Homeಕರ್ನಾಟಕ10 ನಿಮಿಷಗಳಲ್ಲಿ ಆಹಾರ ವಿತರಣೆ ನಿಯಮ ಘೊಷಿಸಿದ ‘ಜೊಮೆಟೊ’; ತೀವ್ರ ವಿರೋಧ

10 ನಿಮಿಷಗಳಲ್ಲಿ ಆಹಾರ ವಿತರಣೆ ನಿಯಮ ಘೊಷಿಸಿದ ‘ಜೊಮೆಟೊ’; ತೀವ್ರ ವಿರೋಧ

- Advertisement -
- Advertisement -

ಆನ್‌ಲೈನ್‌‌ ಆಹಾರ ವಿತರಣಾ ಕಂಪೆನಿ ಜೊಮೊಟೊ ಸಿಇಒ ದೀಪಿಂದರ್‌ ಗೋಯಲ್‌ ಅವರು ಮಾರ್ಚ್ 21ರ ಸೋಮವಾದಂದು, ತಮ್ಮ ಕಂಪನಿಯು ಶೀಘ್ರದಲ್ಲೇ ಹತ್ತು ನಿಮಿಷಗಳಲ್ಲಿ ಆಹಾರ ವಿತರಣೆಯನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ. ಆದರೆ ಈ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಮತ್ತು ಆಹಾರವನ್ನು ವಿತರಣೆ ಮಾಡುವ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಹಲವಾರು ಜನರು ಹತ್ತು ನಿಮಿಷಗಳಲ್ಲಿ ಆಹಾರವನ್ನು ವಿತರಣೆ ಮಾಡಲು ಹೇಗೆ ಸಾಧ್ಯ ಎಂದ ಪ್ರಶ್ನಿಸಿದ್ದಾರೆ. ಕಂಪೆನಿಯ ಈ ನೀತಿಯಿಂದಾಗಿ ವಿತರಣೆ ಮಾಡುವ ಸಿಬ್ಬಂದಿಯ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ.

10 ನಿಮಿಷದ ವಿತರಣೆಯ ಕಲ್ಪನೆಯನ್ನು ಜೊಮಾಟೊಗೆ ಬಂಡವಾಳ ಹೂಡಿಕೆ ಮಾಡಿದ ಕಂಪನಿಯಾದ ಬ್ಲಿಂಕಿಟ್‌‌ ಮೊದಲು ಮುಂದಿಟ್ಟಿತ್ತು. ಹತ್ತು ನಿಮಿಷದಲ್ಲಿ ವಿತರಣೆ ಮಾಡುವ ವ್ಯಾಪಾರಿ ಮಾದರಿಯು ದಿನಸಿ ವಸ್ತುಗಳನ್ನು ವಿತರಣೆ ಮಾಡುವ ಕಂಪೆನಿಗಳಲ್ಲಿ ಸಾಮಾನ್ಯವಾಗಿದೆ.

ಇದನ್ನೂ ಓದಿ: ಜೊಮೊಟೊ ಏಜೆಂಟ್‌ ಹಿಂದಿ ಪ್ರೀತಿ: ತೀವ್ರ ಆಕ್ಷೇಪದ ಬಳಿಕ ಕಂಪನಿ ಕ್ಷಮೆಯಾಚನೆ

ಕಂಪೆನಿಯ ನಿರ್ಧಾರಗಳನ್ನು ಮುಂದಿಡುತ್ತಾ ಮಾತನಾಡಿದ ದೀಪಿಂದರ್ ಗೋಯಲ್, “ಜೊಮಾಟೊ ವಿತರಣಾ ಕಾರ್ಮಿಕರ ಮೇಲೆ ವೇಗವಾಗಿ ತಲುಪಿಸಲು ಯಾವುದೇ ಒತ್ತಡವನ್ನು ಹೇರುವುದಿಲ್ಲ. ವಿತರಣೆಗೆ ಮಾಡಲಾದ ಭರವಸೆಯ ಸಮಯದ ಬಗ್ಗೆ ಅವರಿಗೆ ತಿಳಿಸಲಾಗುವುದಿಲ್ಲ. ಸಮಯ ನಿರ್ವಹಣೆಯನ್ನು ರಸ್ತೆಯಲ್ಲಿ ಮಾಡಲಾಗುವುದಿಲ್ಲ ಮತ್ತು ಇದರಿಂದಾಗಿ ಯಾವುದೆ ಜೀವಕ್ಕೆ ಅಪಾಯವಿಲ್ಲ” ಎಂದು ಹೇಳಿದ್ದಾರೆ.

