Homeಮುಖಪುಟಚುನಾವಣಾ ಸಮೀಕ್ಷೆಗಳೆಂಬ ಏಜೆಂಟ್‌ಗಳು; ಮತದಾರರನ್ನು ಸುಲಭವಾಗಿ ದಾರಿ ತಪ್ಪಿಸುತ್ತವೆ!

ಚುನಾವಣಾ ಸಮೀಕ್ಷೆಗಳೆಂಬ ಏಜೆಂಟ್‌ಗಳು; ಮತದಾರರನ್ನು ಸುಲಭವಾಗಿ ದಾರಿ ತಪ್ಪಿಸುತ್ತವೆ!

- Advertisement -
- Advertisement -

ಮುಂದಿನ ತಿಂಗಳು ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಮತ್ತು ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಚುನಾವಣೆಗಳು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯನ್ನು ನೀಡುತ್ತವೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಪೂರಕ ಎಂಬಂತೆ ದೇಶದ ಚಿತ್ತ ಉತ್ತರ ಪ್ರದೇಶದ ಚುನಾವಣೆಯತ್ತ ನೆಟ್ಟಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಲವಾರು ಸಚಿವ-ಶಾಸಕರು ಬಿಜೆಪಿ ತೊರೆದು ಸಮಾಜವಾದಿ ಪಕ್ಷವನ್ನು ಸೇರುತ್ತಿದ್ದಾರೆ. ಅಲ್ಲದೆ, ಸಿಎಂ ಯೋಗಿ ಆದಿತ್ಯನಾಥ್‌ ಅವರ ವರ್ಚಸ್ಸು ಕುಸಿದಿದ್ದು, ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಹೀಗಾಗಿ, ಬಿಜೆಪಿ ಸೋಲು ಕಾಣುವ ಸಂಭವವನ್ನು ಅರಿತಿರುವ ಬಿಜೆಪಿ ಹೈಕಮಾಂಡ್‌, ಬಿಜೆಪಿ ಪ್ರಚಾರದಲ್ಲಿ ಯೋಗಿ ಅವರನ್ನು ಒಂದು ನಿರ್ದಿಷ್ಟ ಪ್ರದೇಶಕಷ್ಟೇ ಸೀಮಿತಗೊಳಿಸಿ, ಮೋದಿ ಅವರನ್ನು ರಾಜ್ಯಾದ್ಯಂತ ಪ್ರಚಾರಕ್ಕೆ ಇಳಿಸಲು ಚಿಂತಿಸುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶದ ಚುನಾವಣೆ; ಮುಗ್ಗರಿಸುತ್ತಿರುವ ಮೋದಿ-ಯೋಗಿ ಜೋಡಿ

ಇದೇ ವೇಳೆ, ಉತ್ತರ ಪ್ರದೇಶವೂ ಸೇರಿದಂತೆ ಐದು ರಾಜ್ಯಗಳ ಚುನಾವಣೆಗಳಿಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಸಮೀಕ್ಷೆಗಳು ಹೊರಬೀಳುತ್ತಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳುತ್ತಿವೆ. ಇಂತಹ ಸಮೀಕ್ಷೆಗಳನ್ನು ಅಲ್ಲಗಳೆದಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್, “ಚುನಾವಣಾ ಪೂರ್ವ ಸಮೀಕ್ಷೆಗಳು – ಅಭಿಪ್ರಾಯ ಸಂಗ್ರಹಗಳಲ್ಲ. ಅವು ಅಫೀಮು ಸಮೀಕ್ಷೆಗಳು. ಇವು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡುತ್ತವೆ. ಬಿಜೆಪಿ ಪರವಾದ ಅಪೀಮನ್ನು ತುಂಬಿದ್ದು, ಜನರನ್ನು ದಾರಿ ತಪ್ಪಿಸುತ್ತವೆ. ಸಮೀಕ್ಷೆಗಳನ್ನು ನಿಷೇಧಿಸಬೇಕು” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾತ್ರವಲ್ಲದೆ, ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಸಮೀಕ್ಷೆಗಳು ಬಿಜೆಪಿ ಪರ ಪ್ರಚಾರಕ್ಕಾಗಿ ಬಳಕೆಯಾಗುತ್ತಿವೆ. ಇವು ಬಿಜೆಪಿ ಮತದಾರರ ಮೇಲೆ ಪ್ರಭಾವ ಬೀರಲು ಮಾರುವೇಷದಲ್ಲಿ ತಂತ್ರಗಳು. ಇದು ಚುನಾವಣಾ ಆಯೋಗದ ‘ಮಾದರಿ ನೀತಿ ಸಂಹಿತೆ’ಯ ಉಲ್ಲಂಘನೆಯಾಗಿದೆ. ಹೀಗಾಗಿ, ಟಿವಿ ಚಾನೆಲ್‌ಗಳು ನಡೆಸುವ ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಕೇಳಿಕೊಂಡಿದೆ.

