Homeಸಿನಿಮಾಕ್ರೀಡೆಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

- Advertisement -
- Advertisement -

| ಮಲ್ಲಿ |

ಸದ್ಯ ಸುದ್ದಿಯಲ್ಲಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ‘ಝಿಂಗ್’ ಬೇಲ್ಸ್‍ಗಳು ಅಲ್ಲಾಡುತ್ತಲೇ ಇಲ್ಲ! ಒಮ್ಮೆ ನಮ್ಮ ಬೂಮ್ರಾ ಬಿರುಸಾಗಿ ಎಸೆದಾಗ ಚೆಂಡು ಸ್ಟಂಪ್‍ಗೆ ತಾಗಿತು, ಆದರೆ ‘ಝಿಂಗ್’ ಬೇಲ್ಸ್ ಮಿಸುಕಲೇ ಇಲ್ಲ, ಬೇಲ್ಸ್‍ನಲ್ಲಿರುವ ದೀಪಗಳು ಮಿನುಗಲೂ ಇಲ!. ಹೀಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಓಟಾಗಿಯೂ ಓಟಾಗಲಿಲ್ಲ! ಈ ಬೇಲ್ಸ್‍ಗಳನ್ನು ಕುಟ್ಟಿ ಪುಡಿ ಪುಡಿ ಮಾಡಬೇಕು ಎನಿಸಿರಬೇಕು ಜಸ್ಪ್ರಿತ್ ಬೂಮ್ರಾಗೆ!

ಆದರೆ ಕುಟ್ಟೊಂಗಿಲ್ಲ, ತಟ್ಟಂಗಿಲ್ಲ… ಟೂರ್ನಿ ಆರಂಭವಾದ ಮೇಲೆ ಕನಿಷ್ಠ ಐದು ಸಲವಾದರೂ ‘ಅಳ್ಳಾಡದ’ ಬೇಲ್ಸ್‍ಗಳ ಕಾರಣದಿಂದ ಬೌಲರ್‍ಗಳು ನಿರಾಶರಾಗಿದ್ದಾರೆ. ಒಂಥರಾ ನಮ್ಮ ಇವಿಯಂಗಳಂತೆ ವಿಚಿತ್ರ ವರ್ತನೆ ತೋರುತ್ತಿವೆಯೇ ಈ ‘ಝಿಂಗ್’ ಬೇಲ್ಸ್? ವಿಶ್ವಕಪ್ ಮುಗಿಯುವವರೆಗೂ ಈ ಬೇಲ್ಸ್ ಬದಲಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.. ಥೇಟು ನಮ್ಮ ಚುನಾವಣಾ ಆಯೋಗದ ಹಾಗೆಯೇ!

ಇವಿಎಂಗಳನ್ನು ತಿರುಚುವುದು ಸಾಧ್ಯ ಎಂಬುದನ್ನು ಹಲವಾರು ತಜ್ಞರು ದೃಢಪಡಿಸಿದ್ದಾರೆ. ಆದರೆ, ನಮ್ಮ ಚುನಾವಣಾ ಆಯೋಗವು ಜನರಲ್ಲಿನ ಸಂಶಯವನ್ನು ನಿವಾರಿಸುವ ಕೆಲಸವನ್ನು ಮಾಡಲೇ ಇಲ್ಲ. ಚುನಾವಣೆಯ ಮೊದಲ 4 ಹಂತಗಳಲ್ಲಿ 373 ಕ್ಷೇತ್ರಗಳಲ್ಲಿ ವೋಟ್ ಮಾಡಿದ ಮತ್ತು ಕೌಂಟ್ ಆದ ಮತಗಳ ನಡುವೆ 20-30 ಸಾವಿರ ವ್ಯತ್ಯಾಸವಿದ್ದರೂ ನಮ್ಮ ಆಯೋಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ!

