Homeಮುಖಪುಟಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

- Advertisement -
- Advertisement -

ನೀವು ಬರಹಗಾರರಾಗಿದ್ದೀರಾ? ಹೌದಾದರೆ, ನೀವು ಆರಂಭಿಕ ದಿನಗಳಲ್ಲಿ ಬರೆದ ಒಂದು ಬರಹವನ್ನು ಮತ್ತೆ ಓದಿ ನೋಡಿ. ಎಷ್ಟೊಂದು ಪೇವಲವಾಗಿ ಬರೆದಿದ್ದೇನಲ್ಲ ಅಂತ ನಿಮಗೆಯೇ ಅನಿಸಲೂಬಹುದು. ಕಾಲ ಉರುಳಿದಂತೆ, ನಮ್ಮ ಅನುಭವಗಳು ದಟ್ಟವಾದಂತೆ ಬರವಣಿಗೆಯೂ ತೀವ್ರತೆ ಪಡೆಯುತ್ತದೆ. ಹೀಗಾಗಿ ನಾವೇ ಬರೆದ ಹಳೆಯ ಕವಿತೆಯನ್ನು ಓದಿದಾಗ, ನಮಗೆಯೇ ನಗು ಬರಬಹುದು. ಆದರೆ ಯೋಗರಾಜ ಭಟ್ ಅವರ ಸಿನಿಮಾಗಳಿಗೆ ಇದು ಅನ್ವಯವಾದಂತೆ ಕಾಣುತ್ತಿಲ್ಲ. ಅಷ್ಟೋ ಇಷ್ಟೋ ಚೆನ್ನಾಗಿರುವ ಹಳೆಯ ಕವಿತೆಯನ್ನು ಮತ್ತೆ ತಿದ್ದುವ ಪ್ರಯತ್ನ ಮಾಡುವುದು ಸರಿಯಲ್ಲವಾದರೂ, ತಿದ್ದಿದರೆ ಒಂದಿಷ್ಟು ಉತ್ಕೃಷ್ಟವಾಗುವಂತಾದರೂ ಇರಬೇಕು. ಈ ಮೊದಲೇ ಬರೆದಿದ್ದ ಕವಿತೆಯ ಸ್ವಾರಸ್ಯವನ್ನೂ ಹಾಳು ಮಾಡುವಂತಿರಬಾರದು ಅಲ್ಲವೇ?- ‘ಗಾಳಿಪಟ-2’ ಕುರಿತು ಚರ್ಚಿಸುವಾಗ ಈ ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕಾಗುತ್ತದೆ.

