Homeಮುಖಪುಟ180 ಪದಗಳಲ್ಲಿ; ಮೇಲೇಳದ ಟ್ರುಥ್ ಸೋಶಿಯಲ್; ಶರಣನಾದ ಕಾಶ್ಮೀರಿ ಅರಸ; ಗಾಂಧಿ ಮೇಲಿನ ದೇಶದ್ರೋಹಕ್ಕೆ 100

180 ಪದಗಳಲ್ಲಿ; ಮೇಲೇಳದ ಟ್ರುಥ್ ಸೋಶಿಯಲ್; ಶರಣನಾದ ಕಾಶ್ಮೀರಿ ಅರಸ; ಗಾಂಧಿ ಮೇಲಿನ ದೇಶದ್ರೋಹಕ್ಕೆ 100

- Advertisement -
- Advertisement -

ಆರಕ್ಕೇರದ ಬಲಪಂಥೀಯರು ಮೆಚ್ಚಿನ ಎರಡು ತಂತ್ರಜ್ಞಾನಗಳು

ತೀವ್ರ ಬಲಪಂಥೀಯರು ಮತ್ತು ಕಾನ್ಸಪಿರೆಸಿ ಥಿಯರಿಗಳನ್ನು ಹೆಚ್ಚು ಅರಸುವವರು (ಆದರಲ್ಲಿಯೂ ವ್ಯಾಕ್ಸೀನ್ ಉಂಟುಮಾಡಲಿರುವ ಅಪಾಯಗಳ ಬಗೆಗೆ) ಇತ್ತೀಚೆಗಷ್ಟೇ ಗೂಗಲ್ ಸರ್ಚ್ ಎಂಜಿನ್ ಬಿಟ್ಟು ‘ಡಕ್‌ಡಕ್‌ಗೋ’ ಕಡೆಗೆ ಹಸ್ತ ಚಾಚಿದ್ದರು. ಗೂಗಲ್‌ನಲ್ಲಿ ಹುಡುಕಿದರೆ ತಮಗೆ ಬೇಕಾದ ಲಿಂಕ್‌ಗಳನ್ನು ಅದು ಆದ್ಯತೆಯ ಮೇರೆಗೆ ಪಟ್ಟಿ ಮಾಡುವುದಿಲ್ಲ, ತನಗೆ ಬೇಕಾದಂತೆ ಅದು ಸೆನ್ಸಾರ್ ಮಾಡತ್ತೆ ಅನ್ನುವುದು ಈ ಜನರ ಆರೋಪ. ನಮಗೆ ಬೇಕಾಗಿರುವ ಸಂಗತಿ ಮತ್ತು ಮಾಹಿತಿಗಳನ್ನು ಮಿಸ್‌ಇನ್ಫರ್‌ಮೇಷನ್ ಹೆಸರಿನಲ್ಲಿ ತಡೆಯುವುದಕ್ಕೆ ಗೂಗಲ್ ಯಾರು ಎಂದು ರೋಶಾವೇಷದಿಂದ ಹೇಳಿದ್ದರು.

