Homeಕರ್ನಾಟಕಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

ಆಹಾರದ ಹಕ್ಕು ಎತ್ತಿ ಹಿಡಿದ ಸಿದ್ದರಾಮಯ್ಯ: ಸೋಷಿಯಲ್‌ ಮೀಡಿಯಾ ತುಂಬಾ ಈಗ ಬಾಡಿನ ಘಮಲು

- Advertisement -
- Advertisement -

“ನೀನು ಯಾವನಯ್ಯಾ ನಾನ್‌ವೆಜ್‌ ತಿನ್ನಲ್ವೇನಯ್ಯ? ನಾನು ಏನು ತಿಂದೆ ಅಂತ ಕೇಳಲು ನೀನ್ಯಾವನು?” ಎಂದು ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತನೊಬ್ಬನಿಗೆ ತರಾಟೆ ತೆಗೆದುಕೊಂಡ ಬಳಿಕ ಸಾಮಾಜಿಕ ಮಾಧ್ಯಮಗಳಲ್ಲಿ ‘ಬಾಡಿನ ಘಮಲು’ ಜೋರಾಗಿದೆ.

‘ಬಾಡು ತಿಂದ ಬಳಿಕ ದೇವಾಸ್ಥಾನಕ್ಕೆ ಸಿದ್ದರಾಮಯ್ಯ ಹೋಗಿದ್ದಾರೆ’ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದಾರೆಂದು ಸಿದ್ದರಾಮಯ್ಯನವರ ಆಹಾರ ಹಕ್ಕನ್ನು ಕೆಣಕಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾಂಸಾಹಾರ ಕೇಂದ್ರಿತ ಶೂದ್ರ, ದಲಿತ ಸಂಸ್ಕೃತಿಯ ಕುರಿತು ಜನರೇ ಈಗ ಬಿಜೆಪಿಗೆ ಪಾಠ ಹೇಳುತ್ತಿದ್ದಾರೆ.

‘ನಮ್ಮ ಆಹಾರ ನಮ್ಮ ಹಕ್ಕು. ನಾವು ಏನು ತಿನ್ನಬೇಕು, ಏನು ತಿನ್ನಬಾರದು ಎಂದು ಕೇಳಲು ನೀವ್ಯಾರು?’ ಎಂಬ ಪ್ರಶ್ನೆ ಬಿರುಸು ಪಡೆದಿದೆ. ‘ಬಾಡೇ ನಮ್‌ ಗಾಡು’ ಅಭಿಯಾನದ ಎರಡನೇ ಆವೃತ್ತಿಯೂ ಚಾಲನೆ ಪಡೆದಿದೆ.

ಹಂಸಲೇಖ ಅವರು ಮಾಂಸಾಹಾರದ ಕುರಿತು ಮಾತನಾಡಿದ್ದ ಸಂದರ್ಭದಲ್ಲಿ ಮಾಂಸಾಹಾರಿಗಳ ಕುರಿತು ಕೆಲವರು ಕುಹಕವಾಡಿದ್ದರು. ಇದರಿಂದ ಸಿಟ್ಟಿಗೆದ್ದ ಬಹುಸಂಖ್ಯಾತ ಮಾಂಸಪ್ರಿಯರು, ‘ಬಾಡೇ ನಮ್‌ ಗಾಡು’ ಅಭಿಯಾನವನ್ನು ಆರಂಭಿಸಿ, ಯಶಸ್ವಿಯಾಗಿದ್ದರು. ಸಿದ್ದರಾಮಯ್ಯನವರು ತಮ್ಮ ಆಹಾರ ಸಂಸ್ಕೃತಿ ಹಾಗೂ ಹಕ್ಕನ್ನು ಪ್ರತಿಪಾದಿಸಿದ ಬಳಿಕ ಮತ್ತೊಮ್ಮೆ ‘ಬಾಡೇ ನಮ್‌ ಗಾಡು’ ಎಂದು ಜನರು ಹೇಳತೊಡಗಿದ್ದಾರೆ.

“ನಾಳೆಯಿಂದ ಬರುವ ಅಮಾವಾಸ್ಯೆವರೆಗೂ #ಬಾಡೇ_ನಮ್_ಗಾಡು ಬೃಹತ್ ಅಭಿಯಾನ. ಈ Hashtag ಬಳಸಿ ಬಾಡೂಟದ ಫೋಟೋ ಪೋಸ್ಟ್ ಮಾಡಬೇಕು. ಬಾಡು ತಿನ್ನದದವರಿಗೂ ನೋಡೋಕೆ ಮುಕ್ತ ಅವಕಾಶವಿದೆ. ಶ್ರಾವಣ, ಸೋಮವಾರ, ಶುಕ್ರವಾರ ಅಂತ ಕಥೆ ಹೊಡೆಯೋ ದಲಿತ ಮತ್ತು ಶೂದ್ರ $#%% ಕ್ಕೆ ಪ್ರವೇಶ ನಿಷಿದ್ಧ. ಇನ್ನುಳಿದಂತೆ ಸರ್ವರಿಗೂ ಮುಕ್ತ ಪ್ರವೇಶ. ಪ್ರಕಟಣೆ : ಅಖಿಲ ಕರ್ನಾಟಕ ಬಾಡು ಪ್ರಿಯ ಸಂಘ” ಎಂಬ ಸಂದೇಶ ವೈರಲ್ ಆಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಕೆಲವು ಪ್ರತಿಕ್ರಿಯೆಗಳ ಝಲಕ್‌ ಹೀಗಿದೆ:

