Homeರಾಜಕೀಯ56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

56 ಇಂಚು ಎದೆ ಮಾಡಿದ 59 ನಿಮಿಷದ ಹಗರಣ

- Advertisement -
- Advertisement -

ಸೋಮಶೇಖರ್ ಚಲ್ಯ |

ಭಾರತದ ಪ್ರಧಾನ ಸೇವಕ ನರೇಂದ್ರ ಮೋದಿಯವರು ಸಾಮಾನ್ಯರ ಸೇವೆಯನ್ನು ಬದಿಗಿಟ್ಟು ಕಾರ್ಪೊರೇಟ್ ಖದೀಮರ ಸೇವೆಯಲ್ಲಿ ನಿರತರಾಗಿದ್ದಾರೆಂಬ ಆರೋಪಕ್ಕೆ ಕಾರಣಗಳಿದ್ದವು. ಆದರೆ ನಿರ್ದಿಷ್ಟ ಹಗರಣಗಳಾಗಿ ಹೊರಬಿದ್ದಿರಲಿಲ್ಲ. ಆದರೆ ಅವು ಈಗ ವಾರಕ್ಕೊಂದರಂತೆ ಎಕ್ಸ್ಪೋಸ್ ಆಗುತ್ತಿವೆ. ಮೋದಿಯವರ ಹಗರಣ ಖಾತೆಗಳಲ್ಲಿರುವ ರಫೇಲ್ ಹಗರಣ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ ಹಗರಣಗಳಂತಹವುಗಳ ಜೊತೆಗೆ ಹೊಸದೊಂದು ಹಗರಣ ಸೇರ್ಪಡೆಯಾಗಿದೆ. ಅದೂ ನಿಮಿಷದ ಲೆಕ್ಕದ್ದು.

ಕೆಲವು ಕಂಪನಿಗಳು ವಿಶೇಷ ಆಫರ್‌ಗಳ ಸ್ಕ್ರಾಚ್‌ ಕಾರ್ಡ್ಗಳನ್ನು ನೀಡುತ್ತವೆ. ಸ್ಕ್ರಾಚ್ ಮಾಡಿ ನೋಡಿದರೆ, ಕೆಲವು ಕಾರ್ಡ್ಗಳಲ್ಲಿ ಬೆಟರ್ ಲಕ್ ನೆಕ್ಸ್ಟ್ ಟೈಮ್ ಎಂದಿರುತ್ತವೆ. ಇದೂ ಸಹಾ ಅಂತಹದೊಂದು ‘ಭರ್ಜರಿ ಆಫರ್’. ಮೋದಿ ಸಾಹೇಬರು ಪ್ರಜೆಗಳಿಗೆ ನವೆಂಬರ್ 2ರಂದು ದೀಪಾವಳಿಯ ಭರ್ಜರಿ ಆಫರ್ ಘೋಷಿಸಿದ್ದಾರೆಂದು ಕೆಲವು ಮಾಧ್ಯಮಗಳು ತಮ್ಮ ಸ್ವಾಮಿನಿಷ್ಟೆಯನ್ನು ಪ್ರದರ್ಶಿಸಿದ್ದವು. ಆದರೆ ಅದೀಗ ಜನರ ಪಾಲಿಗೆ ದೀಪಾವಳಿಯ ಟುಸ್ ಪಟಾಕಿಯಾದಂತಿದ್ದರೂ ಕಾರ್ಪೊರೇಟ್‌ಗಳ ಖಾತೆ ತುಂಬಿ ತುಳುಕುವಂತಾಗಿದೆ.

‘ಕೇಂದ್ರ ಸರ್ಕಾರ ಕೈಗೊಂಡಿರುವ 12 ಪ್ರಮುಖ ಯೋಜನೆಗಳು ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್‌ಎಂಇ)ಗಳಿಗೆ ವರದಾನವಾಗಲಿದೆ. ಅದರಲ್ಲಿ ಪ್ರಮುಖವಾದದ್ದು 59 ನಿಮಿಷದಲ್ಲಿ ಒಂದು ಕೋಟಿಯವರೆಗಿನ ಲೋನ್ ಮೇಳದ ಸೌಲಭ್ಯ’ ಎಂದು ಮೋದಿ ಪುಂಗಿ ಊದಿದ್ದರು. ಈ ಯೋಜನೆಯಡಿಯಲ್ಲಿ ಸಾಲ ಪಡೆದವರಿಗೆ ಶೇ.3ರಿಂದ ಶೇ.5 ರಷ್ಟು ಬಡ್ಡಿ ರಿಯಾಯತಿ, ಮಹಿಳಾ ಉದ್ಯಮಿಗಳಿಂದ ಶೇ.3ರಷ್ಟು ಸರ್ಕಾರವೇ ಖರೀದಿಸುತ್ತದೆ. ಈ ಯೋಜನೆಗಾಗಿ 6,000ರೂ ಕೋಟಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಹೇಳಿಕೊಂಡಿದ್ದರು.

ಈ ಯೋಜನೆಯ ಫಲಾನುಭವಿಯಾಗಲು ಪ್ರತ್ಯೇಕ ವೆಬ್‌ಪೇಜ್‌ಯಿದ್ದು www.psbloansin59minutes.com ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿತ್ತು. ಈ ಸೂಚನೆಯಂತೆ ಒಬ್ಬ ವ್ಯಕ್ತಿ ಅಪ್ಲಿಕೇಷನ್ ಹಾಕಿದ್ದು 85 ಲಕ್ಷರೂಗಳ ಅಪ್ರೂವಲ್ ಕೂಡ ಪಡೆದು ವಿಜಯಾ ಬ್ಯಾಂಕಿನಲ್ಲಿ ಲೋನ್ ಕೇಳಲು ಹೋಗಿದ್ದಾರೆ. ಬ್ಯಾಂಕ್‌ನವರು ಹೇಳಿದ್ದು ಕೇಳಿ ಹೌಹಾರಿ ಹೋಗಿದ್ದಾರೆ. ಅಲ್ಲಿ ‘ನೀವೇ ಮೊದಲು 85 ಲಕ್ಷ ರೂ.ಗಳನ್ನು ಕಟ್ಟಬೇಕು. ಆನಂತರ ನಿಮಗೆ ಒಂದು ಕೋಟಿಯ ಲೋನ್ ಕೊಡುತ್ತೇವೆ’ ಎಂದು ಹೇಳಿದ್ದಾರೆ. ಆ ವ್ಯಕ್ತಿ ಬ್ಯಾಂಕಿನವರೊಂದಿಗೆ ಜಗಳ ಮಾಡಿಕೊಂಡು ಬಂದಿದ್ದಾರೆ. ಈ ವಿಚಾರ ತಿಳಿದ ಹೆಚ್‌ಡಬ್ಲ್ಯು ನ್ಯೂಸ್ ವರದಿಗಾರರು, ಇದರ ಅಸಲೀಯತ್ತೇನೆಂದು ತಿಳಿಯಲು ತಾವೇ ಒಬ್ಬರಿಂದ ಅಪ್ಲಿಕೇಶನ್ ಹಾಕಿಸಿದ್ದಾರೆ. ಈ ಅಪ್ಲಿಕೇಶನ್ ಮೋದಿ ಸಾಹೇಬರ 59 ನಿಮಿಷದ ಹಗರಣವನ್ನು ಬಯಲು ಮಾಡಿದೆ.