ಡಕ್‌ಡಕ್‌ಗೋನಿಂದ ಗೂಗಲ್ ಎದೆ ಢವಢವ ಹೊಡೆದುಕೊಂಡಿರಬಹದೇ ಎಂದರೆ ಹಾಗೇನಿಲ್ಲ. ಡಕ್‌ಡಕ್‌ಗೋನಲ್ಲಿ ಮೂಡುವ ಫಲಿತಾಂಶಗಳನ್ನು ನಿಜವಾಗಿಯೂ ಹುಡುಕಿ ಕೊಡುವುದು ಮೈಕ್ರೋಸಾಫ್ಟ್‌ನ ‘ಬಿಂಗ್’ ಸರ್ಚ್ ಎಂಜಿನ ಅಲ್ಗಾರಿದಮ್. ಅದು ಹಲವು ವರ್ಷಗಳಿಂದ ಇದ್ದರೂ ಗೂಗಲ್‌ ಎದುರು ಸೆಡ್ಡು ಹೊಡೆದು ನಿಲ್ಲಲು ಸಾಧ್ಯವಾಗಿಲ್ಲ. ಇನ್ನು ಇತ್ತೀಚಿಗೆ ರಷ್ಯಾ ದೇಶ ಸುಳ್ಳು ಪ್ರೊಪೋಗಾಂಡದಲ್ಲಿ ನಿರತವಾಗಿರುವುದರಿಂದ ಆ ದೇಶದ ವೆಬ್‌ಸೈಟ್‌ಗಳ ರ‍್ಯಾಂಕ್‌ಅನ್ನು ಕೆಳಕ್ಕೆ ತಳ್ಳುತ್ತೀವೆಂದು ಡಕ್‌ಡಕ್‌ಗೋ ಅಂದದ್ದು, ಬಳಕೆದಾರರನ್ನು ಕೆರಳಿಸಿದೆಯಂತೆ. ದೈತ್ಯ ಟೆಕ್ ಕಂಪನಿಗಳ ರೀತಿಯಲ್ಲಿ ಸೆನ್ಸಾರ್‌ಗೆ ಇಳಿದರೆ ತಮ್ಮ ನಂಬಿಕೆಯೇ ಬುಡಮೇಲಾಗುತ್ತದೆಲ್ಲ ಎಂಬ ಚಿಂತೆ ಅವರದ್ದು. ಸುಳ್ಳೋಪಳ್ಳೋ ಒಟ್ಟಿನಲ್ಲಿ ನಾವು ನಂಬಿದ್ದು ನಮಗೆ ವೇದವಾಕ್ಯ ಅನ್ನುವವರ ಬೆಂಬಲದಿಂದ 3% ಮಾರ್ಕೆಟ್ ಶೇರ್ ಹೊಂದಿರುವ ಡಕ್‌ಡಕ್‌ಗೋ ಅದು ಸೆನ್ಸಾರ್ ಅಲ್ಲ, ಹಂಗಲ್ಲ ಹಿಂಗೆ ಅನ್ನುತ್ತಿದೆ.

ಇನ್ನು ಟ್ವಿಟ್ಟರ್ ಮತ್ತು ಫೇಸ್ಬುಕ್‌ನಿಂದ ಹೊರ ಹಾಕಿಸಿಕೊಂಡಿದ್ದ ಟ್ರಂಪ್, ಇವರುಗಳ ಸಹವಾಸವೇ ಬೇಡ, ಹೊಸ ಸಾಮಾಜಿಕ ಮಾಧ್ಯಮವನ್ನೇ ಕಟ್ಟುತ್ತೇನೆಂದು ಹೊರಟಿದ್ದರು. ಫೆಬ್ರವರಿ ಮೂರನೇ ವಾರದಲ್ಲಿ ಈ ಟ್ವಿಟ್ಟರ್ ವಿರೋಧಿ ಆಪ್ ಬಿಡುಗಡೆಯಾದರೂ ಸದ್ದು ಮಾಡಲು ವಿಫಲವಾಗಿದೆ. ಅತ್ತ ಇದರ ಹರಿಕಾರ ಟ್ರಂಪ್ ಅವರೇ ಅದರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲವಂತೆ. ಮಾರ್ಚ್‌ವರೆಗೂ ಬೆರಳೆಣಿಕೆಯಷ್ಟು ಪೋಸ್ಟ್‌ಗಳನ್ನು ಮಾತ್ರ ಅವರಲ್ಲಿ ಹಾಕಿದ್ದಾರಂತೆ.

ಒಟ್ಟಿನಲ್ಲಿ ನಕಲಿಯಿರಲಿ ಅಸಲಿಯಿರಲಿ ಸ್ವಲ್ಪವೂ ಸೆನ್ಸಾರ್ ಆಗಬಾರದು ಎಂದು ನಂಬಿರುವವರಿಗೆ ಈ ಹೊಸ ಆಪ್‌ಗಳು ಇನ್ನೂ ಆಪದ್ಬಾಂಧವರಂತೆ ಕೆಲಸ ಮಾಡುತ್ತಿಲ್ಲ ಅನ್ನುವುದಂತೂ ಸ್ಪಷ್ಟ!

