Homeಮುಖಪುಟಪ್ಯಾರಲಲ್ ಸಿನೆಮಾ V/S ಕಮರ್ಷಿಯಲ್ ಸಿನಿಮಾ ಸಿನಿಮಾ ಎಂಬ ಹುಸಿ ವೈರುಧ್ಯ

ಪ್ಯಾರಲಲ್ ಸಿನೆಮಾ V/S ಕಮರ್ಷಿಯಲ್ ಸಿನಿಮಾ ಸಿನಿಮಾ ಎಂಬ ಹುಸಿ ವೈರುಧ್ಯ

- Advertisement -
- Advertisement -

| ರಾಜಶೇಖರ್ ಅಕ್ಕಿ |

ಸಿನಿಯಾನ ಅಂಕಣ ಶುರುವಾದ ನಂತರ ಕೆಲವು ಪ್ರಶ್ನೆಗಳು ಬಂದಿವೆ. ಅವುಗಳಲ್ಲಿ ಒಂದೆರಡನ್ನು ಉತ್ತರಿಸುವ ಪ್ರಯತ್ನ ಮಾಡುವೆ.

ಸಿನೆಮಾದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಅಂಶ ಯಾವುದು? ಕಥೆಯೇ, ಚಿತ್ರಕಥೆಯೇ, ಸಂಭಾಷಣೆಯೇ, ನಾಯಕ ನಾಯಕಿಯೇ, ನಟರೇ, ಹಾಡುಗಳೆ ಇತ್ಯಾದಿಗಳಲ್ಲಿ ಯಾವುದು ಒಂದು ಸಿನೆಮಾದ ಯಶಸ್ಸನ್ನು ನಿರ್ಧರಿಸುತ್ತದೆ?

ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾಗಳ ವ್ಯತ್ಯಾಸವೇನು? ಹಿಂದಿಯಲ್ಲಿ ಅನೇಕ ಪ್ಯಾರಲೆಲ್ ಸಿನೆಮಾಗಳು ಬರುತ್ತಿವೆ, ಯಶಸ್ಸೂ ಗಳಿಸುತ್ತಿವೆ, ಕನ್ನಡದಲ್ಲಿ ಏಕೆ ಆಗುತ್ತಿಲ್ಲ?

