Homeಮುಖಪುಟ‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ...

‘ಮಾರಿ ಸೆಲ್ವರಾಜ್‌‌’ ಸಿನಿಮಾಗಳಲ್ಲಿನ ರೂಪಕಗಳ ಸುತ್ತ…

- Advertisement -
- Advertisement -

ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ‘ಚಾರ್ಲಿ’ ಸಿನಿಮಾಕ್ಕೆ ಭಾರೀ ಜನಸ್ಪಂದನೆ ಮೂಡಿ ಬಂತು. ‘ಚಾರ್ಲಿ’ ಎಂಬ ನಾಯಿಯ ಸುತ್ತ ಹೆಣೆದ ಈ ಸಿನಿಮಾವನ್ನು ನೋಡಿ ಅನೇಕರು ಭಾವುಕರಾದರು. ಇದನ್ನೆಲ್ಲ ನೋಡುತ್ತಿದ್ದಾಗ, ‘ಚಾರ್ಲಿ’ ಎಂಬ ನಾಯಿ ಮಾರಾಟದ ಸರಕಾಗಿದೆ ಎನಿಸುತ್ತಿತ್ತು. ‘ಚಾರ್ಲಿ’ ಎಂಬ ನಾಯಿಯ ಕಥೆಗೆ ಜನ ನೀಡುತ್ತಿದ್ದ ವಿಪರೀತ ಸ್ಪಂದನೆಯ ನಡುವೆ- ‘ಕರುಪ್ಪಿ’ ಎಂಬ ನಾಯಿ ತೀವ್ರವಾಗಿ ಕಾಡತೊಡಗಿತ್ತು.

ಯಾವುದು ಉತ್ತಮ ಕಲಾಕೃತಿ? ಅದರ ಲಕ್ಷಣಗಳೇನು? ಎಂಬ ಪ್ರಶ್ನೆಗಳು ಇಂದು ಮೊನ್ನೆಯದ್ದಲ್ಲ. ಪ್ರತಿಯೊಂದು ಕಲಾ ಮಾಧ್ಯಮವು ತನ್ನದೇ ಆದ ಪರಿಭಾಷೆಗಳನ್ನು, ಕಲಾಭಿವ್ಯಕ್ತಿಯ ದಾರಿಗಳನ್ನು ಹೊಂದಿದ್ದರೂ ಕಲಾ ಮೀಮಾಂಸೆಯ ಒಟ್ಟು ಉದ್ದೇಶ- ರಸಾನುಭವ, ಅನುಭೂತಿ. ನಮ್ಮನ್ನು ಇನ್ನಿಲ್ಲದಂತೆ ಕಾಡುವ, ಪದಗಳಲ್ಲಿ ವಿವರಿಸಲಾಗದ ಅವ್ಯಕ್ತ ಭಾವನೆಗಳನ್ನು ಸೃಷ್ಟಿಸುವ ಮಾಧ್ಯಮಗಳನ್ನು- ಉತ್ತಮ ಕಲಾಕೃತಿ ಎನ್ನಬಹುದೇನೋ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ತಮಿಳಿನ ಮಾರಿ ಸೆಲ್ವರಾಜ್ ಸಿನಿಮಾಗಳ ಕುರಿತು ಧ್ಯಾನಿಸುತ್ತಾ ಹೋದಂತೆ ಕಲಾ ಮೀಮಾಂಸೆಯ ಪರಿಭಾಷೆಗಳನ್ನೂ ಪಕ್ಕದಲ್ಲಿಟ್ಟು ನೋಡುವುದು ಅನಿವಾರ್ಯವಾಗುತ್ತದೆ. ಸೆಲ್ವರಾಜ್‌ ದೃಶ್ಯ ಕಲಾ ಮಾಧ್ಯಮದಲ್ಲಿ ಕ್ರಿಯಾಶೀಲವಾಗಿರುವ ಸೃಜನಶೀಲ ವ್ಯಕ್ತಿ. ಅವರ ಸಿನಿಮಾಗಳು ಮೂರರಲ್ಲಿ ಮತ್ತೊಂದಾಗದೆ ವಿಶಿಷ್ಟ ಸಾಂಸ್ಕೃತಿಕ ಅಭಿವ್ಯಕ್ತಿಯಾಗಿಯೂ, ವಿನೂತನ ಪ್ರತಿರೋಧದ ಹೆಜ್ಜೆಗಳಾಗಿಯೂ ದಾಖಲಾಗುತ್ತಿವೆ.

