Homeಅಂತರಾಷ್ಟ್ರೀಯಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ

ಚೀನಾ ಇಟಲಿಗಿಂತ ಭಾರತೀಯ ವೈರಸ್ ಹೆಚ್ಚು ಅಪಾಯಕಾರಿ: ನೇಪಾಳ ಪ್ರಧಾನಿ

- Advertisement -
- Advertisement -

ಭಾರತೀಯ ವೈರಸ್ ಚೀನಾ ಹಾಗೂ ಇಟಲಿಯ ವೈರಸ್‌ಗಿಂತಲೂ ಹೆಚ್ಚು ಮಾರಕವಾಗಿದೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ದ ವಾಗ್ದಾಳಿ ಮಾಡಿದ್ದಾರೆ.

ಭಾರತವು ಗಡಿಯಲ್ಲಿನ ಭೂಪ್ರದೇಶದ ಕೆಲವು ಭಾಗಗಳನ್ನು ತನ್ನ ಹೊಸ ನಕ್ಷೆಯಲ್ಲಿ ಸೇರಿಸಿಕೊಂಡ ನಂತರ, ನೇಪಾಳ ಪ್ರಧಾನಿ ಕೆ.ಪಿ. ಓಲಿ ಭಾರತದ ವಿರುದ್ಧ ಹೊಸದಾಗಿ ವಾಗ್ದಾಳಿ ನಡೆಸಿದ್ದಾರೆ.

ಭಾರತದ ವೈರಸ್ ಚೀನೀ ಮತ್ತು ಇಟಾಲಿಯನ್ ವೈರಸ್‌ಗಿಂತ “ಹೆಚ್ಚು ಮಾರಕವಾಗಿದೆ” ಎಂದು ಒಲಿ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ಒಲಿ ನೇಪಾಳದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹರಡಿರುವುದಕ್ಕೆ ಭಾರತವನ್ನು ದೂಷಿಸಿದ್ದಾರೆ.

“ಅಕ್ರಮ ಸಂಪರ್ಕದಾರಿಯ ಮೂಲಕ ಭಾರತದಿಂದ ಬರುತ್ತಿರುವವರು ದೇಶದಲ್ಲಿ ವೈರಸ್ ಹರಡುತ್ತಿದ್ದಾರೆ ಮತ್ತು ಕೆಲವು ಸ್ಥಳೀಯ ಪ್ರತಿನಿಧಿಗಳು ಮತ್ತು ಪಕ್ಷದ ಮುಖಂಡರು ಸರಿಯಾದ ಪರೀಕ್ಷೆಯಿಲ್ಲದೆ ಭಾರತದಿಂದ ಜನರನ್ನು ಕರೆತರುತ್ತಿದ್ದಾರೆ” ಎಂದು ಒಲಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

ಕೊರೊನಾ ಆರೋಗ್ಯ ಬಿಕ್ಕಟ್ಟಿನ ನಂತರ ಸಂಸತ್ತಿನಲ್ಲಿ ಪ್ರಧಾನಿ ಒಲಿ ಮಾಡಿದ ಮೊದಲ ಭಾಷಣದಲ್ಲಿ, ನೇಪಾಳವು ಭಾರತದ ಭೂಪ್ರದೇಶದ ಭಾಗವಾಗಿರುವ ಕಾಲಾಪಾನಿ-ಲಿಂಪಿಯಧುರ-ಲಿಪುಲೆಖ್ ಪ್ರದೇಶವನ್ನು “ಯಾವುದೇ ಬೆಲೆತೆತ್ತಾದರೂ ಮರಳಿ ತರುತ್ತದೆ” ಎಂದು ಹೇಳಿದರು.

ಈ ಮೂರು ವಿವಾದಿತ ಪ್ರದೇಶಗಳನ್ನು ಹೊಸ ಭೂಪಟದಲ್ಲಿ ಸೇರಿಸಿರುವ ಕ್ರಮವನ್ನು ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ.

ನೇಪಾಳ ಮತ್ತು ಭಾರತ ದೇಶಗಳು 1,800 ಕಿಮೀ ತೆರೆದ ಗಡಿ ಪ್ರದೇಶವನ್ನು ಹಂಚಿಕೊಂಡಿವೆ. ಬ್ರಿಟಿಷರ ಜತೆ 1816ರಲ್ಲಿ ಸಹಿ ಹಾಕಲಾದ ಸುಗೌಲಿ ಒಪ್ಪಂದಾನುಸಾರ ಲಿಪುಲೆಖ್ ಪಾಸ್ ತನ್ನದೆಂದು ನೇಪಾಳ ಹೇಳುತ್ತಿದೆ.

ಭಾರತ ಚೀನಾದ 1962ರಲ್ಲಿನ ಯುದ್ಧದ ನಂತರ ಲಿಂಪಿಯಧುರ ಹಾಗೂ ಕಾಲಾಪಾನಿಯಲ್ಲಿ ಭಾರತೀಯ ಸೇನೆಗಳು ನಿಯೋಜನೆಗೊಂಡಿವೆಯಾದರೂ ಈ ಪ್ರದೇಶಗಳೂ ತನ್ನದೆಂದು ನೇಪಾಳ ಹೇಳುತ್ತಿದೆ.


ಓದಿ: ಅಮೇರಿಕಾದ 200 ವೆಂಟಿಲೇಟರುಗಳು ಹಾಗೂ ನಮ್ಮ ದೇಶದ ಪ್ರಧಾನಿಯ ಕತೆ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...