ಚುನಾವಣಾ ಸಮೀಕ್ಷೆಗಳ ವಿರುದ್ದ ಸಮಾಜವಾದಿ ಪಕ್ಷವು ಮಾಡುತ್ತಿರುವ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ವೈಜ್ಞಾನಿಕ ಪುರಾವೆಗಳೂ ಇವೆ.

ಮತದಾರರ ಒಲವನ್ನು ಪಕ್ಷಗಳತ್ತ ಸೆಳೆಯಲು ಜಾಹೀರಾತುಗಳು, ಆಶ್ವಾಸನೆಗಳು, ಪ್ರಣಾಳಿಕೆಗಳು ಹೇಗೆ ಕೆಲಸ ಮಾಡುತ್ತವೆಯೋ, ಅದೇ ರೀತಿಯಲ್ಲಿ ಸಮೀಕ್ಷೆಗಳು ಕೂಡ ಯಾವುದಾದರೂ ಒಂದು ಪಕ್ಷದ ಪರವಾಗಿ ಮತದಾರರ ಮೇಲೆ ಪರಿಣಾಮವನ್ನು ಬೀರುತ್ತವೆ. ಯಾವುದೋ ಒಂದು ಪಕ್ಷ ಈ ಬಾರಿ ಅಧಿಕಾರಕ್ಕೇರುತ್ತದೆ ಎಂದು ಟಿವಿ-ಪತ್ರಿಕೆಗಳಲ್ಲಿ ಪದೇ-ಪದೇ ಪ್ರಸಾರವಾದರೆ, ವೀಕ್ಷಕರ ಆಲೋಚನೆಗಳ ಮೇಲೆ ಅವು ಪರಿಣಾಮ ಬೀರುತ್ತವೆ. ಇದು, ಸುದ್ದಿವಾಹಿನಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಪಕ್ಷದ ಮೇಲೆ ಮತದಾರರ ಒಲವನ್ನು ಕೇಂದ್ರೀಕರಿಸುತ್ತದೆ. ಅಲ್ಲದಿದ್ದರೂ, ಈ ಪಕ್ಷ ಗೆಲ್ಲುತ್ತದೆ ಎಂದು ಪದೇ-ಪದೇ ಹೇಳಲಾಗುತ್ತಿದೆ. ಅದೇ ಪಕ್ಷಕ್ಕೆ ಮತ ಹಾಕಿಬಿಡುವ ಎಂಬ ಮನಸ್ಥಿತಿಯನ್ನಾದರೂ ಈ ಸಮೀಕ್ಷೆಗಳು ಜನರಲ್ಲಿ ಹುಟ್ಟಿಸುತ್ತವೆ.

ಇದನ್ನೂ ಓದಿ: ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ ವಿಚಿತ್ರ ಮುನ್ಸೂಚನೆ: ಭಾಗ 1

ಇದಕ್ಕೆ ಉದಾಹರಣೆ ಎಂಬಂತೆ, ಕಳೆದ (2019ರ) ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ವಿರುದ್ದ ಆಡಳಿತ ವಿರೋಧಿ ಅಲೆ ಎಂಬುದು ಸ್ಪಷ್ಟವಾಗಿತ್ತು. ಆದರೆ, ಪುಲ್ವಾಮ ದಾಳಿಯ ನಂತರ, ಘಟನೆಯ ಸುತ್ತಲಿನ ಬೆಳವಣಿಗಳಿಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಗಳು ಪ್ರಧಾನ ಮೋದಿ ಅವರನ್ನು ಬಿಂಬಿಸಿದ ರೀತಿಯು ಜನರಲ್ಲಿ ಮತ್ತೆ ಬಿಜೆಪಿ ಪರವಾದ ಒಲವನ್ನು ಹುಟ್ಟುಹಾಕಿತು.

