Homeಅಂಕಣಗಳುಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

ಮ್ಯೂಸಿಯಂನಾಗೆ ಪಕೋಡೇಂದ್ರನ ಫಿಟ್ನೆಸ್ ಪ್ರತಿಮೆ ಮಾಡಿಸಿದ್ರೆ ಹೆಂಗೆ

- Advertisement -
- Advertisement -

ಕೇಳುಗರಿಗೆಲ್ಲ ಸ್ವಾಗತ, ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ..
ಈ ದೇಶ ಕಂಡ ಅತ್ಯುತ್ತಮ ಕಮಂಗಿ ಆಡಳಿತಗಾರ ಪಕೋಡತಾತನು ದೇಶವನ್ನಾಳಿದ ಪ್ರಧಾನಿಗಳ ಪ್ರತಿಮೆಗಳನ್ನು ಇಡಲು ಮ್ಯೂಸಿಯಂ ಸ್ಥಾಪನೆಗೆ ಮುಂದಾಗಿದ್ದು, ಈ ಮ್ಯೂಸಿಯಂನಲ್ಲಿ ನೆಹರು ಬಿಟ್ಟು ಉಳಿದೆಲ್ಲ ಪ್ರಧಾನಿಗಳ ಪ್ರತಿಕೃತಿಗಳು ಇರಲಿವೆಯಂತೆ. ನೆಹರು ಹೆಸರು ಕೇಳಿದರೆ ಮೂಲವ್ಯಾಧಿ ಪೀಡಿತರಂತೆ ಬುಳುಬುಳು ನರಳುವ ಸನಾತನಿಗಳ ಈ ಹೊಚ್ಚಹೊಸ ನವರಂಗಿ ನಾಟಕ ಕಂಡು ಕೈ ಪಕ್ಷದವರು ರೊಚ್ಚಿಗೆದ್ದಿದ್ದಾರೆ. ಪಾರ್ಲಿಮೆಂಟ್ ಡಿಸ್ಕೊಡ್ಯಾನ್ಸರ್ ಆಗಿರುವ ಪಕೋಡತಾತನ ಪ್ರತಿಮೆಯನ್ನು ಯಾವ ಬಗೆಯಲ್ಲಿ ಕೆತ್ತಬೇಕೆಂದು ಶಿಲ್ಪಿಗಳು ತಲೆಕೆಡಿಸಿಕೊಂಡಿದ್ದು, ಕನ್ಹಯ್ಯ ಕುಮಾರನ ಸಲಹೆಯಂತೆ “ಬಂಡೆ ಮೇಲೆ ಹೊಟ್ ಮಕಾಡೆ ದಬಾಕೊಂಡಿರೋ ಪಕೋಡತಾತನ” ವಿಗ್ರಹ ಕೆತ್ತಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಪಟ್ಟುಬಿಡದ ಕನ್ಹಯ್ಯ.. ‘ಬಂಡೆ ಮೇಲ್ ಮಕಾಡೆ’ ವಿಗ್ರಹ ಕೆತ್ತಲಾಗದಿದ್ದರೆ, ಪಕೋಡತಾತ ಪುಕ್ಕಲನಂತೆ ಬುಳುಬುಳನೆ ಅಳುತ್ತಾ ಭಾಷಣ ಬಿಗಿಯುತ್ತಿರುವ ವಿಗ್ರಹ ಕೆತ್ತಿ, ಪ್ರತಿಮೆಯ ಕಣ್ಣಿಂದ ಕಣ್ಣೀರು ಬರಲು ಎರಡೂ ಕಣ್ಣಿಗೆ ಗೋಮೂತ್ರದ ಪೈಪುಗಳನ್ನು ಫಿಕ್ಸು ಮಾಡಿ ಎಂದು ಇನ್ನೂ ಆಗ್ರಹಿಸಿಲ್ಲ ಎಂದು ವರದಿಯಾಗಿದೆ.