ಮಲಯಾಳಂ ಚಿತ್ರರಂಗದ ‘ಮಾರ್ಟಿನ್ ಪ್ರಕಟ್‌’ ಹೆಸರು ನೀವು ಕೇಳಿರಬಹುದು. ಆತ 2015ರಲ್ಲಿ ಒಂದು ಸಿನಿಮಾ ನಿರ್ದೇಶಿಸಿದ. ದುಲ್ಖರ್‌ ಸಲ್ಮಾನ್‌ ಹಾಗೂ ಪಾರ್ವತಿ ತಿರುವೊತು ಪ್ರಧಾನ ಪಾತ್ರಗಳಲ್ಲಿ ಅಭಿನಯಿಸಿದ್ದ ‘ಚಾರ್ಲಿ’ ಎಂಬ ಸೂಪರ್‌ ಹಿಟ್‌ ಸಿನಿಮಾ ನೀಡಿದ್ದ ಮಾರ್ಟಿನ್‌, 2021ರಲ್ಲಿ ‘ನಾಯಟ್ಟು’ ಎಂಬ ಸಿನಿಮಾವನ್ನು ನಿರ್ದೇಶಿಸಿ ಹಲವು ಚರ್ಚೆಗಳನ್ನು ಹುಟ್ಟುಹಾಕಿದನು. ಈ ಸಿನಿಮಾದಲ್ಲಿನ ದಲಿತ ಆಯಾಮದ ಬಗ್ಗೆ ಹಲವು ಟೀಕೆ, ಮೆಚ್ಚುಗೆಗಳು ಬಂದಿರುವುದು ಬೇರೆ ವಿಷಯ. ಆದರೆ ಒಬ್ಬ ನಿರ್ದೇಶಕ ತನ್ನನ್ನು ವಿಸ್ತರಿಸುವ ಬಗೆಯನ್ನು ನಾವಿಲ್ಲಿ ಗಮನಿಸಬಹುದು. ‘ಚಾರ್ಲಿ’ ಸಿನಿಮಾದ ಜಾನರ್‌ನಲ್ಲೇ ಅಂಟಿ ಕೂರದೆ ‘ನಾಯಟ್ಟು’ ಥರದ ವಿಭಿನ್ನ ಕಥೆಯತ್ತ ಒಬ್ಬ ನಿರ್ದೇಶಕ ಹೊರಳುವುದಿದೆಯಲ್ಲ ಅದು ಮುಖ್ಯವಾದ ಸಂಗತಿ. ಈ ಉತ್ಕಟ ಅಭಿಲಾಷೆಯನ್ನೇ ಕನ್ನಡದ ವಿಮರ್ಶಕ ಡಿ.ಆರ್‌.ನಾಗರಾಜ್‌, ‘ಹಳೆಯ ವಿಕಲ್ಪಗಳಿಂದ ಬಿಡುಗಡೆಯ ಆಸೆ’ ಎಂದು ಬರೆದುಕೊಂಡಿದ್ದರು. ‘ಅಮೃತ ಮತ್ತು ಗರುಡ’ ಹಾಗೂ ‘ಸಾಹಿತ್ಯ ಕಥನ’ ಕೃತಿಗಳ ಪ್ರಕಟಣೆಯ ನಡುವಿನ ಹನ್ನೆರಡು ವರ್ಷಗಳ ಸುದೀರ್ಘ ಬದಲಾವಣೆಯನ್ನು ಅವಲೋಕನ ಮಾಡುತ್ತಾ ಈ ಮಾತು ಹೇಳಿದ್ದರು ಡಿ.ಆರ್‌.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಹಳೆಯ ದಾರಿಯನ್ನು ಬಿಟ್ಟು ಹೊಸ ದಾರಿಯತ್ತ ಹೊರಳದ, ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರೆನಿಸಿಕೊಂಡ ಯೋಗರಾಜ್ ಭಟ್‌ ಥರದವರು ಪ್ರೇಕ್ಷಕರನ್ನು ಹಿಮ್ಮುಖವಾಗಿ ಕೊಂಡೊಯ್ಯುತ್ತಿದ್ದಾರೆ ಅನಿಸುತ್ತಿದೆ. ಹಳೆಯ ಜಾಡನ್ನಾದರೂ ವಿಸ್ತರಿಸುತ್ತಾರಾ ಎಂದು ನೋಡಿದರೆ ಅದು ಕೂಡ ಆಗುತ್ತಿಲ್ಲ. ತಾನು ಏನೇ ನೀಡಿದರೂ ಪ್ರೇಕ್ಷಕ ನೋಡುತ್ತಾನೆಂಬ ಧೋರಣೆ ಯೋಗರಾಜ್ ಭಟ್‌ ಅವರಿಗೆ ಬಂದಿದೆಯೇನೋ ಅನಿಸತೊಡಗಿದೆ.

