Homeಕರ್ನಾಟಕ‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

‘ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು’: ಪ್ರತಿಭಟನಾಕಾರರ ಆಕ್ರೋಶ

- Advertisement -
- Advertisement -

“ನಮ್ಮ ಆಹಾರ ನಮ್ಮ ಹಕ್ಕು, ಬಾಡು ತಿನ್ನಲಿ ಮಠದ ಬೆಕ್ಕು; ನಿಮ್ಮ ಆಹಾರ ನಿಮ್ಮ ಹಕ್ಕು, ಹಾಲು ಕುಡಿಯಲಿ ಮನೆಯ ಬೆಕ್ಕು, ಬಾಡೇ ನಮ್‌ ಗಾಡು ಬೂದುಗುಂಬಳ ನಿಮ್ಮ ಗಾಡು”- ಹೀಗೆ ಕ್ರಾಂತಿಗೀತೆಯನ್ನು ಹಾಡುವ ಮೂಲಕ ಮಾಂಸಾಹಾರದ ಕುರಿತ ಅಸಹನೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಆಗುತ್ತಿರುವ ಅಡ್ಡಿಯನ್ನು ಪ್ರತಿಭಟನಾಕಾರರು ಖಂಡಿಸಿದರು.

ಅಸ್ಪೃಶ್ಯತೆ, ಜಾತೀಯತೆ, ಅಸಮಾನತೆಗಳ ವಿರುದ್ಧ ದನಿ ಎತ್ತಿದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬೆಂಬಲಿಸಿ ಸಂವಿಧಾನ ಸಂರಕ್ಷಣಾ ಐಕ್ಯತಾ ಸಮಿತಿ (ಕರ್ನಾಟಕ) ವತಿಯಿಂದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಬೆಂಗಳೂರಿನಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥಾ ಮತ್ತು ಬೃಹತ್‌ ಸಮಾವೇಶದಲ್ಲಿ ಬ್ರಾಹ್ಮಣ್ಯದ ವಿರುದ್ಧ ಘೋಷಣೆಗಳು ಮೊಳಗಿದವು. ಮನುವಾದದ ಹಿಡಿತಕ್ಕೆ ಸಿಲುಕು ಬಲಿಪಶುಗಳಾಗುತ್ತಿರುವ ದಲಿತಾದಿ ಶೂದ್ರ ಸಮುದಾಯಗಳ ಯುವಕರನ್ನು ರಕ್ಷಿಸಬೇಕೆಂಬ ಆಶಯ ವ್ಯಕ್ತವಾಯಿತು.

