Homeಕರ್ನಾಟಕಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

- Advertisement -
- Advertisement -

ಮಾಚಯ್ಯ |

ಲೋಕಸಭಾ ಎಲೆಕ್ಷನ್ ರಿಜಲ್ಟ್ ಬಂದ ನಂತ್ರ ಬಿಜೆಪಿ ಆಪರೇಷನ್ ಕಮಲ ನಡೆಸುತ್ತೆ, ಈ ಸಮ್ಮಿಶ್ರ ಸರ್ಕಾರ ಬಿದ್ದೋಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ ಅನ್ನೋ ಚರ್ಚೆ ಜೋರಾಗಿ ನಡೀತಿದೆ. ಕನ್ನಡದ ಸಕಲಷ್ಟು ಟೀವಿ ಚಾನೆಲ್ಲುಗಳು ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿಯವರ ಸುತ್ತ ಕ್ಯಾಮೆರಾ ಹಿಡಿದು ನಿದ್ದೆಗೆಟ್ಟು ನಿಂತಿವೆ, ಯಾವ ಕ್ಷಣದಲ್ಲಾದ್ರು `ಬ್ರೇಕಿಂಗ್’ ಸುದ್ದಿ ಹೊರಬೀಳಬಹುದಾ ಅಂತ. ಆದ್ರೆ ಅಸಲೀ ಬ್ರೇಕಿಂಗ್ ಸಮಾಚಾರ ಬಿಜೆಪಿ ಅಂಗಳದಲ್ಲೇ ಆಟವಾಡುತ್ತಿದೆ. ಅದ್ರೆ ಕ್ಯಾಮೆರಾಗಳಿಗೆ ಅತ್ತ ತಿರುಗಿ ನೋಡಲು ಸಮಯ ಸಿಗುತ್ತಿಲ್ಲವಷ್ಟೇ! ಹೌದು, ಯಾವ ಬಿಜೆಪಿ, ರಾಜ್ಯದಲ್ಲಿ ಮತ್ತೆ ಸರ್ಕಾರ ರಚಿಸುತ್ತೆ ಅಂತ ನಮ್ಮ ಮೀಡಿಯಾಗಳು `ನೂರಾ ನಾಕು’ ಡಿಗ್ರಿ ಜ್ವರ ಏರಿಸಿಕೊಂಡು ನರಳಾಡುತ್ತಿವೆಯೋ ಅದೇ ಬಿಜೆಪಿ ಆಂತರಿಕ ಭಿನ್ನಮತದಿಂದ ತತ್ತರಿಸುತ್ತಿದೆ.

ನೋ ಡೌಟ್, ಅನಂತ್ಕುಮಾರರ ನಿಧನದ ನಂತ್ರ ಈಗ ಎದುರಾಬದುರಾ ನಿಲ್ಲಲು ಬಿಜೆಪಿಯೊಳಗೆ ಇರೋದು ಎರಡೇ ಬಣಗಳು. ಒಂದು ಯಡ್ಯೂರಪ್ಪನವರ ಬಣವಾದ್ರೆ, ಮತ್ತೊಂದು ಆರೆಸೆಸ್ ಸೂತ್ರಧಾರಿ ಸಂತೋಷ್.ರ ಬಣ. ಒಳಗೊಳಗೇ ಶೀತಲ ಸಮರದಂತಿದ್ದ ಕದನ, ದಿವಂಗತ ಅನಂತ್ಕುಮಾರರ ಮಡದಿ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿದ ಘಟನೆಯಿಂದಾಗಿ ಬೀದಿಗೆ ಬಂದಿದ್ದು ಈಗ ಹಳೆಯ ಸುದ್ದಿ. ಲೇಟೆಸ್ಟ್ ಸಂಗತಿ ಏನಂದ್ರೆ, ಆ ಕದನ ಈಗ ಮತ್ತೊಂದು ಹಂತ ತಲುಪಿದ್ದು ಬಿಜೆಪಿಯೊಳಗೆ ಸ್ಪಷ್ಟ ಬಿರುಕು ಗೋಚರಿಸತೊಡಗಿದೆ. ಸದಾ ತಾಳ್ಮೆಯಿಂದ, ಜಾಣ್ಮೆಯಿಂದ ಮಾತಾಡುವ ಸಂತೋಷ್ ಮೊನ್ನೆ ತುಸು ಆಕ್ರೋಶದಿಂದಲೇ ಬಿ.ಎಸ್.ವೈ ಬಣದ ಮೇಲೆ ಪರೋಕ್ಷವಾಗಿ ರೇಗಾಡಿದ ಮಾತುಗಳೇ ಇದಕ್ಕೆ ಸಾಕ್ಷಿ.

