ತಮಿಳುನಾಡು ರಾಜಕಾರಣ ಎಂದರೆ ಅದು ಐದು ದಶಕಗಳಿಂದ ಕೇವಲ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಜಿದ್ದಾಜಿದ್ದಿ. ಆದರೆ 2026ರ ಫಲಿತಾಂಶವು ಈ “ದ್ವಿಪಕ್ಷೀಯ” ಸಂಪ್ರದಾಯವನ್ನು ಮುರಿದುಹಾಕಿದೆ. ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ತನ್ನ ಚೊಚ್ಚಲ ಪ್ರವೇಶದಲ್ಲೇ ಅಭೂತಪೂರ್ವ ಯಶಸ್ಸು ಸಾಧಿಸಿದೆ. 108 ಸ್ಥಾನಗಳನ್ನು ಗೆಲ್ಲುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಪಕ್ಷದ ಓಟ್ ಶೇರ್ ಸುಮಾರು 35% (ನಿಖರವಾಗಿ 34.92%) ಮತಗಳನ್ನು ಗಳಿಸಿದೆ.
ಟಿವಿಕೆ ಪಕ್ಷವು ಮತಗಳ ಪ್ರಮಾಣದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿಯ ಎರಡೂ ಪಕ್ಷವನ್ನು ಹಿಂದಿಕ್ಕಿದೆ
| ಪಕ್ಷ / ಮೈತ್ರಿಕೂಟ | ಗೆದ್ದ ಸ್ಥಾನಗಳು | ಓಟ್ ಪರ್ಸಂಟೇಜ್ (ಅಂದಾಜು) |
| TVK (ತಮಿಳಗ ವೆಟ್ರಿ ಕಳಗಂ) | 108 | 34.92% |
| DMK+ (ಡಿಎಂಕೆ ಮೈತ್ರಿ) | 73 | 31.39% |
| AIADMK+ (ಎಐಎಡಿಎಂಕೆ ಮೈತ್ರಿ) | 53 | 27.22% |
| ಇತರರು (NTK, BJP, ಇತ್ಯಾದಿ) | 0 | ಉಳಿದ 6-7% |
ಕೇವಲ ಎರಡು ವರ್ಷಗಳ ಹಿಂದೆ ಒಂದು ರಾಜಕೀಯ ಪಕ್ಷಕಟ್ಟಿ, ಚುನಾವಣೆಯಲ್ಲಿ ಸ್ಪರ್ಧಿಸಿ ರಾಜ್ಯವೊಂದರ ಅಧಿಕಾರ ಹಿಡಿಯುವುದು ಮಾತಿನಲ್ಲಿ ಹೇಳಿದಷ್ಟು ಸುಲಭವೂ ಅಲ್ಲ ಸಲೀಸು ಅಲ್ಲ. ಆದರೆ ತಮಿಳುನಾಡಿನಲ್ಲಿ ಅಂತಹದೊಂದು ಅಚ್ಚರಿ ಫಲಿತಾಂಶ ಹೊರಬಿದಿದ್ದು 2026ರ ವಿಧಾನಸಭಾ ಚುನಾವಣೆಯಲ್ಲಿ ಎರಡು ವರ್ಷಗಳ ಹಿಂದೆ ಅಸ್ಥಿತ್ವಕ್ಕೆ ಬಂದ ನಟ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ಸ್ಪರ್ಧಿಸಿದ್ದ 234 ಸ್ಥಾನಗಳ ಪೈಕಿ 108 ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವತ್ತ ಹೆಜ್ಜೆ ಇಟ್ಟಿದೆ.
ಈ ಚುನಾವಣೆ ಹಲವು ವಿಶೇಷತೆಗೆ ಸಾಕ್ಷಿಯಾಗಿದೆ. ಅದರಲ್ಲಿಯೂ ಮುಖ್ಯವಾಗಿ ಟಿವಿಕೆ ಪಕ್ಷದಿಂದ ಸ್ಪರ್ಧಿಸಿದ್ದ ಹೊಸ ಇತಿಹಾಸ ಬರೆದ 60 ‘ನೂತನ’ ಶಾಸಕರು!
