ಜಾರ್ಖಂಡ್ನ ರಾಂಚಿ ಪೊಲೀಸರು ಸ್ವತಂತ್ರ ಪತ್ರಕರ್ತ ರೂಪೇಶ್ ಕುಮಾರ್ ಸಿಂಗ್ ಅವರನ್ನು ಭಾನುವಾರ ಮಧ್ಯಾಹ್ನ ಬಂಧಿಸಿದ್ದಾರೆ. ಪೊಲೀಸ್ ಪಡೆಗಳು ಮುಂಜಾನೆ ರೂಪೇಶ್ ಕುಮಾರ್ ಸಿಂಗ್ ಅವರ ಮನೆಗೆ ತೆರಳಿ ಮಧ್ಯಾಹ್ನ 1 ಗಂಟೆಯವರೆಗೆ ಮನೆಯನ್ನು ಶೋಧಿಸಿದ್ದರು.
ಪೊಲೀಸರೊಂದಿಗೆ ಬಂಧನ ವಾರಂಟ್ ಇದ್ದರೂ ಮಧ್ಯಾಹ್ನ 1 ಗಂಟೆಯವರೆಗೆ ಅದನ್ನು ತೋರಿಸಲಿಲ್ಲ ಎಂದು ‘ಗೌರಿಲಂಕೇಶ್ನ್ಯೂಸ್’ ವರದಿ ಮಾಡಿದೆ. ಬೆಳಿಗ್ಗೆ 5.30 ಕ್ಕೆ ರೂಪೇಶ್ ಕುಟುಂಬ ಇನ್ನೂ ನಿದ್ದೆಯಲ್ಲಿದ್ದಾಗ ಪೊಲೀಸರು ಮನೆಗೆ ತೆರಳಿ ಹುಡುಕಾಟ ನಡೆಸಿದ್ದಾರೆ. ಮನೆಯನ್ನು ಮಧ್ಯಾಹ್ನ 1 ಗಂಟೆಯವರೆಗೂ ಪೊಲೀಸರು ಶೋಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸರ್ಚ್ ವಾರೆಂಟ್ ಪ್ರಕಾರ, ಸೆರೈಕೆಲಾ-ಖರ್ಸಾನ್ವಾದ ಕಂದ್ರಾ ಪೊಲೀಸ್ ಠಾಣೆಯಿಂದ ಎಂಟು ತಿಂಗಳ ಹಿಂದಿನ ಪ್ರಕರಣ ವಿಚಾರವಾಗಿ ಹುಡುಕಾಟ ನಡೆಸಬೇಕಿತ್ತು. ಮಧ್ಯಾಹ್ನ 1 ಗಂಟೆಗೆ ವಸ್ತುಗಳನ್ನು ವಶಪಡಿಸಿಕೊಳ್ಳುವವರೆಗೆ ಪೊಲೀಸರು ಬಂಧನ ವಾರಂಟ್ ಬಗ್ಗೆ ಮಾಹಿತಿ ನೀಡಿರಲಿಲ್ಲ.

