Homeಚಳವಳಿಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ....

ಅಮೃತಭೂಮಿಯಲ್ಲಿ ಬಿತ್ತಿದ ಬೀಜಗಳು  ನಾಡೆಲ್ಲಾ ಪಸರಿಸಲಿ….

- Advertisement -
ರೈತ ಚಳವಳಿಯ ಪುನಶ್ಚೇತನ ಆಗಬೇಕೆಂದರೆ ಯುವಜನರು ದೊಡ್ಡ ಪ್ರಮಾಣದಲ್ಲಿ ಸಂಘಟನೆಯೊಳಕ್ಕೂ ಬರಬೇಕು; ರೈತ ಚಳವಳಿಯೊಳಕ್ಕೂ ಬರಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘವು ನಡೆಸಿದ ಆತ್ಮಾವಲೋಕನವು ಹೀಗಿತ್ತು. ರೈತ ಚಳವಳಿಗೆ ಬಂದ ಹೊಸಬರಿಗೆ ರೈತ ಸಂಘದ ಮೂಲ ಸಿದ್ಧಾಂತಗಳನ್ನು ಹೇಳಿಕೊಡುವ ಕೆಲಸ ನಡೆಯಲಿಲ್ಲ. ಹಾಗಾಗಿಯೇ ಎಂಬತ್ತರ ದಶಕದ ತಲೆಮಾರಿಗಿದ್ದ ಸೈದ್ಧಾಂತಿಕ ಸ್ಪಷ್ಟತೆ ನಂತರದ ದಶಕಗಳಲ್ಲಿ ಬಂದ ತಲೆಮಾರುಗಳಲ್ಲಿ ಕಾಣಲಿಲ್ಲ. ವಿಚಾರದ ಮೇಲೆ ಕಟ್ಟುವ ಹೊಸ ತಲೆಮಾರಿನ ರೈತ ಚಳವಳಿ ಕೇವಲ ಸಂಘರ್ಷದ ಜೊತೆಗೆ ರಚನಾತ್ಮಕ ಕೆಲಸಗಳಲ್ಲಿಯೂ ತೊಡಗಿಸಿಕೊಳ್ಳಬೇಕೆಂಬುದು ಈ ಹೊತ್ತಿನ ತುರ್ತಾಗಿದೆ.
ಆ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಅಮೃತಭೂಮಿಯಲ್ಲಿ “ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು” ಎಂಬ ಮೂರು ದಿನಗಳ ಯುವ ರೈತರ ಅಧ್ಯಯನ ಶಿಬಿರ ನಡೆಸಲಾಯಿತು. ಕೃಷಿಗೆ ಅಂಟಿಕೊಂಡಿರುವ ರೋಗಗಳಿಗೆ ಪರಿಹಾರದ ಹುಡುಕಾಟ ಶಿಬಿರದಲ್ಲಿ ನಡೆದಿತ್ತು. ಭಾಗವಹಿಸಿದ್ದ ಸಕ್ರಿಯ ರೈತ ಯುವ ಕಾರ್ಯಕರ್ತರಲ್ಲಿ ಕೃಷಿಯನ್ನು ಪುನರ್ ಸ್ಥಾಪಿಸಲೇಬೇಕೆಂಬ ಹೊಸ ಕನಸು ಎದ್ದು ಕಾಣುತ್ತಿತ್ತು. ಇದಾಗಬೇಕಾದರೆ ಇಂದಿನ ಯುವ ಸಮೂಹ ವೈಚಾರಿಕ ಸ್ಪಷ್ಟತೆಯೊಂದಿಗೆ ಚಳವಳಿ ರೂಪಿಸಿದಲ್ಲಿ ಮಾತ್ರ ಸಾಧ್ಯ ಎಂಬ ಎಚ್ಚರದೊಂದಿಗೆ ಈ ಮೂರೂ ದಿನಗಳು ಕಳೆದವು.
