ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮಸಿ ಎರಚಿದ ಮೂವರು ಬಿಜೆಪಿ ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯುತ್ತಿದ್ದ ರೈತ ಸಂಘದ ಸಮಾಲೋಚನಾ ಸಭೆಗೆ ನುಗ್ಗಿದ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಾ, ರೈತ ಹೋರಾಟಗಾರರಾದ ರಾಕೇಶ್ ಟಿಕಾಯತ್, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿಯವರ ಮೇಲೆ ಹಲ್ಲೆ ನಡೆಸಿ ಮಸಿ ಬಳಿದಿರುವ ಘಟನೆ ಜರುಗಿದೆ.
ಕವಿತಾ ಕುರುಗಂಟಿಯವರು ಮಾತನಾಡುತ್ತಿದ್ದಾಗ ಕೆಲವರು ತೆಲುಗಿನಲ್ಲಿ ಮಾತನಾಡುವುದಕ್ಕೆ ಆಕ್ಷೇಪಣೆ ಮಾಡಿ ಜಗಳ ಶುರು ಮಾಡಿದರು. ನಂತರ ಮೋದಿಗೆ ಜೈಕಾರ ಹಾಕುತ್ತ ಏಕಾಏಕಿ ನುಗ್ಗಿದ ಹಿಂದುತ್ವ ಗೂಂಡಾಗಳು ಸಿಕ್ಕ ಸಿಕ್ಕವರ ಮೇಲೆ ಮಸಿ ಎರಚಿದರು. ವೇದಿಕೆಯ ಮೇಲಿದ್ದ ಮುಖಂಡರಿಗೆ ಹಲ್ಲೆ ನಡೆಸಿದರು. ಕುರ್ಚಿ ಎಸೆದು ದಾಂಧಲೆ ನಡೆಸಿದರು ಎಂದು ಸಭೆಯಲ್ಲಿ ಭಾಗವಹಿಸಿದ್ದವರು ಮಾಹಿತಿ ನೀಡಿದ್ದಾರೆ.
ರಾಕೇಶ್ ಟಿಕಾಯತ್, ಅನಸೂಯಮ್ಮ, ಚುಕ್ಕಿ ನಂಜುಂಡಸ್ವಾಮಿ ಮೇಲೆ ಹಲ್ಲೆ: ಮೋದಿ, ಮೋದಿ ಎಂದು ಘೋಷಣೆ ಕೂಗಿದ ಗೂಂಡಾ ಹಲ್ಲೆಕೋರರು.#rakeshtikait @RakeshTikaitBKU pic.twitter.com/DGXcHSQcWe
— Naanu Gauri (@naanugauri) May 30, 2022
ಹೋರಾಟಗಾರ್ತಿ ಅರಳಾಳು ಅನಸೂಯಮ್ಮನವರು ತಮ್ಮ ಹಾಗೂ ಇತರರ ಮೇಲಿನ ಹಲ್ಲೆಯ ಕುರಿತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಗಾಂಧಿಭವನಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದಾರೆ. ಬಂಧಿತರನ್ನು ಬಿಜೆಪಿ ಕಾರ್ಯಕರ್ತರು ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವು ಸ್ಥಳದಲ್ಲಿ ಭದ್ರತೆಯನ್ನು ಒದಗಿಸಿಲ್ಲ ಎಂದು ರೈತ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ. “ಇಲ್ಲಿ ಸ್ಥಳೀಯ ಪೊಲೀಸರು ಯಾವುದೇ ಭದ್ರತೆಯನ್ನು ಒದಗಿಸಿಲ್ಲ. ಗೂಂಡಾಗಳು ಸರ್ಕಾರದ ಜೊತೆ ಶಾಮೀಲಾಗಿ ಈ ಕೃತ್ಯ ಎಸಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ಅಲ್ಲಿ ಇದ್ದ ಪೊಲೀಸರು ಇದನ್ನು ತಡೆಯದೆ ಮೂಕ ಪ್ರೇಕ್ಷಕರಾಗಿದ್ದರು. ತದನಂತರ ಕೆಲ ಗೂಂಡಾಗಳನ್ನು ಬಂಧಿಸಲಾಗಿದೆ. ಈಗ ಮತ್ತೆ ಸಭೆ ಮುಂದುವರಿಯುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?
ಮೋದಿ ಬಕ್ತರ ಈ ಗೂಂಡಾಗಿರಿ ಕಂಡನಾರ್ಹ.
BJP ಕಾರ್ಯಕರ್ತರು ಅನ್ನೋದಕ್ಕೆ ಸಾಕ್ಷಿ ಇದೆಯೇ ನಿಮ್ಮ ಬಳಿ ,ಯಾವುದೇ ವಿಷಯ ಪೂರ್ವಗ್ರಹಕ್ಕೀಡಾಗಿ ಹಾಕೋದು ಅಕ್ಷಮ್ಯ ಅಪರಾಧ