ಕಾಶ್ಮೀರದ ರಾಜ ಶರಣನಾದನೆಂಬ ಪ್ರತೀತಿ

ಜೀವವ ಕಡಿವಂಗೆ ಇಲ್ಲದ ಪಾಪ ಕತ್ತಿಗುಂಟೇ ಎಲೆ ದೇವ!

ಎಚ್ಚವನಿದ್ದಂತೆ ಅಂಬಿಗೆ ಮುನಿವರೇ?

ಕೊಲ್ಲಿಸಿದ ಅರಸಿದ್ದಂತೆ ಬಂಟಗೆ ಮುನಿವರೇ?

ಎಲೆ ದಿವ್ಯ ಜ್ಞಾನವ ಪಾಲಿಸೋ, ಎನ್ನೊಡೆಯ ನಿಃಕಳಂಕ ಮಲ್ಲಿಕಾರ್ಜುನಾ

ನೀನಿದ್ದಂತೆ ಎನ್ನನೇಕೆ ಕಾಡಿಹೆ?

ಈ ವಚನವನ್ನು ನೀಡಿದವರು ಮೋಳಿಗೆ ಮಾರಯ್ಯ. ‘ನಿಃಕಳಂಕ ಮಲ್ಲಿಕಾರ್ಜುನಾ’ ಅಂಕಿತದಲ್ಲಿ ಬರೆಯುತ್ತಿದ್ದ ಮೋಳಿಗೆ ಮಾರಯ್ಯನವರ ಬಗೆಗಿನ ಕಥೆಯೇ ಬಹಳ ರೋಚಕತೆಯದ್ದು. ಹಿಂದೆ ಕಾಶ್ಮೀರದ ಸವಾಲಾಕ್ಷ ಎಂಬ ಪ್ರದೇಶದ ಮಾಂಡವ್ಯಪುರದ ಅರಸರಾಗಿದ್ದವರು ಮಹದೇವ. ಕರ್ನಾಟಕದಲ್ಲಿ ಪ್ರಾರಂಭವಾದ ಶರಣ ಚಳವಳಿ ದೇಶದ ಉದ್ದಗಲಕ್ಕೆ ಹರಡಿದ್ದ ಕಾಲವದು.

ಶರಣ ಚಳವಳಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಫ.ಗು. ಹಳಕಟ್ಟಿರಯವರು ಹೇಳುವಂತೆ, ಕಾಶ್ಮೀರದೇಶದಲ್ಲಿ ರಾಜನಾಗಿದ್ದ ಮಹದೇವರಾಜನ ಬಳಿ ಕರ್ನಾಟಕದಿಂದ ಹೋಗಿದ್ದ ಶಿವಶರಣರು ದಾಸೋಹ ಬೇಡಿದರಂತೆ. ರಾಜನಿಕ್ಕಿದ ದಾಸೋಹ ಕಾಯಕದಿಂದ ಬಂದಿದ್ದಲ್ಲವಾದ್ದರಿಂದ ಅದನ್ನು ನಿರಾಕರಿಸಿದರಂತೆ. ಇದರಿಂದ ಶಿವಭಕ್ತ ರಾಜನ ಒಳಗಣ್ಣು ತೆಗೆದು ತನ್ನ ರಾಜತ್ವವನ್ನು ತ್ಯಜಿಸಿ ಕರ್ನಾಟಕಕ್ಕೆ ಬಂದು ಶರಣನಾದರಂತೆ.

