Homeಮುಖಪುಟಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

ಭೈರಪ್ಪನವರನ್ನು ಒಳಗೊಂಡು ಒಂದು ಬ್ರಾಹ್ಮಣ್ಯದ ಚರ್ಚೆ

- Advertisement -
- Advertisement -

| ಡಾ.ಲತಾ ಮೈಸೂರು |

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು.

ಮೇಲ್ಜಾತಿಯಲ್ಲಿ ಜನಿಸಿರುವ ಎಸ್.ಎಲ್.ಭೈರಪ್ಪ ತಳಮೂಲದಿಂದ ಬಂದವರಾಗಿದಿದ್ದರೆ, ಅವರ ಬರವಣಿಗೆ, ಸೃಜನಶೀಲ ಕೃತಿ, ಭಾಷಣ, ಹೇಳಿಕೆಗಳಲ್ಲಿ ‘ವೈದಿಕತೆಯೇ ಸಂವಿಧಾನವಾಗಲಿ’ ಎಂಬ ಮೂಲಭೂತವಾದಿ ಧೋರಣೆಗಳು ನೆಲೆಗೊಳ್ಳುತ್ತಿದ್ದವೆ?

ಅವರು ಅವರ್ಣೀಯರಾಗಿದಿದ್ದರೆ!? ಇಷ್ಟೆ ವಿಸ್ತಾರ ಓದು, ತತ್ತ್ವಜ್ಞಾನದ ತಿಳಿವಳಿಕೆ, ದೈತ್ಯ ಸೃಜನಶೀಲ ಅಭಿವ್ಯಕ್ತಿ ಶಕ್ತಿ ಸಾಮಥ್ರ್ಯಗಳನ್ನು, ಜನಪ್ರಿಯಗೊಳ್ಳುವ ಕಲೆಯನ್ನು ಜೀವಪರತೆ, ಸತ್ಯ, ನ್ಯಾಯ, ಸಮಾನತೆ, ಅಹಿಂಸೆಗಳ ಅರಳಿಸುವಿಕೆಗೆ ಬಳಸುತ್ತಿದ್ದರೆನೋ?

ಇವೆಲ್ಲ ‘ರೆ’ಗಳು, ಜನ್ಮವನ್ನೆ ಮಾನದಂಡವಾಗಿಸಿರುವ ಭಾರತದ ನೆಲದಲ್ಲಿ ಯುಟೋಪಿಯಾ ಅಷ್ಟೆ. ತಮ್ಮ ಜನನವನ್ನೇ (ಜಾತಿಯನ್ನೇ) ಶ್ರೇಷ್ಠವಾಗಿಸಿಕೊಂಡು ಈ ನೆಲದ ಎಲ್ಲ ಅವಕಾಶ, ಸೌಲಭ್ಯ, ಅಧಿಕಾರ, ಸಂಪತ್ತುಗಳನ್ನು ಮೀಸಲಾಗಿಸಿಕೊಂಡು, ಉಳಿದವರೆಲ್ಲರೂ ತಮ್ಮ ತಮ್ಮ ಶ್ರೇಣಿಮಟ್ಟದಲ್ಲಿ ಇದೇ ಕ್ರೌರ್ಯ, ದೋಚುವಿಕೆಯನ್ನು ಧರ್ಮಶಾಸ್ತ್ರ ಗಳನ್ನಾಗಿಸಿಕೊಳ್ಳುವಂತೆ ಮಾಡಿರುವ ಡ್ಯಾಮೇಜ್ ಎಂದಿಗೂ ಸರಿಪಡಿಸಲಾಗದು. ಪ್ರತಿ ಜೀವದ ಅನನ್ಯತೆ – ಪ್ರತಿಭೆ, ಸಾಧಿಸಿಕೊಳ್ಳುವ ಶಕ್ತಿ-ಸಾಮಥ್ರ್ಯ- ಯೋಗ್ಯತೆಗಳು ಮಾಪನವಾಗದೆ, ತಮ್ಮ ಆಯ್ಕೆಯಲ್ಲದ ಪ್ರಾಕೃತಿಕ ಹುಟ್ಟು ಇಲ್ಲಿ ಮಾನದಂಡವಾಗಿ, ತಕ್ಕಡಿಯಾಗಿದೆ. ಈ ಮೂಲಕ ಬೇರ್ಬಿಟ್ಟಿರುವ ಅ-ನ್ಯಾಯದ, ಅ-ಸಮತೆಯ ವಾಸ್ತವಿಕ ಅಭ್ಯಾಸಗಳನ್ನು ಬದಲಿಸುವುದು ಸುಲಭವೆ?

