Homeಅಂಕಣಗಳುಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

ಸಂಪಾದಕೀಯ: ಕಿಸಾನ್ ಮುಕ್ತಿ ಮಾರ್ಚ್ ಆಂದೋಲನದ ಪಾಠಗಳು

- Advertisement -
- Advertisement -

ನವೆಂಬರ್ 30ರಂದು ದೆಹಲಿಯಲ್ಲಿ ನಡೆಯಲಿರುವ ರೈತ ಹೋರಾಟದ ಕುರಿತು ಕಳೆದ ವಾರವೇ ಪತ್ರಿಕೆಯಲ್ಲಿ ಕಾದಂಬಿನಿಯವರು ಬರೆದಿದ್ದರು. ಅದೀಗ ಮುಗಿದಿದೆ. ಆ ಹೋರಾಟ ನಡೆಯಲು 4-5 ದಿನಗಳಿರುವವರೆಗೂ ಏನೂ ಮಾತಾಡದಿದ್ದ ದೊಡ್ಡ ಮಾಧ್ಯಮಗಳೂ ತಿರುಗಿ ನೋಡುವಂತೆ, ಇದು ದೇಶದೆಲ್ಲೆಡೆ ಸದ್ದು ಮಾಡಿದೆ. ನಮ್ಮ ಪತ್ರಿಕಾ ತಂಡವೂ ಇದರ ಬಗ್ಗೆ ಕುತೂಹಲದಿಂದ ಎದುರು ನೋಡುತ್ತಿತ್ತು ಮತ್ತು ನಮ್ಮ ಬಳಗದ ಹಲವರು ಖುದ್ದಾಗಿ ಭಾಗವಹಿಸಿದ್ದರು. ಅವರಿಂದ ನೇರವಾಗಿ ತಿಳಿದುಕೊಂಡ ಕೆಲವು ಅಂಶಗಳು ಆಸಕ್ತಿದಾಯಕವಾಗಿವೆ. ದೊಡ್ಡ ಹೋರಾಟಗಳಿಲ್ಲ ಎಂಬ ಭಾವನೆ ಸ್ಥಿರಗೊಂಡಿರುವ ಸಂದರ್ಭದಲ್ಲಿ ಈ ಪ್ರಯೋಗವು ಕೆಲವು ಸಂಗತಿಗಳನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಆ ಕಾಲಕ್ಕೆ ತಕ್ಕುನಾದ ರೀತಿಯಲ್ಲಿ ಕಟ್ಟುವ ಹೋರಾಟದಿಂದ ಇರುವ ಸ್ಥಗಿತ ಪರಿಸ್ಥಿತಿಯಲ್ಲಿ ಬದಲಾವಣೆ ತರಲು ಸಾಧ್ಯ ಎಂಬುದು ಬಹಳ ಮುಖ್ಯವಾದ ಸಂಗತಿ.

ಹಲವರ ಅನಿಸಿಕೆಗಳಿಗೆ ವಿರುದ್ಧ ರೀತಿಯಲ್ಲಿ, ಈ ದೆಹಲಿ ಹೋರಾಟವು ಇದ್ದಕ್ಕಿದ್ದಂತೆ ಆರಂಭವಾದ ಒಂದು ದಿನದ ಪ್ರತಿಭಟನೆಯಲ್ಲ. ಅದು ಸುಮಾರು ಒಂದೂವರೆ ವರ್ಷಗಳ ಪ್ರಕ್ರಿಯೆ. ಅದರಲ್ಲೂ ಮಧ್ಯಪ್ರದೇಶದ ಮಂಡಸೂರಿನಲ್ಲಿ ಆದ ಗೋಲೀಬಾರ್ ಸಂದರ್ಭದಲ್ಲಿ ಅಲ್ಲಿಗೆ ಹೋಗಿ ಭೇಟಿಯಿತ್ತು ಹೋರಾಟದಲ್ಲಿ ಭಾಗಿಯಾದ ಸಂಘಟನೆಗಳು ಸಂಕಲ್ಪ ತೊಟ್ಟಂದಿನಿಂದ ಇದು ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಅತ್ಯಂತ ವ್ಯವಸ್ಥಿತವಾದ ರೀತಿಯಲ್ಲಿ ಹಂತ ಹಂತವಾಗಿ ಬೆಳೆದು ಬಂದ ಈ ಆಂದೋಲನದ ಕುರಿತು ಯಾರೂ ಬೆರಳು ಮಾಡಿ ತೋರಿಸಲಾಗದಂತೆ ಗಟ್ಟಿ ನೆಲೆಯಲ್ಲಿ ಅದನ್ನು ಕಟ್ಟಲಾಯಿತು.