ಪ್ರೊ.ನಂಜುಂಡಸ್ವಾಮಿ ಅವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ, ಸಸಿನೆಡುವುದರ ಮುಖಾಂತರ ಶಿಬಿರಕ್ಕೆ ಅಧಿಕೃತವಾಗಿ ಕೆ.ಟಿ.ಗಂಗಾದರ್‍ರವರು ಚಾಲನೆ ನೀಡಿದರು. ಚುಕ್ಕಿ ನಂಜುಂಡಸ್ವಾಮಿರವರು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಶಿಬಿರದ ಹಿಂದಿನ ಉದ್ದೇಶ ಮತ್ತು ಅಗತ್ಯತೆಯ ಕುರಿತು ಆಶಯ ನುಡಿಯನ್ನು ತಿಳಿಸಿದರು.
ಹಿರಿಯರಾದ ಕೆಸಿ ಬಸವರಾಜು, ಬಡಗಲಪುರ ನಾಗೇಂದ್ರ, ಚಾಮರಸ ಮಾಲೀ ಪಾಟೀಲ್ ರೈತ ಚಳವಳಿಯ ಇತಿಹಾಸದ ಕುರಿತು ಮಾತನಾಡಿದರು. ಅನಂತರ ಆಹಾರ ತಜ್ಞರಾದ  ಕೆ.ಸಿ ರಘುರವರು ಮಾತನಾಡಿ ಪ್ರಸ್ತುತ ಸರ್ಕಾರದ ನೀತಿಗಳು ದೇಶದ ಆರ್ಥಿಕ ನೀತಿಯನ್ನು ದಿವಾಳಿಯೆಡೆಗೆ ಕೊಂಡೊಯ್ಯುತ್ತಿವೆ. ಆದ್ದರಿಂದ ರೈತರು ವಲಯಾದಾರಿತ ಮತ್ತು ಪಾರಂಪರಿಕ ಕೃಷಿಯನ್ನು ಅನುಸರಿಸಿ, ಆಹಾರ ಸಾರ್ವಭೌಮತ್ವವನ್ನು ಹೇಗೆ ಹೊಂದಬಹುದೆಂದು ವಿವರಿಸಿದರು.
ಕೃಷಿಯಲ್ಲಿ ಮಹಿಳೆಯರು ಎನ್ನುವ ವಿಷಯದ ಕುರಿತು ಮಾತನಾಡುತ್ತಾ ಸಾಮಾಜಿಕ ಹೋರಾಟಗಾರ್ತಿ ಕವಿತ ಕುರಗಂಟಿ ಭಾರತದಲ್ಲಿ ಕೃಷಿ ಎಂದ ಕೂಡಲೆ ಮಹಿಳೆಯರು ಕೊಡುಗೆ ಪರಿಗಣನೆಗೆ ಬರುವುದೇ ಇಲ್ಲ. ರೈತನೆಂದರೆ ಪುರುಷ ಎಂಬ ಮನಸ್ಥಿತಿ ಬಹುತೇಕರದ್ದು ಭಾರತದ ಮಹಿಳೆ ಕೃಷಿಕರ ಬಗ್ಗೆಯೂ ಚರ್ಚೆಗಳು ನಡೆಯುವುದು ಅಗತ್ಯ ಮತ್ತು ಭಾರತ ಕೃಷಿ ನಿಂತಿರುವುದು ಮಹಿಳಾ ಕೃಷಿಕರ ಕೊಡುಗೆಯಿಂದ ಇನ್ನಾದರೂ ನಾವು ರೈತ ಮಹಿಳೆಯರ ಪಾತ್ರವನ್ನು  ಗುರುತಿಸಿ ಅವರಿಗೆ ಸಮಾನ ಹಕ್ಕುಗಳು ಹಾಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮುನ್ನಡೆಯಬೇಕು ಎಂದರು.
ರಾಸಾಯನಿಕ ಕೃಷಿ ಸೃಷ್ಟಿಸಿರುವ ದುರಂತಗಳು ಕೃಷಿ ಕ್ಷೇತ್ರಕ್ಕಿರುವ ಸವಾಲುಗಳು ಮತ್ತು ಅವುಗಳನ್ನು ಹಿಮ್ಮೆಟ್ಟಿಸಿ ನಾವು ಹೇಗೆ ಕೃಷಿಯಲ್ಲಿ ಪರ್ಯಾಯಗಳನ್ನು ಸೃಷ್ಟಿಸಿ ಸ್ವಾವಲಂಬನೆ ಸಾಧಿಸಬಹುದು ಎನ್ನುವುದರ ಕುರಿತು ಸುರೇಶ್ ಕೆ.ಪಿ ಅವರು ರೈತ ಸಂಘದ ಯುವ ಕೃಷಿಕರೊಂದಿಗೆ ಚರ್ಚೆ ನಡೆಸಿದರು.
