Homeಮುಖಪುಟತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

ತಮಿಳುನಾಡಿನಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿ ಗೆದ್ದ 60 ನೂತನ ಶಾಸಕರು

- Advertisement -
- Advertisement -

ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ “ದ್ವಿಪಕ್ಷೀಯ” ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಪ್ರವೇಶದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿದೆ. 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷದ ಓಟ್ ಶೇರ್ ಸುಮಾರು 35% (ನಿಖರವಾಗಿ 34.92%) ಮತಗಳನ್ನು ಗಳಿಸಿದೆ.

ಟಿವಿಕೆ ಪಕ್ಷವು ಮತಗಳ ಪ್ರಮಾಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯ ಎರಡೂ ಪಕ್ಷವನ್ನು ಹಿಂದಿಕ್ಕಿದೆ

ಪಕ್ಷ / ಮೈತ್ರಿಕೂಟಗೆದ್ದ ಸ್ಥಾನಗಳುಓಟ್ ಪರ್ಸಂಟೇಜ್ (ಅಂದಾಜು)
TVK (ತಮಿಳಗ ವೆಟ್ರಿ ಕಳಗಂ)10834.92%
DMK+ (ಡಿಎಂಕೆ ಮೈತ್ರಿ)7331.39%
AIADMK+ (ಎಐಎಡಿಎಂಕೆ ಮೈತ್ರಿ)5327.22%
ಇತರರು (NTK, BJP, ಇತ್ಯಾದಿ)0ಉಳಿದ 6-7%

ಕೇವಲ ಎರಡು ವರ್ಷಗಳ ಹಿಂದೆ ಒಂದು ರಾಜಕೀಯ ಪಕ್ಷಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯವೊಂದರ ಅಧಿಕಾರ ಹಿಡಿಯುವುದು ಮಾತಿನಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಸಲೀಸು ಅಲ್ಲ. ಆದರೆ ತಮಿಳುನಾಡಿನಲ್ಲಿ ಅಂತಹದೊಂದು ಅಚ್ಚರಿ ಫಲಿತಾಂಶ ಹೊರಬಿದಿದ್ದು 2026ರ ವಿಧಾನಸಭಾ ಚುನಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಪರ್ಧಿಸಿದ್ದ 234 ಸ್ಥಾನಗಳ ಪೈಕಿ 108 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವತ್ತ ಹೆಜ್ಜೆ ಇಟ್ಟಿದೆ.

ಈ ಚುನಾವಣೆ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ಹೊಸ ಇತಿಹಾಸ ಬರೆದ 60 ‘ನೂತನ’ ಶಾಸಕರು!

ಈ ಚುನಾವಣೆಯ ಅತ್ಯಂತ ಸ್ವಾರಸ್ಯಕರ ಸಂಗತಿಯೆಂದರೆ, ಟಿವಿಕೆಯಿಂದ ಗೆದ್ದ 108 ಶಾಸಕರಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಸಂಪೂರ್ಣವಾಗಿ ಹೊಸ ಮುಖಗಳು. ಇವರು ಈ ಹಿಂದೆ ಯಾವುದೇ ಪಕ್ಷದಿಂದ ಚುನಾವಣೆಗೆ ನಿಂತು ಗೆಲುವು ಅಥವಾ ಸೋಲು ಕಂಡವರಲ್ಲ. ಎಂಬುದು ವಿಶೇಷ.

ಒಟ್ಟು ಸ್ಪರ್ಧಿಸಿದ ಸ್ಥಾನಗಳು: 234.

ಗೆದ್ದ ಸ್ಥಾನಗಳು: 108.

ಬಹುಮತಕ್ಕೆ ಕೊರತೆ: 10 ಸ್ಥಾನಗಳು (ಬಹುಮತದ ಗಡಿ 118)

ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ಭಾರತೀಯ ರಾಜಕಾರಣದ ಇತಿಹಾಸದಲ್ಲೇ ಒಂದು ಸಂಚಲನ ಮೂಡಿಸಿದೆ. ಮೊದಲ ಬಾರಿ ಕಣಕ್ಕಿಳಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಎಲ್ಲರ ಹುಬ್ಬೇರಿಸಿದೆ. ಈ ಪಟ್ಟಿಯಲ್ಲಿರುವ ಬಹುತೇಕರು ರಾಜಕೀಯಕ್ಕೆ ತೀರಾ ಹೊಸಬರು ಅಥವಾ ಈ ಹಿಂದೆ ಯಾವುದೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳದವರು. ಅದರ ಕೆಲವು ವಿಶೇಷ ಜಲಕ್‌ಗಳು ಕೆಳಗಿನಂತಿವೆ.

