Homeಸಿನಿಮಾಸಿನಿ ಸುದ್ದಿಚಲನಚಿತ್ರ ಬರಹ ಎನ್ನುವ ನಿಗೂಢ ಕಲೆ

ಚಲನಚಿತ್ರ ಬರಹ ಎನ್ನುವ ನಿಗೂಢ ಕಲೆ

(ಕನ್ನಡ ಚಿತ್ರರಂಗದ್ದೇ ಇಷ್ಟು ಕೆಟ್ಟ ಪರಿಸ್ಥಿತಿ ಎಂದು ಬೇಸರಿಸಬೇಡಿ; ವಿಶ್ವದಾದ್ಯಂತ ಸುಮಾರು 15% ಚಿತ್ರಗಳು ಮಾತ್ರ ಗೆಲ್ಲುತ್ತವೆ

- Advertisement -
- Advertisement -

2015 ರಲ್ಲಿ 136 ಕನ್ನಡ ಸಿನೆಮಾಗಳು ಬಿಡುಗಡೆಯಾದವು; 2016ರಲ್ಲಿ 175, 2017ರಲ್ಲಿ 181 ಮತ್ತು 2018ರಲ್ಲಿ 243!
ಈ ನೂರಾರು ಸಿನೆಮಾಗಳಲ್ಲಿ ನಮ್ಮ ಮನದಲ್ಲಿ ಉಳಿದಿರುವ ಸಿನೆಮಾಗಳ ಸಂಖ್ಯೆ ಎಷ್ಟು? ಯಶಸ್ವಿಯಾದ ಸಿನೆಮಾಗಳ ಸಂಖ್ಯೆ ಎಷ್ಟು? 2015 ರಲ್ಲಿ 136ರ ಪೈಕಿ 6 ಸಿನೆಮಾಗಳು ಯಶಸ್ವಿಯಾದವಂತೆ. ಆ ನಂತರದ ವರ್ಷಗಳಲ್ಲೂ ಸ್ಥಿತಿ ಅಷ್ಟೇನೂ ಭಿನ್ನವಾಗಿಲ್ಲ. ಮೇಲ್ನೋಟಕ್ಕೆ ಸುಮಾರು 5% ಸಿನೆಮಾಗಳು ಗೆಲ್ಲುತ್ತಿವೆ ಕನ್ನಡದಲ್ಲಿ. (ಕನ್ನಡ ಚಿತ್ರರಂಗದ್ದೇ ಇಷ್ಟು ಕೆಟ್ಟ ಪರಿಸ್ಥಿತಿ ಎಂದು ಬೇಸರಿಸಬೇಡಿ; ವಿಶ್ವದಾದ್ಯಂತ ಸುಮಾರು 15% ಚಿತ್ರಗಳು ಮಾತ್ರ ಗೆಲ್ಲುತ್ತವೆ)

ಯಾಕ್ಹೀಗೆ? ಒಂದು ಚಿತ್ರ ಯಶಸ್ವಿಯಾಗಬೇಕಾದರೆ ಏನು ಮಾಡಬೇಕು? ಅದಕ್ಕೆ ಹಲವಾರು ಕಾರಣಗಳನ್ನು ನೀಡಬಹುದು. ಹಾಗೂ ಆ ಎಲ್ಲ ಕಾರಣಗಳೂ ಸರಿಯೆನ್ನಿಸಬಹುದು. ಆದರೆ ಚಿತ್ರದ ಮೂಲ ಚಿತ್ರಕಥೆಯೇ. ಚಿತ್ರಕಥೆ ಬರೆಯುವ ಪ್ರಕ್ರಿಯೆಗೆ ಇಂಗ್ಲೀಷಿನಲ್ಲಿರುವ ಪದ ‘screenwriting’. ಒಂದು ಚಲನಚಿತ್ರವನ್ನು ಚಿತ್ರಿಸುವುದಕ್ಕೂ ಮುನ್ನ ಹಾಳೆಯಲ್ಲಿ ಆ ಚಿತ್ರವನ್ನು ಬರೆಯುವುದೇ ಸ್ಕ್ರೀನ್‍ರೈಟಿಂಗ್. ಅಷ್ಟೇ ಸರಳವಾಗಿದ್ದರೇ ಈ ಕಲೆಯೇಕೆ ನಿಗೂಢ?