ನಮ್ಮಲ್ಲಿ ಏನಾಗುತ್ತಿದೆ ನೋಡಿ- ಕೋಟಿಗೊಬ್ಬ, ಕೋಟಿಗೊಬ್ಬ-2, ಕೋಟಿಗೊಬ್ಬ-3, ಕೆ.ಜಿ.ಎಫ್‌., ಕೆ.ಜಿ.ಎಫ್‌-2, ಮುಂಗಾರು ಮಳೆ, ಮುಂಗಾರು ಮಳೆ-2, ಗಾಳಿಪಟ, ಗಾಳಿಪಟ-2  ಹೀಗೆ ಹಳೆಯ ಜಾಡನ್ನೇ ಮುಂದುವರಿಸುವ ಸವಕಲು ಮಾದರಿಗಳನ್ನು ನೋಡುತ್ತಿದ್ದೇವೆ. ಒಂದು ಯಶಸ್ಸಿನ ಹಾದಿಯನ್ನು ಹಿಡಿದು ಹೊರಡುವುದು ತಪ್ಪಲ್ಲ. ಆದರೆ ಆ ಜಾಡು ವಿಸ್ತರಣೆಯಾಗದೆ ಮೊದಲಿಗಿಂತಲೂ ಅಧ್ವಾನವೆದ್ದರೆ ಖಂಡಿತ ಬೇಸರವಾಗುತ್ತದೆ. ಅನೂಪ್‌ ಬಂಡಾರಿಯವರು ‘ರಂಗಿತರಂಗ’ದ ಜಾಡಿನಲ್ಲಿಯೇ ‘ವಿಕ್ರಾಂತ್‌ ರೋಣ’ವನ್ನು ನಿರ್ದೇಶಿಸಿದರು. ತಾಂತ್ರಿಕವಾಗಿಯಾದರೂ ವಿಕ್ರಾಂತ್‌ ರೋಣ ಉತ್ಕೃಷ್ಟವಾಗಿ ಇತ್ತು. ಆದರೆ ಎಳಸು ಕಥೆಯ ಕಾರಣಕ್ಕೆ ಟೀಕೆಗೆ ಒಳಗಾಯಿತು. ಇರಲಿ.

ಇದನ್ನೂ ಓದಿರಿ: ವಿಕ್ರಾಂತ್‌ ರೋಣ ಸಿನಿಮಾ ದಲಿತರನ್ನು ಚಿತ್ರಿಸಿರುವ ರೀತಿ ಅಪಾಯಕಾರಿ ಏಕೆ?

ಸಿನಿಮಾಗಳಲ್ಲಿ ‘ಲಾಜಿಕ್‌’ ಹುಡುಕಬಾರದು ಎಂಬ ಮಾತಿದೆ. ಆದರೆ ಕಾಮನ್‌ಸೆನ್ಸ್‌ ಇರಬೇಕೆಂಬುದು ಪ್ರೇಕ್ಷಕನ ಕನಿಷ್ಠ ಅಪೇಕ್ಷೆ. ಕತ್ತಲ ಕೋಣೆಯೊಳಗೆ ಕುಳಿತ ಪ್ರೇಕ್ಷಕ ನೋಡುತ್ತಿರುವುದು ಒಂದು ಕಾಲ್ಪನಿಕ ಲೋಕವಾದರೂ ಅದು ನಿಜಜೀವನಕ್ಕೆ ಕನೆಕ್ಟ್ ಆಗದಿದ್ದರೆ ಯಾವುದೇ ಕಲಾಕೃತಿ ಮೆಚ್ಚುಗೆಯಾಗುವುದಿಲ್ಲ. ಕಾಲ್ಪನಿಕವಾದರೂ ಕನಿಷ್ಠ ಮನರಂಜನೆಯನ್ನು ಒಂದು ಕಲಾಕೃತಿ ನೀಡಬೇಕಾಗುತ್ತದೆ. ಈ ನೆಲೆಯಲ್ಲಿ ನೋಡಿದರೆ ‘ಗಾಳಿಪಟ-2’ ಸೂತ್ರವಿರದ ಪಟವಾಗಿ ದಿಕ್ಕಾಪಾಲಾಗಿದೆ. ಯೋಗರಾಜ್‌ ಭಟ್ಟರ ಕಥೆಯೊಳಗೆ ಲಾಜಿಕ್ಕುಗಳು ಇಲ್ಲ; ಮ್ಯಾಜಿಕ್ಕುಗಳೂ ಇಲ್ಲ. ಬರೀ ಭಾಷಣ ಹಾಗೂ ಬೋಧನೆಯಷ್ಟೇ. ಕಣ್ತುಂಬಿಕೊಳ್ಳಲು ಒಂದಿಷ್ಟು ಹಸಿರು, ಮಳೆ, ಮಂಜು. ಇದು ಕೂಡ ಭಟ್ಟರ ಹಳೆಯ ಜಾಡು.

