Homeಮುಖಪುಟ'ಬ್ರೇಕು' ಕೊಟ್ಟ ರಾಜ್ಯದಲ್ಲೇ ಮೋದಿ ಗಾಡಿಗೆ ಬ್ರೇಕ್!

‘ಬ್ರೇಕು’ ಕೊಟ್ಟ ರಾಜ್ಯದಲ್ಲೇ ಮೋದಿ ಗಾಡಿಗೆ ಬ್ರೇಕ್!

- Advertisement -
- Advertisement -

| ಪಿ.ಕೆ. ಮಲ್ಲನಗೌಡರ್ |

ಶತಾಯಗತಾಯ ಮತ್ತೊಮ್ಮೆ ಪ್ರಧಾನಿಯಾಗಲು ಏನೆಲ್ಲ ಸರ್ಕಸ್ ಮಾಡುತ್ತಿರುವ ನರೇಂದ್ರ ಮೋದಿಯವರ ಕನಸಿನ ಓಟಕ್ಕೆ ಉತ್ತರ ಪ್ರದೇಶ ಎಂಬ ಈ ದೈತ್ಯ ರಾಜ್ಯವೇ ಬ್ರೇಕ್ ಹಾಕಲಿದೆ. 2014ರಲ್ಲಿ ದೊಡ್ಡ ಬ್ರೇಕ್ ನೀಡಿದ್ದ ರಾಜ್ಯವೇ 5 ವರ್ಷಗಳ ನಂತರ ಕುದುರೆಯ ಹುಚ್ಚು ಓಟಕ್ಕೆ ಬ್ರೇಕ್ ಹಾಕುತ್ತಿರುವುದು ವಿಶೇಷ.

ದೆಹಲಿಗೆ ಹೆಬ್ಬಾಗಿಲು ಎಂದೇ ಖ್ಯಾತಿ ಪಡೆದಿರುವ ಉತ್ತರ ಪ್ರಧೇಶ 80 ಸೀಟುಗಳನ್ನು ಹೊಂದಿದ್ದು, ಹೆಚ್ಚೂ ಕಡಿಮೆ ದೇಶದ 1/7ರಷ್ಟು ಸಂಸದರು ಈ ರಾಜ್ಯದವರೇ! ಹೀಗಾಗಿ ಉತ್ತರ ಪ್ರದೇಶದಲ್ಲಿ ಹೆಚ್ಚು ಸೀಟು ಪಡೆಯುವ ಪಕ್ಷಕ್ಕೆ ಸಹಜವಾಗಿಯೇ ದೆಹಲಿ ಗದ್ದುಗೆ ಹಿಡಿಯಲು ಒಂದು ಲಿಫ್ಟ್ ಸಿಕ್ಕಂತೆಯೇ!

ಘಟಬಂಧನ, ಮೋದಿ-ಶಾಗೆ ಪ್ರತಿಬಂಧನ

ಕಳೆದ ಚುನಾವಣೆವರೆಗೂ ಬದ್ಧ ವೈರಿಗಳಾಗಿದ್ದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಾರ್ಟಿಗಳು ಭಾರತದ ಚುನಾವಣಾ ಇತಿಹಾಸದಲ್ಲಿ ಭಿನ್ನ ಎನಿಸುವಂತಹ ಒಂದು ಒಪ್ಪಂದಕ್ಕೆ ಬಂದಿದ್ದೇ ಬಿಜೆಪಿಗೆ ದೊಡ್ಡ ಆಘಾತ ನೀಡಿದೆ. ಲೋಕಸಭಾ ಉಪ ಚುನಾವಣೆಗಳಲ್ಲಿ ಈ ಮೈತ್ರಿ ತೋರಿದ ರಾಜಕೀಯ ಜಾಣ್ಮೆ ಅದಕ್ಕೆ ಅದ್ಭುತ ಗೆಲುವನ್ನು ತಂದುಕೊಟ್ಟಿದೆ. ಆ ಕಾರಣಕ್ಕಾಗಿಯೇ ಈ ಚುನಾವಣೆಯಲ್ಲಿ ಈ ಘಟಬಂಧನ್ ಬಿಜೆಪಿ ಪಾಲಿಗೆ, ಮೋದಿ ಪಾಲಿಗೆ ಪ್ರತಿಬಂಧನವಾಗಲಿದೆ.

