ಭಾರತೀಯ ಪರಿಸ್ಥಿತಿಯಲ್ಲಿನ ವೈವಿಧ್ಯತೆಗಳನ್ನು ಪರಿಗಣಿಸಿ, 2024 ರ ಲೋಕಸಭೆ ಚುನಾವಣೆಯ ನಂತರವೇ ರಾಷ್ಟ್ರೀಯ ಮಟ್ಟದ ರಾಜಕೀಯ ರಂಗವನ್ನು ರಚಿಸಲಾಗುವುದು ಎಂದು ಸಿಪಿಐ-ಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಹೇಳಿದ್ದಾರೆ. ಅವರು ಗುರುವಾರ ಕೇರಳದ ಕಣ್ಣೂರಿನಲ್ಲಿ ನಡೆಯುತ್ತಿರುವ ಸಿಪಿಐ(ಎಂ)ನ 23 ನೇ ರಾಷ್ಟ್ರೀಯ ಅಧಿವೇಶನದ ನಡಾವಳಿಗಳನ್ನು ವಿವರಿಸುತ್ತಿದ್ದರು.
ಚುನಾವಣೆಯ ಮೊದಲು, ರಾಜ್ಯ ಮಟ್ಟದ ರಾಜಕೀಯ ರಂಗಗಳು ಪ್ರಾಯೋಗಿಕ ಅರ್ಥದಲ್ಲಿ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಿದ ಅವರು, “ಪ್ರತಿ ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಪ್ರಬಲವಾಗಿವೆ. 1977 ರಿಂದ, ರಾಷ್ಟ್ರೀಯ ಮಟ್ಟದ ಮೈತ್ರಿಗಳು ಚುನಾವಣೆಯ ನಂತರವೇ ರಚನೆಯಾಗುತ್ತಿವೆ. 1989, 1996, 1998 ಮತ್ತು 2004 ರ ಬೆಳವಣಿಗೆಗಳನ್ನು ನೆನಪಿಸಿಕೊಳ್ಳಿ. ಈ ಎಲ್ಲಾ ವರ್ಷಗಳಲ್ಲಿ, ಚುನಾವಣೆಯ ನಂತರ ಸರ್ಕಾರ ರಚನೆಗೆ ರಾಜಕೀಯ ರಂಗಗಳು ಅಸ್ತಿತ್ವಕ್ಕೆ ಬಂದವು” ಎಂದು ಯೆಚೂರಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಲು ಸಿಪಿಐ-ಎಂ ಪ್ರಯತ್ನಿಸುತ್ತಿದೆ. ಬಿಜೆಪಿಯನ್ನು ಪ್ರತ್ಯೇಕಿಸುವುದು ಮತ್ತು ಸೋಲಿಸುವುದು ಭಾರತೀಯ ಸಂವಿಧಾನ ಮತ್ತು ಗಣರಾಜ್ಯವನ್ನು ರಕ್ಷಿಸುವ ಪ್ರಮುಖ ಕಾರ್ಯವಾಗಿದೆ. ಅದಕ್ಕಾಗಿ ಬಿಜೆಪಿ ವಿರೋಧಿ ಶಕ್ತಿಗಳ ವಿಶಾಲವಾದ ಮೈತ್ರಿ ಇರುತ್ತದೆ.
ಇಂತಹ ಮೈತ್ರಿಗಳು ಕೆಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಜಾತ್ಯತೀತ ಶಕ್ತಿಗಳ ಗರಿಷ್ಠ ಸಜ್ಜುಗೊಳಿಸುವಿಕೆಯನ್ನು ನಾವು ಬಯಸುತ್ತೇವೆ. ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳ ಜೊತೆಗೆ ಸಾಮಾಜಿಕ ಮತ್ತು ಜನಾಂದೋಲನಗಳ ಏಕತೆಯನ್ನು ಬಲಪಡಿಸುವುದು ಮುಖ್ಯವಾಗಿದೆ” ಎಂದು ಯೆಚೂರಿ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, “ಬಿಜೆಪಿಯನ್ನು ಸೋಲಿಸುವ ಪ್ರಕ್ರಿಯೆಗೆ ಅವರ ಕೊಡುಗೆ ಏನು ಎಂಬುದನ್ನು ನಿರ್ಧರಿಸುವುದು ಅವರಿಗೆ ಬಿಟ್ಟದ್ದು. ಕಾಂಗ್ರೆಸ್ ಪಕ್ಷದಿಂದ ನಾಯಕರು ನಿರಂತರವಾಗಿ ಬಿಜೆಪಿಗೆ ಹರಿದು ಹೋಗುತ್ತಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಕಾಂಗ್ರೆಸ್ ಯೋಚಿಸಬೇಕು” ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮೈಸೂರಿನ ಶಕ್ತಿಧಾಮಕ್ಕೆ 5 ಕೋಟಿ ರೂ. ಅನುದಾನ: ಸಿಎಂ ಬೊಮ್ಮಾಯಿ ಘೋಷಣೆ


