Homeಸಿನಿಮಾಕ್ರೀಡೆಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

ಆಡಿಸಿ ನೋಡು, ಬೀಳಿಸಿ ನೋಡು ಉರುಳಿ ಹೋಗದು! ಭಾರತದ ಇವಿಎಂ ಮತ್ತು ಕ್ರಿಕೆಟ್‍ನ ‘ಝಿಂಗ್’ ಬೇಲ್ಸ್!

- Advertisement -
- Advertisement -

| ಮಲ್ಲಿ |

ಸದ್ಯ ಸುದ್ದಿಯಲ್ಲಿರುವ ವಿಶ್ವಕಪ್ ಕ್ರಿಕೆಟ್‍ನಲ್ಲಿ ‘ಝಿಂಗ್’ ಬೇಲ್ಸ್‍ಗಳು ಅಲ್ಲಾಡುತ್ತಲೇ ಇಲ್ಲ! ಒಮ್ಮೆ ನಮ್ಮ ಬೂಮ್ರಾ ಬಿರುಸಾಗಿ ಎಸೆದಾಗ ಚೆಂಡು ಸ್ಟಂಪ್‍ಗೆ ತಾಗಿತು, ಆದರೆ ‘ಝಿಂಗ್’ ಬೇಲ್ಸ್ ಮಿಸುಕಲೇ ಇಲ್ಲ, ಬೇಲ್ಸ್‍ನಲ್ಲಿರುವ ದೀಪಗಳು ಮಿನುಗಲೂ ಇಲ!. ಹೀಗಾಗಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಓಟಾಗಿಯೂ ಓಟಾಗಲಿಲ್ಲ! ಈ ಬೇಲ್ಸ್‍ಗಳನ್ನು ಕುಟ್ಟಿ ಪುಡಿ ಪುಡಿ ಮಾಡಬೇಕು ಎನಿಸಿರಬೇಕು ಜಸ್ಪ್ರಿತ್ ಬೂಮ್ರಾಗೆ!

ಆದರೆ ಕುಟ್ಟೊಂಗಿಲ್ಲ, ತಟ್ಟಂಗಿಲ್ಲ… ಟೂರ್ನಿ ಆರಂಭವಾದ ಮೇಲೆ ಕನಿಷ್ಠ ಐದು ಸಲವಾದರೂ ‘ಅಳ್ಳಾಡದ’ ಬೇಲ್ಸ್‍ಗಳ ಕಾರಣದಿಂದ ಬೌಲರ್‍ಗಳು ನಿರಾಶರಾಗಿದ್ದಾರೆ. ಒಂಥರಾ ನಮ್ಮ ಇವಿಯಂಗಳಂತೆ ವಿಚಿತ್ರ ವರ್ತನೆ ತೋರುತ್ತಿವೆಯೇ ಈ ‘ಝಿಂಗ್’ ಬೇಲ್ಸ್? ವಿಶ್ವಕಪ್ ಮುಗಿಯುವವರೆಗೂ ಈ ಬೇಲ್ಸ್ ಬದಲಿಸುವುದಿಲ್ಲ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಹೇಳಿದೆ.. ಥೇಟು ನಮ್ಮ ಚುನಾವಣಾ ಆಯೋಗದ ಹಾಗೆಯೇ!

ಇವಿಎಂಗಳನ್ನು ತಿರುಚುವುದು ಸಾಧ್ಯ ಎಂಬುದನ್ನು ಹಲವಾರು ತಜ್ಞರು ದೃಢಪಡಿಸಿದ್ದಾರೆ. ಆದರೆ, ನಮ್ಮ ಚುನಾವಣಾ ಆಯೋಗವು ಜನರಲ್ಲಿನ ಸಂಶಯವನ್ನು ನಿವಾರಿಸುವ ಕೆಲಸವನ್ನು ಮಾಡಲೇ ಇಲ್ಲ. ಚುನಾವಣೆಯ ಮೊದಲ 4 ಹಂತಗಳಲ್ಲಿ 373 ಕ್ಷೇತ್ರಗಳಲ್ಲಿ ವೋಟ್ ಮಾಡಿದ ಮತ್ತು ಕೌಂಟ್ ಆದ ಮತಗಳ ನಡುವೆ 20-30 ಸಾವಿರ ವ್ಯತ್ಯಾಸವಿದ್ದರೂ ನಮ್ಮ ಆಯೋಗ ಅದಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ!