ಬ್ಯಾಟ್ಸಮನ್ ಒಬ್ಬನನ್ನು ನೇರ ಔಟ್ ಮಾಡಲು ಸ್ಟಂಪ್ ಮೇಲಿರುವ ಬೇಲ್ಸ್ ಹಾರುವಂತೆ ಅಥವಾ ಸ್ಟಂಪೇ ನೆಲಕ್ಕೆ ಬೀಳಬೇಕು ಎಂಬುದು ಪರಂಪರಾಗತ ನಿಯಮ. ಆದರೆ ಇಲ್ಲಿ ‘ಝಿಂಗ್’ ಮಾತ್ರ ಸ್ಥಾವರದಂತೆ ಅಂಟಿಕೊಂಡು ಬಿಟ್ಟಿದೆ. ಗಂಟೆಗೆ 110 ಮೈಲು ವೇಗದಲ್ಲಿ ಬಂದ ಬಾಲ್ ಸ್ಟಂಪ್‍ಗೆ ಅಪ್ಪಳಿಸಿದರೂ ‘ಝಿಂಗ್’ ಝುಮ್ಮ ಅಂತಾನೇ ಇಲ್ಲ. ಟೂರ್ನಿಯ ಮೊದಲ ಹತ್ತು ದಿನಗಳಲ್ಲೇ ಇಂತಹ 5 ನಿದರ್ಶನ ನಡೆದರೂ, ಐಸಿಸಿ ಮಾತ್ರ ಇಡೀ ಟೂರ್ನಿಮೆಂಟ್‍ವರೆಗೆ ಇದೇ ‘ಝಿಂಗ್-ಡಾಂಗ್’ ಮುಂದುವರೆಸುವುದಾಗಿ ಹೇಳಿದೆ.

‘ಮಿಸುಕದ ಝಿಂಗ್ ಕಾರಣದಿಂದ ಲೈಫ್ ಪಡೆದ ಆಟಗಾರನೇ ಪಂದ್ಯ ಗೆಲ್ಲಿಸಿದರೆ? ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಟೂರ್ನಿಯ ಮೊದಲ ಹತ್ತು ದಿನಗಳಲ್ಲಿ ಇಂತಹ ನಿದರ್ಶನಗಳನ್ನು ನೋಡಿದ ಪಾಕಿಸ್ತಾನದ ನಿವೃತ್ತ ವೇಗಿ ಶೋಯಬ್ ಅಖ್ತರ್ ಟ್ವೀಟ್ ಮಾಡಿ.’ ಅಯ್ಯೋ ಅಲ್ಲಾ, ನನ್ನ ಕ್ರಿಕೆಟ್ ಜೀವನದಲ್ಲೇ ಇಂತಹ ಬೇಲ್ಸ್ ನೋಡಿರಲಿಲ್ಲ. ಅದೂ ಪ್ರತಿಷ್ಟಿತ ವಿಶ್ವಕಪ್‍ನಲ್ಲೇ ಹೀಗಾಗುತ್ತಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…

ಈ ಬೇಲ್ಸ್’ಗಳೂ ಪಕ್ಷಪಾತ ಮಾಡ್ತಿವೆಯಾ? ಬೇಕಾದಾಗ ಉರುಳೋದು ಬೇಡವಾದಾಗ ಸ್ಟಂಪ್ಸ್ ತಬ್ಬಿ ಕೂಡೋದು! ಇದನ್ನು ‘ಬೇಲ್ ಫಿಕ್ಸಿಂಗ್’ ಅಂತಾ ಕರೆಯಬಹುದೇ? ಕೆಲವು ಅನುಭವಿಗಳ ಪ್ರಕಾರ, ಈ ಬೇಲ್ಸ್‍ನಲ್ಲಿರುವ ಬ್ಯಾಟರಿಯ ತೂಕದ ಕಾರಣಕ್ಕೆ ಬೇಲ್ಸ್ ಧಡೂತಿಯಾಗಿ ಮಿಸುಗಾಡಲು ಆಗುತ್ತಿಲ್ಲವಂತೆ! ಚುನಾವಣಾ ಆಯೋಗವೇ ಐಸಿಸಿಗೆ ಮಾದರಿಯಾಗಿದೆಯಾ? ಇನ್ನು ಮುಂದೆ ಈ ಝಿಂಗ್ ಬೇಲ್ಸ್ ಮೇಲೆಯೇ ಬೆಟ್ಟಿಂಗ್ ನಡೆಯಲೂ ಬಹುದು!

ಕ್ಲೌಡ್ ಆ್ಯಂಡ್ ರಾಡಾರ್ ತಜ್ಞರನ್ನು ಈ ಬಗ್ಗೆ ನಮ್ಮ ಅಕ್ಷಯಕುಮಾರ್ ಪ್ರಶ್ನಿಸಿದರೆ ಚೆಂದ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...