ಎರಡನೇ ಪ್ರಶ್ನೆಯನ್ನೇ ಮೊದಲು ಎತ್ತಿಕೊಳ್ಳುವ. ಹೌದು ಕೆಲ ದಶಕಗಳ ಹಿಂದೆ ಪ್ಯಾರಲಲ್ ಸಿನೆಮಾ ಮತ್ತು ಕಮರ್ಷಿಯಲ್ ಸಿನೆಮಾ ಎನ್ನುವ ಬೇರೆ ಬೇರೆ ಹೊನಲುಗಳಿದ್ದದ್ದು ನಿಜ. 60ರ ಮತ್ತು 70ರ ದಶಕಗಳಲ್ಲಿ ರಾಜೇಶ್ ಖನ್ನಾ ಸೂಪರ್‍ಸ್ಟಾರ್ ಆಗಿ ಮೆರೆದು, 70ರ ದಶಕದಲ್ಲಿ ಆ್ಯಂಗ್ರಿ ಯಂಗ್‍ಮ್ಯಾನ್ ಅಮಿತಾಭ್ ಬಚ್ಚನ್ ಎರಡನೆಯ ಮತ್ತು ಭಾರತೀಯ ಚಿತ್ರರಂಗದ ಕೊನೆಯ ಸೂಪರ್‍ಸ್ಟಾರ್ ಆಗಿ ಒಂದಾದಮೇಲೆ ಒಂದು ಹಿಟ್ ಚಿತ್ರಗಳನ್ನು ನೀಡುತ್ತಿದ್ದಾಗಿನ ಸಮಯ ಮತ್ತು ಆಗಿನ ಸಾಮಾಜಿಕ ಪರಿಸ್ಥಿತಿಗಳು ವಿಶಿಷ್ಟವಾಗಿದ್ದವು (ಇದರ ಬಗ್ಗೆ ಅನೇಕ ಅಧ್ಯಯನಗಳಾಗಿವೆ.) ಅದಾದನಂತರ ಬಂದ 80ರ ದಶಕವನ್ನು ಹಿಂದಿ ಚಿತ್ರರಂಗದ ಅತ್ಯಂತ ಕೆಟ್ಟ ದಶಕವೆಂದೇ ಕರೆಯಲಾಗುತ್ತದೆ. ಆ ಸಮಯದಲ್ಲಿಯೇ ಫಾರ್ಮುಲಾ ಸಿನೆಮಾ ಎನ್ನುವ ಪದ ಚಾಲ್ತಿಯಲ್ಲಿ ಬಂತು. ಸಿನೆಮಾ ಅಂದರೆ ಒಂದು ಊಟದ ಥಾಲಿ ಇದ್ದಂತೆ, ರೊಟ್ಟಿ ಅನ್ನ ಪಲ್ಯದಂತಹ ಸಾತ್ವಿಕ ಪದಾರ್ಥದೊಂದಿಗೆ ಉಪ್ಪಿನಕಾಯಿಯಂತಹ ಪದಾರ್ಥಗಳೂ ಇರಬೇಕು ಎನ್ನುವ ಮೂರ್ಖ ಅಸಂಬದ್ಧ ಮಾತುಗಳೂ ಕೇಳಿಬಂದವು. ಆ ಫಾರ್ಮುಲಾಗಳಿಗೆ ಅನುಗುಣವಾಗಿಯೇ ಹಾಡುಗಳು ಫೈಟ್‍ಗಳು, ಪ್ಯಾಥೋ ಎಮೋಷನ್‍ಗಳು, ಹೀರೋನ ಬಾಲ್ಯವಿರುವ, ಉದ್ರೇಕಕಾರೀ ದೃಶ್ಯಗಳನ್ನು ಒಳಗೊಂಡ ಅನೇಕ ಚಿತ್ರಗಳು ಬಂದವು. ಅದರಲ್ಲಿ ಹೆಚ್ಚಿನವು ಕೆಟ್ಟ ಚಿತ್ರಗಳಾಗಿದ್ದವು ಎಂದರೆ ಬಹುತೇಕರು ಆಕ್ಷೇಪಿಸಲಾರರು. ಆ ಸಮಯದಲ್ಲಿ ಇಂಥ ಚಿತ್ರಗಳನ್ನು ನೋಡಿ ಬೇಸತ್ತು, ತಮ್ಮಲ್ಲಿಯ ಕಥೆಗಳನ್ನು ಹೇಳಬೇಕೆನ್ನುವ ತುಡಿತ ಇರುವ ನಿರ್ದೇಶಕರು ಈ ಪ್ಯಾರಲಲ್ ಸಿನೆಮಾದ ಪಯಣವನ್ನು ಶುರುಮಾಡಿದರು. ಅಂದಹಾಗೆ, ಈ ‘ಪ್ಯಾರಲಲ್ ಸಿನೆಮಾ’ ಎನ್ನುವ ಪದ ನನ್ನನ್ನೂ ಒಳಗೊಂಡಂತೆ ಯಾವ ನಿರ್ದೇಶಕನಿಗೂ ಇಷ್ಟ ಇಲ್ಲ. 1975ರಲ್ಲಿ ಸ್ಥಾಪಿತವಾದ ನ್ಯಾಷನಲ್ ಫಿಲ್ಮ್ ಡೆವಲಪ್‍ಮೆಂಟ್ ಕಾರ್ಪೊರೇಷನ್ NFDC ಇದರಲ್ಲಿ ಪ್ರಮುಖ ಪಾತ್ರ ವಹಿಸಿತು (ಇನ್ನೂ ಕೆಲಸ ಮಾಡುತ್ತಿದೆ). ಶ್ಯಾಮ್ ಬೆನಗಲ್, ಅಡೂರ್ ಗೋಪಾಲಕೃಷ್ಣ, ಸುಧೀರ್ ಮಿಶ್ರ, ಮಣಿ ಕೌಲ್, ಎಮ್ ಎಸ್ ಸತ್ಯು, ಬಾಸು ಚಟರ್ಜಿ ಮತ್ತು ಗಿರೀಶ್ ಕಾಸರವಳ್ಳಿಯಂತಹ ಅನೇಕರು ಹಲವಾರು ಉತ್ಕೃಷ್ಠ ಸಿನೆಮಾಗಳನ್ನು ನೀಡಿದರು.

