Homeರಾಜಕೀಯಫೋಟೊ ಶೂಟ್ ಪಾಲಿಸಿ

ಫೋಟೊ ಶೂಟ್ ಪಾಲಿಸಿ

- Advertisement -
- Advertisement -

ಇದು ವಿಲಕ್ಷಣವಾದುದು, ಆದರೆ ವಾಸ್ತವ. ನರೇಂದ್ರ ಮೋದಿಯವರ ಬೆಂಬಲಿಗರು ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಗೇ ಓಟು ಹಾಕುತ್ತೇವೆನ್ನುತ್ತಿರುವ ಜನರಿಗೆಮೋದಿಯವರ ಸಾಧನೆ ಏನು ಹೇಳಿ ಎನ್ನುವ ಸರಳ ಪ್ರಶ್ನೆಗೆ ಉತ್ತರ ಕೊಡಲಾರದವರಾಗಿದ್ದಾರೆ.
ಉದ್ಯೋಗ ಸೃಷ್ಟಿ? ವಿದೇಶದಲ್ಲಿರುವ ಕಪ್ಪು ಹಣವನ್ನು ವಾಪಸ್ಸು ತರುವುದು? ನೋಟು ರದ್ದತಿ? ಜಿ.ಎಸ್.ಟಿ? ಸಾಲ ಮರುಪಾವತಿ ಮಾಡದಿರುವವರನ್ನು ಜೈಲಿಗೆ ತಳ್ಳುವುದು? ರಾಮ ಮಂದಿರ ನಿರ್ಮಾಣ? ಕೋಮು ಸಾಮರಸ್ಯದ ಖಾತ್ರಿ? ಆರ್ಥಿಕತೆಯನ್ನು ಬೆಳವಣಿಗೆಯ ಹಾದಿಗೆ ತರುವುದು? ತೈಲ ಬೆಲೆಯನ್ನು ನಿಯಂತ್ರಣದಲ್ಲಿ ಇಡುವುದು? ಭಾರತದ ರೂಪಾಯಿಯನ್ನು ಶಕ್ತಗೊಳಿಸುವುದು? ಮಹಿಳೆಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವುದು? ಕೃಷಿ ಆದಾಯವನ್ನು ದುಪ್ಪಟ್ಟು ಗೊಳಿಸುವುದು? ಗಂಗಾ ನದಿಯನ್ನು ಸ್ವಚ್ಛಗೊಳಿಸುವುದು? ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸೌಲಭ್ಯವನ್ನು ಹಳ್ಳಿಗಳಿಗೂ ವಿಸ್ತರಿಸುವುದು? ಭಾರತವನ್ನು ಬಯಲು ಶೌಚದಿಂದ ಮುಕ್ತಗೊಳಿಸುವುದು?
ಇಲ್ಲ ಯಾವುದೊಂದೂ ಆಗಿಲ್ಲ. ಇಲ್ಲಿಯವರೆಗೂ ಅವರು ಹೇಳುತ್ತಿದ್ದದ್ದು ‘ಮೋದಿ ಉನ್ನತ ಮಟ್ಟದಲ್ಲಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆಗೊಳಿಸಿದ್ದಾರೆ ಎಂದು. ಆದರೆ ಈ ರಫೇಲ್ ಹಗರಣದ ನಂತರ ಬಿಜೆಪಿಯ ಈ ‘ಸಾಧನೆ’ಯನ್ನೂ ಹೇಳಿಕೊಳ್ಳಲಾಗುತ್ತಿಲ್ಲ ಎಂದು ಬಿಜೆಪಿಯ ‘ಸಂವಹನ ಪಟು’ಗಳೇ ಹೇಳುತ್ತಿದ್ದಾರೆ.
