Homeಕರ್ನಾಟಕಡಾ. ಮಾತೆ ಮಹಾದೇವಿ ಎಂಬ ಬೆರಗು

ಡಾ. ಮಾತೆ ಮಹಾದೇವಿ ಎಂಬ ಬೆರಗು

- Advertisement -
- Advertisement -

ವಿಶ್ವಾರಾಧ್ಯ ಸತ್ಯಂಪೇಟೆ |

ಅಂಗಸಂಗದಲ್ಲಿ ಲಿಂಗಸಂಗಿಯಾದೆನು
ಲಿಂಗಸಂಗದಲ್ಲಿ ಅಂಗಸಂಗಿಯಾದೆನು
ಉಭಯಸಂಗವನೂ ಅರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಬೆರಸಿದ ಬಳಿಕ
ಎನ್ನ ನಾನು ಏನೊಂದ ಅರಿಯೆನಯ್ಯಾ

ಈ ಲಿಂಗ ಸುಖದಲ್ಲಿಯೆ ತಮ್ಮ ಅಂಗಸುಖವನ್ನು ಮರೆತು ಬಸವಾದಿ ಶರಣರ ವಚನಗಳ ಸುಖದಲ್ಲಿ ಕರ ಕರಕರಗಿ ಹೋದವರು ಯಾರಾದರೂ ಇದ್ದರೆ ಅವರು ಲಿಂಗೈಕ್ಯ ಲಿಂಗಾನಂದ ಮಹಾಸ್ವಾಮಿಗಳು ಹಾಗೂ ಡಾ. ಮಾತೆ ಮಹಾದೇವಿಯವರು. ಮಾತೆ ಮಹಾದೇವಿ ಒಂದು ದಂತಕತೆಯಂತೆ ತಮ್ಮ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡವರು. ತಾವು ಗುರುಗಳಾದ ಪೂಜ್ಯ ಲಿಂಗಾನಂದ ಸ್ವಾಮಿಗಳಿಂದ ಪಡೆದ ಆಧ್ಯಾತ್ಮಿಕ ಔನತ್ಯವನ್ನು ನಾಡಿನ ಉದ್ದಗಲಕ್ಕೂ ಪಸರಿಸಿದವರು. ವಚನಗಳು , ಬಸವಾದಿ ಶರಣರು ಅಂದರೆ ಕೇವಲ ಮಠೀಯ ವ್ಯವಸ್ಥೆ ಮಾತ್ರ ಉಚ್ಚರಿಸುತ್ತಿದ್ದ ದಿನಮಾನಗಳು.

ಆಗ ಬಸವಣ್ಣ ಕೇವಲ ನಾಲ್ಕು ಕಾಲಿನ, ಒಂದು ಬಾಲವಿರುವ, ಎರಡು ಕೊಂಬಿರುವ ಮೂಕ ಪ್ರಾಣಿ. ಬಸವಣ್ಣ ಎಂಬ ಶಬ್ಧದ ಬಗೆಗೆ ಸಾಕಷ್ಟು ಜನರಿಗೆ ಮನವರಿಕೆ ಇರಲಿಲ್ಲ. ವಿರಕ್ತ ಮಠಗಳು ಅಲ್ಲೊಂದು ಇಲ್ಲೊಂದು ಶಿವಾನುಭವ ಗೋಷ್ಠಿಗಳನ್ನು ಮಾತ್ರ ನಡೆಸುತ್ತಿತ್ತು. ಅಲ್ಲೂ ಆ ಕೈಲಾಸ ಪರ್ವತದ ಶಿವ ಹಾಗೂ ಪಾರ್ವತಿ ಗಣಪತಿ ಷಣ್ಮುಖರುಗಳೆ ಪ್ರಮುಖವಾಗಿ ಮಿಂಚುತ್ತಿದ್ದರು. ಪೌರಾಣಿಕ ಅತಿರಂಜಿತ ಕತೆಗಳು ಜನತೆಯಲ್ಲಿ ಪುಳಕವನ್ನು ಉಂಟು ಮಾಡುತ್ತಿದ್ದವು. ಬಸವಣ್ಣನವರು ಸಹ ದೈವಾಂಶವಾಗಿ ಹುಟ್ಟಿದವರು ಎಂಬ ದಂತಕತೆಗಳು ಸಮಾಜವನ್ನು ಆಳುತ್ತಿದ್ದವು. ಆನ ಸಾಮಾನ್ಯರ ನಡುವೆ ವಚನಗಳು , ಶರಣರ ಪರಿಚಯ ಹರಿದಾಡದ ದಿನಗಳವು. ಇಂಥ ಕಗ್ಗತ್ತಲ ನಾಡಿನಲ್ಲಿ ಬೆಳಕಾಗಿ ಮೂಡಿ ಬಂದವರು ಲಿಂಗೈಕ್ಯ ಲಿಂಗಾನಂದ ಅಪ್ಪಗಳು.