ಅನೇಕರು ಪ್ಯಾರಲಲ್ ಸಿನೆಮಾ ಎಂದರೆ ಬೋರು ಹೊಡೆಸುವ, ಮಂದಗತಿಯ, ಹೆಚ್ಚಿನ ಬೆಳಕಿರದ ಸಿನೆಮಾಗಳು ಎಂತಲೇ ಭಾವಿಸಿದ್ದಾರೆ. ಇದು ಸತ್ಯಕ್ಕೆ ದೂರ. ಹೌದು ಅನೇಕ ಪ್ಯಾರಲಲ್ ಸಿನೆಮಾಗಳು ಹಾಗಿದ್ದಿರಬಹುದು ಆದರೆ ಕಮರ್ಷಿಯಲ್ ಸಿನೆಮಾದ ಬ್ರ್ಯಾಕೆಟ್‍ನಲ್ಲಿ ಬರುವ ಸಿನೆಮಾಗಳೂ ಬೋರು ಹೊಡೆಸುವ ಸಿನೆಮಾಗಳು ಆಗಿದ್ದವು. ಪ್ಯಾರಲಲ್ ಸಿನೆಮಾ ಎನ್ನುವ ಹೆಚ್ಚಿನ ಸಿನೆಮಾಗಳು ಖಂಡಿತವಾಗಿಯೂ ಸಿನಿಮೀಯ ಅಂಶಗಳನ್ನು ಹೊಂದಿದ್ದವು. ಕಥೆಯನ್ನು ಹೇಳುವ ತಂತ್ರಗಾರಿಕೆಯೊಂದಿಗೆ ಹಲವಾರು ನಿರ್ದೇಶಕರು ಆಟವಾಡಿದರು. ಗಟ್ಟಿಯಾದ ನಿರೂಪಣೆಯೊಂದಿಗೆ ಆಯಾ ಚಿತ್ರಗಳ ಛಾಯಾಗ್ರಹಣ, ಅಭಿನಯ, ಹಿನ್ನೆಲೆ ಸಂಗೀತ ಇವೆಲ್ಲವುಗಳೊಂದಿಗೂ ಪ್ರಯೋಗಗಳನ್ನು ಮಾಡಲಾಯಿತು. ಅನೇಕ ಕಾದಂಬರಿ ಮತ್ತು ಸಣ್ಣಕಥೆಗಳನ್ನು ಆಧರಿಸಿ ಗ್ರಾಮೀಣ ಮತ್ತು ನಗರ ಪ್ರದೇಶದ ಕಥೆಗಳನ್ನು ಹೆಣೆದರು. ಹಾಡು ಫೈಟ್‍ಗಳೇ ಮನೋರಂಜನೆ ಎಂದುಕೊಂಡವರಿಗೆ ಬಹುಶಃ ಬೋರ್ ಹೊಡೆಸಿರಬಹುದು. ಆದರೆ ಹಾಡು ಫೈಟ್‍ಗಳೇ ಬೋರು ಹೊಡೆಸುವುದಕ್ಕೆ ಕಾರಣವಾಗಬಲ್ಲವು ಎನ್ನುವ ಅಂಶ ಮರೆಯಬಾರದು.

ಕಮರ್ಷಿಯಲ್ ಸಿನೆಮಾ ಮತ್ತು ಪ್ಯಾರಲಲ್ ಸಿನೆಮಾ ಎಂದು ಸಿನೆಮಾಗಳನ್ನು ಪ್ರತ್ಯೇಕಿಸುವುದೇ ತಪ್ಪು ಎನ್ನುವ ಒಮ್ಮತಕ್ಕೆ ಇತ್ತೀಚಿಗೆ ಎಲ್ಲರೂ ಬಂದಿದ್ದಾರೆ. ಕಮರ್ಷಿಯಲ್ ಎನ್ನುವ ಸಿನೆಮಾಗಳಲ್ಲೂ ಅನೇಕ ಅತ್ಯುತ್ತಮ ಸಿನೆಮಾಗಳು ಬಂದವು ಎನ್ನುವುದನ್ನು ಮರೆಯಬಾರದು ಹಾಗೂ ಹೆಚ್ಚಿನ ಕಮರ್ಷಿಯಲ್ ಸಿನೆಮಾಗಳನ್ನೂ ಜನರು ನೋಡುವುದಿಲ್ಲ ಎನ್ನುವುದನ್ನೂ ಗಮನಿಸಬೇಕು.

