Homeಎಕಾನಮಿಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

ಎಲೆಕ್ಟೋರಲ್ ಬಾಂಡ್ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸಿತೇ ಕೇಂದ್ರ ಸರ್ಕಾರ!?

- Advertisement -
- Advertisement -

ಭ್ರಷ್ಟಾಚಾರಭರಿತ ಎಲೆಕ್ಟೋರಲ್ ಬಾಂಡ್ ಎಂಬ ಕಾನೂನುಬಾಹಿರ ಬಾಂಡನ್ನು ಮೋದಿ ಸರ್ಕಾರ ಬಿಡುಗಡೆ ಮಾಡಿದೆ. ರಿಸರ್ವ್ ಬ್ಯಾಂಕ್ ಮತ್ತು ಚುನಾವಣಾ ಆಯೋಗಗಳು ಈ ಕಣ್‍ಕಟ್ಟಿನ ರಾಜಕೀಯ ನಿಧಿ ಹಂಚಿಕೆಯ ಬಗೆಗೆ ವ್ಯಾಪಕ ಚರ್ಚೆ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ಈ ಕರಾಳಕೃತ್ಯದ ವಿವರಗಳು ಹೊರಬರದಂತೆ ತಡೆಗೋಡೆ ನಿರ್ಮಿಸಿದೆ.
2017ರಲ್ಲಿ ಚುನಾವಣೆಗೆ ನಿಧಿಯನ್ನು ನೀಡುವ ಬಾಂಡ್‍ಗಳ ಬಿಡುಗಡೆಗೆ ಮೊದಲು, ಹಣಕಾಸು ಸಚಿವಾಲಯ ರಿಸರ್ವ್ ಬ್ಯಾಂಕ್‍ನ ಸಲಹೆ ಕೋರಿತ್ತು. ಈ ಬಾಂಡ್‍ಗಳ ಪ್ರಸ್ತಾವನೆಗೆ ರಿಸರ್ವ್ ಬ್ಯಾಂಕ್ ಗಂಭೀರ ವಿರೋಧ ವ್ಯಕ್ತಪಡಿಸಿತ್ತು. ಈ ಚುನಾವಣೆ ಬಾಂಡ್‍ಗಳನ್ನು ಸರ್ಕಾರ ಬಿಡುಗಡೆ ಮಾಡುವುದಾದರೆ ಹಣಕಾಸು ದುವ್ರ್ಯವಹಾರಕ್ಕೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಮತ್ತು ಬಾಂಡುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡಿದರೆ ಭಾರತೀಯ ಬ್ಯಾಂಕುಗಳ ಬಗೆಗೆ ನಂಬಿಕೆ ಕಳೆದುಹೋಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿತ್ತು.