ಅಪ್ಲೇ ಮಾಡಿದ ವ್ಯಕ್ತಿಯಿಂದ ಪಾನ್ ನಂಬರ್, ಜಿಎಸ್‌ಟಿ ನಂಬರ್ ಅಷ್ಟೇ ಅಲ್ಲದೆ ಲಾಗಿನ್ ಐಡಿಯ ಪಾಸ್‌ರ‍್ಡ್ ಕೂಡ ಅಪ್ಲಿಕೇಷನ್‌ನಲ್ಲಿ ಪಡೆದುಕೊಂಡಿದ್ದಾರೆ. ಅಪ್ಲೇ ಮಾಡಿದ ಕೇವಲ 47 ನಿಮಿಷದಲ್ಲಿ ಲೋನ್‌ಗೆ 1,48,000ರೂ.ಗಳಿಗೆ ಅಪ್ರೂವಲ್ ಸಿಕ್ಕಿದೆ. ತಮಾಷೆಯೆಂದರೆ ಅಪ್ರುವಲ್‌ನಲ್ಲಿ ಇನ್ ಪ್ರಿನ್ಸಿಪಲ್ ಅಪ್ರೂವಲ್ (ತಾತ್ವಿಕ ಒಪ್ಪಿಗೆ) ಎಂದು ನೀಡಲಾಗಿದ್ದು, ಸಾಲವನ್ನು ಒರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಎಂಬ ಬ್ಯಾಂಕಿನಿಂದ ಪಡೆಯಬೇಕು ಎಂದು ಬ್ಯಾಂಕಿನ ವಿವರಗಳನ್ನೂ ಸಹ ಸೂಚಿಸಲಾಗಿತ್ತು. ಅಷ್ಟೇ ಅಲ್ಲದೆ ಈತ 1,180ರೂ ಗಳ ಡಿಡಿಯನ್ನು ಕ್ಯಾಪಿಟ ವರ್ಲ್ಡ್ ಪ್ಲಾಟ್‌ಫಾರ್ಮ ಪ್ರೈ. ಲಿ. ಎಂಬ ಖಾಸಗೀ ಕಂಪನಿಯ ಹೆಸರಿಗೆ ಕಟ್ಟಬೇಕೆಂದು ಸೂಚಿಸಲಾಗಿತ್ತು. ಸಾಮಾನ್ಯವಾಗಿ ಸರ್ಕಾರಿ ಸೌಲಭ್ಯಗಳನ್ನು ಪಡೆದರೆ ಸರ್ಕಾರಕ್ಕೆ ಡಿಡಿ ಕಟ್ಟುವುದು ಮಾಮೂಲಿ. ಆದರೆ ಈ ಸ್ಕೀಮ್‌ಗೆ ಮಾತ್ರ ಖಾಸಗಿ ಕಂಪನಿ ಹೆಸರಿನಲ್ಲಿ ಕಟ್ಟಬೇಕೆನ್ನುವುದೇ ಈ ಹಗರಣದ ಮೊದಲ ಹಂತ.

ಅಂದರೆ ಮೋದಿ ಸಾಹೇಬರು ಈ ಸ್ಕೀಮ್ ಮೂಲಕ ಖಾಸಗೀ ಕಂಪನಿಯ ಖಜಾನೆ ತುಂಬಿಸುವ ಪ್ಲಾನ್ ಮಾಡಿದ್ದಾರೆ ಎಂಬುದು ಕಣ್ಣೋಟಕ್ಕೆ ಕಾಣುವ ವಿಚಾರ. ಕೇವಲ ಒಂದು ಮಿಲಿಯನ್ ಅರ್ಜಿಗಳು ಬಂದರೂ 118 ಕೋಟಿ ರೂ.ಗಳು ಆ ಖಾಸಗಿ ಕಂಪೆನಿಗೆ ದಕ್ಕುತ್ತವೆ. ಪ್ರಧಾನಿ ಮೋದಿ ಈ ಸ್ಕೀಮ್ ಘೋಷಿಸಿದ ಮಾರನೆಯ ದಿನವೇ 23,582 ಕೋಟಿ ರೂ.ಗಳಷ್ಟು ಸಾಲ ನೀಡುವ 1.69 ಲಕ್ಷ ಅರ್ಜಿಗಳನ್ನು ಅಪ್ರೂವಲ್ ಮಾಡಲಾಗಿದೆ ಎಂದು ಘೋಷಿಸಲಾಗಿತ್ತು. ವಾಸ್ತವವೇನೆಂದರೆ ಅಲ್ಲಿಯವರೆಗೆ ಒಬ್ಬರಿಗೂ ಲೋನ್ ಹಣ ಸಿಕ್ಕಿರಲಿಲ್ಲ. ಈ ಲೆಕ್ಕವನ್ನು ಪ್ರಶ್ನಿಸಿದ ಕ್ಷಣಗಳಲ್ಲಿ ಮಾಹಿತಿಯನ್ನು ಅಳಿಸಿ ಹಾಕಿದ್ದು ಮತ್ತಷ್ಟು ಅನುಮಾನಗಳನ್ನು ಹುಟ್ಟು ಹಾಕಿತ್ತು.