ದಾವಣಗೆರೆ ಮೂಲದ ರತ್ನಮ್ಮ ಲಿಂಗಾನಂದ ಮಹಾಸ್ವಾಮಿಗಳ ಅಸ್ಖಲಿತವಾದ ವಚನಗಳಿಗೆ ಬೆಕ್ಕಸ ಬೆರಗಾದವರು. ವಚನ ಸಾಹಿತ್ಯಕ್ಕೆ ಮಾರು ಹೋದ ಮಹಾದೇವಿಯವರು ತಿರುಗಿ ನೋಡಲಿಲ್ಲ. ಅಸಲಿ ಸತ್ಯ ಅರ್ಥವಾದ ಮೇಲೆ ಬದುಕು ದಾಂಗುಟಿ ಇಟ್ಟು ಬೆಳೆಯಿತು. ನೋಡ ನೋಡುತ್ತಿದ್ದಂತೆ ನಾಡಿನ ಉದ್ದಗಲಕ್ಕೂ ತಿರುಗಾಡಿದರು.

ಬಸವ ತತ್ವ ಪ್ರಸಾರ ಯಾತ್ರೆಗಳು, ಪ್ರವಚನಗಳು ನಡೆದವು. ಇವುಗಳ ನಡುವೆ ಹಲವಾರು ಕೃತಿಗಳು ಹೊರಬಂದವು. ಆಗ ನಾಡಿನಲ್ಲಿ ವಚನಕಾರರ ಕುರಿತು ಚಟುವಟಿಕೆಗಳು ಆರಂಭವಾದವು. ಅಲ್ಲಿಯವರೆಗೂ ಸ್ಥಬ್ಧವಾಗಿದ್ದ ಬಸವ ಸಮುದ್ರ ಎಲ್ಲೆಡೆ ವ್ಯಾಪಿಸಲು ಶುರುವಾಯಿತು. ಆರಂಭದ ದಿನಗಳಲ್ಲಿ ಲಿಂಗಾನಂದ ಮಹಾಸ್ವಾಮಿಗಳ ನೇತೃತ್ವದಲ್ಲಿ ಪ್ರವಚನಕ್ಕೆ ಹೋದಾಗ ಅನುಭವಿಸಿದ ಯಾತನೆ, ಅವಮಾನ ಬಣ್ಣಿಸಲು ಸಾಧ್ಯವಿಲ್ಲ. ಹರ್ಡೆಕರ ಮಂಜಪ್ಪನಂಥವರನ್ನು ಅವಮಾನಿಸಿ ಅವರು ಹೋದ ಹೋದಲ್ಲೆಲ್ಲ ’ಸೂಳೆಯ ಮಗ ಬರುತ್ತಿದ್ದಾನೆ ಎಚ್ಚರಿಕೆ’ ಎಂಬ ಬ್ಯಾನರ್ ಕಟ್ಟಿದ ವಂಶಸ್ಥರು ಮಾತೆ ಮಹಾದೇವಿ ಹಾಗೂ ಲಿಂಗಾನಂದರಿಗೆ ಹಲವಾರು ಕಿರುಕುಳ ನೀಡಿದರು. ಕೂಡಲಸಂಗಮದಲ್ಲಿಯೇ ಪಂಚಾಚಾರ್ಯ ಜಗದ್ಗುರುಗಳು ಬೇಕಂತಲೆ ಶರಣ ಮೇಳದ ಸಂದರ್ಭದಲ್ಲಿ ಅಡ್ಡ ಪಲ್ಲಕ್ಕಿ ಮಹೋತ್ಸವವನ್ನು ಏರ್ಪಡಿಸಿದರು. ಆಗ ಶರಣ ಮೇಳಕ್ಕೆ ಬರುವವರಿಗೆ ಆದರದ ಸ್ವಾಗತ, ಓಂ ಶ್ರೀ ಗುರು ಬಸವಲಿಂಗಾಯ ನಮಃ ಎಂಬ ಬ್ಯಾನರ್ ಕಂಡು ಕೆಂಡಾಮಂಡಲವಾದವರು ಅದನ್ನು ಹರಿದು ಹಾಕಿದರು. ಕೆಲವರು ಬೇಕಂತಲೆ ಬಸವಣ್ಣನವರ ಭಾವ ಚಿತ್ರವನ್ನು ಕಾಲಲ್ಲಿ ಹೊಸಕಿ ಹಾಕಿ ಗದ್ದಲ ಎಬ್ಬಿಸಲು ಯತ್ನಿಸಿದರು. ಆಗಲೂ ಮಾತೆ ಮಹಾದೇವಿ ಲಿಂಗಾನಂದ ಮಹಾಸ್ವಾಮಿಗಳು ಆ ಬಗ್ಗೆ ದಿವ್ಯ ಮೌನ ತಾಳಿದರು. ಹೀನ ಕೆಲಸ ಮಾಡಿದ ಅವಿವೇಕಿಗಳು ಯಾರೆಂಬುದು ಜಗತ್ತಿಗೆ ಬರುಬರುತ್ತ ತಿಳಿಯಿತು.