ಮೋದಿಯನ್ನು ಬಿಟ್ಟರೆ ಪ್ರಧಾನಿ ಪಟ್ಟಕ್ಕೆ ಬೇರೆ ಆಯ್ಕೆಗಳೇ ಇಲ್ಲ ಎಂಬುದು ಮೋದಿ ಬೆಂಬಲಿಗರ ಹೇಳಿಕೆ.ಸರಿ ಕಣಪ್ಪಾ, ಆದರೆ ಮೋದಿ ಸಾಧಿಸಿದ್ದಾದರೂ ಏನು? ಹೇಳಿಕೊಳ್ಳುವಂಥಾದ್ದು ಒಂದಾದರೂ ಇದೆಯೇ? ಮತ್ತೆ ಮತ್ತೆ ಪ್ರಶ್ನಿಸಿದರೆ ಬರುವ ಉತ್ತರ: ಮೋದಿಯವರು ಜಗತ್ತಿನ ಎದುರು ಭಾರತದ ಗೌರವವನ್ನು ಎತ್ತಿ ನಿಲ್ಲಿಸಿದ್ದಾರೆ- ದೇಶ್ ಕಾ ಸಮ್ಮಾನ್ ಬಡಾಯ ಹೈ. ಹಾಗಾಗಿಯೇ ಯಾವುದೇ ಇಶ್ಯೂಗಳಿಲ್ಲದ ಚುನಾವಣೆಯಲ್ಲಿ ವಿದೇಶಾಂಗ ನೀತಿಯೇಒಂದು ಇಶ್ಯೂವಾಗುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿದೆ.

ವಿದೇಶಾಂಗ ನೀತಿಯ ವೈಫಲ್ಯ.
ನಿಜವಾಗಿಯೂ ಮೋದಿ ಸರ್ಕಾರವು ಜಗತ್ತಿನ ಮುಂದೆ ಭಾರತದ ಗೌರವವನ್ನು ಎತಿ ಹಿಡಿದಿದೆಯೇ?. ಸತ್ಯವೇನೆಂದರೆ, ಭಾರತದ ವಿದೇಶಾಂಗ ನೀತಿಯ ವಿಚಾರಗಳಲ್ಲಿ ಮಹತ್ವದ ಯಾವುದೇ ಬದಲಾವಣೆಗಳಾಗಿಲ್ಲ. ಏನಾದರೂ ಆಗಿದ್ದರೆ ಅದು ಭಾರತದ ವಿದೇಶಾಂಗ ನೀತಿಯು ಮನಮೋಹನ್ ಸಿಂಗ್‍ರ ಕಾಲದಲ್ಲಿದ್ದುದಕ್ಕಿಂತಲೂ ದುರ್ಬಲವೂ, ಗೊಂದಲಕಾರಿಯೂ ಆಗಿರುತ್ತದೆ.
ತಾನು ವಿದೇಶಾಂಗ ನೀತಿಯಲ್ಲಿ ಎಷ್ಟು ಆಳವಾಗಿ ಆಸಕ್ತಿ ಹೊಂದಿದ್ದೇನೆಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೊದಲೇ ಸ್ಪಷ್ಟಪಡಿಸಿದ್ದರು. ತನ್ನ ಪ್ರಮಾಣವಚನ ಸಮಾರಂಭಕ್ಕೆ ದಕ್ಷಿಣ ಏಷ್ಯಾ ರಾಷ್ಠಗಳ ಪ್ರಮುಖರನ್ನು ಆಹ್ವಾನಿಸಿದ್ದರು. ಆದಾಗ್ಯೂ ಇವತ್ತಿಗೆ ಬಹುತೇಕ ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗೆ ಸಂಬಂಧ ಕುಂಠಿತಗೊಂಡಿದೆ. ಬಾಂಗ್ಲಾದೇಶ ಒಂದನ್ನು ಬಿಟ್ಟು. ಆದರೆ ಈಗ ಬಾಂಗ್ಲಾದೇಶದ ವಲಸಿಗರ ಮೇಲೆ ಬಿಜೆಪಿಯವರು ಮಾಡುತ್ತಿರುವ ಆರೋಪಗಳು ಈ ಸಂಬಂಧವನ್ನೂ ಹಾಳುಗೆಡುವುತ್ತಿದೆ.
