Homeರಾಜಕೀಯ56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

- Advertisement -
- Advertisement -

ಸೋಮಶೇಖರ್ ಚಲ್ಯ |

ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಸಾಮಾನ್ಯರ ಸೇವೆಯನ್ನು ಬದಿಗಿಟ್ಟು ಕಾರ್ಪೊರೇಟ್ ಖದೀಮರ ಸೇವೆಯಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಕಾರಣಗಳಿದ್ದವು. ಆದರೆ ನಿರ್ದಿಷ್ಟ ಹಗರಣಗಳಾಗಿ ಹೊರಬಿದ್ದಿರಲಿಲ್ಲ. ಆದರೆ ಅವು ಈಗ ವಾರಕ್ಕೊಂದರಂತೆ ಎಕ್ಸ್ಪೋಸ್ ಆಗುತ್ತಿವೆ. ಮೋದಿಯವರ ಹಗರಣ ಖಾತೆಗಳಲ್ಲಿರುವ ರಫೇಲ್ ಹಗರಣ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಹಗರಣಗಳಂತಹವುಗಳ ಜೊತೆಗೆ ಹೊಸದೊಂದು ಹಗರಣ ಸೇರ್ಪಡೆಯಾಗಿದೆ. ಅದೂ ನಿಮಿಷದ ಲೆಕ್ಕದ್ದು.

ಕೆಲವು ಕಂಪನಿಗಳು ವಿಶೇಷ ಆಫರ್‌ಗಳ ಸ್ಕ್ರಾಚ್‌ ಕಾರ್ಡ್ಗಳನ್ನು ನೀಡುತ್ತವೆ. ಸ್ಕ್ರಾಚ್ ಮಾಡಿ ನೋಡಿದರೆ, ಕೆಲವು ಕಾರ್ಡ್ಗಳಲ್ಲಿ ಬೆಟರ್ ಲಕ್ ನೆಕ್ಸ್ಟ್ ಟೈಮ್ ಎಂದಿರುತ್ತವೆ. ಇದೂ ಸಹಾ ಅಂತಹದೊಂದು ‘ಭರ್ಜರಿ ಆಫರ್’. ಮೋದಿ ಸಾಹೇಬರು ಪ್ರಜೆಗಳಿಗೆ ನವೆಂಬರ್ 2ರಂದು ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ್ದಾರೆಂದು ಕೆಲವು ಮಾಧ್ಯಮಗಳು ತಮ್ಮ ಸ್ವಾಮಿನಿಷ್ಟೆಯನ್ನು ಪ್ರದರ್ಶಿಸಿದ್ದವು. ಆದರೆ ಅದೀಗ ಜನರ ಪಾಲಿಗೆ ದೀಪಾವಳಿಯ ಟುಸ್ ಪಟಾಕಿಯಾದಂತಿದ್ದರೂ ಕಾರ್ಪೊರೇಟ್‌ಗಳ ಖಾತೆ ತುಂಬಿ ತುಳುಕುವಂತಾಗಿದೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ ವರದಾನವಾಗಲಿದೆ. ಅದರಲ್ಲಿ ಪ್ರಮುಖವಾದದ್ದು 59 ನಿಮಿಷದಲ್ಲಿ ಒಂದು ಕೋಟಿಯವರೆಗಿನ ಲೋನ್ ಮೇಳದ ಸೌಲಭ್ಯ’ ಎಂದು ಮೋದಿ ಪುಂಗಿ ಊದಿದ್ದರು. ಈ ಯೋಜನೆಯಡಿಯಲ್ಲಿ ಸಾಲ ಪಡೆದವರಿಗೆ ಶೇ.3ರಿಂದ ಶೇ.5 ರಷ್ಟು ಬಡ್ಡಿ ರಿಯಾಯತಿ, ಮಹಿಳಾ ಉದ್ಯಮಿಗಳಿಂದ ಶೇ.3ರಷ್ಟು ಸರ್ಕಾರವೇ ಖರೀದಿಸುತ್ತದೆ. ಈ ಯೋಜನೆಗಾಗಿ 6,000ರೂ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ಈ ಯೋಜನೆಯ ಫಲಾನುಭವಿಯಾಗಲು ಪ್ರತ್ಯೇಕ ವೆಬ್‌ಪೇಜ್‌ಯಿದ್ದು www.psbloansin59minutes.com ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಒಬ್ಬ ವ್ಯಕ್ತಿ ಅಪ್ಲಿಕೇಷನ್ ಹಾಕಿದ್ದು 85 ಲಕ್ಷರೂಗಳ ಅಪ್ರೂವಲ್ ಕೂಡ ಪಡೆದು ವಿಜಯಾ ಬ್ಯಾಂಕಿನಲ್ಲಿ ಲೋನ್ ಕೇಳಲು ಹೋಗಿದ್ದಾರೆ. ಬ್ಯಾಂಕ್‌ನವರು ಹೇಳಿದ್ದು ಕೇಳಿ ಹೌಹಾರಿ ಹೋಗಿದ್ದಾರೆ. ಅಲ್ಲಿ ‘ನೀವೇ ಮೊದಲು 85 ಲಕ್ಷ ರೂ.ಗಳನ್ನು ಕಟ್ಟಬೇಕು. ಆನಂತರ ನಿಮಗೆ ಒಂದು ಕೋಟಿಯ ಲೋನ್ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಆ ವ್ಯಕ್ತಿ ಬ್ಯಾಂಕಿನವರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದ ಹೆಚ್‌ಡಬ್ಲ್ಯು ನ್ಯೂಸ್ ವರದಿಗಾರರು, ಇದರ ಅಸಲೀಯತ್ತೇನೆಂದು ತಿಳಿಯಲು ತಾವೇ ಒಬ್ಬರಿಂದ ಅಪ್ಲಿಕೇಶನ್ ಹಾಕಿಸಿದ್ದಾರೆ. ಈ ಅಪ್ಲಿಕೇಶನ್ ಮೋದಿ ಸಾಹೇಬರ 59 ನಿಮಿಷದ ಹಗರಣವನ್ನು ಬಯಲು ಮಾಡಿದೆ.

