Homeಅಂಕಣಗಳುಆ ವಾರದ ಕಣ್ಣೋಟ | ಗೌರಿ ಲಂಕೇಶ್ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ...

ಪ್ರಿಯಾಂಕ ಗಾಂಧಿ ಎಂಬ ಹುಡುಗಿಗೆ ಹ್ಯಾಟ್ಸ್ಆಫ್ ಹೇಳುತ್ತಾ…

- Advertisement -
- Advertisement -

 ಗೌರಿ ಲಂಕೇಶ್

30 ಏಪ್ರಿಲ್, 2008 (`ಕಂಡಹಾಗೆ’ ಸಂಪಾದಕೀಯದಿಂದ)

ಮೊನ್ನೆ ಪ್ರಿಯಾಂಕ ಗಾಂಧಿ, ತನ್ನ ತಂದೆ ರಾಜೀವ್ ಗಾಂಧಿಯನ್ನು ಕೊಂದವರ ತಂಡದಲ್ಲಿದ್ದ, ಈಗ ಆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ನಳಿನಿ ಎಂಬಾಕೆಯನ್ನು ವೆಲ್ಲೂರ್ ಜೈಲಿನಲ್ಲಿ ಭೇಟಿಯಾಗಿದ್ದರ ಸುದ್ದಿ ಹೊರಬೀಳುತ್ತಿದ್ದಂತೆ ಹಲವಾರು ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಅವುಗಳಲ್ಲಿ ಬಿಜೆಪಿ ಪಕ್ಷದವರ ಪ್ರತಿಕ್ರಿಯೆಯಂತೂ ತಮಾಷೆಯಾಗಿತ್ತು. ಮೊದಮೊದಲು ಆಕೆ ಹೀಗೇಕೆ ಮಾಡಿದಳು ಎಂದು ನಮಗೆ ಅರ್ಥವೇ ಆಗುತ್ತಿಲ್ಲ ಎಂದ ಬಿಜೆಪಿಯ ವಕ್ತಾರ. ಆದರೂ ಈ ಬಗ್ಗೆ ನಿಮಗೊಂದು ಅಭಿಪ್ರಾಯ ಇರಲೇಬೇಕಲ್ಲಾ ಎಂದು ಒತ್ತಾಯಿಸಿದಾಗ “ವೈಯಕ್ತಿಕ ವಿಷಯಗಳ ಬಗ್ಗೆ ನಾವು ಮಾತಾಡುವುದಿಲ್ಲ” ಎಂದ. ಹೇಳಿಕೇಳಿ, ಅವಕಾಶ ಸಿಕ್ಕಾಗಲೆಲ್ಲ ಸೋನಿಯಾ ಗಾಂಧಿ ಮತ್ತವರ ಮಕ್ಕಳ ಮೇಲೆ ಕಾರಿಕೊಂಡು ಬೀಳುವುದು ಆವರ ಜಾಯಮಾನ, ಆದರೆ ಪ್ರಿಯಾಂಕ-ನಳಿನಿ ಭೇಟಿಯ ಹಿಂದೆ ಯಾವ ರಾಜಕೀಯವೂ ಇರಲಿಲ್ಲ ಎಂದು ಗೊತ್ತಾಗಿ ಬಿಜೆಪಿಗಳು ಸುಮ್ಮನಾದರು.

