Homeಅಂಕಣಗಳುಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

ಇಲಿ ಇಕ್ಕಳದಲ್ಲಿ ಇಡಬಾರದನ್ನ ಇಟ್ಟೋರು

- Advertisement -
- Advertisement -

ಆಘಾತವಾಣಿ |

ನಮಸ್ಕಾರ ಆಘಾತವಾಣಿಗೆ ಸ್ವಾಗತ, ವಾರ್ತೆಗಳು ಓದುತ್ತಿರುವವರು ಅಟ್ಯಾಕ್ ಹನ್ಮಂತ.
ಕರ್ನಾಟಕಕ್ಕೆ ಬಂದಿದ್ದ ಸುಳ್ ಫ್ಯಾಕ್ಟರಿ ಪಕೋಡೇಂದ್ರನು ಉಡುಪಿಯಲ್ಲಿ ಭಾಷಣ ಜಡಿದು ಉಡುಪಿ ಕೃಷ್ಣಮಠಕ್ಕೆ ಹೋಗದೆ ಇದ್ದುದರ ಬಗ್ಗೆ ನಾನಾರೀತಿಯ ಊಹಾಪೋಹಗಳು ಹರಿದಾಡುತ್ತಿವೆ. ಇವೆಲ್ಲ ಗಾಳಿಸುದ್ದಿಗಳಿಗೆ ತೆರೆ ಎಳೆದಿರುವ ಶ್ರೀಮತಿ ಶೋಭಕ್ಕನವರು “ಕೃಷ್ಣಮಠದೊಳಗೆ ಪಕೋಡೇಂದ್ರನಿಗೆ ಜೀವಭಯ ಇದ್ದುದರಿಂದ ಅವರು ಮಠಕ್ಕೆ ಎಡಗಾಲನ್ನೂ ಇಡದೆ ಹಂಗೇ ವಾಪಸ್ ಹೋಗಿದ್ದಾರೆಂದು’’ ತಿಳಿಸಿದ್ದಾರೆ. ಈ ಸುದ್ದಿ ಕೇಳಿದ ಕೃಷ್ಣಮಠದ ಪಿಂಚಣಿಸ್ವಾಮಿಗಳಾದ ‘ತೇಜಾವರ ಶ್ರಿ’ಗಳು “ತನ್ನಂಥ ಕುಪೋಷಣೆ ಪೀಡಿತ ಬಡಕಲು ದೇಹಿಯನ್ನು ಪಕೋಡೇಂದ್ರ ಅವರು ಟೆರರಿಸ್ಟ್ ಎಂದು ಭಯಬಿದ್ದಿರುವುದು ತನಗೆ ಅತ್ಯಂತ ಖೇದವುಂಟಾಗಿದೆ, ಈ ಖೇದವನ್ನು ಹೋಗಲಾಡಿಸಲು ನಾನು ಮುತಾಲಿಕನ ಅರೆಬರೆ ಮೀಸೆಯನ್ನು ತುಟಿಯಿಂದ ಕಿತ್ತು ಯಜ್ಞಕುಂಡಕ್ಕೆ ಹವಿಸ್ಸಾಗಿ ಹಾಕುವ ಮೂಲಕ ದೇವರಿಗೆ ವಿನಂತಿ ಮಾಡುತ್ತೇನೆ ಎಂದು ಇನ್ನೂ ಹೇಳಿಲ್ಲವೆಂದು ವರದಿಯಾಗಿದೆ.