ಸ್ವರಾಜ್ ಅಭಿಯಾನದ ಭಾಗವಾಗಿರುವ ಜೈಕಿಸಾನ್ ಆಂದೋಲನದವರು ಈ ಪ್ರಕ್ರಿಯೆಯನ್ನು ಆರಂಭಿಸಿದರಾದರೂ, ಬಹುಬೇಗನೇ ಸುಮಾರು ನೂರಕ್ಕೂ ಹೆಚ್ಚು ರೈತ ಸಂಘಟನೆಗಳು ಒಟ್ಟಾದವು. ಸಮಿತಿಗಳು ರಚನೆಯಾಗುವ ಹೊತ್ತಿಗೆ ಅದರ ಸಂಖ್ಯೆ 175 ಮುಟ್ಟಿತ್ತು. ಅಂತಿಮವಾಗಿ ಸುಮಾರು 200 ಸಂಘಟನೆಗಳು ಜೊತೆಯಾಗಿದ್ದವು. ಸಾಂಪ್ರದಾಯಿಕ ರೈತ ಸಂಘಟನೆಗಳಲ್ಲದೇ, ಎಡಪಕ್ಷಗಳ ಜೊತೆಗಿರುವ ರೈತ, ಕೃಷಿಕಾರ್ಮಿಕ ಸಂಘಟನೆಗಳೂ ಇದರ ಭಾಗವಾದವು.

ರೈತರ ನೂರಾರು ಸಮಸ್ಯೆಗಳ ಕೇಂದ್ರದಲ್ಲಿರುವ ಎರಡು ಅಂಶಗಳನ್ನು ಪಟ್ಟಿ ಮಾಡಲಾಯಿತು. ಇದುವರೆಗಿನ ಬಿಕ್ಕಟ್ಟಿನ ಕಾರಣದಿಂದ ಸಂಚಯಿತವಾಗಿರುವ ಸಾಲಮನ್ನಾ, ಮುಂದೆ ಸಾಲ ಮಾಡದಂತಹ, ಲಾಭ ಕಾಣಲು ಸಾಧ್ಯವಾಗುವಂತೆ ಎಲ್ಲಾ ಬೆಳೆಗಳಿಗೂ ಲಾಭದಾಯಕವಾದ ಬೆಲೆ ಖಾತರಿ. ಇದನ್ನು ಮೇಲ್ನೋಟದ ಘೋಷಣೆಯಾಗಿಯಷ್ಟೇ ಅಲ್ಲದೇ, ಕಾಯ್ದೆ ಬದ್ಧವಾಗಿ ಇವು ಸರಿಯಾಗಿ ಜಾರಿಗೊಳ್ಳಲು ಋಣ ಮುಕ್ತ ಕಾಯ್ದೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸ್ಸಾಗಿರುವ ಸಿ 2 + 50% ಬೆಲೆಗಿಂತ ಕಡಿಮೆ ಮಾರಾಟವಾಗದಂತೆ ತಡೆದು ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾಯ್ದೆ ಜಾರಿಗೆ ಬರಬೇಕೆಂಬುದು ಪ್ರಮುಖ ಒತ್ತಾಯವಾಗಿತ್ತು.

