Homeಮುಖಪುಟಕಾಫಿ ಡೆ ಸಂಸ್ಥಾಪಕ ಸಿದ್ದಾರ್ಥರ ಖಾತೆಯಿಂದ 20 ಬಿಲಿಯನ್ ಕಾಣೆ...!!

ಕಾಫಿ ಡೆ ಸಂಸ್ಥಾಪಕ ಸಿದ್ದಾರ್ಥರ ಖಾತೆಯಿಂದ 20 ಬಿಲಿಯನ್ ಕಾಣೆ…!!

- Advertisement -
- Advertisement -

ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಅವರ ಖಾತೆಯಿಂದ 20 ಬಿಲಿಯನ್ ರೂಪಾಯಿಗಳು ಕಾಣೆಯಾಗಿದೆ ಎಂದು ಅವರ ನಿಧನದ ನಂತರ ಅದರ ಮಂಡಳಿಯು ಪ್ರಾರಂಭಿಸಿದ ತನಿಖೆಯಿಂದ ತಿಳಿದು ಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಸಿದ್ಧಾರ್ಥ ಅವರ ಆತ್ಮಹತ್ಯೆಯ ನಂತರ ತಿಂಗಳುಗಳ ಕಾಲ ನಡೆದ ಈ ತನಿಖೆಯು ಭಾರತದ ಅತಿದೊಡ್ಡ ಕಾಫಿ ಕೆಫೆಯ ಹಣಕಾಸಿನ ವಹಿವಾಟುಗಳನ್ನು ಮತ್ತು ಡಜನ್ ಗಟ್ಟಲೆ ಉದ್ಯಮಿಗಳ ಒಡೆತನದ ಖಾಸಗಿ ಕಂಪನಿಗಳೊಂದಿಗಿನ ವ್ಯವಹಾರಗಳನ್ನು ಪರಿಶೀಲಿಸಿದೆ. ಕರಡು ವರದಿಯಲ್ಲಿ ನೂರಕ್ಕಿಂತಲೂ ಹೆಚ್ಚು ಪುಟಗಳಿವೆ. ಇದು ಕಾಣೆಯಾದ ಕೋಟ್ಯಂತರ ರೂಪಾಯಿಗಳ ಬಗ್ಗೆ ಸೂಚಿಸುತ್ತದೆ ಎಂದು ಹೇಳಲಾಗುತ್ತಿದೆ.

ವರದಿಯು ಈ ವಾರದಲ್ಲಿಯೇ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವರದಿ ಅಂತಿಮ ಹಂತದಲ್ಲಿದೆ ಅದು ಬಿಡುಗಡೆಯ ಮೊದಲು ನಿಖರವಾದ ವಿವರಗಳು ಬದಲಾಗಬಹುದು. ಒಬ್ಬರ ಪ್ರಕಾರ ಕಾಣೆಯಾದ ಹಣವು 25 ಬಿಲಿಯನ್ ರುಪಾಯಿಗಿಂತಳಲೂ ಹೆಚ್ಚಿದೆ ಎನ್ನಲಾಗಿದೆ.

“ತನಿಖಾ ವರದಿಯು ಇನ್ನೂ ಅಂತಿಮಗೊಂಡಿಲ್ಲ, ಪ್ರಗತಿಯಲ್ಲಿದೆ. ನಿರ್ದೇಶಕರ ಮಂಡಳಿ ಮತ್ತು ಕಂಪನಿಗೆ ಈ ಸಮಯದಲ್ಲಿ ಅದರ ವಿಷಯದ ಬಗ್ಗೆ ತಿಳಿದಿಲ್ಲ. ಆದ್ದರಿಂದ ತನಿಖೆಯ ಬಗ್ಗೆ ಊಹಿಸುವುದು ಸರಿಯಲ್ಲ” ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ಸಿದ್ಧಾರ್ಥರವರ ಕುಟುಂಬ ಹಾಗೂ ಆಡಳಿತ ಮಂಡಳಿಯ ಆದ್ಯತೆ ಏನೆಂದರೆ, ಇಂತಹ ಪ್ರತಿಕೂಲ ವಾತಾವರಣದಲ್ಲೂ ವ್ಯವಹಾರವನ್ನು ನಡೆಸುವುದು, ಎಲ್ಲಾ ಶೇರುದಾರರ ಹಾಗೂ 30,000 ಉದ್ಯೋಗಿಗಳ ಭಾದ್ಯತೆಯನ್ನು ಪೂರೈಸುವುದಾಗಿದೆ ಎಂದು ವಕ್ತಾರರು ಹೇಳಿದ್ದಾರೆ.