ನಿರ್ದೇಶಕ ಮಾರಿ ಸೆಲ್ವರಾಜ್‌

ಸಾಹಿತಿ ದೇವನೂರ ಮಹಾದೇವ ಅವರ ಮಾತಿಗಳಿಗೆ ಹೆಚ್ಚು ತೂಕ ಏಕೆ? ಎಂದು ಪ್ರಶ್ನಿಸಿಕೊಂಡರೆ, ಅವರು ಯಾವುದಾದರೂ ವಿದ್ಯಮಾನಕ್ಕೆ ಪ್ರತಿಕ್ರಿಯೆ ನೀಡುವಾಗ ಬಳಸುವ ರೂಪಕತೆಗಳೇ ಇದಕ್ಕೆ ಕಾರಣವೆಂದು  ಹೇಳಿಬಿಡಬಹುದು. ಯಾರಿಗೂ ಹೊಳೆಯದ ರೂಪಕಗಳು ದೇವನೂರರಲ್ಲಿ ಮೂಡುತ್ತವೆ. ಅವರ ಪ್ರತಿಕ್ರಿಯೆಗಳು ಸಾಂಸ್ಕೃತಿಕ ಇತಿಹಾಸಕ್ಕೆ ತಳುಕುಹಾಕಿಕೊಂಡು ಸೃಜನಶೀಲವಾಗಿರುತ್ತವೆ. ಮಾರಿ ಸೆಲ್ವರಾಜ್‌ ಅವರ ಕಲಾಕೃತಿಗಳಿಗೂ ಇದೇ ಮಾತು ಅನ್ವಯಿಸಬಹುದೇನೋ.

ಮಾರಿ ಸೆಲ್ವರಾಜ್ ನಿರ್ದೇಶಿಸಿರುವ ‘ಪರಿಯೇರುಮ್ ಪೆರುಮಾಳ್‌- ಬಿ.ಎ. ಬಿ.ಎಲ್‌’, ‘ಕರ್ಣನ್‌’ ಸಿನಿಮಾಗಳಲ್ಲಿ ಬಳಕೆಯಾಗಿರುವ ರೂಪಕಗಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಹೋದರೆ ಮಾತುಗಳಲ್ಲಿ ವಿವರಿಸಲಾಗದ ಅನುಭೂತಿ ನಮ್ಮದಾಗುತ್ತದೆ. ‘ಪರಿಯೇರುಮ್‌ ಪರುಮಾಳ್‌’ (ಕುದುರೆಯೇರಿ ಬರುವ ಪೆರುಮಾಳ್‌) ಎಂಬುದೇ ಒಂದು ರೀತಿಯ ರೂಪಕ. ‘ಕರ್ಣನ್‌’- ಸಿನಿಮಾವಂತೂ ಹೆಸರು ಮತ್ತು ಅದಕ್ಕಂಟಿದ ಜಾತಿ ಐಡೆಂಟಿಗಳ ಕುರಿತು ಢಾಳಾಗಿ ಚರ್ಚಿಸುತ್ತದೆ.