ತಮ್ಮ ಜನ್ಮದ ಬ್ರಾಹ್ಮಣ್ಯವನ್ನೆ ಶ್ರೇಷ್ಠವಾಗಿಸಿಕೊಂಡ ಬ್ರಾಹ್ಮಣರು ಕಲಿಯುಗದಲ್ಲಿ ಎಂಥೆಂಥಾ ಅನಾಹುತ-ದುರಂತಗಳ ಸರಮಾಲೆಯನ್ನೆ ಸೃಷ್ಟಿಸಿ ಬಿಡುತ್ತಾರೆಂಬ (ದುರ್)ದರ್ಶನವನ್ನು ಪಂಪನ ಆದಿಪುರಾಣದ ಭರತ ದುಃಸ್ವಪ್ನ ರೂಪದಲ್ಲಿ ಕಾಣುತ್ತಾನೆ.

ಪಂಪನ ಆದಿಪುರಾಣದ 15ನೇ ಆಶ್ವಾಸದಲ್ಲಿ ‘ಭರತನು ಅನಭಿಷಿಕ್ತನಾಗಿ, ವೈಭವದಿಂದ ಭೂಮಂಡಲವನ್ನು ಪರಿಪಾಲಿಸುತ್ತಾ, ಧನವನ್ನು ತಕ್ಕವರಿಗೆ ದಾನ ಮಾಡಲು ಉಪಾಸಕರನ್ನು ಗುರುತಿಸುವ’ ಪ್ರಸಂಗದಲ್ಲಿ ಇದು ಬರುತ್ತದೆ. ಅಯೋಧ್ಯಾ ಸಿಂಹಾಸನದಲ್ಲಿ ಕುಳಿತು ಸಾಮ್ರಾಜ್ಯ ಸುಖ ಅನುಭವಿಸುತ್ತಿದ್ದ ಚಕ್ರವರ್ತಿ ಭರತನು ತಾನು ಜಿನಪೂಜೋತ್ಸವವೆಂಬ ಮಹಾಮಹವನ್ನು ಮಾಡಿ ಸಲ್ಲುವಂತಾಗಲು ಧನವನ್ನು ತಕ್ಕವರಿಗೆ ದಾನ ಮಾಡಬೇಕು. ಆದರೆ ತಪೋಧನರು ದಾನವನ್ನು ಒಲ್ಲರು, ಇನ್ನು ಆ ದಾನಕ್ಕೆ ಗೃಹಸ್ಥರಿದ್ದಾರೆ. ಆದರೆ ಅವರಲ್ಲಿ ಯಾರು ಯೋಗ್ಯರೆಂಬುದನ್ನು ಉಪಾಯಾಂತರದಿಂದ ಪರೀಕ್ಷಿಸಲು ಒಸಗೆಯೊಂದನ್ನು (ಮಂಗಳಕಾರ್ಯ) ಹಮ್ಮಿಕೊಂಡು, ಅರಮನೆಯ ಒಳ ಹೊರಗೂ ಹರಿತಾಂಕುರ-ಹೂ-ಹಣ್ಣು-ಮೊಳಕೆ ಧಾನ್ಯಗಳನ್ನು ಹರಡಿಸಿ ದಾನ ಸ್ವೀಕರಿಸಲು ಬರ ಹೇಳಿದನು. ಕೂಡಲೇ (ಅಹಿಂಸಾ) ವ್ರತವಿಲ್ಲದ ಅವಿವೇಕಿಗಳು ಅವುಗಳನ್ನೆಲ್ಲ ತುಳಿದುಕೊಂಡೇ ಅರಮನೆಯೊಳಕ್ಕೆ ಬಂದರು. ಆದರೆ ಆ ತುಳಿಯುವ ಹಿಂಸಾ ಪಾಪಕ್ಕೆ ಹೆದರಿ ಕೆಲವರು ಹೊರಗೇ ನಿಂತರು. ಇವರನ್ನು ಚಕ್ರವರ್ತಿ ಮತ್ತೆ ಕರೆಯಲು ಬೇರೆ ದಾರಿಯಿಂದ ಅರಮನೆಯೊಳಗೆ ಬಂದರು. ಆಗ ಭರತ ‘ನೀವಿಷ್ಟು ಜನ ಇವರು ಬಂದ ಮಾರ್ಗದಲ್ಲಿ ಬರದೆ ಬೇರೊಂದು ಮಾರ್ಗದಲ್ಲೇಕೆ ಬಂದಿರಿ’ ಎಂದು ಪ್ರಶ್ನಿಸಲು, ‘ಹಸಿರು-ಅಂಕುರ-ಕುಡಿ-ಕುಸುಮ-ಹಣ್ಣಿದ್ದಲ್ಲಿ ಜೀವರಾಶಿ ಅಪಾರವಾಗಿರುತ್ತದೆ. ಪುರಪರಮೇಶ್ವರನ ಸಭೆಯಲ್ಲಿ ‘ಗಣಾಧಿಪರು ಹೇಳಿದ ಅಹಿಂಸಾ ವ್ರತ ಹಿಡಿದಿರುವ ನಾವು ಅವನ್ನು ತುಳಿಯಲಾರೆವು’ ಎಂದರು. ಭರತ ಇವರ ದೃಢ ಅಹಿಂಸಾವ್ರತಕ್ಕೆ ಮೆಚ್ಚಿ ದಾನ-ಸನ್ಮಾನಕ್ಕೆ ಯೋಗ್ಯರೆಂದು ತವನಿಧಿ ತರಿಸಿ, ಅವರವರ ನೆಲೆಗಳಲ್ಲಿ ಬ್ರಹ್ಮಸೂತ್ರ ಎಂಬ ಅಭಿದಾನದ ‘ಯಜ್ಞೋಪವೀತ’ದಿಂದ ಅವರನ್ನು ಪವಿತ್ರಗಾತ್ರರನ್ನಾಗಿ ಮಾಡಿದನು.