ಈ ಚುನಾವಣೆಯ ಅತ್ಯಂತ ಸ್ವಾರಸ್ಯಕರ ಸಂಗತಿಯೆಂದರೆ, ಟಿವಿಕೆಯಿಂದ ಗೆದ್ದ 108 ಶಾಸಕರಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಸಂಪೂರ್ಣವಾಗಿ ಹೊಸ ಮುಖಗಳು. ಇವರು ಈ ಹಿಂದೆ ಯಾವುದೇ ಪಕ್ಷದಿಂದ ಚುನಾವಣೆಗೆ ನಿಂತು ಗೆಲುವು ಅಥವಾ ಸೋಲು ಕಂಡವರಲ್ಲ. ಎಂಬುದು ವಿಶೇಷ.
ಒಟ್ಟು ಸ್ಪರ್ಧಿಸಿದ ಸ್ಥಾನಗಳು: 234.
ಗೆದ್ದ ಸ್ಥಾನಗಳು: 108.
ಬಹುಮತಕ್ಕೆ ಕೊರತೆ: 10 ಸ್ಥಾನಗಳು (ಬಹುಮತದ ಗಡಿ 118)
ತಮಿಳುನಾಡು ವಿಧಾನಸಭಾ ಚುನಾವಣೆ 2026ರ ಫಲಿತಾಂಶವು ಭಾರತೀಯ ರಾಜಕಾರಣದ ಇತಿಹಾಸದಲ್ಲೇ ಒಂದು ಸಂಚಲನ ಮೂಡಿಸಿದೆ. ಮೊದಲ ಬಾರಿ ಕಣಕ್ಕಿಳಿದ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದು ಎಲ್ಲರ ಹುಬ್ಬೇರಿಸಿದೆ. ಈ ಪಟ್ಟಿಯಲ್ಲಿರುವ ಬಹುತೇಕರು ರಾಜಕೀಯಕ್ಕೆ ತೀರಾ ಹೊಸಬರು ಅಥವಾ ಈ ಹಿಂದೆ ಯಾವುದೇ ಚುನಾವಣಾ ಕಣದಲ್ಲಿ ಕಾಣಿಸಿಕೊಳ್ಳದವರು. ಅದರ ಕೆಲವು ವಿಶೇಷ ಜಲಕ್ಗಳು ಕೆಳಗಿನಂತಿವೆ.
| ಕ್ರ.ಸಂ | ಕ್ಷೇತ್ರ | ಚುನಾಯಿತ ಶಾಸಕರು (TVK) | ಸಾಮಾಜಿಕ / ಜಾತಿ ಹಿನ್ನೆಲೆ |
| 1 | ಪೆರಂಬೂರ್ | ಸಿ. ಜೋಸೆಫ್ ವಿಜಯ್ (ವಿಜಯ್) | ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ) |
| 2 | ತಿರುಚಿರಾಪಳ್ಳಿ ಈಸ್ಟ್ | ಸಿ. ಜೋಸೆಫ್ ವಿಜಯ್ (ವಿಜಯ್) | ಅಲ್ಪಸಂಖ್ಯಾತ (ಕ್ರಿಶ್ಚಿಯನ್ ಹಿನ್ನೆಲೆ) |
| 3 | ವಿಲ್ಲಿವಾಕ್ಕಂ | ಆದವ್ ಅರ್ಜುನ | ಎಂಬಿಸಿ (ಅತಿ ಹಿಂದುಳಿದ ವರ್ಗ) |
| 4 | ಕೌಂಡಂಪಾಳಯಂ | ಕನಿಮೊಳಿ ಸಂತೋಷ್ | ಕೌಂಡರ್ (ಒಬಿಸಿ) |
| 5 | ತಿರುವಳ್ಳಿಕೇಣಿ | ಎಂ. ಆರ್. ಪಲ್ಲವಿ | ಪರಿಶಿಷ್ಟ ಜಾತಿ (SC) |
| 6 | ರಾಯಪುರಂ | ಕೆ. ವಿ. ವಿಜಯ್ ದಾಮು | ಎಂಬಿಸಿ (ಮೀನುಗಾರ ಸಮುದಾಯ) |
| 7 | ತಿರುವಳ್ಳೂರು | ಡಾ. ಟಿ. ಅರುಣ್ಕುಮಾರ್ | ಹಿಂದುಳಿದ ವರ್ಗ (BC) |
| 8 | ಈರೋಡ್ ಈಸ್ಟ್ | ಎಂ. ವಿಜಯ್ ಬಾಲಾಜಿ | ಹಿಂದುಳಿದ ವರ್ಗ (BC) |
| 9 | ಮಧುರೈ ನಾರ್ತ್ | ಎ. ಕಲ್ಲನೈ | ಹಿಂದುಳಿದ ವರ್ಗ (BC) |