ಛಲಬೇಕು ಶರಣಂಗೆ ಹಿಡಿದುದ ಬಿಡೆನೆಂಬ. ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವಾ” ಎನ್ನುವಂತೆ ತಾವು ನಂಬಿದ ಸಿದ್ಧಾಂತ ಮತ್ತು ತತ್ವಗಳ ಸಾರವನ್ನು ಜನ ಸಾಮಾನ್ಯರಿಗೆ ತಲುಪಿಸಲು ಮುಂದೆ ಮುಂದೆ ನಡೆದೆ ಹೋದರು. ಜನ ಸಾಮಾನ್ಯನಿಗೆ ಅರ್ಥವಾಗುವಂತೆ ವಚನಗಳನ್ನು ಅರುಹಿದರು. ಲಿಂಗಾಯತ ಪ್ರಜ್ಞೆ ಮೂಡಿಸಲು ಅಹರ್ನಿಶಿ ಶ್ರಮಿಸಿದರು. ಕೂಡಲಸಂಗಮ , ಉಳವಿ, ಬಸವಕಲ್ಯಾಣದಲ್ಲಿ ಯಾರೂ ಮರೆಯದ ಸ್ಮಾರಕಗಳನ್ನು ನಿರ್ಮಿಸಿ ಇತಿಹಾಸ ನಿರ್ಮಿಸಿದರು.

ಸತತವಾಗಿ ಶರಣ ಮೇಳಗಳನ್ನು ಸಂಘಟಿಸಿ, ಕಲ್ಯಾಣ ಪರ್ವಗಳನ್ನು ನಡೆಸಿ ಹಲವಾರು ಅಡೆ ತಡೆಗಳನ್ನು ಗೆದ್ದು ಬಂದರು. ಬದುಕಿನಲ್ಲಿ ಬರುವ ಕಷ್ಟ ಸುಖಗಳನ್ನು ’ ಎನ್ನ ವಾಮ ಕ್ಷೇಮ ನಿಮ್ಮದಯ್ಯಾ, ಎನ್ನ ಹಾನಿ ವೃದ್ಧಿ ನಿಮ್ಮದಯ್ಯಾ, ಎನ್ನ ಮಾನಾಪಮಾನವೂ ನಿಮ್ಮದಯ್ಯ’ ಬಳ್ಳಿಗೆ ಕಾಯಿ ದಿಮ್ಮಿತ್ತೆ ಕೂಡಲಸಂಗಮದೇವಾ ಎಂಬ ಭಾವವನ್ನು ಇಂಬಿಟ್ಟುಕೊಂಡು ನಡೆದು ಹೋದರು. ಆನೆ ನಡೆದುದೆ ದಾರಿ ಆಯಿತು ಎಂದೆನ್ನುವಂತೆ ಮಾತಾಜಿ ನಡೆದುದೆ ದಾರಿಯಾಯಿತು. ಅದು ಬರು ಬರುತ ಸಕಲಜೀವಾತ್ಮರಿಗೆ ಲೇಸ ಬಯಸುವ ಮಾರ್ಗವೂ ಆಯಿತು.