ಕೇಂದ್ರ ರೈಲು ನಿಲ್ದಾಣದಿಂದ ಹಿಡಿದು, ಫ್ರೀಡಂ ಪಾರ್ಕ್‌ವರೆಗೆ ಶಾಂತಿಯುತ ಜಾಥಾ ನಡೆಯಿತು. ಬಳಿಕ ನಡೆದ ಸಮಾವೇಶದಲ್ಲಿ ಚಿಂತಕರು ಮಾತನಾಡಿದರು. ಉರಿಲಿಂಗಿಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಮಾತನಾಡಿ, “ಪೇಜಾವರ ಮಠದ ಸ್ವಾಮೀಜಿಯವರು ನನಗೆ ಬಹಳ ಆತ್ಮೀಯರು. ಅವರು ತೀರಿಕೊಳ್ಳುವ ಮೂರು ತಿಂಗಳ ಹಿಂದೆ ನಮ್ಮನ್ನು ಮೈಸೂರಿನ ಕೃಷ್ಣಧಾಮಕ್ಕೆ ಕರೆದುಕೊಂಡು ಮಾತನಾಡಿಸಿದರು. ಮೈಸೂರಿನ ದಲಿತ ಕೇರಿಗಳಾದ ಅಶೋಕಪುರಂಗೆ, ಗಾಂಧಿನಗರಕ್ಕೆ ಹೋಗಬೇಕೆಂದು ನಿರ್ಧರಿಸಿದ್ದೇನೆ, ನೀವೆಲ್ಲ ನಿಂತು ಸಹಕರಿಸಿ ಎಂದರು. ಪೂಜ್ಯ ಪೇಜಾವರ ಸ್ವಾಮೀಜಿಯವರೇ, ನೀವು ನಮ್ಮ ಅಶೋಕಪುರಂಗಾಗಲೀ, ಗಾಂಧಿನಗರಕ್ಕಾಗಿ ಬರಬೇಕಾದರೆ ನಮ್ಮದೊಂದು ಷರತ್ತಿದೆ. ನೀವು ನಮ್ಮ ಮೊಹಲ್ಲಾಕ್ಕೆ ಬರುವುದಾದರೆ ಬಾಬಾ ಸಾಹೇಬ್‌ ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬರಬೇಕು ಎಂದು ಆಗ್ರಹಿಸಿದೆವು. ಅವರು ಆಗುವುದಿಲ್ಲ ಎಂದರು. ಸಂವಿಧಾನ ಶಿಲ್ಪಿಗೆ ಮಾಲಾರ್ಪಣೆ ಮಾಡುವುದಿಲ್ಲ ಎಂಬುದು ರಾಷ್ಟ್ರದ್ರೋಹ ಅಲ್ಲವಾ?” ಎಂದು ಪ್ರಶ್ನಿಸಿದರು.


ಇದನ್ನೂ ಓದಿರಿ: ರೈತ ಹೋರಾಟಕ್ಕೆ ಒಂದು ವರ್ಷ: ರಾಜ್ಯದಲ್ಲಿ ನಡೆದ ಪ್ರತಿಭಟನೆ ಚಿತ್ರಗಳಲ್ಲಿ ನೋಡಿ


ಈ ದೇಶದ ಸಂವಿಧಾನ ಒಪ್ಪಲ್ಲ ಎಂಬುದು ರಾಷ್ಟ್ರದ್ರೋಹ ಅಲ್ಲವಾ? ಈ ನೆಲದ ಕಾನೂನಿನ ಮುಂದೆ ಯಾವ ಸ್ವಾಮೀಜಿಯು ದೊಡ್ಡವರಲ್ಲ. ಯಾವ ಯತಿಗಳೂ ದೊಡ್ಡವರಲ್ಲ. ಈ ಸಂವಿಧಾನ ದೊಡ್ಡದು. ಪ್ರತಿಮೆಗೆ ಮಾಲಾರ್ಪಣೆ ಮಾಡುವುದು ಬೇಡ ಸ್ವಾಮೀಜಿ, ದಲಿತರು ಕೊಡುವ ಒಂದು ಲೋಟ ಪಾನಕ ಅಥವಾ ಮಜ್ಜಿಗೆಯನ್ನಾದರೂ ಕುಡಿಯಿರಿ ಎಂದೆವು. ನನ್ನಿಂದಾಗದು ಎಂದರು. ಕುರಿ ಫ್ರೈಯೋ, ಚಿಕನ್ ಫ್ರೈಯೋ ಅಲ್ಲ. ಕೇವಲ ಪಾನಕ, ಮಜ್ಜಿಗೆ ಕುಡಿಯಲೂ ಆಗಲ್ಲ ಎನ್ನುವ ಸ್ವಾಮೀಜಿಗಳು ದಲಿತ ಕೇರಿಗೆ ಪಾದಾಯಾತ್ರೆ ಬರುವ ಉದ್ದೇಶವಾದರೂ ಏನು? ಎಂದು ಜ್ಞಾನಪ್ರಕಾಶ್ ಸ್ವಾಮೀಜಿ ಕೇಳಿದರು.