ಅದೇ ರೀತಿಯಲ್ಲಿ ಮಂಡ್ಯ ಕ್ಷೇತ್ರದತ್ತ ಇಂಡಿಯಾವೇ ನೋಡುತ್ತಿವೆ ಎಂಬ ರೀತಿಯಲ್ಲಿ ಕನ್ನಡದ ಸುದ್ದಿವಾಹಿನಿಗಳು ಪ್ರತಿ ದಿನ ಸುದ್ದಿಗಳನ್ನು ಪ್ರಸಾರ ಮಾಡಿದವು. ಇವುಗಳಲ್ಲಿ ಬಹುತೇಕ ಸುದ್ದಿಗಳು ಜೆಡಿಎಸ್‌ ವಿರುದ್ದವೂ ಇದ್ದವು, ಮಾತ್ರವಲ್ಲದೆ, ಸುಮಲತಾ ಪರವಾಗಿ ವಿಭಿನ್ನ ರೀತಿಯಲ್ಲಿ ಸುದ್ದಿಗಳನ್ನೂ ಪ್ರಸಾರ ಮಾಡಲಾಗಿತ್ತು. ಇದೆಲ್ಲದರ ಪರಿಣಾಮವಾಗಿ ಸುಮಲತಾ ಅವರು ನಿರಾಯಾಸವಾಗಿ ಗೆಲುವು ಸಾಧಿಸಿದರು.

ಅದೇ ಚುನಾವಣೆಯಲ್ಲಿ ದೇಶಾದ್ಯಂತ ಮತ ಚಲಾಯಿಸಿದ ಪ್ರತಿ 100 ಭಾರತೀಯರಲ್ಲಿ ಕೇವಲ 35 ಜನರು ಮಾತ್ರ ಬದ್ಧ ಮತದಾರರಾದ್ದರು. ಅವರು ಪ್ರಚಾರ ಪ್ರಾರಂಭವಾಗುವ ಮೊದಲೇ ಯಾವ ಪಕ್ಷಕ್ಕೆ ಮತ ಹಾಕಬೇಕೆಂದು ನಿರ್ಧರಿಸಿದ್ದರು. ಉಳಿದ 65 ಮತದಾರರು ಚುನಾವಣೆಯ ದಿನದ ಹಿಂದಿನ ಕೆಲವು ದಿನಗಳು ಅಥವಾ ವಾರಗಳಲ್ಲಿ ಯಾರಿಗೆ ಮತ ಹಾಕಬೇಕೆಂದು ನಿರ್ಧರಿಸಿದರು ಎಂದು ಲೋಕನೀತಿ ರಾಷ್ಟ್ರೀಯ ಚುನಾವಣಾ ಅಧ್ಯಯನದಲ್ಲಿ ಪ್ರಕಟವಾದ ಪ್ರಾಯೋಗಿಕ ಸಂಶೋಧನೆ ವರದಿ ಹೇಳುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಉಪ ಮುಖ್ಯಮಂತ್ರಿಗೆ ಘೇರಾವ್ ಹಾಕಿ, ಸ್ವ ಕ್ಷೇತ್ರದಿಂದ ವಾಪಸ್ ಕಳುಹಿಸಿದ ಮಹಿಳೆಯರು

ಈ ದೊಡ್ಡ ಸಂಖ್ಯೆಯ ಮತದಾರರು ಕೊನೆಯ ಕ್ಷಣದಲ್ಲಿ ಯಾರಿಗೆ ಮತ ಹಾಕಬೇಕೆಂದು ಚುನಾವಣಾ ಅಲೆ ಯಾರ ಪರವಾಗಿ ಎಂಬುದನ್ನು ಗಮನಿಸಿ ನಿರ್ಧರಿಸುತ್ತಾರೆ. ಆ 65% ಮತದಾರರಲ್ಲಿ 30% ಮತಾದಾರರು ತಾವು ಮತಹಾಕುವ ಅಭ್ಯರ್ಥಿಯೇ ಗೆಲ್ಲಬೇಕು ಎಂದು ಬಯಸುತ್ತಾರೆ. ಅವರು, ಯಾರು ಗೆಲ್ಲುತ್ತಾರೆ ಎಂದು ಪದೇ-ಪದೇ ಹೇಳಲಾಗುತ್ತಿರುತ್ತದೆಯೇ ಅವರಿಗೆ ಮತಹಾಕುತ್ತಾರೆ. ನೇರವಾಗಿ ಹೇಳುವುದಾರೆ ಆ 30% ಮತದಾರರು ಸಂಭವನೀಯ ವಿಜೇತರಿಗೆ ಮತ ಹಾಕುತ್ತಾರೆ ಎಂದು ಅದೇ ವರದಿ ಹೇಳುತ್ತದೆ.

