Homeರಾಜಕೀಯ56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

- Advertisement -
- Advertisement -

ಸೋಮಶೇಖರ್ ಚಲ್ಯ |

ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಸಾಮಾನ್ಯರ ಸೇವೆಯನ್ನು ಬದಿಗಿಟ್ಟು ಕಾರ್ಪೊರೇಟ್ ಖದೀಮರ ಸೇವೆಯಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಕಾರಣಗಳಿದ್ದವು. ಆದರೆ ನಿರ್ದಿಷ್ಟ ಹಗರಣಗಳಾಗಿ ಹೊರಬಿದ್ದಿರಲಿಲ್ಲ. ಆದರೆ ಅವು ಈಗ ವಾರಕ್ಕೊಂದರಂತೆ ಎಕ್ಸ್ಪೋಸ್ ಆಗುತ್ತಿವೆ. ಮೋದಿಯವರ ಹಗರಣ ಖಾತೆಗಳಲ್ಲಿರುವ ರಫೇಲ್ ಹಗರಣ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಹಗರಣಗಳಂತಹವುಗಳ ಜೊತೆಗೆ ಹೊಸದೊಂದು ಹಗರಣ ಸೇರ್ಪಡೆಯಾಗಿದೆ. ಅದೂ ನಿಮಿಷದ ಲೆಕ್ಕದ್ದು.

ಕೆಲವು ಕಂಪನಿಗಳು ವಿಶೇಷ ಆಫರ್‌ಗಳ ಸ್ಕ್ರಾಚ್‌ ಕಾರ್ಡ್ಗಳನ್ನು ನೀಡುತ್ತವೆ. ಸ್ಕ್ರಾಚ್ ಮಾಡಿ ನೋಡಿದರೆ, ಕೆಲವು ಕಾರ್ಡ್ಗಳಲ್ಲಿ ಬೆಟರ್ ಲಕ್ ನೆಕ್ಸ್ಟ್ ಟೈಮ್ ಎಂದಿರುತ್ತವೆ. ಇದೂ ಸಹಾ ಅಂತಹದೊಂದು ‘ಭರ್ಜರಿ ಆಫರ್’. ಮೋದಿ ಸಾಹೇಬರು ಪ್ರಜೆಗಳಿಗೆ ನವೆಂಬರ್ 2ರಂದು ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ್ದಾರೆಂದು ಕೆಲವು ಮಾಧ್ಯಮಗಳು ತಮ್ಮ ಸ್ವಾಮಿನಿಷ್ಟೆಯನ್ನು ಪ್ರದರ್ಶಿಸಿದ್ದವು. ಆದರೆ ಅದೀಗ ಜನರ ಪಾಲಿಗೆ ದೀಪಾವಳಿಯ ಟುಸ್ ಪಟಾಕಿಯಾದಂತಿದ್ದರೂ ಕಾರ್ಪೊರೇಟ್‌ಗಳ ಖಾತೆ ತುಂಬಿ ತುಳುಕುವಂತಾಗಿದೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ ವರದಾನವಾಗಲಿದೆ. ಅದರಲ್ಲಿ ಪ್ರಮುಖವಾದದ್ದು 59 ನಿಮಿಷದಲ್ಲಿ ಒಂದು ಕೋಟಿಯವರೆಗಿನ ಲೋನ್ ಮೇಳದ ಸೌಲಭ್ಯ’ ಎಂದು ಮೋದಿ ಪುಂಗಿ ಊದಿದ್ದರು. ಈ ಯೋಜನೆಯಡಿಯಲ್ಲಿ ಸಾಲ ಪಡೆದವರಿಗೆ ಶೇ.3ರಿಂದ ಶೇ.5 ರಷ್ಟು ಬಡ್ಡಿ ರಿಯಾಯತಿ, ಮಹಿಳಾ ಉದ್ಯಮಿಗಳಿಂದ ಶೇ.3ರಷ್ಟು ಸರ್ಕಾರವೇ ಖರೀದಿಸುತ್ತದೆ. ಈ ಯೋಜನೆಗಾಗಿ 6,000ರೂ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ಈ ಯೋಜನೆಯ ಫಲಾನುಭವಿಯಾಗಲು ಪ್ರತ್ಯೇಕ ವೆಬ್‌ಪೇಜ್‌ಯಿದ್ದು www.psbloansin59minutes.com ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಒಬ್ಬ ವ್ಯಕ್ತಿ ಅಪ್ಲಿಕೇಷನ್ ಹಾಕಿದ್ದು 85 ಲಕ್ಷರೂಗಳ ಅಪ್ರೂವಲ್ ಕೂಡ ಪಡೆದು ವಿಜಯಾ ಬ್ಯಾಂಕಿನಲ್ಲಿ ಲೋನ್ ಕೇಳಲು ಹೋಗಿದ್ದಾರೆ. ಬ್ಯಾಂಕ್‌ನವರು ಹೇಳಿದ್ದು ಕೇಳಿ ಹೌಹಾರಿ ಹೋಗಿದ್ದಾರೆ. ಅಲ್ಲಿ ‘ನೀವೇ ಮೊದಲು 85 ಲಕ್ಷ ರೂ.ಗಳನ್ನು ಕಟ್ಟಬೇಕು. ಆನಂತರ ನಿಮಗೆ ಒಂದು ಕೋಟಿಯ ಲೋನ್ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಆ ವ್ಯಕ್ತಿ ಬ್ಯಾಂಕಿನವರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದ ಹೆಚ್‌ಡಬ್ಲ್ಯು ನ್ಯೂಸ್ ವರದಿಗಾರರು, ಇದರ ಅಸಲೀಯತ್ತೇನೆಂದು ತಿಳಿಯಲು ತಾವೇ ಒಬ್ಬರಿಂದ ಅಪ್ಲಿಕೇಶನ್ ಹಾಕಿಸಿದ್ದಾರೆ. ಈ ಅಪ್ಲಿಕೇಶನ್ ಮೋದಿ ಸಾಹೇಬರ 59 ನಿಮಿಷದ ಹಗರಣವನ್ನು ಬಯಲು ಮಾಡಿದೆ.

