Homeಸಿನಿಮಾಸಿನಿ ಸುದ್ದಿಜಯನಗರದ ಅಖಾಡಕ್ಕೆ ಲೋಟಸ್ ತಾರಕ್ಕ?

ಜಯನಗರದ ಅಖಾಡಕ್ಕೆ ಲೋಟಸ್ ತಾರಕ್ಕ?

- Advertisement -
- Advertisement -

ಗಿರೀಶ್ ತಾಳಿಕಟ್ಟೆ |

ಬಿ.ಎನ್.ವಿಜಯ ಕುಮಾರ್

ಕರ್ನಾಟಕದ ಮಹಾಸಮರ ಈಗಷ್ಟೇ ಮುಗಿದು ಪೊಲಿಟಿಕಲ್ ನಾಟಕಗಳು ಒಂದೊಂದಾಗಿ ಪರದೆ ಎತ್ತಿಕೊಳ್ಳುತ್ತಿವೆ. ಜನರೆಲ್ಲ ಒಂದು ಕಣ್ಣು ಕುಮಾರಣ್ಣನತ್ತ, ಮತ್ತೊಂದು ಕಣ್ಣನ್ನು ಯಡ್ಯೂರಪ್ಪನತ್ತ ಹಿಗ್ಗಲಿಸಿ ಕೂತಿರುವ ಹೊತ್ತಲ್ಲೇ ಇತ್ತ ಜಯನಗರದಿಂದ ತಾಜಾತಾಜಾ ತಾರಕ್ಕನ ಸುದ್ದಿಯೊಂದು ಹೊರಬಿದ್ದಿದೆ. ಎಲೆಕ್ಷನ್ ಇನ್ನೇನು ಕೆಲ ದಿನ ಇದೆ ಅನ್ನೋವಾಗ ಜಯನಗರ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟಾಗಿದ್ದ ವಿಜಯಕುಮಾರ್ ಎದೆ ಹಿಡಿದುಕೊಂಡು ನೆಲಕ್ಕೆ ಬಿದ್ದವರು ಮತ್ತೆ ಮೇಲಕ್ಕೆ ಏಳಲೇ ಇಲ್ಲ. ಬಿಜೆಪಿಯೊಳಗಿರುವ ಕೆಲವೇ ಕೆಲವು ಮಂದಿ ಸೀದಾಸಾದಾ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ವಿಜಯ್‍ಕುಮಾರ್‍ರ ಹಠಾತ್ ಅಗಲಿಕೆಯಿಂದಾಗಿ ಜಯನಗರದ ಎಲೆಕ್ಷನ್ನೇ ಮುಂದಕ್ಕೋಯ್ತು. ಮುಂದೆ ನಡೆಯಲಿರುವ ಈ ಕ್ಷೇತ್ರದ ಚುನಾವಣೆಗೆ ವಿಜಯ್‍ಕುಮಾರ್ ಜಾಗದಲ್ಲಿ ನಟಿ ತಾರಾ ಅವರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ಮಾಡುತ್ತಿದೆ ಅನ್ನೋ ವರ್ತಮಾನ ಬರುತ್ತಿದೆ. ಸುಮಾರು ವರ್ಷದಿಂದ ಜಯನಗರ ವ್ಯಾಪ್ತಿಯಲ್ಲೇ ನೆಲೆಸಿರುವ ತಾರಮ್ಮನಿಗೆ ವಿಜಯ್‍ಕುಮಾರ್ ಪರವಾಗಿ ಇಲ್ಲಿ ಕ್ಯಾನ್ವಾಸ್ ಮಾಡಿದ `ಪೊಲಿಟಿಕಲ್’ ಅನುಭವವೂ ಇದೆ. ಕಾಂಗ್ರೆಸ್‍ನಿಂದ ಮಾಜಿ ಮಂತ್ರಿ ಕಂ ಪಕ್ಕದ ಬಿಟಿಎಂ ಶಾಸಕ ರಾಮಲಿಂಗಾರೆಡ್ಡಿ ಮಗಳು ಸೌಮ್ಯರೆಡ್ಡಿ ಅಭ್ಯರ್ಥಿಯಾಗಿ ಫಿಕ್ಸ್ ಆಗಿರೋದ್ರಿಂದ ಮಹಿಳೆ ಎದುರು ಮಹಿಳೆಯನ್ನೇ ಕಾದಾಟಕ್ಕಿಳಿಸೋದು ಬಿಜೆಪಿಯ ಲೆಕ್ಕಾಚಾರ.