ಯುಪಿಯಂತಹ ಕಡಿಮೆ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಹೆಚ್ಚಿನ ಮತದಾರರು ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಸಂಭವನೀಯ ವಿಜೇತರ ಕಡೆಗೆ ಒಲವು ತೋರುತ್ತಾರೆ. ಇಂತಹ ವಿದ್ಯಾಮಾನವನ್ನು ರಾಜಕೀಯ ವಿಜ್ಞಾನದಲ್ಲಿ ‘ಬ್ಯಾಂಡ್‌ವ್ಯಾಗನ್ ಎಫೆಕ್ಟ್’ ಎಂದು ಕರೆಯಲಾಗುತ್ತದೆ.

ಬಂಗೇರ್‌ಮೌನಂತಹ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಸ್ಥಳೀಯ ನೆಟ್‌ವರ್ಕ್‌ಗಳು, ಮತಗಟ್ಟೆ ಮಟ್ಟದ ಮತದಾನ ದತ್ತಾಂಶ ಹಾಗೂ ಚುನಾವಣಾ ಪೂರ್ವ ಸಮೀಕ್ಷೆಗಳ ಸಹಾಯದಿಂದ ಯಾವ ಮನೆಗಳು ತಮಗೆ ಮತ ಹಾಕಿಲ್ಲ ಎಂಬುದನ್ನು ಗುರುತಿಸುವುದು ಸುಲಭವಾಗುತ್ತದೆ. ಇದು, ವಿಜೇತ ಜನಪ್ರತಿನಿಧಿಗಳು ಮತ್ತು ಮತದಾರರ ನಡುವೆ ‘ಕ್ಲೈಂಟೆಲಿಸಂ’ (ತಮಗೆ ಮತಹಾಕಿದವರಿಗಷ್ಟೇ ಕೆಲಸ ಮಾಡಿಕೊಡುವುದು) ಸೃಷ್ಟಿಯಾಗುತ್ತದೆ. ಇದರಿಂದಾಗಿ, ಬಡವರು ಸಂಭಾವ್ಯ ವಿಜೇತರಿಗೆ ಮತ ಚಲಾಯಿಸದೇ ಇರುವುದು ಬಹಳ ಕಷ್ಟಕರವಾದ ಸಂಧಿಗ್ದತೆಯನ್ನು ಉಂಟುಮಾಡುತ್ತದೆ. ಹೀಗಾಗಿ, ಮತದಾರರು ಗೆಲ್ಲುವ ಸಾಧ್ಯತೆಯಿದೆ ಎಂದು ಭಾವಿಸುವವರಿಗೆ ಮತ ಚಲಾಯಿಸುತ್ತಾರೆ.

ಈ ಬ್ಯಾಂಡ್‌ವ್ಯಾಗನ್ ಪರಿಣಾಮ ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳು ‘ಸಂಭವನೀಯ’ ವಿಜೇತರನ್ನು ಚುನಾವಣೆಯಲ್ಲಿ ನಿಜವಾದ ವಿಜೇತರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್‌ನಿಂದ ಟಿಕೆಟ್