ಅಪ್ಲೇ ಮಾಡಿದ ವ್ಯಕ್ತಿಯಿಂದ ಪಾನ್ ನಂಬರ್, ಜಿಎಸ್‌ಟಿ ನಂಬರ್ ಅಷ್ಟೇ ಅಲ್ಲದೆ ಲಾಗಿನ್ ಐಡಿಯ ಪಾಸ್‌ರ‍್ಡ್ ಕೂಡ ಅಪ್ಲಿಕೇಷನ್‌ನಲ್ಲಿ ಪಡೆದುಕೊಂಡಿದ್ದಾರೆ. ಅಪ್ಲೇ ಮಾಡಿದ ಕೇವಲ 47 ನಿಮಿಷದಲ್ಲಿ ಲೋನ್‌ಗೆ 1,48,000ರೂ.ಗಳಿಗೆ ಅಪ್ರೂವಲ್ ಸಿಕ್ಕಿದೆ. ತಮಾಷೆಯೆಂದರೆ ಅಪ್ರುವಲ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ (ತಾತ್ವಿಕ ಒಪ್ಪಿಗೆ) ಎಂದು ನೀಡಲಾಗಿದ್ದು, ಸಾಲವನ್ನು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಬ ಬ್ಯಾಂಕಿನಿಂದ ಪಡೆಯಬೇಕು ಎಂದು ಬ್ಯಾಂಕಿನ ವಿವರಗಳನ್ನೂ ಸಹ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ ಈತ 1,180ರೂ ಗಳ ಡಿಡಿಯನ್ನು ಕ್ಯಾಪಿಟ ವರ್ಲ್ಡ್ ಪ್ಲಾಟ್‌ಫಾರ್ಮ ಪ್ರೈ. ಲಿ. ಎಂಬ ಖಾಸಗೀ ಕಂಪನಿಯ ಹೆಸರಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದರೆ ಸರ್ಕಾರಕ್ಕೆ ಡಿಡಿ ಕಟ್ಟುವುದು ಮಾಮೂಲಿ. ಆದರೆ ಈ ಸ್ಕೀಮ್‌ಗೆ ಮಾತ್ರ ಖಾಸಗಿ ಕಂಪನಿ ಹೆಸರಿನಲ್ಲಿ ಕಟ್ಟಬೇಕೆನ್ನುವುದೇ ಈ ಹಗರಣದ ಮೊದಲ ಹಂತ.