ಅಂದಹಾಗೆ ರಫೇಲ್ ಹಗರಣದ ಮೂಲಕ ಅಂಬಾನಿಯ ಖಜಾನೆ ತುಂಬಿಸಹೊರಟಿದ್ದ ಮೋದಿ ಈ ಸ್ಕೀಮ್‌ಗೆ ಕೈಜೋಡಿಸಿದ್ದು ಇದೇ ಅಂಬಾನಿಯ ಆಪ್ತಮಿತ್ರ ಅಹಮದಾಬಾದ್ ವಿನೋದ್ ಮೋದ, ಜಿನಂದ್ ಶಾ ಮತ್ತು ಚಕ್ರಬೋಟ್ರಿ ಪಾಲುದಾರಿಕೆಯ ಕ್ಯಾಪಿಟಾ ವರ್ಲ್ಡ್ ಕಂಪನಿಯೊಂದಿಗೆ. ಈ ಕಂಪನಿ ಉದ್ಭವವಾಗಿದ್ದು ಮೋದಿ ಅಧಿಕಾರಕ್ಕೇರಿದ ಒಂದು ವರ್ಷದ ನಂತರ 2015ರಲ್ಲಿ. ಈ ಕಂಪನಿ ಆರಂಭಗೊಂಡ ಮೊದಲ ವರ್ಷ ಅಂದರೆ 2016ರಲ್ಲಿ ಇದರ ಆದಾಯ ಸೊನ್ನೆ ಮಾತ್ರ. ನಂತರ 2017ರಲ್ಲಿ 15.680 ರೂ. ಲಾಭ ಗಳಿಸಿತ್ತು. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಈ ಕಂಪನಿಯ ಶೇರ್‌ನಲ್ಲಿ ಎಸ್‌ಐಡಿಬಿಐ ಬ್ಯಾಂಕ್ ಸೇರಿದಂತೆ 9 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಒಂದು ಶೇರ್‌ಗೆ 119.39 ರೂ.ಗಳಂತೆ 17.43.371 ಶೇರ್‌ಗಳಿಗೆ 22.5 ಕೋಟಿ ರೂ.ಗಳನ್ನು ಹೂಡಿಕೆ ಮಾಡಿವೆ.

ಇಷ್ಟೆಲ್ಲಾ ಹೂಡಿಕೆ ಮಾಡಿರುವ ಈ ಕಂಪನಿಯ ಲಾಭ 15.680 ಇದ್ದುದರಿಂದ ಮೋದಿ ಸಾಹೇಬರು ಈ ಕಂಪನಿಯನ್ನು ಮೇಲೆತ್ತುವ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಇನ್ನೊಂದು ವಿಚಾರವೆಂದರೆ ಈ ಕಂಪನಿ ಆರಂಭಗೊಂಡು 3 ವರ್ಷವಾಗಿದ್ದು ಇದರ ಸಿಇಓಗಳು ಮೂರು ಭಾರಿ ಬದಲಾಗಿದ್ದರೆ. ಜಿನಾಬ್ ವೈ ಶಾ, ವಿಕಾಸ್ ಮನಿಲಾಲ್ ಷಾ, ಅಖಿಲ್ ಹಂಡಾ ಈ ಮೂವರೂ ಕ್ಯಾಪಿಟಾವರ್ಲ್ಡ್ನ ಸಿಇಓಗಳಾಗಿದ್ದು, ಇವರು 2014ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಪರ ಪ್ರಚಾರದ ಬ್ಯಾಟಿಂಗ್ ಮಾಡಿದ್ದರು ಎಂಬುದು ವಿಶೇಷ.