| 10 | ಮಧುರೈ ಸೆಂಟ್ರಲ್ | ಮಧರ್ ಬಧುರುದ್ದೀನ್ | ಅಲ್ಪಸಂಖ್ಯಾತ (ಮುಸ್ಲಿಂ) |
| 11 | ತಿರುಪತ್ತೂರು | ಸೀನಿವಾಸ ಸೇತುಪತಿ ಆರ್. | ತೇವರ್ / ಮುಕ್ಕುಲತೋರ್ (OBC) |
| 12 | ಶೋಲಿಂಗನಲ್ಲೂರು | ಇ.ಸಿ.ಆರ್. ಪಿ. ಶರವಣನ್ | ಹಿಂದುಳಿದ ವರ್ಗ (BC) |
| 13 | ಸೇಲಂ ನಾರ್ತ್ | ಕೆ. ಶಿವಕುಮಾರ್ | ಹಿಂದುಳಿದ ವರ್ಗ (BC) |
| 14 | ಪಲ್ಲವರಂ | ಜೆ. ಕಾಮಾಚಿ | ಹಿಂದುಳಿದ ವರ್ಗ (BC) |
| 15 | ವೇಲೂರು | ಎಂ. ಎಂ. ವಿನೋದ್ ಕಣ್ಣನ್ | ಎಂಬಿಸಿ (ಅತಿ ಹಿಂದುಳಿದ ವರ್ಗ) |
| 16 | ಮಧವರಂ | ಎಂ. ಎಲ್. ವಿಜಯ್ ಪ್ರಭು | ಹಿಂದುಳಿದ ವರ್ಗ (BC) |
| 17 | ಅಣ್ಣಾ ನಗರ | ವಿ. ಕೆ. ರಾಮಕುಮಾರ್ | ಹಿಂದುಳಿದ ವರ್ಗ (BC) |
| 18 | ಮೈಲಾಪುರಂ | ವೆಂಕಟರಮಣನ್ ಪಿ. | ಬ್ರಾಹ್ಮಣ (ಸಾಮಾನ್ಯ ವರ್ಗ) |
| 19 | ಶ್ರೀವೈಕುಂಠಂ | ಶರವಣನ್ ಜಿ. | ತೇವರ್ / ಮುಕ್ಕುಲತೋರ್ (OBC) |
| 20 | ತಂಜಾವೂರು | ಆರ್. ವಿಜಯಶರವಣನ್ | ಹಿಂದುಳಿದ ವರ್ಗ (BC) |
| 21 | ಶಿವಗಂಗಾ | ಕುಳಂದೈ ರಾಣಿ ಎ. | ಪರಿಶಿಷ್ಟ ಜಾತಿ (SC) |
| 22 | ಈರೋಡ್ ವೆಸ್ಟ್ | ಅನಂತ್ ಮೋಹನ್ ಕೆ.ಕೆ. | ಕೌಂಡರ್ (OBC) |
| 23 | ಕಡಲೂರು | ಬಿ. ರಾಜಕುಮಾರ್ | ಎಂಬಿಸಿ (ವನ್ನಿಯರ್) |
| 24 | ಕುಂಭಕೋಣಂ | ವಿನೋದ್ | ಹಿಂದುಳಿದ ವರ್ಗ (BC) |
| 25 | ಅಂಬತ್ತೂರು | ಬಾಲಮುರುಗನ್ ಜಿ. | ಹಿಂದುಳಿದ ವರ್ಗ (BC) |
| 26 | ಮಧುರವಾಯಲ್ | ರೇವಂತ್ ಚರಣ್ | ಹಿಂದುಳಿದ ವರ್ಗ (BC) |
| 27 | ಆವಡಿ | ಆರ್. ರಮೇಶ್ ಕುಮಾರ್ | ಹಿಂದುಳಿದ ವರ್ಗ (BC) |
| 28 | ಪೂನಮಲ್ಲಿ | ಪ್ರಕಾಶಂ ಆರ್. | ಪರಿಶಿಷ್ಟ ಜಾತಿ (SC) |
| 29 | ಗುಮ್ಮಿಡಿಪೂಂಡಿ | ಎಸ್. ವಿಜಯಕುಮಾರ್ | ಎಂಬಿಸಿ (ವನ್ನಿಯರ್) |
| 30 | ಪೊನ್ನೇರಿ | ರವಿ ಎಂ. ಎಸ್. | ಪರಿಶಿಷ್ಟ ಜಾತಿ (SC) |
| 31 | ಸೈದಾಪೇಟೆ | ಅರುಳ್ ಪ್ರಕಾಶಂ ಎಂ. | ಹಿಂದುಳಿದ ವರ್ಗ (BC) |
| 32 | ಟಿ. ನಗರ | ಆನಂದ್ ಎನ್. | ಹಿಂದುಳಿದ ವರ್ಗ (BC) |