ಅಂದರೆ ಮೋದಿ ಸಾಹೇಬರು ಈ ಸ್ಕೀಮ್ ಮೂಲಕ ಖಾಸಗೀ ಕಂಪನಿಯ ಖಜಾನೆ ತುಂಬಿಸುವ ಪ್ಲಾನ್ ಮಾಡಿದ್ದಾರೆ ಎಂಬುದು ಕಣ್ಣೋಟಕ್ಕೆ ಕಾಣುವ ವಿಚಾರ. ಕೇವಲ ಒಂದು ಮಿಲಿಯನ್ ಅರ್ಜಿಗಳು ಬಂದರೂ 118 ಕೋಟಿ ರೂ.ಗಳು ಆ ಖಾಸಗಿ ಕಂಪೆನಿಗೆ ದಕ್ಕುತ್ತವೆ. ಪ್ರಧಾನಿ ಮೋದಿ ಈ ಸ್ಕೀಮ್ ಘೋಷಿಸಿದ ಮಾರನೆಯ ದಿನವೇ 23,582 ಕೋಟಿ ರೂ.ಗಳಷ್ಟು ಸಾಲ ನೀಡುವ 1.69 ಲಕ್ಷ ಅರ್ಜಿಗಳನ್ನು ಅಪ್ರೂವಲ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವೇನೆಂದರೆ ಅಲ್ಲಿಯವರೆಗೆ ಒಬ್ಬರಿಗೂ ಲೋನ್ ಹಣ ಸಿಕ್ಕಿರಲಿಲ್ಲ. ಈ ಲೆಕ್ಕವನ್ನು ಪ್ರಶ್ನಿಸಿದ ಕ್ಷಣಗಳಲ್ಲಿ ಮಾಹಿತಿಯನ್ನು ಅಳಿಸಿ ಹಾಕಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಅಂದಹಾಗೆ ರಫೇಲ್ ಹಗರಣದ ಮೂಲಕ ಅಂಬಾನಿಯ ಖಜಾನೆ ತುಂಬಿಸಹೊರಟಿದ್ದ ಮೋದಿ ಈ ಸ್ಕೀಮ್‌ಗೆ ಕೈಜೋಡಿಸಿದ್ದು ಇದೇ ಅಂಬಾನಿಯ ಆಪ್ತಮಿತ್ರ ಅಹಮದಾಬಾದ್ ವಿನೋದ್ ಮೋದ, ಜಿನಂದ್ ಶಾ ಮತ್ತು ಚಕ್ರಬೋಟ್ರಿ ಪಾಲುದಾರಿಕೆಯ ಕ್ಯಾಪಿಟಾ ವರ್ಲ್ಡ್ ಕಂಪನಿಯೊಂದಿಗೆ. ಈ ಕಂಪನಿ ಉದ್ಭವವಾಗಿದ್ದು ಮೋದಿ ಅಧಿಕಾರಕ್ಕೇರಿದ ಒಂದು ವರ್ಷದ ನಂತರ 2015ರಲ್ಲಿ. ಈ ಕಂಪನಿ ಆರಂಭಗೊಂಡ ಮೊದಲ ವರ್ಷ ಅಂದರೆ 2016ರಲ್ಲಿ ಇದರ ಆದಾಯ ಸೊನ್ನೆ ಮಾತ್ರ. ನಂತರ 2017ರಲ್ಲಿ 15.680 ರೂ. ಲಾಭ ಗಳಿಸಿತ್ತು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈ ಕಂಪನಿಯ ಶೇರ್‌ನಲ್ಲಿ ಎಸ್‌ಐಡಿಬಿಐ ಬ್ಯಾಂಕ್ ಸೇರಿದಂತೆ 9 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಂದು ಶೇರ್‌ಗೆ 119.39 ರೂ.ಗಳಂತೆ 17.43.371 ಶೇರ್‌ಗಳಿಗೆ 22.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.