ಕಳೆದ ವರ್ಷ 59 ​​ವರ್ಷದ ಕೆಫೆ ಕಾಫಿ ಡೆ ಸಂಸ್ಥಾಪಕ ವಿ.ಜಿ ಸಿದ್ಧಾರ್ಥ ಮಂಗಳೂರಿನ ಸೇತುವೆಯಿಂದ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿದ್ಧಾರ್ಥ ಸಹಿ ಮಾಡಿದಂತೆ ಕಂಡುಬರುವ ಕಾಫಿ ಡೆ ಮಂಡಳಿ ಮತ್ತು ಉದ್ಯೋಗಿಗಳಿಗೆ ನೀಡಿದ ಪತ್ರಗಳಲ್ಲಿ ಭಾರಿ ಸಾಲಗಳ ಬಗ್ಗೆ ವಿವರಿಸಲಾಗಿತ್ತು. ಅದರಲ್ಲಿ ಸಾಲದಾತರು ಮತ್ತು ತೆರಿಗೆ ಅಧಿಕಾರಿಗಳ ಒತ್ತಡದ ಬಗ್ಗೆ ಕೂಡ ದೂರಲಾಗಿತ್ತು. ಕಂಪನಿಯ ಹಣಕಾಸು ವಹಿವಾಟಿನ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆಂದು ಅದು ಹೇಳಿತ್ತು.

ಕೆಫೆ ಕಾಫಿ ಡೆ 1,500 ಕ್ಕೂ ಹೆಚ್ಚು ಶಾಖೆಗಳು ದೇಶದಾದ್ಯಂತ ಹರಡಿದೆ. ಆದರೆ ಸಿದ್ದಾರ್ಥದ ಮರಣದ ನಂತರ ಅದರ ಷೇರುಗಳು ಸುಮಾರು 90% ನಷ್ಟು ಕುಸಿದವು ಮತ್ತು ಅದರ ಮಾರುಕಟ್ಟೆ ಮೌಲ್ಯವು ಸುಮಾರು 80 ದಶ ಲಕ್ಷಕ್ಕೆ ಇಳಿಯಿತು. ಫೆಬ್ರವರಿಯಲ್ಲಿ ವ್ಯಾಪಾರವನ್ನು ಸ್ಥಗಿತಗೊಳಿಸಲಾಯಿತು. ಮಾರ್ಚ್ 2019 ರ ಹೊತ್ತಿಗೆ ಕಾಫಿ ಡೇ ತನ್ನ ಬ್ಯಾಲೆನ್ಸ್ ಶೀಟ್‌ನಲ್ಲಿ ಸುಮಾರು 24 ಶತಕೋಟಿ ರೂಪಾಯಿ ನಗದು ಮತ್ತು ನಗದು ಸಮಾನತೆಯನ್ನು ತೋರಿಸಿದೆ. ಇದು ಕಂಪನಿಯು ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ ಅಂಶಗಳು.

ಆದಾಗ್ಯೂ ಸಿದ್ಧಾರ್ಥರ ಮರಣದ ನಂತರ, ಕಂಪನಿಯು ತೀವ್ರ ಬಿಕ್ಕಟ್ಟನ್ನು ಎದುರಿಸಿತು. ಕಂಪೆನಿಯು ದಿನನಿತ್ಯದ ಖರ್ಚಿಗೆ ಹೆಣಗಾಡುತ್ತಿದೆ ಮತ್ತು ಸಂಬಳವನ್ನು ಪಾವತಿಸುವುದು ಕೂಡಾ ಕಷ್ಟಕರವಾಗಿದೆ ಎಂದು ಹೇಳಲಾಗಿದೆ.