ಇಂದಿನ ಕಾಲಘಟ್ಟಕ್ಕೆ ಹೊಸ ಆಶಯ ವಿಷಯಗಳೊಂದಿಗೆ ರಚನಾತ್ಮಕವಾಗಿ ಹೊಸ ತಲೆಮಾರಿನ ರೈತ ಚಳವಳಿಯನ್ನು ಹೇಗೆ ಕಟ್ಟಿಕೊಂಡು ಮುನ್ನಡೆಯಬೇಕು ಎನ್ನುವುದರ ಬಗ್ಗೆ ಕುರಿತು ಮಲ್ಲಿಗೆ ಸಿರಿಮನೆಯವರು ಯುವ ಕೃಷಿಕರೊಂದಿಗೆ ಸಂವಾದ ನಡೆಸಿದರು. ದೇಶದಲ್ಲಿ ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆ ಕುರಿತು ಮಾತನಾಡುತ್ತಾಮುತ್ತುರಾಜ್ ಅವರು  ಗ್ರಾಮೀಣ ಪ್ರದೇಶದಲ್ಲೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಗಳ ಬಗ್ಗೆ ಇಂದಿನ ಯುವಜನಾಂಗ  ಚಿಂತಿಸಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು. ಜನಶಕ್ತಿಯ ಡಾ.ವಾಸು ಹೊಸ ತಲೆಮಾರಿನ ರೈತ ಚಳವಳಿ ಕಟ್ಟಲು ನಾವೇನು ಮಾಡಬೇಕು ಎನ್ನುವುದರ ಕುರಿತು ಸವಿವರವಾಗಿ ಮಾತನಾಡುತ್ತಾ ಮುಂದಿನ ರೋಪುರೇಷೆಗಳನ್ನು ತಯಾರಿಸುವ ಕುರಿತು ಚರ್ಚೆ ನಡೆಸಿದರು.
ರೈತ ಸಂಘ ಉದಯವಾದ ಸಮಯದಲ್ಲಿ ರೈತ ಸಂಘಟನೆಯೊಳಗೆ ಸಾಂಸ್ಕೃತಿಕ ವಿಭಾಗ ತುಂಬಾ ಸಕ್ರಿಯವಾಗಿತ್ತು. ಅಂದು ಯುವ ರೈತ ಹೋರಾಟಗಾರರು ರಚಿಸಿದ ಅನೇಕ ಹಾಡುಗಳು ರೈತಸಂಘದೊಳಗೆ ಕ್ರಾಂತಿಯ ಕಿಚ್ಚನ್ನು ಹೆಚ್ಚಿಸಿದ್ದವು. ಈ ಗೀತೆಗಳು ಅಂದಿನ ಸಮಯದಲ್ಲಿ ರೈತ ಸಂಘದ ಅವಿಭಾಜ್ಯ ಅಂಗವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಮರೆಯಾಗಿದ ಅವನ್ನು ಮತ್ತೆ ನಮಗೆ ತಲುಪಿಸಿಕೊಡುವ ಕೆಲಸವನ್ನು ಹಿರಿಯರಾದ ಹಿ.ಶಿ.ರಾಮಚಂದ್ರಗೌಡರು ಶಿಬಿರದಲ್ಲಿ ಹಾಡು ಹಾಡಿಸುವ ಮೂಲಕ ಮಾಡಿದರು. ಶಿಬಿರದಲ್ಲಿ ಕುವೆಂಪು ಅವರ ರೈತಗೀತೆ -ನೇಗಿಲಯೋಗಿ,  ಮೈಲಾರಪ್ಪ ಸಗರ ಅವರು ಬರೆದಿರುವ ‘ನಮ್ಮ ಹಸಿರು ಬಾವುಟ’ ಹಾಗೂ ‘ಹಾರಿಸೋಣ ಕರ್ನಾಟಕ ರಾಜ್ಯ ರೈತ ಬಾವುಟ’ ಮತ್ತು ಹಿ.