ಕ್ರ.ಸಂಕ್ಷೇತ್ರಚುನಾಯಿತ ಶಾಸಕರು (TVK)ಸಾಮಾಜಿಕ / ಜಾತಿ ಹಿನ್ನೆಲೆ
1ಪೆರಂಬೂರ್ಸಿ. ಜೋಸೆಫ್ ವಿಜಯ್ (ವಿಜಯ್)ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ)
2ತಿರುಚಿರಾಪಳ್ಳಿ ಈಸ್ಟ್ಸಿ. ಜೋಸೆಫ್ ವಿಜಯ್ (ವಿಜಯ್)ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ)
3ವಿಲ್ಲಿವಾಕ್ಕಂಆದವ್ ಅರ್ಜುನಎಂಬಿಸಿ (ಅತಿ ಹಿಂದುಳಿದ ವರ್ಗ)
4ಕೌಂಡಂಪಾಳಯಂಕನಿಮೊಳಿ ಸಂತೋಷ್ಕೌಂಡರ್ (ಒಬಿಸಿ)
5ತಿರುವಳ್ಳಿಕೇಣಿಎಂ. ಆರ್. ಪಲ್ಲವಿಪರಿಶಿಷ್ಟ ಜಾತಿ (SC)
6ರಾಯಪುರಂಕೆ. ವಿ. ವಿಜಯ್ ದಾಮುಎಂಬಿಸಿ (ಮೀನುಗಾರ ಸಮುದಾಯ)
7ತಿರುವಳ್ಳೂರುಡಾ. ಟಿ. ಅರುಣ್‌ಕುಮಾರ್ಹಿಂದುಳಿದ ವರ್ಗ (BC)
8ಈರೋಡ್ ಈಸ್ಟ್ಎಂ. ವಿಜಯ್ ಬಾಲಾಜಿಹಿಂದುಳಿದ ವರ್ಗ (BC)
9ಮಧುರೈ ನಾರ್ತ್ಎ. ಕಲ್ಲನೈಹಿಂದುಳಿದ ವರ್ಗ (BC)
10ಮಧುರೈ ಸೆಂಟ್ರಲ್ಮಧರ್ ಬಧುರುದ್ದೀನ್ಅಲ್ಪಸಂಖ್ಯಾತ (ಮುಸ್ಲಿಂ)
11ತಿರುಪತ್ತೂರುಸೀನಿವಾಸ ಸೇತುಪತಿ ಆರ್.ತೇವರ್ / ಮುಕ್ಕುಲತೋರ್ (OBC)
12ಶೋಲಿಂಗನಲ್ಲೂರುಇ.ಸಿ.ಆರ್. ಪಿ. ಶರವಣನ್ಹಿಂದುಳಿದ ವರ್ಗ (BC)
13ಸೇಲಂ ನಾರ್ತ್ಕೆ. ಶಿವಕುಮಾರ್ಹಿಂದುಳಿದ ವರ್ಗ (BC)
14ಪಲ್ಲವರಂಜೆ. ಕಾಮಾಚಿಹಿಂದುಳಿದ ವರ್ಗ (BC)
15ವೇಲೂರುಎಂ. ಎಂ. ವಿನೋದ್ ಕಣ್ಣನ್ಎಂಬಿಸಿ (ಅತಿ ಹಿಂದುಳಿದ ವರ್ಗ)
16ಮಧವರಂಎಂ. ಎಲ್. ವಿಜಯ್ ಪ್ರಭುಹಿಂದುಳಿದ ವರ್ಗ (BC)
17ಅಣ್ಣಾ ನಗರವಿ. ಕೆ. ರಾಮಕುಮಾರ್ಹಿಂದುಳಿದ ವರ್ಗ (BC)
18ಮೈಲಾಪುರಂವೆಂಕಟರಮಣನ್ ಪಿ.ಬ್ರಾಹ್ಮಣ (ಸಾಮಾನ್ಯ ವರ್ಗ)
19ಶ್ರೀವೈಕುಂಠಂಶರವಣನ್ ಜಿ.ತೇವರ್ / ಮುಕ್ಕುಲತೋರ್ (OBC)
20ತಂಜಾವೂರುಆರ್. ವಿಜಯಶರವಣನ್ಹಿಂದುಳಿದ ವರ್ಗ (BC)
21ಶಿವಗಂಗಾಕುಳಂದೈ ರಾಣಿ ಎ.ಪರಿಶಿಷ್ಟ ಜಾತಿ (SC)
22ಈರೋಡ್ ವೆಸ್ಟ್ಅನಂತ್ ಮೋಹನ್ ಕೆ.ಕೆ.ಕೌಂಡರ್ (OBC)
23ಕಡಲೂರುಬಿ. ರಾಜಕುಮಾರ್ಎಂಬಿಸಿ (ವನ್ನಿಯರ್)
24ಕುಂಭಕೋಣಂವಿನೋದ್ಹಿಂದುಳಿದ ವರ್ಗ (BC)
25ಅಂಬತ್ತೂರುಬಾಲಮುರುಗನ್ ಜಿ.ಹಿಂದುಳಿದ ವರ್ಗ (BC)
26ಮಧುರವಾಯಲ್ರೇವಂತ್ ಚರಣ್ಹಿಂದುಳಿದ ವರ್ಗ (BC)
27ಆವಡಿಆರ್. ರಮೇಶ್ ಕುಮಾರ್ಹಿಂದುಳಿದ ವರ್ಗ (BC)
28ಪೂನಮಲ್ಲಿಪ್ರಕಾಶಂ ಆರ್.ಪರಿಶಿಷ್ಟ ಜಾತಿ (SC)
