Homeಅಂಕಣಗಳುಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

ಎರಡೂವರೆ ಸಾವಿರ ಕೋಟಿ ಹುಣಸಿ ಪಿಕ್ಕ ಅನಕೊಂಡಿರೇನ!

- Advertisement -
- Advertisement -

’ಎರಡೂವರೆ ಸಾವಿರ ಕೋಟಿ ಕೊಟ್ಟರೆ ನಿಮ್ಮನ್ನ ಮುಖ್ಯಮಂತ್ರಿ ಮಾಡುತ್ತೇವೆ’ ಎಂದು ದೆಹಲಿಯಿಂದ ಮಧ್ಯವರ್ತಿಗಳು ಬಂದಿದ್ದರೆಂದು ನಂಬಲನರ್ಹವಾದ, ಆದರೆ ಸದ್ಯದ ಬಿಜೆಪಿ ನೋಡಿದರೆ ನಂಬಬಹುದಾದ ಬಾಂಬನ್ನು ವಿಜಯಪುರದ ಯತ್ನಾಳ್ ಬಿಜೆಪಿ ಮೇಲೆ ಎಸೆದಿದ್ದಾರಲ್ಲಾ. ಕೂಡಲೇ ಆ ಪಾರ್ಟಿಯ ಅಧ್ಯಕ್ಷ ಕಟೀಲು ಯಕ್ಷಗಾನದ ಮಾತುಗಳನ್ನು ನೆನಪಿಸುವಂತೆ, ಯತ್ನಾಳ್ ಮಾತಿಗೂ ಬಿಜೆಪಿಗೂ ಸಂಬಂಧವಿಲ್ಲವೆಂದು ಹಾಸ್ಯ ಮಾಡಿದ್ದಾರಲ್ಲಾ. ಹಾಗದರೆ ಯತ್ನಾಳ್ ಯಾವ ಪಾರ್ಟಿಯಲ್ಲಿದ್ದಾರೆ? ದೆಹಲಿಯಿಂದ ಬಂದ ದಲ್ಲಾಳಿಗಳು ನಿಮ್ಮನ್ನ ಜೆಡಿಎಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಅಥವಾ ಕಾಂಗ್ರೆಸ್‌ನಿಂದ ಮುಖ್ಯಮಂತ್ರಿ ಮಾಡುತ್ತೇವೆ ಎಂದಿದ್ದರೆ ಯತ್ನಾಳ್ ಮಾತಿಗೂ ನಮ್ಮ ಪಾರ್ಟಿಗೂ ಸಂಬಂಧವಿಲ್ಲ ಅನ್ನಬಹುದಿತ್ತು. ಇದಕ್ಕಿಂತ ತಮಾಷೆಯ ಮಾತ್ಯಾವುದೆಂದರೆ ಅಷ್ಟು ಹಣವನ್ನು ಹೇಗೆ ಇಡುವುದು, ಸಂಗ್ರಹಿಸುವುದು ಎಂಬ ದೂಡ್ಡ ಪ್ರಶ್ನೆ ಯತ್ನಾಳ್‌ರಿಂದ ಹೊರಬಿದ್ದಿದೆ. ನುರಿತ ರಾಜಕಾರಣಿಗಳ ಪ್ರಕಾರ 2500 ಸಾವಿರ ಕೋಟಿ ವಸೂಲಿ ಹಲವಾರು ಕಂತಿನಿಂದ ಸಂದಾಯವಾಗುತ್ತದೆ. ಪಿ.ವಿ ನರಸಿಂಹರಾಯ ವಿಶ್ವಾಸ ಮತ ಗಳಿಸಲು ಕರ್ನಾಟಕದಿಂದ ತರಿಸಿಕೂಂಡ ಹಣದ ಬಗ್ಗೆ ಕೇಳಿದ್ದರೆ ಯತ್ನಾಳ್‌ಗೆ ಉತ್ತರ ಸಿಗುತ್ತಿತ್ತಂತಲ್ಲಾ ಥೂತ್ತೇರಿ.