ಈಗ ಬಂದಿರುವ ಸಮೀಕ್ಷೆಗಳ ಆಧಾರದಲ್ಲಿ ಹೇಳುವುದಾದರೆ ಬಿಜೆಪಿ ಅಲ್ಲಿ ಈಗಿರುವ ಸ್ಥಾನಗಳಿಗಿಂತ 35-43 ಸೀಟು ಕಡಿಮೆ ಪಡೆಯುವ ಸಾಧ್ಯತೆ ಇದೆ. ಇನ್ನು ಕೆಲವು ಚುನಾವಣಾ ತಜ್ಞರ ಪ್ರಕಾರ, ಬಿಜೆಪಿಗೆ 25-29 ಸೀಟು ಅಷ್ಟೇ ಸಿಗಲಿವೆ. ಅಂದರೆ ಸುಮಾರು 50 ಸೀಟ್‌ಗಳ ಲಾಸ್! ಕಾಂಗ್ರೆಸ್ ಘಟಬಂಧನದ ಹೊರಗಿದ್ದು, ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದು ಬಿಜೆಪಿಗೆ 10-18 ಸ್ಥಾನಗಳಲ್ಲಿ ಇದರಿಂದ ಲಾಭವಾಗಬಹುದೇ ಎಂಬ ಪ್ರಶ್ನೆಗಳೂ ಎದ್ದಿವೆ. ಇನ್ನೊಂದು ವಿಶ್ಲೇಷಣೆ ಪ್ರಕಾರ, ಹತ್ತಾರು ಕ್ಷೇತ್ರಗಳಲ್ಲಿ ಬ್ರಾಹ್ಮಣ, ಬನಿಯಾ ಮತ್ತು ಇತರ ಮೇಲ್ಜಾತಿಗಳ ಮತಗಳನ್ನು ಕಿತ್ತುಕೊಳ್ಳುವ ಮೂಲಕ ಬಿಜೆಪಿಗೆ ಕಾಂಗ್ರಸ್ ಏಟೂ ನೀಡಬಹುದು ಎನ್ನಲಾಗುತ್ತಿದೆ.

2014-ಬಿಜೆಪಿಗೆ ಬಂಪರ್

2014ರಲ್ಲಿ ಬಿಜೆಪಿಗೆ ಹಿಂದಿ ಭಷಿಕ ರಾಜ್ಯಗಳಲ್ಲಿ ‘ಸ್ವೀಪ್’ ಎನ್ನುವಂತಹ ಗೆಲುವು ದೊರಕಿತ್ತು. ಉತ್ತರ ಪ್ರದೇಶದಲ್ಲಿ ಅದು 80 ರ ಪೈಕಿ 71 ಸೀಟುಗಳನ್ನು, ಅದರ ಮಿತ್ರಪಕ್ಷ ಅಪ್ನಾ ದಳ್ 2 ಸಿಟನ್ನು, ಹೀಗೆ 73 ಸೀಟು ಪಡೆದಿತ್ತು. ಆಗ ಸಮಾಜವಾದಿ ಪಕ್ದಷಕ್ಕೆ 5, ಕಾಂಗ್ರೆಸ್‌ಗೆ 2 ( ಸೋನಿಯಾ ಮತ್ತು ರಾಹುಲ್ ಗೆದ್ದ ಕ್ಷೇತ್ರಗಳು)ಸಿಟು ಬಂದಿದ್ದವು. ಮಾಯಾವತಿಯವರ ಬಿಎಸ್ಪಿ ಸೊನ್ನೆ ಸ್ಕೋರ್ ಮಾಡಿತ್ತು.

2014ರ ನಂತರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ದಿಗ್ವಿಜಯ ಸಾಧಿಸುತ್ತಲೇ ಹೋದಾಗ ಎಲ್ಲವೂ ಕೇಸರಿಮಯವಾಗುವ ಅಪಾಯದ ಸೂಚನೆ ಕಾಣತೊಡಗಿತ್ತು.

