Homeಮುಖಪುಟಅತ್ಯಾಚಾರ ಪ್ರಕರಣ: ಕೇರಳ ಬಿಶಪ್ ಖುಲಾಸೆ ತೀರ್ಪಿನಲ್ಲಿ ಗೋಚರಿಸುವ ಪೂರ್ವಗ್ರಹಗಳು

ಅತ್ಯಾಚಾರ ಪ್ರಕರಣ: ಕೇರಳ ಬಿಶಪ್ ಖುಲಾಸೆ ತೀರ್ಪಿನಲ್ಲಿ ಗೋಚರಿಸುವ ಪೂರ್ವಗ್ರಹಗಳು

- Advertisement -
- Advertisement -

ಅಧಿಕಾರಯುತ ಸ್ಥಾನವೊಂದರಲ್ಲಿದ್ದ ವ್ಯಕ್ತಿಯನ್ನು ಅತ್ಯಾಚಾರ ಪ್ರಕರಣದಲ್ಲಿ ದೋಷಮುಕ್ತನಾಗಿ ನೀಡಿದ ತೀರ್ಪಿನ ಬಗ್ಗೆ ಒಂದು ನೋಟ. ತನ್ನ ನಿಯಂತ್ರಣ ಹಾಗೂ ಆಡಳಿತದ ಅಡಿಯಲ್ಲಿರುವ ಒಬ್ಬ ನನ್/ಕ್ರೈಸ್ತ ಸನ್ಯಾಸಿನಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಆ ವ್ಯಕ್ತಿಯ ಮೇಲೆ ಹೊರೆಸಲಾಗಿತ್ತು, ಅದರ ಸೆಷನ್ ಕೇಸ್ ಸಂಖ್ಯೆ 457/2019 ಪ್ರಕರಣದಲ್ಲಿ ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ವಿಚಾರಣೆ ನಡೆಸಿ, ಆತನನ್ನು ಖುಲಾಸೆ ಮಾಡಿದೆ.

ಇದರ ದೂರುದಾರರು ಕೇರಳದ ಕುರವಿಲಂಗಡು ಊರಿನ ಸೆಂಟ್ ಫ್ರಾನ್ಸಿಸ್ ಮಿಷನ್ ಹೋಂನ ಮದರ್ ಸುಪೀರಿಯರ್ ಆಗಿದ್ದರು. ಸೆಂಟ್ ಫ್ರಾನ್ಸಿಸ್ ಮಿಷನ್ ಹೋಂ ಲ್ಯಾಟಿನ್ ಕ್ಯಾಥೋಲಿಕರ ಒಂದು ಪೂಜಾ ಸಮುಚ್ಚಯ ಆಗಿದ್ದು, ಜೀಸಸ್‌ನ ಮಿಷನರಿಗಳಿಗೆ ಸೇರಿದ್ದಾಗಿದೆ. ಆರೋಪಿಯನ್ನು ಲೈಂಗಿಕ ದೌರ್ಜನ್ಯ ಮತ್ತು ದೂರುದಾರರು ಹೆಸರಿಸಿದ ಇತರ ಅಪರಾಧಗಳಿಂದ ಖುಲಾಸೆಗೊಳಿಸಿ ತೀರ್ಪು ನೀಡಲಾಗಿದೆ.