ಸೋಮವಾರ, ಏಪ್ರಿಲ್ 29ರಂದು ಸಭೆಯೊಂದನ್ನು ಮುಗಿಸಿ ಹೊರನಡೆಯುತ್ತಿದ್ದ ಸಂತೋಷ್`ಜಿ’ ಪಕ್ಷದೊಳಗಿನ ಆಂತರಿಕ ಭಿನ್ನಮತಕ್ಕೆ ಸಂಬಂಧಪಟ್ಟಂತೆ ತುಸು ಅಸಂತೋಷದಿಂದಲೇ “ನನ್ನ ವಿರುದ್ಧವೇ ಬರ್ತಾರಂತಾ? ಬರಲಿ ಬಿಡಿ” ಎಂಬ ಮಾತುಗಳನ್ನಾಡಿದ್ದಾರೆಂದು ದೃಶ್ಯ ಮಾಧ್ಯಮವೊಂದು ಸುದ್ದಿ ಮಾಡಿದೆ. ಮೇಲ್ನೋಟಕ್ಕೆ ಇದು `ಡೋಂಟ್ ಕೇರ್’ ಶೈಲಿಯ ಹೇಳಿಕೆಯಂತೆ ಕಂಡುಬಂದರು ಬಿಜೆಪಿ ಪಾಲಿಗೆ ಮಾಸ್ಟರ್ ಮೈಂಡ್ ಎಂದೇ ಗುರುತಿಸಿಕೊಂಡಿದ್ದ ಸಂತೋಷ್`ಜಿ’ ಸಣ್ಣಗೆ ಶೇಕ್ ಆಗಿರೋದು ಇಲ್ಲಿ ಎದ್ದು ಕಾಣುತ್ತೆ.

‘ನನ್ನ ವಿರುದ್ಧವೇ ಬರ್ತಾರಂತಾ? ಬರಲಿ ಬಿಡಿ’: ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ..!

ಇದಕ್ಕೆ ಕಾರಣಗಳುಂಟು. ಸಂತೋಷ್`ಜಿ’ ಹೀಗೆ ತಾಳ್ಮೆ ಕಳೆದುಕೊಳ್ಳುವುದಕ್ಕೂ ಕೆಲ ದಿನಗಳ ಹಿಂದಷ್ಟೇ ಬಸನಗೌಡ ಯತ್ನಾಳ್  “ಕೆಲವರು ರಾಜ್ಯ ಬಿಜೆಪಿಯನ್ನು ತಮ್ಮ ಕೈವಶ ಮಾಡಿಕೊಳ್ಳುವ ಸಂತೋಷದಲ್ಲಿದ್ದಾರೆ. ಆದರೆ ಅಂತವರಿಗೆ ಅಸಂತೋಷದ ದಿನಗಳು ಹತ್ತಿರದಲ್ಲೇ ಕಾದಿವೆ” ಎಂಬ ಮಾತುಗಳನ್ನಾಡಿದ್ದರು. ಅದೂ ತೇಜಸ್ವಿನಿ ಅನಂತ್ಕುಮಾರರನ್ನು ಅವರ ಮನೆಯಲ್ಲೇ ಭೇಟಿಯಾಗಿ ಹೊರಬಂದು ಮಾಧ್ಯಮದವರಿಗೆ ಹೀಗೆ ಹೇಳಿದ್ದರು. ತಮ್ಮ ಮಾತುಗಳಲ್ಲಿ ಅವರು `ಸಂತೋಷ’ ಮತ್ತು `ಅಸಂತೋಷ’ ಎಂಬ ಪದಗಳನ್ನು ಉದ್ದೇಶಪೂರ್ವಕವಾಗಿಯೇ ಬಳಸಿದ್ದರು ಮತ್ತು ಪರೋಕ್ಷವಾಗಿ ಸಂತೋಷರನ್ನೇ ತಿವಿಯುವ ಪ್ರಯತ್ನ ಮಾಡಿದ್ದರು.