ಅಪ್ಲೇ ಮಾಡಿದ ವ್ಯಕ್ತಿಯಿಂದ ಪಾನ್ ನಂಬರ್, ಜಿಎಸ್‌ಟಿ ನಂಬರ್ ಅಷ್ಟೇ ಅಲ್ಲದೆ ಲಾಗಿನ್ ಐಡಿಯ ಪಾಸ್‌ರ‍್ಡ್ ಕೂಡ ಅಪ್ಲಿಕೇಷನ್‌ನಲ್ಲಿ ಪಡೆದುಕೊಂಡಿದ್ದಾರೆ. ಅಪ್ಲೇ ಮಾಡಿದ ಕೇವಲ 47 ನಿಮಿಷದಲ್ಲಿ ಲೋನ್‌ಗೆ 1,48,000ರೂ.ಗಳಿಗೆ ಅಪ್ರೂವಲ್ ಸಿಕ್ಕಿದೆ. ತಮಾಷೆಯೆಂದರೆ ಅಪ್ರುವಲ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ (ತಾತ್ವಿಕ ಒಪ್ಪಿಗೆ) ಎಂದು ನೀಡಲಾಗಿದ್ದು, ಸಾಲವನ್ನು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಬ ಬ್ಯಾಂಕಿನಿಂದ ಪಡೆಯಬೇಕು ಎಂದು ಬ್ಯಾಂಕಿನ ವಿವರಗಳನ್ನೂ ಸಹ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ ಈತ 1,180ರೂ ಗಳ ಡಿಡಿಯನ್ನು ಕ್ಯಾಪಿಟ ವರ್ಲ್ಡ್ ಪ್ಲಾಟ್‌ಫಾರ್ಮ ಪ್ರೈ. ಲಿ. ಎಂಬ ಖಾಸಗೀ ಕಂಪನಿಯ ಹೆಸರಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದರೆ ಸರ್ಕಾರಕ್ಕೆ ಡಿಡಿ ಕಟ್ಟುವುದು ಮಾಮೂಲಿ. ಆದರೆ ಈ ಸ್ಕೀಮ್‌ಗೆ ಮಾತ್ರ ಖಾಸಗಿ ಕಂಪನಿ ಹೆಸರಿನಲ್ಲಿ ಕಟ್ಟಬೇಕೆನ್ನುವುದೇ ಈ ಹಗರಣದ ಮೊದಲ ಹಂತ.

