Homeಅಂತರಾಷ್ಟ್ರೀಯಪಾಲ್ ಥಾಮಸ್ ಆಂಡರ್ಸನ್ - ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಪಾಲ್ ಥಾಮಸ್ ಆಂಡರ್ಸನ್ – ಸಿನಿಯಾನದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

- Advertisement -
- Advertisement -

| ರಾಜಶೇಖರ್ ಅಕ್ಕಿ |
ಇವನಿಗೆ ಏಳು ಅಕ್ಕಂದಿರಿದ್ದಾರೆ; ಅವರೆಲ್ಲರ ದಾದಾಗಿರಿಯಲ್ಲೇ ತನ್ನ ಬಾಲ್ಯವನ್ನು ಕಳೆದವನು. ಈಗ ತನ್ನದೊಂದು ಬಿಸಿನೆಸ್ ಶುರುಮಾಡಿದ್ದಾನೆ. ಏಕಾಂಗಿತನದಿಂದ, ಮತ್ತಿತರ ಕ್ಷೋಭೆಗಳಿಂದ ಬಳಲುತ್ತಿರುವ ಈತ ಸೆಕ್ಸ್ ಟಾಕ್ ಸೌಲಭ್ಯ ಒದಗಿಸುವ ಒಂದು ಸರ್ವಿಸ್‍ಗೆ ಕರೆ ಮಾಡುತ್ತಾನೆ. ಅವರಿಂದ ಬ್ಲ್ಯಾಕ್‍ಮೇಲ್‍ಗೆ ಒಳಗಾಗುತ್ತಾನೆ.

ಇವನು ಎರಡನೇ ಮಹಾಯುದ್ಧದಲ್ಲಿ ಸೇವೆ ಸಲ್ಲಿಸಿದವ, ಕುಡಿಯುತ್ತಾನೆ, ಯಾವುದೇ ನೈತಿಕತೆಯ ಒತ್ತಡವಿಲ್ಲ. ತನ್ನದೇ ಸಾರಾಯಿ ತಯಾರಿಸುತ್ತಾನೆ. ಈತ ಒಂದು ಧಾರ್ಮಿಕ ಚಳವಳಿಯನ್ನು ನಡೆಸುತ್ತಿರುವ ವ್ಯಕ್ತಿ, ದಿ ಮಾಸ್ಟರ್‍ನೊಂದಿಗೆ ಸೇರಿಕೊಳ್ಳುತ್ತಾನೆ. ದಿ ಮಾಸ್ಟರ್‍ನ ಅಸಂಬದ್ಧ ಧಾರ್ಮಿಕ ಚಳವಳಿ, ಇವರಿಬ್ಬರ ಸಂಬಂಧ.

ಈತ 19ನೇ ಶತಮಾನದ ಅಂತ್ಯದಲ್ಲಿ ಅಮೆರಿಕದಲ್ಲಿ ತೈಲ ನಿಕ್ಷೇಪಗಳನ್ನು ಹುಡುಕಿ ತನ್ನದೇ ಆದ ಸಾಮ್ರಾಜ್ಯ ಕಟ್ಟಲು ಹೊರಟವ. ಸಾಮ್ರಾಜ್ಯ ಕಟ್ಟುವಲ್ಲಿ ಯಶಸ್ವಿಯೂ ಆಗುತ್ತಾನೆ. ಅವನ ನೈತಿಕತೆ ಏನು?

ಈತ ಒಂದು ಹೊಟೇಲ್‍ನಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡುತ್ತಿರುವ ಹುಡುಗ. ಒಬ್ಬ ನೀಲಿ ಚಿತ್ರಗಳ ನಿರ್ದೇಶಕ ಸಂಪರ್ಕಕ್ಕೆ ಬರುತ್ತಾನೆ. ಈ ನಿರ್ದೇಶಕ ಈ ಹುಡುಗನನ್ನು ನೀಲಿಚಿತ್ರಗಳ ಸ್ಟಾರ್ ಆಗುವಂತೆ ಮಾಡುತ್ತಾನೆ. ಇವನಿಗೆ ತಾನು ನಿಜವಾದ ಸ್ಟಾರ್ ಅಲ್ಲ ಎಂದು ಗೊತ್ತಿಲ್ಲ. ಹಿಂಸೆ, ಮಾದಕವಸ್ತು, ನಿರಾಶೆ, ಸೋಲುಗಳ ಪಯಣಕ್ಕೆ ಕಾಲಿಡುತ್ತಾನೆ ಈ ಸ್ಟಾರ್.

