Homeಅಂಕಣಗಳುಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

ಆಘಾತವಾಣಿ | `ಜೈಲೊಳಗೆ ಸ್ವೋಭುನಕ್ಕೆ ರೆಡಿ ಮಾಡಿ, ಆಮ್ಯಾಲೆ ನನ್ನ ಅರೆಸ್ಟ್ ಮಾಡ್ರುಲಾ’

- Advertisement -
- Advertisement -
  • ಅಟ್ಯಾಕ್ ಹನ್ಮಂತ |

ನಮಸ್ಕಾರ ಆಘಾತವಾಣಿ ವಾರ್ತೆಗಳಿಗೆ ಸ್ವಾಗತ, ಓದುತ್ತಿರುವವರು ಅಟ್ಯಾಕ್ ಹನ್ಮಂತ.

ಕಣ್ಣಿಗೆ ಏನೇ ಕಂಡರೂ ಅದನ್ನು ಉದ್ಘಾಟನೆ ಮಾಡಿ ಪೋಟೋ ತಗೊಳ್ತೀನಿ ಅಂತ ಓಡೋಡಿ ಬರುವ ಮಾನ್ಯ ಪ್ರದ್ರಾನ ಮಂತ್ರಿ ‘ಪಕೋಡಪ್ಪ ಕುಂಡಾಲೇಂದ್ರ’ ಅವರು ಇತ್ತೀಚೆಗೆ ಒಂದು ವಿಶೇಷ ಉದ್ಘಾಟನೆಯಿಂದಾಗಿ ಮತ್ತೆ ಸುದ್ದಿಯಾಗಿದ್ದಾರೆ. ಉತ್ತರಪ್ರದೇಶದಲ್ಲಿ ಮಾಯಾವತಿ ಮತ್ತು ಅಖಿಲೇಶ್ ಯಾದವ್ ಇವರುಗಳು ಕಳೆದ ತಮ್ಮ ಅಧಿಕಾರಾವಧಿಯಲ್ಲಿ ದೆಹಲಿಗೆ ಹೊಂದಿಕೊಂಡಂತೆ ನೂರಾರು ಕಿಲೋಮೀಟರ್‍ಗಳ ಎಕ್ಸ್‍ಪ್ರೆಸ್ ಹೈವೇ ನಿರ್ಮಿಸಿದ್ದರು. ಅದನ್ನು ತಮ್ಮ ವೈಯಕ್ತಿಕ ಪ್ರಚಾರಕ್ಕೆ ಬಳಸಿಕೊಳ್ಳುವ ಪ್ರತಿಭೆಯ ಕೊರತೆಯಿಂದಾಗಿ ಹಾಲಿ ವಿಫಲ ರಾಜಕಾರಣಿಗಳಾಗಿದ್ದಾರೆ. ಆದರೆ ಪಕೋಡೇಂದ್ರನ ಬಹುಮುಖ ಪ್ರತಿಭೆಗೆ ಮತ್ತೊಂದು ತಾಜಾ ನಿದರ್ಶನ ಇದೀ ವರದಿಯಾಗಿದೆ.. ದೆಹಲಿಯಿಂದ ಮೀರತ್ ನಡುವೆ ಜುಜುಬಿ 9 ಕಿಲೋಮೀಟರ್ ಎಕ್ಸ್‍ಪ್ರೆಸ್ ಹೈವೇಯನ್ನು ನಿರ್ಮಿಸಿ ‘ನಾನೇ ಮಾಡಿದ್ದು, ನಾನೇ ನಾನೇ..’ ಎಂದು ಕೂಗಾಡಿ ಕಿರುಚಾಡಿ ಫೋಟೋ ತಗೆಸಿ ಪ್ರಚಾರ ಮಾಡಿ ಕೊಂಡಿದ್ದಾರೆ. ಇಂಥದೊಂದು ಚಿಲ್ಲರೆ ಸುದ್ದಿಗಾಗಿಯೇ ಕಾದು ಕುಳಿತಿದ್ದ ಮೀಡಿಯಾಗಳು ಮಂತ್ರಕ್ಕಿಂತ ಉಗುಳನ್ನೇ ಹೆಚ್ಚಾಗಿ ಖರ್ಚುಮಾಡಿ ತಮ್ಮ ಖಾಲಿತಲೆಯನ್ನು ಪ್ರದರ್ಶನಕ್ಕಿಟ್ಟಿರುವುದು ವರದಿಯಾಗಿದೆ. ಈ ಸುದ್ದಿಯಿಂದ ಉತ್ತೇಜಿತನಾದ ಜಡೇಮಾಯಸಂದ್ರದ ಹಾಸ್ಯನಟ ಗಜ್ಜೇಶ್ ಅವರು, ತಮ್ಮ ‘ಮನೆಯ ಶೌಚಾಲಯಕ್ಕೆ ಹಾಕಿಸಿರೋ ಹೊಸ ಟೈಲ್ಸ್‍ಗಳು ಮತ್ತು ತಮ್ಮೂರಿನಲ್ಲಿ ಹೊಸದಾಗಿ ಹಾಕಿರುವ ರಸ್ತೆಉಬ್ಬುಗಳನ್ನು ಉದ್ಘಾಟಿಸಲು ಕ್ಯಾಮೆರಾ ಸಮೇತ ತಾವು ಬರಲೇಬೇಕೆಂದು’ ಪ್ರದಾನಮಂತ್ರಿ ‘ಪಕೋಡೇಂದ್ರ’ ಅವರನ್ನು ಬೇಡಿಕೊಂಡಿದ್ದಾರೆಂದು ವರದಿಯಾಗಿದೆ.