‘ಪರಿಯೇರುಮ್‌ ಪೆರುಮಾಳ್‌’ ರೂಪಕಗಳು

ಸೆಲ್ವರಾಜ್‌ ಅವರ ಸಿನಿಮಾಗಳಲ್ಲಿ ಹಲವು ರೂಪಕಗಳು ಅಲ್ಲಲ್ಲಿ ಬಳಕೆಯಾದರೂ ಪ್ರಧಾನ ರೂಪಕವೊಂದು ಇಡೀ ಸಿನಿಮಾದುದ್ದಕ್ಕೂ ಹರಿಯುವುದನ್ನು ಕಾಣಬಹುದು. ಪರಿಯೇರುಮ್‌ ಪೆರುಮಾಳ್‌ನಲ್ಲಿ ‘ಕರುಪ್ಪಿ’ (ಕಪ್ಪು ನಾಯಿ) ಪ್ರಧಾನ ರೂಪಕವಾಗಿದೆ. ಕಾರಣವಿಲ್ಲದೆ ಕೊಲೆಯಾಗುವ ಮುಗ್ಧ ಜನರ ಪ್ರತಿನಿಧಿಯಾಗಿ ‘ಕರುಪ್ಪಿ’ ನಿಲ್ಲುತ್ತದೆ. ಇಲ್ಲಿ ಕೊಲೆಯಾಗಿದ್ದು ‘ಕರುಪ್ಪಿ’ಯೋ ‘ಕಥಾನಾಯಕ’ನೋ ಎಂಬ ದುಗುಡವನ್ನು ಕಥೆಯ ಆರಂಭದಲ್ಲೇ ನಿರ್ದೇಶಕ ಬಿಟ್ಟು ಹೊರಡುತ್ತಾರೆ.

ಜಾತಿ ಕಾರಣಕ್ಕೆ ದೌರ್ಜನ್ಯಕ್ಕೊಳಗಾಗುವ, ಆದರೆ ತನ್ನ ಗೆಳತಿಗೆ ಈ ಕಾರಣವನ್ನು ಕೊನೆಯವರೆಗೂ ಹೇಳದೇ ಇರುವ ‘ಕಥಾನಾಯಕ’ ಯಾರಿಗೂ ಕೇಡು ಬಯಸದ ಮುಗ್ಧ ಜೀವಿ. ಗೆಳತಿ ಮುನಿಸಿಕೊಂಡು ಕ್ಲಾಸ್‌ ರೂಮ್‌ನಿಂದ ಹೊರ ನಡೆದಾಗ, ಅನಾಥನಂತೆ ಕುಳಿತ ಪೆರುಮಾಳ್‌ ಹತ್ತಿರ ಧಾವಿಸುತ್ತಾ ಬರುವ ‘ಕರುಪ್ಪಿ’ ಒಂದು ಅಮೂರ್ತ ಕಲ್ಪನೆ. ‘ನಾಯಾರ್‌’ ಹಾಡಿನಲ್ಲಿ ತೋರಿಸಲಾಗುವ ಕ್ರಿಮಿ, ಕೀಟ, ಗಾಯಗೊಂಡ ನಾಯಿ, ಹಾವು, ಚೇಳು- ಇವೆಲ್ಲವೂ ಕಥಾ ನಾಯಕನ ತಬ್ಬಲಿತನವನ್ನು ತೀವ್ರವಾಗಿ ತೋರಿಸುವ ರೂಪಕಗಳು.