ಇದಕ್ಕಾಗಿ ತಜ್ಞರ ತಂಡಗಳು ರೂಪುಗೊಂಡವು ಮತ್ತು ಅವರು ಆ ಕಾಯ್ದೆಯ ಕರಡುಗಳನ್ನೂ ರೂಪಿಸಿಕೊಟ್ಟರು. ಈ ಹೊತ್ತಿಗೆ ಇದರ ಸಕ್ರಿಯ ಸಹಭಾಗಿಗಳಾಗಿದ್ದ ಮಹಾರಾಷ್ಟ್ರದ ರೈತ ಸಂಘಟನೆಯ ನಾಯಕ ಮತ್ತು ಲೋಕಸಭಾ ಸದಸ್ಯ ರಾಜುಶೆಟ್ಟಿ ಮತ್ತು ಸಿಪಿಎಂನ ರಾಜ್ಯಸಭಾ ಸದಸ್ಯ ರಾಜೇಶ್ ಅವರುಗಳು ತಮ್ಮ ಸದನಗಳ ಮುಖ್ಯಸ್ಥರಿಗೆ ಖಾಸಗಿ ಮಸೂದೆಗಳಾಗಿ ಇವನ್ನು ಸಲ್ಲಿಸಿಯೂ ಬಿಟ್ಟರು. ಆದರೆ, ಮೋದಿ ಸರ್ಕಾರವು ಈ ಸಾರಿ ಬಜೆಟ್‌ನಲ್ಲಿ ಉತ್ಪಾದನಾ ವೆಚ್ಚದ ಮೇಲೆ 50­%ನಷ್ಟು ಲಾಭದಾಯಕ ಬೆಲೆಯನ್ನು ಖಾತರಿಗೊಳಿಸುವುದಾಗಿ ಬುರುಡೆ ಬಿಟ್ಟಿದ್ದರು. ಸ್ವರಾಜ್ ಅಭಿಯಾನವು ಇದನ್ನೊಂದು ಸವಾಲಾಗಿ ಸ್ವೀಕರಿಸಿ, ಈಗಾಗಲೇ ಘೋಷಿಸಲಾಗಿರುವ ಕನಿಷ್ಠ ಬೆಂಬಲ ಬೆಲೆಯೂ ಹೇಗೆ ನೂರಕ್ಕೆ 95 ಎಪಿಎಂಸಿ ಮಂಡಿಗಳಲ್ಲಿ ಲಭ್ಯವಿಲ್ಲ ಎಂಬುದನ್ನು ತನಿಖೆ/ಸಮೀಕ್ಷೆಯ ಮೂಲಕ ಸಾಬೀತುಪಡಿಸಿತು.

ಹಾಗೆಯೇ ರೈತರು ಮತ್ತು ಕೃಷಿಯ ವಿಚಾರದಲ್ಲಿ ಮೋದಿ ಸರ್ಕಾರ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ದಾಖಲೆಗಳೊಂದಿಗೆ ವಿವರಿಸುವ ಪುಸ್ತಕವನ್ನು ತಂದರು. ದೀರ್ಘವಾಗಿ ಓದಲು ಸಾಧ್ಯವಾಗದವರಿಗೆ ಜೇಬಿನಲ್ಲಿಟ್ಟುಕೊಳ್ಳಬಹುದಾದ ಪುಸ್ತಕವನ್ನೂ ಹೊರತಂದರು.

ಎಡಪಕ್ಷಗಳು ಮತ್ತು ರೈತ ಸಂಘಟನೆಗಳು ಈ ರೀತಿಯಲ್ಲಿ ಒಂದಾಗಿ ಕೆಲಸ ಮಾಡಿ ಒಂದು ತಕ್ಷಣದ ಗುರಿ ಮುಟ್ಟಲು ದುಡಿದ ಉದಾಹರಣೆಗಳು ಹೆಚ್ಚಿಲ್ಲ. ಆದರೆ, ಈ ಸಾರಿ ಅದು ಸಾಧ್ಯವಾಯಿತು. ಮಹಾರಾಷ್ಟ್ರ, ರಾಜಸ್ತಾನ, ಉತ್ತರಖಂಡ್‌ಗಳಲ್ಲಿ ಭಾರೀ ಬೃಹತ್ ಪ್ರಮಾಣದ ಕಾಲ್ನಡಿಗೆಗಳನ್ನು ಆಯೋಜಿಸಿದ್ದ ಎಡಪಕ್ಷಗಳು ಈ ಸಮಿತಿಯ ಜೊತೆಗೂ ಸಕ್ರಿಯವಾಗಿ ಕೆಲಸ ಮಾಡಿದವು. ವಿಜು ಕೃಷ್ಣನ್‌ರಂತಹ ಯುವ ನಾಯಕರು ಅದರ ನಾಯಕತ್ವ ವಹಿಸಿದ್ದರಿಂದಾಗಿಯೂ ಇದು ಸಾಧ್ಯವಾಗಿರಬಹುದು. ಆದರೆ, ಸಾಧ್ಯವಾಗಿದ್ದು ವಾಸ್ತವ.