ಬ್ಯಾಟ್ಸಮನ್ ಒಬ್ಬನನ್ನು ನೇರ ಔಟ್ ಮಾಡಲು ಸ್ಟಂಪ್ ಮೇಲಿರುವ ಬೇಲ್ಸ್ ಹಾರುವಂತೆ ಅಥವಾ ಸ್ಟಂಪೇ ನೆಲಕ್ಕೆ ಬೀಳಬೇಕು ಎಂಬುದು ಪರಂಪರಾಗತ ನಿಯಮ. ಆದರೆ ಇಲ್ಲಿ ‘ಝಿಂಗ್’ ಮಾತ್ರ ಸ್ಥಾವರದಂತೆ ಅಂಟಿಕೊಂಡು ಬಿಟ್ಟಿದೆ. ಗಂಟೆಗೆ 110 ಮೈಲು ವೇಗದಲ್ಲಿ ಬಂದ ಬಾಲ್ ಸ್ಟಂಪ್‍ಗೆ ಅಪ್ಪಳಿಸಿದರೂ ‘ಝಿಂಗ್’ ಝುಮ್ಮ ಅಂತಾನೇ ಇಲ್ಲ. ಟೂರ್ನಿಯ ಮೊದಲ ಹತ್ತು ದಿನಗಳಲ್ಲೇ ಇಂತಹ 5 ನಿದರ್ಶನ ನಡೆದರೂ, ಐಸಿಸಿ ಮಾತ್ರ ಇಡೀ ಟೂರ್ನಿಮೆಂಟ್‍ವರೆಗೆ ಇದೇ ‘ಝಿಂಗ್-ಡಾಂಗ್’ ಮುಂದುವರೆಸುವುದಾಗಿ ಹೇಳಿದೆ.

‘ಮಿಸುಕದ ಝಿಂಗ್ ಕಾರಣದಿಂದ ಲೈಫ್ ಪಡೆದ ಆಟಗಾರನೇ ಪಂದ್ಯ ಗೆಲ್ಲಿಸಿದರೆ? ಆಗ ಸಮಸ್ಯೆ ಇನ್ನಷ್ಟು ಬಿಗಡಾಯಿಸಬಹುದು. ಟೂರ್ನಿಯ ಮೊದಲ ಹತ್ತು ದಿನಗಳಲ್ಲಿ ಇಂತಹ ನಿದರ್ಶನಗಳನ್ನು ನೋಡಿದ ಪಾಕಿಸ್ತಾನದ ನಿವೃತ್ತ ವೇಗಿ ಶೋಯಬ್ ಅಖ್ತರ್ ಟ್ವೀಟ್ ಮಾಡಿ.’ ಅಯ್ಯೋ ಅಲ್ಲಾ, ನನ್ನ ಕ್ರಿಕೆಟ್ ಜೀವನದಲ್ಲೇ ಇಂತಹ ಬೇಲ್ಸ್ ನೋಡಿರಲಿಲ್ಲ. ಅದೂ ಪ್ರತಿಷ್ಟಿತ ವಿಶ್ವಕಪ್‍ನಲ್ಲೇ ಹೀಗಾಗುತ್ತಿದೆಯಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ…

ಈ ಬೇಲ್ಸ್’ಗಳೂ ಪಕ್ಷಪಾತ ಮಾಡ್ತಿವೆಯಾ? ಬೇಕಾದಾಗ ಉರುಳೋದು ಬೇಡವಾದಾಗ ಸ್ಟಂಪ್ಸ್ ತಬ್ಬಿ ಕೂಡೋದು! ಇದನ್ನು ‘ಬೇಲ್ ಫಿಕ್ಸಿಂಗ್’ ಅಂತಾ ಕರೆಯಬಹುದೇ? ಕೆಲವು ಅನುಭವಿಗಳ ಪ್ರಕಾರ, ಈ ಬೇಲ್ಸ್‍ನಲ್ಲಿರುವ ಬ್ಯಾಟರಿಯ ತೂಕದ ಕಾರಣಕ್ಕೆ ಬೇಲ್ಸ್ ಧಡೂತಿಯಾಗಿ ಮಿಸುಗಾಡಲು ಆಗುತ್ತಿಲ್ಲವಂತೆ! ಚುನಾವಣಾ ಆಯೋಗವೇ ಐಸಿಸಿಗೆ ಮಾದರಿಯಾಗಿದೆಯಾ? ಇನ್ನು ಮುಂದೆ ಈ ಝಿಂಗ್ ಬೇಲ್ಸ್ ಮೇಲೆಯೇ ಬೆಟ್ಟಿಂಗ್ ನಡೆಯಲೂ ಬಹುದು!

ಕ್ಲೌಡ್ ಆ್ಯಂಡ್ ರಾಡಾರ್ ತಜ್ಞರನ್ನು ಈ ಬಗ್ಗೆ ನಮ್ಮ ಅಕ್ಷಯಕುಮಾರ್ ಪ್ರಶ್ನಿಸಿದರೆ ಚೆಂದ ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...