* * * *

ದೇಶದ ಬ್ಯಾಂಕ್‍ಗಳಲ್ಲಿ ಬೇಕಾಬಿಟ್ಟಿ ಸಾಲ ಮಾಡಿ ದೇಶ ಬಿಟ್ಟು ಓಡಿಹೋಗಲು ಸನ್ಮಾನ್ಯ ‘ಕುಂಡಾಲೇಂದ್ರ’ ಅವರು ಶುರು ಮಾಡಿರುವ ‘ಕುಣ್ಕೊಂಡ್ ಬನ್ನಿ ದೋಚ್ಕೊಂಡ್ ಓಡಿ’ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 33 ಮಂದಿ ಕಾರ್ಪೊರೇಟ್ ಕಳ್ಳರು ತಾವು ಸಾಲ ಪಡೆದ ಬ್ಯಾಂಕುಗಳ ತಲೆಯನ್ನು ನುಣ್ಣಗೆ ಬೋಳಿಸಿ ದೇಶ ಬಿಟ್ಟು ಓಡಿ ಹೋಗಿರುವುದು ಹಳೆಯ ವಿಷಯ. ಈಗ ಈ ಯೋಜನೆಯಡಿಯಲ್ಲಿ ದೇಶಬಿಟ್ಟ ಮೊದಲಿಗರಾದ ಮಲ್ಯಪ್ಪನವರನ್ನು ಲಂಡನ್‍ನಿಂದ ವಾಪಸ್ಸು ಕಳಿಸಲು ಕುಂಡಾಲೇಂದ್ರ ಬ್ರಿಟನ್ ಸರ್ಕಾರವನ್ನು ಅಂಗಲಾಚಿ ಕೇಳಿಕೊಂಡಿದ್ದರು. ಇದಕ್ಕೆ ಮಲ್ಯಪ್ಪನವರು “ಇಂಡಿಯಾ ದೇಸುದ ಜೈಲ್‍ಗುಳಲ್ಲಿ ಸೊಳ್ಳೆಕಾಟ ಜ್ಯಾಸ್ತಿ, ನಿಂಬೆ ಶರ್ಬತ್ತಿನಷ್ಟು ಗಟ್ಟಿ ಸಾಂಬಾರ್ ಮಾಡ್ತಾರೆ, ಆಲೂಗಡ್ಡೆ ಪಲ್ಯುದ ಬದ್ಲು ಬೂಸ್ಟು ಹಿಡಿದ ಹಪ್ಪಳ ಕೊಡ್ತಾರೆ. ನಾನು ಇಂಥಾ ಇಂಡಿಯಾ ಜೈಲ್‍ಗುಳಿಗೆ ಹ್ವೋಗಲ್ಲ, ಮೊದ್ಲು ಆ ದೇಸುದ ಜೈಲುಗಳಲ್ಲಿ ಸಿಮ್ಮಿಂಗ್ ಫೂಲ್ ಕಟ್ಟುಸಿ, ತ್ರಿಬಲ್ ಬೆಡ್ರೂಂ ಜೈಲುಕ್ವಾಣೆಯೊಳಗೆ ನನ್ನ ಹೊಸ ಹೆಂಡ್ತಿ ಜ್ವತೆ ಶೋಭನ ಮಾಡ್ಕ್ಯನಕ್ಕೆ ಕುರ್ಲಾನ್ ಹಾಸಿಗೆ ವ್ಯವಸ್ಥೆ ಮಾಡಿ ಮುಗಿದ ಮ್ಯಾಲೆ ಬೇಕಾದ್ರೆ ನನ್ನುನ್ನ ಅರೆಸ್ಟು ಮಾಡಿ” ಎಂದು ಉತ್ತರಿಸಿದ್ದಾರಂತೆ. ಈ ಸಂಬಂಧ ಕುರ್ಲಾನ್ ಹಾಸಿಗೆಯ ಮೇಲೆ ಚೆಲ್ಲಲು ಮಲ್ಲಿಗೆಹೂವುಗಳ ಪೂರೈಕೆದಾರರರಿಗೆ ಕುಂಡಾಲೇಂದ್ರ ಟೆಂಡರ್ ಕರೆಯುತ್ತಾರಾ ಎಂದು ಜನರು ಕುಂಡೆ ಬಡಕೊಂಡು ನಗುತ್ತಿದ್ದಾರೆ ಎಂದು ವರದಿಯಾಗಿದೆ.