ವಿವಿಧ ಧಾರೆಗಳ ಕನಿಷ್ಠ 25 ಸಂಘಟನೆಗಳನ್ನೂ ಒಂದೆಡೆ ಸೇರಿಸಿ ನಿರಂತರವಾಗಿ ಕೆಲಸ ಮಾಡುವುದು ಸುಲಭವಲ್ಲವೆಂಬುದು ಅದರಲ್ಲಿ ತೊಡಗಿಕೊಂಡಿರುವ ಯಾರಿಗೇ ಆಗಲಿ ಗೊತ್ತಿರುತ್ತದೆ. ಅಂತಹ ಕಷ್ಟದ ಕೆಲಸವನ್ನು ಸಾಧ್ಯವಾಗಿಸಿಕೊಂಡ ಎಲ್ಲರೂ ಅಭಿನಂದನಾರ್ಹರು. ಹಾಗೆಂದು ಇದರಲ್ಲಿ ಸಮಸ್ಯೆಗಳಿರುವುದಿಲ್ಲವೆಂದೇನಲ್ಲ. ನೂರೆಂಟು ಬಗೆಯ ಕಿತ್ತಾಟಗಳು ಇದರಲ್ಲಿ ಸಹಜವಾಗಿಯೇ ಇರುತ್ತವೆ. ಅವೆಲ್ಲವನ್ನೂ ಹೊರಗೆ ಬರದೇ ನಿಭಾಯಿಸಿದ ಜಾಣ್ಮೆಗೆ ‘ಅಖಿಲ ಭಾರತ ರೈತ ಹೋರಾಟ ಸಮನ್ವಯ ಸಮಿತಿ’ಯ ನಾಯಕತ್ವವನ್ನು ಅಭಿನಂದಿಸಲೇಬೇಕು.

ರೈತರ ಹೋರಾಟಕ್ಕೆ ಇತರ ಸಮುದಾಯಗಳ ಬೆಂಬಲವನ್ನು ಸಂಘಟಿಸಿದ್ದು ಇನ್ನೊಂದು ಜಾಣ್ಮೆಯ ನಡೆ. ಕರ್ನಾಟಕದಲ್ಲೂ ಸಿಪಿಎಂ ಪಕ್ಷದ ಮುತುವರ್ಜಿಯಿಂದ ಅದು ನಡೆದದ್ದನ್ನು ಎಲ್ಲರೂ ಗಮನಿಸಿರಬಹುದು. ದೆಹಲಿಯಲ್ಲಿ ನೇಷನ್ ಫಾರ್ ಫಾiರ‍್ಸ್, ಡಿಯು ಫಾರ್ ಫಾರ್ಮರ್ಸ್, ವಕೀಲರು, ಪತ್ರಕರ್ತರು, ವೈದ್ಯರು ಇತ್ಯಾದಿ ಪ್ರಯತ್ನಗಳು ನಡೆದವು. ಇಷ್ಟೇ ಪ್ರಮುಖವಾಗಿ ಮಾಡಿದ ಮತ್ತೊಂದು ಪ್ರಯತ್ನವೆಂದರೆ, ಕೇವಲ ಆಡಳಿತ ಪಕ್ಷವನ್ನು ಗುರಿ ಮಾಡಿದ್ದಲ್ಲದೇ, ವಿರೋಧ ಪಕ್ಷಗಳ ಸಭೆ ಕರೆದು ಅವರ ನಿಲುವನ್ನು ಸ್ಪಷ್ಟಮಾಡಲು ಆಗ್ರಹಿಸಲಾಯಿತು. ಅಂತಿಮವಾಗಿ ಅವರುಗಳು ನ.೩೦ರಂದು ಬಂದು ವೇದಿಕೆಯ ಮೇಲೆಯೇ ತಮ್ಮ ನಿಲುವನ್ನು ಬಹಿರಂಗಪಡಿಸಬೇಕಾಯಿತು.