ಲಿಂಗಾಯತರೊಳಗೆ ಸಾವಕಾಶವಾಗಿ ತಮಂಧ ಕಳೆದು ಬೆಳಕು ತುಂಬುವ ಹೊತ್ತಿಗೆ ಮಾತಾಜಿಯ ದೇಹ ಒಳಗೊಳಗೆ ಕುಸಿಯುತ್ತ ಸಾಗಿತು. ಆದರೆ ಅವರೊಳಗಿನ ಅದಮ್ಯ ಚೈತನ್ಯ ಮಾತ್ರ ಬತ್ತದ ಉತ್ಸಾಹ ಪ್ರಕಟಿಸುತ್ತಿತ್ತು. ಇದೆ ವರ್ಷದ ಜನೆವರೆ ತಿಂಗಳ ಶರಣ ಮೇಳದಲ್ಲಿ ಮಾತಾಜಿ ಭಾಗವಹಿಸುವುದು ಸಾಧ್ಯವಾಗಲಿಕ್ಕಿಲ್ಲ ಎನ್ನುವ ಹೊತ್ತಿಗೆ ಮತ್ತೆ ಮೇಳದಲ್ಲಿ ಕಾಣಿಸಿಕೊಂಡು ಎಲ್ಲರಲ್ಲಿ ಅಚ್ಚರಿ ಮತ್ತು ಆಶಾವಾದವನ್ನು ಹುಟ್ಟು ಹಾಕಿದರು.

ಕರ್ನಾಟಕದ ತುಂಬೆಲ್ಲ ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಕಿನ್ನರಿಯ ಬೊಮ್ಮಯ್ಯ, ಮಡಿವಾಳ ಮಾಚಿತಂದೆ , ಅಕ್ಕನಾಗಮ್ಮ ಮುಂತಾದ ಶರಣ ಶರಣೆಯ ಭಾವ ಚಿತ್ರಗಳು ನಮಗೆ ನೋಡುವುದಕ್ಕೆ ಹಾಗೂ ಅವನ್ನು ನಮ್ಮ ಮನೆಗೆ ತರಲು ಸಾಧ್ಯವಾಗಿದ್ದರೆ ಅವುಗಳ ಹಿಂದೆ ಇವರಿಬ್ಬರ ಪರಿಶ್ರಮ , ಜಾಣ್ಮೆ ಹಾಗೂ ಕಕ್ಕುಲಾತಿಗಳಿವೆ. ಬೀದರ ಜಿಲ್ಲೆಯ ತುಂಬೆಲ್ಲ ಶರಣರ ಭಾವ ಚಿತ್ರಗಳು ರಾರಾಜಿಸುತ್ತಿದ್ದರೆ ಅದರ ಬೆನ್ನ ಹಿಂದೆ ಶಕ್ತಿಯಾಗಿ ಮಾತಾಜಿ ಇದ್ದಾರೆ.