ಇದಕ್ಕೆ ಅವರ ಮುಂದುವರಿದ ಮಾತುಗಳೇ ಸಾಕ್ಷಿ “ತೇಜಸ್ವಿನಿಯವರಿಗೆ ಟಿಕೇಟ್ ತಪ್ಪಿರೋದು ದುರಂತ. ಕರ್ನಾಟಕದಲ್ಲಿ ಬಿಜೆಪಿಗೆ ನೆಲೆ ಒದಗಿಸಿದ್ದು ಇಬ್ಬರೇ. ಅದರಲ್ಲಿ ಒಬ್ಬರು ಯಡ್ಯೂರಪ್ಪನವರಾದ್ರೆ, ಮತ್ತೊಬ್ಬರು ಅನಂತ್ಕುಮಾರ್. ಅವರ ನಾಯಕತ್ವದಲ್ಲೇ ನಮ್ಮಂತವರು ಎಂಎಲ್ಎ ಆಗಲು, ಎಂಪಿಗಳಾಗಲು, ಕೇಂದ್ರ ಮಂತ್ರಿಗಳಾಗಲು ಸಾಧ್ಯವಾದದ್ದು. ಅಂತದ್ದರಲ್ಲಿ ಅನಂತ್ಕುಮಾರರ ಹೆಂಡತಿಗೆ ಹೀಗೆ ಕೊನೇಕ್ಷಣದಲ್ಲಿ ಟಿಕೆಟ್ ತಪ್ಪಿಸಬಾರದಿತ್ತು”. ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸುವಲ್ಲಿ ಬಿಎಲ್ ಸಂತೋಷರ ಪಾತ್ರವಿದೆ ಎಂಬ ಗುಮಾನಿಯನ್ನು ದಟ್ಟವಾಗಿಸುವಂತೆ ಸ್ವತಃ ಅವರೇ ಚಾಮರಾಜನಗರದಲ್ಲಿ ಮಾತಾಡುತ್ತಾ “ಜೀನ್, ಡಿಎನ್ಎ ಆಧಾರದಲ್ಲಿ ಟಿಕೆಟ್ ಕೊಡುತ್ತಾ ಹೋದ್ರೆ ಪಕ್ಷದ ರಸೀತಿ ಪುಸ್ತಕಕ್ಕೆ ಬೆಲೆ ಎಲ್ಲಿರುತ್ತೆ” ಎಂದು ಹೇಳಿ ತಾನೇ ಟಿಕಟ್ ತಪ್ಪಿಸಿದ್ದನ್ನು ಹೆಚ್ಚೂಕಮ್ಮಿ ಒಪ್ಪಿಕೊಂಡ ಮೇಲೆ ಯತ್ನಾಳ್ ತೇಜಸ್ವಿನಿಯವರ ಮನೆಗೆ ಭೇಟಿ ನೀಡಿ `ಸಂತೋಷ’, `ಅಸಂತೋಷ’ದ ಈ ಮಾತುಗಳನ್ನಾಡಿದ್ದರು.

ಅಷ್ಟಕ್ಕೂ ತೇಜಸ್ವಿ ಸೂರ್ಯನಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಅಸಮಾಧಾನಗೊಂಡ ಆರ್.ಅಶೋಕ್, ವಿ.ಸೋಮಣ್ಣ, ಸತೀಶ್ ರೆಡ್ಡಿ ಮೊದಲಾದ ಬೆಂಗಳೂರು ಬಿಜೆಪಿ ಎಂಎಲ್ಎಗಳು ಬಿಎಲ್ ಸಂತೋಷರನ್ನು ಭೇಟಿ ಮಾಡಿದಾಗ “ಇದು ಪಕ್ಷದ ನಿರ್ಧಾರ, ನಿಮ್ಮ ಇಷ್ಟಕಷ್ಟಗಳನ್ನು ಬದಿಗಿರಿಸಿ ಅಭ್ಯರ್ಥಿ ಪರ ಕೆಲಸ ಮಾಡಿ, ಇಲ್ಲವೇ ಶಿಸ್ತು ಕ್ರಮಕ್ಕೆ ಸಿದ್ಧರಾಗಿ” ಎಂದು ನೇರವಾಗಿ ಕುಟುಕಿದ್ದರು ಎನ್ನಲಾಗುತ್ತಿದೆ. ಅವರೆಲ್ಲ ನೆಪ ಮಾತ್ರಕ್ಕೆ ಸೂರ್ಯನ ಪರ ಕೆಲಸ ಮಾಡಿದ್ದು ಮಾತ್ರವಲ್ಲ, ಒಂದು ಹಂತದಲ್ಲಿ ಆರ್.ಅಶೋಕ್ “ಬಿಜೆಪಿ ರಾಜ್ಯಾಧ್ಯಕ್ಷನ ಸ್ಥಾನಕ್ಕೆ ನಾನೂ ಆಕಾಂಕ್ಷಿ” ಎನ್ನುವ ಮೂಲಕ ಯಡ್ಯೂರಪ್ಪರನ್ನು ಸೈಡ್ಲೈನ್ ಮಾಡಿ ಸಿಎಂ ಆಗುವ ಹವಣಿಕೆಯಲ್ಲಿರುವ ಸಂತೋಷರಿಗೆ ಟಾಂಗ್ ಕೊಟ್ಟಿದ್ದರು.

