Homeರಾಜಕೀಯ56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

- Advertisement -
- Advertisement -

ಸೋಮಶೇಖರ್ ಚಲ್ಯ |

ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಸಾಮಾನ್ಯರ ಸೇವೆಯನ್ನು ಬದಿಗಿಟ್ಟು ಕಾರ್ಪೊರೇಟ್ ಖದೀಮರ ಸೇವೆಯಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಕಾರಣಗಳಿದ್ದವು. ಆದರೆ ನಿರ್ದಿಷ್ಟ ಹಗರಣಗಳಾಗಿ ಹೊರಬಿದ್ದಿರಲಿಲ್ಲ. ಆದರೆ ಅವು ಈಗ ವಾರಕ್ಕೊಂದರಂತೆ ಎಕ್ಸ್ಪೋಸ್ ಆಗುತ್ತಿವೆ. ಮೋದಿಯವರ ಹಗರಣ ಖಾತೆಗಳಲ್ಲಿರುವ ರಫೇಲ್ ಹಗರಣ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಹಗರಣಗಳಂತಹವುಗಳ ಜೊತೆಗೆ ಹೊಸದೊಂದು ಹಗರಣ ಸೇರ್ಪಡೆಯಾಗಿದೆ. ಅದೂ ನಿಮಿಷದ ಲೆಕ್ಕದ್ದು.

ಕೆಲವು ಕಂಪನಿಗಳು ವಿಶೇಷ ಆಫರ್‌ಗಳ ಸ್ಕ್ರಾಚ್‌ ಕಾರ್ಡ್ಗಳನ್ನು ನೀಡುತ್ತವೆ. ಸ್ಕ್ರಾಚ್ ಮಾಡಿ ನೋಡಿದರೆ, ಕೆಲವು ಕಾರ್ಡ್ಗಳಲ್ಲಿ ಬೆಟರ್ ಲಕ್ ನೆಕ್ಸ್ಟ್ ಟೈಮ್ ಎಂದಿರುತ್ತವೆ. ಇದೂ ಸಹಾ ಅಂತಹದೊಂದು ‘ಭರ್ಜರಿ ಆಫರ್’. ಮೋದಿ ಸಾಹೇಬರು ಪ್ರಜೆಗಳಿಗೆ ನವೆಂಬರ್ 2ರಂದು ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ್ದಾರೆಂದು ಕೆಲವು ಮಾಧ್ಯಮಗಳು ತಮ್ಮ ಸ್ವಾಮಿನಿಷ್ಟೆಯನ್ನು ಪ್ರದರ್ಶಿಸಿದ್ದವು. ಆದರೆ ಅದೀಗ ಜನರ ಪಾಲಿಗೆ ದೀಪಾವಳಿಯ ಟುಸ್ ಪಟಾಕಿಯಾದಂತಿದ್ದರೂ ಕಾರ್ಪೊರೇಟ್‌ಗಳ ಖಾತೆ ತುಂಬಿ ತುಳುಕುವಂತಾಗಿದೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ ವರದಾನವಾಗಲಿದೆ. ಅದರಲ್ಲಿ ಪ್ರಮುಖವಾದದ್ದು 59 ನಿಮಿಷದಲ್ಲಿ ಒಂದು ಕೋಟಿಯವರೆಗಿನ ಲೋನ್ ಮೇಳದ ಸೌಲಭ್ಯ’ ಎಂದು ಮೋದಿ ಪುಂಗಿ ಊದಿದ್ದರು. ಈ ಯೋಜನೆಯಡಿಯಲ್ಲಿ ಸಾಲ ಪಡೆದವರಿಗೆ ಶೇ.3ರಿಂದ ಶೇ.5 ರಷ್ಟು ಬಡ್ಡಿ ರಿಯಾಯತಿ, ಮಹಿಳಾ ಉದ್ಯಮಿಗಳಿಂದ ಶೇ.3ರಷ್ಟು ಸರ್ಕಾರವೇ ಖರೀದಿಸುತ್ತದೆ. ಈ ಯೋಜನೆಗಾಗಿ 6,000ರೂ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ಈ ಯೋಜನೆಯ ಫಲಾನುಭವಿಯಾಗಲು ಪ್ರತ್ಯೇಕ ವೆಬ್‌ಪೇಜ್‌ಯಿದ್ದು www.psbloansin59minutes.com ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಒಬ್ಬ ವ್ಯಕ್ತಿ ಅಪ್ಲಿಕೇಷನ್ ಹಾಕಿದ್ದು 85 ಲಕ್ಷರೂಗಳ ಅಪ್ರೂವಲ್ ಕೂಡ ಪಡೆದು ವಿಜಯಾ ಬ್ಯಾಂಕಿನಲ್ಲಿ ಲೋನ್ ಕೇಳಲು ಹೋಗಿದ್ದಾರೆ. ಬ್ಯಾಂಕ್‌ನವರು ಹೇಳಿದ್ದು ಕೇಳಿ ಹೌಹಾರಿ ಹೋಗಿದ್ದಾರೆ. ಅಲ್ಲಿ ‘ನೀವೇ ಮೊದಲು 85 ಲಕ್ಷ ರೂ.ಗಳನ್ನು ಕಟ್ಟಬೇಕು. ಆನಂತರ ನಿಮಗೆ ಒಂದು ಕೋಟಿಯ ಲೋನ್ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಆ ವ್ಯಕ್ತಿ ಬ್ಯಾಂಕಿನವರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದ ಹೆಚ್‌ಡಬ್ಲ್ಯು ನ್ಯೂಸ್ ವರದಿಗಾರರು, ಇದರ ಅಸಲೀಯತ್ತೇನೆಂದು ತಿಳಿಯಲು ತಾವೇ ಒಬ್ಬರಿಂದ ಅಪ್ಲಿಕೇಶನ್ ಹಾಕಿಸಿದ್ದಾರೆ. ಈ ಅಪ್ಲಿಕೇಶನ್ ಮೋದಿ ಸಾಹೇಬರ 59 ನಿಮಿಷದ ಹಗರಣವನ್ನು ಬಯಲು ಮಾಡಿದೆ.

