ಪಕ್ಷಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆಂದು ಬ್ಲೂಜೆಪಿ ಮೂಲಗಳು ತಿಳಿಸಿವೆ. ರೈ ಅವರ ಮೇಲೆ ಪಕ್ಷವು ಸಾಕಿಕೊಂಡಿರುವ ಅಲ್ಸೇಷಿಯನ್ ನಾಯಿ ಪ್ರುತಾಪ್ ತಿಮ್ಮನನ್ನು ಛೂ ಬಿಟ್ಟರೂ ರೈ ಪ್ರುತಾಪನಿಗೇ ಹಾರೆಕೋಲು ಹೆಟ್ಟಿ ಎಸೆದಿರುವುದು ಆಘಾತಕಾರಿಯೆಂದು ಧಡಿಯೂರಪ್ಪನವರು ತಮ್ಮ ಮನೆದೇವರು ‘ಬಂದಿದೆಲ್ಲ ಬಳ್ಕೊಳೇ ಬಂಡಿಭಾಗ್ಯಮ್ಮ’ನ ಬಳಿ ಕಷ್ಟ ತೋಡಿಕೊಂಡಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಿ ತಮ್ಮದೇ ಪಾರ್ಟಿಯ ಪ್ರೊಡ್ಯೂಸರ್ ಒಬ್ಬನ ಕೈಲಿ ಹಾಲಿವುಡ್ ಚಿತ್ರವನ್ನು ಬೇರೆ ದೇಶದಲ್ಲಿ ಪ್ರೊಡ್ಯೂಸ್ ಮಾಡಲು ಹೇಳಿ ಪ್ರಕಾಶ್ ರೈಗೆ ಶೂಟಿಂಗ್ ನೆಪದಲ್ಲಾದರೂ ಬೇರೆ ದೇಶಕ್ಕೆ ರವಾನೆ ಮಾಡಿದರೆ ತಾನು ನೆಮ್ಮದಿಯಾಗಿ ಜಶೋಧಹೆನ್ ಸವಿನೆನಪಿನಲ್ಲಿ ಮಲಗುತ್ತೇನೆಂದು ಪಕೋಡೇಂದ್ರನು ಧಡಿಯೂರಪ್ಪನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಖಚಿತ ಮಾಹಿತಿಗಳು ತಿಳಿಸಿವೆ.
< < < <
ಕತ್ತೆ-ಎಮ್ಮೆಗಳಿಗೆ ಹೂನಾರ ಹಾಕಿ ಮೆರವಣಿಗೆ ಮಾಡುವುದೇ ರಾಜಕೀಯ ಎಂದು ನಂಬಿಕೊಂಡಿರುವ ‘ಪಾಟಾಳ್ ನಾಗರಾಜ್’ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಜನರ ಗ್ರಾಚಾರ ಕೆಟ್ಟು ತಮ್ ಪಕ್ಷ ಏನಾದ್ರೂ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಪಾಟಾಳ್ ನಾಗರಾಜ್. ಈ ಸುದ್ದಿಯನ್ನು ಸಂಜೆಪತ್ರಿಕೆಯಲ್ಲಿ ಓದಿದ ಧಡಿಯೂರಪ್ಪನವರು ಮುಖವೇ ಕಾಣದಂತೆ ಗಡ್ಡ ಬೆಳೆಸಿಕೊಂಡು ಕಾಡುಮನುಷ್ಯನಂತೆ ಅಂಡಲೆಯುತ್ತಿರುವ ಸ್ತ್ರೀರಾಮುಲುಗೆ ಫೋನ್ ಮಾಡಿ “ನಿನ್ನ ಟಾರ್ಜನ್ ಮುಸುಡಿ ನೋಡಿಯೇ ಪಾಟಾಳ್ ನಾಗರಾಜ್ ಈ ಉಚಿತ ಕಟಿಂಗ್ ಶೇವಿಂಗ್ ಚುನಾವಣಾ ಭರವಸೆ ಕೊಟ್ಟಿದ್ದಾನೆ, ಮೊದಲು ನುಣ್ಣಗೆ ಶೇವಿಂಗ್ ಮಾಡಿಸಿಕೊಂಡು ನಂತರ ಬಂದು ನಿನ್ನ ಮುಖ ಮಾತ್ರ ತೋರಿಸು ಇನ್ನೇನೂ ತೋರಿಸಬೇಡ ಎಂದು ಗದರಿಕೊಂಡಿದ್ದಾರೆ. ಶೇವಿಂಗ್ ಮಾಡಿಸಿಕೊಂಡರೆ ನನ್ನ ಹೆಂಡತಿಯೇ ನನ್ನ ಮುಖ ನೋಡಿ ಕಿಟಾರನೆ ಕಿರುಚುತ್ತಾಳೆಂದು ಸ್ತ್ರೀರಾಮುಲು ಎಷ್ಟು ಸಮಜಾಯಿಷಿ ಕೊಟ್ಟರೂ ಧಡಿಯೂರಪ್ಪನವರು ತಾವು ಕೈಲಿ ಹಿಡಕೊಂಡಿದ್ದ ಧಡಿಯನ್ನು ಕೆಳಗೇ ಇಳಿಸಲಿಲ್ಲವೆಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಇದೇ ಜಾಗದಲ್ಲಿ ಇದೇ ವಾರದಲ್ಲಿ. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಮೇಯಕ್ಕೆ ಹೋಗಿರೋ ದನಗಳು ಹಟ್ಟಿ ಸೇರ್ಕಳೋ ಹೊತ್ತಾತು, ನಾನಿನ್ನ ಬತ್ತಿನಿ. ಬಾಯ್ ಬಾಯ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...