“ಈ ಬಾಂಡುಗಳ bearer bond ಜಗಳು. ಅವುಗಳನ್ನು ಬೇರೆಯವರಿಗೆ ವರ್ಗಾವಣೆ ಮಾಡಲೂ ಅವಕಾಶ ಕಲ್ಪಿಸಿರುವುದರಿಂದ ಯಾರು ಹಣವನ್ನು ನೀಡಿದ್ದಾರೆ ಎಂಬುದು ಪತ್ತೆಯಾಗುವುದೇ ಇಲ್ಲ” ಎಂದು ರಿಸರ್ವ್ ಬ್ಯಾಂಕ್ ತಿಳಿಸಿತು. ಆದರೆ ಸರ್ಕಾರ ಆರ್‍ಬಿಐನ ಎಚ್ಚರಿಕೆಯ ಮಾತುಗಳನ್ನು ಗಮನಕ್ಕೆ ತೆಗೆದುಕೊಳ್ಳಲೇ ಇಲ್ಲ. ಆಗಿನ ಕಂದಾಯ ವಿಭಾಗದ ಕಾರ್ಯದರ್ಶಿಯಾಗಿದ್ದ ಹಸಮುಖ್ ಅಧಿಯ “ರಿಸರ್ವ ಬ್ಯಾಂಕ್ ಸರ್ಕಾರದ ಕಾರ್ಯತಂತ್ರವನ್ನು ಅರ್ಥಮಾಡಿಕೊಂಡಿಲ್ಲ. ಅಲ್ಲದೆ ಫೈನಾನ್ಸ್ ಬಿಲ್ ಅಚ್ಚಾದ ಮೇಲೆ ಈ ಸಲಹೆ ನೀಡಿದೆ. ಈ ವಿಳಂಬ ಸಲಹೆಯನ್ನು ಪರಿಗಣಿಸಲು ಸಾಧ್ಯವಿಲ್ಲ” ಎಂದು ಹೇಳಿ ಆರ್.ಬಿ.ಐ ಸಲಹೆಯನ್ನು ತಳ್ಳಿಹಾಕಿದ್ದರು. 2017 ಫೆಬ್ರವರಿ ಮೊದಲ ತಾರೀಖು ಆಗಿನ ಅರ್ಥಸಚಿವರಾದ ಜೈಟ್ಲಿಯವರು ತಮ್ಮ ಬಜೆಟ್ ಭಾಷಣದಲ್ಲಿ ಚುನಾವಣೆ ಬಾಂಡ್‍ಗಳನ್ನು ಸೃಷ್ಟಿಮಾಡುವ ಪ್ರಸ್ತಾಪ ಮಾಡಿದರು ಹಾಗೂ ರಾಜಕೀಯ ಪಕ್ಷಗಳಿಗೆ ಹಣ ಒದಗಿಸುವ ಪದ್ಧತಿಯಲ್ಲಿ ನುಸುಳಿರುವ ಲೋಪದೋಷಗಳನ್ನು ಅಳಿಸಿಹಾಕುವ ಕಾರಣಕ್ಕಾಗಿ ಈ ಆರ್.ಬಿ.ಐ ತಿದ್ದುಪಡಿ ಬಿಲ್ ಮಾಡಿರುವುದಾಗಿ ಹೇಳಿದರು.
ಅದಾದನಂತರ ಚುನಾವಣೆ ಆಯೋಗವು ಕೂಡಾ ಮೇ 2017ರಲ್ಲಿ ಕಾನೂನು ಇಲಾಖೆ ಮಂತ್ರಾಲಯಕ್ಕೆ ಚುನಾವಣೆ ಬಾಂಡ್ ಬಿಡುಗಡೆ ಮಾಡುವ ಬಗೆಗೆ ಎಚ್ಚರಿಕೆ ನೀಡಿತ್ತು. 2017 ಮೇ 26ರ ಕಾಗದದಲ್ಲಿ “Representation of People Actನ 29 ಸಿ ವಿಧಿಗೆ ಸರ್ಕಾರ ಮಾಡಿರುವ ತಿದ್ದುಪಡಿ ಸರಿಯಲ್ಲ, ಇದು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರ ಹೆಸರುಗಳನ್ನು ಮುಚ್ಚಿಡುವ ಹುನ್ನಾರ” ಎಂದು ಪತ್ರ ಬರೆಯಿತು. ಈ ತಿದ್ದುಪಡಿಯನ್ನು ವಾಪಾಸ್ ಪಡೆಯಿರಿ ಎಂಬ ಸಲಹೆಯನ್ನೂ ನೀಡಿತ್ತು.

ಚುನಾವಣೆ ಆಯೋಗದ ಸೂಚನೆಯನ್ನು ಧಿಕ್ಕರಿಸಿದ ಹಣಕಾಸು ಇಲಾಖೆಯ ರಾಜ್ಯ ಖಾತೆ ಸಚಿವ ಪೊನ್ ರಾಧಾಕೃಷ್ಣನ್ 2018ರ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನದಲ್ಲಿ ‘ಈ ವಿಚಾರದಲ್ಲಿ ಚುನಾವಣಾ ಆಯೋಗ ಯಾವುದೇ ಸೂಚನೆ ನೀಡಿಲ್ಲ’ ಎಂದು ತಿಳಿಸಿದರು. Breach of privilege notice ನೀಡಿದಾಗ ಸಚಿವರು ಪಾರ್ಲಿಮೆಂಟಿನ ದಾರಿತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬುದು ಬಯಲಿಗೆ ಬಂದಿತ್ತು.