ಈ ಪ್ರಕರಣದ ಆರೋಪಿ ಫ್ರಾಂಕೋ ಮುಲಕ್ಕಲ್ ಜಲಂಧರ ಡಯಾಸಿಸ್‌ನ (ಚರ್ಚ್ ವ್ಯಾಪ್ತಿಗೆ ಸಂಬಂಧಿಸಿದ್ದು) ಬಿಷಪ್ ಆಗಿದ್ದರು, ಅಲ್ಲಿ ಪೂಜಾ ಸಮುಚ್ಚಯದ ಪ್ರಿನ್ಸಿಪಾಲ್(ಪ್ರಮುಖ) ಸ್ಥಾನವನ್ನು ನೆಲೆಗೊಳಿಸಲಾಗಿದೆ. ಈ ಸೆಂಟ್ ಫ್ರಾನ್ಸಿಸ್ ಮಿಷನ್ ಸಂಸ್ಥೆಯು ಜಲಂಧರ್ ಡಯಾಸಿಸ್‌ನ ನೇರ ನಿಯಂತ್ರಣಕ್ಕೆ ಒಳಪಟ್ಟಿತ್ತು. ಈ ಆರೋಪಿಯು ಕೇರಳಕ್ಕೆ ನಿರಂತರ ಭೇಟಿ ನೀಡುತ್ತಿದ್ದರು ಹಾಗೂ ಆ ಕಾನ್ವೆಂಟ್‌ನಲ್ಲಿಯೇ ತಂಗುತ್ತಿದ್ದರು. ಆರೋಪಿಯು, ತನ್ನ ಈ ಭೇಟಿಗಳ ಸಮಯದಲ್ಲಿ ದೂರುದಾರರ ಮೇಲೆ ಹಲವಾರು ದಿನಗಳಲ್ಲಿ ಸತತವಾಗಿ 13 ಸಲ ಬಲಾತ್ಕಾರ ಮಾಡಿದ್ದ ಎಂದು ದೂರುದಾರ ಮಹಿಳೆ ಆರೋಪಿಸಿದ್ದರು.

ಆರೋಪಿಯನ್ನು ದೋಷಮುಕ್ತಗೊಳಿಸಿದ ತೀರ್ಪನ್ನು ನೋಡಿದರೆ, ಒಂದು ಸಂಸ್ಥೆಯ ಮುಖ್ಯಸ್ಥನು ತನ್ನ ಅಧೀನದಲ್ಲಿರುವ ವ್ಯಕ್ತಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಯಾವುದೇ ತಿಳಿವಳಿಕೆ ಅಥವಾ ಸೂಕ್ಷ್ಮತೆ ಇಲ್ಲದೇ ಇರುವುದು ಅದರಲ್ಲಿ ಎದ್ದು ಕಾಣುತ್ತದೆ. ಸಾಕ್ಷ್ಯಗಳು ತೋರಿಸುವುದೇನೆಂದರೆ, ಈ ಲೈಂಗಿಕ ದೌರ್ಜನ್ಯದ ಕೃತ್ಯಗಳು ಪದೇಪದೇ ನಡೆದಿವೆ ಎಂದು. ಆದರೆ ಈ ತೀರ್ಪು ಒಂದು ಧಾರ್ಮಿಕ ಸಂಸ್ಥೆಯಲ್ಲಿ ಬಿಷಪ್‌ನಂತಹ ಉನ್ನತ ಹಾಗೂ ಅಧಿಕಾರಯುತ ಸ್ಥಾನದಲ್ಲಿರುವ ವ್ಯಕ್ತಿಯ ವಿರುದ್ಧ ಒಬ್ಬ ನನ್ ಹೊರಬಂದು ದೂರು ದಾಖಲಿಸಲು ಏನೆಲ್ಲ ಕಷ್ಟ ಪಡಬಹುದು ಎಂಬುದನ್ನು ಗಣನೆಗೇ ತೆಗೆದುಕೊಂಡಿಲ್ಲ. ಇಂತಹ ಅಪರಾಧಗಳ ಮೂಲದಲ್ಲಿ ಯಾವೆಲ್ಲ ಕಾರಣಗಳು ಅಡಗಿರುತ್ತವೆ ಎಂಬುದುನ್ನು ಪರಿಶೀಲಿಸುವ ಗೋಜಿಗೆ ಹೋಗಿಲ್ಲ. ಈ ತೀರ್ಪು ಸಂತ್ರಸ್ತೆಯು ನೀಡಿದ ಸಾಕ್ಷ್ಯಗಳನ್ನು ಮತ್ತು ಅತ್ಯಂತ ಸ್ಪಷ್ಟವಾಗಿ ಗೋಚರಿಸುವ ನಿಜಸಂಗತಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಅಧಿಕಾರದ ದುರ್ಬಳಕೆ ಮತ್ತು ಲೈಂಗಿಕ ದೌರ್ಜನ್ಯಗಳನ್ನು ಎಸಗುವುದಕ್ಕೆ ಸುಲಭವಾಗಿಸುವ ತಳಹದಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಹಾಗೂ ಪರೀಕ್ಷಿಸಿಲ್ಲ. ಇದು ಅಧಿಕಾರದ ಸ್ಥಾನದಲ್ಲಿ ಇರುವ ಬಲಾಢ್ಯರಿಗೆ ಸ್ಪಷ್ಟ ಸಂದೇಶವನ್ನು ನೀಡುತ್ತದೆ; ಅವರು ತಮ್ಮ ಅಧಿಕಾರವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಹಾಗೂ ವಿವಾದಗಳ ಮತ್ತು ಸಾಕ್ಷ್ಯಗಳ ಕಾನೂನಿನ ಜಟಿಲ ವ್ಯವಸ್ಥೆಯ ಹಿಂದೆ ಅವಿತುಕೊಂಡು, ದೋಷಮುಕ್ತರಾಗಬಹುದೆಂದು.