| 33 | ವೇಲಚೇರಿ | ಕುಮಾರ್ ಆರ್. | ಹಿಂದುಳಿದ ವರ್ಗ (BC) |
| 34 | ಆಲಂದೂರು | ಎಂ. ಹರೀಶ್ | ಹಿಂದುಳಿದ ವರ್ಗ (BC) |
| 35 | ತಾಂಬರಂ | ಡಿ. ಶರತ್ ಕುಮಾರ್ | ಹಿಂದುಳಿದ ವರ್ಗ (BC) |
| 36 | ಶ್ರೀಪೆರಂಬದೂರು | ತೇನರಸು ಕೆ. | ಪರಿಶಿಷ್ಟ ಜಾತಿ (SC) |
| 37 | ಕಾಂಚೀಪುರಂ | ಆರ್. ವಿ. ರಂಜಿತ್ ಕುಮಾರ್ | ಸೇಂಗುಂತರ್ ಮೊದಲಿಯಾರ್ (BC) |
| 38 | ಅರಕ್ಕೋಣಂ | ವಿ. ಗಾಂಧಿರಾಜ್ | ಪರಿಶಿಷ್ಟ ಜಾತಿ (SC) |
| 39 | ಶೋಲಿಂಗೂರು | ಜಿ. ಕಪಿಲ್ | ಹಿಂದುಳಿದ ವರ್ಗ (BC) |
| 40 | ರಾಣಿಪೇಟೆ | ತಾಹಿರಾ | ಅಲ್ಪಸಂಖ್ಯಾತ (ಮುಸ್ಲಿಂ) |
| 41 | ಕೃಷ್ಣಗಿರಿ | ಮುಕುಂದನ್ ಪಿ. | ಹಿಂದುಳಿದ ವರ್ಗ (BC) |
| 42 | ಪೆನ್ನಾಗರಂ | ಗಜೇಂದ್ರನ್ ಎಸ್. | ಎಂಬಿಸಿ (ವನ್ನಿಯರ್) |
| 43 | ಸೇಲಂ ಸೌತ್ | ವಿಜಯ್ ತಮಿಳನ್ ಪಾರ್ಥಿಬನ್ ಎ. | ಹಿಂದುಳಿದ ವರ್ಗ (BC) |
| 44 | ನಾಮಕ್ಕಲ್ | ದಿಲೀಪ್ ಸಿ. ಎಸ್. | ಹಿಂದುಳಿದ ವರ್ಗ (BC) |
| 45 | ತಿರುಚೆಂಗೋಡು | ಅರುಣ್ರಾಜ್ ಕೆ. ಜಿ. | ಕೌಂಡರ್ (OBC) |
| 46 | ಭವಾನಿಸಾಗರ | ವಿ. ಪಿ. ತಮಿಳ್ ಸೆಲ್ವಿ | ಪರಿಶಿಷ್ಟ ಜಾತಿ (SC) |
| 47 | ತಿರುಪ್ಪೂರು ನಾರ್ತ್ | ವಿ. ಸತ್ಯಭಾಮಾ | ಕೌಂಡರ್ (OBC) |
| 48 | ಕೊಯಮತ್ತೂರು ನಾರ್ತ್ | ವಿ. ಸಂಪತ್ ಕುಮಾರ್ | ಹಿಂದುಳಿದ ವರ್ಗ (BC) |
| 49 | ಸಿಂಗನಲ್ಲೂರು | ಕೆ. ಎಸ್. ಶ್ರೀಗಿರಿ ಪ್ರಸಾದ್ | ಹಿಂದುಳಿದ ವರ್ಗ (BC) |
| 50 | ಕಿಣತುಕ್ಕಡವು | ವಿಘ್ನೇಶ್ ಕೆ. | ಕೌಂಡರ್ (OBC) |
| 51 | ಮಣಪ್ಪಾರೈ | ಆರ್. ಕದಿರವನ್ | ಹಿಂದುಳಿದ ವರ್ಗ (BC) |
| 52 | ಮುಸಿರಿ | ಎಂ. ವಿಘ್ನೇಶ್ | ಹಿಂದುಳಿದ ವರ್ಗ (BC) |
| 53 | ಕಾರೈಕುಡಿ | ಡಾ. ಪ್ರಭು ಟಿ. ಕೆ. | ಹಿಂದುಳಿದ ವರ್ಗ (BC) |
| 54 | ಮಧುರೈ ಸೌತ್ | ಎಂ. ಎಂ. ಗೋಪಿಸನ್ | ಸೌರಾಷ್ಟ್ರ (ಭಾಷಾ ಅಲ್ಪಸಂಖ್ಯಾತ) |
| 55 | ಮಧುರೈ ವೆಸ್ಟ್ | ತಂಗಪಾಂಡಿ ಎಸ್. ಆರ್. | ಹಿಂದುಳಿದ ವರ್ಗ (BC) |