******
ಕಳ್ಳಕಾಕರು, ಮನೆಹಾಳ ರಾಜಕಾರಣಿಗಳನ್ನು ಕಂಡರೆ ಛಂಗನೆ ಎಗರಿ ಪಾದಕ್ಕೆ ಬೀಳುವ ಪೊಲೀಸರು ಜನಸಾಮಾನ್ಯರು, ಹೋರಾಟಗಾರರನ್ನು ಕಂಡರೆ ಮೂಗಿನೊಳಗೆ ಎರೆಹುಳ ಹೊಕ್ಕಂತಾಡುವುದು ಗೊತ್ತೇ ಇದೆ. ಇದಕ್ಕೆ ಹೊಸ ಉದಾಹರಣೆ ರಾಯಚೂರಿನಿಂದ ಬಂದಿದೆ. ಕಾರ್ಮಿಕರ ಪೀಡಕರ ವಿರುದ್ಧ ಮತ್ತು ವಿದ್ಯಾರ್ಥಿಗಳ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿದ್ದ ರಾಯಚೂರಿನ ಮಾನ್ವಿ ನಗರದ ಎಸ್.ಎಫ್.ಐ ಸಂಘಟನೆಯ ಹೋರಾಟಗಾರರನ್ನು ಅಲ್ಲಿನ ಹೇತ್ಲಾಂಡಿ ಪೊಲೀಸರು ಯಾವ ವಿಚಾರಣೆಯಿಲ್ಲದೆ ರೌಡಿಪಟ್ಟಿಗೆ ಸೇರಿಸಿದ್ದಾರೆ. ಇನ್ನೊಂದು ಕಡೆ ಹುಬ್ಬಳ್ಳಿಯ ಗುತ್ತಿಗೆ ಪೌರಕಾರ್ಮಿಕರ ಸಂಘಟನೆಯ ಅಧ್ಯಕ್ಷನನ್ನು ಜಿಲ್ಲೆಯಿಂದ ಗಡೀಪಾರು ಮಾಡಲು ಅಲ್ಲಿನ ಮೇಯರ್ ಮತ್ತು ಪೊಲೀಸರು ಹುನ್ನಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ತಮ್ಮ ಅಸಲಿ ಸಾಹುಕಾರರು ನಡೆಸೋ ಗಂಡಾಗುಂಡಿ ಯವಾರಗಳ ತಂಟೆಗೆ ಯಾರೇ ಬಂದರೂ ಪ್ಯಾಂಟೇರಿಸಿಕೊಂಡು ಹೊರಡುವ ಈ ಟೋಪಿಧಾರಿ ಸರ್ಕಾರಿ ಗೂಂಡಾಗಳು, ಅಪ್ಲೈ ಆಗದ ಕಾನೂನುಗಳನ್ನು ಹೋರಾಟಗಾರರ ಮೇಲೆ ಸುರಿದು ಮೀಸೆಗಳನ್ನು ತಿರುವಿಕೊಳ್ಳುತ್ತಿದ್ದಾರೆ. ಪೊಲೀಸರು ತಮ್ಮ ಆಳುವ ಯಜಮಾನರುಗಳು ಕಾಲಲ್ಲಿ ತಳ್ಳುವ ಡಾಗ್ ಬಿಸ್ಕತ್ತುಗಳನ್ನು ನಾಲಿಗೆಯಲ್ಲಿ ಎತ್ತಿಕೊಂಡು ಸಂಭ್ರಮಿಸುತ್ತಿರುವುದರಲ್ಲಿ ಆಶ್ಚರ್ಯ ಪಡುವಂಥದ್ದೇನಿಲ್ಲ ಎಂದು ಮಾಜಿ ಹಾಸ್ಯನಟ ಶಾಂಗ್ಲಿಯಾನ ಒಂದೇ ಉಸಿರಿನಲ್ಲಿ ಒದರಿದ್ದಾರೆಂದು ತಿಳಿದು ಬಂದಿದೆ.