ಪ್ರಿಯಾಂಕ ವಿಷಯಕ್ಕೆ ಬರುವುದಾದರೆ ಆಕೆ ತನ್ನ ಚಿಕ್ಕವಯಸ್ಸಿನಲ್ಲೇ ಹಿಂಸಾಕೃತ್ಯಗಳನ್ನು ಹತ್ತಿರದಿಂದ ನೋಡಿದವಳು. ಮೊದಲು ಆಕೆಯ ಅಜ್ಜಿ ಇಂದಿರಾಗಾಂಧಿಯನ್ನು ಆಕೆಯ ರಕ್ಷಣಾ ದಳದವರೇ ಕೊಂದು ಹಾಕಿದರು. ಅನಂತರ ಆಕೆಯ ತಂದೆಯನ್ನು ಆತ್ಮಹತ್ಯಾ ದಾಳಿಯಲ್ಲಿ ಕೊಂದು ಹಾಕಲಾಯಿತು. ಈಗ ಪ್ರತಿಕ್ಷಣ ರಕ್ಷಣಾದಳದವರಿಂದ ಸುತ್ತುವರೆದಿರುವ, ಗಾಜಿನ ಅರಮನೆಯಲ್ಲಿ ಬದುಕನ್ನು ಸಾಗಿಸುತ್ತಿರುವ, ಹೆಚ್ಚಾಗಿ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧ್ಯವಿರದ ಸ್ಥಿತಿಯಲ್ಲಿರುವ ಯುವತಿ ಪ್ರಿಯಾಂಕ. ಅಂತಹ ಪರಿಸ್ಥಿತಿಯಲ್ಲೂ ಆಕೆ ತನ್ನ ಮಾನವೀಯತೆಯನ್ನು ಉಳಿಸಿಕೊಂಡು ಸಹಜವಾಗಿ ಬದುಕಲು ಯತ್ನಿಸುತ್ತಿದ್ದಾಳೆ ಎಂಬುದಕ್ಕೆ ನಳಿನಿ ಭೇಟಿ ಪ್ರಕರಣವೇ ಸಾಕ್ಷಿ.

ಯಾವುದೇ ಪ್ರಚಾರವಿಲ್ಲದೆ, ಯಾರ ಗಮನಕ್ಕೂ ಬಾರದ ಪ್ರಿಯಾಂಕ ತನ್ನ ತಂದೆಯ ಸಾವಿಗೆ ಕಾರಣವಾಗಿದ್ದ ನಳಿನಿಯನ್ನು ಭೇಟಿಯಾಗಿದ್ದ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಪ್ರಿಯಾಂಕ ಯಾಕೆ ಆಕೆಯನ್ನು ಭೇಟಿಯಾದಳು? ಅವರಿಬ್ಬರ ನಡುವೆ ಯಾವ ಮಾತುಕತೆ ನಡೆಯಿತು? ಎಲ್ಲಕ್ಕಿಂತ ಮುಖ್ಯವಾಗಿ ಆಕೆಯನ್ನು ಭೇಟಿ ಆಗುವ ಬಯಕೆ ಪ್ರಿಯಾಂಕಳಲ್ಲಿ ಮೂಡಿದ್ದು ಯಾಕೆ ಎಂಬೆಲ್ಲಾ ಪ್ರಶ್ನೆಗಳು ಉದ್ಭವಿಸಿದವು.

ಅವುಗಳಿಗೆಲ್ಲಾ ಪ್ರಿಯಾಂಕ ಉತ್ತರಿಸಿದ್ದು ಹೀಗೆ “ಅದು ವೈಯಕ್ತಿಕ ವಿಷಯ. ನಾನು ಸ್ವಇಚ್ಛೆಯಿಂದಲೇ ಆಕೆಯನ್ನು ಭೇಟಿಯಾದೆ. ನನ್ನ ಬದುಕಿನಲ್ಲಿ ಸಂಭವಿಸಿರುವ ಹಿಂಸೆ ಮತ್ತು ಸಾಮರಸ್ಯವನ್ನು ಪಡೆಯಲು ನಾವು ಆಯ್ಕೆ ಮಾಡಿಕೊಂಡ ಮಾರ್ಗ ಅದು. ನನಗೆ ಕೋಪ, ದ್ವೇಷ ಮತ್ತು ಹಿಂಸೆಯಲ್ಲಿ ನಂಬಿಕೆ ಇಲ್ಲ. ಮತ್ತು ಅಂತಹ ಭಾವನೆಗಳು ನನ್ನ ಬದುಕನ್ನೇ ಸ್ವಾಧೀನಪಡಿಸಿಕೊಳ್ಳಲು ನಾನು ಎಂದೂ ಬಿಡುವುದಿಲ್ಲ.”