ಈತ 20ನೇ ಶತಮಾನದ ಪ್ರಾರಂಭದ ಲಂಡನ್ನಿನ ಖ್ಯಾತ ವಿನ್ಯಾಸಕಾರ. ಯಶಸ್ಸಿನ ತುತ್ತುಂಗದಲ್ಲಿರುವ ಈತ ತನ್ನದೇ ಆತ ನಿಯಮಗಳನ್ನು ರಚಿಸಿಕೊಂಡು, ಆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಜೀವಿಸುತ್ತಾನೆ.

ಕೆಲವರು ಮನುಷ್ಯರ ಆಳ, ಸಾರ್ಥಕತೆಯನ್ನು ತಮ್ಮ ಸಿನೆಮಾಗಳಲ್ಲಿ ಕೆದಕಿದರೆ ಕೆಲವರು ನಮ್ಮ ವಿಶ್ವ, ದೇಶಕಾಲಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಇನ್ನೂ ಕೆಲವರು ಮನುಷ್ಯನ ಕ್ರೌರ್ಯ, ರಾಜಕೀಯ, ಆರ್ಥಿಕ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ, ಜನರ ಜೀವನ ಹೇಗೆ ಇವೆಲ್ಲವುಗಳಿಂದ ಪರಿಣಾಮವಾಗುತ್ತೆ ಎನ್ನುವುದನ್ನು ತಮ್ಮ ಚಿತ್ರಗಳಲ್ಲಿ ಪರಿಶೀಲಿಸುತ್ತಾರೆ. ಇನ್ನೂ ಕೆಲವರಿಗೆ ವೀಕ್ಷಕರ ಮನರಂಜನೆಯೇ ಮುಖ್ಯ. ಪಾಲ್ ಥಾಮಸ್ ಆ್ಯಂಡರ್ಸನ್ ನಮ್ಮ ಸಮಾಜದ, ಮನುಷ್ಯರ ವಿಕೃತಿಗಳನ್ನು ಕೆದಕುತ್ತಾರೆ. ಸಮಾಜ ತಾನು ಮಾಡಿಕೊಂಡಿರುವ, ಅವುಗಳ ಉಲ್ಲಂಘನೆಯಾದಲ್ಲಿ ಉಲ್ಲಂಘಿಸಿದ ವ್ಯಕ್ತಿಯು ಅಪರಾಧಿಯೆಂದು ಪರಿಗಣಿಸಲಾಗುತ್ತದೆ ಅಥವಾ ಹುಚ್ಚನೆಂದು ಕರೆಯಲಾಗುತ್ತದೆ. ಈ ಅಪರಾಧಿಗಳ, ಹುಚ್ಚರ ಕಥೆಗಳನ್ನೂ ಯಾರಾದರೂ ಹೇಳಬೇಕಲ್ಲವೇ. ಅವರೂ ನಮ್ಮ ಸಮಾಜದ ಅವಿಭಾಜ್ಯ ಅಂಗವಲ್ಲವೇ?

ಪಾಲ್ ಥಾಮಸ್ ಅ್ಯಂಡರ್ಸನ್ ಹುಟ್ಟಿದ್ದು 1970ರಲ್ಲಿ ಅಮೆರಿಕದ ಲಾಸ್ ಅಂಜೆಲಿಸ್‍ನಲ್ಲಿ. ಇವರ ತಂದೆ ಪಾಲ್‍ಗೆ ಚಿಕ್ಕವನಾಗಿದ್ದಾಗಲೇ ಒಂದು ಕ್ಯಾಮೆರಾ ತಂದುಕೊಟ್ಟರು. ಪಾಲ್ ತನ್ನ ಎಂಟನೇ ವಯಸ್ಸಿನಲ್ಲಿ ತನ್ನ ಮೊದಲ ಸಿನೆಮಾ ನಿರ್ದೇಶಿಸಿದ. ಸಿನೆಮಾ ಧ್ಯಾನದಲ್ಲೇ ಬೆಳೆದ ಪಾಲ್‍ಗೆ ಚಿತ್ರನಿರ್ದೇಶಕ ಆಗುವುದನ್ನು ಬಿಟ್ಟರೆ ಬೇರಾವ ಆಯ್ಕೆಯೂ ಇದ್ದಿಲ್ಲ. ಹಲವಾರು ಶಾಲೆಗಳಲ್ಲಿ ಓದಿದ ಪಾಲ್ ನ್ಯೂಯಾರ್ಕ್‍ನ ಒಂದು ಫಿಲ್ಮ್ ಸ್ಕೂಲಿಗೆ ಸೇರಿ, ಎರಡೇ ದಿನಗಳಲ್ಲಿ ಅಲ್ಲಿಂದ ಹೊರಬಿದ್ದು, ತನ್ನ ಶುಲ್ಕವನ್ನು ಮರುಪಡೆದು ಕಾಫಿ ಆ್ಯಂಡ್ ಸಿಗಾರೇಟ್ಸ್ ಎನ್ನುವ ಕಿರುಚಿತ್ರವನ್ನು ನಿರ್ಮಿಸಿದ. 1996ರಲ್ಲಿ ತನ್ನ ಕಿರುಚಿತ್ರವನ್ನೇ ಇಟ್ಟುಕೊಂಡು ಹಾರ್ಡ್ ಏಯ್ಟ್ ಎನ್ನುವ ತನ್ನ ಮೊದಲ ಪೂರ್ಣಪ್ರಮಾಣದ ಚಿತ್ರವನ್ನು ನಿರ್ದೇಶಿಸಿದ ಪಾಲ್ ಮೊದಲ ಚಿತ್ರದಲ್ಲೇ ತಾನೊಬ್ಬ ಪ್ರತಿಭಾವಂತ ಎನ್ನುವ ಝಲಕ್ ಈ ಸಿನೆಮಾದಲ್ಲಿ ತೋರಿಸಿದ.