ಒಂದು ಹಾಲ್‌ನಲ್ಲಿ ಕುಳಿತು ಸಜ್ಜುಗೊಳಿಸಿದ ಅಥವಾ ತಪ್ಪು ಅಭಿಪ್ರಾಯಗಳನ್ನು ಒಳಗೊಂಡ ಸಮೀಕ್ಷೆಗಳು ರಾಜಕೀಯದೊಂದಿಗೆ ರಾಜಿ ಮಾಡಿಕೊಂಡ ಮಾಧ್ಯಮಗಳಲ್ಲಿ ವೈಜ್ಞಾನಿಕ ಅಧ್ಯಯನದಂತೆ ಪ್ರಸಾರವಾಗುತ್ತವೆ. ಇವು ಪ್ರತಿ ಕ್ಷೇತ್ರದ ಮತದಾರರ ದೊಡ್ಡ ವರ್ಗದ ಮೇಲೆ ಪ್ರಭಾವ ಬೀರುವ ಅಸ್ತ್ರಗಳಾಗಿರುತ್ತವೆ. ಈ ಸಮೀಕ್ಷೆಗಳು ‘ವಸ್ತುನಿಷ್ಠತೆ’ಯಿಂದ ಕೂಡಿವೆ ಎಂಬ ಹೊದಿಕೆಯನ್ನು ಹೊಂದಿರುವುದರಿಂದ ಮತದಾರರು ಇದನ್ನು ನಂಬುತ್ತಾರೆ ಮತ್ತು ಸುಲಭವಾಗಿ ದಾರಿ ತಪ್ಪುತ್ತಾರೆ.

ಭಾರತೀಯ ಮಾಧ್ಯಮಗಳಲ್ಲಿ ಪ್ರಕಟವಾದ ಹೆಚ್ಚಿನ ಸಮೀಕ್ಷೆಗಳು ನಕಲಿ ಮತ್ತು ಸಂಶಯಾಸ್ಪದವಾಗಿವೆ. ಈ ಸಮೀಕ್ಷೆಗಳು ಅಂತಿಮವಾಗಿ ಗೆಲ್ಲುವವರ ಭವಿಷ್ಯವಾಣಿಗಳಲ್ಲಿ ಸರಿಯಾಗಿರಬಹುದು. ಆದರೆ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ ಎಂದು ಅರ್ಥವಲ್ಲ.

ಮಾಧ್ಯಮಗಳು ಸಮೀಕ್ಷೆಗಳನ್ನು ಪ್ರಕಟಿಸಿದಾಗ, ಈ ಸಮೀಕ್ಷೆಗಳನ್ನು ನಡೆಸಲು ಎಷ್ಟು ವೆಚ್ಚವಾಯಿತು ಮತ್ತು ಅಷ್ಟು ಮೊತ್ತವನ್ನು ಪಾವತಿಸಿದವರು ಯಾರು ಎಂದು ಪ್ರಶ್ನಿಸುವುದು ಬಹಳ ಮಖ್ಯ. ಒಂದು ರಾಜ್ಯದಲ್ಲಿ ಸಮೀಕ್ಷೆಗಳನ್ನು ನಡೆಸಲು ಕೋಟಿ ರೂ.ಗಳಿಗೂ ಮೀರಿ ವೆಚ್ಚವಾಗುತ್ತದೆ. 403 ಕ್ಷೇತ್ರಗಳಿರುವ ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಸಮೀಕ್ಷೆಗೆ ಕನಿಷ್ಟ 7 ಕೋಟಿ ರೂ. ಖರ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಟಿಆರ್‌ಪಿ ಗೀಳಿನಲ್ಲಿರುವ ಯಾವುದೇ ಮಾಧ್ಯಮ ಸಂಸ್ಥೆಗಳು ಅಥವಾ ಯಾವುದೇ ಸಮೀಕ್ಷಾ ಏಜೆನ್ಸಿ ಈ ಸಮೀಕ್ಷೆಗಳನ್ನು ನಡೆಸಲು ಇಷ್ಟು ದೊಡ್ಡ ಮೊತ್ತವನ್ನು ವ್ಯಯಿಸುವುದಿಲ್ಲ ಎಂಬುದು ಸ್ಪಷ್ಟ. ಹೀಗಿದ್ದಮೇಲೆ, ಮಾಧ್ಯಮಗಳು ಈ ಸಮೀಕ್ಷೆಗಳನ್ನು ನಡೆಸಲು ಹಣ ಪಾವತಿಸಿದವರು ಯಾರು? ಇದರರ್ಥ ಯಾವುದೋ ಸಂಸ್ಥೆ ಇವರಿಗೆ ಹಣವನ್ನು ಭರಿಸಿದೆ ಮತ್ತು ಅವರು ಕಠಿಣ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸಿಲ್ಲ ಎಂದು ಅರಿಯಬುಹುದು.

ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ: ಸಚಿವ ಸ್ಥಾನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿಯ ಸ್ವಾಮಿ ಪ್ರಸಾದ್ ಮೌರ್ಯ

ಭಾರತೀಯ ದೂರದರ್ಶನ ಮಾಧ್ಯಮವು ಪ್ರಕಟಿಸಿದ ಪ್ರತಿಯೊಂದು ಸಮೀಕ್ಷೆಯು ಸಂಶಯಾಸ್ಪದವಾಗಿದೆ. ಆದರೆ, ಕೆಲವು ಚುನಾವಣೆಗಳಲ್ಲಿ ಸಮೀಕ್ಷೆಗಳು ಹೇಳಿದ ರೀತಿಯಲ್ಲೇ ಫಲಿತಾಂಶವೂ ಇರುತ್ತದೆ. ಹಾಗೆಂದ ಮಾತ್ರಕ್ಕೆ ಸಮೀಕ್ಷಗಳ ವಿಶ್ವಾಸಾರ್ಹತೆ ಅಥವಾ ದೃಢತೆಯ ಪುರಾವೆಯಲ್ಲ. ಏಕೆಂದರೆ, ಕೆಟ್ಟುಹೋದ ಗಡಿಯಾರವೂ ಕೂಡ ದಿನಕ್ಕೆ ಎರಡು ಬಾರಿ ಸರಿಯಾದ ಸಮಯವನ್ನು ತೋರಿಸುತ್ತದೆ.

ಹೀಗಾಗಿ, ಸಮೀಕ್ಷೆಗಳು ಭಾರತೀಯ ಮತದಾರರ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಬದಲಿಗೆ, ಅವು ಮತದಾರರ ಮತದಾನದ ಮೇಲೆ ಭಾರೀ ಪರಿಣಾಮ ಬೀರುತ್ತವೆ. ಈ ಎಲ್ಲಾ ಕಾರಣಗಳಿಂದಾಗಿ ಚುನಾವಣಾ ಸಮೀಕ್ಷೆಗಳನ್ನು ಮತ್ತು ಅವುಗಳ ಪ್ರಸಾರವನ್ನು ನಿಷೇಧಿಸುವಂತೆ ಸಮಾಜವಾದಿ ಪಕ್ಷವು ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

ಸಮೀಕ್ಷೆಗಳು ಸಮಾಜವಾದಿ ಪಕ್ಷದ ಪರವಾಗಿಲ್ಲ ಎಂಬ ಕಾರಣಕ್ಕೂ ಅಖಿಲೇಶ್‌‌ ಯಾದವ್ ಅವರು ಸಮೀಕ್ಷೆಗಳನ್ನು ನಿಷೇಧಿಸಬೇಕು ಎಂದು ಹೇಳುತ್ತಿರಬಹುದು. ಆದರೆ, ನಾಗರೀಕರಾಗಿ ನಾವು, ಮೇಲಿನ ಎಲ್ಲಾ ಅಂಶಗಳ ಕಾರಣಕ್ಕಾಗಿಯೂ ಸಮೀಕ್ಷೆಗಳನ್ನು ವಿರೋಧಿಸಬೇಕಾಗುತ್ತದೆ.

ಇದನ್ನೂ ಓದಿ: ಉತ್ತರ ಪ್ರದೇಶ: ಪೊಲೀಸರರು ಅತ್ಯಂತ ಪ್ರಾಮಾಣಿಕರು, ಹಣ ತೆಗೆದುಕೊಂಡರೆ ಕೆಲಸ ಮಾಡುತ್ತಾರೆ ಎಂದು ಲಂಚಕ್ಕೆ ಉತ್ತೇಜಿಸಿದ್ದ ಪೊಲೀಸ್ ಅಮಾನತು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹೈದರಾಬಾದ್| ಎಕ್ಸ್‌ಪ್ರೆಸ್‌ವೇನಲ್ಲಿ ನೇಮಕಾತಿ ಪರೀಕ್ಷೆ ಓಎಂಆರ್ ಹಾಳೆಗಳು ಪತ್ತೆ: ತನಿಖೆಗೆ ಆದೇಶ