| 56 | ಪೆರಿಯಕುಲಂ | ಶಬರಿ ಅಯ್ಯಂಗಾರನ್ ಜಿ. | ಪರಿಶಿಷ್ಟ ಜಾತಿ (SC) |
| 57 | ಶಿವಕಾಶಿ | ಕೀರ್ತನಾ ಎಸ್. | ಹಿಂದುಳಿದ ವರ್ಗ (BC) |
| 58 | ವಿರುದುನಗರ | ಸೆಲ್ವಂ ಪಿ. | ಪರಿಶಿಷ್ಟ ಜಾತಿ (ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು) |
| 59 | ತೂತುಕುಡಿ | ಶ್ರೀನಾಥ್ | ನಾಡಾರ್ (BC) |
| 60 | ರಾಧಾಪುರಂ | ಡಾ. ಸತೀಶ್ ಕ್ರಿಸ್ಟೋಫರ್ | ನಾಡಾರ್ (BC) |
ಎರಡು ಕ್ಷೇತ್ರಗಳಲ್ಲಿ ವಿಜಯ್ ಗೆಲುವು
ಟಿವಿಕೆ (TVK) ಪಕ್ಷದ ನಾಯಕ ಜೋಸೆಫ್ ವಿಜಯ್ ಅವರು ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡರಲ್ಲೂ ಐತಿಹಾಸಿಕ ಜಯ ದಾಖಲಿಸಿದ್ದಾರೆ. ಒಂದು ಪೆರಂಬೂರ್ (Perambur) ಮತ್ತೊಂದು ತಿರುಚಿರಾಪಳ್ಳಿ ಪೂರ್ವ ಈ ಎರಡೂ ಕ್ಷೇತ್ರಗಳಲ್ಲಿ ವಿಜಯ್ ದೊಡ್ಡ ಅಂತರದ ಗೆಲುವು ಸಾಧಿಸಿದ್ದಾರೆ.
ಒಂದು ಮತದ ಅಂತರದಲ್ಲಿ ಗೆದ್ದ TVK ಶಾಸಕ
ಶಿವಗಂಗಾ ಜಿಲ್ಲೆಯ ತಿರುಪತ್ತೂರು (Tirupattur) ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಸೀನಿವಾಸ ಸೇತುಪತಿ ಆರ್. ಅವರು ಕೇವಲ ಒಂದು ಮತದ ಅಂತರದಿಂದ ಜಯಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.ಸೀನಿವಾಸ ಸೇತುಪತಿ ಅವರು 83,375 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಡಿಎಂಕೆ (DMK) ಸಚಿವ ಕೆ.ಆರ್. ಪೆರಿಯಕರುಪ್ಪನ್ ಅವರು 83,374 ಮತಗಳನ್ನು ಪಡೆದರು.
ಮತ ಎಣಿಕೆಯ ಆರಂಭದಲ್ಲಿ ಹಿನ್ನಡೆಯಲ್ಲಿದ್ದ ಸೇತುಪತಿ ಅವರು, ಅಂಚೆ ಮತಗಳ (Postal Ballots) ಎಣಿಕೆಯ ನಂತರ ಕೇವಲ ಒಂದು ಮತದ ಮುನ್ನಡೆ ಸಾಧಿಸಿದರು. ಇಷ್ಟು ಕಡಿಮೆ ಅಂತರವಿದ್ದ ಕಾರಣ, ಚುನಾವಣಾ ಆಯೋಗದ ನಿಯಮದಂತೆ ತಿರಸ್ಕೃತಗೊಂಡಿದ್ದ ಅಂಚೆ ಮತಗಳನ್ನು ಮರುಪರಿಶೀಲನೆ ನಡೆಸಲಾಯಿತು. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆಯಾಗದೆ ಸೇತುಪತಿ ಅವರೇ ವಿಜಯಶಾಲಿ ಎಂದು ಘೋಷಿಸಲಾಯಿತು.
