Homeಅಂಕಣಗಳುಅಮ್ಮನ ದಿನದಂದು ಅಮ್ಮಿ

ಅಮ್ಮನ ದಿನದಂದು ಅಮ್ಮಿ

- Advertisement -
- Advertisement -

2017ರವರೆಗೂ ಪ್ರತಿ ವರ್ಷ ಮಾರ್ಚ್ 08 ಅಥವಾ ಅದರ ಸುತ್ತಾಮುತ್ತಾ ಪಿ.ಲಂಕೇಶ್‌ರ ಜನ್ಮದಿನದ ನೆನಪಿನಲ್ಲಿ ಅರ್ಥಪೂರ್ಣ ಕಾರ್ಯಕ್ರಮ ನಡೆಯುತ್ತಿತ್ತು. ನಾಡಿನ ಹಿರಿಯ ಚಿಂತಕರು, ಹೋರಾಟಗಾರರು ಮತ್ತು ಸಾಹಿತಿ ಕಲಾವಿದರನ್ನು ಕರೆಸಿ ಇಡೀ ದಿನ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚೆ, ಪುಸ್ತಕ ಬಿಡುಗಡೆ, ಸಿನಿಮಾ ವೀಕ್ಷಣೆ ರೀತಿಯ ಹತ್ತು ಹಲವು ಕಾರ್ಯಕ್ರಮಗಳು ನಡೆಸಿಕೊಂಡು ಬಂದಿದ್ದವು. ಗೌರಿ ಲಂಕೇಶ್ ಇದರ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು.

ಆದರೆ 2017ರಲ್ಲಿ ಮತಾಂಧ ಶಕ್ತಿಗಳ ಗುಂಡಿಗೆ ಎದೆಯೊಡ್ಡಿ ಗೌರಿ ಅಮ್ಮ ಹುತಾತ್ಮರಾದ ನಂತರ, ಲಂಕೇಶ್ ನೆನಪು ಕಾರ್ಯಕ್ರಮ ನಿಂತುಹೋಯಿತು. ಆದರೆ ಅಪ್ಪನ ಹಾದಿಯಲ್ಲಿಯೇ ನಡೆದ, ಆಕ್ಟಿವಿಸ್ಟ್ ಜರ್ನಲಿಸ್ಟ್ ಆಗಿ ಅಪ್ಪನನ್ನುಮೀರಿಸಿದ ನಮ್ಮ ಗೌರಿ ಅಮ್ಮನನ್ನು ನೆನೆಯುವ ಜವಾಬ್ದಾರಿ ನಮ್ಮ ಮೇಲಿತ್ತು. ಹಾಗಾಗಿ ಅಮ್ಮನ ಜನ್ಮದಿನವಾದ ಜನವರಿ 29ನ್ನು ಕಳೆದ ವರ್ಷದಿಂದ ಗೌರಿದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿ ಜನವರಿ 29ರಂದು ಅಮ್ಮನ ದಿನದಂದು ಅಮ್ಮಿ ಎಂಬ ಭಾವಪೂರ್ಣ ಸಿನಿಮಾ ನೋಡಿದ್ದಲ್ಲದೇ, ಅಮ್ಮಿಯನ್ನೇ ಇದಕ್ಕೆ ಕರೆಸಲಾಗಿತ್ತು.