< < < <
ಬಿಜೆಪಿ ಪಕ್ಷದಲ್ಲಿ ನೆಪಕ್ಕೊಂದು ಅಧ್ಯಕ್ಷನಿರಲಿ ಎಂದು ಇಟ್ಟುಕೊಳ್ಳದ ‘ಧಡಿಯೂರಪ್ಪ’ನನ್ನು ನಂಬಿಕೊಂಡರೆ ತಮ್ಮ ಕೈಗೆ ಮಟನ್ ಬಿರಿಯಾನಿ ಬೇಯಿಸುವ ಹಂಡೆ ಮಾತ್ರ ಸಿಗಲು ಸಾಧ್ಯ ಎಂದು ಚಿಂತೆಗೊಳಗಾಗಿರುವ ‘ಹಮೀದ್ ಷಾ’ ಇದಕ್ಕೊಂದು ಹೊಸ ಪ್ಲಾನು ರೆಡಿ ಮಾಡಿದ್ದಾರೆಂದು ಗೊತ್ತಾಗಿದೆ. ಎಲ್ಲೇ ಬಿಜೆಪಿ ಪಕ್ಷದ ಪ್ರಚಾರವಿರಲಿ ಅಲ್ಲಿ ಈ ಬುಡ್ಡಾಗಿರಾಕಿಯನ್ನು ಶೋಕೇಸ್ ಪೀಸಿನಂತೆ ಬಳಸಿಕೊಂಡು ಆಕಾಶ ಪಾತಾಳವಾಗಿ, ಪಾತಾಳ ಆಕಾಶವೇನಾದರೂ ಆಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ‘ಹಾರೆಸ್ಸೆಸ್’ ವಯೋವೃದ್ಧರ ಕೊಂಪೆಯಿಂದ ‘ಚಂತೋಷ್ ಜೀ’ಯನ್ನು ದರದರನೆ ಕರೆತಂದು ಸಿಎಂ ಮಾಡುವುದಾಗಿ ‘ಹಮೀದ್ ಷಾ’ ಅವರು ನಿದ್ದೆಗಣ್ಣಿನಲ್ಲಿ ಕನವರಿಸಿಕೊಳ್ಳುತ್ತಿದ್ದರು ಎಂಬ ಸುದ್ದಿ ಬಹಿರಂಗವಾಗಿದೆ.
< < < <
ಕಾಂಗ್ರೆಸ್ ಪಕ್ಷದ ‘ಲಾಹುಲ್ ಗಾಂಧಿ’ ಬಸವಣ್ಣನವರ ವಚನವನ್ನು ಉಚ್ಚರಿಸಲು ಹೋಗಿ ಇವನರ್ವ, ಇವನರ್ವ ಎಂದು ತೆದ್ದೊದ್ದೊ ಬೊದ್ದೊದ್ದೊ ಮಾಡಿದ ಮೇಲೆ ಕಾಂಗ್ರೆಸ್ಸಿಗರನ್ನು ಬಿಜೆಪಿಗರು ಹುರಿದು ಉಪ್ಪಾಕಿಕೊಂಡು ನುಂಗಿ ನೆಕ್ಕಿದ್ದ ವಿಷಯ ತಮಗೆ ತಿಳಿದಿರಬಹುದು. ಅದೇ ಬಗೆಯಲ್ಲಿ ಉತ್ತರದ ಹಿಂದಿಗರ ಮನೆಯ ಜೀತದಾಳಾದ ‘ಪಕೋಡೇಂದ್ರ’ನು ತಾನೇನೋ ಕನ್ನಡ ಪಂಡಿತನೆಂಬಂತೆ ಪೋಸು ಕೊಡಲು ಹೋಗಿ ‘ಇಲಿ ಇಕ್ಕಳದೊಳಗೆ ಇಡಬಾರದ್ದನ್ನು ಇಟ್ಟಂತೆ’ ಕೊಯಯೊ ಪಯಯೋ ಎಂದು ವದರಿಬಿಟ್ಟಿದ್ದಾನೆ. ‘ಭಗವಾನ್ ಮಂತೆಸಾಮಿ, ದೇವಿ ಮಾರವಬ್ಯಾ, ಮಲ ಮೇವದೇಶ್ವರ್, ಬಿಲ್ಲಿಗಿರಿ ರಂಗ, ಚಾಮರಾಜೇಶ್ವರ್, ಹಿಮ್ಮದ್ ಗೋಪಾಲ್ ಸಾಮಿ’ ಅಂತೆಲ್ಲ ದೇವರುಗಳ ಹೆಸರು ಹೇಳಿದ್ದನ್ನು ಕೇಳಿದ ಜನ.. ಇವನೇನು ದೇವರ ಹೆಸರು ಹೇಳುತ್ತಿದ್ದಾನೋ, ಈಗಾಗಲೇ ಪರಲೋಕಕ್ಕೆ ಪಾರ್ಸೆಲ್ ಆಗಿರೋ ಇವನ ಚಿಕ್ಕಪ್ಪ-ದೊಡ್ಡಪ್ಪಂದಿರ ಹೆಸರು ಹೇಳುತ್ತಿದ್ದಾರೆ ಎಂದು ಗಾಬರಿಯಾಗಿರುವ ಸುದ್ದಿ ಇದೀಗ ತಾನೇ ಬಂದಿದೆ.