ವಿರೋಧ ಪಕ್ಷಗಳ ನಾಯಕರುಗಳು ರೈತರ ಪ್ರಮುಖ ಹಕ್ಕೊತ್ತಾಯಗಳ ಮೇಲೆ ಕೇಂದ್ರೀಕರಿಸದೇ ಮೋದಿ ಸರ್ಕಾರವನ್ನು ಬಯ್ಯುವುದರಲ್ಲೇ ಕಾಲ ಕಳೆದರು ಮತ್ತು ಇದು ರೈತ ಸಂಘಟನೆಗಳು ಶ್ರಮದಿಂದ ಸಂಘಟಿಸಿದ ಘನತೆಯುಳ್ಳ ಹೋರಾಟವೆಂಬುದನ್ನು ಮರೆತು, ತಮ್ಮ ‘ಮಹಾಘಟಬಂಧನ್’ ರ‍್ಯಾಲಿಯೇನೋ ಎಂಬಂತೆ ಕೈ ಮೇಲೆತ್ತಿ ಹಿಡಿದು ನಿಂತರು! ಇವೇ ಪಕ್ಷಗಳು (ಶರದ್‌ಪವಾರ್‌ರಂತಹ ವ್ಯಕ್ತಿ ವೇದಿಕೆಯ ಮೇಲೆ ರೈತ ಪರವಾಗಿ ಮಾತಾಡುವುದನ್ನು ನೋಡುವುದು ಕಷ್ಟವಾಗುತ್ತಿತ್ತು) ತಮ್ಮ ಅವಧಿಯಲ್ಲಾದ ಸಮಸ್ಯೆಗಳ ಕುರಿತ ಕನಿಷ್ಠ ಆತ್ಮಾವಲೋಕನವನ್ನೂ ಮಾಡಿಕೊಳ್ಳಲಿಲ್ಲ. ಯುಪಿಎ ಅವಧಿಯಲ್ಲಿ ಸಾಲಮನ್ನಾ ಮಾಡಿದುದರ ಕುರಿತು ರಾಹುಲ್‌ಗಾಂಧಿ ಮಾತನಾಡಿದರಾದರೂ, ಸ್ವಾಮಿನಾಥನ್ ಆಯೋಗದ ಶಿಫಾರಸ್ಸನ್ನು ತಾವೇಕೆ ಜಾರಿ ಮಾಡಲಿಲ್ಲ ಎಂಬುದರ ಕುರಿತು ಹೇಳಲಿಲ್ಲ.

ಇಂತಹ ಕೆಲವು ಸಂಗತಿಗಳ ಹೊರತಾಗಿ ದೆಹಲಿಯ ರೈತ ಹೋರಾಟವು ಈ ಸಂದರ್ಭದ ಅತ್ಯಂತ ಮಹತ್ವದ ವಿದ್ಯಮಾನಗಳಲ್ಲೊಂದಾಗಿದೆ. ಇದರ ಆಧಾರದ ಮೇಲೆಯೇ ದೇಶಾದ್ಯಂತ ರೈತರು ಮತ ಚಲಾಯಿಸುತ್ತಾರೆಂದೇನೂ ಹೇಳಲಾಗದು. ಆದರೆ, ಮೋದಿ ಸರ್ಕಾರದ ಅತ್ಯಂತ ಕರಾಳ ರೈತವಿರೋಧಿ ನೀತಿಗಳನ್ನು ದೇಶದ ರೈತರು ಒಪ್ಪಿಲ್ಲವೆಂದು ಈ ಹೋರಾಟವು ದೇಶಕ್ಕೆ ತೋರಿಸಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...