******

ಯತ್ನಾಳರ ಮಾತಿಗೆ ಮತ್ತೂಂದು ಕುಚ್ಯೋದ್ಯದ ಸಾಕ್ಷಿ ಒದಗಿಸುವುದಾದರೆ, ಸರ್ಕಾರಿ ಹುದ್ದೆ ನೀಡಲು ಸರಕಾರದ ಕೆಲವು ಪ್ರಮುಖರಿಂದಲೇ ಕೋಟಿಕೋಟಿ ಹಣ ಸಂಗ್ರಹ ಮಾಡಿದ ಹಗರಣ ಇಡೀ ಕರ್ನಾಟಕವನ್ನೇ ಅಲ್ಲೋಲ ಕಲ್ಲೋಲ ಮಾಡಿದೆಯಂತಲ್ಲಾ. ಈ ಸಂದರ್ಭದಲ್ಲಿ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ಹಿಂದಿ ಸಿನಿಮಾದಲ್ಲಿ ಸಮುದ್ರ ದಡದಲ್ಲಿ ಹೆಲಿಕಾಪ್ಟರಲ್ಲಿ ಇಳಿಯುವ ಡಾನ್ ಒಬ್ಬ, ಮತ್ತೊಂದು ಕಡೆಯಿಂದ ಬಂದವನಿಂದ ಸೂಟ್‌ಕೇಸ್ ಪಡೆದು ಮತ್ತೆ ಹೆಲಿಕಾಪ್ಟರ್ ಹತ್ತಿ ಮಾಯವಾದ ದೃಶ್ಯವನ್ನ ನೆನಪಿಸಿದರಂತಲ್ಲಾ. ಕರ್ನಾಟಕದ ಹಗರಣದ ಬಗ್ಗೆ ಒಂದಾದರೂ ಮಾತನಾಡಿದ್ದರೆ ಶಾ ಭೇಟಿ ಸಂಶಯಕ್ಕೊಳಪಡುತ್ತಿರಲಿಲ್ಲವೆಂಬುದು
ಒಂದಾಣಿಯಷ್ಟು ಮಾನವನ್ನು ಇನ್ನೂ ಉಳಿಸಿಕೂಂಡಿರುವ ಬಿಜೆಪಿ ಹಿರಿಯರ ಮಾತಾಗಿರುವಾಗಲೆ, ಜೆಡಿಎಸ್‌ನ ಕುಮಾರಸ್ವಾಮಿಯವರು ಪಿಎಸ್‌ಐ ನೇಮಕಾತಿ ಅವ್ಯವಹಾರದ ಕಿಂಗ್‌ಪಿನ್ ಯಾರೆಂದು ನಾನು ಹೇಳಿದರೆ ಕ್ಷಣಮಾತ್ರದಲ್ಲಿ ಬಾಬರಿ ಮಸೀದಿ ಉರುಳಿಸಿದಂಗೆ ಬಿಜೆಪಿ ಸರಕಾರ ಉರುಳಿಹೋಗುತ್ತದೆ ಎಂದುಬಿಟ್ಟಿದ್ದಾರಲ್ಲಾ. ಆದರೆ ಕುಮಾರಣ್ಣ ಎಂದಿನಂತೆ ಕಿಂಗ್‌ಪಿನ್ ಹೆಸರೇಳಲ್ಲ, ಕೇಳಿದರೆ ಸಮಯ ಬಂದಾಗ ಹೇಳುತ್ತೇನೆ ಎನ್ನುತ್ತಾರೆ. ಆ ಸಮಯ ಬರುವುದು ಸರಕಾರದ ಅವಧಿ ಮುಗಿದ ಮೇಲೆ, ಬಹುಶಃ ಚುನಾವಣಾ ಭಾಷಣದಲ್ಲಿ ಅಥವ ಅದೂ ಮುಗಿದ ಮೇಲೆ ಬರಬಹುದು. ಆದ್ದರಿಂದ ಕುಮಾರಣ್ಣನ ಕಿಂಗ್‌ಪಿನ್ ಬೆದರಿಕೆಗೆ ಯಾರೂ ಹೆದರಿಲ್ಲವಂತಲ್ಲಾ ಥೂತ್ತೇರಿ

ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ: ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ | Naanu gauri

