Homeರಾಜಕೀಯಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

ಪರಮಪಾಪಿ ಪೋಸ್ಟ್‍ಕಾರ್ಡ್ ಪೋರ್ಟಲ್

- Advertisement -
- Advertisement -

ಮಲ್ಲಿ |

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಇಲ್ಲಿ ಸುಳ್ ಸುದ್ದಿಗಳನ್ನು ಯಥೇಚ್ಛವಾಗಿ ಹರಡುತ್ತಿರುವುದು ಪೋಸ್ಟ್‍ಕಾರ್ಡ್ ಪೋರ್ಟಲ್. ಕುಳಿತರೆ ಸುಳ್ಳು, ನಿಂತರೆ ಸುಳ್ಳು, ಉಸಿರಾಡಿದರೆ ಸುಳ್ಳು, ಹೂಸಿದರೆ ಸುಳ್ಳು-ಇದು ಪೋಸ್ಟ್‍ಕಾರ್ಡ್ ಸಂಸ್ಥಾಪಕ ಚೆಡ್ಡಿ ಮಹೇಶ ಹೆಗಡೆಯ ಧ್ಯೇಯವಾಕ್ಯ. ಆತ ಪದವಿ ಓದಿದವರನ್ನೂ ಯಾಮಾರಿಸುವಂತೆ ಸುಳ್ ಸುದ್ದಿ ಹರಡುತ್ತಾನೆ. ಈಗಷ್ಟೇ ಕೇಂದ್ರ ಸರ್ಕಾರ ‘ಕಾಂಗ್ರೆಸ್’ನ ಪ್ರಣಬ್ ಮುಖರ್ಜಿಗೆ ಭಾರತರತ್ನ ನೀಡಿದೆ. ಅದಿರಲಿ, ಈಗ ನಾವು ಪ್ರಸ್ತಾಪಿಸುತ್ತಿರುವ ವಿಷಯ ಎಂದರೆ, ಪ್ರಣಬ್ ಮುಖರ್ಜಿ ಸೋನಿಯಾ ಗಾಂಧಿ ವಿರುದ್ಧ ತಮ್ಮ ನಾಲ್ಕನೇ ಪುಸ್ತಕದಲ್ಲಿ ಕಿಡಿ ಕಾರಿದ್ದಾರೆ ಎಂದು ಪೋಸ್ಟ್‍ಕಾರ್ಡ್ ಹೇಳುತ್ತ ಬಂದ ಸುಳ್ ಸುದ್ದಿಯ ಕುರಿತು. ಐದು ತಿಂಗಳ ಹಿಂದೆಯೇ ಈ ಕೆಲಸವನ್ನು ಅದು ಶುರು ಮಾಡಿತ್ತು.
ಇನ್ನೂ ಪುಸ್ತಕವೇ ಪ್ರಕಟವಾಗಿಲ್ಲ. ಅದರ ಒಂದು ಸಣ್ಣ ಭಾಗವನ್ನು ಸುಳ್ಳನ್ನೇ ಉಸಿರಾಡುವ ಪೋಸ್ಟ್‍ಕಾರ್ಡ್ ಡಾಟ್ ನ್ಯೂಸ್ ಪ್ರಕಟಿಸಿತ್ತು ಮತ್ತು ಅದು ಆಗಾಗ ವೈರಲ್ ಆಗುತ್ತಲೇ ಇದೆ, ಚುನಾವಣೆ ಬಂತಲ್ಲ, ಮತ್ತಷ್ಟು ಜೋರಾಗಿಯೇ ಹರಡಲಿದೆ.
ಮಿಥ್ಯ: ಪೋಸ್ಟ್‍ಕಾರ್ಡ್ ಪ್ರಕಾರ, ಮಾಜಿ ರಾಷ್ಟ್ರÀಪತಿ ಪ್ರಣಬ್ ಮುಖರ್ಜಿ ಅವರ ಪುಸ್ತಕದಿಂದ ಆಯ್ದ ಭಾಗ ಹೀಗಿದೆ:
“ನರೆಂದ್ರ ಮೋದಿಯವರ ಒಂದನೇ ವರ್ಷದ ಆಡಳಿತ ಮುಗಿದಾಗ, ಅವರು ಅಲ್ಲಿವರೆಗೆ ಮಾಡಿದ್ದ ಕೆಲಸಗಳನ್ನು ಮೆಚ್ಚಿ ನಾನು ಅವರನ್ನು ಹೊಗಳಿದ್ದೆ. ಸೋನಿಯಾ ಗಾಂಧಿಯವರಿಗೆ ಇದು ಸಿಟ್ಟು ಬರಿಸಿತು.