ಇಲ್ಲಿ ಅಹಿಂಸಾ ನಡೆಯೇ ಯೋಗ್ಯರನ್ನಾರಿಸಲು ಮಾನದಂಡ. ಇಂಥ ಅಹಿಂಸಾ ನಡೆಯ ಜನರನ್ನು ಭರತ ಪ್ರತ್ಯೇಕವಾಗಿ ಗುರುತಿಸಿ, ಮೆಚ್ಚಿ ನಂತರ ಯಜ್ಞೋಪವೀತ ಹಾಕಿ, ಅವರನ್ನು ಪವಿತ್ರಗಾತ್ರರನ್ನಾಗಿಸಿದ. ಹೀಗಾಗಿ ಇಲ್ಲಿ ಬ್ರಾಹ್ಮಣ್ಯ ಎಂಬುದು ನಡೆಗಾಗಿ ಪಡೆದರೆ ಹೊರತು ಜನ್ಮಕ್ಕಾಗಿ ಅಲ್ಲ.

ಮುಂದೆ ಭರತ ತಾನೇ ಮಾಡಿದ ಉಪಾಸಕ ಬ್ರಾಹ್ಮಣರಿಗೆ ನೀವು ನಡೆಸಬೇಕಾದ ಕುಲಾಚಾರಗಳೆಂದು ಷಟ್‍ಕರ್ಮ… ವ್ರತ, ಸಂಸ್ಕಾರ, ಸತ್ಕ್ರಿಯಾ, ಪಂಚಾಣು ವ್ರತ, (ಅಹಿಂಸೆ, ಸತ್ಯ, ಅಸ್ತೆಯ, ಬ್ರಹ್ಮಚರ್ಯ, ಅಪರಿಗ್ರಹ)ಗಳನ್ನು ಉಪದೇಶಿಸಿದ.

