Homeಅಂಕಣಗಳುಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

ಜಾತಿಜಾಡ್ಯದಿಂದ ನಾವು ಪಾರಾಗುವುದೆಂದು?

- Advertisement -
ತಿಜಾಡ್ಯದ ವಿರುದ್ಧ ಬಹುಕಾಲದಿಂದಲೂ ಸಂತರು, ಸಮಾಜಸುಧಾರಕರು ಎಷ್ಟೇ ಮಾತನಾಡಿದ್ದರೂ ಅವರುಗಳ ಜಾತಿ ಮೂಲವನ್ನೇ ಎತ್ತಿ ಹಿಡಿದು ಅವರನ್ನು ಅವರವರ ಜಾತಿಗಳ ಐಕಾನುಗಳನ್ನಾಗಿಸಿದ ಹಿರಿಮೆ ನಮ್ಮದು. ಈ ಮನೋಧರ್ಮದ ಬಲಿಪಶುಗಳಾಗಿರುವವರು ಇಲ್ಲಿನ ಅಸ್ಪøಶ್ಯರು. ಆರ್ಥಿಕವಾಗಿ ಸ್ವಲ್ಪ ಮಟ್ಟಿಗಾದರೂ ಸಬಲರಾದರೂ ಇವರನ್ನು ಸಾಮಾಜಿಕವಾಗಿ ತಮ್ಮ ಸಮಾನರೆಂದು ಒಪ್ಪಿಕೊಳ್ಳುವುದಕ್ಕೆ ಮೇಲ್ಜಾತಿ ಮನಸ್ಥಿತಿಯವರು ಸಿದ್ಧರಿಲ್ಲ. ಈ ಮನಸ್ಥಿತಿ ಆಗಾಗ ತನ್ನ ವಿಕೃತ ರೂಪವನ್ನು ಪ್ರದರ್ಶಿಸಿ ಸಮಾಜವನ್ನೇ ಕದಡುತ್ತದೆ.
ಈ ಮಾತಿಗೊಂದು ತಾಜಾ ಉದಾಹರಣೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೂಲೆಯಲ್ಲಿರುವ ಗೋನಾಳ ಗ್ರಾಮ. ಕುರುಬ ಸಮುದಾಯದ ಸುಮಾರು 70, ಮಾದಿಗ ಸಮುದಾಯದ ಸುಮಾರು 50, ಲಿಂಗಾಯತ, ನಾಯಕ, ಮುಸ್ಲಿಂ ಸಮುದಾಯದ ತಲಾ 10 – 15 ಮನೆಗಳಿರುವ ಈ ಹಳ್ಳಿ. ಇಲ್ಲಿ ಆರ್ಥಿಕವಾಗಿ ಹೇಳಿಕೊಳ್ಳುವಂಥ ಅಂತರ ಕಂಡು ಬರುವುದಿಲ್ಲ. ಕುರುಬರಲ್ಲಿರುವಂತೆಯೇ ಮಾದಿಗರಲ್ಲಿಯೂ ಸ್ಥಿತಿವಂತರು, ಸಣ್ಣ ಭೂಹಿಡುವಳಿದಾರರು, ಭೂಹೀನರು ಇದ್ದಾರೆ. ಎಲ್ಲ ಮನೆಗಳಲ್ಲಿಯೂ ಬಸವಣ್ಣನವರ ಪಟಗಳು ರಾರಾಜಿಸುತ್ತವೆ. ಆದರೆ ದೇವರ ಸ್ಥಾದಲ್ಲಿರುವ ಬಸವೇಶ್ವರರ ಬೋಧನೆಗಳು ಸಾಮಾಜಿಕವಾಗಿ ನೆಲೆನಿಂತಿರುವ ಸಂಬಂಧಗಳನ್ನು ಬದಲಾಯಿಸುವಷ್ಟು ಶಕ್ತನಾಗಿಲ್ಲದಿರುವುದೊಂದು ದುರಂತ.