ನೇಮಕಾತಿ ಪರೀಕ್ಷೆಯ ಮೂಲ ಆಪ್ಟಿಕಲ್ ಮಾರ್ಕ್ ರೆಕಗ್ನಿಷನ್ (ಒಎಂಆರ್) ಹಾಳೆಗಳು ಹೈದರಾಬಾದ್‌ನ ರಸ್ತೆಬದಿಯಲ್ಲಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬಂದ ನಂತರ ತೆಲಂಗಾಣ ಸಾರ್ವಜನಿಕ ಸೇವಾ ಆಯೋಗ (ಟಿಜಿಪಿಎಸ್‌ಸಿ) ತನಿಖೆಗೆ ಆದೇಶಿಸಿದೆ. 2018 ರ ಹಾಸ್ಟೆಲ್...

ಕರೂರ್ ಕಾಲ್ತುಳಿತ ಮೃತರ ಕುಟುಂಬಸ್ಥರಿಗೆ ನೀಡಿದ್ದ ಸರ್ಕಾರಿ ಉದ್ಯೋಗವನ್ನು ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಕರೂರ್ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ ನೀಡಿದ್ದ ತಮಿಳುನಾಡು ಸರ್ಕಾರದ ಆದೇಶವನ್ನು ಮದ್ರಾಸ್ ಹೈಕೋರ್ಟ್ ಸೋಮವಾರ ರದ್ದುಗೊಳಿಸಿದೆ. ಈ ನೇಮಕಾತಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (PIL) ವಿಚಾರಣೆ...

ವಿದ್ಯಾರ್ಥಿಗಳ ಬಂಧನ: ಮತ್ತೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ‘ಕಾಕ್ರೋಚ್ ಜನತಾ ಪಾರ್ಟಿ’

ಪ್ರತಿಭಟನಾಕಾರರ ವಿರುದ್ಧ ಯಾವುದೇ ಪೋಲೀಸ್ ಕ್ರಮ ಕೈಗೊಳ್ಳುವುದಿಲ್ಲ ಎಂಬ ಒಪ್ಪಂದವನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ ಎಂದು 'ಕಾಕ್ರೋಚ್ ಜನತಾ ಪಾರ್ಟಿ' (CJP) ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಎಕ್ಸ್ (X) ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ...

ಜೆನ್ ಝೀ ಪೀಳಿಗೆಯ ಹೋರಾಟ ಮತ್ತು ಮುಂದಿನ ನಡೆ.!

NEET ಪರೀಕ್ಷೆಯ ಅಕ್ರಮ ಹಾಗೂ ಪೇಪರ್ ಸೋರಿಕೆ ವಿರುದ್ಧ 'ಜೆನ್ ಝೀ' (Gen Z) ಯುವ ಸಮೂಹ ನಡೆಸಿದ ಹೋರಾಟವು ಕೇವಲ ಒಂದು ತಾತ್ಕಾಲಿಕ ವಿದ್ಯಾರ್ಥಿ ಹೋರಾಟವಾಗಿ ಉಳಿದಿಲ್ಲ. ಇದು ಪ್ರಭುತ್ವದ ಅಹಂಕಾರವನ್ನು...

ಬಿಹಾರ| ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ಬಳಸಿದ ಪೊಲೀಸ್‌ ಕಾನ್‌ಸ್ಟೆಬಲ್ ಅಮಾನತು

ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜುಲೈ 25 ರಂದು ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಸಮಯದಲ್ಲಿ ಎಕೆ-47 ರೈಫಲ್ ಬಳಸಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ ಎಂದು...

ನಾಳೆ ನನ್ನ ಮಗನೂ ಮೋದಿ ವಿರುದ್ಧ ಮಾತನಾಡಬಹುದು: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ

ಅಸ್ಸಾಂ ಸಚಿವರೊಬ್ಬರ ಮಗಳು ಗುವಾಹಟಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿರುವುದು ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ...

ವಿದ್ಯಾರ್ಥಿಗಳನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು: ಆರ್‌ಎಸ್‌ಎಸ್ ಸಿದ್ಧಾಂತವಾದಿ ಟಿ.ಜಿ. ಮೋಹನ್‌ದಾಸ್ ವಿಕೃತ ಹೇಳಿಕೆ

ನವದೆಹಲಿ: ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳು ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿದ್ದ ಯುವಜನರ ವಿರುದ್ಧ...

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...