ಇಲ್ಲಿ ಷಟ್ಕರ್ಮ ಸಹಿತನಾದವನು ಮಾತ್ರ ಸತ್ತ್ಯದಿಂದ ದ್ವಿಜನಾಗುತ್ತಾನೆ. ಆದರೆ ಗೃಹಸ್ಥರ ಅಹಿಂಸಾನಡೆಗಾಗಿ, ಯಜ್ಞೋಪವೀತ ಹಾಕಿ ಬ್ರಾಹ್ಮಣರನ್ನಾಗಿ ಮಾಡಿ, ಷಟ್ಕರ್ಮ ವ್ರತಗಳನ್ನುಪದೇಶಿಸಿದ ಭರತನೆ ಮುಂದೆ ತನ್ನ ಹಿರಿಮೆಗಾಗಿ ಆನಂದದ ಭರದಲ್ಲಿ ಬ್ರಾಹ್ಮಣ್ಯ (ದ್ವಿಜತ್ವ)ವನ್ನು ಅವರ ವಂಶಕ್ಕೆ (ಜನ್ಮಕ್ಕೆ) ಅನ್ವಯ ಮಾಡಿ ಹೀಗೆ ಘೋಷಿಸಿ ಬಿಡುತ್ತಾನೆ – “ಪರಮಬ್ರಹ್ಮನ ತನುವಿಂದ ಹುಟ್ಟಿದವರು ದ್ವಿಜರು, ಇವರು ವರ್ಣೋತ್ತಮರು, ಲೋಕಪೂಜ್ಯರು, ರಾಜರಿಂದ ಮನ್ನಣೆ ಪಡೆಯಲು ಅರ್ಹರು, ಉನ್ನತ ಗುಣವಂತರು, ಶುದ್ಧ ಚಾರಿತ್ರರು, ಭೂಲೋಕದ ದೇವರುಗಳು ಈ ಬ್ರಾಹ್ಮಣರು” – ಹೀಗೆಂದು ಭೂಮಂಡಲೇಶ್ವರ ಭರತನು ಕೊಂಡಾಡಲು ಎತ್ತೆತ್ತಲೂ ಬ್ರಾಹ್ಮಣ ಸಂತತಿ ಒಡನೆಯೇ ವಿಖ್ಯಾತವಾಯಿತು.

ಭರತನ ಕೊಂಡಾಟದಿಂದ ಬ್ರಾಹ್ಮಣ ಸಂತತಿ ಅತಿಪ್ರಸಿದ್ಧವಾಗಿ ಕೆಲವು ಕಾಲ ನಡೆಯುತ್ತಿರುವಲ್ಲಿ ಭರತನಿಗೆ ಒಂದು ದಿನ ಬೆಳಗಿನ ಝಾವ ಅನಿಷ್ಟಫಲ ಸೂಚಕ ದುಃಸ್ವಪ್ನಗಳು ಬಿದ್ದವು. ಇವು ಯುಗದ ಕೊನೆಯಲ್ಲಿ ತನ್ನ ಪ್ರಜೆಗಳಿಗುಂಟಾಗುವ ವಿವಿಧ ಕೇಡುಗಳನ್ನು ಸೂಚಿಸುವಂತಿದೆ ಎಂಬ ಅನುಮಾನ ಭರತನಿಗೆ ಮೂಡಿತು. ಅನುಮಾನ ಪರಿಹಾರಕ್ಕಾಗಿ ತನ್ನ ಆರಾಧ್ಯನಾದ ವೃಷಭನಾಥನನ್ನು ಸ್ತುತಿಸಿ ಧ್ಯಾನಸ್ಥನಾಗಿ ಕೂತಿದ್ದಾಗ ಭರತನಿಗೆ ಅವಧಿಜ್ಞಾನ ಪ್ರಾಪ್ತವಾಯಿತು. (ಹಿಂದೆ ಭರತ ಬ್ರಾಹ್ಮಣ್ಯವನ್ನು ವಂಶಾನ್ವಯ ಮಾಡಿ ಘೋಷಿಸುವಾಗ ಅವನಿಗೆ ಅವಧಿಜ್ಞಾನ ಪ್ರಾಪ್ತವಾಗಿರಲಿಲ್ಲ ಎಂಬುದನ್ನಿಲ್ಲಿ ಗಮನಿಸಬೇಕು).