ಇಂದು ಕಾಶ್ಮೀರದಲ್ಲಿ ಮಾಂಡವ್ಯಪುರ ಇದೆಯೋ ಇಲ್ಲವೋ, ಹೆಸರು ಗೊತ್ತಾಗದಷ್ಟು ಬದಲಾಗಿ ಹೋಗಿದೆಯೋ ಎಂಬಿತ್ಯಾದಿ ಪ್ರಶ್ನೆಗಳನ್ನು ಬದಿಗಿಟ್ಟು ನೋಡಿದರೂ, ವೈದಿಕತೆಯನ್ನು ವಿರೋಧಿಸಿ ಬೆಳೆದ ಶರಣ ಚಳವಳಿ ದೇಶದಾದ್ಯಂತ ಹಬ್ಬಿ ಅರಸನನ್ನು ಸಾಮಾನ್ಯನಾಗಿಸಿದ ಈ ಪುರಾಣದ ಕಥೆ ಸಾಂಕೇತಿಕವಾಗಿಯೂ ಮಹತ್ವವನ್ನು ಪಡೆಯುತ್ತದೆ. ಅನುಭವ ಮಂಟಪಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕವನ್ನು ಮಾಡಿಕೊಂಡು ಬಸವಣ್ಣನವರ ಸಮಕಾಲೀನದಲ್ಲಿ ಸುಮಾರು 800ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಹಾಡಿದ ಮೋಳಿಗೆ ಮಾರಯ್ಯನ ಕತೆ ಅಷ್ಟು ಜನಪ್ರಿಯವಾಗದೆ ಇರುವುದಕ್ಕೆ ಕಾರಣವೇನು?

ಶಂಕರಾಚಾರ್ಯರು ಕಾಶ್ಮೀರಕ್ಕೆ ಹೋಗಿ ದೇವಾಲಯ ನಿರ್ಮಿಸಿದರು ಎಂಬ ಕಥೆ ಇಂದು ದೇಶದ ಉದ್ದಗಲಕ್ಕೆ ಚಾಲ್ತಿಯಿರುವಂತೆ ವೈದಿಕ ಧರ್ಮ ನೋಡಿಕೊಂಡಿದೆ ಆದರೆ ಅದೇ ಸಮಯದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು ಕಾಯಕದಲ್ಲಿ ತೊಡಗಿಸಿಕೊಂಡ ಅರಸನ ಕಥೆಯನ್ನು ವೈದಿಕ ಪಾರಮ್ಯ ಮರೆಸಿದೆ. ಇಂದು ನಾವು ಮತ್ತೆಮತ್ತೆ ಹೇಳಬೇಕಿರುವ ಬದಲಿ ಕಥೆಗಳನ್ನು ಹುಡುಕಿ ಕೆದಕಬೇಕಿದೆ!

ಗಾಂಧಿಯವರ ಮೇಲೆ ಹೊರಿಸಿದ್ದ ದೇಶದ್ರೋಹ ಪ್ರಕರಣಕ್ಕೆ 100!

ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರಾರನ್ನು ಜೈಲಿಗೆ ಅಟ್ಟುವ ಕಾರಣಕ್ಕೆ ಜಾರಿ ಮಾಡಿದ್ದ ಸೆಡಿಶನ್ ಕಾನೂನನ್ನು ಇಂದಿಗೂ ಭಾರತದದಲ್ಲಿ ಉಳಿಸಿಕೊಂಡು ಹಲವು ಸರ್ಕಾರಗಳು ದುರುಪಯೋಗ ಮಾಡಿಕೊಳ್ಳುತಿರುವುದು ಹಳೇ ಕಥೆಯಾಯಿತು. ಅದರಲ್ಲೂ ಬಿಜೆಪಿ ಮುಂದಾಳತ್ವದ ಕೇಂದ್ರ ಸರ್ಕಾರ ಈ ದೇಶದ್ರೋಹ ಕಾನೂನನ್ನು ತನ್ನ ರಾಜಕೀಯ ವಿರೋಧಿಗಳನ್ನು, ಚಿಂತಕರನ್ನು ಹಳಿಯಲು ಎಗ್ಗಾಮುಗ್ಗ ಬಳಸಿದೆ. 2010 ರಿಂದ 2021 ರವರೆಗೆ ಸುಮಾರು 13 ಸಾವಿರಕ್ಕು ಹೆಚ್ಚು ಬಾರಿ ತನ್ನ ನಾಗರಿಕರ ಮೇಲೆ ಪ್ರಭುತ್ವ ದೇಶದ್ರೋಹ ಆರೋಪ ಹೊರಿಸಿದೆ ಎಂದರೆ ಲೆಕ್ಕ ಹಾಕಿಕೊಳ್ಳಿ!