ಅಂದಹಾಗೆ, ಬಿಬಿಎಂಪಿ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳನ್ನು ಗೆದ್ದ ಹೊರತಾಗಿಯೂ ಅಧಿಕಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆ ಹೆಣೆಯುವಲ್ಲಿ ಸೋತಿದ್ದ ಆರ್.ಅಶೋಕರನ್ನೇ ಗುರಿಯಾಗಿಸಿಕೊಂಡು ಸಂತೋಷ್ “ತಂಡಸ್ಫೂರ್ತಿ ಇಲ್ಲದವರು ಹಾಗೂ ಗೆಲುವಿನ ಕೀರ್ತಿಯನ್ನು ಹಂಚಿಕೊಳ್ಳಲು ಸಿದ್ಧರಿಲ್ಲದವರು ಎಂದಿಗೂ ಗೆಲುವು ಕಾಣಲಾರರು” ಎಂಬ ಚಾಣಕ್ಯ ನುಡಿಯನ್ನು ಟ್ವೀಟ್ ಮಾಡಿ ಕುಟುಕಿದ್ದರು. ಆಗ ಅಶೋಕ್ ಬೆಂಬಲಕ್ಕೆ ಬಂದದ್ದು ಯಡ್ಯೂರಪ್ಪ. “ಬಿಬಿಎಂಪಿ ಮೇಯರ್ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾದದ್ದಕ್ಕೆ ಅಶೋಕ್ ಕಾರಣರಲ್ಲ. ಕೇಂದ್ರಮಂತ್ರಿ ಸದಾನಂದ ಗೌಡ, ನಿರ್ಮಲಾ ಸೀತಾರಾಮನ್ ಮತದಾನಕ್ಕೆ ಲಭ್ಯವಿದ್ದರೆ ಕಥೆಯೇ ಬೇರೆ ಇರುತ್ತಿತ್ತು. ಅಶೋಕ್ ಮೇಲೆ ಅಪವಾದ ಹೊರಿಸುವುದು ಸರಿ ಕಾಣುವುದಿಲ್ಲ” ಎಂದಿದ್ದ ಯಡ್ಯೂರಪ್ಪನವರು ಪರೋಕ್ಷವಾಗಿ ಸಂತೋಷರಿಗೆ ಬಿಸಿ ಮುಟ್ಟಿಸಿದ್ದರು.