ಹಾಗಾಗಿ ಮೋದಿ ಪರ ಬ್ಯಾಟಿಂಗ್ ಮಾಡಿದ್ದ ಸಿಇಓಗಳು, ಮಿತ್ರ ಅಂಬಾನಿಯ ಸ್ನೇಹಿತರ ಕಂಪನಿಯನ್ನು ಉಳಿಸುವ ಸಲುವಗಿ 59 ನಿಮಿಷದಲ್ಲಿ ಸಾಲ ಸೌಲಭ್ಯದ ಮೋದಿಯ ಸ್ಕೀಮ್‌ಗೆ ಲಕ್ಷಾಂತರ ಜನ ಅಪ್ಲಿಕೇಷನ್ ಹಾಕಿದ್ದು ತಲಾ 1.180ರೂ ಡಿಡಿಯಂತೆ ಬಿಲಿಯನ್‌ಗಟ್ಟಲೆ ಸಾರ್ವಜನಿಕರ ಹಣ ಕ್ಯಾಪಿಟಾವರ್ಲ್ಡ್ನ ಪಾಲಿಗೆ ದಯಪಾಲಿಸಿದೆ, ಅಷ್ಟೇ ಅಲ್ಲದೆ ಅಪ್ಲೇ ಮಾಡಿದವರ ವ್ಯವಹಾರದ ಎಲ್ಲಾ ಡಿಟೈಲ್ಸ್ಗಳನ್ನು ಈ ಕಂಪನಿ ಪಡೆದುಕೊಂಡಿದೆ. ಅಪ್ರುವಲ್‌ನಲ್ಲಿಯೇ ಇರುವಂತೆ ಅದು ತಾತ್ವಿಕ ಒಪ್ಪಿಗೆಯಾಗಿದ್ದು, ಸಾಲ ನೀಡಬಹುದೆಂದಷ್ಟೇ ಸೂಚಿಸಿದ್ದು ಸಾಲ ದೊರೆತೇಬಿಡುತ್ತದೆ ಎಂದೇನೂ ಇಲ್ಲವಾದ್ದರಿಂದ ಲೋನ್‌ನ ಆಸೆಯನ್ನು ಮರೆಯುವುದೇ ಸೂಕ್ತವೆಂಬಂತೆ ಪರೋಕ್ಷವಾಗಿ ಕಂಪನಿ ತಿಳಿಸಿದೆ. ಒಟ್ಟಿನಲ್ಲಿ ಇದುವರೆಗೂ ಸರ್ಕಾರದ ಹಣದಿಂದ ಕಾರ್ಪೊರೇಟ್‌ಗಳನ್ನು ಬೆಳೆಸುತ್ತಿದ್ದ ದಾರಿಗಿಂತ ಭಿನ್ನವಾಗಿ ನೇರವಾಗಿ ಸಾರ್ವಜನಿಕರ ಜೇಬಿನಿಂದ ಕಾರ್ಪೊರೇಟ್ ಖಜಾನೆ ತುಂಬಿಸಿರುವ ಮೊದಲ ಹಗರಣ ಪ್ರಧಾನ ಕಾರ್ಪೊರೇಟ್ ಸೇವಕ ಮೋದಿಯದ್ದು. ಮುದ್ರಾ, ಫಸಲ್ ಬಿಮಾ ಯೋಜನೆಗಳಿಂದ ಜನರನ್ನು ಯಾಮಾರಿಸಿದ್ದ ಮೋದಿ ಈ ಹಗರಣದಲ್ಲಿ ನೇರವಾಗಿ ಜನರ ಜೇಬಿಗೆ ಕತ್ತರಿಹಾಕಿ ಯಾಮಾರಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...