ಮೋದಿ ಸರ್ಕಾರದ ಆವೇಶಭರಿತ ವರ್ತನೆಯ ಹೊರತಾಗಿ ಅಥವಾ ಅದರಿಂದಾಗಿಯೇ ಚೀನಾವು ಭಾರತವನ್ನು ‘ಸುತ್ತುವರೆದಿದೆ’. ದೊಕ್ಲಾಮ್ ಬಿಕ್ಕಟ್ಟಿನೊಂದಿಗೆ ಬೀಜಿಂಗ್ ನವದೆಹಲಿಯ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಿತು ಮತ್ತು ಮೋದಿ ತಮ್ಮ 56 ಇಂಚಿನ ಎದೆಯನ್ನು ಕಡಿಮೆಗೊಳಿಸಿಕೊಂಡು ಚೀನಾದೊಂದಿಗಿನ ಸಂಬಂಧದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು.
ಮೋದಿಯವರ ‘ಫ್ರೆಂಡ್ ಬರಾಕ್’ ವೈಟ್‍ಹೌಸಿನಲ್ಲಿದ್ದಾಗ ನರೇಂದ್ರ ಮೋದಿ ತಮ್ಮೆಲ್ಲಾ ವಿಶೇಷಣಗಳಿಗೂ ಅಮೇರಿಕಾದ ಮೊರೆ ಹೋಗುತ್ತಿದ್ದರು. ಆದರೆ ಡೊನಾಲ್ಡ ಟ್ರಂಪ್ ಎಂಬ ವಿಚಿತ್ರ ಪ್ರಾಣಿಯ ಜೊತೆ ಹೇಗೆ ವ್ಯವಹರಿಸಬೇಕೆಂದು ಮೋದಿ ಸರ್ಕಾರಕ್ಕೆ ಗೊತ್ತಾಗಿಲ್ಲ. ಎಲ್ಲರಿಗೂ ತಿಳಿದಿರುವಂತೆ ಭಾರತ ಮತ್ತು ಅಮೇರಿಕಾದ ಸಂಬಂಧ ಕ್ರಮೇಣ ಕಡಿಮೆಯಾಗುತ್ತಿದ್ದು, ಭಾರತವನ್ನು ಎಲ್ಲಿಯೂ ಸಲ್ಲದಂತೆ ಮಾಡಲಾಗುತ್ತಿದೆ.
ಪಾಕಿಸ್ತಾನ ಕುರಿತಾದ ಮೋದಿ ಸರ್ಕಾರದ ನೀತಿಗಳು ಈ ಹಿಂದಿನ ಸರ್ಕಾರಗಳಿಗಿಂತ ಹೆಚ್ಚು ತಲೆಕೆಳಗಾಗಿವೆ. ಸ್ವಲ್ಪ ದಿನ ಹೀಗೆ, ಸ್ವಲ್ಪ ದಿನ ಹಾಗೆ ಅನ್ನುವ ರೀತಿ ನವದೆಹಲಿ ಇಸ್ಲಾಮಾಬಾದ್‍ಅನ್ನು ನಡೆಸಿಕೊಳ್ಳುತ್ತಿದೆ.ಯಾವ ಕಾರ್ಯತಂತ್ರಗಳೂ ಇಲ್ಲ; ಒಂದು ವೇಳೆ ಇದೆ ಎಂದಾದರೆ ಅವು ಯಾವುದೇ ಮುನ್ನಡೆ ಸಾಧಿಸುವಲ್ಲಿ ವಿಫಲವಾಗಿವೆ.