ಗ್ರಾಹಕರು ತಮ್ಮ ಅಗತ್ಯಗಳಿಗೆ ಅನುಸಾರವಾಗಿ ತ್ವರಿತ ಸೇವೆಯನ್ನು ಬಯಸುತ್ತಿದ್ದಾರೆ ಎಂದು ಗೋಯಲ್ ಹೇಳಿದ್ದು, ಪ್ರಸ್ತುತ ಜೊಮೊಟೊದಲ್ಲಿ ಇರುವ 30 ನಿಮಿಷಗಳ ಸರಾಸರಿ ವಿತರಣಾ ಸಮಯವು ತುಂಬಾ ನಿಧಾನವಾಗಿದ್ದು, ಅದು ತುಂಬಾ ಹಳೆಯ ಮಾದರಿಯಾಗಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಬೆಂಗಳೂರಿನಲ್ಲಿ ಜೊಮೆಟೊ ಕಂಪೆನಿಯಲ್ಲಿ ಆಹಾರ ವಿತರಣೆ ಮಾಡುತ್ತಿರುವ ಮಂಡ್ಯದ ದಲೀಪ್‌, “ಈ ಬಗ್ಗೆ ನಮಗೆ ಇನ್ನೂ ಯಾವುದೆ ನೋಟಿಫಿಕೇಷನ್ ಬಂದಿಲ್ಲ. ಆದರೆ ಹತ್ತು ನಿಮಿಷದಲ್ಲಿ ಆಹಾರ ವಿತರಣೆ ಮಾಡಲು ಸಾಧ್ಯವೆ ಇಲ್ಲ. ಗ್ರಾಹಕರು ಆರ್ಡರ್‌ ಮಾಡಿದ ಆಹಾರ ಹೊಟೆಲ್‌ನಲ್ಲಿ ತಯಾರಾಗಿ ಪ್ಯಾಕ್ ಆಗುವಾಗಲೆ ಹತ್ತು ನಿಮಿಷ ಆಗಿರುತ್ತದೆ. ಉಳಿದಂತೆ ಬೆಂಗಳೂರಿನ ಟ್ರಾಫಿಕ್‌ನಲ್ಲಿ ಗ್ರಾಹಕರನ್ನು ತಲುಪಲು ತುಂಬಾ ಸಮಯ ಹಿಡಿಯುತ್ತದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಯ್ಕಾಟ್ ಚೀನಾ: ಟೀಶರ್ಟ್‌ ಸುಟ್ಟು ಪ್ರತಿಭಟಿಸಿದ ಜೊಮಾಟೊ ಉದ್ಯೋಗಿಗಳು!

ಮಂಗಳೂರಿನಲ್ಲಿ ಜೊಮೆಟೊ ವಿತರಣೆ ಮಾಡುವ ಅನೀಶ್ ಮಾತನಾಡಿ, “ಇದು ಅಪಾಯವನ್ನೂ ತಂದೊಡ್ಡಬಹುದು. ಕಂಪೆನಿಯ ದಂಡಕ್ಕೆ ಹೆದರಿ ವೇಗವಾಗಿ ಅಹಾರ ವಿತರಣೆ ಮಾಡಲು ಹೊರಟರೆ ಅಪಘಾತ ಆಗುವ ಸಾಧ್ಯತೆ ಕೂಡಾ ಇರುತ್ತದೆ. ಈಗಾಗಲೆ ನೀಡಿರುವ 30 ನಿಮಿಷಗಳ ಸಮಯವೇ ಸಾಕಾಗುವುದಿಲ್ಲ. ಅದರಲ್ಲೂ ಹೊಸದಾಗಿ ಜೊಮೊಟೊಗೆ ಕೆಲಸಕ್ಕೆ ಸೇರಿದ ಕಾರ್ಮಿಕರಿಗೆ ಗೂಗಲ್‌ ಲೊಕೇಷನ್ ನೋಡಿಕೊಂಡು ಹೋದರೆ ಈಗ ಇರುವ ಸಮಯವೇ ಸಾಕಾಗುವುದಿಲ್ಲ. ಪ್ರತಿ ವಿತರಣೆಗೆ ದಂಡ ಕಟ್ಟುತ್ತಿದ್ದಾರೆ. ಇನ್ನು ಹತ್ತು ನಿಮಿಷಗಳ ನಿಯಮ ಬಂದರೆ ಅಷ್ಟೆ ಕತೆ” ಎಂದು ಹೇಳಿದ್ದಾರೆ.