ಇಂಗ್ಲಿಷ್‍ನಲ್ಲಿ ಒಂದು ಹೇಳಿಕೆ ಇದೆ: “ಟು ಎರ್ ಈಸ್ ಹ್ಯೂಮನ್, ಟು ಫರ್‍ಗೀವ್ ಈಸ್ ಡಿವೈನ್” ಅಂತ. ಹಾಗೆ ಪ್ರಿಯಾಂಕ ಕೂಡ ಸಾಮಾನ್ಯ ಮನುಷ್ಯಳಂತಿದ್ದು ನಳಿನಿ ಬಗ್ಗೆ ಮರೆಯಬಹುದಿತ್ತು. ಅಥವಾ ನಳಿನಿ ಮಾಡಿದ ತಪ್ಪಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ಸುಮ್ಮನಿರಬಹುದಿತ್ತು. ಆದರೆ ಪ್ರಿಯಾಂಕ ಮರೆಯಲಿಲ್ಲ, ಸುಮ್ಮನಿರಲಿಲ್ಲ. ಬದಲಾಗಿ ನಳಿನಿಯನ್ನು ಭೇಟಿಯಾಗಿ, ಅವಳೊಂದಿಗೆ ಸಾಮಾನ್ಯ ಯುವತಿಯರಂತೆ ಬಾಣಂತನ, ಮಕ್ಕಳ ಬಗ್ಗೆ ಚರ್ಚಿಸಿ, ಒಂದು ಉಡುಗೊರೆಯನ್ನು ನೀಡುವ ಮೂಲಕ ಪ್ರಿಯಾಂಕ ತನ್ನ ಎಲ್ಲಾ ದುಃಖ ಮತ್ತು ನೋವುಗಳೊಂದಿಗೆ ಮುಖಾಮುಖಿಯಾಗಿ ತನ್ನ ಮನಸ್ಸಿನಲ್ಲೇ ಅವುಗಳಿಗೆ ಒಂದು ಅಂತ್ಯ ಕಂಡುಕೊಂಡಿದ್ದಾಳಲ್ಲದೆ ತನ್ನ ಮಾನವೀಯತೆಯನ್ನು ಮೆರೆದಿದ್ದಾಳೆ. ಅಂದಹಾಗೆ ರಾಜೀವ್‍ಗಾಂಧಿಯ ಹತ್ಯೆಗೆ ಸಂಬಂಧಪಟ್ಟಂತೆ ನ್ಯಾಯಾಲಯ ನಳನಿಗೆ ಮತ್ತಾಕೆಯ ಗಂಡ ಮುರುಗನ್, ಇಬ್ಬರಿಗೂ ಮರಣದಂಡನೆ ವಿಧಿಸಿತ್ತು. ಆದರೆ ತೀರ್ಪು ಬರುವ ಮುನ್ನವೇ ನಳಿನಿಗೆ ಜೈಲಿನಲ್ಲೇ ಒಂದು ಹೆಣ್ಣುಮಗು ಹುಟ್ಟಿತ್ತು. ಆಗ ನಳಿನಿ ಮತ್ತು ಮುರುಗನ್ ಇಬ್ಬರೂ ಗಲ್ಲಿಗೇರಿಸಲ್ಪಟ್ಟರೆ ಅವರ ಮಗಳು ಅನಾಥೆಯಾಗುತ್ತಾಳೆಂಬ ಕಾರಣಕ್ಕೆ ನಳನಿಗೆ ಮರಣದಂಡನೆ ವಿಧಿಸಬಾರದೆಂದು ರಾಷ್ಟ್ರಪತಿಯವರಿಗೆ ಅಹವಾಲು ಸಲ್ಲಿಸಿದ್ದು ಬೇರಾರು ಅಲ್ಲ. ಮುರುಗನ್ ಮತ್ತು ನಳಿನಿಯ ಕೃತ್ಯದಿಂದ ತನ್ನ ಪ್ರೀತಿಯ ಗಂಡನನ್ನೇ ಕಳೆದುಕೊಂಡಿದ್ದ ಸೋನಿಯಾಗಾಂಧಿ!