ತಾವು ಮೇಲ್‍ಸ್ತರದವರು ಎಂದು ಕೊಳ್ಳುವ ಕುರುಬ ಸಮುದಾಯದವರು, ತಮ್ಮ ಕಣ್ಣ ಮುಂದೆಯೇ ಅಸ್ಪøಶ್ಯರೆನಿಸಿಕೊಂಡವರು ಬೆಳೆಯುವುದನ್ನು ಸಹಿಸಲಾರದೇ ಹೋದರು. ಆ ಊರಿನ ಬಹುತೇಕರು ಕಂಪ್ಲಿ, ಹೊಸಪೇಟೆಗಳಂಥಾ ಊರುಗಳಲ್ಲಿ ಶಿಕ್ಷಣವನ್ನು ಪಡೆದಿದ್ದರೂ ಆ ಶಿಕ್ಷಣ ಕೇವಲ ಸರ್ಟಿಫಿಕೇಟುಗಳಿಗೆ ಸೀಮಿತವಾಗಿದೆ. ಮನೋಭಾವಗಳಂತೂ ಹಳೆಯ ಮಾದರಿಯವೇ ಆಗಿವೆ. ಕೆಳಜಾತಿಗಳ ಬಗೆಗಿನ ಅಸಹನೆಯ ಕಿಚ್ಚು ಮೇಲ್ಜಾತಿ ಎನಿಸಿಕೊಂಡವರನ್ನು ಒಳಗೊಳಗೇ ಸುಡುತ್ತಿರುವುದನ್ನು ಕಾಣಬಹುದು.
ಜೂನ್ 19ರಂದು ಆ ಹಳ್ಳಿಗೆ ಬೇಟಿ ನೀಡಿದ ಸತ್ಯಶೋಧನ ಸಮಿತಿಗೆ ತಿಳಿದು ಬಂದಂತೆ 2012ರಿಂದ ಎರಡೂ ಸಮುದಾಯಗಳ ನಡುವೆ ಆಗಾಗ ಆಡಳಿತ ಕೈಗೊಳ್ಳುವ ಶಾಂತಿ ಸಭೆಗಳಂಥಾ ಕಾರ್ಯಕ್ರಮಗಳು ತೇಪೆ ಹಚ್ಚುವುದನ್ನು ಬಿಟ್ಟರೆ ಮತ್ತೇನೂ ಸಾಧಿಸಲಿಲ್ಲ. ಇಂಥ ತಿಕ್ಕಾಟಗಳು ಒಂದು ಕದನವಾಗಿ ಪ್ರಕಟಗೊಂಡಿದ್ದು 2018ರ ಮೇ 25ರಂದು. ಬನ್ನೆಪ್ಪ ಮಾದಿಗ ಸಮುದಾಯದ ಹಣವಂತನಾಗಿದ್ದು, ಆತನೇ ಸಮುದಾಯದ ನಾಯಕ. ಗ್ರಾಮಪಂಚಾಯತಿಯ ಸದಸ್ಯನೂ ಆಗಿರುವ ಈತನ ಮಾತೇ ಆ ಸಮುದಾಯದ ಇತರರಿಗೆ ಅಂತಿಮ. ಅದೇರೀತಿ ಹೊಸಕೆರಪ್ಪ ಎಂಬುವವನು ಕುರುಬರ ನಾಯಕನಾಗಿದ್ದು, ಇವರಿಬ್ಬರ ನಡುವಿನ ಜಗಳಗಳೇ ಎರಡು ಸಮುದಾಯಗಳ ಜಗಳಗಳಾಗಿ ಮಾರ್ಪಡುತ್ತವೆ. ಅಲ್ಲಿನ ಜನಕ್ಕೆ ರಾಜಕೀಯವಾಗಿಯೂ ಸ್ಪಷ್ಟ ನಿಲುವುಗಳೇನಿಲ್ಲ. ತಮ್ಮ ನಾಯಕರು ಕಾಂಗ್ರೇಸ್ಸಾದರೆ ಅವರೂ ಕಾಂಗ್ರೇಸ್, ಬಿಜೆಪಿಯಾದರೆ ಬಿಜೆಪಿ.