ಅಂದರೆ ಮೋದಿ ಸಾಹೇಬರು ಈ ಸ್ಕೀಮ್ ಮೂಲಕ ಖಾಸಗೀ ಕಂಪನಿಯ ಖಜಾನೆ ತುಂಬಿಸುವ ಪ್ಲಾನ್ ಮಾಡಿದ್ದಾರೆ ಎಂಬುದು ಕಣ್ಣೋಟಕ್ಕೆ ಕಾಣುವ ವಿಚಾರ. ಕೇವಲ ಒಂದು ಮಿಲಿಯನ್ ಅರ್ಜಿಗಳು ಬಂದರೂ 118 ಕೋಟಿ ರೂ.ಗಳು ಆ ಖಾಸಗಿ ಕಂಪೆನಿಗೆ ದಕ್ಕುತ್ತವೆ. ಪ್ರಧಾನಿ ಮೋದಿ ಈ ಸ್ಕೀಮ್ ಘೋಷಿಸಿದ ಮಾರನೆಯ ದಿನವೇ 23,582 ಕೋಟಿ ರೂ.ಗಳಷ್ಟು ಸಾಲ ನೀಡುವ 1.69 ಲಕ್ಷ ಅರ್ಜಿಗಳನ್ನು ಅಪ್ರೂವಲ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವೇನೆಂದರೆ ಅಲ್ಲಿಯವರೆಗೆ ಒಬ್ಬರಿಗೂ ಲೋನ್ ಹಣ ಸಿಕ್ಕಿರಲಿಲ್ಲ. ಈ ಲೆಕ್ಕವನ್ನು ಪ್ರಶ್ನಿಸಿದ ಕ್ಷಣಗಳಲ್ಲಿ ಮಾಹಿತಿಯನ್ನು ಅಳಿಸಿ ಹಾಕಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಅಂದಹಾಗೆ ರಫೇಲ್ ಹಗರಣದ ಮೂಲಕ ಅಂಬಾನಿಯ ಖಜಾನೆ ತುಂಬಿಸಹೊರಟಿದ್ದ ಮೋದಿ ಈ ಸ್ಕೀಮ್‌ಗೆ ಕೈಜೋಡಿಸಿದ್ದು ಇದೇ ಅಂಬಾನಿಯ ಆಪ್ತಮಿತ್ರ ಅಹಮದಾಬಾದ್ ವಿನೋದ್ ಮೋದ, ಜಿನಂದ್ ಶಾ ಮತ್ತು ಚಕ್ರಬೋಟ್ರಿ ಪಾಲುದಾರಿಕೆಯ ಕ್ಯಾಪಿಟಾ ವರ್ಲ್ಡ್ ಕಂಪನಿಯೊಂದಿಗೆ. ಈ ಕಂಪನಿ ಉದ್ಭವವಾಗಿದ್ದು ಮೋದಿ ಅಧಿಕಾರಕ್ಕೇರಿದ ಒಂದು ವರ್ಷದ ನಂತರ 2015ರಲ್ಲಿ. ಈ ಕಂಪನಿ ಆರಂಭಗೊಂಡ ಮೊದಲ ವರ್ಷ ಅಂದರೆ 2016ರಲ್ಲಿ ಇದರ ಆದಾಯ ಸೊನ್ನೆ ಮಾತ್ರ. ನಂತರ 2017ರಲ್ಲಿ 15.680 ರೂ. ಲಾಭ ಗಳಿಸಿತ್ತು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈ ಕಂಪನಿಯ ಶೇರ್‌ನಲ್ಲಿ ಎಸ್‌ಐಡಿಬಿಐ ಬ್ಯಾಂಕ್ ಸೇರಿದಂತೆ 9 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಂದು ಶೇರ್‌ಗೆ 119.39 ರೂ.ಗಳಂತೆ 17.43.371 ಶೇರ್‌ಗಳಿಗೆ 22.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.