ಅಪ್ಪುಗೆ ನೀತಿಯ ಜಯ
ವಿದೇಶಾಂಗ ನೀತಿಯಲ್ಲಿ ಸಂಪೂರ್ಣ ವಿಫಲವಾಗಿರುವುದು ಸ್ಪಷ್ಟವಿರುವಾಗವಿಶ್ವದ ಕಣ್ಣಿನಲ್ಲಿ ಮೋದಿ ಭಾರತದ ಗೌರವವನ್ನು ಹೆಚ್ಚಿಸಿದ್ದಾರೆಂದು ಅವರ ಬೆಂಗಲಿಗರು ಹೇಗೆ ಹೇಳುತ್ತಿದ್ದಾರೆ?
ಇದಕ್ಕೆ ಉತ್ತರ ನರೇಂದ್ರ ಮೋದಿಯವರ ‘ಇಮೇಜ್ ಫ್ಯಾಕ್ಟರಿ’ಯಲ್ಲಿದೆ. ಮೋದಿ ವಿದೇಶದ ಗಣ್ಯರನ್ನು ಭೇಟಿಯಾದಾಗ, ತನ್ನನ್ನು ಯಾವ ರೀತಿ ಬಿಂಬಿಸಬೇಕೆಂದು ಮೊದಲೇ ನಿರ್ಧರಿಸಿರುತ್ತಾರೆ. ಫೋಟೋಗಳು ಯಾವ ರೀತಿ ಬರಬೇಕೆಂಬುದನ್ನು ಇಮೇಜ್ ಫ್ಯಾಕ್ಟರಿಯೇ

India’s Prime Minister Narendra Modi hugs President Trump

ನಿರ್ಧರಿಸುತ್ತದೆ. ಅವರ ಟ್ವಿಟರ್ ಮೂಲಕ, ಅವರ ವೆಬ್‍ಸೈಟ್ ಮೂಲಕ ಮತ್ತು ವೈಯಕ್ತಿಕ ಆಪ್ ಹಾಗೂ ಅಧಿಕೃತ ಸರ್ಕಾರಿ ಚಾನೆಲ್‍ಗಳ ಮೂಲಕ ಮಾತ್ರ ಫೋಟೋಗಳು ಬಿಡುಗಡೆಯಾಗುತ್ತವೆ. ಅವರ ಫೋಟೋ ಶೂಟ್‍ಗಳು ಮೊದಲೇ ಯೋಜಿತವಾಗಿರುತ್ತವೆ. ತಾವು ವಿದೇಶಿಗಣ್ಯರೊಂದಿಗೆ ಹೊರವಲಯದಲ್ಲಿ, ಉದ್ಯಾನಗಳಲ್ಲಿ, ಹೆದ್ದಾರಿಗಳಲ್ಲಿ, ಸಮುದ್ರ ತೀರಗಳಲ್ಲಿ, ಪ್ರವಾಸೀ ತಾಣಗಳಲ್ಲಿ ಕಾಣಿಸಿಕೊಳ್ಳಲು ಇಷ್ಟಪಡುತ್ತಾರೆ. ಅವು ಒಳ್ಳೆಯ ಇಮೇಜನ್ನು ತಂದುಕೊಡುತ್ತವೆ. ಅನೌಪಚಾರಿಕ ಶೃಂಗಸಭೆಯೆಂದು ಅವರದನ್ನು ಕರೆಯುತ್ತಾರೆ.