ಜಾತಿಯ ಕಾರಣಕ್ಕೆ ಮಾರ್ಯಾದೆ ಹತ್ಯೆಗಳನ್ನು ಮಾಡುತ್ತ ಬರುತ್ತಿರುವ ಮುದುಕ, ಕೊನೆಗೆ ಪೆರುಮಾಳ್‌ನನ್ನು ಕೂಡ ಹೊಡೆದು ರೈಲಿನ ಕಂಬಿಯ ಮೇಲೆ ಮಲಗಿಸಿರುತ್ತಾನೆ. ಸಾವಿನ ದವಡೆಯಲ್ಲಿ ಮಲಗಿರುವ ಆತನತ್ತ ಓಡೋಡಿ ಬರುವ ನೀಲಿ ಬಣ್ಣದ ನಾಯಿ- ತೀವ್ರವಾಗಿ ಕಾಡುತ್ತದೆ. ಸಿನಿಮಾದ ಆರಂಭದಲ್ಲಿ ಕರುಪ್ಪಿಯನ್ನು ರೈಲಿನ ಅಳಿಗೆ ಕಟ್ಟಿ ಕೊಲ್ಲಲಾಗಿರುತ್ತದೆ. ಕರುಪ್ಪಿಯಂತೆಯೇ ಪೆರುಮಾಳ್‌ನನ್ನು ಕೊಲ್ಲಲು ಯತ್ನಿಸುವ ದೃಶ್ಯ ಹಾಗೂ ಎಚ್ಚರದ ಸೂಚಕವಾಗಿ ಓಡೋಡಿ ಬರುವ ಕರುಪ್ಪಿ- ನಮ್ಮನ್ನು ಸದಾ ಕಾಡುವ ರೂಪಕಗಳು.

‘ಕರ್ಣನ್‌’ ರೂಪಕಗಳು

ತುಳುನಾಡಿನ ದಲಿತ ಆತ್ಮಕಥೆಗಳನ್ನು ‘ಪಾಡ್ದನಾಗಳು’ ಎಂದು ಕರೆಯಲಾಗಿದೆ. ಇಲ್ಲಿನ ಭೂತಗಳನ್ನು ದಲಿತ ಪೂರ್ವಜರು ಎಂದು ಗುರುತಿಸಲಾಗಿದೆ. ಇಂತಹದ್ದೇ ದೈವ ಕಲ್ಪನೆಯನ್ನು ‘ಕರ್ಣನ್‌’ ಸಿನಿಮಾದಲ್ಲಿ ತರಲಾಗಿದೆ. ಇಡೀ ಸಿನಿಮಾದುದ್ದಕ್ಕೂ ಚಲಿಸುವ ಪ್ರಧಾನ ರೂಪಕವಿದು. ನಡು ರಸ್ತೆಯಲ್ಲಿ ವಾಹನಗಳ ಮಧ್ಯೆ ಬಿದ್ದು ಹೊರಳಾಗಿ, ಯಾರ ಸಹಾಯವೂ ಸಿಗದೆ ಸಾವಿಗೀಡಾದ ಮಗು- ದೈವ ರೂಪ ಪಡೆಯುತ್ತದೆ. ದಲಿತರು ವಾಸವಿರುವ ಈ ಊರಿನ ಮುಂದೆ ಬಸ್‌ ನಿಲ್ಲಿಸದೆ ಇರುವುದು ಕ್ರಾಂತಿಯ ಮೂಲ. ಜಾತಿ ವಾದಿಗಳ ಅಸಹನೆ, ಕಿರುಕುಳ ಎಲ್ಲವನ್ನೂ ಪ್ರಶ್ನಿಸಿ, ಇಡೀ ವ್ಯವಸ್ಥೆಗೆ ಪ್ರತಿರೋಧ ತೋರುವಾಗಲೆಲ್ಲ- ಆ ದೈವದ ರೂಪ ತೆರೆಯ ಮೇಲೆ ಬಂದು ಖುಷಿಪಟ್ಟು ಹೋಗುತ್ತದೆ. ಬಸ್ಸನ್ನು ಛಿದ್ರ ಛಿದ್ರ ಮಾಡಿದಾಗ, ಇಡೀ ಊರೇ ಒಂದಾಗಿ ಹೋರಾಟಕ್ಕೆ ಸಜ್ಜಾದಾಗ, ಕಥಾ ನಾಯಕ ಕತ್ತಿ ಹಿಡಿದು ಕುದುರೆ ಏರಿ ಬರುವ ಮುನ್ನ… ಹೀಗೆ ಅನೇಕ ಸಂದರ್ಭಗಳಲ್ಲಿ ಈ ದೈವ ಪ್ರವೇಶಿಸುತ್ತದೆ.