ತೊಂಭತ್ತರ ದಶಕದಲ್ಲಿ ಟಿವಿಯ ಆಗಮನ, ಎನ್‍ಎಫ್‍ಡಿಸಿಯೊಂದಿಗೆ ಆದ ಸಮಸ್ಯೆಗಳು ಹಾಗೂ ಸ್ವತಃ ನಿರ್ದೇಶಕರ ಸಮಸ್ಯೆಗಳಿಂದಾಗಿ ಪ್ಯಾರಲಲ್ ಸಿನೆಮಾ ಎನ್ನುವ ಪ್ರಕ್ರಿಯೆ ಕೊನೆಗೊಳ್ಳುತ್ತ್ತಾ ಬಂತು.

ಆದರೆ ಈ ವರ್ಷಗಳಲ್ಲಿ ಅನೇಕ ಪ್ಯಾರಲಲ್ ಸಿನೆಮಾಗಳು ಬಂದಿವೆ ಹಾಗೂ ಯಶಸ್ಸನ್ನೂ ಕಂಡಿವೆ, ಕನ್ನಡದಲ್ಲಿ ಏಕೆ ಅಂತಹ ಸಿನೆಮಾಗಳು ಬರುತ್ತಿಲ್ಲ ಎನ್ನುವ ಪ್ರಶ್ನೆ ಬಂತು. ನಾನೂ ಆ ಚಿತ್ರಗಳಿಗೆ ಉದಾಹರಣೆಗಳನ್ನು ಕೇಳಿದಾಗ ಮುಲ್ಕ್, ತಲ್ವಾರ್ ಅಲಿಗಢ, ವಿಕಿ ಡೋನರ್ ಪಿಂಕ್, ಪೀಕು ಹಾಗೂ ಇಂತಹ ಉದಾಹರಣೆಗಳನ್ನು ನೀಡಿದರು. ನಾನು ಪ್ಯಾರಲಲ್ ಸಿನೆಮಾ ಎನ್ನುವ ಪದದ ಬಳಕೆಗೆ ಆಕ್ಷೇಪಿಸಿದಾಗ ‘ಬ್ರಿಜ್ ಸಿನೆಮಾ’ ಎನ್ನುವ ಮತ್ತೊಂದು ಪದ ಬಳಸಿದರು, ಅದಕ್ಕೆ ಕಾರಣ ಕೇಳಿದಾಗ ಆ ಚಿತ್ರಗಳಲ್ಲಿ ಹಾಡುಗಳಿರುವುದಿಲ್ಲ, ಫೈಟ್‍ಗಳೂ ಇರುವುದಿಲ್ಲ, ಕ್ಯಾಬರೆ ಇರುವುದಿಲ್ಲ ಎಂದು ಹೇಳಿದರು.

ಇವುಗಳೇ ಮೊದಲ ಪ್ರಶ್ನೆಗೆ ಎಡೆಮಾಡಿಕೊಡುತ್ತವೆ. ಒಂದು ಚಿತ್ರ ಯಶಸ್ಸಿಗೆ ಮೂಲ ಕಾರಣಗಳೇನು? ಕಥೆ, ಚಿತ್ರಕಥೆ, ಸಂಭಾಷಣೆ, ಅಭಿನಯ, ಸಂಗೀತ, ಛಾಯಾಗ್ರಹಣ ಇವೆಲ್ಲವುಗಳನ್ನೂ ಪ್ರತ್ಯೇಕಿಸಿ ನೋಡಬಾರದೆಂದು ನನ್ನ ಅನಿಸಿಕೆ. ಒಂದು ಯಶಸ್ವೀ ಚಿತ್ರವು ಈ ಎಲ್ಲ ಅಂಶಗಳನ್ನೂ ಒಳಗೊಂಡು ಸಮಗ್ರವಾಗಿ ಕೆಲಸ ಮಾಡಿರುತ್ತದೆ. ಖಂಡಿತವಾಗಿಯೂ ಚಿತ್ರದ ಸ್ಟ್ರಕ್ಚರ್ ಆ ಚಿತ್ರಕ್ಕೆ ಭದ್ರ ಅಡಿಪಾಯ ಹಾಕುತ್ತದೆ. ಆ ಅಡಿಪಾಯ ಗಟ್ಟಿಯಿದ್ದು ಮಿಕ್ಕ ಎಲ್ಲ ಅಂಶಗಳೂ ಸರಿಯಾಗಿದ್ದಾಗ ಚಿತ್ರ ಗೆಲ್ಲುವುದು ಖಚಿತ. ಆಗ ಆ ಚಿತ್ರಗಳಲ್ಲಿ ಹಾಡು ಫೈಟ್ ಕ್ಯಾಬರೆ ಇವೆಯೇ ಎನ್ನುವ ಪ್ರಶ್ನೆ ಉದ್ಭವಿಸುವುದಿಲ್ಲ. ಮನರಂಜನೆಗೆ ಹಾಡು ಫೈಟ್‍ಗಳು ಮಾನದಂಡವೂ ಅಲ್ಲ.