ಅವಧಿಜ್ಞಾನ ಪ್ರಾಪ್ತವಾದ ಭರತನು ತಾನು ಮಾಡಿದ ಮರುಳುತನಕ್ಕೆ ಪಶ್ಚಾತಾಪ ಪಟ್ಟು ತೀರ್ಥಂಕರನಲ್ಲಿ ಹೀಗೆ ಬಿನ್ನೈಸುತ್ತಾನೆ ‘ಆದಿಬ್ರಹ್ಮನೆನಿಸಿದ ನೀನೇ ಎಲ್ಲದಕ್ಕೂ ಮೊದಲು, ನೀನು ಇರುವಂತೆಯೇ ನನ್ನಲ್ಲುಂಟಾದ ಮರುಳತನದಿಂದ ವ್ರತ ಸಮೇತವಾದ ವಿಪ್ರಾನ್ವಯವೊಂದನ್ನು (ವಿಪ್ರತನವನ್ನು ವಂಶಪಾರಂಪರ್ಯ) ಮಾಡಿಬಿಟ್ಟೆ…. ಯಜ್ಞೋಪವೀತದ ಧಾರಣೆ ನನ್ನಿಂದ ಅವರಿಗಾಯಿತು….. ಇದರಿಂದ ಗುಣವೋ ದೋಷವೋ? ಮುಂದಾಗುವುದು ಯುಕ್ತವೊ ಅಯುಕ್ತವೋ? ಹಾನಿ / ವೃದ್ಧಿಯೆಂಬೆರಡರಲ್ಲಿ ಯಾವುದರಲ್ಲಿ ಹೋಗಿ ನಿಲ್ಲುವುದು…. ಅಲ್ಲದೆ ಇಂದು ಬೆಳಗಿನ ಝಾವ ಬಿದ್ದ ಅನಿಷ್ಟ ಸೂಚಕ ಕನಸುಗಳ ಫಲ ಏನೆಂದು ತಿಳಿಯ ಹೇಳಿರಿ. ತಾನೀಗ ಅವಧಿಜ್ಞಾನದಿಂದ ಅರಿತವನಾಗಿದ್ದರೂ….. ಈ ಸಭಾ ಜನರು ಅರಿಯಲೆಂದು ಹೇಳಿ’.

ಆಗ ತ್ರಿಲೋಕಗುರುಗಳು – ‘ನೀನು ಬ್ರಾಹ್ಮಣ ಜಾತಿಯನ್ನು (ಬ್ರಾಹ್ಮಣ್ಯವನ್ನು ಜನ್ಮಕ್ಕೆ ಅಂಟಿಸಿದ್ದು) ಒಳ್ಳೆಯದೆಂದು ಭಾವಿಸಿ ಮಾಡಿದೆ. ಆದರೆ ಧರ್ಮದ ಉದ್ದೇಶದಿಂದ ನೀನು ಮಾಡಿದ್ದರಿಂದ ಆದ ಈ ಬ್ರಾಹ್ಮಣ ಜಾತಿಯ ಆಚರಣೆಯು ನೀನೆಂದಂತೆ – ಈ ಕೃತಯುಗದೊಳಗೆ ಮಾತ್ರವೇ ಸಲ್ಲುವುದು. ಆಮೇಲೆ ಆಚರಣೆ ಬಿಟ್ಟು, ಸನ್ಮಾರ್ಗದ ಬಗ್ಗೆ ಮಚ್ಚರ ಬೆಳೆಸಿಕೊಂಡು, ಕಲಿಯುಗ ಹತ್ತಿರ ಹತ್ತಿರವಾದಂತೆಲ್ಲಾ ಈ ಬ್ರಾಹ್ಮಣರು ದ್ರವ್ಯಲೋಭಾತುರರಾಗಿ, ಉನ್ಮಾರ್ಗ ಉಪದೇಶ ಉದ್ಯತ ಬುದ್ಧಿಯವರಾಗಿ ಅತಿಕ್ರೂರಿಗಳೂ ಆಗುವರು (15. 26). ಮಧು-ಮದ್ಯ-ಮಾಂಸಲೋಲುಪರೂ, ಅಧಾರ್ಮಿಕರೂ, ಪರಸ್ತ್ರೀರತಿಪ್ರಿಯರೂ, ಅಧರ್ಮಿಷ್ಟರೂ, ಕೊಲೆಗಡುಕರೂ, ಪಾಪಿಗಳೂ, ಸುಳ್ಳುಬಡುಕ ಸಂಪತ್ತಿನವರೂ ಆಗುವರು ಕಲಿಯುಗದೊಳಗೆ ಬ್ರಾಹ್ಮಣರು (15-27). ಆದರೂ ಈಗ ಸದಾಚಾರವಂತರಾಗಿರುವುದರಿಂದ ಅವರನ್ನು ಈ ಆಚರಣೆಯಲ್ಲೇ ನಡೆಯಲು ಬಿಡಬೇಕು. ‘ಮಾಡಿ ಕೆಡಿಸಿದರೆ’ ನಿನಗೆ ಎಂದೆಂದಿಗೂ ಕೆಟ್ಟ ಹೆಸರು ನಿಂತು ಬಿಡುವುದು’ ಎಂದು ಹೇಳಿ, ಮುಂದೆ ವೃಷಭನಾಥರು ಭರತ ಕಂಡ ದುಃಸ್ವಪ್ನಗಳ ಸೂಚಿತ ಫಲಗಳನ್ನು ವಿವರ ವಿವರವಾಗಿ ಅರ್ಥೈಸುತ್ತಾರೆ – ‘ಈ ದ್ವಿಜನ್ಮರು ಷಟ್ಕರ್ಮರಹಿತರಾಗುವ ಕೇಡಿನ ಸ್ಥಿತ್ಯಂತರದ ಪರಿಣಾಮ ತರಂಗಿತ ತರಂಗಿತವಾಗಿ ಆ ಮಂಡಲದ ಎಲ್ಲ ಜನರು ಸತ್ಯ-ಶೌಚವಿರಹಿತರಾಗಿ ಸಚ್ಚಾರಿತ್ರ್ಯ ಬಿಟ್ಟು ಭೋಗ ಉಪಭೋಗಗಳಲ್ಲಿ ಲೋಲುಪರಾಗುವರು…… ಇದರಿಂದ ನೀನು ಅಸಹ್ಯ ಪಡಬೇಡ….. ನಿನಗೆ ಜೈನಧರ್ಮ ಶಾಂತಿಯನ್ನುಂಟು ಮಾಡಲಿ’ ಎಂದು ಸಂತೈಸಿ ಕಳುಹಿಸಿದರು. ಭರತ ತನ್ನ ಪಾಪ ಪರಿಹಾರಕ್ಕಾಗಿ ಜೈನಗೃಹಗಳನ್ನು ಕಟ್ಟಿಸಿದನೆಂಬಲ್ಲಿ 15ನೇ ಆಶ್ವಾಸ ಮುಕ್ತಾಯವಾಗುತ್ತದೆ.