29ಗುಮ್ಮಿಡಿಪೂಂಡಿಎಸ್. ವಿಜಯಕುಮಾರ್ಎಂಬಿಸಿ (ವನ್ನಿಯರ್)
30ಪೊನ್ನೇರಿರವಿ ಎಂ. ಎಸ್.ಪರಿಶಿಷ್ಟ ಜಾತಿ (SC)
31ಸೈದಾಪೇಟೆಅರುಳ್ ಪ್ರಕಾಶಂ ಎಂ.ಹಿಂದುಳಿದ ವರ್ಗ (BC)
32ಟಿ. ನಗರಆನಂದ್ ಎನ್.ಹಿಂದುಳಿದ ವರ್ಗ (BC)
33ವೇಲಚೇರಿಕುಮಾರ್ ಆರ್.ಹಿಂದುಳಿದ ವರ್ಗ (BC)
34ಆಲಂದೂರುಎಂ. ಹರೀಶ್ಹಿಂದುಳಿದ ವರ್ಗ (BC)
35ತಾಂಬರಂಡಿ. ಶರತ್ ಕುಮಾರ್ಹಿಂದುಳಿದ ವರ್ಗ (BC)
36ಶ್ರೀಪೆರಂಬದೂರುತೇನರಸು ಕೆ.ಪರಿಶಿಷ್ಟ ಜಾತಿ (SC)
37ಕಾಂಚೀಪುರಂಆರ್. ವಿ. ರಂಜಿತ್ ಕುಮಾರ್ಸೇಂಗುಂತರ್ ಮೊದಲಿಯಾರ್ (BC)
38ಅರಕ್ಕೋಣಂವಿ. ಗಾಂಧಿರಾಜ್ಪರಿಶಿಷ್ಟ ಜಾತಿ (SC)
39ಶೋಲಿಂಗೂರುಜಿ. ಕಪಿಲ್ಹಿಂದುಳಿದ ವರ್ಗ (BC)
40ರಾಣಿಪೇಟೆತಾಹಿರಾಅಲ್ಪಸಂಖ್ಯಾತ (ಮುಸ್ಲಿಂ)
41ಕೃಷ್ಣಗಿರಿಮುಕುಂದನ್ ಪಿ.ಹಿಂದುಳಿದ ವರ್ಗ (BC)
42ಪೆನ್ನಾಗರಂಗಜೇಂದ್ರನ್ ಎಸ್.ಎಂಬಿಸಿ (ವನ್ನಿಯರ್)
43ಸೇಲಂ ಸೌತ್ವಿಜಯ್ ತಮಿಳನ್ ಪಾರ್ಥಿಬನ್ ಎ.ಹಿಂದುಳಿದ ವರ್ಗ (BC)
44ನಾಮಕ್ಕಲ್ದಿಲೀಪ್ ಸಿ. ಎಸ್.ಹಿಂದುಳಿದ ವರ್ಗ (BC)
45ತಿರುಚೆಂಗೋಡುಅರುಣ್‌ರಾಜ್ ಕೆ. ಜಿ.ಕೌಂಡರ್ (OBC)
46ಭವಾನಿಸಾಗರವಿ. ಪಿ. ತಮಿಳ್ ಸೆಲ್ವಿಪರಿಶಿಷ್ಟ ಜಾತಿ (SC)
47ತಿರುಪ್ಪೂರು ನಾರ್ತ್ವಿ. ಸತ್ಯಭಾಮಾಕೌಂಡರ್ (OBC)
48ಕೊಯಮತ್ತೂರು ನಾರ್ತ್ವಿ. ಸಂಪತ್ ಕುಮಾರ್ಹಿಂದುಳಿದ ವರ್ಗ (BC)
49ಸಿಂಗನಲ್ಲೂರುಕೆ. ಎಸ್. ಶ್ರೀಗಿರಿ ಪ್ರಸಾದ್ಹಿಂದುಳಿದ ವರ್ಗ (BC)
50ಕಿಣತುಕ್ಕಡವುವಿಘ್ನೇಶ್ ಕೆ.ಕೌಂಡರ್ (OBC)
51ಮಣಪ್ಪಾರೈಆರ್. ಕದಿರವನ್ಹಿಂದುಳಿದ ವರ್ಗ (BC)
52ಮುಸಿರಿಎಂ. ವಿಘ್ನೇಶ್ಹಿಂದುಳಿದ ವರ್ಗ (BC)
53ಕಾರೈಕುಡಿಡಾ. ಪ್ರಭು ಟಿ. ಕೆ.ಹಿಂದುಳಿದ ವರ್ಗ (BC)
54ಮಧುರೈ ಸೌತ್ಎಂ. ಎಂ. ಗೋಪಿಸನ್ಸೌರಾಷ್ಟ್ರ (ಭಾಷಾ ಅಲ್ಪಸಂಖ್ಯಾತ)
55ಮಧುರೈ ವೆಸ್ಟ್ತಂಗಪಾಂಡಿ ಎಸ್. ಆರ್.ಹಿಂದುಳಿದ ವರ್ಗ (BC)
56ಪೆರಿಯಕುಲಂಶಬರಿ ಅಯ್ಯಂಗಾರನ್ ಜಿ.ಪರಿಶಿಷ್ಟ ಜಾತಿ (SC)
57ಶಿವಕಾಶಿಕೀರ್ತನಾ ಎಸ್.ಹಿಂದುಳಿದ ವರ್ಗ (BC)
58ವಿರುದುನಗರಸೆಲ್ವಂ ಪಿ.ಪರಿಶಿಷ್ಟ ಜಾತಿ (ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು)
59ತೂತುಕುಡಿಶ್ರೀನಾಥ್ನಾಡಾರ್ (BC)
60ರಾಧಾಪುರಂಡಾ. ಸತೀಶ್ ಕ್ರಿಸ್ಟೋಫರ್ನಾಡಾರ್ (BC)

ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು

ಟಿವಿಕೆ (TVK) ಪಕ್ಷದ ನಾಯಕ ಜೋಸೆಫ್ ವಿಜಯ್ ಅವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಒಂದು ಪೆರಂಬೂರ್ (Perambur) ಮತ್ತೊಂದು ತಿರುಚಿರಾಪಳ್ಳಿ ಪೂರ್ವ ಈ ಎರಡೂ ಕ್ಷೇತ್ರಗಳಲ್ಲಿ ವಿಜಯ್ ದೊಡ್ಡ ಅಂತರದ ಗೆಲುವು ಸಾಧಿಸಿದ್ದಾರೆ.

ಒಂದು ಮತದ ಅಂತರದಲ್ಲಿ ಗೆದ್ದ TVK ಶಾಸಕ

ಶಿವಗಂಗಾ ಜಿಲ್ಲೆಯ ತಿರುಪತ್ತೂರು (Tirupattur) ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಸೀನಿವಾಸ ಸೇತುಪತಿ ಆರ್. ಅವರು ಕೇವಲ ಒಂದು ಮತದ ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.ಸೀನಿವಾಸ ಸೇತುಪತಿ ಅವರು 83,375 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಡಿಎಂಕೆ (DMK) ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು 83,374 ಮತಗಳನ್ನು ಪಡೆದರು.