ಇಲ್ಲಿ ಒಂದು ಸೂಕ್ಷ್ಮವನ್ನು ಗಮನಿಸಬೇಕು. ಬಿಜೆಪಿ ತೊರೆದು ಕೆಜೆಪಿ ಕಟ್ಟಿಕೊಂಡು, ಮತ್ತೆ ಅಲ್ಲಿಂದ ವಾಪಾಸ್ ಬಿಜೆಪಿಗೆ ಬಂದ ನಂತರ ಯಡಿಯೂರಪ್ಪನವರಿಗೆ ಈ ಮೊದಲಿದ್ದ ಬಲ ಉಳಿದಿರಲಿಲ್ಲ. ಸಿಟಿ ರವಿ, ಈಶ್ವರಪ್ಪ, ಸೊಗಡು ಶಿವಣ್ಣ, ಎಸ್.ಎ.ರವೀಂದ್ರನಾಥರಂತಹ ಪ್ರಬಲ ದುಶ್ಮನಿಗಳ ಮಾತು ಒತ್ತಟ್ಟಿಗಿರಲಿ ಒಂದು ಕಾಲಕ್ಕೆ ಯಡ್ಯೂರಪ್ಪನವರ ಅಪ್ಪಟ ಬೆಂಬಲಿಗರಾಗಿದ್ದ ಆರ್.ಅಶೋಕ್, ವಿ.ಸೋಮಣ್ಣ, ಬಸನಗೌಡ ಯತ್ನಾಳ್ ಥರದವರೇ ಯಡ್ಯೂರಪ್ಪನವರಿಂದ ಒಂದುಮಟ್ಟಿಗಿನ ಅಂತರ ಕಾಯ್ದುಕೊಂಡಿದ್ದರು. ಯಡಿಯೂರಪ್ಪನವರ ಮುಂಗೋಪ, ಶೋಭಾ ಕರಂದ್ಲಾಜೆಯವರಿಗೆ ಅತಿಯೆನ್ನಿಸುವಷ್ಟು ಮನ್ನಣೆ, ಸರ್ವಾಧಿಕಾರಿ ಧೋರಣೆಗಳಿಂದಾಗಿ ಇವರೆಲ್ಲ ಯಡಿಯೂರಪ್ಪನವರಿಂದ ದೂರವೇ ಉಳಿದಿದ್ದರು. ಆದರೆ ಏಕ್.ಧಂ ವಿರೋಧಿಗಳಾಗಿರಲಿಲ್ಲ ಅಷ್ಟೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಯಲ್ಲಿದ್ದರು ಕಳೆದ ವರ್ಷ ನಡೆದ ರಾಜ್ಯ ಅಸೆಂಬ್ಲಿ ಚುನಾವಣೆಯ ನೆಪದಲ್ಲಿ ರಾಜ್ಯ ರಾಜಕಾರಣಕ್ಕೆ ವಾಪಾಸಾದ ಬಿ.ಎಲ್.ಸಂತೋಷ್ ಯಡ್ಯೂರಪ್ಪನವರ ಈ ಏಕಾಕಿತನವನ್ನು ಸೂಕ್ಷ್ಮವಾಗಿ ಗಮನಿಸಿ, ತನಗಿರುವ ಸಂಘ ಪರಿವಾರದ ಪ್ರಭಾವ ಬಳಸಿಕೊಂಡು ನಿಧಾನಕ್ಕೆ ತಂತ್ರಗಾರಿಕೆ ಹೆಣೆಯುತ್ತಾ ಬಂದಿದ್ದರು. ಆರೆಸೆಸ್ ಸೀನಿಯರ್ ಲೀಡರ್ ಮೈಚಾ ಜಯದೇವ್ ಅವರ ನಿಧನದ ನಂತರ ಸಂಘ ಪರಿವಾರದಲ್ಲಿ ತನ್ನ ಪರ ವಕಾಲತ್ತು ವಹಿಸವಂತ ನಾಯಕರು ಇರದ ಯಡ್ಯೂರಪ್ಪನವರು ಸಂತೋಷರ ತಂತ್ರಗಳಿಂದ ತತ್ತರಿಸುತ್ತಾ ಬಂದದ್ದು ಸುಳ್ಳಲ್ಲ.  ಆದರೆ ತೀರಾ ಇತ್ತೀಚೆಗೆ ಅಂದರೆ, ಮುಖ್ಯವಾಗಿ ಅನಂತ್ಕುಮಾರರ ನಿಧನದ ನಂತರ, ಸಂತೋಷರ ಆಟಗಳು ವೇಗ ಪಡೆದುಕೊಂಡವು. ಅಂದಹಾಗೆ, ಆರಂಭದಲ್ಲಿ ಯಡ್ಯೂರಪ್ಪನವರ ಆಪ್ತರಾಗಿದ್ದ ಸಂತೋಷರನ್ನು ಕಂಡರೆ ಅನಂತ್ಕುಮಾರರಿಗೆ ಅಷ್ಟಕ್ಕಷ್ಟೆ. ಅದೇ ಕಾರಣಕ್ಕೆ ಆರೆಸೆಸ್ ವಲಯದಲ್ಲಿ ಸಂತೋಷರಷ್ಟೇ ಪ್ರಭಾವ ಹೊಂದಿದ್ದ ಅನಂತ್ಕುಮಾರ್, ಈ ಸ್ವಜಾತಿ ಪ್ರತಿಸ್ಪರ್ಧಿ ಮಿತಿಮೀರಿ ಬೆಳೆಯುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಹಾಗಾಗಿ ಹೆಚ್ಚೆಂದರೆ ಯಡ್ಯೂರಪ್ಪರ ಬಲ ಕುಗ್ಗಿಸುವುದಕ್ಕಷ್ಟೇ ಸಂತೋಷರ ತಂತ್ರಗಳು ಸೀಮಿತವಾಗಿದ್ದವು.