< < < <
ಕರ್ನಾಟಕದ ಚುನಾವಣೆಯ ಖರ್ಚಿಗೆ ಕಾಸು ಪೀಕಲೆಂದು ಗಣಿರೆಡ್ಡಿಗಳನ್ನೆಲ್ಲ ಸಿಬಿಐ ಕೋರ್ಟಿನ ನೇಣಿನ ಕುಣಿಕೆಯಿಂದ ಬಿಡಿಸಿ ಕರೆತಂದು ಪ್ರಚಾರ ಕಾರ್ಯದಲ್ಲಿ ತೊಡಗಿಸಿರುವ ‘ಭಾರತೀಯ ಜನಾರ್ದನರೆಡ್ಡಿ ಪಾರ್ಟಿಯು’ ಮಿನಿಮಂ ಲೆವೆಲ್ ನಾಚಿಕೆ ಮಾನಮರ್ಯಾದೆಯಿಲ್ಲದೆ ಬಳ್ಳಾರಿ ಅದಿರಿನ ಭೂದರೋಡೆಯ ದುಡ್ಡಿನಲ್ಲಿ ಮಜಾ ಉಡಾಯಿಸುತ್ತಿದೆ ಎಂದು ತಿಳಿದುಬಂದಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ಜನಾರ್ದನ ರೆಡ್ಡಿ ಪಕ್ಷದ ಶಾಸಕರೆಲ್ಲರಿಗೂ ಗಣಿರೆಡ್ಡಿಗಳು ಶರ್ಟುಪ್ಯಾಂಟು ಅಂದ್ರುವೇರು ಹೊಲಿಸಿಕೊಟ್ಟು ಅವರ ಪತ್ನಿಯರಿಗೆ ಲಂಗಜಾಕೀಟನ್ನೂ ಹೊಲಿಸಿಕೊಟ್ಟಿದ್ದಾರೆಂದು ಇನ್ನೂ ವರದಿಯಾಗಿಲ್ಲ. ಈ ಸುದ್ದಿ ತಿಳಿದ ಬ್ಲೂಜೆಪಿ ಶಾಸಕರ ಪತ್ನಿಯರು ತಮ್ಮ ಮನೆಯ ಬಟ್ಟೆ ಬೀರುವಿನ ಕದ ತೆರೆದು ಅಯ್ಯೋ ನನ್ನತ್ರ ಒಂದು ಸೀರೇನೂ ಇಲ್ಲ ಎಂದು ಗೋಳಾಡುತ್ತಿಲ್ಲವೆಂದು ಬಲ್ಲ ಮೂಲಗಳು ತಿಳಿಸಿವೆ.