ಅಂಕಣದ ಪ್ರಾರಂಭದಲ್ಲಿದ್ದದ್ದು ಪಾಲ್ ಆ್ಯಂಡರ್ಸನ್ ಅವರ ಚಿತ್ರಗಳಲ್ಲಿಯ ಮುಖ್ಯಪಾತ್ರಗಳ ಸಣ್ಣ ಪರಿಚಯ. 1997ರಲ್ಲಿ ಬೂಗೀ ನೈಟ್ಸ್ ಎನ್ನುವ ಚಿತ್ರ 70ರ ದಶಕದಲ್ಲಿ ಪಾರ್ನ್ ಸ್ಟಾರ್ ಆಗಿದ್ದ ಜಾನ್ ಹೋಮ್ಸ್ ಅವರ ಜೀವನವನ್ನು ಆಧರಿಸಿತ್ತು. ಪಾರ್ನ್ ಸಿನೆಮಾಗಳ ಜಗತ್ತಿನ ಬಗ್ಗೆ ಯಾವುದೇ ತೀರ್ಪನ್ನು ನೀಡದೇ, ಹಿಂಸೆ, ಮಾದಕವಸ್ತುಗಳ ಬಳಕೆಯನ್ನು ವೈಭವೀಕರಿಸದೇ , ಆ ಜಗತ್ತನ್ನು ಇದ್ದ ಹಾಗೇ ಚಿತ್ರಿಸಿ, ಕ್ಲಿಷ್ಟ ಪಾತ್ರಗಳನ್ನು ಸರಳವಾಗಿ ಚಿತ್ರಿಸಲಾದ ಬೂಗೀ ನೈಟ್ಸ್‍ನಿಂದ ಪಾಲ್ ಹಾಲಿವುಡ್‍ನಲ್ಲಿ ಪ್ರಮುಖ ನಿರ್ದೇಶಕರಲ್ಲೊಬ್ಬರಾದರು. ಈ ಚಿತ್ರ ನಿರ್ಮಾಪಕರಿಗೆ ಎಷ್ಟು ಇಷ್ಟವಾಯಿತೆಂದರೆ, ಮುಂದಿನ ಸಿನೆಮಾ ನಿನಗೆ ತೋಚಿದಂತೇ ಮಾಡು, ನಮ್ಮ ಯಾವ ಹಸ್ತಕ್ಷೇಪವೂ ಇರುವುದಿಲ್ಲ ಎಂದು ಚಿತ್ರದ ನಿರ್ಮಾಪಕರು ಪಾಲ್‍ಗೆ ಹೇಳಿಬಿಟ್ಟರು. ಅದರ ಪರಿಣಾಮವಾಗಿ ಬಂದಿದ್ದು ಮಾಗ್ನೋಲಿಯಾ ಎನ್ನುವ ಅದ್ಭುತ ಚಿತ್ರ. ಅನೇಕ ಮುಖ್ಯಪಾತ್ರಗಳು, ಕಥೆಗಳನ್ನು ಹೊಂದಿದ ಈ ಚಿತ್ರ ಅಮೆರಿಕದ ಕೆಟ್ಟುಹೋಗುತ್ತಿರುವ ಕುಟುಂಬ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿದರು. ಮುಖ್ಯವಾಗಿ ಪಾಲಕರು ಮತ್ತು ಮಕ್ಕಳ ನಡುವಿನ ಸಂಬಂಧ, ಸಂಬಂಧದ ಕೊರತೆ, ತಮ್ಮ ನಿರೀಕ್ಷೆಗಳನ್ನು ಮಕ್ಕಳಲ್ಲಿ ಬಲವಂತವಾಗಿ ಹುಡುಕುವುದು, ತಮ್ಮ ಸಮಸ್ಯೆಗಳಿಂದ ಮಕ್ಕಳ ಮೇಲಾಗುವ ಪರಿಣಾಮಗಳನ್ನು ಈ ಚಿತ್ರದ ನಾಲ್ಕೂ ಕಥೆಗಳು ಹುಡುಕುತ್ತವೆ. ಮೂರು ಗಂಟೆ ಎಂಟು ನಿಮಿಷದ ಈ ಚಿತ್ರ ಅಂತ್ಯವಾಗುವುದು ಬೈಬಲ್‍ನಲ್ಲಿ ಬರುವ ಒಂದು ಕಥಾನಕದೊಂದಿಗೆ. ಇದರ ನಂತರ ಆ್ಯಡಮ್ ಸ್ಯಾಂಡ್ಲರ್‍ನೊಂದಿಗೆ ಪಂಚ್ ಡ್ರಂಕ್ ಲವ್ ಎನ್ನುವ ಕಾಮೆಡಿ ನಿರ್ದೇಶಿಸಿದ ಪಾಲ್, ತಮ್ಮ ಜೀವನದ ಅತೀ ಮಹತ್ವದ ಸಿನೆಮಾ ‘ದೇರ್ ವಿಲ್ ಬಿ ಬ್ಲಡ್’ಗೆ ಕೈ ಹಾಕಿದರು.