ತೀರ್ಪುಗಳ ವಿರುದ್ಧ ಅಪೀಲ್ ಸಲ್ಲಿಸಬಹುದು, ಅವುಗಳನ್ನು ಬದಲಿಸಬಹುದು. ಅಂದರೆ, ತೀರ್ಪುಗಳು ಕಂಡುಕೊಂಡ ಸಂಗತಿಗಳು ತಪ್ಪಾಗಿರುವ ಸಾಧ್ಯತೆಯೂ ಇರುತ್ತದೆ.

ಇಲ್ಲಿರುವ ಪ್ರಮುಖ ಅಂಶವೇನೆಂದರೆ, ದೂರುದಾರಳಿಗೆ ತೋರಿದ ಅಗೌರವ, ದೂರುದಾರಳ ಸ್ವಾಭಿಮಾನಕ್ಕೆ ಆದ ಅವಮಾನ, ಗಾಯ ಮತ್ತು ಹಾನಿ. ಅವನ್ನೆಲ್ಲ ಅಳಿಸಿಹಾಕಬಹುದೇ ಅಥವಾ ಹಾನಿಯ ನಷ್ಟವನ್ನು ತುಂಬಬಹುದೇ? ನ್ಯಾಯಾಲಯವು ಆ ದೂರುದಾರಳ ಘನತೆಯನ್ನು ಸಾರ್ವಜನಿಕವಾಗಿ ಕಸಿದುಕೊಂಡಿರುವುದು ಸರಿಯೇ?

ಇದನ್ನೂ ಓದಿ: ಕೇರಳ: ಕ್ರೈಸ್ತ ಸನ್ಯಾಸಿನಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ಬಿಷಪ್ ಫ್ರಾಂಕೋ ಖುಲಾಸೆ

ಬಲಾತ್ಕಾರಕ್ಕೆ ಒಳಗಾದ ನಂತರ ಸಂತ್ರಸ್ತೆ ಹೀಗೆ ಇರಬೇಕು, ಹಾಗೆ ಇರಬೇಕು, ಅವರ ನಡತೆ, ಅವರ ಚಹರೆಯ ಹಾವಭಾವಗಳು ಒಂದು ರೀತಿಯಲ್ಲಿ ಇರಬೇಕು ಎಂಬ ತಿಳಿವಳಿಕೆ ಚಾಲ್ತಿಯಲ್ಲಿದೆ. ಸಂತ್ರಸ್ತೆಯು ಸಮಾರಂಭಗಳಲ್ಲಿ ಪಾಲ್ಗೊಂಡಿದ್ದು, ಆ ಸಮಾರಂಭಗಳ ವಿಡಿಯೋದಲ್ಲಿ ಸಂತ್ರಸ್ತೆ ನಗುಮುಖದೊಂದಿಗೆ ಕಾಣಿಸಿಕೊಂಡಿದ್ದಾರೆ ಎಂದು ತೀರ್ಪಿನ ವಿವರಗಳಲ್ಲಿ ಬರೆಯಲಾಗಿದೆ. ಇದು ಹೇಗೆ ಪ್ರಸ್ತುತ? ಅಂದರೆ ಈ ಸೆಷನ್ ನ್ಯಾಯಾಲಯವು, ಒಂದು ಸಾರ್ವಜನಿಕ ಸಮಾರಂಭದಲ್ಲಿ ಅದರ ಪ್ರಮುಖ ಸದಸ್ಯೆಯಾಗಿರುವ ಆ ದೂರುದಾರಳ ಚಹರೆಯ ಹಾವಭಾವ ಹೇಗಿತ್ತು ಎಂಬುದರ ಆಧಾರದ ಮೇಲೆ ಆ ವ್ಯಕ್ತಿಯ ಮೇಲೆ ಬಲಾತ್ಕಾರ ಆಗಿದೆಯೋ ಇಲ್ಲವೋ ಎಂದು ತೀರ್ಮಾನಿಸುವುದೇ? ಒಬ್ಬ ಮಹಿಳೆಯು ಬಲಾತ್ಕಾರಕ್ಕೆ ಒಳಗಾದ ಮೇಲೆ ಹೇಗಿರಬೇಕು ಎಂಬುದರ ಬಗ್ಗೆ ಇರುವ ತಪ್ಪು ಕಲ್ಪನೆಗಳು ಮತ್ತು ಪೂರ್ವಾಗ್ರಹಪೀಡಿತ ಅಭಿಪ್ರಾಯಗಳ ಮೇಲೆ ಈ ತೀರ್ಪು ನಿಂತಂತಿದೆ.

