Homeಅಂಕಣಗಳುಚೀನಾ ದೇಶದ ಎರಡು ಸಣ್‌ಸಣ್ ಕತೆ

ಚೀನಾ ದೇಶದ ಎರಡು ಸಣ್‌ಸಣ್ ಕತೆ

- Advertisement -
- Advertisement -

ಸ್ವಾತಂತ್ರ್ಯ

ಒಂದು ದಿನ ಚುವಾಂಗ್ ತ್ಸು ಮೀನು ಹಿಡಿಯುತ್ತಾ ಇರುವ ಸಮಯದಲ್ಲಿ, ಚು ರಾಜ್ಯದ ರಾಜ ಆತನಿಗೆ ತನ್ನ
ಅಧಿಕಾರಿಗಳ ಮೂಲಕ ಹೇಳಿಕಳಿಸಿದನು. ಆ ಪ್ರಕಾರ ಸರ್ಕಾರದ ಆಡಳಿತದಲ್ಲಿ ಚುವಾಂಗ್ ತ್ಸುವಿನ ಸಲಹೆ ಮತ್ತು ಸಹಾಯವನ್ನು ರಾಜ ನಿರೀಕ್ಷಿಸುತ್ತಿರುವುದಾಗಿ ತಿಳಿಸಲಾಯಿತು. ಇದರಿಂದ ರಾಜ ಸಂತುಷ್ಟನಾಗಲಿದ್ದಾನೆ ಎಂಬ ವಿಷಯವನ್ನೂ ಹೇಳಲಾಯಿತು.

ಆದರೆ ಹಿಂತಿರುಗಿ ನೋಡದೆ ಮೀನು ಹಿಡಿಯುವುದನ್ನು ಮುಂದುವರೆಸಿದ ತ್ಸು ಹೀಗೆ ಪ್ರತಿಕ್ರಿಯಿಸಿದನು: “ಚು ರಾಜ್ಯದಲ್ಲಿ ಒಂದು ಆಮೆಯಿದೆ ಎಂದು ಕೇಳಲ್ಪಟ್ಟಿದ್ದೇನೆ. ಅದು ಸತ್ತು ಮೂರು ಸಾವಿರ ವರ್ಷಗಳಾಗಿದ್ದರೂ ರಾಜ ತನ್ನ ಪೂರ್ವಿಕರ ಪವಿತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ಅದರ ಕಳೇಬರವನ್ನು ಸಂರಕ್ಷಿಸಿ ಇಟ್ಟಿದ್ದಾನೆಂದು” ಕೂಡ. “ಈಗ ನೀವೇ ಹೇಳಿ, ಆ ಆಮೆ ಸತ್ತು ತನ್ನ ಕಳೇಬರವನ್ನು ಗೌರವಿಸಬೇಕು ಅಂತ ನಿರೀಕ್ಷಿಸುತ್ತದೆಯೇ ಅಥವಾ ಕೆಸರಿನಲ್ಲಿ ಬಾಲವಲ್ಲಾಡಿಸುತ್ತಾ ಬದುಕಿರಬೇಕೆಂದೆಣಿಸುತ್ತಾ?” ಆಗ ಆ ಆಧಿಕಾರಿಗಳು ಒಮ್ಮೆಗೇ “ಅದು ಬದುಕಿ ಕೆಸರಿನಲ್ಲಿ ಬಾಲವಲ್ಲಾಡಿಸುವುದನ್ನು ಇಷ್ಟ ಪಡುತ್ತದೆ” ಎಂದು ಉತ್ತರಿಸಿದರು.

ತತ್‌ಕ್ಷಣವೇ ಚುವಾಂಗ್ ತ್ಸು ಕೂಗಿ ಹೇಳಿದ “ಸರಿಯಾಗಿ ಹೇಳಿದಿರಿ! ನಾನು ಕೂಡ ಕೆಸರಿನಲ್ಲಿ ಬಾಲ ಅಲ್ಲಾಡಿಸಿಕೊಂಡಿರಲು ಇಷ್ಟ ಪಡುತ್ತೇನೆ”.

ಹುಲಿಯಿದ್ದರೂ ಕಾಡು ತೊರೆಯಲಾರೆ

ಥೈ ಶಿಖರದ ಬಳಿಯಲ್ಲಿ ಹಾದು ಹೋಗಬೇಕಾದರೆ, ಕಂಫ್ಯುಶಿಯಸ್, ಒಂದು ಸಮಾಧಿ ಬಳಿ ಜೋರಾಗಿ ಅಳುತ್ತಿದ್ದ ಹೆಂಗಸನ್ನು ಕಂಡು, ಅವಳ ಬಳಿಗೆ ನಡೆದು, ಜೊತೆಗಿದ್ದ ತನ್ನ ಶಿಷ್ಯನಿಗೆ ಕಾರಣ ವಿಚಾರಿಸುವಂತೆ ಹೇಳಿದ. “ಯಾಕವ್ವ ಅಳುತ್ತಿದ್ದೀಯ, ದುಃಖದ ಮೇಲೆ ದುಃಖ ಅನುಭವಿಸುತ್ತಿರುವ ತಾಯಿಯೇ” ಎಂದು ಶಿಷ್ಯ ತ್ಸೆ-ಲು ಕೇಳಿದ್ದಕ್ಕೆ, ಆ ಮಹಿಳೆ “ಹೌದಪ್ಪ, ಹಿಂದೊಮ್ಮೆ ನನ್ನ ಗಂಡನ ಅಪ್ಪನನ್ನು ಹುಲಿಯೊಂದು ಇಲ್ಲೇ ಕೊಂದು ಹಾಕಿತ್ತು, ನನ್ನ ಗಂಡನನ್ನೂ ಕೊಂದಿತು, ಈಗ ನನ್ನ ಮಗನನ್ನು ಕೊಂದು ಹಾಕಿದೆ” ಎಂದು ದುಃಖಿಸತೊಡಗಿದಳು. ಆಗ ಮಾಸ್ಟರ್ “ನೀನು ಈ ಜಾಗವನ್ನೇಕೆ ತೊರೆದು ಬೇರೆಡೆಗೆ ಹೋಗುತ್ತಿಲ್ಲ ತಾಯಿ” ಎಂದು ಕೇಳಿದ್ದಕ್ಕೆ, ಆಕೆ “ಇಲ್ಲಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ತುಳಿಯುವ ಸರ್ಕಾರ ಇಲ್ಲ ಎಂದು ಉತ್ತರಿಸಿದಳಂತೆ.

ಅದಕ್ಕೆ ಕಂಫ್ಯುಶಿಯಸ್ ಶಿಷ್ಯಂದಿರಿಗೆ “ನೋಡಿ ಮಕ್ಕಳೇ ಯಾವ ಸರ್ಕಾರವು ಹುಲಿಗಳಿಗಿಂತ ಕ್ರೂರವಾಗಬಾರದು” ಎಂದು ಹಿತವಚನ ನುಡಿದು ಮುಂದೆ ಸಾಗಿದರಂತೆ.


ಇದನ್ನೂ ಓದಿ: ಹೋರಾಟದ ಬದುಕಿನ ಎರಡು ಆತ್ಮಕಥೆಗಳು ಒಂದು ಆತ್ಮಕಥಾನಕ ಕಾದಂಬರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...