ಆದರೆ ಅನಂತ್ಕುಮಾರರ ಅನುಪಸ್ಥಿತಿಯ ಈ ಹೊತ್ತಿನಲ್ಲಿ ಸಂತೋಷರವರು ಹೀಗೆ ಅಗ್ರೆಸಿವ್ ಆಗಿ ಬೆಳೆಯುತ್ತಿರೋದು ಮತ್ತು ಕೋರ್ ಕಮಿಟಿಯನ್ನೂ ಧಿಕ್ಕರಿಸಿ ತಮ್ಮ ಬೆಂಬಲಿಗರನ್ನು ಬೆಳೆಸುತ್ತಿರೋದು ಪಕ್ಷದೊಳಗೆ ದೊಡ್ಡ ಬದಲಾವಣೆಗೆ ಕಾರಣವಾಗಿದೆ. ಎಷ್ಟರಮಟ್ಟಿಗೆಂದರೆ ಈ ಮೊದಲು ಯಡ್ಯೂರಪ್ಪನವರನ್ನು `ಸರ್ವಾಧಿಕಾರಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ತೆಗೆದುಕೊಳ್ತಾರೆ’ ಎನ್ನುತ್ತಿದ್ದ ಸೆಕೆಂಡ್ ಲೈನ್ ಲೀಡರುಗಳಿಗೆಲ್ಲ ಈಗ ಅದೇ ಯಡ್ಯೂರಪ್ಪನವರೇ ವಾಸಿ ಎನ್ನಿಸಲು ಶುರುವಾಗಿದೆ. ಹಾಗಾಗಿ ಅವರೆಲ್ಲ ಮತ್ತೆ ಯಡ್ಯೂರಪ್ಪನವರತ್ತ ದೃವೀಕರಣಗೊಳ್ಳಲು ಶುರು ಮಾಡಿದ್ದಾರೆ. ಇಲ್ಲದೇ ಹೋಗಿದ್ದರೆ ಯಡ್ಯೂರಪ್ಪನವರಿಂದ ತಟಸ್ಥ ಅಂತರ ಕಾಯ್ದುಕೊಂಡಿದ್ದ ಅಶೋಕ್ ಮತ್ತೆ ಯಡ್ಯೂರಪ್ಪನ ಪೂರ್ಣಕಾಲಿಕ ಬಣಗಾರನಾಗುತ್ತಿರಲಿಲ್ಲ, ಲಿಂಗಾಯತ ಲೀಡರುಗಿರಿಗಾಗಿ ಯಡ್ಯೂರಪ್ಪನವರನ್ನು ಹೀನಾಮಾನ ದ್ವೇಷಿಸಿ ಬಿಜೆಪಿ ಬಿಟ್ಟು ಜೆಡಿಎಸ್ಗೆ ಹೋಗಿ  ಬಂದಿದ್ದ ಬಸನಗೌಡ ಯತ್ನಾಳ್ ಯಡ್ಯೂರಪ್ಪನ ಅಪ್ಪಟ ಮರುಅಭಿಮಾನಿಯಾಗುತ್ತಿರಲಿಲ್ಲ. ಇಂಥಾ ದೃವೀಕರಣಕ್ಕೆ ವೇಗ ಸಿಕ್ಕಿದ್ದು ತೇಜಸ್ವಿನಿ ಅನಂತ್ಕುಮಾರ್ ಪ್ರಕರಣದಿಂದ.