“ಒಂದು ಲೋಟ ಮಜ್ಜಿಗೆಯನ್ನು ತೆಗೆದುಕೊಳ್ಳಲು ಯೋಗ್ಯತೆ ಇಲ್ಲದ ನೀವು, ನಿಮ್ಮ ಪಾದಯಾತ್ರೆ ಬೂಟಾಟಿಕೆಯಲ್ಲವೇ ಎಂದು ಹಂಸಲೇಖರು ಹೇಳಿರುವುದರಲ್ಲಿ ಏನು ತಪ್ಪಿದೆ. ಹೀಗೆ ಕೇಳಿದರೆ ಸಂವಿಧಾನ ವಿರೋಧಿಯೇ, ಜನಾಂಗ ವಿರೋಧಿಯೇ? ಯಾವ ಸಂವಿಧಾನದಲ್ಲಿ ಇದ್ದೀರಿ ನೀವು? ಯಾವ ಸಂವಿಧಾನಕ್ಕೆ ನೀವು ಸೆಲ್ಯೂಟ್ ಮಾಡುತ್ತೀರಿ?” ಎಂದು ಪ್ರಶ್ನಿಸಿದರು.

“ಇಂದು ಕ್ಷಮೆಯನ್ನು ಕೇಳಬೇಕಾದವರು ಯಾರು? ಒಂದು ಪುಟ್ಟ ಮಗು ದೇವಸ್ಥಾನದಲ್ಲಿ ಹೆಜ್ಜೆಹಾಕಿದ್ದಕ್ಕೆ ದಂಡ ಹಾಕಿದಿರಲ್ಲ, ಯಾರು ಯಾರನ್ನು ಕ್ಷಮೆ ಕೇಳಬೇಕು? ಒಂದು ಪ್ಲಾಸ್ಟಿಕ್‌ ಬಕೆಟ್‌ ಮುಟ್ಟಿದ್ದಕ್ಕೆ ಒಬ್ಬ ಗರ್ಭಿಣಿ ಹೆಣ್ಣು ಮಗಳನ್ನು ಒದ್ದು ಸಾಯಿಸಿದಿರಲ್ಲ, ಯಾರು ಕ್ಷಮೆ ಕೇಳಬೇಕು? ದಲಿತ ವಾಚ್‌ ಕಟ್ಟಿದ ಎಂದು ಚೆನ್ನೈನಲ್ಲಿ ಕೈ ಕತ್ತರಿಸಿ ಹಾಕಿದಿರಲ್ಲ, ಯಾರು ಕ್ಷಮೆ ಕೇಳಬೇಕು? ಮೀಸೆ ಬಿಟ್ಟ ಕಾರಣಕ್ಕೆ ದಲಿತನಿಗೆ ಚಾಕು ಹಾಕಿ ಚುಚ್ಚಿದಿರಲ್ಲ, ಯಾರು ಕ್ಷಮೆ ಕೇಳಬೇಕು? ಮಂಗಳೂರಿನಲ್ಲಿ ಪೊಲೀಸ್ ಡ್ರಸ್‌ನಲ್ಲಿದ್ದ ನಮ್ಮ ಹೆಣ್ಣು ಮಗಳನ್ನು ಅಸ್ಪೃಶ್ಯರು ಎಂದು ಹೇಳಿ ಹೊರಗೆ ಕಳಿಸಿದಿರಲ್ಲ, ಯಾರು ಕ್ಷಮೆ ಕೇಳಬೇಕು? ನಿಮ್ಮಂಥ ನೀಚರು ಯಾರಾದರೂ ಜಗತ್ತಿನಲ್ಲಿ ಇದ್ದಾರಾ? ನಾಡಿನ ಬಹುಸಂಖ್ಯಾತರ ಕ್ಷಮೆಯನ್ನು ನೀವೆಷ್ಟು ಕೇಳಬೇಕು” ಎಂದು ಪ್ರಶ್ನೆಗಳ ಸುರಿಮಳೆಗೈದರು.