ರಾಷ್ಟಪತಿಯವರ ಪುಸ್ತಕದಿಂದ ಆಯ್ದ ಭಾಗ ಎಂದು ಪುಟ್ಟಾಪೂರಾ ಸುಳ್ ಬರೆದ ಪೋಸ್ಟ್‍ಕಾರ್ಡ್.

ಒಮ್ಮೆ ಸಂಸತ್ತಿನಲ್ಲಿ ಭಾಷಣ ಮುಗಿಸಿ ಹೊರಬರುವಾಗ ಸೋನಿಯಾ ನನಗೆ ಎದುರಾದರು. ಅವರ ಜೊತೆಗಿದ್ದ ಗುಲಾಮ್ ನಬಿ ಅಜಾದ್ ಮತ್ತು ಮಣಶಂಕರ್ ಅಯ್ಯರ್ ನನಗೆ ಗೌರವದಿಂದ ಹಾರೈಸಿದರು. ಆದರೆ ಸೋನಿಯಾ ಸುಮ್ಮನೆ ನಿಂತಿದ್ದರು. ನಾನೇ ಮೊದಲು ಅವರಿಗೆ ಹಾರೈಸಬೇಕೆಂದು ಅವರು ಬಯಸಿದ್ದರು. ಅವರ ಎದುರು ಈ ದೇಶದ ಪ್ರಥಮ ಪ್ರಜೆ ನಿಂತಿದ್ದಾರೆ ಎಂಬುದನ್ನೇ ಅವರು ಮರೆತಿದ್ದರು.
ಪ್ರಣಬ್ ಮುಖರ್ಜಿಯಾಗಿ ಅಲ್ಲ, ಈ ದೇಶದ ರಾಷ್ಟ್ರಪತಿ ನಾನು ಎಂಂಬುದನ್ನು ಅವರು ಒಪ್ಪಿಕೊಳ್ಳಬೇಕಿತ್ತು.
ಸೋನಿಯಾರ ಈ ವರ್ತನೆ ನನ್ನೊಳಗೆ ತೀವ್ರ ನೋವನ್ನು ಉಂಟು ಮಾಡಿತು…”
ಮೇಲಿನ ಘಟನೆ 2015ರ ಮೇನಲ್ಲಿ ನಡೆಯಿತು ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‍ಕಾರ್ಡ್ ಪ್ರಕಾರ ಇದು ಪ್ರಣಬ್ ಮುಖರ್ಜಿ ಅವರ ಪುಸ್ತಕದ ಒಂದು ಭಾಗ. ಇದನ್ನು ನಂಬಿದ ಅಮಾಯಕರು ಮತ್ತು ಸುಳ್ಳೆಂದು ಗೊತ್ತಿರುವ ಸಾವಿರಾರು ಕಿರಾತಕರು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತ ಅನಗತ್ಯವಾಗಿ ಸೋನಿಯಾ ಗಾಂಧಿಯವರ ಮೇಲೆ ಆಕ್ರಮಣ ನಡೆಸುತ್ತಲೇ ಬಂದಿದ್ದಾರೆ.
ಸತ್ಯ: ಪ್ರಣಬ್ ಅವರ ಉದ್ದೇಶಿತ ಪುಸ್ತಕ 2018ರ ಡಿಸೆಂಬರ್‍ನಲ್ಲಿ ಪ್ರಕಟನೆಯಾಗಲಿದೆ ಎಂದು ಅದರ ಪ್ರಕಟಣಾ ಹಕ್ಕು ಪಡೆದಿರುವ ರೂಪಾ ಪ್ರಕಾಶನ ಸಂಸ್ಥೆ ಹೇಳಿತ್ತು. (ಈಗಲೂ ದು ಪ್ರಕಟವಾಗಿಲ್ಲ) ಅಂದರೆ ಪ್ರಣಬ್‍ರವರು ಈಗಾಗಲೇ ಕಾಗದದಲ್ಲಿ ಬರೆದಿರಬಹುದಾದ ಅಥವಾ ಕಂಪ್ಯೂಟರ್‍ನಲ್ಲಿ ಕೀ-ಇನ್ ಮಾಡಿರಬಹುದಾದ ಕಾಪಿಯನ್ನು ಪೋಸ್ಟ್‍ಕಾರ್ಡ್ ಕದ್ದಿರಬಹುದು ಅಂತಾ ಭಾವಿಸೋಕೂ ಆಸ್ಪದವಿಲ್ಲ. ಏಕೆಂದರೆ ಆಗ ಪ್ರಕಾಶಕರು ಮತ್ತು ಪ್ರಣಬ್ ಮುಖರ್ಜಿ ಕಚೇರಿ ಪ್ರಕಾರ ಅವರಿನ್ನೂ ಬರೆಯಲು ಶುರೂನೇ ಮಾಡಿರಲಿಲ್ಲ!