ಈ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಸಾಮಾಜಿಕ ಹೋರಾಟಗಾರ್ತಿ, ಪತ್ರಕರ್ತೆ ಸ್ವಾತಿ ಅವರು, “ಬಂಡವಾಳಶಾಹಿ ಕಂಪೆನಿಗಳು ಯಾವ ಮಟ್ಟಿಗೆ ತನ್ನ ಕಾರ್ಮಿಕರನ್ನು ಹಿಂಡಿ ಹಿಪ್ಪೆ ಮಾಡಲು ತಯಾರಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ. ಈಗಾಗಲೆ ಈ ಕಂಪೆನಿಗಳು ತಮ್ಮ ಕಾರ್ಮಿಕರನ್ನು ‘ಪಾಲುದಾರ’ ಎಂದು ಹೇಳುತ್ತಾ ಅವರು ಕಾರ್ಮಿಕರ ಹಕ್ಕುಗಳನ್ನು ನೀಡದೆ ವಂಚಿಸುತ್ತಿದೆ. ಹತ್ತು ನಿಮಿಷದಲ್ಲಿ ಆಹಾರ ವಿತರಣೆ ಎಂಬುವುದು ಅಮಾವನೀಯ ನಡೆಯಾಗಿದೆ. ಸರ್ಕಾರ ಈ ಕಂಪೆನಿಗಳನ್ನು ಹದ್ದುಬಸ್ತಿನಲ್ಲಿ ಇಡಲು ನಿಯಮಗಳನ್ನು ರೂಪಿಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೊಮೊಟೊ ನಿರ್ಧಾರವನ್ನು ಕಾಂಗ್ರೆಸ್ ನಾಯಕ, ಸಂಸದ ಕಾರ್ತಿ ಚಿದಂಬರಂ ಅವರು ವಿರೋಧಿಸಿದ್ದು, ಅವಾಸ್ತವಿಕ ನಿರ್ಧಾರಗಳಿಂದ ವಿತರಣೆ ಮಾಡುವ ಕಾರ್ಮಿಕರನ್ನು ರಕ್ಷಿಸಲು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಾರ್ಗಸೂಚಿಗಳನ್ನು ನಿರೂಪಿಸಲು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವಿತರಣಾ ಕಂಪನಿಗಳಾದ ಸ್ವಿಗ್ಗಿ ಮತ್ತು ಜೊಮಾಟೊವನ್ನು ನಿಯಂತ್ರಿಸುವಂತೆ ಸರ್ಕಾರಕ್ಕೆ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ವಾರದೊಳಗೆ ಎಲ್ಲಾ ಕೆಎಫ್‌ಸಿ ಮಳಿಗೆಗಳಲ್ಲಿ ಕನ್ನಡವಿರಲಿ: ಕರವೇ ತಾಕೀತು

“ಭಾರತದಲ್ಲಿ ಆನ್‌ಲೈನ್‌‌ ವಿತರಣೆ ಮಾಡುವ ಮಾರುಕಟ್ಟೆ(‘ಗಿಗ್ ಆರ್ಥಿಕತೆ)ಯಲ್ಲಿ 1.5 ಕೋಟಿ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು 2.5 ಕೋಟಿಯಿಂದ ಮತ್ತು ದೀರ್ಘಾವಧಿಯಲ್ಲಿ 10 ಕೋಟಿಯವರೆಗೆ ಬೆಳೆಯಲಿದೆ” ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.