ಪ್ರೊ.ಹ.ರಾ.ಮಹೇಶ್ ಮಾತನಾಡಿ, “ಬಿಎಸ್‌ಪಿ ಹೊರತುಪಡಿಸಿ ಯಾವ ವಿರೋಧ ಪಕ್ಷವೂ ಹಂಸಲೇಖರ ಪರ ನಿಲ್ಲದಿರುವುದು ವಿಷಾದನೀಯ. ಹಂಸಲೇಖರು ಕ್ಷಮೆ ಕೇಳಿದ ಬಳಿಕವೂ ಅವರಿಗೆ ಮಾನಸಿಕ ಕಿರುಕುಳ ನೀಡಲಾಗಿದೆ. ಯಾಕೆಂದರೆ ಅವರು ಅಬ್ರಾಹ್ಮಣರಾಗಿದ್ದಾರೆ. ಬಸವನಗುಡಿಯ ಬ್ರಾಹ್ಮಣ್ಯ, ಹಂಸಲೇಖ ಅವರ ಮೇಲೆ ಪ್ರಕರಣ ದಾಖಲಿಸಿದೆ. ವಿರೋಧ ಪಕ್ಷಗಳು ಹಂಸಲೇಖರ ಪರ ನಿಂತಿದ್ದರೆ ಪ್ರಕರಣ ದಾಖಲಾಗುತ್ತಿರಲಿಲ್ಲ” ಎಂದು ಅಭಿಪ್ರಾಯಪಟ್ಟರು.


ಇದನ್ನೂ ಓದಿರಿ: ಅಧಿವೇಶನ ಮುಗಿಯುವವರೆಗೆ ಪ್ರಾರ್ಥನಾ ಸಭೆ ನಡೆಸದಂತೆ ಬೆಳಗಾವಿ ಕ್ರಿಶ್ಚಿಯನ್ನರಿಗೆ ಪೊಲೀಸರ ‘ಸ್ನೇಹಪೂರ್ವಕ’ ಎಚ್ಚರಿಕೆ!


ಅಂಬೇಡ್ಕರ್‌ ಅವರನ್ನು ಉಳಿಸಿಕೊಳ್ಳುವುದು ಕೇವಲ ದಲಿತರ ಕೆಲಸವಲ್ಲ. ಸಂವಿಧಾನದ ಉಳಿವಿಗಾಗಿ ಮಾತನಾಡುವವರ ಪರ ನಾವು ನಿಲ್ಲದಿದ್ದರೆ ನಾವು ಸಂವಿಧಾನವನ್ನು ಕಳೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.

ಚಿಂತಕ ಎಲ್‌.ಎನ್‌.ಮುಕುಂದರಾಜ್‌ ಮಾತನಾಡಿ, “ಮಾಂಸ ತಿನ್ನುವವರನ್ನು ರಾಕ್ಷಸರು ಎಂದು ಒಬ್ಬ ಹೆಣ್ಣು ಮಗಳು ಹೇಳಿದ್ದು ನೋಡಿದೆವು. ಹೌದು ನಾವು ರಾಕ್ಷಸರು. ರಾಕ್ಷಸ ಎಂದರೆ ರಕ್ಷಕ. ರಾಕ್ಷಸ ಎಂದರೆ ನೆಲವನ್ನು ಉತ್ತುವವನು ಮತ್ತು ಬಿತ್ತುವವನು” ಎಂದು ವಿಶ್ಲೇಷಿಸಿದರು.

“ವೈದಿಕರ ಮಠ, ಮಂದಿರಗಳನ್ನು ಬಹಿಷ್ಕರಿಸೋಣ. ನಮ್ಮದೇ ದೇವರುಗಳನ್ನು ಪೂಜಿಸೋಣ. ಭಾರತಾಂಭೆಯನ್ನು ಪೂಜಿಸೋಣ” ಎಂದು ತಿಳಿಸಿದರು.

ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಮಾತನಾಡಿ, “ಪ್ರತಿಭಟನೆಯ ವೇಳೆ ಒಬ್ಬ ಪುರೋಹಿತ ಹಂಸಲೇಖರ ಭಾವಚಿತ್ರಕ್ಕೆ ಒದೆಯುತ್ತಾನೆ. ಪುರೋಹಿತ ಎಂಬ ಪದದ ಅರ್ಥವಾದರೂ ಈತನಿಗೆ ಗೊತ್ತಿದ್ದರೆ ಈ ಕೆಲಸವನ್ನು ಮಾಡುತ್ತಿರಲಿಲ್ಲ. ಹೀಗೆ ವರ್ತಿಸುವ ಮೂಲಕ ತನಗೇ ತಾನೇ ಅವಮಾನ ಮಾಡಿಕೊಂಡಿದ್ದಾನೆ. ನೀವು ಮನುಷ್ಯರಾ? ಮನುಷ್ಯರಂತೆ ಆಗಬೇಕೆಂದರೆ ಪೆರಿಯಾರ್‌‌, ಬಸವಣ್ಣ, ಕುಂದ್ಮಲ್ ರಂಗರಾವ್‌ ಅವರಂತೆ ಬ್ರಾಹ್ಮಣ್ಯ ಬಿಟ್ಟು ಹೊರಬನ್ನಿ” ಎಂದರು.

“ಶೂದ್ರ ಯುವಕರು ಬಲಿಪಶುಗಳಾಗುತ್ತಿದ್ದಾರೆ. ಪಕ್ಷಾಂತರಿಗಳು ಸಮುದಾಯಗಳನ್ನು ಬಲಿಕೊಡುತ್ತಿದ್ದಾರೆ. ಹಂಸಲೇಖ ಅವರು ತಪ್ಪು ಮಾತನಾಡಿಲ್ಲ. ಹಂಸಲೇಖರ ಮೇಲೆ ಅಹಂಕಾರದ ಶ್ರೇಷ್ಠತೆಯ ವ್ಯಸನದ ಅಜ್ಞಾನ ದಾಳಿ ಮಾಡಿದೆ” ಎಂದು ಹೇಳಿದರು.

ಚಿಂತಕಿ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, “ಅವರು ದಲಿತ ಕೇರಿಗೆ ಬರಲಿ, ಬಾರದಿರಲಿ ಅಷ್ಟು ಮಹತ್ವ ಕೊಡಬೇಕಾಗಿಲ್ಲ. ಮಾಂಸಾಹಾರವನ್ನು ತಿನ್ನಲು ಕಲಿಸಿದ್ದು ಅವರೇ. ಈಗ ಮಾಂಸಾಹಾರವನ್ನು ಟೀಕಿಸುತ್ತಿದ್ದಾರೆ. ಹಂಸಲೇಖರು ದೊಡ್ಡವರು- ಹೀಗಾಗಿ ಕ್ಷಮೆ ಕೇಳಿದ್ದಾರೆ. ಹಂಸಲೇಖರಿಗೆ ಆಗಿದ್ದು, ಏನು ಮಾಡುತ್ತಿದ್ದೆವೋ ಗೊತ್ತಿಲ್ಲ” ಎಂದು ಹರಿಹಾಯ್ದರು.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಮಲ್ಲಿಕಾ ಘಂಟಿ ಮಾತನಾಡಿ, “ಅಂಬೇಡ್ಕರ್‌ ಅವರು ಅಕ್ಷರ ಭಿಕ್ಷೆ ನೀಡದಿದ್ದರೆ ನಾನು ಯಾರದೋ ಮನೆಯಲ್ಲಿ ಸಗಣಿ ಬಾಚಬೇಕಾಗುತ್ತಿತ್ತು” ಎಂದರು.