ಬಸ್‌ ನಿಲ್ಲಿಸದ ರಸ್ತೆಯಲ್ಲಿ ಮೆರವಣಿಗೆ ಮಾಡುತ್ತ, ಆನೆ ಮೇಲೆ ಏರಿ ಬರುವ ಊರಿನ ಜನ, ಜನಜಂಗುಳಿಯನ್ನು ಹಾದಿಹೋಗಲಾರದೆ ನಿಂತಿರುವ ವಾಹನಗಳು, ತಲೆ ಇಲ್ಲದ ಬುದ್ಧನ ವಿಗ್ರಹ, ಬುದ್ಧನ ಶಿರದ ಮೇಲೆ ಉದಯಿಸಿದಂತೆ ಭಾಸವಾಗುವ ಸೂರ್ಯ, ಕಾಲಿಗೆ ಕಟ್ಟು ಬಿಗಿದ ಕತ್ತೆ ಕುಂಟುತ್ತಾ ನಡೆಯುವುದು, ದೇವರ ಕತ್ತಿ, ಕೋಳಿ ಮರಿಗಳನ್ನು ಕದ್ದು ಹೊತ್ತುಯ್ಯುವ ರಣಹದ್ದು, ಪ್ರತಿರೋಧದ ಸೂಚಕವಾಗಿ ಕತ್ತೆಯ ಕಾಲಿನ ಕಟ್ಟು ಬಿಚ್ಚುವುದು… ಹೀಗೆ ಅನೇಕ ರೂಪಕಗಳನ್ನು ಕರ್ಣನ್‌ನಲ್ಲಿ ಬಳಸಲಾಗಿದೆ.

ತಲೆಗೆ ಮುಂಡಾಸು ಕಟ್ಟಿ ಮಾತನಾಡಿದ ಕಾರಣಕ್ಕೆ ಕೋಪಾದ್ರಿಕ್ತನಾದ ಪೊಲೀಸ್‌ ಅಧಿಕಾರಿ, ವಯಸ್ಸಾದವರನ್ನು ಥಳಿಸುವುದು, ಪತಂಗವೊಂದು ಆ ಭೀಕರ ದೃಶ್ಯಗಳ ಸುತ್ತ ಹಾರಾಡುವುದು, ವಿಷಯ ತಿಳಿದ ಊರಿನ ಜನ ಪೊಲೀಸ್‌ ಠಾಣೆಗೆ ನುಗ್ಗಿ ಪ್ರತಿರೋಧ ತೋರುವಾಗ ಬಾಬಾ ಸಾಹೇಬರ ಫೋಟೋಕ್ಕೆ ಕೈ ತಗುಲಿ, ಆ ಫೋಟೋ ಅತ್ತಂದಿತ್ತ ಅಲ್ಲಾಡುವುದು- ಇವೆಲ್ಲವೂ ವಿಶಿಷ್ಟ ಅನುಭೂತಿಯನ್ನು ಕಟ್ಟಿಕೊಡುತ್ತವೆ.

ಮಾರಿ ಸೆಲ್ವರಾಜ್‌ ಕಥೆಯನ್ನು ಕೇವಲ ಕಥೆಯಾಗಿ ಹೇಳುವುದಿಲ್ಲ. ಹಲವು ರೂಪಕಗಳನ್ನು ತನ್ನ ಸಿನಿಮಾಗಳಲ್ಲಿ ಸಶಕ್ತವಾಗಿ ಬಳಸುತ್ತಾ ಹೋಗುತ್ತಾರೆ. ಸಿನಿಮಾದಲ್ಲಿ ಇಡೀ ಕಥೆಗೆ ಒಂದು ತೂಕವಿದ್ದರೆ, ಅದರ ಅಂದವನ್ನು ಹೆಚ್ಚಿಸುವ ರೂಪಕಗಳಿಗೆ ಮತ್ತೊಂದು ತೂಕವಿರುತ್ತದೆ.