ಕೆಲವು ತಿಂಗಳುಗಳ ಕೆಳಗೆ ಪರಿಶಿಷ್ಟರು ಅಂಬೇಡ್ಕರ್ ಹಾಗೂ ಜಗಜೀವನ್‍ರಾಮ್‍ರವರ ಚಿತ್ರಗಳನ್ನೊಳಗೊಂಡ ಫಲಕವೊಂದನ್ನು ಊರಿನ ಮಧ್ಯಭಾಗದ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಿದರು. 5*5 ಅಳತೆಯ ಆ ಜಾಗ ಕುರುಬ ಸಮುದಾಯದ ಕುಟುಂಬವೊಂದಕ್ಕೆ ಸೇರಿದ್ದು. ಶಿಕ್ಷಣವಿಲ್ಲದಿದ್ದರೂ ಇತರರಿಗಿಂತಲೂ ಭಿನ್ನವಾಗಿ ಯೋಚಿಸುವ ಈ ಕುಟುಂಬದವರು ತಮ್ಮ ಜಾಗದಲ್ಲಿ ಆ ಫಲಕವನ್ನು ನೆಡಲು ಪರಿಶಿಷ್ಟರಿಗೆ ಅನುಮತಿಯನ್ನೂ ನೀಡಿದ್ದರು. ಆರ್ಥಿಕವಾಗಿ ತಮಗಿಂತಲೂ ಕಡಿಮೆ ಇಲ್ಲವೆಂದು ತೋರಿಸಿಕೊಳ್ಳುವ ಪರಿಶಿಷ್ಟರು ಈಗ ತಮ್ಮ ಸಾಮಾಜಿಕ ಅಸ್ತಿತ್ವವನ್ನು ಗಟ್ಟಿಯಾಗಿ ನೆಲೆಗೊಳಿಸಲು ಮಾಡಿದ ಈ ಹೊಸ ಪ್ರಯತ್ನ ಮೇಲ್ಜಾತಿ ಎಂದುಕೊಳ್ಳುವ ಕುರುಬರಿಂದ ಸಹಿಸಲಾಗಲಿಲ್ಲ. ಈ ಫಲಕ ತಮಗೆ ಸವಾಲಾಗಿದೆಯೆಂದು ಭಾವಿಸಿದ ಕುರುಬ ಸಮಾಜದ ಇತರರು ಫಲಕದ ಬಗ್ಗೆ ತಗಾದೆ ತೆಗೆದು ಒಂದು ರೀತಿಯ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಗ್ರಾಮದಲ್ಲಿದ್ದ ಒಂದೇ ಒಂದು ಹೋಟಲಿನಲ್ಲಿ ಮತ್ತು ಬಸವಣ್ಣನವರ ದೇವಸ್ಥಾನದಲ್ಲಿ ಅಸ್ಪøಶ್ಯತೆಯ ಆಚರಣೆಯನ್ನು ಭಿನ್ನ ರೀತಿಯಲ್ಲಿ ಅವರ ಮೇಲೆ ಹೇರುವ ಪ್ರಯತ್ನ ನಡೆಯಿತು.
ಮೇ 24ರಂದು ಈ ಎರಡೂ ಸಮುದಾಯಗಳ ಇಬ್ಬರು ಊರ ಬದಿಯ ಕಾಲುದಾರಿಯಲ್ಲಿ ವಿರುದ್ಧ ದಿಕ್ಕುಗಳಿಂದ ನಡೆದು ಬಂದಿದ್ದು ಯಾರು ಯಾರಿಗೆ ದಾರಿ ಬಿಡಬೇಕೆಂಬ ಬಗ್ಗೆ ಸಣ್ಣ ಜಗಳ ನಡೆದಿದೆ. ಅಂದು ಸಂಜೆ ತನ್ನ ಸಮುದಾಯದವನ ಪರವಾಗಿ ಮೇಲ್ಜಾತಿಯವರನ್ನು ಪ್ರಶ್ನೆ ಮಾಡಿದ ಬನ್ನೆಪ್ಪನ ಮಾತುಗಳು ಮಾರನೆಯ ದಿನದ ಭಯಂಕರ ಆಗುಹೋಗುಗಳಿಗೆ ನೆಪವಾದವು. ಇಂತಹ ಸನ್ನಿವೇಶಗಳಲ್ಲಿ ಮೇಲ್ಜಾತಿ ಮನಸ್ಥಿತಿಗಳ ಸ್ಪಂದನೆ ಒಂದೇ ರೀತಿಯದ್ದು, ಅದು ತಮ್ಮ ಕಣ್‍ಕಿಚ್ಚಿಗೆ ಕಾರಣವಾದ ದಲಿತರ ಮೇಲೆ ದಾಳಿ ನಡೆಸುವುದು. ಮೇ 25ರಂದು ನಡೆದದ್ದು ಅದೇ. ಚುಂಡೂರು, ಕಾರಂಚೇಡು, ಕಂಬಾಲಪಲ್ಲಿಗಳಲ್ಲಿ ನಡೆದಿದ್ದೂ ಹೀಗೆಯೇ.