ಅದು ಚಲನಚಿತ್ರ ಅಥವಾ ಸಿನೆಮಾ ಎನ್ನುವ ಮಾಧ್ಯಮದ ಅಪಾರ ವ್ಯಾಪ್ತಿ ಮತ್ತು ಅದರೊಂದಿಗೆ ಇರುವ ಮಿತಿಗಳ ಕಾರಣದಿಂದಾಗಿ ಇದೊಂದು ನಿಗೂಢ ಕಲೆಯಾಗಿದೆ. ಅದರರ್ಥ ಚಲನಚಿತ್ರ ಬರಹದ ಕಲೆಯನ್ನೂ ಯಾರೂ ಭೇದಿಸಿಲ್ಲ, ಆಳವಾಗಿ ಅಭ್ಯಸಿಸಿಲ್ಲ ಎಂತಲ್ಲ. ಅನೇಕರು ಅದನ್ನು ಅಭ್ಯಸಿಸಿ, ಅದರ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ. ಅದರೊಂದಿಗೆ ತಮ್ಮ ಸ್ಕ್ರೀನ್‍ರೈಟಿಂಗ್‍ನ ಥಿಯರಿಗಳನ್ನು ಬಳಸಿ ಯಶಸ್ವಿ ಚಿತ್ರಗಳನ್ನೂ ಮಾಡಿದ್ದಾರೆ. ಅಷ್ಟಾದರೂ ಅದು ನಿಗೂಢವೆ. ಸ್ಕ್ರೀನ್‍ರೈಟಿಂಗ್‍ನ ಕೆಲವು ಥಿಯರಿಗಳು ಕೆಲ ಸಲ ಕೆಲಸ ಮಾಡಿದರೆ ಮತ್ತೊಮ್ಮೆ ಅವೇ ಥಿಯರಿಗಳು ಸಂಪೂರ್ಣವಾಗಿ ಕೈಕೊಡುತ್ತವೆ.

ಸ್ಕ್ರೀನ್‍ರೈಟಿಂಗ್‍ನ ರಹಸ್ಯವನ್ನು ಭೇದಿಸುವಾಗ ಹೊಸಬರು ಮಾಡುವ ಮೊದಲ ತಪ್ಪು; ಸ್ಕ್ರೀನ್‍ರೈಟಿಂಗ್ ಅನ್ನು ಅಭ್ಯಸಿಸತೊಡಗುವುದು. ಹೇಗೆ ಬರೆಯಬೇಕು, ಸ್ಕ್ರೀನ್‍ರೈಟಿಂಗ್‍ನ ಮೂಲತತ್ವಗಳು, ತಂತ್ರಗಳನ್ನು ಕಲಿಯಲು ಯತ್ನಿಸುವುದು. ಆದರೆ ಅಭ್ಯಸಿಸಬೇಕಿರುವುದು ಸಿನೆಮಾವನ್ನು. ಸಿನೆಮಾದ ಆಳಗಳನ್ನು ಅರಿತುಕೊಂಡಲ್ಲಿ ಚಲನಚಿತ್ರ ಬರಹ ಮಾಡುವುದು ಹೇಗೆ ಎನ್ನುವುದು ಅರಿಯುವುದು ಅಷ್ಟು ಕಷ್ಟವಾಗುವುದಿಲ್ಲ. ಆದರೂ ಕಷ್ಟವೇ.

ಸ್ಕ್ರೀನ್‍ರೈಟಿಂಗ್ ಒಂದು ಪ್ರಕ್ರಿಯೆ. ಒಂದು ಚಿತ್ರಕ್ಕೆ ಇರುವ ಸ್ಟ್ರಕ್ಚರ್‍ದಂತೆ ಸ್ಕ್ರೀನ್‍ರೈಟಿಂಗ್‍ನ ಪ್ರಕ್ರಿಯೆಗೂ ಆರಂಭ, ಮಧ್ಯ ಮತ್ತು ಕೊನೆ ಇರುತ್ತವೆ. ‘ಒಂದೊಳ್ಳೇ ಐಡಿಯಾ’ದಿಂದ ಶುರುವಾಗುವ ಈ ಪ್ರಕ್ರಿಯೆ ಕೊನೆಯ ಡ್ರಾಫ್ಟ್ ಬರೆದು ಮುಗಿಸಲು ಹಲವಾರು ತಿಂಗಳು, ವರ್ಷ ತೆಗೆದುಕೊಳ್ಳಬಹುದು. ಒಂದು ಐಡಿಯಾ ಎಷ್ಟೇ ಒಳ್ಳೆಯದಿದ್ದರೂ ಅದು ಐಡಿಯಾ ಅಷ್ಟೇ. ಅದು ಕಥೆಯೂ ಅಲ್ಲ, ಚಿತ್ರಕಥೆಯಂತೂ ಅಲ್ಲವೇ ಅಲ್ಲ.