******
ರಾಜ್ಯವನ್ನು ಹರಿದು ಎರಡು ಭಾಗ ಮಾಡ್ತೀವಿ ಅಂತ ಹೊರಟಿದ್ದ ಛೀರಾಮುಲು & ಬ್ಲೂಜೆಪಿಯ ಸಿಳ್ಳೇಕ್ಯಾತಗಳು, ಜನರು ಕಾಲಲ್ಲಿದ್ದನ್ನು ಕಳಚಿ ಮೂತಿಗೆ ಪಟಪಟನೆ ಎಸೆಯಲು ಶುರು ಮಾಡುತ್ತಿದ್ದಂತೆ ಸುಯ್ ಟಪಕ್ ಅಂತ ಯೂ ಟರ್ನ್ ತೆಗೆದುಕೊಂಡಿರೋ ವರ್ತಮಾನ ಇದೀಗ ವರದಿಯಾಗಿದೆ. ರಾಜ್ಯಸಭಾ ಸದಸ್ಯತ್ವದ ಟಿಕೆಟುಗಳಲ್ಲಿ ಒಂದನ್ನೂ ಉತ್ತರ ಕರ್ನಾಟಕ ಭಾಗದವರಿಗೆ ಕೊಡದೆ ಆಂಧ್ರ, ಕೇರಳ, ತಮಿಳುನಾಡಿನ ಮುಷಂಡಿಗಳಿಗೆ ಹಾಫ್‍ರೇಟ್, ಚೀಪ್ ರೇಟಿನಲ್ಲಿ ಮಾರಿಕೊಂಡು ಯಂಜಾಯ್ ಮಾಡುತ್ತಿದ್ದ ಈ ಬ್ಲೂಜೆಪಿ ಭಡವ ರಾಸ್ಕಲ್‍ಗಳಿಗೆ ಇದೀಗ ಉತ್ತರ ಕರ್ನಾಟಕದ ಮೇಲೆ ಲವ್ವು ಕಿತ್ಕೊಂಡಿರುವುದು ನಾನಾ ಗುಮಾನಿಗೆ ಕಾರಣವಾಗಿದೆ. ಪಕ್ಷದಲ್ಲಿ ಇರುವ 17 ಸಂಸದರಲ್ಲಿ ಅರ್ಧಕ್ಕರ್ಧ ಮಂದಿ ಉತ್ತರ ಕರ್ನಾಟಕದವರೇ ಇದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಆ ಭಾಗದ ಅಭಿವೃದ್ಧಿಗೆ ಮೂರುಕಾಸಿನ ಕೆಲಸ ಮಾಡದೆ, ಓತ್ಲಾ ಹೊಡೆದುಕೊಂಡು ತಿರುಗುತ್ತಿದ್ದ ಈ ಬ್ಲೂಜೆಪಿ ದಂಢಪಿಂಡಗಳು ಇದೀಗ ತಾವೇ ಹಾರಿಸಿದ ಪ್ರತ್ಯೇಕ ರಾಜ್ಯದ ಗೂಬೆಯನ್ನು ಆಕ್ಸಿಡೆಂಟಲ್ ಚೀಫ್ ಮಿನಿಸ್ಟರ್ ಕುಮಾರಣ್ಣನ ತಲೆಗೆ ಕಟ್ಟಲು ಹುನ್ನಾರ ನಡೆಸಿರುವುದು ಬಹಿರಂಗವಾಗಿದೆ. ಗಡ್ಡದೊಳಗೇ ಮುಖ ಬಚ್ಚಿಟ್ಟುಕೊಂಡು ತಿರುಗುವ ಛೀರಾಮುಲು, ಇದೀಗ ಪ್ರತ್ಯೇಕ ರಾಜ್ಯದ ಬಗ್ಗೆ ಯಾರಾದ್ರು ಮಾತಾಡಿದ್ರೆ ಅವರ ಎರಡೂ ಕೆನ್ನೆ ಕಚ್ಚುತ್ತೇನೆಂದು ಧಮಕಿ ಹಾಕುತ್ತಿರುವುದು ಹಾಸ್ಯಾಸ್ಪದವಾಗಿದೆ. ಒಟ್ಟಿನಲ್ಲಿ ರಾಜ್ಯದ ಜನರು ಇವರ ಸೆಗಣಿ ಬುರುಡೆಗಳತ್ತ ಗುರಿಯಿಟ್ಟು ಬೀಸಿದ ಹಳೇಕೆರಗಳು ಯಶಸ್ವಿಯಾಗಿ ಗುರಿ ತಲುಪಿವೆಯೆಂದು ತಲೆಗೆ ಬ್ಯಾಂಡೇಜು ಹಾಕಿಸಿಕೊಂಡ ಬ್ಲೂಜೆಪಿ ಮುಠ್ಠಾಳರು ಇನ್ನೂ ತಪ್ಪೊಪ್ಪಿಗೆ ಹೇಳಿಕೆ ಕೊಟ್ಟಿಲ್ಲವೆಂದು ವರದಿಯಾಗಿದೆ.
******
ಸುಮ್ಮನಿರಲಾರದೆ ಇರುವೆ ಬಿಟ್ಟುಕೊಳ್ಳೋರನ್ನು ನೀವು ನೋಡಿರ್ತೀರಿ, ಆದ್ರೆ ಇರಲಾರದೆ ಚೆಡ್ಡಿಯೊಳಗೆ ಹೆಬ್ಬಾವು ಬಿಟ್ಕೊಳೋರನ್ನ ನೀವು ನೋಡಿರಲಿಕ್ಕಿಲ್ಲ. ಮೀಟ್ ಮಿಸ್ಟರ್ ರಾಮ್ಸೇವಕ್ ಶರ್ಮ, ದೂರಸಂಪರ್ಕ ಇಲಾಖೆ ಟ್ರಾಯ್ ನ ಮುಖ್ಯಸ್ಥ. ಈ ಅರುಳುಮರುಳು ಮುದುಕಪ್ಪ ತನ್ನ ಟ್ವಿಟರಿನಲ್ಲಿ ತನ್ನ ಆಧಾರ್ ಕಾರ್ಡ್ ನಂಬರ್ ಹಾಕಿ, ತಾಕತ್ತಿದ್ರೆ ಹ್ಯಾಕ್ ಮಾಡಿ ಅಂತ ಚಾಲೆಂಜು ಹಾಕಿತ್ತು. ತಮ್ ಪಾಡಿಗೆ ತಾವಿದ್ದ ಕಂಪ್ಯೂಟರ್ ಹ್ಯಾಕರ್ ಗಳು ಮುದುಕಪ್ಪನ ಚಾಲೆಂಜಿಗೆ ರೊಚ್ಚಿಗೆದ್ದು ಆತನ ಸರ್ವ ಜಾತಕವನ್ನೆಲ್ಲ ಹ್ಯಾಕ್ ಮಾಡಿ ಅದಕ್ಕೆ ಉಪ್ಪು ಹುಣಸೆಹಣ್ಣು ಸವರಿ ತಗೋ ನೆಕ್ಕೊ ಅಂತ ವಾಪಸ್ ಬಿಸಾಕಿದ್ದಾರೆ. ಆಧಾರ್ ಕಾರ್ಡ್ ನಂಬರ್ ಮೂಲಕ ಮುದುಕಪ್ಪನ ಪರ್ಸನಲ್ ಫೋನಿಗೇ ಕನ್ನ ಕೊರೆದು ವಾಟ್ಸಾಪ್ ಡೀಟೈಲ್ ಎತ್ತಾಕಿ, ಆತನ ಬ್ಯಾಂಕ್ ಅಕೌಂಟಿಗೂ ತೂತ ಕೊರೆದು ಒಂದು ರುಪಾಯಿ ಡೆಪಾಸಿಟ್ ಮಾಡಿ, ಆತನ ಕ್ರೆಡಿಟ್ ಕಾರ್ಡಿಂದಲೇ ಒಂದು ಫೋನು ಬುಕ್ ಮಾಡಿ, ಅವನ ಮಬೆ ಅಡ್ರೆಸ್ಸಿಗೇ ಕಳಿಸಿ, ಹ್ಯಾಕು ಸಾಕಾ, ಇಲ್ಲಾ ಇನ್ನೂ ಬೇಕಾ ಎಂದು ಮುದುಕಪ್ಪನ ಪಂಚೆಯೆಳೆದುಬಿಟ್ಟಿದ್ದಾರೆ. ಇಷ್ಟು ಸಾಲದೆಂದು ಹ್ಯಾಕರ್ ಗಳು ಪಿ.ಎಮ್ ಪಕೋಡಪ್ಪನಿಗೆ ನಿಂದೂ ಆಧಾರ್ ಕಾರ್ಡ್ ನಂಬರ್ ಇದ್ರೆ ಕೊಡು ಒಂದು ಕಡೆಯಿಂದ ಕೆತ್ತಿ ಬಿಸಾಕುತ್ತೇವೆಂದು ಹೊಸ ಚಾಲೆಂಜನ್ನು ಎಸೆದಿದ್ದಾರೆ. ಈ ಮೂಲಕ ಆಧಾರ್ ಕಾರ್ಡ್ ಮಾಹಿತಿಯನ್ನು ಯಾರೂ ಕದಿಯಲಾಗದು, ಅವನ್ನು ಏಳು ಸಮುದ್ರದಾಚೆ ಇರೋ ದ್ವೀಪದಲ್ಲಿರೋ ರಾಕ್ಷಸನ ಅಂಡಿನೊಳಗೆ ಭದ್ರವಾಗಿಟ್ಟಿದ್ದೇವೆಂದು ಕೊಚ್ಚಿಕೊಳ್ಳುತ್ತಿದ್ದ ದ್ವೇಷಭಕ್ತ ಪಕೋಡಪ್ಪನ ಪಂಚೆಯು ಸಂತೆಯಲ್ಲಿ ಉದುರಿಹೋಗಿದೆ. ಯಾವುದೇ ಕಾರಣಕ್ಕು ತನ್ನ ಆಧಾರ್ ನಂಬರ್ ಹ್ಯಾಕರ್‍ಗಳ ಕೈಗೆ ಸಿಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಸಿರೋ ಪಕೋಡಪ್ಪ ಅದೇನಾದರೂ ಲೀಕಾದರೆ ತಾನು ಕದ್ದುಮುಚ್ಚಿ ನೋಡೋ ಪಾರ್ನ್ ಸೈಟ್ ಡೀಟೈಲೆಲ್ಲ ಹೊರಬಿದ್ದು ಮಾನ ಹರಾಜಾಗುವ ಭಯದಲ್ಲಿದ್ದಾರೆಂದು ಮೂಲಗಳು ತಿಳಿಸಿವೆ.