ಗೌರಿ ಅಮ್ಮ ನಮ್ಮನ್ನೆಲ್ಲಾ ಮಕ್ಕಳೆಂದು ಭಾವಿಸಿ ಪೋಷಿಸಿದವರು. ಮರಿ ಎಂದು ಕರೆದು ಪ್ರೀತಿ ಕೊಟ್ಟವರು. ಹೋರಾಟಗಾರ ಮಕ್ಕಳಿಗಾಗಿ ಹಂಬಲಿಸುತ್ತಿದ್ದ, ಈ ಮಕ್ಕಳು ದೊಡ್ಡ ನಾಯಕರಾಗಿ ದೇಶ ಕಟ್ಟಬೇಕೆಂದು ಪರಿತಪಿಸುತ್ತಿದ್ದ ತಾಯಿಹೃದಯ ಗೌರಿ ಅಮ್ಮ. ದೇಶ ಕಟ್ಟುವ ಮತ್ತು ದೇಶ ಬದಲಿಸುವ ನಾಯಕರು ಹಾಗೂ ವಿದ್ವಾಂಸರನ್ನು ರೂಪಿಸುವ ಜೆಎನ್‌ಯು ವಿಶ್ವವಿದ್ಯಾಲಯಕ್ಕೆ ಓದಲು ಕಳಿಸಿದ ಮಗ ನಜೀಬ್‌ನನ್ನು ಕಳೆದುಕೊಂಡ ಅಮ್ಮಿ ನಫೀಸ್‌ರವರು ಅಂದು ನಮ್ಮ ಕಾರ್ಯಕ್ರಮದಲ್ಲಿದ್ದರು.

ಈ ಮತಾಂಧರು ಮಾನವೀಯತೆ ಇಲ್ಲದವರು ಎಂಬುದಕ್ಕೆ ಉದಾಹರಣೆಯಾಗಿ ನಜೀಬ್ ಪ್ರಕರಣವಿದೆ. ಗೌರಿ ಅಮ್ಮನನ್ನು ಕಳೆದು ಮಕ್ಕಳು ನಾವು ಅಲ್ಲಿ ಕುದಿಯುತ್ತಿದ್ದರೆ, ತನ್ನ ಮಗ ನಜೀಬ್‌ನನ್ನು ಕಳೆದುಕೊಂಡ ಕಿಚ್ಚು ನಫೀಸಾ ಅಮ್ಮಿಯಲ್ಲಿತ್ತು. ಇದರ ಕುರಿತಾಗಿಯೇ ಪೆಡೆಸ್ಟ್ರಿಯನ್ ಪಿಕ್ಚರ್ಸ್ ನಿರ್ಮಿಸಿರುವ ಅಮ್ಮಿ ಸಾಕ್ಷ್ಯಚಿತ್ರ ಮೊದಲು ಪ್ರದರ್ಶನಗೊಂಡಿತು. ನಜೀಬ್ ಎಂಬ ಅತ್ಯಂತ ಒಳ್ಳೆಯ ಹುಡುಗನ ವ್ಯಕ್ತಿತ್ವ, ಬಿಜೆಪಿ ಸಂಘಪರಿವಾರದ ಎಬಿವಿಪಿಯ ಹೊಲಸು ರಾಜಕೀಯವನ್ನು ಚಿತ್ರ ಬಿಚ್ಚಿಟ್ಟಿತು. ಜಡಗೊಂಡಿರುವ ವ್ಯವಸ್ಥೆಯನ್ನು ಬಡಿದೆಚ್ಚರಿಸಿ ನಜೀಬ್‌ನನ್ನು ವಾಪಸ್ ತರುವ ಸಂಕಲ್ಪದೊಂದಿಗೆ ಚಿತ್ರ ಮುಕ್ತಾಯವಾಗಿತ್ತು. ಅಮ್ಮನ ದಿನಕ್ಕೆ ಅಮ್ಮಿ ನಮ್ಮೆಲ್ಲರ ಹೋರಾಟದ ಕಿಚ್ಚನ್ನು ಎಚ್ಚರಿಸಿದರು. ಈಗ ಅವರು ತಾಯಿಯ ಮಮತೆ, ಮಗನನ್ನು ಹುಡುಕುತ್ತಿರುವ ದುಃಖತಪ್ತೆಯಾಗಿ ಮಾತ್ರವಲ್ಲದೇ, ಅದರ ಕಾರಣವನ್ನು ದೇಶದ ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ಕಂಡುಕೊಂಡಿರುವ ಒಬ್ಬ ಚಿಂತಕಿಯಾಗಿ ರೂಪುಗೊಂಡಿದ್ದಾರೆ. ಅಷ್ಟು ಖಚಿತವಾಗಿ ಅವರು ಇಡೀ ದೇಶದ ಪರಿಸ್ಥಿತಿಯನ್ನು ವಿಶ್ಲೇಷಣಾತ್ಮಕವಾಗಿ ಮುಂದಿಟ್ಟರು.