ಮೊದಲ ‘ಗಾಳಿಪಟ’ಕ್ಕೂ ಎರಡನೇ ಗಾಳಿಪಟಕ್ಕೂ ಸಂಬಂಧವಿಲ್ಲವಾದರೂ ಹಳೆಯ ಕಥೆಯ ಕೆಲವೊಂದು ಫಾರ್ಮುಲಾಗಳು ಇಲ್ಲಿಯೂ ಇವೆ. ಅಲ್ಲಿನ ಕೆಲವು ಹೆಸರುಗಳನ್ನು, ಪಾತ್ರಗಳನ್ನು ಇಲ್ಲಿಯೂ ಮುಂದುವರಿಸಲಾಗಿದೆ. ಮೊದಲ ಭಾಗದಲ್ಲೂ ಮೂವರು ಗೆಳೆಯರಿಗೂ ಒಂದೊಂದು ಪ್ರೇಮಕತೆ, ಇಲ್ಲಿಯೂ ಅದೇ ವ್ಯಥೆ, ಹುಡುಗಾಟಿಕೆ, ತರ್‍ಲೆ ಜೋಕ್‌, ನಗುಬಂದರೆ ನೀವು ನಗಬಹುದು. ಇತ್ಯಾದಿ

ಭಟ್ರ ಕಥೆಯಲ್ಲಿ ಏನಾದರೂ ಲಾಜಿಕ್ ಇದೆಯೇ?

1. ಕನ್ನಡ ಖ್ಯಾತ ಕಾದಂಬರಿಕಾರ್ತಿ ‘ಕುಮುದಾ’ (ಸುಧಾ ಬೆಳವಾಡಿ) ಹಾಗೂ ಮಾಜಿ ಎಂಎಲ್‌ಎ ‘ಬೈರೇಗೌಡ’ (ರಂಗಾಯಣ ರಘು) ಅವರ ಮಗನಾದ ಗಣಿಗೆ (ಗಣೇಶ್‌) ಕನ್ನಡ ಓದಲು, ಬರೆಯಲು ಬರುವುದಿಲ್ಲ. ಆತನಿಗೆ ಕನ್ನಡ ಬಾರದ ಕಾರಣ ಹಾಗೂ ಮಗನ ಅಪಪ್ರಚಾರದಿಂದಾಗಿ ತಂದೆ ಚುನಾವಣೆಯಲ್ಲಿ ಸೋತಿದ್ದಾನೆ. ಈತ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಮಾಡಿದರೆ ಜರ್ಮನಿಯಲ್ಲಿ ಕಿಟೆಲ್ ಡಿಕ್ಷನರಿ ಸಂಬಂಧ ಕೆಲಸ ಮಾಡುವ ಉದ್ಯೋಗ ದೊರಕುತ್ತದೆ. ಆದರೆ ಕನ್ನಡವನ್ನೇ ಓದಲು ಬಾರದವನಿಗೆ ಜರ್ಮನಿಯಲ್ಲಿ ಕೆಲಸ ಮೀಸಲಾಗಿದೆ! ತಾನು ಇಷ್ಟಪಟ್ಟ ಹುಡುಗಿಯನ್ನು ಪಡೆಯಬೇಕಾದರೆ ಗಣಿ ಪರೀಕ್ಷೆಯಲ್ಲಿ ಪಾಸಾಗಲೇಬೇಕು. ಹೋಗಲಿ ಬಿಡಿ. ಮುಂದೆ ಓದಿ.