ಶಿ.ರಾಮಚಂದ್ರಗೌಡರ ‘ಬಾ ತಂಗಿ ಬಾರವ್ವ’, ‘ಕೂತಂಡವರ ಮಾತು ಕೇಳಿ’, ‘ಏನು ಮಾಡಿ ಏನು ಬಂತಣ್ಣ’ ಗೀತೆಗಳನ್ನು ಶಿಬಿರಾರ್ಥಿಗಳು  ಅಬ್ಯಾಸಿಸಿ ಹಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಕೈಗೊಂಡ ದೇಶ ನಿರ್ಮಾಣದ ನಿರ್ಣಯಗಳು:
– ರೈತ ಯುವ ವಿಭಾಗವನ್ನು ರಾಜ್ಯಾದ್ಯಂತ ಬಲವಾಗಿ ಮತ್ತು ಪರಿಣಾಮಕಾರಿಯಾಗಿ ಕಟ್ಟಲು ನಿರ್ಧರಿಸಲಾಗಿದೆ.
– ಆರು ತಿಂಗಳ ಕಾಲ ವ್ಯವಸ್ಥಿತ ತಯಾರಿ ನಡೆಸಿ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ತಂಡಗಳನ್ನು ಹಾಗೂ ಎಲ್ಲಾ ಜಿಲ್ಲೆಗಳಲ್ಲಿ ಹಂಗಾಮಿ ಸಮಿತಿಗಳನ್ನು ರಚಿಸುವುದು.
– ಆ ತಯಾರಿಯ ನಂತರ 2019 ಫೆಬ್ರವರಿ 13ರ ಪ್ರೋ.ಎಂ.ಡಿ.ಎನ್ ಜನ್ಮದಿನದಂದೂ ರಾಜ್ಯ ರೈತ ಸಂಘದ ಅಡಿಯಲ್ಲಿ ಅದರ ಅಂಗ ಸಂಘಟನೆಯಾಗಿ ಉದ್ಘಾಟಿಸುವುದು.
– ಹಂಗಾಮಿ ರಾಜ್ಯಸಮಿತಿಯನ್ನು ಆಯ್ಕೆಮಾಡಲಾಯಿತು.
– ಮೊದಲ ಹಂತದಲ್ಲಿ ಎಲ್ಲಾ ವಿಭಾಗಮಟ್ಟದಲ್ಲಿ ರಾಜ್ಯ ಶಿಬಿರದ ಮಾದರಿಯಲ್ಲಿ ಶಿಬಿರಗಳನ್ನು ಆಯೋಜಿಸುವುದು.
– ರಾಜ್ಯದ ವಿವಿಧ ಗ್ರಾಮಗಳಲ್ಲಿ ಉದ್ಯೋಗ ಸೃಷ್ಠಿಯ ಸಾಧ್ಯತೆಗಳು ಮತ್ತು ರಚನಾತ್ಮಕ ಕಾರ್ಯಕ್ರಮಗಳ ಸಾಧ್ಯತೆಗಳನ್ನು ಗುರುತಿಸಿ ಅದನ್ನು ಜಾರಿಮಾಡಲು ಬೇಕಾದ ತಯಾರಿಯನ್ನು ನಡೆಸುವುದು.
– ಗ್ರಾಮೀಣ ಭಾಗದ ಯುವತಿಯರು ಹಾಗೂ ಯುವಕರನ್ನು ಸಂಘಟಿಸುವುದಲ್ಲದೆ ರಾಜ್ಯದ ನಗರಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಆಸಕ್ತರು ಪರಿಣಿತರು ಮತ್ತು ಸಂಘಟನೆಗಳನ್ನು ನಮ್ಮ ಬಳಗವಾಗಿ ಒಳಗೊಳ್ಳುವ ಪ್ರಯತ್ನ ಮಾಡಲಾಗುವುದು.
– ನವಾಜ್ ಮತ್ತು ಮಹೇಶ್ 
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....