ಸಿದ್ಧಾರ್ಥ ಮತ್ತು ಅವರ ಹಲವಾರು ಉದ್ಯೋಗಿಗಳ ಒಡೆತನದ ಕಾಫಿ ಎಸ್ಟೇಟ್‌ಗಳನ್ನು ಬ್ಯಾಂಕ್ ಸಾಲಗಳಿಗೆ ಮೂಲಾಧಾರವಾಗಿ ಬಳಸಲಾಗಿದೆ. ಸಾಲವನ್ನು ಪಡೆಯಲು ಆಸ್ತಿಗಳ ಮೌಲ್ಯಮಾಪನಗಳನ್ನು ಹೆಚ್ಚಿಸಲಾಗಿದೆ ಎಂದು ವರದಿಯಲ್ಲಿ ಕಂಡುಬಂದಿದೆ.

ಸಿದ್ಧಾರ್ಥರು ತಮ್ಮ ಪತ್ರದಲ್ಲಿ, “ನಾನು ಅತ್ಯುತ್ತಮವಾಗಿ ಪ್ರಯತ್ನಿಸಿದ್ದೇನೆ ಆದರೆ ಉದ್ಯಮಿಯಾಗಿ ವಿಫಲವಾದೆ” ಎಂದು ಬರೆದಿದ್ದರು. “ಎಲ್ಲಾ ತಪ್ಪುಗಳಿಗೆ ನಾನು ಮಾತ್ರ ಜವಾಬ್ದಾರನಾಗಿರುತ್ತೇನೆ” ಎಂದು ಪತ್ರವನ್ನು ಬರೆಯಲಾಗಿದೆ. “ಪ್ರತಿ ಹಣಕಾಸಿನ ವಹಿವಾಟು ನನ್ನ ಜವಾಬ್ದಾರಿಯಾಗಿದೆ. ನನ್ನ ತಂಡ, ಲೆಕ್ಕಪರಿಶೋಧಕರು ಮತ್ತು ಹಿರಿಯ ನಿರ್ವಹಣೆಗಾರರಿಗೆ ನನ್ನ ಎಲ್ಲಾ ವಹಿವಾಟುಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ನನ್ನ ಕುಟುಂಬ ಸೇರಿದಂತೆ ಪ್ರತಿಯೊಬ್ಬರಿಂದಲೂ ಈ ಮಾಹಿತಿಯನ್ನು ನಾನು ಕೊಡದಿರುವ ಕಾರಣ ಎಲ್ಲದಕ್ಕೂ ನಾನು ಮಾತ್ರ ಜವಾಬ್ದಾರ” ಎಂದು ಬರೆದಿದ್ದರು.

ವರದಿ ಬಿಡುಗಡೆಯಾಗಲು ಹತ್ತಿರವಾಗುತ್ತಿದ್ದಂತೆ , ಕಾಫಿ ಡೇ ರಿಯಲ್ ಎಸ್ಟೇಟ್ ಆಸ್ತಿಗಳಿಗಾಗಿ ಬ್ಲ್ಯಾಕ್‌ಸ್ಟೋನ್ ಗ್ರೂಪ್ ನೊಂದಿಗೆ ಒಪ್ಪಂದವನ್ನು ಅಂತಿಮಗೊಳಿಸುತ್ತಿದೆ. ಸುಮಾರು ಒಂದು ವಾರದಲ್ಲಿ ದೊಡ್ಡ ಮೊತ್ತವನ್ನು ಪಾವತಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

“ಉದ್ಯೋಗವನ್ನು ಉಳಿಸುವುದು ಮತ್ತು ಈ ಸಾಂಪ್ರದಾಯಿಕ ಭಾರತೀಯ ಬ್ರಾಂಡ್ ಅನ್ನು ಕಾಪಾಡುವುದು ಇದರ ಉದ್ದೇಶ” ಎಂದು ವಕ್ತಾರರು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...