Homeಅಂಕಣಗಳುರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

ರಾಮ, ಅಯ್ಯಪ್ಪನ ಹೆಸರಲ್ಲಿ ಬಿಜೆಪಿಯ ಕುತಂತ್ರಗಳು

- Advertisement -
- Advertisement -

ಎಚ್.ಎಸ್.ದೊರೆಸ್ವಾಮಿ |

ಬಿಜೆಪಿಯ ಬತ್ತಳಿಕೆಯಲ್ಲಿದ್ದ ಎಲ್ಲಾ ಆಯುಧಗಳು ಠುಸ್ಸೆಂದಿವೆ. ಅದರಿಂದ ಮಧ್ಯಪ್ರದೇಶ, ರಾಜಸ್ಥಾನ ಶಾಸನಸಭೆ ಚುನಾವಣೆಗಳನ್ನು ಎದುರಿಸಲು ಬಿಜೆಪಿಗೆ ನಡುಕ ಹುಟ್ಟಿದೆ. ರಫೇಲ್ ಡೀಲ್, ನೋಟುಗಳ ಅಮಾನ್ಯೀಕರಣ, ಸ್ವಚ್ಛ ಭಾರತ, ಜನರ ಖಾತೆಗೆ ಹದಿನೈದು ಲಕ್ಷ ರೂಪಾಯಿ ಹಾಕುವುದು ಮುಂತಾದ ಮೋದಿಯ ಎಲ್ಲಾ ತಂತ್ರಗಾರಿಕೆಯೂ ವಿಫಲಗೊಂಡು ಮೋದಿ, ಷಾಗಳು ತತ್ತರಿಸ ಹತ್ತಿದ್ದಾರೆ. ಸೀಮಾಂದ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಎಲ್ಲ ವಿರೋಧ ಪಕ್ಷಗಳನ್ನು ಒಂದುಗೂಡಿಸಿ ಲೋಕಸಭೆಯ ಚುನಾವಣೆಯನ್ನು ಎದುರಿಸಲು ಭಾರಿ ಪ್ರಯತ್ನ ಮಾಡುತ್ತಿರುವುದೂ ಬಿಜೆಪಿಗೆ ಭಾರಿ ತಲೆನೋವಾಗಿದೆ. ಆದ್ದರಿಂದ ಮೋದಿ, ಷಾಗಳು ಚುನಾವಣೆ ಎದುರಿಸಲು ಹೊಸತಂತ್ರ ರೂಪಿಸಲು ಹೆಣಗುತ್ತಿದ್ದಾರೆ.