ದೇರ್ ವಿಲ್ ಬಿ ಬ್ಲಡ್ ಚಿತ್ರವು ಅಪ್ಟನ್ ಸಿನ್‍ಕ್ಲೇರ್ ಎನ್ನುವ ಅಮೆರಿಕದ ಬರಹಗಾರ 1926ರಲ್ಲಿ ಬರೆದ ‘ಆಯಿಲ್’ ಎನ್ನುವ ಕಾದಂಬರಿಯನ್ನಾಧರಿಸಿ ಮಾಡಿದ ಚಿತ್ರ ಎಂದು ಹೇಳಲಾಗಿತ್ತು. ಚಿತ್ರದಿಂದ ಪ್ರಭಾವಿತನಾದ ನಾನು ಆ ಕಾದಂಬರಿಯನ್ನು ಕೊಂಡು ಓದಿದಾಗ ಕಾಡಿದ್ದು ಒಂದು ರೀತಿಯ ನಿರಾಸೆ. ಮೊದಲ ಕೆಲವು ಪುಟಗಳನ್ನಷ್ಟೇ ತನ್ನ ಚಿತ್ರಕ್ಕೆ ಬಳಸಿಕೊಂಡ ಪಾಲ್ ಮುಂದಿನ ಎಲ್ಲವನ್ನೂ ಬದಲಿಸಿದ್ದಾರೆ. ಪಾತ್ರಗಳ ಮೂಲ ವ್ಯಕ್ತಿತ್ವದಿಂದ ಸಂಪೂರ್ಣ ಕಥೆಯನ್ನು ಇನ್ನೊಂದು ಸಲ ಬರೆದರು ಪಾಲ್. 19ನೇ ಶತಮಾನದ ಅಂತ್ಯದಲ್ಲಿ ಆರಂಭವಾಗುವ ಇದರ ಕಥೆ, ನಾಯಕ ಅಮೆರಿಕದ ಅತಿ ದೊಡ್ಡ ತೈಲ ಸಾಮ್ರಾಜ್ಯವನ್ನು ಕಟ್ಟಿದ್ದನ್ನು ತೋರಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ಕಥಾನಾಯಕನ ವ್ಯಕ್ತಿತ್ವ ಪ್ರೇಕ್ಷಕರ ದಂಗುಬಡಿಸಿತು. ಈ ಚಿತ್ರದಲ್ಲಿಯ ಯಾವ ಪಾತ್ರಗಳು ಬದಲಾಗುವುದಿಲ್ಲ, ಮಹಿಳಾಪಾತ್ರಗಳೇ ಇಲ್ಲ, ನಿಷ್ಕರುಣೆಯ, ಪಟ್ಟುಬಿಡದ ಪಾತ್ರಗಳು. ಇಂತಹ ಕ್ಲಿಷ್ಟ ಪಾತ್ರಗಳಿದ್ದರೂ ಕಥೆಯನ್ನು ಸರಳವಾಗಿಯೇ ಹೇಳಲಾಗಿದೆ. ಕಥಾನಾಯಕನ ಜೀವನವನ್ನು ನೋಡಿ ದುಃಖಿಸಬೇಕೇ, ಸಂತೋಷಪಡಬೇಕೇ ತಿಳಿಯುವುದಿಲ್ಲ. ಇಂಥವರು ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಮೂಡಿದರೆ ಆಶ್ಚರ್ಯವಲ್ಲ. ವಿಶ್ವದ ಅತ್ಯಂತ ಶ್ರೇಷ್ಠ ನಟರಲ್ಲಿ ಒಬ್ಬರಾದ ಡ್ಯಾನಿಯಲ್ ಡೇ ಲೆವಿಸ್ ಅವರನ್ನು ನಾಯಕನ ಪಾತ್ರವನ್ನು ಮಾಡಲು ಸಂತೋಷದಿಂದಲೇ ಒಪ್ಪಿಕೊಂಡರು. (ಅತ್ಯಂತ ಚ್ಯೂಸಿ ನಟನಾದ ಡ್ಯಾನಿಯಲ್, ಮೂರು ಶ್ರೇಷ್ಠ ನಟ ಆಸ್ಕರ್ ಪ್ರಶಸ್ತಿ ಗೆದ್ದ ಏಕೈಕ ವ್ಯಕ್ತಿ). ಈ ಪಾತ್ರದ ತಯಾರಿಗೆ ಒಂದು ವರ್ಷ ತೆಗೆದುಕೊಂಡ ಡ್ಯಾನಿಯಲ್, ತಮ್ಮ ಜೀವನದ ಕೊನೆಯ ಚಿತ್ರವನ್ನೂ ಪಾಲ್ ಜೊತೆಗೇ ಮಾಡಿ ಅಭಿನಯಕ್ಕೆ ವಿದಾಯ ಹೇಳಿದ್ದಾರೆ.