* * * *

ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ಉಪಚುನಾವಣೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಕೆಟ್ಟು ಕುಲಗೆಟ್ಟಿರುವ ಇವಿಎಂಗಳನ್ನು ಬಳಸಲಾಗಿದೆಯೆಂದು ಚುನಾವಣಾ ಅಭ್ಯರ್ಥಿಗಳು ಎಲೆಕ್ಷನ್ ಕಮಿಷನ್ನಿಗೆ ದೂರು ಕೊಟ್ಟಿದ್ದಾರೆ. ಈ ಸಂಬಂಧ ಉತ್ತರಿಸಿರುವ ಚುನಾವಣಾ ಆಯೋಗವು `ಆ ಸ್ಥಳಗಳಲ್ಲಿ ಟೆಂಪ್ರೇಚರ್ರು ಶ್ಯಾನೆ ಹೆಚ್ಚಾಗಿಹ್ವೋಗಿ ನಂ ಇವಿಎಂ ಮೆಷೀನುಗಳ ತಲೆಕೆಟ್ಟು, ಇದ್ದುಕ್ಕಿದ್ದಂತೆ ಹುಚ್ಚ್‍ನಾಯಿ ಕಚ್ಚುದಂಗೆ ಬಿಜೆಪಿಗೆ ವೋಟು ಹಾಕ್ತಾ ಕುಂತವೆ‘ ಎಂದೂ ವಿವರಣೆ ಕೊಟ್ಟಿದೆ. ವಾತಾವರಣದ ಉಷ್ಣಾಂಶ ಹೆಚ್ಚಾಗಿ ಮೊಬೈಲ್‍ಗಳು ಕೆಟ್ಟಿಲ್ಲ, ಕಂಪ್ಯೂಟರ್‍ಗಳು ಕೆಟ್ಟಿಲ್ಲ, ಟಿವಿ, ಮಿಕ್ಸಿ, ಟೇಪ್‍ರೆಕಾರ್ಡರಿನಂಥ ಎಲೆಕ್ಟ್ರಾನಿಕ್ ವಸ್ತುಗಳೂ ಕೆಟ್ಟ ಉದಾಹರಣೆಯಿಲ್ಲ. ಹೀಗಿರುವಾಗ ಇವಿಎಂಗಳು ಮಾತ್ರ ಉಷ್ಣಾಂಶಕ್ಕೆ ಹೆದರಿ ಯಾಕೆ ಉಚ್ಚೆ ಹುಯ್ದುಕೊಳ್ಳುತ್ತಿವೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ. ಇವನ್ನು ತಯಾರಿಸಿದ್ದು ಸರ್ಕಾರದ ಎಲೆಕ್ಟ್ರಾನಿಕ್ ಎಂಜಿನಿಯರ್‍ಗಳೋ ಅಥವ ಹಳೇಸೀಸ ಖಾಲಿ ಬಾಟ್ಲು ವ್ಯಾಪಾರಿಗಳೋ ಎಂದು ಜನರು ತಲೆ ಕೆರೆದುಕೊಳ್ಳುತ್ತಿದ್ದಾರೆ.