ಸೋನಿಯಾ ಗಾಂಧಿಯವರ ಜೊತೆ ಪ್ರಣಬ್ ಮುಖರ್ಜಿ

ಈ ಮೊದಲು ಪ್ರಣಬ್ ಬರೆದ ದ ಡೆಮಾಕ್ರಟಿಕ್ ಡಿಕೇಡ್, ದ ಟರ್ಬುಲೆಂಟ್ ಇಯರ್ಸ್ ಮತ್ತು ದ ಕೊಅಲಾಯನ್ಸ್ ಇಯರ್ಸ್- ಪುಸ್ತಕಗಳಲ್ಲಿ ಪ್ರಣಬ್ ಮೇಲಿನ ವಿಷಯ ಬರೆದಿಲ್ಲ, ಬರೆಯಲು ಸಾಧ್ಯವೂ ಇಲ್ಲ. ಏಕೆಂದರೆ ಇವು ಯಾವುವು 2004ರ ನಂತರದ ವಿಷಯ ಒಳಗೊಂಡಿಲ್ಲ. ಹಾಗಾದರೆ ಬರಲಿರುವ ನಾಲ್ಕನೇ ಪುಸ್ತಕ ‘ದ ಪ್ರೆಸಿಡೆನ್ಸಿಯಲ್ ಇಯರ್ಸ್’ ಪುಸ್ತಕದಲ್ಲಿ ಮೇಲಿನಂತೆ ಬರೆಯಬಹುದೇನೋ ಎಂದು ಗೆಸ್ ಮಾಡಲೂ ಆಗಲ್ಲ. ಏಕೆಂದರೆ ಪ್ರಣಬ್ ಎಂದೂ ಸಾರ್ವಜನಿಕವಾಗಿ ಸೋನಿಯಾರ ಬಗ್ಗೆ ಆಕ್ಷೇಪದ ಮಾತು ಆಡಿಲ್ಲ.
ಆಗ ಸ್ಪಷ್ಟೀಕರಣ ನೀಡಿದ್ದ ಪ್ರಣಬ್ ಕಚೇರಿ, ‘ಉದ್ದೇಶಿತ ಪುಸ್ತಕ ಪ್ರಣಬ್ ಮುಖರ್ಜಿಯವರನ್ನು ರಾಷ್ಟ್ರಪತಿ ಎಂದು ಘೋಷಿಸುವಲ್ಲಿಗೆ ಮುಗಿಯುತ್ತದೆ. ರಾಷ್ಟ್ರಪತಿಯಾದ ನಂತರದ ಘಟನೆಗಳು ಇದರಲ್ಲಿ ಬರುವುದೇ ಇಲ್ಲ. ಈ ಪುಸ್ತಕವು 2004-2012ರವರೆಗಿನ ಅವಧಿಗೆ ಸಿಮೀತ. ಇನ್ನು ಮೇ, 2015ರ ವಿಷಯ (ಅಂದರೆ ಪೋಸ್ಟ್‍ಕಾರ್ಡ್‍ನ ಸುಳ್ಳು) ಇದರಲ್ಲಿ ಹೇಗೆ ಬರಲು ಸಾಧ್ಯ?’ ಎಂದು ಪ್ರಕಟಣೆ ನೀಡುವ ಮೂಲಕ ಪೋಸ್ಟ್‍ಕಾರ್ಡ್ ಕುತಂತ್ರವನ್ನು ಬಯಲು ಮಾಡಿತ್ತು.

(ಕೃಪೆ:Altnews.com)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...