“ಕಾರ್ಮಿಕರು ದ್ವಿಚಕ್ರ ವಾಹನವನ್ನು ಓಡಿಸುತ್ತಾರೆ. ಅದು ಅವರ ವೈಯಕ್ತಿಕ ವಾಹನವಾಗಿದ್ದಾಗಿಯೂ, ವಾಣಿಜ್ಯ ವಿತರಣೆಯನ್ನು ಮಾಡುತ್ತಿದ್ದಾರೆ. ಹಿಂಬದಿಯ ಸೀಟ್‌ನಲ್ಲಿ ಅಥವಾ ಕ್ಯಾರಿಯರ್‌ನಲ್ಲಿ ಭಾರಿ ತೂಕವನ್ನು ಸಾಗಿಸುತ್ತಾರೆ. ಈ ಕಾರ್ಮಿಕರಿಗೆ ಯಾವುದೇ ರಕ್ಷಣೆ ಇಲ್ಲ. ಈ ವಾಹನಗಳನ್ನು ವಾಣಿಜ್ಯ ವಿತರಣೆಗೆ ಎಂದು ಯಾವುದೇ ವರ್ಗೀಕರಣವಾಗಿಲ್ಲ. ಅಪಘಾತ ಸಂಭವಿಸಿದರೆ ಪರಿಹಾರ ನೀಡಲು ವಿಮಾ ಕಂಪನಿಗಳು ನಿರಾಕರಿಸುತ್ತವೆ. ಆದ್ದರಿಂದ ಈ ವಿತರಣಾ ಕಂಪನಿಗಳನ್ನು ನಿಯಂತ್ರಿಸಬೇಕು’’ ಎಂದು ಹೇಳಿದ್ದಾರೆ.

ಚಿದಂಬರಂ ಅವರು ಈ ‘ಅವಾಸ್ತವಿಕ ಮತ್ತು ಅವಿವೇಕದ’ ವಿತರಣಾ ಸಮಯವನ್ನು ಹೊಂದಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಇದು ಈ ಕಾರ್ಮಿಕರ ಜೀವನವನ್ನು ದೊಡ್ಡ ಗಂಡಾಂತರಕ್ಕೆ ತಳ್ಳುತ್ತದೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಗೋಯಲ್‌, “10 ನಿಮಿಷದ ವಿತರಣೆಯು, ಈ ಹಿಂದಿನ 30 ನಿಮಿಷದ ವಿತರಣೆಯಂತೆ ಸುರಕ್ಷಿತವಾಗಿರುತ್ತದೆ. ಇದು ನಿರ್ದಿಷ್ಟ ಹತ್ತಿರದ ಸ್ಥಳಗಳಿಗೆ ಮತ್ತು ಜನಪ್ರಿಯ ಪ್ರಮಾಣಿತ ಮೆನುವನ್ನು ಮಾತ್ರ ಹೊಂದಿದೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ. ತಡವಾಗಿ ಅಥವಾ ಸಮಯಕ್ಕೆ ಸರಿಯಾಗಿ ವಿತರಿಸಲು ಆಗದ ಕಾರ್ಮಿಕರಿಗೆ ಯಾವುದೇ ದಂಡ ಇರುವುದಿಲ್ಲ ಮತ್ತು ಸಮಯದ ಮಿತಿಯ ಬಗ್ಗೆ ಅವರಿಗೆ ತಿಳಿಸಲಾಗುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. 10. ನಿಮಿಷದಲ್ಲಿ ಡೆಲಿವರಿ ಮಾಡೋಕೆ ಹೋದ್ರೆ 108 ನಲ್ಲಿ ವಾಪಾಸ್ ಬರ್ಬೇಕಾಗುತ್ತೆ , ಸದ್ಯ ಇಲ್ಲಾ ಎಲ್ಲ ಜೊಮಾಟೋ ಡೆಲಿವರಿ ಬಾಯ್ಸ್ ಇದನ್ನೂ ತಿರಸ್ಕಾರ ಮಾಡಿ ಇದಾರ ವಿರುದ್ಧ ಹೋರಾಟ ಮಾಡ್ಬೇಕು ,

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...