* * * *

ರೈತರ ಸಾಲ ಮನ್ನಾ ಮಾಡದಿದ್ರೆ ನಾವು ಕರ್ನಾಟಕ ಬಂದ್ ಮಾಡ್ತೀವಿ’ ಅಂತ ತಮ್ಮದೇ ತೊಡೆಯನ್ನು ತಟ್ಟಿಕೊಂಡು ಹೇಳಿದ ಧಡಿಯೂರಪ್ಪನವರು ನಂತರ ಕೈ ಪಕ್ಷವು ಕೋರ್ಟ್‍ಗೆ ಹೋಗಿ ಕೇಸಾಕ್ತೀವಿ ಎಂದು ಹೆದರಿಸಿದ ಮೇಲೆ.. ನಾನಂಗೆ ಹೇಳೇ ಇಲ್ಲ, ಮೋಸ್ಟ್ ಲಿ ನನ್ನ ಆತ್ಮ ದೇಹದಿಂದ ಪುಸುಕ್ ಅಂತ ಹೊರಬಂದು.. ಡೈಲಾಗ್ ಹೊಡೆದು ದಬುಕ್ ಅಂತ ಒಳಕ್ಕೆ ಹೋಗಿರಬೇಕು ಎಂದು ಪ್ಲೇಟ್ ಚೇಂಜ್ ಮಾಡಿಬಿಟ್ಟಿದ್ದರು. ಈ ಅವಾಂತರಗಳನ್ನು ಕಣ್ಣಾರೆ ಕಂಡ ಕರ್ನಾಟಕದ ಜನ ಬಂದನ್ನೇ ಬಂದ್ ಮಾಡಿ ಧಡಿಯೂರಪ್ಪನಿಗೆ ಮಣ್ಣುಮುಕ್ಕಿಸಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ವಿಶೇಷ ಚೇತನ ಮಾನಸಿಕ ಅಸ್ವಸ್ಥ ಪ್ರಪಾತ ಸಿಮ್ಮನನ್ನು ಅರೆಸ್ಟ್ ಮಾಡಿರುವ ಪೊಲೀಸರು.. ಸಿಮ್ಮನ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ, ಬಾಯಿಗೆ ಗೋಣಿಚೀಲ ತುರುಕಿ, ಎರಡೂ ಕಣ್ಣಿಗೆ ಪತಂಜಲಿ ಖಾರದಪುಡಿ ಎರಚಿ, ಫ್ಯಾನಿಗೆ ನೇತುಹಾಕಿ ನಾಯಿಗೆ ಹೊಡೆದಂತೆ ಇನ್ನೂ ಹೊಡೆದಿಲ್ಲವೆಂದು ವರದಿಯಾಗಿದೆ.