2. ಗಣಿ  ಕನ್ನಡದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಲು ನೀರುಕೋಟೆಯ ಕಾಲೇಜಿಗೆ ಸೇರುತ್ತಾನೆ. ಇಲ್ಲಿಗೆ ಈತನ ಗೆಳೆಯರಾದ ‘ದಿಗಿ’ (ದಿಗಂತ್‌) ಮತ್ತು ‘ಭೂಷಣ್‌’ (ಪವನ್‌ ಕುಮಾರ್‌) ಕೂಡ ಸೇರಿಕೊಳ್ಳುತ್ತಾರೆ. (ಡಿಗ್ರಿಯಲ್ಲಿ ಬೇರೆ ಕೋರ್ಸ್ ಓದಿದಾತ ಕನ್ನಡದಲ್ಲಿ ಸ್ನಾತಕೋತ್ತರ ಪದವಿಗೆ ಸೇರುತ್ತಿರುವುದರ ಬಗ್ಗೆ ಕೇಳಬೇಡಿ.) ಆರ್ಥಿಕವಾಗಿ ಸಬಲರಾದ ಇವರು ಸೇರಿರುವುದು ಮಳೆ ಬಂದರೆ ಮುರಿದು ಬೀಳುವಂತಹ ಕಾಲೇಜಿಗೆ! ಅಲ್ಲಿಗೆ ಬರುವ ದಿಗಿಯ ಹಳೆಯ ಪ್ರೇಯಸಿ ‘ಅನುಪಮಾ’ (ಸಂಯುಕ್ತಾ ಮೆನನ್‌), ಚಾವಣಿಯ ರಿಪೇರಿ ಮಾಡಲು ಗುತ್ತಿಗೆ ಪಡೆಯುತ್ತಾಳೆ. ಅದು ಕೂಡ ಬಿದ್ದು ಹೋಗುತ್ತದೆ. ಇತ್ತ ಭೂಷಣ್‌ಗೆ ಕನ್ನಡ ಪ್ರಾಧ್ಯಾಪಕಿ ‘ಶರ್ಮಿಳಾ’ (ಶರ್ಮಿಳಾ ಮಾಂಡ್ರೆ) ಮೇಲೆ ಲವ್‌ ಆಗಿದೆ. ಆದರೆ ಶರ್ಮಿಳಾ ಬೇರೊಂದು ಮದುವೆಯಾಗುತ್ತಿದ್ದಾಳೆ ಎಂದು ತಿಳಿದಾಗ ಭೂಷಣ್‌ಗೆ ಆಘಾತ. ಕಾದಂಬರಿಕಾರ್ತಿ ಕುಮುದಾ ಅವರ ಅಭಿಮಾನಿಯಾಗಿರುವ ‘ಶ್ವೇತಾ’ (ವೈಭವಿ ಶಾಂಡಿಲ್ಯ) ಅವರಿಗೆ ಮೊದಲ ನೋಟದಲ್ಲೇ ಮಾರುಹೋಗುವ ಗಣಿ, ಆಕೆಯ ಹಿಂದೆ ಓಡಾಡುವುದು. ಕುಮುದಾ ಕಾರಣಕ್ಕೆ ಶ್ವೇತಾಳಿಗೆ ಗಣಿ ಮೆಚ್ಚುಗೆಯಾಗುವುದು. ಗಣಿಯ ಕೆಲಸ ಶ್ವೇತಾಳಿಗೆ ಸಿಗುವುದು…!