ಸಿನೆಮಾಗೆ ಕೆಲವು ಮಿತಿಗಳಿವೆ. ಕಥೆಯನ್ನು ಸುಮಾರು 2 ಗಂಟೆಗಳ ಅವಧಿಯಲ್ಲಿಯೇ ತೋರಿಸಬೇಕು. (ಇದಕ್ಕೆ ಖಂಡಿತವಾಗಿಯೂ ಅಪವಾದಗಳಿವೆ) ಕಥೆ ಮುಂದಕ್ಕೆ ಹೋಗುತ್ತಲೇ ಇರಬೇಕು. ಸ್ಕ್ರೀನ್‍ರೈಟಿಂಗ್‍ನ ಒಬ್ಬ ದೊಡ್ಡ ಗುರು ಸಿಡ್ ಫೀಲ್ಡ್ ಎನ್ನುವ ವ್ಯಕ್ತಿ. ಅವರು ಮೂರು ಆ್ಯಕ್ಟ್ ಸ್ಟ್ರಕ್ಚರ್‍ಅನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಾರೆ. ಚಿತ್ರ ಆರಂಭವಾದ ಅರ್ಧ ಗಂಟೆಯೊಳಗೆ ಒಂದು ತಿರುವು (plot point) ಪಡೆದುಕೊಳ್ಳಬೇಕೆಂದು, ಎರಡನೇ ಆ್ಯಕ್ಟ್ ಮುಗಿಸಿ ಕೊನೆಯ ಆ್ಯಕ್ಟ್‍ಗೆ ಕಾಲಿಡುವ ಮುನ್ನ ಒಂದು ತಿರುವಿರಬೇಕೆಂದು ಹೇಳಿ, ಆ ನಂತರ ಪ್ರತಿ 15 ನಿಮಿಷಕ್ಕೊಮ್ಮೆ ಚಿತ್ರವನ್ನು ಹಿಡಿದಿಡಲು ಕೊಂಡಿಯಾಗುವಂತ ಒಂದು ದೃಶ್ಯ ಇರಬೇಕು ಎನ್ನುತ್ತಾರೆ. ಅವೆಲ್ಲವುಗಳನ್ನೂ ಪಾಲಿಸಿದ ನಂತರವೂ ಒಂದು ಕೆಟ್ಟ ಚಿತ್ರಕಥೆ ಬರೆಯಬಹುದು ಎನ್ನುವುದು ನನ್ನ ಅನುಭವದ ಸತ್ಯ. ಸಂಭಾಷಣೆ ಹೇಗಿರಬೇಕು, ಒಂದು ದೃಶ್ಯ ಯಾವ್ಯಾವ ಅಂಶಗಳನ್ನು ಒಳಗೊಂಡಿರಬೇಕು ಎನ್ನಲೂ ಅನೇಕ ಮಾರ್ಗಸೂಚಿಗಳನ್ನು ಅನೇಕರು ಸೂಚಿಸಿದ್ದಾರೆ. ಅವೆಲ್ಲವುಗಳನ್ನು ಪಾಲಿಸಿದರೂ ಅದೇ ಫಲಿತಾಂಶ ಸಿಗಬಹುದು.