ಇಷ್ಟೆಲ್ಲಾ ಹೂಡಿಕೆ ಮಾಡಿರುವ ಈ ಕಂಪನಿಯ ಲಾಭ 15.680 ಇದ್ದುದರಿಂದ ಮೋದಿ ಸಾಹೇಬರು ಈ ಕಂಪನಿಯನ್ನು ಮೇಲೆತ್ತುವ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಕಂಪನಿ ಆರಂಭಗೊಂಡು 3 ವರ್ಷವಾಗಿದ್ದು ಇದರ ಸಿಇಓಗಳು ಮೂರು ಭಾರಿ ಬದಲಾಗಿದ್ದರೆ. ಜಿನಾಬ್ ವೈ ಶಾ, ವಿಕಾಸ್ ಮನಿಲಾಲ್ ಷಾ, ಅಖಿಲ್ ಹಂಡಾ ಈ ಮೂವರೂ ಕ್ಯಾಪಿಟಾವರ್ಲ್ಡ್ನ ಸಿಇಓಗಳಾಗಿದ್ದು, ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರದ ಬ್ಯಾಟಿಂಗ್ ಮಾಡಿದ್ದರು ಎಂಬುದು ವಿಶೇಷ.

ಹಾಗಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದ ಸಿಇಓಗಳು, ಮಿತ್ರ ಅಂಬಾನಿಯ ಸ್ನೇಹಿತರ ಕಂಪನಿಯನ್ನು ಉಳಿಸುವ ಸಲುವಗಿ 59 ನಿಮಿಷದಲ್ಲಿ ಸಾಲ ಸೌಲಭ್ಯದ ಮೋದಿಯ ಸ್ಕೀಮ್‌ಗೆ ಲಕ್ಷಾಂತರ ಜನ ಅಪ್ಲಿಕೇಷನ್ ಹಾಕಿದ್ದು ತಲಾ 1.180ರೂ ಡಿಡಿಯಂತೆ ಬಿಲಿಯನ್‌ಗಟ್ಟಲೆ ಸಾರ್ವಜನಿಕರ ಹಣ ಕ್ಯಾಪಿಟಾವರ್ಲ್ಡ್ನ ಪಾಲಿಗೆ ದಯಪಾಲಿಸಿದೆ, ಅಷ್ಟೇ ಅಲ್ಲದೆ ಅಪ್ಲೇ ಮಾಡಿದವರ ವ್ಯವಹಾರದ ಎಲ್ಲಾ ಡಿಟೈಲ್ಸ್ಗಳನ್ನು ಈ ಕಂಪನಿ ಪಡೆದುಕೊಂಡಿದೆ. ಅಪ್ರುವಲ್‌ನಲ್ಲಿಯೇ ಇರುವಂತೆ ಅದು ತಾತ್ವಿಕ ಒಪ್ಪಿಗೆಯಾಗಿದ್ದು, ಸಾಲ ನೀಡಬಹುದೆಂದಷ್ಟೇ ಸೂಚಿಸಿದ್ದು ಸಾಲ ದೊರೆತೇಬಿಡುತ್ತದೆ ಎಂದೇನೂ ಇಲ್ಲವಾದ್ದರಿಂದ ಲೋನ್‌ನ ಆಸೆಯನ್ನು ಮರೆಯುವುದೇ ಸೂಕ್ತವೆಂಬಂತೆ ಪರೋಕ್ಷವಾಗಿ ಕಂಪನಿ ತಿಳಿಸಿದೆ. ಒಟ್ಟಿನಲ್ಲಿ ಇದುವರೆಗೂ ಸರ್ಕಾರದ ಹಣದಿಂದ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿದ್ದ ದಾರಿಗಿಂತ ಭಿನ್ನವಾಗಿ ನೇರವಾಗಿ ಸಾರ್ವಜನಿಕರ ಜೇಬಿನಿಂದ ಕಾರ್ಪೊರೇಟ್ ಖಜಾನೆ ತುಂಬಿಸಿರುವ ಮೊದಲ ಹಗರಣ ಪ್ರಧಾನ ಕಾರ್ಪೊರೇಟ್ ಸೇವಕ ಮೋದಿಯದ್ದು. ಮುದ್ರಾ, ಫಸಲ್ ಬಿಮಾ ಯೋಜನೆಗಳಿಂದ ಜನರನ್ನು ಯಾಮಾರಿಸಿದ್ದ ಮೋದಿ ಈ ಹಗರಣದಲ್ಲಿ ನೇರವಾಗಿ ಜನರ ಜೇಬಿಗೆ ಕತ್ತರಿಹಾಕಿ ಯಾಮಾರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...