ಈ ತೀರ್ಪು ಕೆಲವು ಇತರ ಸಂಬಂಧಗಳ ಸುಳ್ಳು ಮತ್ತು ಅಸ್ಪಷ್ಟ ಆರೋಪಗಳಿಗೆ ಸೀಮಿತಗೊಳ್ಳದೇ, ದೂರುದಾರಳ ದೈಹಿಕ ಭಾಗಗಳ ವೈದ್ಯಕೀಯ ವರದಿಗಳು ಮತ್ತು ಇತರ ದಾಖಲೆಗಳನ್ನೂ ಪರಿಶೀಲಿಸಲು ಶುರು ಮಾಡುತ್ತದೆ, ಲೈಂಗಿಕ ದೌರ್ಜನ್ಯದ ಕೃತ್ಯಕ್ಕೂ ಇವುಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಈ ತನಿಖೆ ಮಾಡುತ್ತದೆ. ಅದು ದೂರುದಾರಳಿಗೆ ಮೂರನೆಯ ಮೊಲೆತೊಟ್ಟು ಇತ್ತೆ, ಇದೆಯೇ ಅಥವಾ ಆ ಮೊಲೆತೊಟ್ಟನ್ನು ತೆಗೆದುಹಾಕಲು ಆಪರೇಷನ್ ಮಾಡಿಸಿಕೊಂಡಿದ್ದಾರೆಯೇ ಎಂಬುದನ್ನು ಪರೀಕ್ಷಿಸುತ್ತದೆ. ಆ ದೂರುದಾರಳಿಗೆ ಎಷ್ಟು ಮೊಲೆತೊಟ್ಟು ಇದ್ದವು ಎಂಬ ಪ್ರಶ್ನೆ ಹೇಗೆ ಈ ಪ್ರಕರಣಕ್ಕೆ ಪ್ರಸ್ತುತ ಎಂಬ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಅದಕ್ಕೂ ಆರೋಪಿ ಬಲಾತ್ಕಾರ ಎಸಗಿದ್ದಕ್ಕೂ ಎತ್ತಣ ಸಂಬಂಧ?

ನನ್ ಮೇಲೆ ಬಲಾತ್ಕಾರದ ಅಪರಾಧ ಎಸಗಲಾಗಿದೆಯೇ ಇಲ್ಲವೋ ಎಂದು ತೀರ್ಮಾನಿಸಲು, ಅದಕ್ಕೆ ಸಂಬಂಧಿಸದ ದೂರುದಾರಳ ದೈಹಿಕ ಅಂಗಳ ಸಾಕ್ಷ್ಯದ ಪರೀಕ್ಷೆ ಮತ್ತು ಟಿಪ್ಪಣಿಗಳು ಸಂಪೂರ್ಣವಾಗಿ ಅನಗತ್ಯ ಮತ್ತು ಅವಮಾನಕಾರಿಯಾಗಿವೆ.

