Homeಮುಖಪುಟತಮಿಳುನಾಡಿನ ಶಿವಕಾಸಿಯಲ್ಲಿ 1,200 ವರ್ಷದ ಹಳೆಯ ದೇವಸ್ಥಾನ ಪತ್ತೆ!

ತಮಿಳುನಾಡಿನ ಶಿವಕಾಸಿಯಲ್ಲಿ 1,200 ವರ್ಷದ ಹಳೆಯ ದೇವಸ್ಥಾನ ಪತ್ತೆ!

ಈ ದೇವಾಲಯವು ಕ್ರಿ.ಶ 8 ನೇ ಶತಮಾನದ ಆರಂಭದಲ್ಲಿ-ಪಾಂಡ್ಯರ ಯುಗಕ್ಕೆ ಸೇರಿದೆ. ಇದು ತಿರುಚಂದೂರಿನಲ್ಲಿರುವ ವಲ್ಲಿ ಗುಹೆ ದೇವಾಲಯಕ್ಕೆ ಹೋಲುತ್ತದೆ.

- Advertisement -
- Advertisement -

ತಮಿಳುನಾಡಿನ ಶಿವಕಾಸಿಯಲ್ಲಿರುವ ಎಂ ಪುದುಪಟ್ಟಿ ಎಂಬ ಗ್ರಾಮದಲ್ಲಿ, ಅರ್ಜುನ ನದಿಯ ದಡದ ಬಳಿ 1,200 ವರ್ಷಗಳಷ್ಟು ಹಳೆಯದಾದ ಮತ್ತು ಬಂಡೆಯಲ್ಲಿ ಕೊರೆದಂತೆ ಇರುವ ದೇವಸ್ಥಾನ ಪತ್ತೆಯಾಗಿದೆ.

Photo Courtesy: Sarkardaily

ಪುರಾತತ್ವಶಾಸ್ತ್ರಜ್ಞರು ಈ ದೇವಸ್ಥಾನ ಬಂಡೆಯಿಂದ ನಿರ್ಮಿಸಲ್ಪಟ್ಟಿದೆ ಎಂದು ಗುರುತಿಸಿದ್ದಾರೆ. ಆದರೂ ಇಲ್ಲಿರುವ ಮೂರೂ ಕೋಣೆಗಳಲ್ಲಿಯೂ (ಗರ್ಭಗುಡಿ, ಅರ್ಧಮಂಟಪ ಮತ್ತು ಮಹಾ ಮಂಟಪ) ಯಾವುದೇ ದೇವರ ವಿಗ್ರಹಗಳು ಪತ್ತೆಯಾಗಿಲ್ಲ. ಇದು 20 ಅಡಿ ಉದ್ದದ ಸುಣ್ಣದ ದಿಬ್ಬದ ಪ್ರವೇಶದ್ವಾರವನ್ನು ಹೊಂದಿದೆ.

ಗೋಡೆಗಳ ಮೇಲೆ ಮತ್ತು ಚಾವಣಿಯಲ್ಲಿ ಸಿಮೆಂಟ್‌ನ ಕುರುಹುಗಳಿವೆ ಎಂದು ತಜ್ಞರು ಹೇಳಿದ್ದಾರೆ. ಸುಮಾರು 100 ವರ್ಷಗಳ ಹಿಂದೆ ದೇವಸ್ಥಾನದ ಭಕ್ತರು ದುರಸ್ಥಿ ನಡೆಸಿದ್ದಿರಬಹುದು ಎಂದು ಪುರಾತತ್ತ್ವಜ್ಞರು ಊಹಿಸಿದ್ದಾರೆ. ದೇವಸ್ಥಾನದ ಒಳಗೆ ಹಲವು ಕಡೆ ಸುಣ್ಣದ ಕಲ್ಲು ಕುಸಿಯುತ್ತಿದೆ. ಮಹಾ ಮಂಟಪದ ಸೀಲಿಂಗ್‌ನಲ್ಲಿ ಬೃಹತ್ ರಂಧ್ರವಿದೆ ಎನ್ನಲಾಗಿದೆ.


ಇದನ್ನೂ ಓದಿ: ಇತಿಹಾಸ ಪುರುಷರ ಬಗ್ಗೆ ಸಂಘ ಪರಿವಾರ ಮಾಡಿದ ಚಾರಿತ್ಯವಧೆಯ ಇತಿಹಾಸ..


ರಾಜ್ಯ ಪುರಾತತ್ವ ವಿಭಾಗದ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸಿ.ಸಂತಲಿಂಗಂ ಮಾತನಾಡಿ, ಈ ದೇವಾಲಯವು ಮೂರು ಅಂಶಗಳಲ್ಲಿ ವಿಶಿಷ್ಟವಾಗಿದೆ ಎಂದಿದ್ದಾರೆ.