`ಡಿ.ಎನ್.ಎ ನೆಪ ಹೇಳಿ ತೇಜಸ್ವಿನಿಯವರಿಗೆ ಟಿಕೆಟ್ ತಪ್ಪಿಸಿದ್ದ ಸಂತೋಷ್, ಚಿಂಚೋಳಿ ಉಪ ಚುನಾವಣೆಗೆ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್ಗೆ ಟಿಕೇಟ್ ಕೊಟ್ಟಾಗ ಯಾಕೆ ಸುಮ್ಮನಿದ್ದಾರೆ’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಈ ಬಣ ಸಂತೋಷರ ಮೇಲೆ ಮುಗಿಬೀಳಲು ತಯಾರಿ ನಡೆಸಿದ ವರ್ತಮಾನ ತಿಳಿದಿದ್ದರಿಂದಲೇ ಅವರು ಅವತ್ತು `ಬರಲಿ ಬಿಡಿ ನೋಡಿಕೊಳ್ಳೋಣ’ ಎಂಬರ್ಥದಲ್ಲಿ ಮಾತಾಡಿರೋದು.

ರೋಚಕ ಸಂಗತಿ ಇರೋದೆ ಇಲ್ಲಿ. ಬಿಜೆಪಿ ಒಂದು ಸ್ವತಂತ್ರ ರಾಜಕೀಯ ಪಕ್ಷವಾದರು ಆರೆಸೆಸ್ಸಿನ ಕೈಗೊಂಬೆ ಅನ್ನೋದ್ರಲ್ಲಿ ಅನುಮಾನವಿಲ್ಲ. ಆರೆಸೆಸ್ಸಿನಲ್ಲಿ ಬ್ರಾಹ್ಮಣರಿಗೆ ಇರುವ ಮಾನ್ಯತೆ, ಉಳಿದ ಬೇರಾವ ಜಾತಿಯವರಿಗೂ ಇಲ್ಲ. ಯಡ್ಯೂರಪ್ಪನವರ ಪರ ಎಷ್ಟೇ ನಾಯಕರು ದೃವೀಕರಣಗೊಳ್ಳಬಹುದು, ಆದರೆ ಅವೆಲ್ಲವೂ ಆರೆಸೆಸ್ ಫರ್ಮಾನಿನ ಮುಂದೆ ಠುಸ್ ಆಗಿಬಿಡುತ್ತವೆ. ಯಡ್ಯೂರಪ್ಪನವರು ಸಿಎಂ ಆಗಿ ಅಧಿಕಾರದಲ್ಲಿದ್ದಾಗಲೇ, ಸುಮಾರು ಅರವತ್ತಕ್ಕು ಹೆಚ್ಚು ಎಂಎಲ್ಎಗಳನ್ನು ರೆಸಾರ್ಟ್.ನಲ್ಲಿಟ್ಟುಕೊಂಡು ಆಟ ಆಡಲು ನೋಡಿದರೂ, ದಿಲ್ಲಿಯಿಂದ ಬಂದಿದ್ದ ಕೇಂದ್ರ ಮಂತ್ರಿಗಳಿಗೆ ತನ್ನ ಬೆಂಬಲಿಗ ಶಾಸಕರಿಂದ ಮುತ್ತಿಗೆ ಹಾಕಿಸುವ ಪ್ರಯತ್ನ ನಡೆಸಿದರೂ ಕೊನೆಗವರು ಕುರ್ಚಿಯಿಂದ ಕೆಳಗಿಳಿಯುವುದರಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಮೇಲ್ನೋಟಕ್ಕೆ ಕೋರ್ಟ್ ಕೇಸಿನ ಕಾರಣಕ್ಕೆ ಅವರನ್ನು ಕೆಳಗಿಳಿಸಿದಂತೆ ಕಂಡಬಂದರೂ ಆನಂತರದಲ್ಲಿ ಯಡ್ಯೂರಪ್ಪನವರ ಪ್ರಭಾವ ಪಕ್ಷದ ಲೀಡರುಗಳ ಮೇಲೆ ಕ್ರಮೇಣ ಕುಗ್ಗುವಂತೆ ಮಾಡಿದ್ದು, ಯಡ್ಯೂರಪ್ಪನವರೇ ಸಿಎಂ ಆಗಿ ನೇಮಿಸಿದ್ದ ಸದಾನಂದಗೌಡರು ಅವರ ವಿರುದ್ಧ ತಿರುಗಿಬಿದ್ದದ್ದು, ಜೈಲಿನಿಂದ ವಾಪಾಸು ಬಂದ ನಂತರ ಪಕ್ಷದೊಳಗೆ ಇರಲಾಗದಂತ ವಾತಾವರಣ ಸೃಷ್ಟಿಯಾದದ್ದು ಎಲ್ಲವೂ ಆರೆಸೆಸ್ಸಿನ ತಂತ್ರಗಾರಿಕೆಗಳಿಂದ. ಅವುಗಳನ್ನು ಎಕ್ಸಿಕ್ಯೂಟ್ ಮಾಡಿದ್ದು ಇದೇ ಸಂತೋಷ್`ಜಿ’.