ಇದನ್ನೂ ಓದಿರಿ: ದಕ್ಷಿಣದ ಸಿನಿಮಾಗಳೆಂದರೆ ‘KGF, RRR, ಪುಷ್ಪ’ ಅಷ್ಟೇ ಅಲ್ಲ: ಬಾಲಿವುಡ್‌ ಎದುರು ಚರ್ಚೆ ಹಾದಿತಪ್ಪಿತೆ?

ಸಂತೋಷ್‌ ನಾರಾಯಣ್ ಸಂಗೀತ

ಮುಖ್ಯವಾಗಿ ಮತ್ತೊಂದು ವಿಷಯವನ್ನು ಇಲ್ಲಿ ಪ್ರಸ್ತಾಪಿಸಲೇಬೇಕು. ‘ಪರಿಯೇರುಮ್ ಪೆರುಮಾಳ್‌’ ಮತ್ತು ‘ಕರ್ಣನ್‌’ ಸಿನಿಮಾಕ್ಕೆ ಸಂತೋಷ್ ನಾರಾಯಣ್‌ ನೀಡಿರುವ ಸಂಗೀತದಿಂದಾಗಿ ರೂಪಕಗಳ ಕಲಾತ್ಮಕತೆ ಹೆಚ್ಚಿದೆ. ಸೆಲ್ವರಾಜ್‌ ಅವರ ದೃಶ್ಯಗಳ ತೀವ್ರತೆಯನ್ನು ಇಮ್ಮಡಿಗೊಳಿಸುವಲ್ಲಿ ಸಂತೋಷ್ ನಾರಾಯಣ್ ಅವರ ಸಂಗೀತವೂ ಬಹುಮುಖ್ಯ ಪಾತ್ರ ವಹಿಸಿದೆ. ಸಾಂಸ್ಕೃತಿಕ ಬೆಸುಗೆಯನ್ನು ಒಳಗೊಂಡ ಕಥನದೊಳಗೆ ದೇಸಿ ಹಾಗೂ ರ್‍ಯಾಪ್‌‌ ಮಿಶ್ರಿತ ಸಂಗೀತವನ್ನು ಸಂತೋಷ್ ನಾರಾಯಣ್‌ ರಚಿಸಿದ್ದಾರೆ. ಪರಿಯೇರು‌ಮ್‌ ಪೆರುಮಾಳ್‌ನ ‘ಕರುಪ್ಪಿ’, ‘ನಾಯಾರ್‌‌’ ಹಾಡುಗಳು, ‘ಕರ್ಣನ್‌’ನ ‘ಮಂಜನೆತ್ತಿ’, ‘ಕಂಡವರ ಸೊಲ್ಲುಂಗ’, ‘ಉತ್ರಾದಿಂಗ ಯಪ್ಪೊ’ ಹಾಡುಗಳು ಸೆಲ್ವರಾಜ್ ಅವರ ಆಶಯವನ್ನು ಗಟ್ಟಿಗೊಳಿಸಿವೆ.

ಕೊನೆಯದಾಗಿ, ‘ಚಾರ್ಲಿ’ ಥರದ ಮಧ್ಯಮ ವರ್ಗ ಕೇಂದ್ರಿತ ನಾಯಿ ಕಥೆಯಲ್ಲಿ ರೂಪಕತೆಯನ್ನು ಹುಡುಕಬಾರದು. ಭಾವುಕತೆಯೇ ಬಂಡವಾಳವಾಗುವ ಸಿನಿಮಾಗಳಲ್ಲಿ ಕಲಾತ್ಮಕತೆಯನ್ನು, ದಟ್ಟ ಅನುಭೂತಿಯನ್ನು ನಿರೀಕ್ಷಿಸಲಾಗದು ಎಂಬುದು ನಿಜ. ಆದರೆ ಸಿನಿಮಾವೊಂದು ಅಷ್ಟೇ ಆಗಿ ನಿಲ್ಲಬಾರದೆಂಬುದು ಇಲ್ಲಿನ ಆಶಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...