ಹಾಗಾದರೆ ಮಾಡಬೇಕಾದುದೇನು?
ಮೊದಲು ಮಾಡಬೇಕಾಗಿರುವುದು ಚಿತ್ರದ ಥೀಮ್ ಏನಿದೆ ಎಂದು ಸ್ಪಷ್ಟಪಡಿಸುವುದು. ಎರಡನೇ ಹೆಜ್ಜೆ, ಕಥೆ ಏನಿದೆ ಎನ್ನುವುದು. (ಕಥೆಯ ಸ್ಟ್ರಕ್ಚರ್ ಬಗ್ಗೆ ಈಗಾಗಲೇ ಬರೆದಿದ್ದೇನೆ) ಸಂಪೂರ್ಣ ಚಿತ್ರಕಥೆಯನ್ನು ಒಂದು ಪ್ಯಾರಾಗೆ ತಂದಿಳಿಸುವುದು. ಬರೆಯಬಯಸಿದ ಎಲ್ಲಾ ದೃಶ್ಯಗಳು ನಿರ್ಧರಿಸಿದ ಕಥೆಯ ಪರಿಧಿಯೊಳಗೇ ಇವೆಯೆ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳುವುದು. ಆ ಕಥೆಗೆ ಅಗತ್ಯವಿರುವ ಅಧ್ಯಯನವನ್ನು ಇದಕ್ಕಿಂತ ಮುಂಚೆಯೇ ಮಾಡಿರಬೇಕಾಗುತ್ತದೆ. ನಾಯಕಿ/ಕ ಯಾರು ಎನ್ನುವುದು ಅಷ್ಟರಲ್ಲಿ ಸ್ಪಷ್ಟವಾಗಿರುತ್ತದೆ. ಆ ಕಥೆಯಲ್ಲಿ ನಾಯಕ ಸಂದರ್ಭದ ಕೂಸು ಆಗಿರುತ್ತಾನೆಯೇ? ಅಥವಾ ಕಥೆಯಲ್ಲಿ ಆಗುವ ಹೆಚ್ಚಿನ ಬದಲಾವಣೆಗಳನ್ನು ನಾಯಕಿಯೇ ಪ್ರೇರೇಪಿಸುತ್ತಾಳೆಯೇ? ಹಲವರ ಪ್ರಕಾರ ನಾಯಕಿಯೇ ಚಿತ್ರಕಥೆಯನ್ನು ಮುನ್ನಡೆಸಬೇಕು. ಇಲ್ಲವಾದರೆ ನೋಡುಗನಿಗೆ ಆಸಕ್ತಿ ಹುಟ್ಟುವುದಿಲ್ಲ. ನಾಯಕಿಗೆ ಆ ಚಿತ್ರದಲ್ಲಿ ಬೇಕಾಗಿರುವುದೇನು? ನೋಡುಗರಿಗೂ ಆ ನಾಯಕಿಗೆ ಅದು ಸಿಗಲೇಬೇಕು ಎನ್ನಿಸುವುದೇ? ಹೀಗೆ ಹತ್ತು ಹಲವಾರು ಸಂಗತಿಗಳನ್ನು ಸ್ಪಷ್ಟಪಡಿಸುತ್ತ ಬರೆಯಬೇಕಾಗುತ್ತದೆ.