ಬಹುಶಃ ಮಾತಾಜಿ ಬಸವ ತತ್ವವನ್ನು ಮರೆತು ಬರೀ ಕಾದಂಬರಿಗಳನ್ನು ಬರೆಯುತ್ತ ಕುಳಿತ್ತಿದ್ದರೆ ಅವರೊಬ್ಬ ದೊಡ್ಡ ವಿದ್ಮಾಸರಾಗಿ , ಸಾಹಿತಿಗಳಾಗಿ ಜನ ಗುರುತಿಸುತ್ತಿದ್ದರು. ಅವರು ಹಿಂದೆ ಬರೆದ ಹೆಪ್ಪಿಟ್ಟ ಹಾಲು ಎಂಬ ಕೃತಿ ಮನೋಜ್ಞವಾಗಿ ಮೂಡಿ ಬಂದಿದೆ. ಮನಶಾಸ್ತ್ರದ ಹಿನ್ನೆಲೆಯಲ್ಲಿ ರಚಿತವಾದ ಕೃತಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದುಕೊಂಡಿತು. ತರಂಗಿಣಿ ಎಂಬ ಅಕ್ಕಮಹಾದೇವಿಯ ಕುರಿತ ಕೃತಿ ಮಹಾಮಾತೆ ಅಕ್ಕಮಹಾದೇವಿ ತಾಯಿಯ ಜೀವನ ವೃತ್ತಾಂತವನ್ನು ನಮ್ಮ ಕಣ್ಣ ಮುಂದೆ ಕಟೆದು ನಿಲ್ಲಿಸಿತು. ಇದಲ್ಲದೆ ಕಲ್ಯಾಣ ಕಿರಣದಲ್ಲಿ ಸತತವಾಗಿ ವಚನಗಳ ಬೆಳಕು ಬಹುತೇಕ ಜನಗಳ ಬಾಳ ಬುತ್ತಿಯಾಗಿ ಬೆಳಗಿಸಿದ್ದಾರೆ.

ಅವರ ’ಲಿಂಗದೇವ ಲೀಲಾ ವಿಲಾಸ’ ಎಂಬ ಕೃತಿ ಮಾತ್ರ ಎಲ್ಲರ ಟೀಕೆ ಟಿಪ್ಪಣಿಗಳಿಗೆ ಗುರಿಯಾದದ್ದು ನಮ್ಮೆಲ್ಲರ ಕಣ್ಣ ಮುಂದಿನ ಸತ್ಯವಾಗಿದೆ. ಇವೆಲ್ಲವುಗಳ ನಡೆವೆಯೂ ಮಾತೆ ಮಹಾದೇವಿ ತತ್ವದ ಪ್ರಶ್ನೆ ಬಂದಾಗ ಯಾರೊಂದಿಗೂ ಮೈತ್ರಿ ಮಾಡಿಕೊಂಡು ತತ್ವವನ್ನು ಬಲಿಕೊಡಲಿಲ್ಲ. ಒಳ ಸಂಚುಗಳನ್ನು ರೂಪಿಸಿ ಶರಣರ ಆಶಯಗಳಿಗೆ ಕೊಡಲಿಪೆಟ್ಟು ಕೊಡಲಿಲ್ಲ. ತಮ್ಮ ಬದುಕಿನುದ್ದಕ್ಕೂ ಬಸವಣ್ಣನವರನ್ನು ಹಾಸಿಕೊಂಡು ಹೊದ್ದುಕೊಂಡು ಬಸವ ಭಾವವನ್ನು ಹೊತ್ತು ಮುನ್ನಡೆದು ಬಿಟ್ಟರು.ನೂರಾರು ಜನ ಅನಾಥ ಮಕ್ಕಳನ್ನು ಸಾಕಿ ಸಲಹಿ ಅವರಲ್ಲಿ ವಿವೇಕವನ್ನು ತುಂಬಿ ಸಮಾಜಕ್ಕೆ ಅವರೆಲ್ಲರನ್ನು ಆಸ್ತಿಯಾಗಿ ಮಾಡಿದರು. ಇಂದಿನ ನಿಷ್ಕಲ ಮಂಟಪದ ನಿಜಗುಣ ಸ್ವಾಮಿಗಳು, ಮಾತೆ ವಾಗ್ದೇವಿ , ಕುಮುದಾ ತಾಯಿ,ಅಕ್ಕ ಅನ್ನಪೂರ್ಣ, ಚೆನ್ನಬಸವಾನಂದ ಸ್ವಾಮೀಜಿ, ಬಸವಕಲ್ಯಾಣದ ಪ್ರಭುದೇವ ಸ್ವಾಮಿ, ಮಾತೆ ಸತ್ಯಾನಂದ ತಾಯಿ, ವಿ.ಸಿದ್ಧರಾಮಣ್ಣ, ಜಗದ್ಗುರು ಡಾ. ಗಂಗಾಂಬಿಕೆ ಮೊದಲಾದವರೆಲ್ಲ ಲಿಂಗೈಕ್ಯ ಲಿಂಗಾನಂದ ಅಪ್ಪಗಳ ಬಸವಾನುಭವ ತತ್ವಗಳಲ್ಲಿ ಪರಿಪಾಕಗೊಂಡವರು. ಇವರೆಲ್ಲ ಈಗ ಸಾವಿರ ಸಾವಿರ ಸಂಖ್ಯೆಯ ಬಸವ ಬಳ್ಳಿಗಳನ್ನು ಸಿದ್ಧಗೊಳಿಸಿದ್ದಾರೆ. ನೂರಾರು ಜನ ಸಾಧಕರು ತಯಾರಾಗಿದ್ದಾರೆ.