ಪಂಪನ ಭರತ ಕಂಡ ಈ ದುಃಸ್ವಪ್ನ ಇಂದೂ ಭಾರತವನ್ನು ಕಟುವಾಸ್ತವಾಗಿ ಬಾಧಿಸುತ್ತಲೇ ಇದೆ; ವಿಮುಕ್ತಿಯೆ ಇಲ್ಲದಂತೆ ಶ್ರೇಷ್ಠತೆಯನ್ನು ಹುಟ್ಟಿಗೆ ಅನ್ವಯಿಸಿಕೊಂಡ ಪಾಪದ ಫಲವನ್ನು ಭಾರತ ಉಣ್ಣುತ್ತಾ ನರಳುತ್ತಲೇ ಇದೆ. ಈ ಎಲ್ಲದರ ನಿವಾರಣೆಗಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಧರ್ಮ ಸಮನ್ವಯತೆ, ಸಮಾನತೆ, ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ನಮ್ಮ ಶ್ರೇಷ್ಠ ಸಂವಿಧಾನವನ್ನು ರಚಿಸಿದರು. ‘ಜನ್ಮಶ್ರೇಷ್ಠತೆ’ಯ ವ್ಯಸನದವರು ಈ ಸಂವಿಧಾನವನ್ನು ಬದಲಿಸಲೆಂದೇ ಅಧಿಕಾರಕ್ಕೆ ಬಂದಿದ್ದೇವೆ.. ಬದಲಿಸುತ್ತೇವೆ.. ಎನ್ನುತ್ತಾ ಜೀವ ವಿರೋಧಿ ಜನ್ಮಾಧಾರಿತ ವೈದಿಕತೆಯೆ ಸಂವಿಧಾನವಾಗಲಿ ಎಂಬ ಫರ್ಮಾನುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಹೊರಡಿಸುತ್ತಿದ್ದಾರೆ. ತಮ್ಮ ಜನ್ಮವನ್ನೆ ಯೋಗ್ಯತೆಯನ್ನಾಗಿಸಿಕೊಂಡವರು ಆದಿನಾಥನ ಕಲಿಯುಗದ ದರ್ಶನವನ್ನು ಸತ್ಯವಾಗಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...