******
ಬುದ್ದಿಜೀವಿಗಳಿಗೆ ಗುಂಡಿಟ್ಟು ಕೊಲ್ಲಿಸುತ್ತಿದ್ದೆ ಎಂದು ಕಯ್ಯಯ್ಯೋ ಅಂದ ಬಸನಘೋಡ ಪಾಟಿಲ್ ಮೇಲೆ ಕಾನೂನುಕ್ರಮ ಕೈಗೊಳ್ಳಲು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರೋ ಬೆರಕೆ ಸರ್ಕಾರ ಕಡೆಗೂ ಬಸನಘೋಡನನ್ನು ಕೊಚ್ಚೆ ಚರಂಡಿಯಲ್ಲಿ ಹೊರಳಾಡಲು ಬಿಟ್ಟು ತಾನೂ ಅವನೊಡನೆ ಉರುಳಾಡಲು ಯಾವ ಸಮಸ್ಯೆಯೂ ಇಲ್ಲವೆಂದು ಸ್ಪಷ್ಟಪಡಿಸಿದೆ. ಇನ್ನೊಂದು ಕಡೆಯಲ್ಲಿ ಹೈದರಾಬಾದಿನ ಬ್ಲೂಜೆಪಿ ಜನಪ್ರತಿನಿಧಿಯೊಬ್ಬ ಅಸ್ಸಾಂನಲ್ಲಿರೋ ವಲಸಿಗರ ಮೇಲೆ ಗುಂಡು ಹೊಡೆದು ಕೊಲ್ಲಲು ಕೇಂದ್ರ ಸರ್ಕಾರಕ್ಕೆ ಕೇಳಿಕೊಂಡಿದ್ದಾನೆ. ಮುಳ್ಳಂದಿಯ ಮುಖಕ್ಕೆ ಮೀಸೆ ಅಂಟಿಸಿದಂತಿರೋ ಈ ಗುಡಾಣಗಢವನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹೈದರಾಬಾದಿನ ಸರ್ಕಾರಕ್ಕೂ ನರದೌರ್ಬಲ್ಯದ ಕೊರತೆ ಕಾಡುತ್ತಿದೆಯಂತೆ. ಮಗದೊಂದು ಕಡೆ ಮೇಕೆ ದೇವರ ಪ್ರತಿರೂಪ, ಆದ್ದರಿಂದ ಯಾರೂ ಮಟನ್ ತಿನ್ನಬಾರದೆಂದು ದ್ವೇಷಭಕ್ತರ ಪಕ್ಷದ ರಾಜ್ಯಾಧ್ಯಕ್ಷನೊಬ್ಬ ಜನರ ಮೇಲೆ ಬೆದರಿಕೆ ಹಾಕಿದ್ದಾನೆ. ಇವರನ್ನೆಲ್ಲ ನೋಡುತ್ತಿದ್ದರೆ ಈ ದ್ವೇಷಭಕ್ತ ಕುನ್ನಿಗಳನ್ನೆಲ್ಲ ಬ್ಲೂಜೆಪಿ ಪಕ್ಷವು “ ಆಲ್ ಇಂಡಿಯ ಬೆಸ್ಟ್ ಮುಠ್ಠಾಳ್ಸ್ ಎಕ್ಸಾಂ” ನಡೆಸಿ ಅದರಲ್ಲಿ ಪಾಸಾದ ಅತ್ತುತ್ತಮ ಮೆಂಟ್ಲುಗಳಿಗೆ ಟಿಕೆಟು ಕೊಟ್ಟು ಎಲೆಕ್ಷನ್‍ಗೆ ಕಳಿಸಿರಬಹುದೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ತಲೆಯಲ್ಲಿ ಮಿದುಳಿರುವ ಜನರನ್ನು ಕಂಡರೆ ಉರಿದುಬೀಳುವ ಈ ಸನಾತನ ಪೀಡೆಗಳು ಸೆಗಣಿ ತಿನ್ನೋ ಜ್ಞಾನದಲ್ಲಿ ಪಿಎಚ್.ಡಿ ಲೆವೆಲ್ಲಿಗೆ ಪಳಗಿರುವುದು ಜನರಲ್ಲಿ ಆಶ್ಚರ್ಯ ಮೂಡಿಸಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ ಅಂತ ಹೇಳುತ್ತ, ವಾರ್ತಾಪ್ರಸಾರಕ್ಕೆ ಮಂಗಳ ಹಾಡುತ್ತಿದ್ದೇವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...