ಬ್ರಿಟಿಷರು ತಂದಿದ್ದ ಈ ಐಪಿಸಿ 124ಎ ಈಗ ಬ್ರಿಟನ್‌ನಲ್ಲಿಯೇ ಕೊನೆಗೆಂಡಿದ್ದರೂ, ಭಾರತದಲ್ಲಿ ಆಳುವವರ ಮೆಚ್ಚಿನ ಅಸ್ತ್ರವಾಗಿರುವುದು ವಿಪರ್ಯಾಸವಲ್ಲದೆ ಮತ್ತೇನು!

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಸರ್ಕಾರದಿಂದ ಸೈನಿಕರು ಹೊರಬರಬೇಕು ಎಂದು ಮಹಾತ್ಮ ತಮ್ಮ ಪತ್ರಿಕೆಯಲ್ಲಿ ಬರೆದಿದ್ದಕ್ಕೆ ಬ್ರಿಟಿಷ್ ಸರ್ಕಾರ ಮಾರ್ಚ್ 1922ರಲ್ಲಿ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿತು. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಗಾಂಧಿಯವರು ನುಡಿದ ಧೈರ್ಯದ ಮಾತುಗಳು ಇಂದಿಗೂ ಆದರ್ಶನೀಯ: “ಸೆಕ್ಷನ್ 124-ಎ ಅಡಿಯಲ್ಲಿ ನನ್ನ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ. ನಾಗರಿಕರ ಸ್ವಾತಂತ್ರ್ಯವನ್ನು ನಿಗ್ರಹಿಸಲು ವಿನ್ಯಾಸಗೊಳಿಸಿರುವ ಭಾರತೀಯ ಅಪರಾಧ ಸಂಹಿತೆಯ ರಾಜಕೀಯ ವಿಭಾಗಗಳಲ್ಲಿ, ಸೆಕ್ಷನ್ 124-ಎನೇ ಬಹುಶಃ ರಾಜ. ವಾತ್ಸಲ್ಯವನ್ನು (affection) ಕಾನೂನಿನಿಂದ ಉತ್ಪಾದಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಒಬ್ಬ ವ್ಯಕ್ತಿ ಅಥವಾ ವ್ಯವಸ್ಥೆಯ ಬಗ್ಗೆ ಒಬ್ಬನಿಗೆ ವಾತ್ಸಲ್ಯವಿಲ್ಲದಿದ್ದರೆ, ಎಲ್ಲಿವರೆಗೆ ಆತ/ಆಕೆ ಹಿಂಸಾಚಾರವನ್ನು ಆಲೋಚಿಸುವುದಿಲ್ಲವೋ, ಉತ್ತೇಜಿಸುವುದಿಲ್ಲವೋ ಅಥವಾ ಪ್ರಚೋದಿಸುವುದಿಲ್ಲವೋ ಅಲ್ಲಿವರೆಗೆ, ತನ್ನ ಅಸಮಾಧಾನಕ್ಕೆ ಪೂರ್ಣ ಅಭಿವ್ಯಕ್ತಿ ನೀಡಲು ಆಕೆ/ಆತ ಮುಕ್ತನಾಗಿರಬೇಕು… ಈ ಹಿಂದಿನ ಯಾವುದೇ ವ್ಯವಸ್ಥೆಗಳಿಗಿಂತ ಭಾರತಕ್ಕೆ ಒಟ್ಟಾರೆಯಾಗಿ ಹೆಚ್ಚು ಹಾನಿ ಮಾಡಿರುವ ಈ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿರುವುದು ಅತ್ಯುನ್ನತ ಮೌಲ್ಯ ಎಂದು ನಾನು ತಿಳಿದುಕೊಳ್ಳುತ್ತೇನೆ.”

ಗಾಂಧಿಯವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಈ ವರ್ಷಕ್ಕೆ 100 ವರ್ಷವಾದರೂ ಅವರ ಮಾತುಗಳು ಇಂದಿಗೂ ಪ್ರಸ್ತುವಾಗಿರುವಂತೆ ಕ್ರೂರ ಪ್ರಭುತ್ವಗಳು ನೋಡಿಕೊಳ್ಳುತ್ತಿವೆ!

– ಗುರುಪ್ರಸಾದ್ ಡಿ ಎನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...