ಸೋನಿಯಾ ಗಾಂಧಿಯ ಈ ಕಾಳಜಿಯಿಂದಲೇ ತನ್ನ ಪ್ರಾಣ ಉಳಿಸಿಕೊಂಡ ನಳಿನಿ ಅಂದಿನಿಂದ ಸೋನಿಯಾರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಆಕೆ ಬರೆದ ಪತ್ರಗಳಲ್ಲಿ ಸೋನಿಯಾರನ್ನು ‘ಪ್ರೀತಿಯ ತಾಯಿ’ ಎಂದೇ ಸಂಬೋಧಿಸಿದ್ದಾಳೆ.

ಆದರೆ ವಿಪರ್ಯಾಸ ನೋಡಿ.

ಮಾತೆಯರ ಹೆಸರಲ್ಲಿ ‘ಸೌಂದರ್ಯ ಲಹರಿ’ ಎಂಬ ಅಶ್ಲೀಲ ಶ್ಲೋಕಗಳನ್ನು ಸಾಮೂಹಿಕವಾಗಿ ಮಹಿಳೆಯರಿಂದ ಪಠಿಸುವ ಚೆಡ್ಡಿಗಳಿಗೆ ಇಟಲಿಯಲ್ಲಿ ಜನಿಸಿದ್ದರೂ ಈಗ ಭಾರತೀಯರಾಗಿರುವ ಸೋನಿಯಾರ ಮಾತೃತ್ವ ಅರ್ಥವಾಗುವುದಿಲ್ಲ. ಅಷ್ಟೇ ಅಲ್ಲ, ಸೋನಿಯಾ ಗಾಂಧಿ ಭಾರತದ ಪ್ರಧಾನಿಯಾದರೆ ತನ್ನ ಗಂಡ ಬದುಕಿರುವಾಗಲೇ ತಾನು ವಿಧವೆಯಂತೆ ಜೀವಿಸುತ್ತೇನೆ ಎಂದು ಸುಷ್ಮಾ ಸ್ವರಾಜ್‍ನಂತಹ ತಲೆ ಕೆಟ್ಟ ಹೆಂಗಸರು ಪ್ರತಿಭಟಿಸುತ್ತಾರೆ.

ಒಂದೆಡೆ, ತನ್ನ ಗಂಡನನ್ನು ಕಳೆದುಕೊಂಡಿದ್ದರೂ, ಆತನನ್ನು ಕೊಂದವರ ಮಗಳ ಬಗ್ಗೆ ತಾಯಿ ವಾತ್ಸಲ್ಯ ತೋರುವ ಸೋನಿಯಾ. ಇನ್ನೊಂದೆಡೆ, ಗರ್ಭವತಿಯರ ಹೊಟ್ಟೆಯನ್ನೇ ತ್ರಿಶೂಲಗಳಿಂದ ಬಗೆದು ಅದರಲ್ಲಿನ ಭ್ರೂಣವನ್ನು ಹಿಡಿದು ಸಂಭ್ರಮಿಸುವ ಬಿಜೆಪಿಗಳು.

ಇವರ ನಡುವೆ ಯಾರು ಈ ದೇಶಕ್ಕೆ ಹಿತವರು?

ಬರೀ ಟೊಳ್ಳುತನ, ಢೋಂಗಿತನ ತುಂಬಿರುವ ಇಂದಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸ್ಥಿತಿಯಲ್ಲಿ ಪ್ರಿಯಾಂಕಳ ಗಟ್ಟಿತನ ಆಶಾದಾಯಕವಾಗಿದೆ ಎಂಬುದನ್ನು ಬಿಜೆಪಿಗಳ ಹೊರತಾಗಿ ಎಲ್ಲರೂ ನಂಬುತ್ತಾರೆ. ಹ್ಯಾಟ್ಸ್ ಆಫ್ ಟು ಪ್ರಿಯಾಂಕ!

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...