ಮೋದಿ ಪ್ರಧಾನಿಯಾದ ನಂತರದಲ್ಲಿ ಬಣ್ಣ ಬಣ್ಣದ ಹೆಸರಿನ ಘೋಷಣೆಗಳನ್ನು ಮಾಡುವುದು, ಅದಕ್ಕೆ ಪೇಯ್ಡ್ ಮೀಡಿಯಾ ಎಗ್ಗಿಲ್ಲದಂತೆ ಪ್ರಚಾರ ಕೊಡುವುದು ಶುರುವಾಗಿತು. ಇದೇ ಹೊತ್ತಲ್ಲಿ ಅಮಿತ್ ಶಾ ಹಲವಾರು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರು. ಇದಕ್ಕಾಗಿ ಬಿಜೆಪಿ ಬಳಸಿದ್ದು ಆದಾಯ ತರೆಇಗೆ ಇಲಾಖೆ, ಸಿಬಿಐ ಮತ್ತು ಇ.ಡಿ. ಇಲಾಖೆಗಳ ಅಸ್ತ್ರಗಳನ್ನು. ಅದರ ಪರಿಣಾಮವಾಗಿ ಹರಯಾಣ, ಜಾರ್ಖಂಡ್, ಆಂಧ್ರಪ್ರದೇಶ (ನಾಯ್ಡು ಈಗ ಬಿಜೆಪಿ ಜೊತೆಗಿಲ್ಲ), ಮಹಾರಾಷ್ಟ್ರ, ಮತ್ತು ಜಮ್ಮು ಕಾಶ್ಮೀರಗಳಲ್ಲಿ ಅದು ಸ್ವಂತ ಬಲ ಅಥವಾ ಮೈತ್ರಿ ಬಲ ಅಥವಾ ‘ಆಪರೇಷನ್ ಕಮಲ’ದ ಮೂಲಕ ಅಧಿಕಾರದಲ್ಲಿ ಭಾಗಿಯಾಯ್ತು.

ಆಮೇಲೆ, ಅಸ್ಸಾಂ, ಗೋವಾ, ಮಣಿಪುರ ಮತ್ತು ಉತ್ತರಖಾಂಡ್‌ಗಳಲ್ಲೂ ನಿಜೆಪಿ ತನ್ನ ಅಧಿಪತ್ಯವನ್ನು ಗಟ್ಟಿ ಮಾಡಿಕೊಂಡಿತು. ಬಹುಪಾಲು ಕಡೆ ಅದು ಅಕ್ರಮ ಮಾರ್ಗಗಳ ಮೂಲಕವೇ ಅಧಿಕಾರದಲ್ಲಿ ಪಾಲು ಪಡೆಯಿತು. ಆದರೆ ತೀವ್ರ ಅಪಾಯದ ಭಾಗ ಶುರುವಾಗಿದ್ದು ಉತ್ತರಪ್ರದೇಶದ ಅಸೆಂಬ್ಲಿ ಚುನಾವಣೆ ನಂತರ.

ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅದು ಗಳಿಸಿದ ಗೆಲುವು ಪ್ರಜಾಪ್ರಭುತ್ವಕ್ಕೇ ಸವಾಲು ಎಸೆಯುವಂತಿತ್ತು. ನೋಟ್ ಬ್ಯಾನ್ ಆಗಷ್ಟೇ ಭ್ರಷ್ಟರ ವಿರುದ್ಧ ಮೋದಿ ಯುದ್ಧ ಎಂಬ ‘ಸಂಚಲನ’ ಮೂಡಿಸಿತ್ತು. ಆ ಸಂಚಲನವನ್ನು ಬಾಯಿಬಡುಕ ಮೋದಿ, ಅವರ ಪಕ್ಷದ ಗುಲಾಮಿ ನಾಯಕರು, ಟಿವಿ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮಬ್ಭಕ್ತರು ಸೃಷ್ಟಿಸಿದ್ದರು. ಆದರೆ, ಉತ್ತರ ಪ್ರದೇಶದ ಚುನಾವಣೆಯಲ್ಲಿ ಈ ಕೃತಕ ಸಂಚಲನೆಗೆ ಹಿನ್ನಡೆ ಕಂಡಾಗ, ಬಿಜೆಪಿಯ ನೆರವಿಗೆ ಬಂದದ್ದು ಎರಡು ಅಂಶಗಳು.