ಅಪ್ಲೇ ಮಾಡಿದ ವ್ಯಕ್ತಿಯಿಂದ ಪಾನ್ ನಂಬರ್, ಜಿಎಸ್‌ಟಿ ನಂಬರ್ ಅಷ್ಟೇ ಅಲ್ಲದೆ ಲಾಗಿನ್ ಐಡಿಯ ಪಾಸ್‌ರ‍್ಡ್ ಕೂಡ ಅಪ್ಲಿಕೇಷನ್‌ನಲ್ಲಿ ಪಡೆದುಕೊಂಡಿದ್ದಾರೆ. ಅಪ್ಲೇ ಮಾಡಿದ ಕೇವಲ 47 ನಿಮಿಷದಲ್ಲಿ ಲೋನ್‌ಗೆ 1,48,000ರೂ.ಗಳಿಗೆ ಅಪ್ರೂವಲ್ ಸಿಕ್ಕಿದೆ. ತಮಾಷೆಯೆಂದರೆ ಅಪ್ರುವಲ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ (ತಾತ್ವಿಕ ಒಪ್ಪಿಗೆ) ಎಂದು ನೀಡಲಾಗಿದ್ದು, ಸಾಲವನ್ನು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಬ ಬ್ಯಾಂಕಿನಿಂದ ಪಡೆಯಬೇಕು ಎಂದು ಬ್ಯಾಂಕಿನ ವಿವರಗಳನ್ನೂ ಸಹ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ ಈತ 1,180ರೂ ಗಳ ಡಿಡಿಯನ್ನು ಕ್ಯಾಪಿಟ ವರ್ಲ್ಡ್ ಪ್ಲಾಟ್‌ಫಾರ್ಮ ಪ್ರೈ. ಲಿ. ಎಂಬ ಖಾಸಗೀ ಕಂಪನಿಯ ಹೆಸರಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದರೆ ಸರ್ಕಾರಕ್ಕೆ ಡಿಡಿ ಕಟ್ಟುವುದು ಮಾಮೂಲಿ. ಆದರೆ ಈ ಸ್ಕೀಮ್‌ಗೆ ಮಾತ್ರ ಖಾಸಗಿ ಕಂಪನಿ ಹೆಸರಿನಲ್ಲಿ ಕಟ್ಟಬೇಕೆನ್ನುವುದೇ ಈ ಹಗರಣದ ಮೊದಲ ಹಂತ.