ಮಾರ್ಚ್ 2018ರವರೆಗೆ 6128 ಕೋಟಿ ರೂ. ಮೌಲ್ಯದ ಚುನಾವಣೆ ಬಾಂಡ್‍ಗಳು ಮಾರಾಟವಾಗಿವೆ. ಇದರಲ್ಲಿ ಶೇ.95ರಷ್ಟು ಹಣ ಬಿಜೆಪಿಗೇ ಪಾವತಿಯಾಗಿದೆ. ಚುನಾವಣೆ ಬಾಂಡ್‍ಗಳು ಒಂದು ಸಾವಿರ, 10 ಸಾವಿರ, ಒಂದು ಲಕ್ಷ, 10 ಲಕ್ಷ, ಒಂದು ಕೋಟಿ ಮೌಲ್ಯಗಳ ಮುಖಬೆಲೆಯಲ್ಲಿ ಬಿಡುಗಡೆ ಆಗಿವೆ. ಭಾರತೀಯ ಸ್ಟೇಟ್ ಬ್ಯಾಂಕ್ ಮಾತ್ರ ಈ ಬಾಂಡ್‍ಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಈ ಬಾಂಡುಗಳನ್ನು ವರ್ಷದಲ್ಲಿ 4 ಸಾರಿ ಮಾತ್ರ ತಲಾ 8-10 ದಿನಗಳ ಅಲ್ಪಾವಧಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುವ ವರ್ಷದಲ್ಲಿ ಮಾತ್ರ ಈ ನಾಲ್ಕು ಅವಧಿಯಲ್ಲದೆ 30 ದಿನಗಳ ಒಂದು ದೀರ್ಘಾವಧಿಯ ವಿಶೇಷ ಮಾರಾಟದ ಅವಕಾಶ ಕಲ್ಪಿಸಲಾಗುವುದು. ಬಾಂಡ್ ಕೊಂಡವರು ಅದನ್ನು ತಮಗೆ ಇಷ್ಟಬಂದ ರಾಜಕೀಯ ಪಕ್ಷಕ್ಕೆ ನೀಡಬಹುದು. ಹಿಂದಿನ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು ಮತಗಳಲ್ಲಿ ಕನಿಷ್ಠ ಶೇ.1ಕ್ಕಿಂತ ಹೆಚ್ಚು ಮತಗಳಿಸಿದ ಪಕ್ಷಗಳಿಗೆ ಮಾತ್ರ ಈ ಬಾಂಡ್‍ಗಳನ್ನು ನೀಡಬಹುದಾಗಿದೆ. ಬ್ಯಾಂಕ್‍ನಿಂದ ಬಾಂಡ್ ಕೊಂಡುಕೊಂಡ ಹದಿನೈದು ದಿನಗಳ ಒಳಗಾಗಿ ಅದನ್ನು ನಗದು ಮಾಡಿಕೊಳ್ಳಬೇಕು. ಅಂದರೆ ಅಷ್ಟರೊಳಗೆ ಕೊಂಡವರು, ಅದನ್ನು ತಮಗಿಷ್ಟ ಬಂದ ಪಕ್ಷಕ್ಕೆ ಕೊಟ್ಟು, ಆ ಪಕ್ಷ ಅದನ್ನು ಕ್ಯಾಶ್ ಮಾಡಿಕೊಳ್ಳಬೇಕು.
ಈ ಬಾಂಡ್‍ಗಳಲ್ಲಿ ಕ್ರಮಾಂಕ ಸೂಚಿಸಬಾರದೆಂದು ಬಿಜೆಪಿ ಪಕ್ಷ ಸರ್ಕಾರಕ್ಕೆ ಸೂಚಿಸಿತ್ತು. ಬಾಂಡ್‍ಗಳಿಗೆ ಕ್ರಮಸಂಖ್ಯೆ ಹಾಕದಿದ್ದರೆ ಯಾವ ಮೊತ್ತದ ಬಾಂಡ್ ಯಾರ ಕೈಸೇರಿತು ಎಂಬುದು ಗೊತ್ತಾಗುವುದಿಲ್ಲ. ಗೊತ್ತಾಗಬಾರದು ಎಂಬುದೇ ಉದ್ದೇಶ. ಈ ಮೊದಲು ಬೇರೆ ದೇಶದವರು ದೇಣಿಗೆ ಕೊಡಲು ನಿಷೇಧವಿತ್ತು. ಈಗ ಬೇರೆ ದೇಶದವರು ದೇಣಿಗೆ ಕೊಟ್ಟರೂ ಅದರಿಂದ ನಮ್ಮ ಪಕ್ಷಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರ ಸೂಚಿಸಿತ್ತು.

ರಾಜಕೀಯ ಪಕ್ಷಗಳಿಗೆ ತಾವಾಗಿಯೇ ಯಾರೂ ಚುನಾವಣೆಗೆ ಹಣ ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಾರ್ಪೊರೇಟ್ ಸಂಸ್ಥೆಗಳಂತೂ ತಮಗೆ ಲಾಭ ಮಾಡಿಕೊಡುವವರಿಗೆ ದೇಣಿಗೆ ಕೂಡುವರೆಂಬುದೂ ಗುಟ್ಟಿನ ವಿಚಾರವೇನಲ್ಲ. ತನಿಖಾ ಇಲಾಖೆ ಹಾಗೂ Regulatory bodyಜಥಿಗಳು ಸರ್ಕಾರವನ್ನು ಬಳಸಿಕೊಂಡು ಕಾರ್ಪೊರೇಟ್ ಕಂಪೆನಿಗಳನ್ನು ಹಣ್ಣು ಮಾಡುವ ವ್ಯವಸ್ಥೆ ಇದ್ದೇಇದೆ. ಆ ಮೂಲಕ ಚುನಾವಣೆಗೆ ಹಣ ತಾನಾಗಿಯೇ ಬಂದುಬೀಳುತ್ತದೆ. ಈ ಸೌಲಭ್ಯ ದೊರೆಯುವುದು ಆಡಳಿತ ಪಕ್ಷಕ್ಕೆ ಮಾತ್ರ.
`ಕಾಮನ್ ಕಾಸ್’ ಸಂಸ್ಥೆ ಸರ್ವೋಚ್ಚ ನ್ಯಾಯಾಲಯದಲ್ಲಿ ಚುನಾವಣೆ ಬಾಂಡ್ ವಿಚಾರವಾಗಿ ಖಟ್ಲೆ ಹೂಡಿದೆ. ರಾಜಕೀಯ ಪಕ್ಷಗಳು ತಮಗೆ ಸಂದಾಯವಾಗಿರುವ ಎಲೆಕ್ಟೋರಲ್ ಬಾಂಡುಗಳ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ ಎಂದು ನಿರ್ದೇಶನ ನೀಡಿತ್ತು. ಈ ನಡುವೆ ಚುನಾವಣೆ ಆಯೋಗ ಕೂಡ ನ್ಯಾಯಾಲಯಕ್ಕೆ ಚುನಾವಣಾ ಬಾಂಡ್ ಬಿಡುಗಡೆಯನ್ನು ಪ್ರಶ್ನಿಸಿ ಒಂದು ಅಫಿಡವಿಟ್ ಸಲ್ಲಿಸಿದೆ.