ಅಮ್ಮಿ ನಫೀಸಾರವರ ಮಾತುಗಳು ನಮ್ಮೆದೆಯೊಕ್ಕ ಗುಂಡುಗಳಂತಾಗಿದ್ದವು. ಅಷ್ಟು ಸ್ಪಷ್ಟ ಮತ್ತು ಆವೇಗದಲ್ಲಿ ಮಾತಾಡಿದರು. ಅವರ ಧೈರ್ಯಕ್ಕೆ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಪ್ರೊ. ಬಾಬು ಮ್ಯಾಥ್ಯೂ ಅಭಿನಂದನಾ ಮಾತುಗಳನ್ನಾಡಿದರು.
ಕನ್ನಡ ದಿನಪತ್ರಿಕೆ ವಾರ್ತಾಭಾರತಿಯ ಸಂಪಾದಕರಾದ ಅಬ್ದುಲ್ ಸಲಾಂ ಪುತ್ತಿಗೆಯವರು ಗೌರಿ ನೆನಪಿನ ಉಪನ್ಯಾಸ ನೀಡಿದರು. ಜಾತೀಯತೆ, ಬಂಡವಾಳಶಾಹಿ ಶೋಷಣೆ ಮತ್ತು ಮತಾಂಧತೆಯೇ ಭಾರತದ ಪ್ರಮುಖ ಶತ್ರುಗಳಾಗಿದ್ದು ಇಂದಿನ ಪ್ರಧಾನ ಶತ್ರುಗಳಾಗಿದ್ದು ಇವುಗಳನ್ನು ನಿರ್ಮೂಲನೆ ಮಾಡುವ ಶಪಥ ಮಾಡಬೇಕಾಗಿದೆ ಎಂದರು.

ಅಮ್ಮನ ದಿನದಂದು ಅವರ ಕನಸಿನ ನೂತನ www.naanugauri.com ವೆಬ್‌ಪೋರ್ಟಲ್‌ಅನ್ನು ಅವರ ತಂಗಿ ಕವಿತಾ ಲಂಕೇಶ್ ಲೋಕಾರ್ಪಣೆ ಮಾಡಿದರು. ಈ ಮೂಲಕ ಗೌರಿ ಸ್ಮಾರಕ ಟ್ರಸ್ಟ್ ಮುಖಾಂತರ ನಾವೆಲ್ಲರೂ ಒಂದು ಸಣ್ಣ ಗಿಫ್ಟ್ಅನ್ನು ಅಮ್ಮನಿಗೆ ನೀಡುತ್ತಿದ್ದೇವೆ. ನ್ಯಾಯಪಥ ಮುದ್ರಿತ ವಾರಪತ್ರಿಕೆ ಯಥಾಪ್ರಕಾರ ಮುಂದುವರೆಯುತ್ತದೆ. ಜೊತೆಗೆ ಈ ವೆಬ್ ಪೋರ್ಟಲ್ ಪ್ರತಿದಿನವೂ ಸತ್ಯಸುದ್ದಿಗಳನ್ನು ನಿಮ್ಮಲ್ಲಿಗೆ ತಲುಪಿಸುವ ಕೆಲಸ ಮಾಡಲಿದೆ. ಇದಕ್ಕಾಗಿ ನೂರು ಜನ

ನಜೀಬ್

ಬರಹಗಾರರು ನಮ್ಮೊಡನಿದ್ದಾರೆ.

ನಂತರ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಪಾದಯಾತ್ರೆ ಬರುತ್ತಿದ್ದ ಮಹಿಳೆಯರ ಹೋರಾಟಕ್ಕೆ ಬೆಂಬಲ ಸೂಚಿಸಿ ಅಲ್ಲೆ ಒಂದಷ್ಟು ಹಣ ಸಂಗ್ರಹ ಮಾಡಿ ತಲುಪಿಸಲಾಯಿತು. ಈ ರೀತಿಯಾಗಿ ಅಮ್ಮನ ಹೋರಾಟದ ಸ್ಫೂರ್ತಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಅಮ್ಮನ ದಿನ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...