ಜನರು ಕಲಾತ್ಮಕ ಚಿತ್ರಗಳನ್ನು ನೋಡಲಿಚ್ಛಿಸುವುದಿಲ್ಲ, ಬರೀ ಹಾಡು ಫೈಟ್‍ಗಳ ಚಿತ್ರಗಳೇ ಅವರಿಗೆ ಇಷ್ಟ ಎಂದು ಕೆಲವರು ವಾದಿಸುವವರಿದ್ದಾರೆ; ಅದು ಸತ್ಯವೋ ಸುಳ್ಳೋ ಗೊತ್ತಿಲ್ಲ. ಕೆಲದಿನಗಳ ಹಿಂದೆ ಇಂಥದ್ದೇ ಚರ್ಚೆ ನಡೆದಾಗ ನನ್ನ ಸ್ನೇಹಿತರೊಬ್ಬರು ಇತರರಿಗೆ ಚಾಲೆಂಜ್ ಮಾಡಿದರು. ಕಳೆದ ಒಂದು ದಶಕದಲ್ಲಿ ಯಶಸ್ಸು ಕಾಣದ ಒಂದು ಶ್ರೇಷ್ಠ ಚಿತ್ರವನ್ನು ಹೆಸರಿಸಿ, ಆಗ ನಾನು ಪ್ರೇಕ್ಷಕರ ಮನಸ್ಥಿತಿಯ ಬಗ್ಗೆ ನೀವು ಹೇಳುವುದನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಅಲ್ಲಿದ್ದ ಯಾರಿಗೂ ಸುಲಭವಾದ ಉತ್ತರ ಸಿಗಲಿಲ್ಲ. ಕಲಾತ್ಮಕ ಚಿತ್ರದ ಪರಿಧಿಯಲ್ಲಿ ಬರುವ ಹಲವಾರು ಚಿತ್ರಗಳ ಹೆಸರು ಕೇಳಿಬಂದವು ಆದರೆ ಅವೆಲ್ಲವೂ ಕಳಪೆ ಚಿತ್ರಗಳು ಎನ್ನುವುದನ್ನು ಯಾರೂ ನಿರಾಕರಿಸಲಾಗಲಿಲ್ಲ. ಹಾಗಾಗಿ ನಿಷ್ಕರ್ಷವಿಷ್ಟೆ; ಕಲಾತ್ಮಕ, ಪ್ಯಾರಲಲ್, ಬ್ರಿಜ್ ಸಿನೆಮಾ, ಕ್ರಾಸ್‍ಓವರ್ ಸಿನೆಮಾ, ಅವಾರ್ಡ್ ಸಿನೆಮಾ ಹಾಗೂ ಕಮರ್ಷಿಯಲ್ ಸಿನೆಮಾ, ಇವೆಲ್ಲವೂ ಹುಸಿ ಕಪ್ಪುಬಿಳುಪುಗಳು (false binaries). ಒಳ್ಳೇ ಚಿತ್ರ ಗೆದ್ದೇ ಗೆಲ್ಲುವುದು, ಸಿನೆಮಾ ರಚನೆಯ ಕಲೆ ಮತ್ತು ವಿಜ್ಞಾನವನ್ನು ಅರಿಯುವ. ಇಲ್ಲಿಯೂ ಮತ್ತೇ ಶ್ರೇಷ್ಠ ಸಿನೆಮಾಗಳನ್ನು ಮಾಡುವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...