ಸರ್ಕಾರ ಭ್ರಷ್ಟಾಚಾರವನ್ನು ಈ ಕಾನೂನುಬದ್ಧವಾಗಿ ಜಾರಿಗೆ ತಂದಿರುವ ಈ ಚುನಾವಣೆ ಬಾಂಡನ್ನು ಹಿಂತೆಗೆಯಬೇಕೆಂದು ಒತ್ತಾಯ ತರಬೇಕಿದೆ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವ ಕ್ರಮವನ್ನು ಪರಿಶುದ್ಧಗೊಳಿಸುತ್ತೇನೆ ಎಂದೇಳಿದ್ದ ಮೋದಿ ಸರ್ಕಾರ, ಚುನಾವಣಾ ಬಾಂಡ್ ವಿತರಣೆ ಮಾಡುವ ಮೂಲಕ ಕಾರ್ಪೊರೇಟ್ ಕಂಪನಿಗಳ ಕಪ್ಪುಹಣ ಆಡಳಿತ ನಡೆಸುವವರ ಕೈಸೇರುವಂತೆ ವ್ಯವಸ್ಥೆ ಮಾಡಿಕೊಂಡಿದೆ. ತಮ್ಮ ಬಳಿ ಇರುವ ಬ್ಲ್ಯಾಕ್‍ಮನಿಯನ್ನು ಸರ್ಕಾರದ ಚುಕ್ಕಾಣಿ ಹಿಡಿದವರಿಗೆ ಒಪ್ಪಿಸುವ ಕಾರ್ಪೊರೇಟ್ ಕಂಪನಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅನುಕೂಲವಾಗುತ್ತದೆ. ದೇಣಿಗೆ ಪಡೆದ ಋಣಕ್ಕೆ ಪ್ರತಿಯಾಗಿ ಸರ್ಕಾರದ ಗದ್ದುಗೆ ಏರುವ ರಾಜಕೀಯ ಪಕ್ಷವೂ ಅಂತಹ ಕಂಪನಿಗಳ ಲಾಭಕೋರತನಕ್ಕೆ ಬೆಂಬಲ ನೀಡಬೇಕಾಗುತ್ತದೆ. ಕೊನೆಗೆ ಕತ್ತರಿ ಬೀಳುವುದು ಶ್ರೀಸಾಮಾನ್ಯನ ಜೇಬಿಗೆ!

ಭ್ರಷ್ಟಾಚಾರವನ್ನು ಮಾನ್ಯಮಾಡುವ ಈ ಅನೀತಿಯನ್ನು ಮನಗಂಡು ಸರ್ಕಾರ ಈ ಕೂಡಲೇ ಚುನಾವಣಾ ಬಾಂಡ್ ಸ್ಕೀಮನ್ನು ರದ್ದುಗೊಳಿಸುವಂತೆ ಒತ್ತಾಯಿಸುವುದು ಇಂದಿನ ತುರ್ತಾಗಿದೆ. ಇಲ್ಲವಾದಲ್ಲಿ ಚುನಾವಣೆಗಳಲ್ಲಿ ಸಿದ್ಧಾಂತ, ಜನಪರ ಚಿಂತನೆಗಳು ಶಾಶ್ವತವಾಗಿ ಮೂಲೆಗುಂಪಾಗಿ ಹಣವೇ ಫಲಿತಾಂಶವನ್ನು ಖಾಯಮ್ಮಾಗಿ ನಿರ್ಧರಿಸಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...