ದೇರ್ ವಿಲ್ ಬಿ ಬ್ಲಡ್ ನಂತರ ಇನ್ಹರಂಟ್ ವಾೈಸ್ ಮತ್ತು ಮಾಸ್ಟರ್ ಎನ್ನುವ ಚಿತ್ರಗಳಲ್ಲೂ ನಮ್ಮ ನಾಗರಿಕ ಸಮಾಜವು ಒಪ್ಪದ ಪಾತ್ರಗಳನ್ನೇ ವಿಶ್ಲೇಷಿಸಿದ ಪಾಲ್ 2017ರಲ್ಲಿ ಫ್ಯಾಂಟಮ್ ಥ್ರೆಡ್ ಎನ್ನುವ ಚಿತ್ರವನ್ನು ನಿರ್ದೇಶಿಸಿದರು. ಲಂಡನ್ನಿನ 20ನೇ ಶತಮಾನದ ಪ್ರಾರಂಭ, ಅಲ್ಲಿಯ ಖ್ಯಾತ ವಿನ್ಯಾಸಕಾರ, ತನ್ನ ಕಟ್ಟುನಿಟ್ಟಿನ ಜೀವನ ನಡೆಸುತ್ತಿದ್ದಾಗ ಅವನ ಜೀವನದಲ್ಲಿ, ಮನೆಯಲ್ಲಿ ಕಾಲಿಡುವ ಅವನ ಗೆಳತಿ, ಅವಳಿಂದಾಗುವ ಅಲ್ಲೋಲಕಲ್ಲೋಲಗಳು.
ಎಂಟು ಚಿತ್ರಗಳನ್ನು ನಿರ್ದೇಶಿಸಿದ ಪಾಲ್ ಥಾಮಸ್ ಆ್ಯಂಡರ್ಸನ್‍ಗೆ ಈಗ 48 ವರ್ಷ ವಯಸ್ಸು. ಜಗತ್ತಿನ ಚಿತ್ರಪ್ರೇಮಿಗಳೆಲ್ಲ ಅವರಿಂದ ಅನೇಕ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಆ ನಿರೀಕ್ಷೆಗಳನ್ನು ಹುಸಿಯಾಗಿಸಲಾರರು ಎನ್ನುವುದ ನನ್ನ ಖಚಿತ ನಂಬಿಕೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...