3. ಕನ್ನಡ ವಿಭಾಗದ ಮುಖ್ಯಸ್ಥ ಕಿಶೋರ್‌ (ಅನಂತನಾಗ್‌) ಮೇಲೆ ಚಾವಣಿ ಕುಸಿದು ಗಾಯಗೊಳ್ಳುತ್ತಾರೆ. ಅದಕ್ಕೆ ದಿಗಿ ಕಾರಣವೆಂದು ಸುದ್ದಿ ಹರಡುತ್ತದೆ. ಆದರೆ ಇದಕ್ಕೆ ಅನುಪಮಾ ಕಾರಣ ಎಂಬುದು ಬೇರೆ ಕಥೆ. ಚಿಕ್ಕವನಿದ್ದಾಗಲೇ ಕಳೆದು ಹೋಗಿರುವ ತನ್ನ ಮಗನಿಗಾಗಿ ಸದಾ ಕನವರಿಸುವ ಕಿಶೋರ್‌ ಮೇಲೆ ಈಗ ಚಾವಣಿ ಕುಸಿದಿದೆ. ಈಗ ಆತನಿಗೆ ಮತಿ ಭ್ರಮಣೆಯಾಗಿರುವಂತೆ ಭಾಸವಾಗುತ್ತದೆ. ಗಾಳಿ ಪಟ ಉತ್ಸವದ ಫ್ಲಾಶ್‌ಬ್ಯಾಕ್‌. ಮಗನ ನೆನಪು. ಟಿ.ವಿ.ಯಲ್ಲಿ ಮಗುವೊಂದನ್ನು ನೋಡಿ, ತನ್ನ ಮಗನೆಂದೇ ಭಾವಿಸುವ ಕಿಶೋರ್‌, ಮಗನಿಗಾಗಿ ಕನವರಿಸುವುದು. ಕಾಲೇಜು ದಿನಗಳು ಮುಗಿದು, ಮತ್ತೆ ಮೇಷ್ಟ್ರನ್ನು ನೋಡಲು ಬರುವ ಗಣಿ ಹಾಗೂ ಸ್ನೇಹಿತರು ಟರ್ಕಿಗೆ ಮೇಷ್ಟ್ರನ್ನು ಕರೆದುಕೊಂಡು ಹೋಗಿ ಮಗನನ್ನು ಹುಡುಕಬೇಕೆಂದು ಬಯಸುವುದು. ಆ ವೇಳೆಗೆ ಶರ್ಮಿಳಾನ ಗಂಡ ತೀರಿಹೋಗಿದ್ದಾನೆಂದು ತಿಳಿದ ಭೂಷಣ್‌, ತಾನೂ ಟರ್ಕಿಗೆ ಹೊರಡುವುದು. ಜೀವನದ ಏರುಪೇರುಗಳನ್ನು ಕಂಡು ಜಿಗುಪ್ಸೆಯಾಗಿದ್ದ ದಿಗಿ ಕೆಲವು ಕಾಲ ಅಘೋರಿಯಾಗಿ, ಅಲ್ಲಿ ಸಲಿಂಗ ಕಾಮದ ಕಾಟಕ್ಕೆ ಹೆದರಿ ಹಿಂತಿರುಗಿದ್ದರೂ ಜುಟ್ಟಿನ ಗುರುತು ಹಾಗೆಯೇ ಇದೆ. ಆತನೂ ಕೂಡ ವಿದೇಶಕ್ಕೆ ಬರುತ್ತಾನೆ. ದಿಗಿ ಪ್ರೇಯಸಿ ಅನುಪಮಾ ಕೂಡ ಅಲ್ಲಿಗೆ ಬರುತ್ತಾಳೆ. ಹೀಗೆ ಬ್ರೇಕ್ ಆಗಿದ್ದ ಲವ್‌ಗೆ ಮತ್ತೆ ಸಂಪರ್ಕ ಕಲ್ಪಿಸುವ ಪ್ರಯತ್ನ. ತಲೆಕಟ್ಟವರಂತೆ ತಿರುಗುವ ಕಿಶೋರ್‌ ಮೇಷ್ಟ್ರು. ಗಾಳಿಪಟದ ಉತ್ಸವದಲ್ಲಿ ಮೇಷ್ಟ್ರಿಗೆ ಸಿಗುವ ಕಳೆದುಹೋದ ಪುತ್ರ!

ಇದನ್ನೂ ಓದಿರಿ: ಹಿಂಸೆಯೊಳಗಣ ಕಾರುಣ್ಯ: ಪ.ರಂಜಿತ್‌ ನಿರ್ದೇಶನದ ‘ಧಮ್ಮಮ್‌’ ತೆರೆದಿಟ್ಟ ತಾತ್ವಿಕತೆ

4. ಶರ್ಮಿಳಾ ಮೇಡಂ ಗಂಡ ತೀರಿಹೋಗಿಲ್ಲ ಎಂದು ಹತಾಶನಾಗುವ ಭೂಷಣ್‌. ಆದರೆ ಕೆಲವೇ ದಿನಗಳಲ್ಲಿ ಶರ್ಮಿಳಾ ಗಂಡ ಸಾಯಲಿರುವ ಸುದ್ದಿ ಕೇಳಿದ ಮೂವರು ಗೆಳೆಯರು ಪುಳಕಿತರಾಗುತ್ತಾರೆ. ಆಸ್ಪತ್ರೆಯಲ್ಲಿ ಮಲಗಿರುವ ಶರ್ಮಿಳಾ ಗಂಡನಲ್ಲಿ ಗಣಿ, “ನೀವು ಸತ್ತ ಬಳಿಕ ಭೂಷಣ್‌ ಶರ್ಮಿಳಾರನ್ನು ಮದುವೆಯಾಗುತ್ತಾನೆ” ಎಂದು ಹೇಳುತ್ತಾನೆ. ಇದೆಲ್ಲವನ್ನೂ ಆಂತರ್ಯದಲ್ಲಿ ಸುಖಿಸುತ್ತಿರುವ ಭೂಷಣ್‌ ಮೇಲೆ ಶರ್ಮಿಳಾ ಗಂಡ ಗರಂ ಆದಾಗ, ಭೂಷಣ್ ಮನಃಪರಿವರ್ತನೆಯಾಗುತ್ತಾನೆ. ಸಿಲ್ಲಿ ಸಿಲ್ಲಿ ಕಾರಣಗಳಿಗೆ ಗೆಳೆಯರು ಕಿತ್ತಾಡುತ್ತಾರೆ.