ಒಂದು, ವಿರೋಧ ಪಕ್ಷಗಳ ನಡುವೆ ಏರ್ಪಡದ ಹೊಂದಾಣಿಕೆ. ಎರಡನೇಯದು, ಮುಜಾಫರ್ ನಗರದಲ್ಲಿ ಹಿಂದು ಕೋಮುವಾದಿಗಳು ಸೃಷ್ಟಿಸಿದ ಭೀಕರ ಕೋಮು ಹಿಂಸಾಚಾರ. ಇದನ್ನು ಬಳಸಿಕೊಂಡ ಮೋದಿ-ಶಾ ಮತ್ತು ಅವರ ಲಂಗೋಟಿ ಯೋಗಿ ಆದಿತ್ಯನಾಥರು ಅಲ್ಲಿ ಕೋಮು ಧ್ರುವೀಕರಣ ಮಾಡಲು ಯಶಸ್ವಿಯಾಗಿಬಿಟ್ಟರು. ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಇದು ಮೊದಲ ಅಪಾಯ. ಅಲ್ಲಿ ಯೋಗಿ ಆದಿತ್ಯನಾಥ ಎಂಬ ಅಲ್ಪಸಂಖ್ಯಾತ ವಿರೋಧಿ ದುಷ್ಟನನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಲಾಗಿತು. ಇದು ಎರಡನೇಯ ದೊಡ್ಡ ಅಪಾಯ. ಇದೆಲ್ಲ ಪ್ರಜಾಪ್ರಭುತ್ವಕ್ಕೇ ಅಪಾಯ ಒಡ್ಡುವ ಒಂದು ಪೂರ್ವಯೋಜಿತ ಸಂಚೇ ಆಗಿತ್ತು.

ಪ್ರಾದೇಶಿಕ ಪಕ್ಷಗಳಿಗೆ ಕುತ್ತು

ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಲೇ ಸಾಗಿದ ಬಿಜೆಪಿಯ ಹುಚ್ಚು ಕುದುರೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ನಿರ್ನಾಮ ಮಾಡಲು ಹೊರಟಿತು. ಆಗ ಮೊದಲು ಎಚ್ಚರಗೊಂಡ ಅಖಿಲೇಶ್ ಯಾದವ್ ಮಾಯಾವತಿಯವರ ಜೊತೆಗಿನ ತನ್ನೆಲ್ಲ ಹಗೆತನ ಮರೆತು ಮುಕ್ತ ಸಂವಾದ ನಡೆಸಿದರು. ಅದರ ಫಲವಾಗಿ ಅಲ್ಲಿ ಆಗ ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಾರ್ಟಿ, ಕಾಂಗ್ರೆಸ್ ಮತ್ತು ರಾಷ್ಟ್ರೀಯ ಲೋಕದಳಗಳ ನಡುವೆ ಒಂದು ಒಪ್ಪಂದ, ಮೈತ್ರಿ ಶುರುವಾಗಿತು. ಮುಂದೆ ಉತ್ತರಪ್ರದೇಶದಲ್ಲಿ ನಡೆದ ಮೂರು ಲೋಕಸಭ ಚುನಾವಣೆಗಳಲ್ಲಿ ಈ ಮೈತ್ರಿ ಮೂರಕ್ಕೆ ಮೂರನ್ನು ಗೆದ್ದು ಬಿಜೆಪಿಗೆ ನಡುಕ ಹುಟ್ಟಿಸಿತು. 2018ರಲ್ಲಿ ನಡೆದ ಈ ಉಪಚುನಾವಣೆಗಳಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಪ್ರತಿನಿಧಿಸುತ್ತಿದ್ದ ಗೋರಖಪುರ ಜೊತೆಗೆ ಪ್ರತಿಷ್ಠಿತ ಪುಲ್ಪುರ್ ಮತ್ತು ಕೈರಾನಾ ಕ್ಷೇತ್ರಗಳಲ್ಲಿ ಈ ಘಟಬಂಧನವು ಬಿಜೆಪಿಯನ್ನು ಸರಾಸರಿ ಎರಡು ಲಕ್ಷಗಳಿಂದ ಸೋಲಿಸಿತು.