ಇನ್ನೊಂದು ಅಂಶವೇನೆಂದರೆ, ಮಹಿಳಾ ದೂರುದಾರಳ ಬಳಸಿದ ಭಾಷೆ ಅಥವಾ ಅಲ್ಲಿಯ ಸಂಸ್ಕೃತಿಯನ್ನು ಈ ತೀರ್ಪು ಪರಿಗಣಿಸದೇ ಇದ್ದದ್ದು. ಆ ಕಂಗ್ರಗೇಷನ್‌ನಲ್ಲಿ ದೂರುದಾರಳು ಒಬ್ಬ ನನ್ ಆಗಿದ್ದರ ಹಿನ್ನೆಲೆ, ಅವರು ತಮ್ಮನ್ನು ತಾವು ವ್ಯಕ್ತಪಡಿಸುವ ರೀತಿ, ತಮ್ಮ ದೇಹದ ಮೇಲೆ ಆದ ಆಘಾತ/ಘಟನೆಯನ್ನು ವಿವರಿಸಲು ಅವರಿಗೆ ಇರುವ ನಾಚಿಕೆ ಮತ್ತು ಹಿಂಜರಿಕೆ, ಅವರ ಖಾಸಗಿತನ, ಇವುಗಳಿಗೆಲ್ಲ ಯಾವುದೇ ಪ್ರಾಮುಖ್ಯತೆ ನೀಡಲಾಗಿಲ್ಲ. ತನ್ನನ್ನು ಹಾಸಿಗೆಯನ್ನು ಹಂಚಿಕೊಳ್ಳಲು ಒತ್ತಾಯಿಸಲಾಯಿತು ಎಂದು ನನ್ ಬಳಸಿರುವ ಭಾಷೆ, ಇದರ ಅರ್ಥ, ಆರೋಪಿಯು ಒತ್ತಾಯಪೂರ್ವಕವಾಗಿ ಅವಳೊಂದಿಗೆ ಸಂಭೋಗ ಮಾಡುತ್ತಿದ್ದಾನೆ ಎಂದು ಸ್ಪಷ್ಟವಾಗುತ್ತದೆ. ಆದರೆ ತೀರ್ಪು ಹೇಳುವುದೇನೆಂದರೆ, ದೂರುದಾರಳು, ’ಅವಳನ್ನು ಅವನೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯ ಮಾಡಲಾಯಿತು’ ಎಂದಷ್ಟೇ ಹೇಳಿದ್ದು, ಹಾಗೂ ’ಅವನು ಅವಳನ್ನು ಸತತವಾಗಿ ಬಲಾತ್ಕಾರ ಎಸಗಿದ್ದಾನೆ ಎಂದು ಸ್ಪಷ್ಟವಾಗಿ, ಸ್ಪಷ್ಟವಾದ ಪದಗಳಲ್ಲಿ ಹೇಳಿಲ್ಲ’ ಎನ್ನುತ್ತದೆ. “ಅವನು ನನ್ನ ಮೇಲೆ ಸತತವಾಗಿ ಬಲಾತ್ಕಾರ ಎಸಗಿದ್ದಾನೆ” ಎಂಬುದರ ಬದಲಿಗೆ “ಅವನು ತನ್ನ ಹಾಸಿಗೆಯನ್ನು ಹಂಚಿಕೊಳ್ಳಲು ನನ್ನನ್ನು ಒತ್ತಾಯಿಸಿದ್ದಾನೆ” ಎಂದು ಹೇಳಿದ್ದಾರೆಂಬ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ದೋಷಮುಕ್ತ ಎಂದು ಘೋಷಿಸಲಾಗಿದೆ. ಭಾರತದ ಹೆಚ್ಚಿನ ಭಾಷೆಗಳಲ್ಲಿ ವ್ಯಕ್ತಿಯೊಬ್ಬ ತನ್ನ ಹಾಸಿಗೆಯನ್ನು ಹಂಚಿಕೊಳ್ಳುವಂತೆ ಹೇಳುತ್ತಿದ್ದಾನೆ ಎಂದರೆ ಅವನು ಲೈಂಗಿಕ ಸಂಬಂಧ ಬಯಸುತ್ತಿದ್ದಾನೆ ಎಂದರ್ಥ. ಇಂಗ್ಲಿಷಿನಲ್ಲಿಯೂ, ’ನನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಿಯಾ ಅಂದರೆ ನನ್ನೊಂದಿಯೆ ಮಲಗುವೆಯಾ ಅಂದರೆ ಅದರರ್ಥ ನಾನು ನಿನ್ನೊಂದಿಗೆ ಲೈಂಗಿಕ ಸಂಬಂಧ ಬಯಸುತ್ತಿದ್ದೇನೆ.” ಎಂದಾಗುತ್ತದೆ.