ಅಪ್ಪಿದೇವಯ್ಯ ಎಂಬ ಶರಣನೊಬ್ಬ ಒಂದು ಕಡೆ

“ರೋಷ ಹರುಷವ ಕೆಡಿಸದ ಲಿಂಗವ ಪೂಜಿಸೆ,

ತಾಮಸ ಭ್ರಮೆಯಳಿಯದ ಜಂಗಮಕ್ಕೆ ದಾಸೋಹವ ಮಾಡೆ”

ಎಂಬಂತೆ ಮಾತಾಜಿಯವರ ಕುರಿತಾಗಿ ಸಾಕಷ್ಟು ಟೀಕೆ ಟಿಪ್ಪಣಿಗಳು ಬರೆದ ನನ್ನನ್ನೆ ಮತ್ತೆ ಮತ್ತೆ ಕೂಡಲಸಂಗಮದ ’ಶರಣ ಮೇಳಕ್ಕೆ’ , ಬಸವ ಕಲ್ಯಾಣದ ’ಕಲ್ಯಾಣ ಪರ್ವ’ಕ್ಕೆ , ದೆಹಲಿಯ ’ಲಿಂಗಾಯತ ರ್‍ಯಾಲಿ’ಗೆ ಆಹ್ವಾನಿಸಿದರು. ತಮ್ಮ ಕಲ್ಯಾಣ ಕಿರಣ ಪತ್ರಿಕೆಗೆ ಲೇಖನವನ್ನು ಬರೆಯುವಂತೆ ತಿಳಿಸಿದರು. ಆಗಾಗ ಲಿಂಗಾಯತ ಧರ್ಮದ ಹೋರಾಟದ ಕುರಿತು ಬರೆದ ನನ್ನ ಗಟ್ಟಿ ನಿಲುವುಗಳನ್ನು ಬೆಂಬಲಿಸಿ ಮಾತನಾಡಿದರು. ಈ ಹಿಂದೆ ’ಲಂಕೇಶ್ ಪತ್ರಿಕೆ’ ಮತ್ತು ’ಪ್ರಪಂಚ’ ಹಾಗೂ ’ಅಗ್ನಿ ಅಂಕುರ’ ಪತ್ರಿಕೆಯಲ್ಲಿ ಅವರನ್ನು ಕುರಿತು ಮೂದಲಿಸಿ ಬರೆಯಲಾಗಿಯೂ ನಮ್ಮನ್ನು ನಿರ್ಲಕ್ಷಿಸಿ ಮಾತನಾಡದಿರುವುದು ಅವರ ಔದಾರ್ಯವಲ್ಲದೆ ಇನ್ನೇನು ?ಮೂರು ವರ್ಷಗಳ ಹಿಂದೆ ನಾನು ಭಾಗವಹಿಸಿದ ಪ್ರಥಮ ’ಶರಣ ಮೇಳ’ದಲ್ಲಿ ಮಾತೆ ಮಹಾದೇವಿಯವರ ಲಿಂಗದೇವವನ್ನು ನಾನು ಒಪ್ಪಲಾರೆ ಎಂದಾಗಲೂ ಅದಕ್ಕೆ ಚಕಾರ ಶಬ್ಧವೆತ್ತದಿರುವುದು ಅವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಷ್ಟು ಮಹತ್ವ ನೀಡುತ್ತಿದ್ದರು ಎಂಬುದು ಗೊತ್ತಾಗುತ್ತದೆ.