5 . ಗಣಿ ಯಾವಾಗಲೂ ಖುಷಿಯಾಗಿರಬೇಕೆಂದು ಬಯಸುವ ಆತನ ತಾಯಿ, ಸಾವಿಗೂ ಮುನ್ನ ಮಗನ ಜೊತೆ ಮಾತನಾಡುತ್ತಿರುವ ವಿಡಿಯೊ ಕಥೆ ಬೇರೆ ಇದೆ. ಆದರೆ ತನ್ನ ಹೆಂಡತಿ ಸಾಯುವುದಕ್ಕೆ ಮಗನೇ ಕಾರಣವೆಂದು ಮನೆಯಿಂದ ಗಣಿಯನ್ನು ಬೈರೇಗೌಡ ಹೊರಹಾಕುತ್ತಾನೆ. ಸದಾ ತರಲೆಯಲ್ಲೇ ಕಾಲ ಕಳೆಯುವ ಗಣಿಯ ಆಂತರ್ಯದಲ್ಲಿ ಹೇಳಿಕೊಳ್ಳಲಾಗದ ದುಃಖವಿದೆ ಎಂದು ಚಿತ್ರಿಸುವ ವ್ಯರ್ಥ ಪ್ರಯತ್ನ ಬೇರೆ ನಡೆದಿದೆ. ಆದರೆ ನೋಡುಗನಿಗೆ ಗಣಿಯ ದುಃಖ ಮರುಕವನ್ನೇನೂ ಹುಟ್ಟಿಸುವುದಿಲ್ಲ.

5. ಆಗಾಗ್ಗೆ ಬರುವ ಮಧುರ ಹಾಡುಗಳ ಕಿರಿಕಿರಿ. ಪರೀಕ್ಷೆ ಹೇಗೆ ನಡೆಯುತ್ತವೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದ ನಿರ್ದೇಶಕ. ಬರೀ ವಟಗುಟ್ಟುವ ಪಾತ್ರಗಳು. ಸಿಲ್ಲಿಸಿಲ್ಲಿಯಾಗಿ ಆಡುವ ಜಗಳಗಳು. ಅರ್ಥವಿಲ್ಲದ ಸಂಭಾಷಣೆಗಳು. ಇದೇ ತಮ್ಮ ಪ್ರತಿಭೆಯೆಂದು ಭಟ್ರು ಭಾವಿಸಿದಂತಿದೆಯೇನೋ!

‘ಗಾಳಿಪಟ-2’ ಬಗ್ಗೆ ಬರೆಯುತ್ತಾ ಹೋದರೆ ಬರೆಯುವವನ ತಲೆಯೂ ಬಿಸಿಯಾಗುತ್ತದೆ, ಓದುವವರ ತಲೆಯೂ ಬಿಸಿಯಾಗುತ್ತದೆ.

ಹಿಂದಿ ಹೇರಿಕೆಯ ಕುರಿತು ಹಿಂದೊಮ್ಮೆ ಪ್ರಶ್ನಿಸಿದ್ದಾಗ ಯೋಗರಾಜ್ ಭಟ್ ಉಡಾಫೆಯಾಗಿ ಪ್ರತಿಕ್ರಿಯೆ ನೀಡಿದ್ದರು. ಸಾರ್ವಜನಿಕ ಬದುಕಿನ ಬಗ್ಗೆ ಸಿನಿಮಾ ನಿರ್ದೇಶಕನಿಗಿರುವ ಧೋರಣೆ, ತಾನು ಮಾಡುವ ಸಿನಿಮಾದಲ್ಲೂ ವ್ಯಕ್ತವಾದಂತೆ ಕಾಣುತ್ತಿದೆ. ಪ್ರೇಕ್ಷಕ ಮಹಾಶಯನನ್ನು ಬಹಳ ಹಗುರವಾಗಿ ಭಟ್ರು ತೆಗೆದುಕೊಂಡಂತೆ ಕಾಣುತ್ತಿದೆ.