ರಾಜ್ಯ ಸರ್ಕಾರ ತಕ್ಷಣ ಒಂದು ಆದೇಶ ಹೊರಡಿಸಿ ಎಲ್ಲ ದೇವಸ್ಥಾನಗಳ ಮುಂದೆ ಅಲ್ಲಿಗೆ ಭೇಟಿ ನೀಡುವ ಭಕ್ತರ ಹೊಟ್ಟೆಯಲ್ಲಿ ಏನಿದೆ ಎಂದು ಪರೀಕ್ಷೆ ಮಾಡಲು ಸ್ಕಾನಿಂಗ್ ಮೆಷಿನ್ ಅಳವಡಿಸುವುದನ್ನು ಕಡ್ಡಾಯಗೊಳಿಸ ಬೇಕು.

– ದಿನೇಶ್ ಅಮೀನ್‌ ಮಟ್ಟು

***

ಮಾಂಸಾಹಾರದ ಕುರಿತಾದ ಕೀಳರಿಮೆಯನ್ನು ಮೊದಲು ತೊಡೆದು ಹಾಕಿ. ನಮ್ಮ ಬದುಕು ,ನಮ್ಮ ಊಟ, ನಮ್ಮ ಆಚರಣೆ- ಇದೊಂದು ‘ಪುಷ್ಕಳ’ ಕಂ ಸಮೃದ್ಧ ದ್ರಾವಿಡ ಸಂಸ್ಕೃತಿ. ಮಾಂಸದೂಟದ ಜತೆಗಿನ ಸುಂದರ ನೆನಪುಗಳನ್ನು ಚಿತ್ರ ಬರೆಹಗಳ ಮೂಲಕ ಆದಷ್ಟೂ ದಾಖಲಿಸಿ. ಇಲ್ಲಿ ಯಾವ ಸಂಪಾದಕನೂ ಇಲ್ಲ. ನಿಮ್ಮ ಗೋಡೆ ನಿಮ್ಮಿಷ್ಟ. ನಡೀರಿ. ಇದೊಂದು ಆಂದೋಲನವಾಗಲಿ.

– ದಿನೇಶ್ ಕುಕ್ಕುಜಡ್ಕ

*****

****

ದೇವಸ್ಥಾನಕ್ಕೆ ಹೋಗುವ ಮುನ್ನ ಮಾತ್ರೆ ತೆಗೆದುಕೊಂಡೋ, ಇನ್ಯಾವುದೋ ರೀತಿಯಲ್ಲಿಯೋ ಜಠರ, ಕರುಳು ಸಂಪೂರ್ಣ ಖಾಲಿ ಮಾಡಿ, ಸೋಪು ಸರ್ಫು ಹಾಕಿ ತೊಳೆದು ಹೊಟ್ಟೆಯೊಳಗೆ ಏನೂ ಇಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ಆಮೇಲೆ ಹೋಗಬೇಕಾಗಿ ವಿನಂತಿ. ಹಾಗೆಯೇ ಹೋದುದು ಕನ್ನಡ ಸುದ್ದಿವಾಹಿನಿಗಳಿಗೆ ಗೊತ್ತಾದರೆ ಕಷ್ಟ.

– ಶ್ರೀನಿವಾಸ ಕಾರ್ಕಳ

****

2016- ದನದ ಮಾಂಸ ತಿಂದ ಎಂದು ಬಡಿದು ಕೊಂದರು ಸೈಯದ್ ಅಕ್ಲಾಕ್‌‌ನನ್ನು. 2022- ಮಾಂಸಾಹಾರ ತಿಂದು ದೇವಸ್ಥಾನಕ್ಕೆ ಹೋದರೆಂದು ದಾಳಿ ನಡೆಸಿದರು ಸಿದ್ದರಾಮಯ್ಯ ಮೇಲೆ. ಬಿಜೆಪಿಯ ಈ ಕ್ರೊನಾಲಜಿ ಗಮನಿಸಿ. ನಿನ್ನೆ ಅಕ್ಲಾಕ್, ಇವತ್ತು ಸಿದ್ದರಾಮಯ್ಯ, ನಾಳೆ ನೀವು, ನೀವು. #ನಮ್ಮ_ಆಹಾರ_ನಮ್ಮ_ಹಕ್ಕು #ಕ್ರೊನಾಲಜಿ_ಸಂಝೇ #bjp_is_sick #my_food_my_right