ಹಂಸಲೇಖರನ್ನು ಮಹಾಗುರು ಎನ್ನುತ್ತಿದ್ದ ಯಾರೂ ಬಂದಿಲ್ಲ. ಎದೆಗೆ ಬೀಜ ಬಿತ್ತದೆ ತಲೆಗೆ ಬೀಜ ಬಿತ್ತಿದರೆ ಎದೆಯಲ್ಲಿ ಅಂತಃಕರಣ ಹೊಮ್ಮುವುದಿಲ್ಲ. ಕೈಗೆ ತ್ರಿಶೂಲ ಬರುತ್ತದೆ ಅಷ್ಟೇ. ಸಂವಿಧಾನ ಓದುವ ವ್ಯವಧಾನ ಇರದ ಶೂದ್ರ ಹುಡುಗರ ತಲೆಯೊಳಗೆ ಸಗಣಿಯನ್ನು ತುಂಬಲಾಗಿದೆ. ಗರ್ಭಗುಡಿಯೊಳಗೆ ಕಸ ಹೊಡೆಯಲು ಈ ಹುಡುಗರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದಿಸಿದರು.


ಇದನ್ನೂ ಓದಿರಿ: ಹಂಸಲೇಖ ಹೇಳಿಕೆ ಪರವಾಗಿ ಬೆಂಗಳೂರಿನಲ್ಲಿ ಬೃಹತ್‌ ‘ಜನದನಿ’ ರ್‍ಯಾಲಿ


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಈವಾಗ ಉಡುಪಿ ಸ್ವಾಮಿ ವಿಧಿವಶರಾಗಿದ್ದಾರೆ ಈಗ ಅವರ ಬಗ್ಗೆ ಅಂಬೇಡ್ಕರ್ ಆರೋಪ ಮಾಡುವ ಜ್ಞಾನಪ್ರಕಾಶ ಸ್ವಾಮಿಗಳೇ ಈ ಬಗ್ಗೆ ನಿಮ್ಮಲ್ಲಿ ಯಾವುದಾದರೂ ಪುರಾವೆಗಳು ಇವೆಯೇ ಅಥವಾ ಪ್ರಚಾರಕ್ಕಾಗಿ ನೀವು ಸುಳ್ಳು ಹೇಳುತ್ತಿರಬಹುದಲ್ಲವೆ!
    ಯಾಕೆಂದರೆ ಯಾವುದೇ ವೇದಿಕೆಯಲ್ಲಿ ಸ್ವಾಮಿಜಿ ಸಮಕ್ಷಮದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಬಹುದಿತ್ತಲ್ಲವೆ.

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್: ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ‘ಸಂಯುಕ್ತ ಹೋರಾಟ ಸಮಿತಿ’ ತೀವ್ರ ಖಂಡನೆ

"ಬಿಡದಿ ಟೌನ್‌ಶಿಪ್ ಯೋಜನೆಯು ತೀವ್ರ ವಿವಾದದಲ್ಲಿರುವಾಗಲೇ ರೈತರೊಂದಿಗೆ ಯಾವುದೇ ಮಾತುಕತೆ ನಡೆಸದೆ, ಪೊಲೀಸ್ ಬಲಪ್ರಯೋಗದ ಮೂಲಕ ಸರ್ವಾಧಿಕಾರಿ ರೀತಿಯಲ್ಲಿ ಜಂಟಿ ಸರ್ವೆ (JMC) ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ" ಎಂದು...

ಜ್ಞಾನವಾಪಿ, ಮಥುರಾ, ಸಂಭಾಲ್ ದೇವಾಲಯ-ಮಸೀದಿಗಳ ವಿವಾದ : ಸುಪ್ರೀಂ ಕೋರ್ಟ್‌ನ ಮಧ್ಯಸ್ಥಿಕೆ ಪ್ರಸ್ತಾಪ ತಿರಸ್ಕರಿಸಿದ ಹಿಂದೂ-ಮುಸ್ಲಿಂ ಪಕ್ಷಗಳು

ಧಾರ್ಮಿಕ ಸ್ಥಳಗಳ ವಿವಾದಗಳಿಗೆ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದ, ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಇದ್ಗಾ ವಿವಾದ ಮತ್ತು ಸಂಭಾಲ್ ಜಮಾ ಮಸೀದಿ...

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...