< < < <
ದಲಿತರ ಮನೆಗಳಿಗೆ ಹೋಗಿ ಎಮ್ಮೆ ಮೇದಂತೆ ಮೇಯ್ದು ಬರುವುದನ್ನು ರೂಢಿ ಮಾಡಿಕೊಂಡಿರುವ ‘ಭಾರತೀಯ ಜಲ್ಸಾ ಪಾರ್ಟಿ’ಯ ಉತ್ತರ ಪ್ರದೇಶ ಸರ್ಕಾರದಿಂದ ಹೊಸ ನ್ಯೂಸೊಂದು ಓಡೋಡಿ ಬಂದಿದೆ. ಬ್ಲೂಜೆಪಿ ಪಕ್ಷದ ಶಾಸಕರು ದಲಿತರ ಮನೆಗಳಿಗೆ ಶ್ರೀರಾಮಚಂದ್ರನಂತೆ ಹೋಗಿ ಅಲ್ಲೇ ಕೂಳುಬಾಕರಂತೆ ಗಡದ್ದಾಗಿ ಉಂಡು, ದಲಿತರಿಗೆ ಆಶೀರ್ವಾದ ಮಾಡಿ ಬರುತ್ತಿದ್ದಾರೆ ಎಂದಿದ್ದಾನೆ ಶಾಸಕ. ಈ ಸುದ್ದಿ ಕೇಳಿದ ಉತ್ತರಪ್ರದೇಶದ ದಲಿತರು, ಇನ್ನೊಂದ್ಸಲ ಯಾವೋನಾದ್ರೂ ‘ಉಣ್ಣಕ್ಕೆ ಏನಾರ ಐತಾ’ ಅಂತ ‘ಉಣ್ಣಲು’ ಬಂದರೆ ಬರ್ರಿ ಊಟ ಮಾಡ್ರಿ ಅಂತ ಒಳಗೆ ಕರೆದು ಅಗುಣಿ ಹಾಕಿ ಆ ಬ್ಲೂಜೆಪಿ ಶಾಸಕರನ್ನು ಕಚಪಚ ಪಚಪಚ ಎಂದು ತುಳಿದು ಕಾಲು ಹಿಡಿದು ತಿಪ್ಪೆಗೆಸೆಯಬೇಕೆಂದು ಇನ್ನೂ ಪ್ರತಿಜ್ಞೆ ಮಾಡಿಲ್ಲವೆಂದು ವರದಿಯಾಗಿದೆ.
< < < <
ಹೋದಲ್ಲಿ ಬಂದಲ್ಲಿ ಹಾರೆಕೋಲು ಹಿಡಿದುಕೊಂಡು ಓಡಾಡುತ್ತ ಬ್ಲೂಜೆಪಿ ಪಕ್ಷದವರ ಪೃಷ್ಟಕ್ಕೆ ಹೆಟ್ಟಿಕೊಂಡು ಓಡಾಡುತ್ತಿರುವ ಪ್ರಕಾಶ್ ರೈ ಅವರು ಪಕ್ಷಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಿದ್ದಾರೆಂದು ಬ್ಲೂಜೆಪಿ ಮೂಲಗಳು ತಿಳಿಸಿವೆ. ರೈ ಅವರ ಮೇಲೆ ಪಕ್ಷವು ಸಾಕಿಕೊಂಡಿರುವ ಅಲ್ಸೇಷಿಯನ್ ನಾಯಿ ಪ್ರುತಾಪ್ ತಿಮ್ಮನನ್ನು ಛೂ ಬಿಟ್ಟರೂ ರೈ ಪ್ರುತಾಪನಿಗೇ ಹಾರೆಕೋಲು ಹೆಟ್ಟಿ ಎಸೆದಿರುವುದು ಆಘಾತಕಾರಿಯೆಂದು ಧಡಿಯೂರಪ್ಪನವರು ತಮ್ಮ ಮನೆದೇವರು ‘ಬಂದಿದೆಲ್ಲ ಬಳ್ಕೊಳೇ ಬಂಡಿಭಾಗ್ಯಮ್ಮ’ನ ಬಳಿ ಕಷ್ಟ ತೋಡಿಕೊಂಡಿದ್ದಾರೆ. ಈ ಬಗ್ಗೆ ತುರ್ತಾಗಿ ಗಮನ ಹರಿಸಿ ತಮ್ಮದೇ ಪಾರ್ಟಿಯ ಪ್ರೊಡ್ಯೂಸರ್ ಒಬ್ಬನ ಕೈಲಿ ಹಾಲಿವುಡ್ ಚಿತ್ರವನ್ನು ಬೇರೆ ದೇಶದಲ್ಲಿ ಪ್ರೊಡ್ಯೂಸ್ ಮಾಡಲು ಹೇಳಿ ಪ್ರಕಾಶ್ ರೈಗೆ ಶೂಟಿಂಗ್ ನೆಪದಲ್ಲಾದರೂ ಬೇರೆ ದೇಶಕ್ಕೆ ರವಾನೆ ಮಾಡಿದರೆ ತಾನು ನೆಮ್ಮದಿಯಾಗಿ ಜಶೋಧಹೆನ್ ಸವಿನೆನಪಿನಲ್ಲಿ ಮಲಗುತ್ತೇನೆಂದು ಪಕೋಡೇಂದ್ರನು ಧಡಿಯೂರಪ್ಪನಿಗೆ ವಾಟ್ಸಾಪ್ ಮೆಸೇಜ್ ಕಳಿಸಿದ್ದಾರೆಂದು ಖಚಿತ ಮಾಹಿತಿಗಳು ತಿಳಿಸಿವೆ.