ಅಂದು ಯೋಜಿತ ರೀತಿಯಲ್ಲಿ ನಡೆದ ದಾಳಿಯನ್ನು ಎದುರಿಸಲಾಗದ ಮಾದಿಗ ಜನಾಂಗದವರು ತಿರುಗೇಟು ನೀಡಲು ಪ್ರಯತ್ನಿಸಿದರೂ, ಸಂಘಟಿತ ದಾಳಿಯನ್ನೆದುರಿಸಲಾರದೆ, ಬಹುತೇಕ ಜನ ದಾಳಿಯಿಂದ ತಪ್ಪಿಸಿಕೊಳ್ಳಲು ಊರು ಬಿಟ್ಟು ಓಡಿದರು. ಈ ನಡುವೆ ಬನ್ನೆಪ್ಪನ ಮಗ ದೊಡ್ಡದೇವಣ್ಣ ದಾಳಿಕೋರರಿಂದ ಪಾರಾಗಲು ಒಂದು ಮನೆಗೆ ನುಗ್ಗಿದ. ಅವನನ್ನು ಹಿಂಬಾಲಿಸಿದ ಐದಾರು ಜನರ ಗುಂಪೊಂದು ಆ ಮನೆಯಲ್ಲಿಯೇ ಅವನನ್ನು  ಮನಸೋಇಚ್ಚೆ ಚಚ್ಚಿದರು. ಕೊನೆಗೆ ಸತ್ತನೆಂದೇ ಭಾವಿಸಿ ದೇಹವನ್ನು ಒಂದು ಛಾಪೆಯಲ್ಲಿ ಸುತ್ತಿಟ್ಟು ಜಾಗ ಖಾಲಿ ಮಾಡಿದರು. ಆದರೆ ಸುಮಾರು 4 ಘಂಟೆಗಳ ಕಾಲ ನೆತ್ತರ ಮಡುವಿನಲ್ಲಿ ಬಿದ್ದಿದ್ದ ಆ ಯುವಕ ಜಾÐನ ತಪ್ಪಿದ ಸ್ಥಿತಿಯಲ್ಲಿದ್ದ. ಸಂಜೆ ಅವನನ್ನು ಕಂಡವರು ಆ ಹೊತ್ತಿಗೆ ಹಳ್ಳಿಗೆ ಬಂದಿದ್ದ ಪೊಲೀಸರಿಗೆ ತಿಳಿಸಿದ್ದರಿಂದ ಅವರು ದೇವಣ್ಣನನ್ನು ಮೊದಲು ಬಳ್ಳಾರಿಗೆ, ನಂತರ ಬೆಂಗಳೂರಿಗೆ ಚಿಕಿತ್ಸೆಗಾಗಿ ಕಳುಹಿಸಿದರು. ತನ್ನ ಎರಡೂ ಕೈಗಳಿಗೆ ಆದ ತೀವ್ರವಾದ ಗಾಯಗಳು ತಲೆಯ ಮೇಲೆ ಬಿದ್ದಿರುವ ಪೆಟ್ಟು ಮತ್ತು ಮಾತನಾಡಲಾಗದಂತೆ ನಾಲಗೆಗೂ ಪೆಟ್ಟುಗಳಿಂದ ಆಘಾತಕ್ಕೊಳಗಾಗಿರುವ ದೇವಣ್ಣ ತನ್ನ ಮನೆಯಲ್ಲಿ ಈಗಲೂ ಅಸಹಾಯಕನಾಗಿ ಮಲಗಿದ್ದಾನೆ. ಆವನ ತಂದೆಯೂ ಸೇರಿದಂತೆ ಹತ್ತಿರದ ಬಂಧುಗಳು ಜೈಲು ಪಾಲಾಗಿದ್ದು, ಈತನಿಗೆ ಸರಿಯಾದ ಚಿಕಿತ್ಸೆಯೂ ದೊರಕದೆ, ಆತನ ಮುಂದಿನ ಸ್ಥಿತಿ ಏನಾಗುತ್ತದೋ ಹೇಳಲಾಗದು.