ವಶಪಡಿಸಿಕೊಳ್ಳುವ ಎಲ್ಲಾ ವಸ್ತುಗಳನ್ನು ಸಿದ್ಧಪಡಿಸಿ, ರೂಪೇಶ್ ಕುಮಾರ್ ಸಿಂಗ್ ಅವರನ್ನು ಬಂಧಿಸಿ ಬಂಧನ ವಾರಂಟ್ ತೋರಿಸಿ ನಂತರ ಕರೆದೊಯ್ಯಲಾಗಿದೆ. ವಶಪಡಿಸಿಕೊಂಡ ವಸ್ತುಗಳಲ್ಲಿ ಬೆಡ್ಶೀಟ್ಗಳು, ಮೊಬೈಲ್, ಎರಡು ಲ್ಯಾಪ್ಟಾಪ್ಗಳು ಮತ್ತು ಸೀಲ್ ಮಾಡಿದ ವಾಹನದ ದಾಖಲೆಗಳಿವೆ.
ಇದನ್ನೂ ಓದಿ: ಉತ್ತರ ಪ್ರದೇಶ: ಪತ್ರಕರ್ತ ಜುಬೇರ್ ವಿರುದ್ಧ ತನಿಖೆಗೆ ಎಸ್ಐಟಿ ರಚನೆ
ರೂಪೇಶ್ ಕುಮಾರ್ ಸಿಂಗ್ ಈಗಾಗಲೇ ಸರ್ಕಾರಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಕೇಂದ್ರ ಸರ್ಕಾರ ಅವರನ್ನು ಪೆಗಾಸಸ್ ಪಟ್ಟಿಯಲ್ಲಿ ಇರಿಸಿ, ಅವರ ಫೋನ್ ಅನ್ನು ಅಕ್ರಮವಾಗಿ ಮೇಲ್ವಿಚಾರಣೆ ಮಾಡುತ್ತಿತ್ತು. ಆದರೆ ರಾಜ್ಯ ಪೊಲೀಸರು ಅವರನ್ನು ಬಂಧಿಸಿರುವ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ರೂಪೇಶ್ ಸದಾ ದನಿಯೆತ್ತಿದ್ದಾರೆ. ಅವರು ‘ಭೂಮಿ, ನೀರು ಮತ್ತು ಅರಣ್ಯ ಹಕ್ಕುಗಳು(ಜಲ್, ಜಂಗಲ್ ಮತ್ತು ಜಮೀನ್) ಮತ್ತು ಆದಿವಾಸಿಗಳ ವಿರುದ್ಧದ ಸರ್ಕಾರದ ದೌರ್ಜನ್ಯಗಳ ಬಗ್ಗೆ ನಿರಂತವಾಗಿ ಬರೆಯುತ್ತಿದ್ದರು. ಅವರ ವರದಿಗಳು ವಿವರವಾದ ಪುರಾವೆಗಳನ್ನು ಆಧರಿಸಿ ವರದಿಯಾಗುತ್ತಿದ್ದವು. ಆದಿವಾಸಿ ಹಕ್ಕುಗಳ ಸಂಬಂಧಿತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವಲ್ಲಿ ಅನೇಕ ಸಂಸ್ಥೆಗಳಿಗೆ ಈ ವರದಿಗಳು ಸಹಾಯ ಮಾಡಿದ್ದವು.

ಎರಡು ದಿನಗಳ ಹಿಂದೆ ಜಾರ್ಖಂಡ್ನ ಗಿರ್ಡಿಹ್ ಜಿಲ್ಲೆಯಲ್ಲಿ ಸ್ಥಾಪಿಸಲಾದ ಕಾರ್ಖಾನೆಗಳ ಹೊಗೆ ಮತ್ತು ಬೂದಿಯಿಂದ ಹಾನಿಗೊಳಗಾದ ಪ್ರದೇಶಗಳ ಕುರಿತು ಅವರು ಇತ್ತೀಚೆಗೆ ವರದಿ ಮಾಡಿದ್ದರು. ಈ ವರದಿಯಲ್ಲಿ ಆ ಪ್ರದೇಶದಲ್ಲಿನ ಕಾರ್ಖಾನೆಗಳು ಅಲ್ಲಿನ ಜನರ ಅನಾರೋಗ್ಯಕ್ಕೆ ವಿಪತ್ತುಗಳಿಗೆ ಹೇಗೆ ಕಾರಣವಾಗಿವೆ ಎಂಬುದನ್ನು ನಿರೂಪಿಸಿದ್ದವು.
ರೂಪೇಶ್ ಬಂಧನವು ಸುಪ್ರೀಂ ಕೋರ್ಟ್ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಯಾವುದೇ ಸಂದರ್ಭದಲ್ಲಿ, ಪೊಲೀಸರು ವಿಚಾರಣೆ ನಡೆಸಿ ಬಂಧಿಸುವ ಮೊದಲು ಸಂಬಂಧಪಟ್ಟ ವ್ಯಕ್ತಿಗೆ ತಿಳಿಸಬೇಕಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರು ಈ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಗೌರಿ ಲಂಕೇಶ್ ನ್ಯೂಸ್ ವರದಿ ಮಾಡಿದೆ.



ಈ ಬಂದನ ಕಂಡನಾರ್ಹ.