ಅವರಿಗೆ ರಾಮಚಂದ್ರ ಭೂಮಿಯ ನೆನಪಾಗಿ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಕೂಡಲೇ ಕಟ್ಟುವ ಮಾತನ್ನಾರಂಭಿಸಿದ್ದಾರೆ. ವಿಶ್ವಹಿಂದೂ ಪರಿಷತ್ ಮುಂತಾದ ಹಿಂದೂ ಮತಾಂಧ ಸಂಸ್ಥೆಗಳ ನೆರವಂತೂ ಬಿಜೆಪಿಗೆ ಇದ್ದೇ ಇದೆ. ಆರೆಸ್ಸೆಸ್ ಏರ್ಪಡಿಸಿದ್ದ ಬೈಠಕ್‍ಗೆ ಬಿಜೆಪಿ ಅಧ್ಯಕ್ಷ ಷಾ ಹೋಗಿ ಅಯೋಧ್ಯೆಯಲ್ಲಿ ಒಂದು ಗದ್ದಲ ಎಬ್ಬಿಸುವ ಯೋಜನೆಗೆ ಚಾಲನೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲೇಬೇಕೆಂಬ ಉದ್ದೇಶ ಬಿಜೆಪಿಗಂತೂ ಇಲ್ಲ. ರಾಮಮಂದಿರ ನಿರ್ಮಾಣದ ಪ್ರಶ್ನೆಯನ್ನು ಜೀವಂತ ಇಟ್ಟು ಮತ ಕೀಳುವ ತಂತ್ರಗಾರಿಕೆ ಬಿಜೆಪಿಯದ್ದು. ಒಂದೊಮ್ಮೆ ರಾಮಚಂದ್ರನ ದೇವಾಲಯವನ್ನು ಕಟ್ಟಿಬಿಟ್ಟರೆ ಚುನಾವಣೆ ಎದುರಾದಾಗ ಅಯೋಧ್ಯೆ ಟ್ರಂಪ್‍ಕಾರ್ಡ್ ಬಳಸಲು ಎಲ್ಲಿ ಸಾಧ್ಯವಾದೀತು? ರಾಮ ಮಂದಿರದ ನೆಪದಲ್ಲಿ ಹಿಂದೂಗಳ ಮತಗಳನ್ನು ಕೀಳುತ್ತಾ ಹೋಗುವುದು ಬಿಜೆಪಿಯ ಹುನ್ನಾರ. ಇದಕ್ಕಾಗಿ ಅಯೋಧ್ಯೆಯಲ್ಲಿ ಒಂದು ಲಕ್ಷ ಹಿಂದೂಗಳ ಸಮಾವೇಶವನ್ನು ನಡೆಸಿದ್ದಾರೆ. ಮೋದಿಗೆ ಸಾಥ್ ಕೊಡಲು ಉತ್ತರ ಪ್ರದೇಶದ ಸನ್ಯಾಸದ ಛದ್ಮ ವೇಷಧಾರಿ ಮುಖ್ಯಮಂತ್ರಿ ಆದಿತ್ಯನಾಥ್ ಇದ್ದೇ ಇದ್ದಾನೆ. ಉತ್ತರಪ್ರದೇಶ ಸರ್ಕಾರ ಈ ಮಾರೀಚನ ಕೈಯಲ್ಲಿರುವುದರಿಂದ ಬಿಜೆಪಿ ರಕ್ಷಣೆಗೆ ಬೇಕಾದ ಎಲ್ಲ ಕ್ರಮಗಳೂ ಸುಲಭ. ಅಯೋಧ್ಯೆಯಲ್ಲಿ ತಲೆತಲಾಂತರದಿಂದ ನೆಲೆಸಿರುವ ಮುಸ್ಲಿಂ ಜನಾಂಗಕ್ಕೆ ತಮಗೇನು ಕೇಡು ಕಾದಿದೆಯೋ ಎಂಬ ಆತಂಕ ಉಂಟಾಗಿದೆ. ಈ ಹಿಂದೂ ಮತಾಂಧರ ಸಮಾವೇಶದಲ್ಲಿ ಎಷ್ಟು ಹೆಣಗಳು ಬೀಳುವುದೋ ಎಂಬ ಆತಂಕ ಅಲ್ಲಿಯ ಮಹಮದೀಯರದಾಗಿದೆ. ಆದರೂ ಸಾಮೂಹಿಕವಾಗಿ ಸಮಾವೇಶ ನಡೆಯುವ ಕಾಲದಲ್ಲಿ ಅಯೋಧ್ಯೆ ಬಿಟ್ಟುಹೋಗುವುದಾಗಿ ಘೋಷಿಸಿದ್ದಾರೆ.

ಅಯೋಧ್ಯೆಯಲ್ಲಿ ಅನೇಕ ಕಾಲದಿಂದ ಹಿಂದೂ ಮುಸ್ಲಿಮರು ಅನ್ಯೋನ್ಯವಾಗಿ ಬಾಳುತ್ತಿದ್ದಾರೆ. ಅಯೋಧ್ಯೆಯ ಬಾಬ್ರಿ ಮಸೀದಿಯನ್ನು ಅಡ್ವಾಣಿಯವರ ನೇತೃತ್ವದಲ್ಲಿ ಕರಸೇವಕರು ಕೆಡಿಸಿದ ಸಂದರ್ಭ ಹೊರತುಪಡಿಸಿ, ಅದಕ್ಕೆ ಹಿಂದಿನ ದಿನಗಳಲ್ಲಾಗಲಿ, ಅನಂತರದ ದಿನಗಳಲ್ಲಾಗಲಿ ಅಯೋಧ್ಯೆಯಲ್ಲಿ ಕೋಮುಗಲಭೆ ಆಗಿಲ್ಲ. ಲೋಕಸಭೆ ಚುನಾವಣೆಯ ನಿಮಿತ್ತ ಈಗ ಮತ್ತೆ ಅಯೋಧ್ಯೆಯಲ್ಲಿ ಗದ್ದಲ ಎಬ್ಬಿಸಿ ಗೊಂದಲ ಉಂಟುಮಾಡಿ ಚುನಾವಣೆಯಲ್ಲಿ ಗೆದ್ದು ಬರುವ ಸಂಚನ್ನು ರೂಪಿಸಲಾಗಿದೆ.

ಎರಡನೆಯದಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಾಲಯದ ಸಮಸ್ಯೆಯೊಂದನ್ನು ಬಿಜೆಪಿ ಹುಟ್ಟುಹಾಕಿ ಅದರ ದುರ್ಲಾಭ ಪಡೆಯುವ ಹುನ್ನಾರವೂ ರೂಪುಗೊಳ್ಳುತ್ತಿದೆ. ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಸ್ತ್ರೀಯರಿಗೂ ಪ್ರವೇಶ ಮಾಡುವ ಹಕ್ಕಿದೆಯೆಂದು ಸರ್ವೋಚ್ಛ ನ್ಯಾಯಾಲಯ ತೀರ್ಪಿತ್ತಿದೆ. ದೇವಸ್ಥಾನದ ಮುಖ್ಯ ಅರ್ಚಕರು, ಆಡಳಿತ ಮಂಡಳಿಯವರು ಸರ್ವೋಚ್ಛ ನ್ಯಾಯಾಲಯದ ಈ ತೀರ್ಪನ್ನು ಪರಿಶೀಲಿಸುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿವೆ. ಕೇರಳ ಸರ್ಕಾರಕ್ಕೆ ಈಗಂತೂ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಅನುಷ್ಠಾನಗೊಳಿಸದೆ ಬೇರೆದಾರಿ ಇಲ್ಲವಾಗಿದೆ. ಭಾರತೀಯ ಜನತಾ ಪಕ್ಷಕ್ಕೆ ಈಗ ಮೋದಿಯೇ ಆದರ ಸರ್ವಾಧಿಕಾರಿ. ‘any stick is good to beat’ ಇದು ಮೋದಿಯ ನಿಲುವು. ಹೀಗಾಗಿ ಬೇಜವಾಬ್ದಾರಿಯ ಪ್ರಧಾನಮಂತ್ರಿ ಮೋದಿ ಚುನಾವಣೆ ದೃಷ್ಟಿಯಿಂದ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ನಡೆದುಕೊಳ್ಳಲು ಹೊರಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕೇರಳೀಯ ಹಿಂದೂಗಳ ಮತಗಳನ್ನೆಲ್ಲ ತನ್ನದಾಗಿಸಿಕೊಳ್ಳುವ ಏಕೈಕ ಉದ್ದೇಶದಿಂದ ಅಯ್ಯಪ್ಪ ಭಕ್ತರನ್ನು ಕೇರಳ ಸರ್ಕಾರದ ವಿರುದ್ಧ ಎತ್ತಿ ಕಟ್ಟಲು ಸಂಚು ಮಾಡಲಾಗಿದೆ. ಮಹಿಳೆಯರಿಗೂ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ದೊರೆಯಬೇಕು ಎಂಬುದು ಹಿಂದೂಗಳೆಲ್ಲರ ಅಭಿಮತವಾಗಿದೆ. ಹಿಂದೂ ಮತಾಂಧರು ಇದನ್ನು ಅರ್ಥಮಾಡಿಕೊಳ್ಳಬೇಕು. ಚುನಾವಣೆ ಗೆಲ್ಲುವುದಕ್ಕೆ ಇದು ಸಾಧನ ಎಂದು ಸರ್ವಾಧಿಕಾರಿ ಮೋದಿ ನಂಬಿದ್ದರೆ, ಬಿಜೆಪಿಯೇತರ ಹಿಂದೂಗಳು ದೇವಾಲಯ ಪ್ರವೇಶದ ವಿಚಾರದಲ್ಲಿ ಸ್ತ್ರೀ-ಪುರುಷರ ಭೇದ ಮಾಡಬಾರದೆಂದು ಘೋಷಣೆ ಮಾಡುತ್ತಾರೆ.