ಮತ ಎಣಿಕೆಯ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಸೇತುಪತಿ ಅವರು, ಅಂಚೆ ಮತಗಳ (Postal Ballots) ಎಣಿಕೆಯ ನಂತರ ಕೇವಲ ಒಂದು ಮತದ ಮುನ್ನಡೆ ಸಾಧಿಸಿದರು. ಇಷ್ಟು ಕಡಿಮೆ ಅಂತರವಿದ್ದ ಕಾರಣ, ಚುನಾವಣಾ ಆಯೋಗದ ನಿಯಮದಂತೆ ತಿರಸ್ಕೃತಗೊಂಡಿದ್ದ ಅಂಚೆ ಮತಗಳನ್ನು ಮರುಪರಿಶೀಲನೆ ನಡೆಸಲಾಯಿತು. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದೆ ಸೇತುಪತಿ ಅವರೇ ವಿಜಯಶಾಲಿ ಎಂದು ಘೋಷಿಸಲಾಯಿತು.

ವಿದ್ಯಾವಂತರ ದಂಡು
ಈ 60 ಹೊಸ ಶಾಸಕರಲ್ಲಿ ಸುಮಾರು 15 ಮಂದಿ ವೈದ್ಯರು, 12 ಮಂದಿ ಇಂಜಿನಿಯರ್‌ಗಳು ಮತ್ತು 10 ಮಂದಿ ಕಾನೂನು ಪದವೀಧರರು ಸೇರಿದ್ದಾರೆ. ಉದಾಹರಣೆಗೆ, ಡಾ. ಅನ್ಬುಮಣಿ (ತಿರುಚಿರಾಪಳ್ಳಿ ಉತ್ತರ) ಮತ್ತು ಇಂಜಿನಿಯರ್ ಆಗಿದ್ದ ಆರ್. ಕವಿತಾ (ಕೋಯಿಮತ್ತೂರು ಉತ್ತರ) ಮೊದಲ ಪ್ರಯತ್ನದಲ್ಲೇ ಘಟಾನುಘಟಿಗಳನ್ನು ಸೋಲಿಸಿದ್ದಾರೆ.

ಗೆದ್ದ 60 ಹೊಸಬರಲ್ಲಿ 12 ಮಂದಿ ಮಹಿಳೆಯರಿದ್ದು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಎಸ್. ಪ್ರಿಯದರ್ಶಿನಿ (ಮಧುರೈ ದಕ್ಷಿಣ) ಅಂತಹವರು ಸಾಮಾನ್ಯ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನವರು 25 ರಿಂದ 40 ವರ್ಷ ವಯೋಮಾನದವರಾಗಿದ್ದು, ದ್ರಾವಿಡ ಪಕ್ಷಗಳ ಹಿರಿಯ ನಾಯಕರನ್ನು ಮನೆಗೆ ಕಳುಹಿಸಿದ್ದಾರೆ.

ವಿಜಯ್ ಕೇವಲ ಸಿನಿಮಾ ಅಭಿಮಾನಿಗಳಿಗೆ ಟಿಕೆಟ್ ನೀಡದೆ, ವೈದ್ಯರು, ವಕೀಲರು ಮತ್ತು ಸಮಾಜ ಸೇವಕರಿಗೆ ಆದ್ಯತೆ ನೀಡಿದರು. ಇದು “ಪಕ್ಷವು ಕೇವಲ ಸ್ಟಾರ್ ಪವರ್ ಮೇಲೆ ನಿಂತಿಲ್ಲ, ಬದಲಿಗೆ ಸಮರ್ಥ ವ್ಯಕ್ತಿಗಳ ಮೇಲೆ ನಿಂತಿದೆ” ಎಂಬ ಸಂದೇಶ ರವಾನಿಸಿತು.

ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು ಪಕ್ಷದ ಸಂಸ್ಥಾಪಕ ವಿಜಯ್ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅದರಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರು ಸಂಖ್ಯೆ 107 ಆಗುತ್ತದೆ. ಒಬ್ಬರನ್ನು ಸ್ಪೀಕರ್ ಎಂದು ಪರಿಗಣಿಸಿದರೆ 106 ಕ್ಕೆ ಒಂದು ನಿಲ್ಲುತ್ತದೆ ಹಾಗಾಗಿ ಸರ್ಕಾರ ರಚಿನಲು ಇನ್ನು 12 ಶಾಸಕರ ಬೆಂಬಲ ಬೇಕಾಗುತ್ತದೆ. 118 ಸ್ಥಾನಗಳ ಮ್ಯಾಜಿಕ್ ನಂಬರ್‌ಗೆ ಕೇವಲ 12 ಸ್ಥಾನಗಳ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚದುರಂಗದಾಟ ಕುತೂಹಲಕಾರಿಯಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪ್ರಜಾತಂತ್ರಕ್ಕೆ ಬೆದರಿಕೆ ಒಡ್ಡುತ್ತಿರುವ ಎಸ್ಐಆರ್’: ಬಿಜೆಪಿಯ (ಕು)ತಂತ್ರ ಫಲಿಸಿದರೇ ಭಾರತವೇ ಇರುವುದಿಲ್ಲ..!

ಪಂಚರಾಜ್ಯ ಚುನಾವಣಾ ಫಲಿತಾಂಶಗಳು 2026 ಮೇ 4ರಂದು ಹೊರಬಿದ್ದಿದ್ದು, ಭಾರತೀಯ ಜನತಾ ಪಾರ್ಟಿ ಪಶ್ಚಿಮ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಆದರೆ ಈ ಗೆಲುವು ಕೇವಲ ಜನರ ಆದರ್ಶವಲ್ಲ, ಬದಲಿಗೆ ಚುನಾವಣಾ ವ್ಯವಸ್ಥೆಯೇ...

ಬಿಹಾರ-ಬಂಗಾಳದ ಬಳಿಕ ಕರ್ನಾಟಕದ ಸರತಿ; ಎಸ್‌ಐಆರ್ ಜಾರಿಯಿಂದ ಕಾಂಗ್ರೆಸ್‌ ಕಳೆದುಕೊಳ್ಳುವ ಕ್ಷೇತ್ರಗಳೆಷ್ಟು?

ಭಾಗ-1 ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತರಾತುರಿಯಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಜಾರಿ ಮಾಡಿದ ಹಿಂದಿನ ದುರುದ್ದೇಶ ಬಿಹಾರದ ಬಳಿಕ ಈಗ ಪಶ್ಚಿಮ ಬಂಗಾಳದಲ್ಲಿ ಸಾಬೀತಾಗಿದೆ. ಹಿಂದಿನ ಚುನಾವಣೆಗಳಲ್ಲಿ ಕಡಿಮೆ...

ವಿಜಯ್ ಪಕ್ಷದ ಗೆಲುವಿಗೆ ಕಾರಣವಾದ ಡಿಎಂಕೆ-ಎಐಎಡಿಎಂಕೆ ಪಕ್ಷದ ವಲಸೆ ನಾಯಕರು

50 ವರ್ಷಗಳಿಂದ ಡಿಎಂಕೆ (DMK) ಮತ್ತು ಎಐಎಡಿಎಂಕೆ (AIADMK) ಎಂಬ ಎರಡು ದ್ರಾವಿಡ ಪಕ್ಷಗಳ ಅಧಿಪತ್ಯದಲ್ಲಿದ್ದ ತಮಿಳು ಮಣ್ಣಿನಲ್ಲಿ ಈಗ ಮಹತ್ವದ ಬದಲಾವಣೆ ಗಾಳಿ ಬೀಸಿದೆ. ನಟ ವಿಜಯ್ ನೇತೃತ್ವದ 'ತಮಿಳಗ ವೆಟ್ರಿ...

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 293 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ...

ಗೋಮಾಂಸ ಸಾಗಣೆ ಆರೋಪದ ಮೇಲೆ ವಾಹನ ಮುಟ್ಟುಗೋಲು: ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹೈಕೋರ್ಟ್

ಗೋಮಾಂಸ ಸಾಗಣೆ ಮಾಡುತ್ತಿದ್ದಾರೆ ಎಂದು ಕೇವಲ ಅನುಮಾನದ ಮೇಲೆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದು ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದ್ದು, ಅಂತಹ ಯಾವುದೇ ಕ್ರಮ ತೆಗೆದುಕೊಳ್ಳುವ ಮೊದಲು ವೈಜ್ಞಾನಿಕ ದೃಢೀಕರಣ ಅಗತ್ಯ...