ಆಗಿಂದ ಈ ಮೈತ್ರಿಗೆ ಇನ್ನಷ್ಟು ಕಸುವು ಬಂದಿದೆ. ಉತ್ತರ ಪ್ರದೇಶದ ಸರ್ಕಾರ ಮಾಡುತ್ತಿರುವ ಪೊಲೀಸ್ ಗೂಂಡಾಗಿರಿ ರಾಜಕಾರಣದಿಂದ ಅಲ್ಲಿನ ದಲಿತರು, ಅಲ್ಪಸಂಖ್ಯಾತರು ಭಯಭಿತರಾಗಿದ್ದಾರೆ. ಹೀಗಾಗಿ ಈ ಸಲ ದಲಿತರು, ಮುಸ್ಲಿಮರು ಮತ್ತು ಯಾದವರು ಸಾರಾಸಗಟಾಗಿ ಘಟಬಂಧನದ ಪರ ನಿಲ್ಲುತ್ತಿದ್ದಾರೆ. ಜೊತೆಗೆ ಮೋದಿಯ ಸೃಷ್ಟಿತ ಹವಾ ಕೂಡ ಇಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಈ ಹೆಬ್ಬಾಗಿಲಿನ ರಾಜ್ಯದಲ್ಲಿ ಬಿಜೆಪಿ 40 ರಿಂದ 46 ಸೀಟುಗಳನ್ನು ಕಳೆದುಕೊಳ್ಳುವುದು ಪಕ್ಕಾ ಆಗಿದೆ.

ಎಬಿಪಿ-ಸಿವೋಟರ್ ಸಮೀಕ್ಷಯ ಪ್ರಕಾರ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಸಂಖ್ಯೆ 73ರಿಂದ 25ಕ್ಕೆ ಕುಸಿಯಲಿದೆ. ಘಟಬಂಧನ 51 ಸೀಟು ಗಳಿಸಲಿದೆ. ಎಬಿಪಿ-ನೆಲ್ಸನ್ ಸರ್ವೆ ಪ್ರಕಾರ ಘಟಬಂಧನ್ 42 ಸಿಟು ಗಳಿಸಲಿದೆ.
ಕಾಂಗ್ರೆಸ್ ಘಟಬಂಧನದಲ್ಲಿ ಇದ್ದಿದ್ದರೆ ಬಿಜೆಪಿಗೆ ಇನ್ನೂ 10-15 ಸೀಟು ಲಾಸ್ ಆಗಬಹುದಿತ್ತು ಎನ್ನಲಾಗಿದೆ. ಕಾಂಗ್ರೆಸ್ ಸ್ವತಂತ್ರ ಸ್ಪರ್ಧೆಯಿಂದ ಬಿಜೆಪಿಗೆ 10-14 ಸೀಟುಗಳಲ್ಲಿ ಲಾಭ ಎಂದು ಎನ್‌ಡಿಟಿವಿಯ ಪ್ರಣಬ್ ರಾಯ್ ತಂಡ ಹೇಳುತ್ತಿದೆ. ಇನ್ನು ಕೆಲವು ರಾಜಕೀಯ ಪಂಡಿತರ ಪ್ರಕಾರ, ಕನಿಷ್ಠ ಹತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಿಜೆಪಿಯ ಸೋಲಿಗೆ ಕಾರಣವಾಗಬಹುದು.

ಅಂತಿಮವಾಗಿ, 2014ರಲ್ಲಿ ‘ಬ್ರೇಕು’ ಕೊಟ್ಟ ರಾಜ್ವೇ ಮೋದಿ ಗಾಡಿಯ ಓಟಕ್ಕೆ ಮೊದಲ ‘ಬ್ರೇಕ್’ ಹಾಕಲಿದೆ ಎಂಬುಬಂತೂ ಸ್ಪಷ್ಟ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...