ಪಕ್ಷದ ಅಧ್ಯಕ್ಷರಾದ ಅಮಿತ್ ಷಾ ಹೇಳಿಕೆ ಎಲ್ಲರಿಗೂ ಗೊತ್ತಿದೆ – ಭಾರತವು ಅತ್ಯಂತ ಬಲಶಾಲಿ ರಾಷ್ಠವಾಗುವುದನ್ನು ಬಿಜೆಪಿಯು ಬಯಸುತ್ತದೆ,‘ವಿಶ್ವಗುರು’ವಿನಂತೆ. ಅವರು ಹೀಗೆ ಹೇಳುವುದು ಜನರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಕಾಣಸಿಗುವ ಮೋದಿಯ ಈ ಇಮೇಜ್‍ಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತದೆ. ಈ ಚಿತ್ರಣಗಳಲ್ಲಿ ಮೋದಿಯು ಯಾವಾಗಲೂ ಯಜಮಾನನಂತೆ ಕಾಣಿಸುತ್ತಾರೆ, ಚರ್ಚೆಗಳನ್ನು ನಿಯಂತ್ರಿಸುವಂತೆ, ಉಳಿದ ನಾಯಕರಿಗೆ ದಾರಿ ತೋರುವವರಂತೆ ಬಿಂಬಿಸಿಕೊಳ್ಳುತ್ತಾರೆ. ಮೋದಿಯು ವಿಶ್ವದ ಇತರ ನಾಯಕರನ್ನು ಆವರಿಸಿಕೊಳ್ಳುವಂತೆ ಅಪ್ಪಿಕೊಳ್ಳುತ್ತಾರೆ, ಭಾರತ ವಿಶ್ವವನ್ನು ಆವರಿಸಿಕೊಳ್ಳುತ್ತಿದೆ ಎಂದ ತೋರುವಂತೆ.
ಅವರು ಆಕ್ರಮಿಸಿಕೊಳ್ಳುವಂತೆ ತಮ್ಮ ಬಾಹುಗಳನ್ನು ಬಳಸಿಕೊಳ್ಳುತ್ತಾರೆ ಮತ್ತು ‘ಮೋದಿ ಒಬ್ಬ ಆಕ್ರಮಣಕಾರರಾಗಿದ್ದಾರೆ. ಮೋದಿಯ ಕೈ ಸನ್ನೆಗಳು ಅವರ ಇಮೇಜಿನಲ್ಲಿ ಖಚಿತವಾಗಿ ಸೂಚಿಸುವಂತೆ ವಿಶ್ವವು ಭಾರತದ ಮಾರ್ಗದರ್ಶನವನ್ನು ಕಾಯುತ್ತಿದೆ. ಮೋದಿ ದಾರಿ ತೋರುತ್ತಾರೆ, ಅವರು ಹಿಂಬಾಲಿಸುತ್ತಾರೆ’ ಎಂಬಂತೆ ಆ ಫೋಟೋಗಳು ತೋರುತ್ತವೆ.
ಕ್ಸಿ ಜೊತೆ ಸಂಬಂಧ ಸುಧಾರಿಸಲು ಮೋದಿ ಚೀನಾಗೆ ಹೋಗಿದ್ದಾಗ ಕೂಡ, ವುಹಾನ್‍ನಲ್ಲಿ ಮೋದಿ ಕ್ಸಿಗೆ ಅವರದ್ದೇದೇಶದ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಕೊಡುತ್ತಿರುವಂತೆ ಕಾಣಿಸಿಕೊಂಡಿದ್ದರು ಅಥವಾ ಅವರ ಇಮೇಜ್‍ನಲ್ಲಿ ಹೀಗೆ ಕಾಣಬೇಕೆಂದು ನರೇಂದ್ರ ಮೋದಿ ಸೂಚಿಸಿದ್ದರು. ನಿಜವಾದ ಇಮೇಜ್‍ಗಳು ಹಾಗಿರುವುದಿಲ್ಲ, ಹಾಗಾಗಿ ವಾಟ್ಸಪ್ ಭೂತದ ದಾಹ ತಣಿಸಲು ಫೋಟೋಶಾಪ್‍ನಲ್ಲಿ ಅವುಗಳನ್ನು ತಯಾರಿಸಲಾಗುತ್ತದೆ. (ನರೇಂದ್ರ ಮೋದಿ.ಇನ್‍ನಲ್ಲಿ ಹಾಕಿರುವ ಚಿತ್ರ ನೋಡಿ)
ಯೋಗವು ವಿಶ್ವಕ್ಕೆ ಭಾರತದ ಕೊಡುಗೆ ಎಂದು ಪ್ರತಿಪಾದಿಸಿ ಅಂತರಾಷ್ಠೀಯ ಯೋಗ ದಿನಾಚರಣೆ ಆಚರಿಸಲು ನರೇಂದ್ರ ಮೋದಿ ಕಾರಣರಾಗಿದ್ದಾರೆ.