ಇಷ್ಟೆಲ್ಲಾ ಹೂಡಿಕೆ ಮಾಡಿರುವ ಈ ಕಂಪನಿಯ ಲಾಭ 15.680 ಇದ್ದುದರಿಂದ ಮೋದಿ ಸಾಹೇಬರು ಈ ಕಂಪನಿಯನ್ನು ಮೇಲೆತ್ತುವ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಕಂಪನಿ ಆರಂಭಗೊಂಡು 3 ವರ್ಷವಾಗಿದ್ದು ಇದರ ಸಿಇಓಗಳು ಮೂರು ಭಾರಿ ಬದಲಾಗಿದ್ದರೆ. ಜಿನಾಬ್ ವೈ ಶಾ, ವಿಕಾಸ್ ಮನಿಲಾಲ್ ಷಾ, ಅಖಿಲ್ ಹಂಡಾ ಈ ಮೂವರೂ ಕ್ಯಾಪಿಟಾವರ್ಲ್ಡ್ನ ಸಿಇಓಗಳಾಗಿದ್ದು, ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರದ ಬ್ಯಾಟಿಂಗ್ ಮಾಡಿದ್ದರು ಎಂಬುದು ವಿಶೇಷ.

ಹಾಗಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದ ಸಿಇಓಗಳು, ಮಿತ್ರ ಅಂಬಾನಿಯ ಸ್ನೇಹಿತರ ಕಂಪನಿಯನ್ನು ಉಳಿಸುವ ಸಲುವಗಿ 59 ನಿಮಿಷದಲ್ಲಿ ಸಾಲ ಸೌಲಭ್ಯದ ಮೋದಿಯ ಸ್ಕೀಮ್‌ಗೆ ಲಕ್ಷಾಂತರ ಜನ ಅಪ್ಲಿಕೇಷನ್ ಹಾಕಿದ್ದು ತಲಾ 1.180ರೂ ಡಿಡಿಯಂತೆ ಬಿಲಿಯನ್‌ಗಟ್ಟಲೆ ಸಾರ್ವಜನಿಕರ ಹಣ ಕ್ಯಾಪಿಟಾವರ್ಲ್ಡ್ನ ಪಾಲಿಗೆ ದಯಪಾಲಿಸಿದೆ, ಅಷ್ಟೇ ಅಲ್ಲದೆ ಅಪ್ಲೇ ಮಾಡಿದವರ ವ್ಯವಹಾರದ ಎಲ್ಲಾ ಡಿಟೈಲ್ಸ್ಗಳನ್ನು ಈ ಕಂಪನಿ ಪಡೆದುಕೊಂಡಿದೆ. ಅಪ್ರುವಲ್‌ನಲ್ಲಿಯೇ ಇರುವಂತೆ ಅದು ತಾತ್ವಿಕ ಒಪ್ಪಿಗೆಯಾಗಿದ್ದು, ಸಾಲ ನೀಡಬಹುದೆಂದಷ್ಟೇ ಸೂಚಿಸಿದ್ದು ಸಾಲ ದೊರೆತೇಬಿಡುತ್ತದೆ ಎಂದೇನೂ ಇಲ್ಲವಾದ್ದರಿಂದ ಲೋನ್‌ನ ಆಸೆಯನ್ನು ಮರೆಯುವುದೇ ಸೂಕ್ತವೆಂಬಂತೆ ಪರೋಕ್ಷವಾಗಿ ಕಂಪನಿ ತಿಳಿಸಿದೆ. ಒಟ್ಟಿನಲ್ಲಿ ಇದುವರೆಗೂ ಸರ್ಕಾರದ ಹಣದಿಂದ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿದ್ದ ದಾರಿಗಿಂತ ಭಿನ್ನವಾಗಿ ನೇರವಾಗಿ ಸಾರ್ವಜನಿಕರ ಜೇಬಿನಿಂದ ಕಾರ್ಪೊರೇಟ್ ಖಜಾನೆ ತುಂಬಿಸಿರುವ ಮೊದಲ ಹಗರಣ ಪ್ರಧಾನ ಕಾರ್ಪೊರೇಟ್ ಸೇವಕ ಮೋದಿಯದ್ದು. ಮುದ್ರಾ, ಫಸಲ್ ಬಿಮಾ ಯೋಜನೆಗಳಿಂದ ಜನರನ್ನು ಯಾಮಾರಿಸಿದ್ದ ಮೋದಿ ಈ ಹಗರಣದಲ್ಲಿ ನೇರವಾಗಿ ಜನರ ಜೇಬಿಗೆ ಕತ್ತರಿಹಾಕಿ ಯಾಮಾರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...