ಇದನ್ನೂ ಓದಿರಿ: ಸಾವಧಾನವಾಗಿ ಆವರಿಸಿಕೊಳ್ಳುವ ‘19(1)(a)’

ನಿರ್ಮಾಪಕರೇನೋ ಅಪಾರವಾಗಿ ಹಣ ಚೆಲ್ಲಿದ್ದಾರೆ. ಕರ್ನಾಟಕದಿಂದ ಟರ್ಕಿಯವರೆಗೆ ಕಥೆ ಸಾಗುತ್ತದೆ. ಮೇಷ್ಟ್ರ ಮಗನನ್ನು ಈ ಹುಡುಗರು ಟರ್ಕಿಗೆ ಹೊರಡುತ್ತಾರೋ, ಪ್ರೇಯಸಿಯರ ಜೊತೆ ಹುಡುಗಾಟವಾಡಲು ಹೊರಡುತ್ತಾರೋ- ಯಾವುದಕ್ಕೂ ಸರಿಯಾದ ದಿಕ್ಕುಗಳಿಲ್ಲ. ಈ ಗೊತ್ತು ಗುರಿ ಇಲ್ಲದ ಸ್ನೇಹಿತರ ಮಾತು ಕೇಳುತ್ತಿರುವ ಹುಡುಗಿಯರ ಪಾತ್ರಕ್ಕೂ ಗಂಭೀರತೆ ಇಲ್ಲ…. ‘ಅಯ್ಯೋ… ತಲೆ ಗಿರ್‌ ಅನ್ನುತ್ತಿದೆ… ಕಥೆ ಯಾವಾಗ ಮುಗಿಯುತ್ತದೆಯೋ’ ಎಂದು ಪ್ರೇಕ್ಷಕ ಕಾಯುತ್ತಾ ಕೂತರೆ, ಕೆಲವರು ಮಧ್ಯಂತರದಲ್ಲೇ ಎದ್ದು ಮನೆಗೆ ಹೋದರೂ ಆಶ್ಚರ್ಯವಿಲ್ಲ. ಭಟ್ರು ಮತ್ತೆ ತೌಡನ್ನೇ ಕುಟ್ಟಿದ್ದಾರೆ ಹೊರತು, ಭತ್ತವನ್ನೇನೂ ಅಲ್ಲ ಎಂದು ಮನವರಿಕೆಯಾಗುತ್ತದೆ.

ಕೊನೆಯ ಮಾತು: ಮದ್ಯಪಾನ ಮಾಡಿರುವ ಗಣಿ ‘ರ’ಕಾರವನ್ನು ‘ಲ’ಕಾರವಾಗಿ ಉಚ್ಚರಿಸುತ್ತಾನೆ. ‘ದೇವ್ರು’, ಎಂಬುದನ್ನು ‘ದೇವ್ಲು’ ಅಂತಾನೆ. ‘ರ’ಕಾರದ ಬದಲು ‘ಲ’ಕಾರ ಪ್ರದರ್ಶನ ಮಾಡುವುದಕ್ಕೆ ಒಂದು ಹಾಡು. ಅಂತೂ ಇಂತೂ ಭಟ್ಟರ ಲಾಜಿಕ್ಕನ್ನು ‘ಆ ದೇವ್ಲೆ’ ಬಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Very nice summary about the movie sir, Yograj bhat sir please take it seriously, don’t make the people’s foolish. Content should be like it has to take the viewers inside not to outside the theatre. This is what I felt. l hope it will not repeat in your next movies.

  2. To all the sweet kannada movie lovers please don’t watch galipata 2 movie. one of the worst movie directed by yograj bhat. whole movie is no were related to any of the scenes. It’s absolutely waste of time and money.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...