ಪೊಲೀಸರು ಯಥಾಪ್ರಕಾರ ಎರಡು ಕಡೆಯವರ ಮೇಲೂ ಕೇಸು ಜಡಿದು ಅವರಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಕೆಲವರು ಈಗ ಬಳ್ಳಾರಿಯ ಜೈಲಿನಲ್ಲಿದ್ದಾರೆ. ಹಳ್ಳಿಯಲ್ಲಿ ಕೇವಲ ಮುದುಕರು, ಹೆಂಗಸರು ಮತ್ತು ಮಕ್ಕಳು ಮಾತ್ರವಿದ್ದು ಕೃಷಿ ಚಟುವಟಿಕೆಗಳು ಭರದಿಂದ ಸಾಗಬೇಕಾದ ಈ ಕಾಲದಲ್ಲಿ ಗಂಡಸರು ಪೊಲೀಸರ ಭಯದಿಂದಾಗಿ ಊರಿನಿಂದ ದೂರವೇ ಉಳಿದಿದ್ದಾರೆ. ಹೆಚ್ಚಾಗಿ ಭಯ ಕಾಡುತ್ತಿರುವುದು ಮಾದಿಗ ಸಮುದಾಯದವರನ್ನು. ಇದರ ಪರಿಣಾಮವಾಗಿ ಈ ವರ್ಷದ ಬೆಳೆಹಾಳು.
ಮಾದಿಗ ಸುಮದಾಯದವರ ವಿರುದ್ಧ ಒಟ್ಟು ಸಮಾಜಕ್ಕೇ ಇರುವ ಪೂರ್ವಗ್ರಹ ಕಂಪ್ಲಿಯಲ್ಲಿನ ಪೊಲೀಸರ ಜತೆ ಮಾತನಾಡುವಾಗಲೂ ಕಂಡುಬಂತು. ಸಾಮಾಜಿಕ ವಾಸ್ತವಗಳನ್ನು ವಸ್ತುನಿಷ್ಠವಾಗಿ ಅರ್ಥಮಾಡಿಕೊಳ್ಳಲಾಗದ ಇಂಥ ಅಧಿಕಾರ ವರ್ಗದವರಿಂದ ನಿಜವಾದ ನ್ಯಾಯ ಸಿಗುವುದನ್ನು ನಿರೀಕ್ಷಿಸುವುದೂ ಕಷ್ಟ. ಸಮಾಜದ ವಿವಿಧ ಗುಂಪುಗಳ ನಡುವೆ ಏರ್ಪಟ್ಟಿರುವ ಕಂದಕವನ್ನು ಮುಚ್ಚುವ ಕೆಲಸ ಮಾಡಬೇಕಾದರೆ ಎಲ್ಲ ರೀತಿಯ ಸ್ವಾರ್ಥವನ್ನು, ಪೂರ್ವಗ್ರಹಗಳಿಂದ ದೂರವಿಟ್ಟು ಸಮಾಜದ ಸ್ವಾಸ್ಥ್ಯಯನ್ನು ಬಯಸುವ ಅದಕ್ಕಾಗಿ ಕಾಳಜಿ, ಬದ್ಧತೆಗಳಿಂದ ದುಡಿಯುವ ಮನಸ್ಸುಗಳು ಬೇಕು. ಆಗ ಮಾತ್ರ ದೇಶಕ್ಕಂಟಿದ ಜಾತಿಜಾಡ್ಯ ವಾಸಿಯಾಗಬಹುದು. ಇಂದಿನ ವ್ಯವಸ್ಥೆಯಲ್ಲಿ ಅದು ಸಾಧ್ಯವೇ ಎಂಬುದೇ ದೊಡ್ಡ ಪ್ರಶ್ನೆಯಾಗಿಯೇ ಕಾಡುತ್ತದೆ? ಇನ್ನೆಷ್ಟು ದಿನ ಹೀಗೆ…?
 – ನಗರಗೆರೆ ರಮೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...