ಚಿತ್ರಕಥೆ ಬರೆಯುವುದು ಕಥೆ ಕಾದಂಬರಿ ಬರೆದಂತಲ್ಲ; ಯಾವುದೋ ಸನ್ನಿವೇಶ ಇಷ್ಟವಾದರೆ, ಪಾತ್ರ ಇಷ್ಟವಾದರೆ ಪುಟಗಟ್ಟಲೇ ಬರೆಯುತ್ತ ಹೋಗಬಹುದು ಆದರೆ ಚಿತ್ರಕಥೆಯಲ್ಲಿ ಆ ಲಗ್ಷ್ಷುರಿ ಇಲ್ಲ. ಕೆಲವರು ಹೇಳುವುದು ಚಿತ್ರಕಥೆ ಬರೆಯುವುದು ತಂತಿಯ ಮೇಲೆ ನಡೆದಂತೆ; ಸರಿಯಾದ ಸಮತೋಲನ ಮಾಡುತ್ತ, ಮುಂದುವರೆಯುತ್ತಲೇ ಇರಬೇಕು. ಇಲ್ಲದಿದ್ದರೆ ಆಯತಪ್ಪಿ ಬೀಳುವುದು ತಪ್ಪಿದ್ದಲ್ಲ. ಇನ್ನೂ ಕೆಲವರು ಚಿತ್ರಕಥೆ ಬರೆಯುವುದನ್ನು ಪರ್ವತಾರೋಹಣಕ್ಕೆ ಹೋಲಿಸುತ್ತಾರೆ. ಪರ್ವತ ಹತ್ತುತ್ತಿರುವಾಗ ನಿಮಗೆ ಕಾಣಿಸುವುದು ನಿಮ್ಮ ಎದುರಿಗಿನ ಬಂಡೆಕಲ್ಲಷ್ಟೆ; ಪರ್ವತ ಕಾಣುವುದಿಲ್ಲ. ಮುಂದಿನ ಹೆಜ್ಜೆಯನ್ನು ಎಲ್ಲಿಡಬೇಕು ಎನ್ನುವುದಷ್ಟೇ ಪರ್ವತಾರೋಹಿಯ ಸಮಸ್ಯೆ. ಈ ರೀತಿ ಸಮತೋಲನ ಕಾಯ್ದುಕೊಂಡು ಪರ್ವತದ ತುತ್ತತುದಿ ಮುಟ್ಟಿದಾಗ ಸಿಗುವ ಆನಂದ ಹೇಳತೀರದು. ಆದರೆ ಚಿತ್ರಕಥೆಯ ಬರಹಗಾರ/ರ್ತಿ ಅಷ್ಟು ಅದೃಷ್ಟವಂತಳಲ್ಲ. ಕೊನೆಯ ದೃಶ್ಯದ ತನಕ ಬರೆದು ಮುಗಿಸಿ ಕೆಲ ಸಮಯ ಬ್ರೇಕ್ ತೆಗೆದುಕೊಂಡು ಮತ್ತೇ ಮರಳುತ್ತಾಳೆ. ಆಗ ಚಿತ್ರಕಥೆಯನ್ನು ಒಂದು ಸಲ ಓದಿದಾಗ ಕಾದಿರುವುದು ಒಂದೋ ಪರವಾಗಿಲ್ಲ ಎನ್ನುವ ಭಾವನೆ ಅಥವಾ ನೈರಾಶ್ಯ. ಆಗ ತಲೆಕೆಡಿಸಿಕೊಂಡು ಇದರ ಸಹವಾಸವೇ ಬೇಡ ಎಂದು ಬಿಟ್ಟುಬಿಡಬಹುದು ಅಥವಾ ಸ್ಕ್ರೀನ್‍ರೈಟಿಂಗ್ ಪ್ರಕ್ರಿಯೆಯ ಅವಿಭಾಜ್ಯ ಅಂಗವಾದ ರೀರೈಟಿಂಗ್ (ಮರುಬರಹ) ಶುರು ಮಾಡಬೇಕು. ಮರುಬರಹ ಎಂದರೆ ಇಡೀ ಪ್ರಕ್ರಿಯೆಯನ್ನು ಇನ್ನೊಂದು ಸಲ ಮಾಡುವುದು. ಬರೆದ ಇಡೀ ಚಿತ್ರಕಥೆ (screenplay) ಅನ್ನು ಓದಿ ವಿಶ್ಲೇಷಿಸಿ, ಆ ಚಿತ್ರಕಥೆ ಕೆಲಸ ಮಾಡದೇ ಇರುವುದಕ್ಕೆ ಕಾರಣಗಳನ್ನು ಹುಡುಕಿ, ಅದು ಕೆಲಸ ಮಾಡಬೇಕಾದರೆ ಏನು ಮಾಡಬೇಕಾಗುವುದು ಎನ್ನುವುದನ್ನು ಪತ್ತೇ ಹಚ್ಚಿ ಮತ್ತೊಮ್ಮೆ ಪ್ರಕ್ರಿಯೆಯನ್ನು ಶುರು ಮಾಡುತ್ತಾಳೆ. ಈ ಪ್ರಕ್ರಿಯೆ ಮಾಡಿದ ನಂತರವೂ ಒಂದು ಉತ್ತಮ ಚಿತ್ರಕಥೆ ಸೃಷ್ಟಿಸಲು ಸಾಧ್ಯವಾಗುವುದೇ? ಉತ್ತಮ ಚಿತ್ರಕಥೆಯಾಗಿದ್ದರೂ ಆ ಚಿತ್ರ ಯಶಸ್ವಿಯಾಗುವುದೇ? ಗೊತ್ತಿಲ್ಲ. ಇವೆಲ್ಲವುಗಳಿಗೆ ಮೀರಿಯೂ ಕೆಲವು ಅಂಶಗಳಿರುತ್ತವೆ. ಆ ಚಿತ್ರದ ಆಗಿನ ಸಮಯದಲ್ಲಿ ಪ್ರಸ್ತುತತೆಯೇನು? ಕಥೆ, ಕಥೆ ಹೇಳುವ ಶೈಲಿ ಅಥವಾ ಇನ್ನಾವುದೋ ಅಂಶ ನೋಡುಗರನ್ನು ಬೆಚ್ಚಿಬೀಳಿಸಲಿದೆಯೇ? ಇವೆಲ್ಲವಕ್ಕೆ ಉತ್ತರ ಸಕಾರಾತ್ಮಕವಾದರೂ ಚಿತ್ರ ಗೆಲ್ಲುವುದೋ ಇಲ್ಲವೋ ಎನ್ನುವುದು ಬಹುಶಃ ಯಾರಿಗೂ ತಿಳಿಯದು.