ಅವರು ವಿಶ್ವದ ಬಹುತೇಕ ರಾಷ್ಟ್ರಗಳ ರಾಜಧಾನಿಗಳಿಗೆ ಭೇಟಿ ಕೊಟ್ಟು ಅಲ್ಲಿ ಅಪ್ಪಟ ಹಿಂದಿಯಲ್ಲಿ ಮಾತನಾಡಿದ್ದಾರೆ.ಅವರ ಮೊದಲ ನಾಲ್ಕು ವರ್ಷದ ಆಡಳಿತದಲ್ಲಿ 165 ದಿನಗಳನ್ನು ಅವರು ವಿದೇಶದಲ್ಲೇ ಕಳೆದಿದ್ದಾರೆ.ಇದು ಅವರ ಒಟ್ಟು ಅವಧಿಯ ಶೇಕಡಾ 11ರಷ್ಟಿದೆ. ಇದು ಅವರ ವಿರುದ್ದದ ಭಾವನೆ ಮೂಡಿಸಬೇಕಿತ್ತು. ಉದ್ಯೋಗ ಸೃಷ್ಟಿ ಎಲ್ಲಿ ಮತ್ತು ತೈಲ ಬೆಲೆಗಳ ನಿಯಂತ್ರಣ ಏಕಿಲ್ಲ, ಎಂಬ ಅಸಮಾಧಾನದೊಂದಿಗೆ ಜನ ಕೇಳಬೇಕಿತ್ತು. ಪ್ರಧಾನಿ ಇಷ್ಟೊಂದು ಸಮಯ ವಿದೇಶದಲ್ಲೇಕೆ ಕಳೆಯುತ್ತಾರೆ ಎಂಬುದು ವಿವಾದವಾಗಬೇಕಿತ್ತು. ಅದಾಗಲಿಲ್ಲ. ಏಕೆಂದರೆ ಮೋದಿ ಕೂಟದ ಜನ ಅದಕ್ಕೊಂದು ತಿರುವು ಕೊಡುತ್ತಾರೆ. ಮೋದಿ ಭಾರತದ ಗೌರವವನ್ನು ಎತ್ತಿ ಹಿಡಿಯಲು ವಿದೇಶಕ್ಕೆ ಹೋಗುತ್ತಾರೆ ಎಂದು ಬಿಂಬಿಸಲಾಗಿದೆ.
ಬಹುತೇಕ ತಮ್ಮ ಎಲ್ಲಾ ವಿದೇಶಿ ಪ್ರವಾಸಗಳಲ್ಲೂ ಮೋದಿ ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡುತ್ತಾರೆ. ಮೋದಿಯ ಬೆಂಬಲಿಗನೊಬ್ಬ ಹೇಳುವಂತೆ ಜನ ಈಗಲೂ ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನನ್ನು ನೆನಪಿಸಿಕೊಳ್ಳುತ್ತಾರೆ. ಸೆಪ್ಟೆಂಬರ್ 2014ರಲ್ಲಿ ಅನಿವಾಸಿ ಭಾರತೀಯರಿಂದ ತುಂಬಿದ ಈ ಸ್ಟೇಡಿಯಂನಲ್ಲಿ ಮೋದಿ ತಮ್ಮ ಭಾಷಣ ಮಾಡಿದ್ದರು.