ತೇಜಸ್ವಿನಿ ಅನಂತ್ ಕುಮಾರ್

ಈ ಸುದ್ದಿ ಕೇಳಿ ತಾರಕ್ಕ ಹಿರಿಹಿರಿ ಹಿಗ್ಗಬೇಕೆನ್ನುವಷ್ಟರಲ್ಲಿ ಅದೇ `ಲೋಟಸ್ ಮಹಲ್’ನಿಂದ ಹೊರಬಿದ್ದ ಮತ್ತೊಂದು ಸುದ್ದಿ ತಾರಕ್ಕನಿಗೆ ಕಸಿವಿಸಿ ಮಾಡುತ್ತಿದೆಯಂತೆ. ಏನೆಂದ್ರೆ, ಕೇಂದ್ರ ಗೊಬ್ಬರದ ಮಂತ್ರಿ ಅನಂತ್ ಕುಮಾರ್ ಮಡದಿ ತೇಜಸ್ವಿನಿಯವರನ್ನು ಅಭ್ಯರ್ಥಿಯಾಗಿಸಿದರೆ ಹೇಗೆ ಅನ್ನೊ ಸಾಧ್ಯತೆಯನ್ನೂ ಬಿಜೆಪಿ ಅಳೆದು ತೂಗುತ್ತಿದೆಯಂತೆ. ಬ್ರಾಹ್ಮಣ ಮತಗಳು ಸ್ಟ್ರಾಂಗಾಗಿರುವ ಇಲ್ಲಿ ತೇಜಸ್ವಿನಿ ಮೇಡಮ್ಮು ಅದಮ್ಯ ಚೇತನ ಎಂಬ ಎನ್‍ಜಿಒ ಕಟ್ಟಿ ಓಡಾಡಿಕೊಂಡಿರುವುದರಿಂದ ಒಂದಷ್ಟು ಜನಪರಿಚಯವೂ ಅವರಿಗಿದೆ. ಸಾಲದ್ದಕ್ಕೆ ಅವರ ಪತಿಯೇ ಈ ಭಾಗದ ಸಂಸದ. ಜಾತಿ ಕೆಮಿಸ್ಟ್ರಿ ಪ್ಲಸ್ ಫ್ಯಾಮಿಲಿ ಕೆಮಿಸ್ಟ್ರಿ ಎರಡೂ ಮ್ಯಾಚ್ ಆಗೋದ್ರಿಂದ ಅವರನ್ನೇ ಕಣಕ್ಕಿಳಿಸಬೇಕೆಂಬ ಬಿಜೆಪಿಗರ ಒಲವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆಯಂತೆ. ಹಾಗೇನಾದರು ಆದಲ್ಲಿ ತಾರಕ್ಕನ ಖುಷಿ ಠುಸ್ ಆಗಬಹುದು. ಫ್ಯಾಮಿಲಿ ಪೊಲಿಟಿಕ್ಸ್ ನೆಪವಿಟ್ಟುಕೊಂಡು ಮೈಸೂರಿನಲ್ಲಿ ಯಡ್ಯೂರಪ್ಪನ ಮಗ ವಿಜಯೇಂದ್ರನಿಗೆ ಟಿಕೇಟ್ ತಪ್ಪಿಸಿದ್ದ ಸೇಡು ಏನಾದ್ರು ಮುನ್ನೆಲೆಗೆ ಬಂದು, ಒಂದು ಕುಟುಂಬದ ಇಬ್ಬರಿಗೆ ಟಿಕೆಟ್ ಯಾಕೆ? ಅನ್ನೊ ಕಾಲೆಳೆದಾಟವೇನಾದ್ರು ಶುರುವಾದ್ರೆ ತಾರಕ್ಕನೇ ಅಭ್ಯರ್ಥಿಯಾದ್ರು ಅಚ್ಚರಿಯಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...