ಅಂದರೆ ಮೋದಿ ಸಾಹೇಬರು ಈ ಸ್ಕೀಮ್ ಮೂಲಕ ಖಾಸಗೀ ಕಂಪನಿಯ ಖಜಾನೆ ತುಂಬಿಸುವ ಪ್ಲಾನ್ ಮಾಡಿದ್ದಾರೆ ಎಂಬುದು ಕಣ್ಣೋಟಕ್ಕೆ ಕಾಣುವ ವಿಚಾರ. ಕೇವಲ ಒಂದು ಮಿಲಿಯನ್ ಅರ್ಜಿಗಳು ಬಂದರೂ 118 ಕೋಟಿ ರೂ.ಗಳು ಆ ಖಾಸಗಿ ಕಂಪೆನಿಗೆ ದಕ್ಕುತ್ತವೆ. ಪ್ರಧಾನಿ ಮೋದಿ ಈ ಸ್ಕೀಮ್ ಘೋಷಿಸಿದ ಮಾರನೆಯ ದಿನವೇ 23,582 ಕೋಟಿ ರೂ.ಗಳಷ್ಟು ಸಾಲ ನೀಡುವ 1.69 ಲಕ್ಷ ಅರ್ಜಿಗಳನ್ನು ಅಪ್ರೂವಲ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವೇನೆಂದರೆ ಅಲ್ಲಿಯವರೆಗೆ ಒಬ್ಬರಿಗೂ ಲೋನ್ ಹಣ ಸಿಕ್ಕಿರಲಿಲ್ಲ. ಈ ಲೆಕ್ಕವನ್ನು ಪ್ರಶ್ನಿಸಿದ ಕ್ಷಣಗಳಲ್ಲಿ ಮಾಹಿತಿಯನ್ನು ಅಳಿಸಿ ಹಾಕಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಅಂದಹಾಗೆ ರಫೇಲ್ ಹಗರಣದ ಮೂಲಕ ಅಂಬಾನಿಯ ಖಜಾನೆ ತುಂಬಿಸಹೊರಟಿದ್ದ ಮೋದಿ ಈ ಸ್ಕೀಮ್‌ಗೆ ಕೈಜೋಡಿಸಿದ್ದು ಇದೇ ಅಂಬಾನಿಯ ಆಪ್ತಮಿತ್ರ ಅಹಮದಾಬಾದ್ ವಿನೋದ್ ಮೋದ, ಜಿನಂದ್ ಶಾ ಮತ್ತು ಚಕ್ರಬೋಟ್ರಿ ಪಾಲುದಾರಿಕೆಯ ಕ್ಯಾಪಿಟಾ ವರ್ಲ್ಡ್ ಕಂಪನಿಯೊಂದಿಗೆ. ಈ ಕಂಪನಿ ಉದ್ಭವವಾಗಿದ್ದು ಮೋದಿ ಅಧಿಕಾರಕ್ಕೇರಿದ ಒಂದು ವರ್ಷದ ನಂತರ 2015ರಲ್ಲಿ. ಈ ಕಂಪನಿ ಆರಂಭಗೊಂಡ ಮೊದಲ ವರ್ಷ ಅಂದರೆ 2016ರಲ್ಲಿ ಇದರ ಆದಾಯ ಸೊನ್ನೆ ಮಾತ್ರ. ನಂತರ 2017ರಲ್ಲಿ 15.680 ರೂ. ಲಾಭ ಗಳಿಸಿತ್ತು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈ ಕಂಪನಿಯ ಶೇರ್‌ನಲ್ಲಿ ಎಸ್‌ಐಡಿಬಿಐ ಬ್ಯಾಂಕ್ ಸೇರಿದಂತೆ 9 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಂದು ಶೇರ್‌ಗೆ 119.39 ರೂ.ಗಳಂತೆ 17.43.371 ಶೇರ್‌ಗಳಿಗೆ 22.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.