******

ಯತ್ನಾಳ್ ಆರೋಪಕ್ಕೆ ಎಡೂರಪ್ಪನವರ ಮಗ ಎಗರಿಬಿದ್ದರಂತಲ್ಲಾ. ಅಲ್ಲದೆ, ಆಡಳಿತ ಮತ್ತು ವಿರೋಧ ಪಕ್ಷದ ಮಾತಿಗೆ ಮಣಿದು ಸದ್ಯದ ಹಗರಣಗಳಿಂದ ಕರ್ನಾಟಕದ ಗಮನವನ್ನು ಡೈವರ್ಟು ಮಾಡಲು ಸರಕಾರ ಯತ್ನಾಳ್ ಹೇಳಿಕೆಯನ್ನು ತನಿಖೆ ಮಾಡಲು ಆಯೋಗವೊಂದು ರಚನೆಯಾದರೆ, ಅದರ ಮುಂದೆ ಹಾಜರಾಗಿ ಹೇಳಿಕೆ ಕೊಡುವುದಕ್ಕೆ ಕಿಂಚಿತ್ತೂ ಅಂಜಿಕೆ ಯತ್ನಾಳ್‌ರಿಗಿಲ್ಲಾವಂತಲ್ಲಾ. ಒಂದು ವೇಳೆ ತನಿಖಾ ತಂಡ ರಚನೆಗೂಂಡು ವಿಜಯಪುರಕ್ಕೆ ಬಂದು ಎಮ್ಮೆ ಕೊಟ್ಟಿಗೆಯಲ್ಲಿ ಹಾಲಿಂಡುತ್ತಿರುವ ಯತ್ನಾಳರನ್ನ ಹಿಗ್ಗಾಮುಗ್ಗಾ ಪ್ರಶ್ನಿಸಿತು ಅನ್ನಿ ಆಗ,

“ತಮ್ಮ ಹೆಸರೇನ್ರಿ?”.

“ಬಸನಗೌಡ ಪಾಟೀಲ್ ಯತ್ನಾಳ್ ಅಂತ, ಯಮ್ಮಿ ಬೇಕಿತ್ತೇನ್ರಿ?”.

“ಇಲ್ಲ”.

“ಮತ್ತ ಕ್ವಾಣ ಬೇಕಿತ್ತೆನ?”.

“ಇಲ್ಲ”.

“ಗಬ್ಬದ ಯಮ್ಮಿ ಬೇಕಿದ್ರ ನೋಡ್ರಿ, ಅದೈತಿ. ಲಕ್ಷದ ಮ್ಯಾಲಾಕ್ಯತಿ. ಒಂದ ಹೂತ್ತಿಗೆ ಹತ್ತ ಲೀಟ್ರು ಹಾಲು ಕರಿತೈತೆ. ಆಂದ್ರ ದಿನ ಇಪತ್ತ ಲೀಟ್ರು. ಒಂದು ಲೀಟ್ರು ಹಾಲು ಮುವ್ವತ್ತು ರೂಪಾಯಂದ್ರ ಇಪ್ಪತ್ತು ಇಂಟು ಮೂವ್ವತ್ತು ಏಟಾತು ಮತ್ತ ಡೈರಿ ಹಾಲಿಗ ಲೀಟ್ರಗ ನಲವತ್ರ ಮಟ ಐತಿ”.

“ರೀ ನಾವು ಹಾಲಿನ ವ್ಯಾಪಾರದೊರಲ್ಲ”.

“ಮತ್ತ ಯಾರಂತ ಹೇಳ್ರಿ ಲಗೂನ, ಯಮ್ಮಿಗೆ ಹಿಂಡಿ ಹಾಕಬೇಕು”.

“ನಾವು ತನಿಖಾಧಿಕಾರಿಗಳು”.

“ದನ, ಯಮ್ಮಿ, ಕೊಟಗಿ ಹಿಂಡಿ ತನಿಖ ಮಾಡುವುರೇನು”.

“ನಿಮ್ಮನ್ನೆ ತನಿಖೆ ಮಾಡಕ್ಕೆ ಬಂದಿದ್ದೀವಿ”.

“ನನ್ನನ್ನು ತನಿಖೆ ಮಾಡ್ತಿರೇನು, ಬಪ್ಪರ ಮಕ್ಕಳ, ಮಾಡ್ರಲ”.

“ನಾವು ಸಿಐಡಿ ಅಧಿಕಾರಿಗಳು”.

“ನನಗ ಗುರುತಿಲ್ಲೇನು, ಏನ ತನಿಖಿ ಮಾಡುವುರದಿರಿ ಹೇಳ್ರಲ”.

“ನಿಮ್ಮನ್ನ ಮುಖ್ಯಮಂತ್ರಿ ಮಾಡ್ತಿವಿ. ಎರಡೂವರೆ ಸಾವಿರ ಕೋಟಿ ಕೂಡಿ ಅಂತ ನಿಮ್ಮನ್ನ ಕೇಳಿದ್ರ?”

“ಹೌದ್ರಿ”.

“ಯಾರವುರು?”.

“ಯಾರಿಗೊತ್ತರಿ”.