ಮುಜಾಫರ್‌ನಗರ: ಗ್ರಾ.ಪಂ ಅಧ್ಯಕ್ಷ ಕೊಲೆ ಪ್ರಕರಣ- 10 ವರ್ಷಗಳ ಬಳಿಕ ಐವರಿಗೆ ಜೀವಾವಧಿ ಶಿಕ್ಷೆ

ಒಪ್ಪಿಗೆಗೆ ಸಂಬಂಧಿಸಿದಂತೆ, ಬಿಷಪ್ ಒಂದು ಅಧಿಕಾರಯುತ ಸ್ಥಾನದಲ್ಲಿ ಇದ್ದಿದ್ದನ್ನು ಈ ತೀರ್ಪು ಗುರುತಿಸುತ್ತದೆ. ಹಾಗಾಗಿ, ಈ ಅಪರಾಧವನ್ನು ’ಅಗ್ರವೇಟೆಡ್ ರೇಪ್’ (ಸಂತ್ರಸ್ತೆಯ ದೈಹಿಕ ಗಾಯಗಳಿಗೂ ಕಾರಣವಾಗಿ) ಎಂದು ಪರಿಗಣಿಸಬೇಕು ಹಾಗೂ ಸಾಕ್ಷ್ಯದ ಹೊರೆ ಆರೋಪಿಯ ಮೇಲೆ ಇರಬೇಕು.

ಒಪ್ಪಿಗೆಯನ್ನು ಒತ್ತಾಯಿಸಲಾದಾಗ, ಅದು ಎಂತಹ ಒಪ್ಪಿಗೆಯಾಗಿರುತ್ತೆ ಎಂದರೆ ಅದನ್ನು ಒಪ್ಪಿಗೆ ಎನ್ನಲಾಗುವುದಿಲ್ಲ ಅಥವಾ ಅಪರಾಧಿಯು ಅಧಿಕಾರದ ಸ್ಥಾನದಲ್ಲಿ ಇದ್ದಾಗ, ಆ ಸಂತ್ರಸ್ತೆಯು ಆ ಸಂಸ್ಥೆಯಲ್ಲಿ ಇರಬೇಕಾಗುವುದು, ಅಪರಾಧಿಯ ಮನ್ನಣೆಯ ಮೇಲೆ ಅವಲಂಬಿತವಾಗಿರುವಾಗ, ಹಾಗೂ ಸಂತ್ರಸ್ತೆಯು ಭಯಗೊಂಡಿದ್ದಲ್ಲಿ, ಹಲವಾರು ಕಾರಣಕ್ಕೆ ಹೆದರಿರಬಹುದು, ತಾನು ಆ ವ್ಯಕ್ತಿಯ ಅಧೀನದಲ್ಲಿರುವ ಸ್ಥಾನದಲ್ಲಿರುವುದರಿಂದ ಅಥವಾ ಒಪ್ಪಿಗೆ ನೀಡಲೇಬೇಕು ಎಂದು ಅಂದುಕೊಂಡಿದ್ದಾಗ, ಅಥವಾ ಆ ಸಂಸ್ಥೆಯಲ್ಲಿರುವ ಶ್ರೇಣಿಕರಣದ ವ್ಯವಸ್ಥೆಯ ಕಾರಣದಿಂದ, ಅವಳು ತಕ್ಷಣವೇ ಕಿರುಚಿಕೊಳ್ಳದೇ, ಸದ್ದು ಗದ್ದಲ ಮಾಡದೇ ಇದ್ದರೂ ಅಥವಾ ತತ್ತತ್‌ಕ್ಷಣ ದೂರು ದಾಖಲಿಸದೇ ಇದ್ದರೂ ಅಥವಾ ಒಪ್ಪಿಗೆ ನೀಡಿದ್ದರೂ, ಅದನ್ನು ಒಪ್ಪಿಗೆ ಎಂದು ಪರಿಗಣಿಸಲು ಆಗುವುದಿಲ್ಲ.