-ಶಶಿ ಸಂಪಳ್ಳಿ

***

ಏಯ್, ನೀ ಯಾವನಯ್ಯಾ ಕೇಳಾಕೆ? ಆಹಾರ ಅವರವರ ಹಕ್ಕು. ಬಾಡು ನಮ್ಮ ಗಾಡು. ಯಾವುದು ತಿನ್ನಬೇಕು ಯಾವುದು ತಿನ್ನಬಾರದು ಎಂದು ಕೇಳೋಕೆ ನೀನು ಯಾವನಯ್ಯ.

– ಹನುಮೇಶ್‌ ಗುಂಡೂರು

***

ಮಾಂಸ ತಿನ್ನುವವರು
ಇವಿಎಂನಲ್ಲಿ
ಕಮಲದ ಮೇಲೆ
ಬೆರಳಿಡಬೇಡಿ,
ಮಡಿ ಕೆಟ್ಟು ಮೈಲಿಗೆಯಾದೀತು.

– ಡಾ.ಶ್ರೀನಿವಾಸ ಕಕ್ಕಿಲ್ಲಾಯ

***

ಮಾಂಸಾಹಾರ ತಿಂದವರು ದೇವಸ್ಥಾನಕ್ಕೆ ಬರಬಾರದೆಂದು ಯಾವ ದೇವರು ಬಂದು ಹೇಳಿದ್ದು ಅಂತ ಯಾರಾದರೂ ದಾಖಲೆ ಸಮೇತ ಹೇಳಿದರೆ ಒಳ್ಳೆಯದು. ಯಾಕಂದ್ರೆ ನಮ್ಮ ಮಾರಮ್ಮನಿಗೆ ನಾವು ಕುರಿ‌ ಕಡಿದೇ ಹಬ್ಬ ಮಾಡೋದು.‌ ಹಾಗಾದ್ರೆ ಮಾರಮ್ಮ ದೇವರಲ್ಲವೇ?

– ದೇಶಾದ್ರಿ ಹೊಸಮನೆ

***

ನಾನು ಮಾಂಸಹಾರಿ. ಮಾಂಸ ತಿನ್ನುತ್ತೇನೆ. ಇದು ನನ್ನ ಆಹಾರದ ಆಯ್ಕೆ ಮತ್ತು ಹಕ್ಕು.
ನೀನ್ಯಾವನಯ್ಯ ಕೇಳುವುದಕ್ಕೆ. #isupportsiddaramaiah

– ಶ್ರೀಪಾದ ಭಟ್‌

***

#ಬಾಡೇ_ನಮ್_ಗಾಡು

ಸುಮ್ನೆ ಮಾತಾಡೋದೇನು ಅಂತ ಬರುವಾಗ ಕೆ.ಎಂ.ದೊಡ್ಡೀಲಿ ಎರಡೂವರೆ ಕೆ.ಜಿ. ಹಂದಿ ಬಾಡು ತಂದು ಮೆಣಸುಪ್ಪಿನ ಕರಿ ಮಾಡಿ ಹೊಟ್ಟೆ ತುಂಬಾ ತಿಂದೊ. ನಾಳೆಗೂ ಇದೆ. ತಿಂಡಿಗೇ ಬನ್ನಿ.

– ಕೃಷ್ಣೇಗೌಡ ಟಿ.ಲಿಂಗಯ್ಯ

***

ಒಂದು ಎರಡು
ಬಾಳೆಲೆ ಹರಡು
ಮೂರು ನಾಕು
ಬಾಡು ಹಾಕು
ಐದು ಆರು
ಕೋಳಿ ಸಾರು
ಏಳು ಎಂಟು
ಮೀನು ಉಂಟು
ಒಂಬತ್ತು ಹತ್ತು
ಬಲು ರುಚಿ ಇತ್ತು
ಒಂದರಿಂದ ಹತ್ತು ಹೀಗಿತ್ತು
ಬಾಡಿನ ಗತ್ತು ಮುಗಿದಿತ್ತು.
( ಮೂಲ ಕವಿಗಳ ಕ್ಷಮೆ ಕೋರಿ)

– ಪುರುಷೋತ್ತಮ ಬಿಳಿಮಲೆ

****

***

***

ಹೀಗೆ ಸೋಷಿಯಲ್ ಮೀಡಿಯಾಗಳ ತುಂಬಾ ಬಾಡಿನ ಘಮಲು ಹೆಚ್ಚಾಗಿದೆ. ಮಾಂಸ ತಿನ್ನುವವರನ್ನು ಹಂಗಿಸುವ ಬಿಜೆಪಿಯವರನ್ನು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...