ಕುರಿವಿಂಡು ಕಬ್ಬಿನ ಉಲಿವ ತೋಟವ ಹೊಕ್ಕು

ತೆರನನರಿಯದೆ ತನಿರಸದ

ಹೊರಣ ಎಲೆಯನೆ ಮೆಲಿದವು!

ನಿಮ್ಮನರಿವ ಮದಕರಿಯಲ್ಲದೆ

ಕುರಿ ಬಲ್ಲುದೆ ಕೂಡಲ ಸಂಗಮದೇವಾ

ಎಂಬ ವಚನದಂತೆ ಕುರಿವಿಂಡಾಗಿ ವಚನ ಸಾಹಿತ್ಯವನ್ನು ಓದಲಿಲ್ಲ. ಮದಕರಿಯಂತೆ ವಚನ ಸಾಹಿತ್ಯವೆಂಬ ತೋಟವನ್ನು ಹೊಕ್ಕು ಅಲ್ಲಿಯ ತನಿರಸವನ್ನು ತಾವೊಬ್ಬರೆ ಸವಿಯದೆ, ಅದರ ಸವಿ- ಸೊಗಬು- ಬನಿ ಅರಿತುಕೊಂಡು ಸಹಸ್ರಾರು ಜನರಿಗೆ ಉಣಬಡಿಸಿ ಆನೆಯಂತೆಯೆ ನಡೆದು ಹೋದರು. ಸತ್ಯದ ನಿಲವ ಅರಿತು ಮನ ಮೆಚ್ಚಿ ನಡಕೊಂಡರು.

ಒಬ್ಬ ವ್ಯಕ್ತಿ ಮನಸ್ಸು ಮಾಡಿದರೆ ಒಂದು ವಿಶ್ವವಿದ್ಯಾಲಯ ಮಾಡಿದಷ್ಟು ಕೆಲಸವನ್ನು ಮಾಡಬಹುದು ಎಂಬುದನ್ನು ನಮಗೆ ತೋರಿಸಿ ಕೊಟ್ಟರು. ಬಸವಮಾರ್ಗವೆಂಬುದೊಂದು ಹೆದ್ದಾರಿ. ಈ ದಾರಿಯಲ್ಲಿ ಯಾರಾದರೂ ಹೋಗಬಹುದು. ಬಸವರಾಜಮಾರ್ಗವೆಂಬ ಹೆದ್ದಾರಿಗೆ ಅಡರಿಕೊಂಡ ಬಾವುಗಗಳು ಯಾವು ? ಎಂಬುದನ್ನು ಜನ ಸಾಮಾನ್ಯರಿಗೆ ಪರಿಚಯಿಸಿ ನಮ್ಮೊಳಗೆ ಒಬ್ಬರಾಗಿ ಕರಗಿ ಹೋದರು. ಉರಿ ಉಂಡ ಕರ್ಪುರದ ಸವಿ ಬಲ್ಲವನೆ ಬಲ್ಲ. ’ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು.

ಸಾವೆಂಬುದು ಸಯವಲ್ಲ.

ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ

ಆ ಲಿಂಗದಲ್ಲಿಯಲ್ಲದೆ ಮತ್ತೊಂದೆಡೆಯಿಲ್ಲ.

ಎಂಬಂತೆ ಜೀವನ ಪಥವನ್ನು ಸರಿಯಾಗಿ ಗ್ರಹಿಸಿದ್ದ ಮಾತೆ ಮಹಾದೇವಿ ಅರಿತು ಸಾವನ್ನು ಗೆದ್ದಿದ್ದಾರೆ. ಸಹಸ್ರಾರು ಭಾವಗಳಲ್ಲಿ ಜೀವವಾಗಿ ಸೇರಿಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...