ಮುಂದಿನ ಅಂಶ, ದೂರುದಾರಳಿಗೆ ಅಥವಾ ಸಾಕ್ಷಿಗಳ ಹೇಳಿಕೆಗಳಿಗೆ ಸೂಕ್ತವಾದ ವಿಶ್ವಾಸಾರ್ಹತೆ ನೀಡದೇ ಇರುವುದು, ಈ ಹಿಂದೆ ಆಗಲೇ ಸ್ಥಾಪಿತವಾಗಿರುವ ಬಲಾತ್ಕಾರದ ಕಾನೂನಿನ ಮಾನದಂಡಗಳಿಗೆ ವಿರುದ್ಧವಾಗಿ, ಈ ತೀರ್ಪು ಇಲ್ಲಿನ ಆರೋಪಿಗೆ ಅನುಕೂಲ ಒದಗಿಸಿದೆ. ಈ ತೀರ್ಪು ಸಂದೇಶಗಳ ಮತ್ತು ಇ-ಮೇಲ್‌ಗಳ ಹರವಿಗೆ ಹೋಗುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಅನ್ನು ತಂದು ಒಪ್ಪಿಸಿಲ್ಲ ಎಂಬುದನ್ನು ಆರೋಪಿಯನ್ನು ದೋಷಮುಕ್ತಗೊಳಿಸಲು ಸಂಬಂಧವಿಲ್ಲದ ಸಾಧನಗಳನ್ನಾಗಿ ಬಳಸಲಾಗಿದೆ.

ಕೊನೆಯದಾಗಿ, ಈ ತೀರ್ಪು ಮಾಡುವುದೇನೆಂದರೆ, ಆರೋಪಿಯ ವಿರುದ್ಧ ದೂರು ದಾಖಲಿಸಲು ಇರುವ ಕಾರಣಗಳನ್ನು ಅಥವಾ ವಿವರಣೆಗಳನ್ನು ಅಥವಾ ಆಧಾರಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ, ಉದಾಹರಣೆಗೆ, ಈ ಬಿಷಪ್ ತುಂಬಾ ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಉನ್ನತ ಸ್ಥಾನಕ್ಕೆ ಏರಿದ್ದರಿಂದ ಆಗಬಹುದಾದ ನಕಾರಾತ್ಮಕ ವೃತ್ತಿಪರ ಪೈಪೋಟಿ ಅಥವಾ ಹಗೆತನ, ಆಂತರಿಕ ರಾಜಕೀಯ, ತಡವಾಗಿ ದೂರು ದಾಖಲಾಗಿದ್ದು, ಸಂಸ್ಥೆಯ ಇತರ ಸದಸ್ಯರು ರಾಜಿ ಮಾಡುವಂತೆ ದೂರುದಾರರಿಗೆ ಹೇಳಿದ್ದು, ಇವೆಲ್ಲವುಗಳನ್ನು ಆರೋಪಿಯನ್ನು ಖುಲಾಸೆಗೊಳಿಸಲು ಅನುಕೂಲಕರ ಅಂಶಗಳನ್ನಾಗಿ ಬಳಸಲಾಗಿದೆ. ಹಾಗೂ ಪ್ರತಿಯೊಂದು ವಿಷಯದಲ್ಲಿ ಪ್ರತಿಕೂಲವಾದ ಊಹೆಯನ್ನು ಸಂತ್ರಸ್ತೆಯ ವಿರುದ್ಧ ಬಳಸಲಾಗಿದೆ.

ಶೀಲಾ ರಾಮನಾಥನ್
ಕನ್ನಡಕ್ಕೆ: ರಾಜಶೇಖರ ಅಕ್ಕಿ


ಇದನ್ನೂ ಓದಿ: ಸನ್ಯಾಸಿನಿ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಖುಲಾಸೆ ವಿರುದ್ಧ ಮೇಲ್ಮನವಿಗೆ ಯೋಜಿಸಿದ ಕೇರಳ ಪೊಲೀಸ್‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. Whatever happened it is absulatly wrong
    Again this case should take it to Suprem Court. Nunes who suffered should get Right Judgement. And the Bishop who spoiled her virginity should get proper punishment as per the law.

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...