2003 ರಲ್ಲಿ ನಾನು ನನ್ನ ಮೊದಲ ಪೂರ್ಣಪ್ರಮಾಣದ ಚಿತ್ರಕಥೆ ಬರೆದೆ. ಆಧುನಿಕ ಯಯಾತಿಯ ಕಥೆ ಅದಾಗಿತ್ತು. ಹಲವಾರು ತಿಂಗಳು ಬರೆದು ಮುಗಿಸಿದ ನಂತರ ಒಬ್ಬ ಗೆಳೆಯನಿಗೆ ಓದಲು ಕೊಟ್ಟೆ. ಚಿತ್ರಕಥೆ ಅಪ್ರಬುದ್ಧ naive & immature) ಆಗಿದೆ ಎಂದು ಅವನು ಹೇಳಿದ. ಅಂದೇ ಸಂಜೆ ಹಿಂದಿ ಚಿತ್ರರಂಗದ ಹೆಸರಾಂತ ಚಿತ್ರಬರಹಗಾರರಾದ ಪಂಡಿತ್ ಸತ್ಯದೇವ್ ದುಬೆ ಅವರಿಗೆ ಹೀಗಾಯಿತು, ನನ್ನ ಗೆಳೆಯನೊಬ್ಬ ನಾನು ಬರೆದ ಚಿತ್ರಕಥೆಯನ್ನು ಅಪ್ರಬುದ್ಧ ಎಂದು ಕರೆದ ಎಂದು ನನ್ನ ಬೇಸರವನ್ನು ತೋಡಿಕೊಂಡೆ. ಅವರು ಮುಗುಳ್ನಕ್ಕು ‘ಮಜಾ ತೊ ಆಯಾನಾ ಲಿಖ್ತೆ ವಕ್ತ್, ಇಕ್ ರಿಲೇಶನ್‍ಶಿಪ್ ಥಾ ನಾ ತೆರೆ ಔರ್ ಉಸ್ ಸ್ಕ್ರೀನ್‍ಪ್ಲೇ ಕೆ ಬೀಚ್‍ಮೆ’ ಎಂದರು. (ಬರೆಯುವಾಗ ಮಜಾ ಬಂತಲ್ವಾ, ನೀನು ಬರೆಯುತ್ತಿದ್ದ ಚಿತ್ರಕಥೆಗೂ ನಿನಗೂ ಒಂದು ಸಂಬಂಧ ಏರ್ಪಟ್ಟಿತ್ತಲ್ಲವಾ? ಸಾಕು ಮತ್ತೇನು).
ಶಬ್ದಗಳಲ್ಲಿ ಹೇಳಲಾಗದ ಆ ಯಾತನಾಮಯ ಸಂಬಂಧವನ್ನು ಅನುಭವಿಸುವುದೇ ಚಿತ್ರಕಥೆ ಬರೆಯುವ ನಿಗೂಢ ಕಲೆ. ಸಂಬಂಧ ಎಂಥದ್ದೇ ಇರಲಿ, ಅದರಿಂದ ಹೊರಬಂದಾಗ ಎಂಥವನಾದರೂ ಒಂದಿಷ್ಟು ಬೆಳೆದಿರುತ್ತಾನೆ ಎನ್ನುವುದಂತೂ ಸತ್ಯ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...