ಇಷ್ಟೆಲ್ಲಾ ಹೂಡಿಕೆ ಮಾಡಿರುವ ಈ ಕಂಪನಿಯ ಲಾಭ 15.680 ಇದ್ದುದರಿಂದ ಮೋದಿ ಸಾಹೇಬರು ಈ ಕಂಪನಿಯನ್ನು ಮೇಲೆತ್ತುವ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಕಂಪನಿ ಆರಂಭಗೊಂಡು 3 ವರ್ಷವಾಗಿದ್ದು ಇದರ ಸಿಇಓಗಳು ಮೂರು ಭಾರಿ ಬದಲಾಗಿದ್ದರೆ. ಜಿನಾಬ್ ವೈ ಶಾ, ವಿಕಾಸ್ ಮನಿಲಾಲ್ ಷಾ, ಅಖಿಲ್ ಹಂಡಾ ಈ ಮೂವರೂ ಕ್ಯಾಪಿಟಾವರ್ಲ್ಡ್ನ ಸಿಇಓಗಳಾಗಿದ್ದು, ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರದ ಬ್ಯಾಟಿಂಗ್ ಮಾಡಿದ್ದರು ಎಂಬುದು ವಿಶೇಷ.

ಹಾಗಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದ ಸಿಇಓಗಳು, ಮಿತ್ರ ಅಂಬಾನಿಯ ಸ್ನೇಹಿತರ ಕಂಪನಿಯನ್ನು ಉಳಿಸುವ ಸಲುವಗಿ 59 ನಿಮಿಷದಲ್ಲಿ ಸಾಲ ಸೌಲಭ್ಯದ ಮೋದಿಯ ಸ್ಕೀಮ್‌ಗೆ ಲಕ್ಷಾಂತರ ಜನ ಅಪ್ಲಿಕೇಷನ್ ಹಾಕಿದ್ದು ತಲಾ 1.180ರೂ ಡಿಡಿಯಂತೆ ಬಿಲಿಯನ್‌ಗಟ್ಟಲೆ ಸಾರ್ವಜನಿಕರ ಹಣ ಕ್ಯಾಪಿಟಾವರ್ಲ್ಡ್ನ ಪಾಲಿಗೆ ದಯಪಾಲಿಸಿದೆ, ಅಷ್ಟೇ ಅಲ್ಲದೆ ಅಪ್ಲೇ ಮಾಡಿದವರ ವ್ಯವಹಾರದ ಎಲ್ಲಾ ಡಿಟೈಲ್ಸ್ಗಳನ್ನು ಈ ಕಂಪನಿ ಪಡೆದುಕೊಂಡಿದೆ. ಅಪ್ರುವಲ್‌ನಲ್ಲಿಯೇ ಇರುವಂತೆ ಅದು ತಾತ್ವಿಕ ಒಪ್ಪಿಗೆಯಾಗಿದ್ದು, ಸಾಲ ನೀಡಬಹುದೆಂದಷ್ಟೇ ಸೂಚಿಸಿದ್ದು ಸಾಲ ದೊರೆತೇಬಿಡುತ್ತದೆ ಎಂದೇನೂ ಇಲ್ಲವಾದ್ದರಿಂದ ಲೋನ್‌ನ ಆಸೆಯನ್ನು ಮರೆಯುವುದೇ ಸೂಕ್ತವೆಂಬಂತೆ ಪರೋಕ್ಷವಾಗಿ ಕಂಪನಿ ತಿಳಿಸಿದೆ. ಒಟ್ಟಿನಲ್ಲಿ ಇದುವರೆಗೂ ಸರ್ಕಾರದ ಹಣದಿಂದ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿದ್ದ ದಾರಿಗಿಂತ ಭಿನ್ನವಾಗಿ ನೇರವಾಗಿ ಸಾರ್ವಜನಿಕರ ಜೇಬಿನಿಂದ ಕಾರ್ಪೊರೇಟ್ ಖಜಾನೆ ತುಂಬಿಸಿರುವ ಮೊದಲ ಹಗರಣ ಪ್ರಧಾನ ಕಾರ್ಪೊರೇಟ್ ಸೇವಕ ಮೋದಿಯದ್ದು. ಮುದ್ರಾ, ಫಸಲ್ ಬಿಮಾ ಯೋಜನೆಗಳಿಂದ ಜನರನ್ನು ಯಾಮಾರಿಸಿದ್ದ ಮೋದಿ ಈ ಹಗರಣದಲ್ಲಿ ನೇರವಾಗಿ ಜನರ ಜೇಬಿಗೆ ಕತ್ತರಿಹಾಕಿ ಯಾಮಾರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....