ಎಕ್ಸಿಟ್‌ ಪೋಲ್ಸ್‌ಗಳು ‘ಹಣ-ಒತ್ತಡ’ದಿಂದ ಕೂಡಿವೆ; ಟಿಎಂಸಿ 226 ಸ್ಥಾನಗಳನ್ನು ಮೀರಲಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನದ ನಂತರ ಇತ್ತೀಚಿನ ಚುನಾವಣೋತ್ತರ ಸಮೀಕ್ಷೆಗಳ ವಿಶ್ವಾಸಾರ್ಹತೆಯನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಲವಾಗಿ ತಳ್ಳಿಹಾಕಿದ್ದಾರೆ. ಅವರ ಪಕ್ಷವಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 294 ಸದಸ್ಯರ ವಿಧಾನಸಭೆಯಲ್ಲಿ 226...

ಗುಜರಾತ್‌| ರಾಮ ಮಂದಿರ ಕಾರ್ಯಕ್ರಮದಲ್ಲಿ ದಲಿತರಿಗೆ ಪ್ರತ್ಯೇಕ ಊಟದ ವ್ಯವಸ್ಥೆ; ಅಸ್ಪೃಶ್ಯತೆ ಆಚರಣೆ ಆರೋಪ

ಗುಜರಾತ್‌ನ ಜುನಾಗಢ್ ಜಿಲ್ಲೆಯಲ್ಲಿ ಜಾತಿ ತಾರತಮ್ಯದ ಆರೋಪ ಹೊರಿಸಲಾಗಿದ್ದು, ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ದೇವಾಲಯದ ಆಯೋಜಕರು ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ ಎಂದು ದಲಿತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ. ಭುಟ್ಡಿ ಗ್ರಾಮದ ನಿವಾಸಿ 25 ವರ್ಷದ ಅಜಯ್...

ಕೋಗಿಲು ಬಡಾವಣೆ ಮನೆಗಳ ನೆಲಸಮ: ಹದಿನೈದು ದಿನಗಳೊಳಗೆ ಪುನರ್ವಸತಿ ಕಲ್ಪಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ

ಬೆಂಗಳೂರು ಉತ್ತರ ತಾಲ್ಲೂಕಿನ ಯಲಹಂಕ ಪ್ರದೇಶದ ಕೋಗಿಲು ಲೇಔಟ್‌ನ ಫಕೀರ್ ಕಾಲೋನಿ ಮತ್ತು ಮಹಾನಾಯಕ ಅಂಬೇಡ್ಕರ್ ನಗರ (ವಾಸಿಂ ಲೇಔಟ್‌) ಪ್ರದೇಶದ ಬಡ ನಿವಾಸಿಗಳ ಮನೆಗಳನ್ನು 2025 ಡಿಸೆಂಬರ್ 20ರಂದು ಬೆಳಿಗ್ಗೆ ಸುಮಾರು...

ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟ 95.20 ರೂ.ಗೆ ಕುಸಿತ ಕಂಡ ಭಾರತೀಯ ರೂಪಾಯಿ ಮೌಲ್ಯ 

ನವದೆಹಲಿ: ಏಪ್ರಿಲ್ 30ರಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಅಮೆರಿಕನ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 95.07 ಕ್ಕೆ ಕುಸಿದಿದೆ. ಕರೆನ್ಸಿ 0.4% ಕುಸಿತದೊಂದಿಗೆ 95.2325 ಕ್ಕೆ ಇಳಿದಿದೆ. ಇದು ಮಾರ್ಚ್...

ತಮಿಳುನಾಡು| ದಲಿತ ಯುವಕನ ಶವ ಪತ್ತೆ; ‘ಜಾತಿ ಕಾರಣಕ್ಕೆ ಹತ್ಯೆಯಾಗಿದೆ’ ಎಂದು ಕುಟುಂಬದ ಆರೋಪ

ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕ್ವಾರಿ ಕೆರೆಯ ಬಳಿ 20 ವರ್ಷದ ದಲಿತ ಯುವಕನ ಶವ ಪತ್ತೆಯಾಗಿದ್ದು, ಹಿಂದುಳಿದ ವರ್ಗದ ಯುವತಿಯೊಂದಿಗಿನ ಸಂಬಂಧದಿಂದಾಗಿ ಆತನನ್ನು ಕೊಲ್ಲಲಾಗಿದೆ ಎಂದು ಆತನ ಕುಟುಂಬ ಆರೋಪಿಸಿದೆ. ಆದರೆ, ಈ...