* * * *

ನಮ್ಮ ಪ್ರದ್ರಾನಮಂತ್ರಿ ಕುಂಡಾಲೇಂದ್ರ ವಿಶ್ವಬ್ಯಾಂಕಿನಿಂದ ನಯಾಪೈಸ ಸಾಲ ತೆಗೆದುಕೊಳ್ಳದೆ ಸರ್ಕಾರ ನಡೆಸುತ್ತಿದ್ದಾನೆಂದು ಮೋತಿಭಕ್ತರು ಊರಲ್ಲೆಲ್ಲ ಪುಂಗಿ ಊದುತ್ತಿರುವ ವರದಿಗಳು ವ್ಯಾಪಕವಾಗಿ ಕೇಳಿಬಂದಿವೆ. ಕೈಯಲ್ಲಿ ಪೊರಕೆ ಹಿಡಿದು, ಮುಖಕ್ಕೆ ಮೂರು ಇಂಚು ಮೇಕಪ್ಪು ರುಬ್ಬಿಕೊಂಡು ಟೊಯ್ಯಟೊಯ್ಯ ಎಂದು ಕಸಗುಡಿಸುವ ಡ್ರಾಮಾ ಮಾಡುತ್ತಿದ್ದ ಮೋತಿಜೀ, ಈ ಬಿಕನಾಸಿ ನಾಟಕವನ್ನು ಪತ್ರಿಕೆಗಳಲ್ಲಿ ಪ್ರಚಾರ ಮಾಡಲೂ ಸಹ ವಿಶ್ವಬ್ಯಾಂಕಿನಿಂದ ತಿರುಪೆ ಸಾಲ ತಂದಿದ್ದಾನೆಂದು ವಿಶ್ವಬ್ಯಾಂಕ್ ಮೂಲಗಳು ತಿಳಿಸಿವೆ. ಇಂಥಹ ಹಸಿಸುಳ್ಳುಗಳನ್ನೇ ಹೇಳುತ್ತ ತಿರುಗುತ್ತಿರುವ ಮೋತಿಜಿ ಮತ್ತು ಮೋತಿಭಕ್ತರನ್ನು ಜನರು ಅಟ್ಟಾಡಿಸಿಕೊಂಡು ಬಟ್ಟೆ ಹರಿದುಹೋಗುವಂತೆ ಬಡಿದು ನೆಲಕ್ಕೆ ಹಾಕಿ ತುಳಿಯಲು ಪ್ರಯತ್ನ ನಡೆಸಿರುವ ಘಟನೆ ಇನ್ನೂ ವರದಿಯಾಗಿಲ್ಲ.

* * * *

ಉತ್ತರಪ್ರದೇಶದ ಕಬ್ಬು ಬೆಳೆಯುವ ರೈತರಿಗೆ ಕೊಡಬೇಕಾದ 13 ಸಾವಿರ ಕೋಟಿ ಖರೀದಿ ಹಣವನ್ನು ಕೊಡದೆ ಮುಂಡಾ ಮೋಚಿರುವ ಜೋಗಿ ಪ್ಯಾದೇನಾತನ ಸರ್ಕಾರವು ಈ ಬಗ್ಗೆ ಪ್ರದ್ರಾನಮಂತ್ರಿಗೆ ಹಣಬಿಡುಗಡೆಗೆ ಕೇಳಿದಾಗ.. ಕುಂಡಾಲೇಂದ್ರನು..’ ಏನೂ ಹೆದರಬ್ಯಾಡ.. ಪಾಕಿಸ್ತಾನದಿಂದ ಸಕ್ಕರೆ ತರಿಸಿಕೊಂಡು ಉತ್ತರಪ್ರದೇಶದ ರೈತರ ಕಣ್ಣಿಗೆ ಮಣ್ಣುಸುಣ್ಣ ಎರಡನ್ನೂ ಮಿಕ್ಸ್ ಮಾಡಿ ಎರಚೋಣ’ಎಂದು ಭರವಸೆ ಕೊಟ್ಟಿದ್ದಾನೆ ಎಂದು ದೆಹಲಿಯಿಂದ ವರದಿ ಬಂದಿದೆ. ಅದರಂತೆ ಪಾಕಿಸ್ತಾನದಿಂದ 2 ಲಕ್ಷ ಟನ್ ಸಕ್ಕರೆ ಆಮದು ಮಾಡಿಕೊಂಡು ಉತ್ತರಪ್ರದೇಶದ ಕಬ್ಬುಬೆಳೆಗಾರರಿಗೆ ಈ ಅಲ್ಲಣ್ಣ-ಮಲ್ಲಣ್ಣ ಅಲಕ್ ಬುಲಕ್ ಜೋಡಿಯು ನಾಮ ಎಳೆದಿದೆ ಎಂದು ತಿಳಿದುಬಂದಿದೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ಸಿಗೋಣ. ಬೈ ಟೇಕ್ ಕೇರ್..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...