ಹಾಗೆಯೇ ಮೋದಿಯವರು ಜಪಾನಿನ ಶಿಂಜೋ ಅಬೆಯವರನ್ನು ವಾರಣಾಸಿಯ ಗಂಗಾರತಿಗೆ ಆಹ್ವಾನಿಸಿದ್ದರು ಮತ್ತು ಗುಜರಾತಿನ ಝುಲಾದಲ್ಲಿ ಕ್ಸಿ ಜಿನ್ಪಿಂಗ್ ಜೊತೆ ಉಯ್ಯಾಲೆಯ ಮೇಲೆ ತೂಗಿಕೊಂಡಿದ್ದರು. ಅವರು ಜಗತ್ತಿನ ಮುಖ್ಯಸ್ಥರನ್ನು ಆಹ್ವಾನಿಸಲು ವಿಮಾನ ನಿಲ್ದಾಣಕ್ಕೆ ಧಾವಿಸುತ್ತಾರೆ ಮತ್ತು ತಮ್ಮನ್ನು ಪ್ರಧಾನಿ ಎನ್ನುವುದಕ್ಕಿಂತ ಸ್ನೇಹಿತ ಎಂದು ಕರೆಯಲು ಬರಾಕ್ ಒಬಾಮರವರಿಗೆ ಸೂಚಿಸುತ್ತಾರೆ. ಸಣ್ಣಪುಟ್ಟ ದೇಶಗಳ ಮುಖ್ಯಸ್ಥರನ್ನು ದೇಶದ ಗಣರಾಜ್ಯೋತ್ಸವಕ್ಕೆ ಕರೆಯಲು ಮೋದಿಯವರಿಗೆ ಇಷ್ಟವಿಲ್ಲ. ಈ ವರ್ಷ ಅವರು ಎಲ್ಲಾ 10 ಏಸಿಯಾನ್ ಮುಖಂಡರನ್ನು ಒಟ್ಟಿಗೇ ಆಹ್ವಾನಿಸಿದ್ದರು.
ಈ ಚುನಾವಣಾ ವರ್ಷದಲ್ಲಿ ಭಾರತಕ್ಕೆ ಬರುವಂತೆ ಡೊನಾಲ್ಡ ಟ್ರಂಪ್‍ರಮನವೊಲಿಸಲು ಮೋದಿ ತೀವ್ರ ಪ್ರಯತ್ನ ಮಾಡುತ್ತಿದ್ದಾರೆ. ಸಾರ್ವತ್ರಿಕ ಚುನಾವಣೆಗೆ ಮುಂಚೆ ಸರಿಯಾಗಿ ಯೋಜಿಸಿದ ಫೋಟೋಗ್ರಫಿ ಮೂಲಕ ಟ್ರಂಪ್ ಆಡಳಿತವನ್ನು ವಶಕ್ಕೆ ಪಡೆದುಕೊಂಡಂತೆ ಚಿತ್ರಿಸಲು ಮೋದಿ ಬಯಸಿದ್ದಾರೆ. ಆದರೆ ಟ್ರಂಪ್ ಚಾಣಾಕ್ಷ. ಅಮೇರಿಕಾ ಅಧ್ಯಕ್ಷರ ಅಧಿಕೃತ ವಿಹಾರದ ತಾಣ ಕ್ಯಾಂಪ್ ಡೇವಿಡ್‍ನಲ್ಲಿಮೋದಿ ಬಯಸಿದಂತಹಒಳ್ಳೆಯ ಫೋಟೋಗಳನ್ನು ಒದಗಿಸುವುದು ಟ್ರಂಪ್‍ಗೆ ಇಷ್ಟವಿಲ್ಲ. ಒಂದು ವೇಳೆ ಸದ್ಯಕ್ಕೆ ಅಸಾಧ್ಯವೆಂದು ತೋರುತ್ತಿರುವ ಟ್ರಂಪ್ ಭಾರತ ಭೇಟಿಯಲ್ಲಿ ಮೋದಿಗೆ ಒಳ್ಳೆಯದಾಗುವುದಕ್ಕಿಂತ ಎಡವಟ್ಟೇ ಆಗಿಬಿಡುವ ಸಾಧ್ಯತೆಯೂ ಇದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...