ಮೋದಿ ಅಮಿತ್ ಷಾಗಳಿಗೆ ಅಂತಿಮ ತೀರ್ಪು ಬರುವವರೆಗೂ ಕಾಯುವ ವ್ಯವಧಾನ ಇಲ್ಲ. ಮತದಾರರ ಮನಸ್ಸುಗಳನ್ನು ಕೆಡಿಸಿ, ಮತ ಕಸಿಯುವ ಏಕೈಕ ಗುರಿಯನ್ನೇ ಹೊಂದಿರುವ ಅವರು ಕಿವಿಗೆ ಕಣಜ ಹೊಕ್ಕವರಂತೆ ನಡೆದುಕೊಳ್ಳುತ್ತಿದ್ದಾರೆ. ಶಬರಿಮಲೆಗೆ ಹರಕೆ ಹೊತ್ತು ಹೋಗುವ ಜನ ದಕ್ಷಿಣ ರಾಜ್ಯಗಳಲ್ಲಂತೂ ತುಂಬ ಇದ್ದಾರೆ. ಇವರಿರುವ ಸ್ಥಳಗಳಲ್ಲಿ ಅಯ್ಯಪ್ಪನ ದೇವಾಲಯಗಳನ್ನೂ ಕಟ್ಟಲಾಗಿದೆ. ಅದರ ಮೇಲ್ವಿಚಾರಣೆಗೆ ಇರುವವರನ್ನೆಲ್ಲಾ ಕರೆದು ಸಭೆ ಮಾಡಿ ಅಯ್ಯಪ್ಪ ಭಕ್ತರ ಎಲ್ಲ ಓಟನ್ನೂ ನಮಗೆ ಹಾಕಿಸಿ ಎಂದು ಕೇಳುವ ಪ್ರಸ್ತಾಪವನ್ನು ಮೋದಿ, ಷಾ ಜೋಡಿ ಈಗಾಗಲೇ ಮಾಡಿದೆ. ಈ ಮುಗ್ಧ ಭಕ್ತರ ಧಾರ್ಮಿಕ ಭಾವನೆಯನ್ನು ಕೆರಳಿಸಿ ಅವರಲ್ಲಿ ವಿಷ ತುಂಬಿ ಅವರ ಮತಗಳನ್ನೆಲ್ಲ ಕಸಿಯುವ ತಂತ್ರಗಾರಿಕೆಗೆ ಈಗಾಗಲೇ ಕೈಹಾಕಿದ್ದಾರೆ.

ತಮ್ಮದೇ ಪಕ್ಷ ಇಡೀ ದೇಶದಲ್ಲಿ ಮತ್ತು ಅಯೋಧ್ಯೆ ವಿವಾದವಿರುವ ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದರು ಇಷ್ಟು ದಿನ ತೆಪ್ಪಗಿದ್ದು ಚುನಾವಣೆಯ ಹೊಸ್ತಿಲಲ್ಲಿ ಅಯೋಧ್ಯೆ, ಅಯ್ಯಪ್ಪರನ್ನು ಭಜಿಸುತ್ತಿರುವ ಬಿಜೆಪಿಯವರ ಈ ಎರಡೂ ಹುನ್ನಾರಗಳನ್ನು ಜನರು ಅರ್ಥಮಾಡಿಕೊಳ್ಳಬೇಕಿದೆ. ಮೋದಿ-ಷಾ-ಆರೆಸ್ಸೆಸ್, ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೇಗೆ ಈ ಮುಗ್ಧ ಜನರನ್ನು ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮೆಲ್ಲರ ಮೇಲಿರುವ ಹೊಣೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...