“ಎಲ್ಲಿಂದ ಬಂದಿದ್ರು?”.

“ಡೆಲ್ಲಿಯಿಂದ ಅಂತ ಹೇಳಿದ್ರು”.

“ಹೆಸರೇನವುರದು”.

“ಗೊತ್ತಿಲ್ರಿ”.

“ನಿಮ್ಮತ್ರಕೇ ಯಾಕೆ ಬಂದ್ರು?”.

“ನಾನು ವಾಜಪೇಯಿ ಸಂಪುಟದಾಗ ಮಂತ್ರಿಯಾಗಿದ್ನಿ. ನಾನು ಎತ್ತರಕ್ಕೆ ಕೆಂಪಗೆ ಸಿಂದೂರ ಲಕ್ಷ್ಮಣನಂಗಿದ್ದಿನಿ. ಅದೂ ಅಲ್ದೆ ಹಿಂದೂವಾದಿ ಭಾಷಣಕಾರ. ಬಿಜಾಪುರದ ಸುಲ್ತಾನರ ನಾಡಿನಿಂದ ಬಂದವ. ನನ್ನ ನೋಡಿದ್ರೆ ಸಾಬರಿಗೆ ಅಂಜಿಕಿ ಬರತೈತಿ. ನಾನು ಕೇಂದ್ರ ಮಂತ್ರಿಯಾಗಕ್ಕೆ ಇವೆಲ್ಲ ಕಾರಣದಾವು. ಅಂಗ ರಾಜ್ಯದ ಮುಖ್ಯಮಂತ್ರಿಯಾಗಕ್ಕು ಬೇಷದಿನಿ ಅಂತ ಯಾರೊ ಕೇಳಿಕೂಂಡು ಬಂದಿದ್ರು”.

“ಏನು ಕೇಳಿದ್ರು?”

“ನಿಮ್ಮನ್ನ ರಾಜ್ಯದ ಮುಖ್ಯಮಂತ್ರಿ ಮಾಡ್ತಿವಿ ಅಂದ್ರು”.

“ಅದಕೆ ನೀವೇನೇಳಿದ್ರಿ?”.

“ಮಾಡ್ರಲ ಅಂದ್ನಿ”.

“ಅದಕವುರೇನೇಳಿದ್ರು?”.

“ಎರಡೂವರೆ ಸಾವಿರ ಕೋಟಿ ಕೂಡಿ ಅಂದ್ರು.

“ಅದಕ್ಕೆ ನೀವೇನಂದ್ರಿ?”.

“ಅಲ್ಲಲೇ ಮಕ್ಕಳ ಎರಡೂವರೆ ಸಾವಿರ ಕೋಟಿ ಅಂದ್ರೆ ಏನು ಹುಣುಸಿ ಪಿಕ್ಕ ಅನಕೊಂಡಿರೇನು? ಅಷ್ಟು ರ್‍ವಕ್ಕ ಯಂಗ ತುಗಂಡೋಕ್ಕಿ? ಎಲ್ಲಿ ಮಡಗತಿರೀ? ಗೋದಾಮೆಲೆ ಸಿಕ್ಕಿಬಿದ್ರ ಯಾವ ರ್‍ವಕ್ಕ ಅಂತ ಹೇಳತಿ. ಯಾರದು ಅಂತ ಹೇಳತಿರಿ? ಅಂತ ಪ್ರಶ್ನಿ ಮ್ಯಾಲೆ ಪ್ರಶ್ನಿ ಹಾಕಿದಿನ್ರಿ. ಅವತ್ತು ಹೋದ ಮಕ್ಕಳು ಮತ್ತ ವಳ್ಳಿ ನನ್ನ ಸನೇಕ ಬರಲಿಲ್ಲರಿ. ಆ ನಂತರ ಎರಡೂವರಿ ಸಾವಿರ ಕೋಟಿ ಯಾರು ಕೊಟ್ರು, ಯಾರು ಮುಖ್ಯಮಂತ್ರಿಯಾದ್ನೊ, ನನಗೆನ ಖರಿ ಗೊತ್ತಿಲ್ರಾ ಎಂದಾಗ ಅಲ್ಲಿಗೆ ತನಿಖೆ ಮುಗಿಯಿತಂತಲ್ಲಾ.
ಥೂಥೂ ಥೂತ್ತೇರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಕೊರೊನಾ ಅಲೆ ಬಿಜೆಪಿ ಒಂದೇ ತರ ಕಾಣುತ್ತಿವೆಯಲ್ಲಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...