ಈಗ ಯಡ್ಯೂರಪ್ಪನವರಿಗೆ ಅಧಿಕಾರವೂ ಇಲ್ಲ, ಆರೆಸೆಸ್ಸಿನಲ್ಲಿ ತನ್ನಪರ ವಕಾಲತ್ತು ವಹಿಸುತ್ತಿದ್ದ ಜೈದೇವ್ ತರಹದ ಹಿರಿಯರೂ ಇಲ್ಲ. ಹಾಗಾಗಿ ಯಾರೆಷ್ಟೇ ಯಡ್ಯೂರಪ್ಪ ಪರ ದೃವೀಕರಣಗೊಂಡರು ಸ್ಟ್ರಾಟಜಿಕಲ್ ಫರ್ಮಾನುಗಳಿಂದ ಅವರನ್ನೆಲ್ಲ ನಿಶ್ಯಸ್ತ್ರಗೊಳಿಸುವ ವಿಶ್ವಾಸ ಸಂತೋಷರಿಗೆ ಇದ್ದಂತಿದೆ. ಹಾಗಂತ ಯಡ್ಯೂರಪ್ಪ ಕೂಡಾ ಸುಮ್ಮನೇ ಕೂರುವ ಜಾಯಮಾನದವರಲ್ಲ.

ಈ ಆಂತರಿಕ ಭಿನ್ನಮತ ದಿನದಿಂದ ದಿನಕ್ಕೆ ರಾಜ್ಯ ಬಿಜೆಪಿಯನ್ನು ಕಾದ ಕುಲುಮೆಯಾಗಿಸುತ್ತಿದೆ. ಇಂಥಾ ಬೇಗುದಿಯನ್ನು ಮುಚ್ಚಿಹಾಕಲೆಂದೇ `ಆಪರೇಷನ್ ಕಮಲ’, `ಮೈತ್ರಿ ಸರ್ಕಾರದ ಪತನ’ದಂತಹ ಹೇಳಿಕೆಗಳನ್ನು ಬಿಜೆಪಿ ನಾಯಕರು ಹರಿಬಿಡುತ್ತಿದ್ದಾರೆ. ಅವರಿಗೆ ನಿಷ್ಠರಾಗಿರುವ ಮೀಡಿಯಾಗಳು ಕೂಡಾ `ಇಷ್ಟೆಲ್ಲಾ ಕಚ್ಚಾಟಗಳಿರುವ ಬಿಜೆಪಿ, ಇರುವ ಸರ್ಕಾರವನ್ನು ಕೆಡವಿ ಒಂದು ಸ್ಥಿರ ಸರ್ಕಾರವನ್ನು ಕೊಡಬಲ್ಲದೇ?’ ಎಂಬ ಕಾಮನ್.ಸೆನ್ಸ್ ಪ್ರಶ್ನೆಯನ್ನೂ ಕೇಳದೆ ಅವರು ಹೇಳಿದ ದಿಕ್ಕಿನತ್ತ ಕ್ಯಾಮೆರಾ ತಿರುಗಿಸಿಕೊಂಡು ಕೂತಿವೆ……….

 

ರಿಲೇಟೆಡ್ ಸ್ಟೋರಿ: ಇದನ್ನೂ ಓದಿ…..

ಯಡ್ಯೂರಪ್ಪಗೆ ಅಡ್ಡಗಾಲು ಹಾಕುವ ಸಂತೋಷ್`ಜಿ’ ತಂತ್ರ ಅವರಿಗೇ ಮುಳುವಾಯಿತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...