< < < <
ಕತ್ತೆ-ಎಮ್ಮೆಗಳಿಗೆ ಹೂನಾರ ಹಾಕಿ ಮೆರವಣಿಗೆ ಮಾಡುವುದೇ ರಾಜಕೀಯ ಎಂದು ನಂಬಿಕೊಂಡಿರುವ ‘ಪಾಟಾಳ್ ನಾಗರಾಜ್’ ಅವರು ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಜನರ ಗ್ರಾಚಾರ ಕೆಟ್ಟು ತಮ್ ಪಕ್ಷ ಏನಾದ್ರೂ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಉಚಿತವಾಗಿ ಕಟಿಂಗ್ ಶೇವಿಂಗ್ ಮಾಡಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ ಪಾಟಾಳ್ ನಾಗರಾಜ್. ಈ ಸುದ್ದಿಯನ್ನು ಸಂಜೆಪತ್ರಿಕೆಯಲ್ಲಿ ಓದಿದ ಧಡಿಯೂರಪ್ಪನವರು ಮುಖವೇ ಕಾಣದಂತೆ ಗಡ್ಡ ಬೆಳೆಸಿಕೊಂಡು ಕಾಡುಮನುಷ್ಯನಂತೆ ಅಂಡಲೆಯುತ್ತಿರುವ ಸ್ತ್ರೀರಾಮುಲುಗೆ ಫೋನ್ ಮಾಡಿ “ನಿನ್ನ ಟಾರ್ಜನ್ ಮುಸುಡಿ ನೋಡಿಯೇ ಪಾಟಾಳ್ ನಾಗರಾಜ್ ಈ ಉಚಿತ ಕಟಿಂಗ್ ಶೇವಿಂಗ್ ಚುನಾವಣಾ ಭರವಸೆ ಕೊಟ್ಟಿದ್ದಾನೆ, ಮೊದಲು ನುಣ್ಣಗೆ ಶೇವಿಂಗ್ ಮಾಡಿಸಿಕೊಂಡು ನಂತರ ಬಂದು ನಿನ್ನ ಮುಖ ಮಾತ್ರ ತೋರಿಸು ಇನ್ನೇನೂ ತೋರಿಸಬೇಡ ಎಂದು ಗದರಿಕೊಂಡಿದ್ದಾರೆ. ಶೇವಿಂಗ್ ಮಾಡಿಸಿಕೊಂಡರೆ ನನ್ನ ಹೆಂಡತಿಯೇ ನನ್ನ ಮುಖ ನೋಡಿ ಕಿಟಾರನೆ ಕಿರುಚುತ್ತಾಳೆಂದು ಸ್ತ್ರೀರಾಮುಲು ಎಷ್ಟು ಸಮಜಾಯಿಷಿ ಕೊಟ್ಟರೂ ಧಡಿಯೂರಪ್ಪನವರು ತಾವು ಕೈಲಿ ಹಿಡಕೊಂಡಿದ್ದ ಧಡಿಯನ್ನು ಕೆಳಗೇ ಇಳಿಸಲಿಲ್ಲವೆಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಭೇಟಿ ಇದೇ ಜಾಗದಲ್ಲಿ ಇದೇ ವಾರದಲ್ಲಿ. ಇಲ್ಲೇ ಡ್ರಾ, ಇಲ್ಲೇ ಬಹುಮಾನ. ಮೇಯಕ್ಕೆ ಹೋಗಿರೋ ದನಗಳು ಹಟ್ಟಿ ಸೇರ್ಕಳೋ ಹೊತ್ತಾತು, ನಾನಿನ್ನ ಬತ್ತಿನಿ. ಬಾಯ್ ಬಾಯ್.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....