ವಿದ್ಯಾವಂತರ ದಂಡು
ಈ 60 ಹೊಸ ಶಾಸಕರಲ್ಲಿ ಸುಮಾರು 15 ಮಂದಿ ವೈದ್ಯರು, 12 ಮಂದಿ ಇಂಜಿನಿಯರ್ಗಳು ಮತ್ತು 10 ಮಂದಿ ಕಾನೂನು ಪದವೀಧರರು ಸೇರಿದ್ದಾರೆ. ಉದಾಹರಣೆಗೆ, ಡಾ. ಅನ್ಬುಮಣಿ (ತಿರುಚಿರಾಪಳ್ಳಿ ಉತ್ತರ) ಮತ್ತು ಇಂಜಿನಿಯರ್ ಆಗಿದ್ದ ಆರ್. ಕವಿತಾ (ಕೋಯಿಮತ್ತೂರು ಉತ್ತರ) ಮೊದಲ ಪ್ರಯತ್ನದಲ್ಲೇ ಘಟಾನುಘಟಿಗಳನ್ನು ಸೋಲಿಸಿದ್ದಾರೆ.
ಗೆದ್ದ 60 ಹೊಸಬರಲ್ಲಿ 12 ಮಂದಿ ಮಹಿಳೆಯರಿದ್ದು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಎಸ್. ಪ್ರಿಯದರ್ಶಿನಿ (ಮಧುರೈ ದಕ್ಷಿಣ) ಅಂತಹವರು ಸಾಮಾನ್ಯ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹೆಚ್ಚಿನವರು 25 ರಿಂದ 40 ವರ್ಷ ವಯೋಮಾನದವರಾಗಿದ್ದು, ದ್ರಾವಿಡ ಪಕ್ಷಗಳ ಹಿರಿಯ ನಾಯಕರನ್ನು ಮನೆಗೆ ಕಳುಹಿಸಿದ್ದಾರೆ.
ವಿಜಯ್ ಕೇವಲ ಸಿನಿಮಾ ಅಭಿಮಾನಿಗಳಿಗೆ ಟಿಕೆಟ್ ನೀಡದೆ, ವೈದ್ಯರು, ವಕೀಲರು ಮತ್ತು ಸಮಾಜ ಸೇವಕರಿಗೆ ಆದ್ಯತೆ ನೀಡಿದರು. ಇದು “ಪಕ್ಷವು ಕೇವಲ ಸ್ಟಾರ್ ಪವರ್ ಮೇಲೆ ನಿಂತಿಲ್ಲ, ಬದಲಿಗೆ ಸಮರ್ಥ ವ್ಯಕ್ತಿಗಳ ಮೇಲೆ ನಿಂತಿದೆ” ಎಂಬ ಸಂದೇಶ ರವಾನಿಸಿತು.
ಟಿವಿಕೆ ಪಕ್ಷ 108 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು ಪಕ್ಷದ ಸಂಸ್ಥಾಪಕ ವಿಜಯ್ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಅದರಲ್ಲಿ ಒಂದು ಕ್ಷೇತ್ರವನ್ನು ಮಾತ್ರ ಪರಿಗಣನೆಗೆ ತೆಗೆದುಕೊಂಡರು ಸಂಖ್ಯೆ 107 ಆಗುತ್ತದೆ. ಒಬ್ಬರನ್ನು ಸ್ಪೀಕರ್ ಎಂದು ಪರಿಗಣಿಸಿದರೆ 106 ಕ್ಕೆ ಒಂದು ನಿಲ್ಲುತ್ತದೆ ಹಾಗಾಗಿ ಸರ್ಕಾರ ರಚಿನಲು ಇನ್ನು 12 ಶಾಸಕರ ಬೆಂಬಲ ಬೇಕಾಗುತ್ತದೆ. 118 ಸ್ಥಾನಗಳ ಮ್ಯಾಜಿಕ್ ನಂಬರ್ಗೆ ಕೇವಲ 12 ಸ್ಥಾನಗಳ ಕೊರತೆಯಿದ್ದು, ಮುಂದಿನ ದಿನಗಳಲ್ಲಿ ರಾಜಕೀಯ ಚದುರಂಗದಾಟ ಕುತೂಹಲಕಾರಿಯಾಗಿದೆ.