“ಮೊದಲನೆಯದು: ಇದು ಸಂಧಾರ ಮಾದರಿಯ ದೇವಾಲಯವಾಗಿದೆ. ಭಾರತದಲ್ಲಿ ಇದುವರೆಗೂ ಸಂಧಾರ ಮಾದರಿಯ, ಬಂಡೆಯಲ್ಲಿ ಕತ್ತರಿಸಿದ ದೇವಾಲಯವಿಲ್ಲ. ಈ ದೇವಾಲಯಗಳು ದೇವಾಲಯದ ಸುತ್ತಲೂ ವೃತ್ತಾಕಾರದ ಹಾದಿಯನ್ನು (ಪ್ರದಕ್ಷಿಣಪಥ) ಹೊಂದಿವೆ. ಎಲ್ಲಾ ದೇವಾಲಯಗಳಲ್ಲಿ ಈ ಹಾದಿಗಳಿಲ್ಲ ಎಂದು ಮೂಲಗಳು ತಿಳಿಸಿವೆ.

ಎರಡನೆಯದು: ದೇವಾಲಯವು ಎರಡು ಸುತ್ತುವರಿದ ಹಾದಿಗಳನ್ನು ಹೊಂದಿದೆ. ಇದು ಬಹಳ ಅಪರೂಪ. ಒಂದು ಮಾರ್ಗವು ಅರ್ಧಮಂಟಪದಿಂದ ಪ್ರದಕ್ಷಿಣಾಕಾರವಾಗಿ ಚಲಿಸುತ್ತಿದ್ದರೆ, ಎರಡನೆಯದು ಮಹಾಮಂಟಪದ ಪಕ್ಕದಲ್ಲಿದೆ.

ಮೂರನೆಯದು: ದೇವಾಲಯವನ್ನು ಸಂಪೂರ್ಣವಾಗಿ ಸುಣ್ಣದ ಕಲ್ಲುಗಳಿಂದ ಕೆತ್ತಲಾಗಿದೆ. ಇದು ಕಡಿಮೆ ಗುಣಮಟ್ಟದ ಕಲ್ಲಾಗಿದ್ದು, ಹಾಗಾಗಿಯೇ ದೇವಾಲಯದಲ್ಲಿ ಕಲಾತ್ಮಕ ವಿನ್ಯಾಸ, ಶಿಲ್ಪಕಲೆ ಅಥವಾ ಕೆತ್ತನೆ ಇಲ್ಲದಿರುವುದಕ್ಕೆ ಕಾರಣವಾಗಿದೆ. ಆದರೂ ಗರ್ಭಗೃಹದ ಪ್ರವೇಶದ್ವಾರದ ಎರಡೂ ಬದಿಗಳಲ್ಲಿ ಗೂಡುಗಳಿವೆ. ಇದಲ್ಲದೆ, ಗರ್ಭಗೃಹದಲ್ಲಿ ಕಲ್ಲಿನ ನಾಗ ಪ್ರತಿಮೆ ಇದೆ. ಪೂಜೆ ಮಾಡುವ ಸಲುವಾಗಿ, ಭಕ್ತರು 100 ವರ್ಷಗಳ ಹಿಂದೆ ಇದನ್ನು ಇಟ್ಟಿರಬಹುದು” ಎಂದು ಸಂತಲಿಂಗಂ ಹೇಳಿದ್ದಾರೆ.

ಈ ದೇವಾಲಯವು ಕ್ರಿ.ಶ 8 ನೇ ಶತಮಾನದ ಆರಂಭದಲ್ಲಿ-ಪಾಂಡ್ಯರ ಯುಗಕ್ಕೆ ಸೇರಿದೆ. ಇದು ತಿರುಚಂದೂರಿನಲ್ಲಿರುವ ವಲ್ಲಿ ಗುಹೆ ದೇವಾಲಯಕ್ಕೆ ಹೋಲುತ್ತದೆ. ಇದನ್ನು ಮರಳುಗಲ್ಲಿನಿಂದ ಕೆತ್ತಲಾಗಿದೆ. ಇದು ಸುಣ್ಣದ ಕಲ್ಲುಗಳಿಗೆ ಹೋಲುವ ಬಂಡೆಯಾಗಿದೆ ಎಂದು ಸಂತಲಿಂಗಂ ಹೇಳಿದರು.


ಇದನ್ನೂ ಓದಿ: ಆರ್ಯ-ಅನಾರ್ಯರ ನಡುವಿನ ಕಾಳಗ ಮತ್ತು ಮಿಲನ: ಗೊಂಡಿಯರ ಸಂಭೂ ಶೇಖರ ಶಂಭೋ ಶಂಕರನಾದ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...