Homeಕರ್ನಾಟಕಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

ಚಂದ್ರಯಾನ-2: ತಪ್ಪನ್ನು ತಿದ್ದಿಕೊಳ್ಳದೇ ಅಹಂಕಾರ ಮೆರೆದ ವಿಜಯವಾಣಿ: ಸಾಮಾಜಿಕ ಜಾಲತಾಣದಲ್ಲಿ ಖಂಡನೆ

"ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ."

- Advertisement -
- Advertisement -

ಚಂದ್ರಯಾನ-2 ಅನ್ನು ಉಡಾವಣೆಗೂ ಮುನ್ನವೇ ನಭಕ್ಕೆ ನೆಗೆದ ಬಾಹುಬಲಿ ಎಂದು ಮುದ್ರಿಸಿ ಪ್ರಮಾದ ಎಸಗಿದ್ದ ವಿಜಯವಾಣಿ ಪತ್ರಿಕೆ ಕ್ಷಮೆ ಕೇಳುವ ನೆಪದಲ್ಲಿ ಮತ್ತೆ ಅಹಂಕಾರ ಮೆರೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಯಾಗಿದೆ.

ತಾಂತ್ರಿಕ ಸಮಸ್ಯೆಗಳ ಕಾರಣಗಳಿಂದಾಗಿ ಚಂದ್ರಯಾನವನ್ನು ಇಸ್ರೋ ಮುಂದೂಡಿತ್ತು. ಆದರೆ ಮುಂಚೆಯೇ ಚಂದ್ರಯಾಣ ಉಡಾವಣೆಯಾಯಿತು, ರಾಷ್ಟ್ರಪತಿ ಶುಭಹಾರೈಸಿದರು ಎಂದು ಪತ್ರಿಕೆ ಧಾವಂತದಲ್ಲಿ ಮುದ್ರಿಸಿತ್ತು. ಆ ಕುರಿತು ಇಂದು ನೋವಾಗಿದೆ ಎಂದು 17 ಸಾಲುಗಳುಳ್ಳ ಸುದ್ದಿ ಪ್ರಕಟಿಸಿರುವ ವಿಜಯವಾಣಿ ಪತ್ರಿಕೆ ಅಲ್ಲಿಯೂ ನೇರವಾಗಿ ತಪ್ಪಾಗಿದೆ ಎಂದು ಹೇಳುವ ಬದಲು ಸುತ್ತಿ ಬಳಸಿ ಕೊನೆಯಲ್ಲಿ ಓದುಗರಿಗಾದ ಅನಾನುಕೂಲಕ್ಕೆ ವಿಷಾದಿಸುತ್ತೇವೆ ಎಂದು ಸಂಪಾದಕನ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಅಹಂಕಾರ ಮೆರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎರಡು ಸಾಲಿನಲ್ಲಿ ಹೇಳಬಹುದಾದನ್ನು ಅಷ್ಟು ಸಾಲುಗಳಲ್ಲಿ ಹೇಳಿದ ಉದ್ದೇಶವೇ ಮತ್ತೆ ಕನ್ ಫ್ಯೂಸ್ ಮಾಡುವುದು, ಆ ಮೂಲಕ ತಮ್ಮದೇನೂ ತಪ್ಪಿಲ್ಲ ಎಂಬ ಪರೋಕ್ಷ ವಾದ. ವಿಷಾದ ವಿನಯದ ಕುರುಹೂ ಇಲ್ಲ ಎಂದು ಶ್ರೀನಿವಾಸ ಕಾರ್ಕಳರವರು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ. ಇವರ ಕುಲಗೆಟ್ಟು ಹೋದ ಈ ಧಂದೆ(ಉದ್ಯಮ)ಯನ್ನು ಆಗಾಗ ‘ಜಾರತನ’ ಎಂದು ನಾನು ಬರೀತಿದ್ದಾಗ ಸ್ವಲ್ಪ ಅಳುಕು ಉಂಟಾಗುತ್ತಿತ್ತು. ಈಗ ಯಾವ ಅಳುಕಿಲ್ಲದೇ ಹೇಳ್ತೇನೆ ಎಂದು ಅಬು ಅಸ್ಮರವರು ಪ್ರತಿಕ್ರಿಯಿಸಿದ್ದಾರೆ.

ಇಂಥ ಕಲಗಚ್ಚು ಪತ್ರಿಕೆಯಲ್ಲಿ ಪ್ರಾಮಾಣಿಕ ಕ್ಷಮಾಪಣೆ ಬಯಸುವುದು ಚಂದ್ರನಲ್ಲಿ ಜೀವಿಗಳಿವೆ ಎಂದು ಹೇಳಿದಷ್ಟೇ ಅಭಾಸ ಎಂದು ಗೋವಿಂದರಾಜ ಬೈಚಗುಪ್ಪೆಯವರು ವ್ಯಂಗ್ಯವಾಡಿದ್ದಾರೆ.

“ಡಿಯರ್ ಮೀಡಿಯಾ, ನಿಮ್ಮ ನಿನ್ನೆಯ ತಪ್ಪಿಗಾದರೂ ಕ್ಷಮೆ ಇದೆ; ಈವತ್ತಿನ ಅಹಂಕಾರ ಪ್ರದರ್ಶನಕ್ಕೆ ಖಂಡಿತಾ ಕ್ಷಮೆ ಇಲ್ಲ. ನಾವು ನಮ್ಮ ಕೆಲಸ ಶಿಸ್ತಿನಿಂದ ಮಾಡಿದ್ದೇವೆ. ಇಸ್ರೋದವರು ತಪ್ಪು ಮಾಡಿದರೆ ನಾವು ಹೊಣೆ ಅಲ್ಲ ಎಂಬ ಧ್ವನಿಯ ನಿಮ್ಮ ಈವತ್ತಿನ ಪ್ರಕಟಣೆ ನಿಮ್ಮ ಬಗ್ಗೆ, ನಿಮ್ಮ ಪತ್ರಿಕೋದ್ಯಮದ ಬಗ್ಗೆ ಹಾಗೂ ಕನ್ನಡ ಪತ್ರಿಕೋದ್ಯಮ ಸಾಗುತ್ತಿರುವ ಹಾದಿಯ ಬಗ್ಗೆ ತುಂಬಾ ಸೂಚನೆಗಳನ್ನು ನೀಡುತ್ತಿದೆ. ಸುದ್ದಿಮನೆಯಲ್ಲಿ ತಪ್ಪುಗಳು ಸ್ವಾಭಾವಿಕ. ಸ್ವಲ್ಪ ಎಚ್ಚರ ಮತ್ತು ನಾವು ಮಾಡುತ್ತಿರುವುದು ಏನೆಂಬ ಕಲ್ಪನೆ ಇದ್ದಿದ್ದರೆ, ಕ್ಷಮೆಯಲ್ಲಿ ವಿನಯ ತಾನಾಗಿ ವ್ಯಕ್ತಗೊಳ್ಳುತ್ತದೆ. ಕಲಿತದ್ದು ಜಾಸ್ತಿ ಆದಾಗ ಹೀಗೇ..” ಎಂದು ರಾಜರಾಮ ತಲ್ಲೂರ್ ರವರು ಬರೆದಿದ್ದಾರೆ.

ಶ್ರೀಹರಿಕೋಟಾದಲ್ಲಿ ತಾಂತ್ರಿಕ ಕಾರಣಗಳಿಂದ ಉಡಾವಣೆಗೆ 56 ನಿಮಿಷ ಮುಂಚಿತವಾಗಿ ರದ್ದು ಮಾಡಲ್ಪಟ್ಟ ಚಂದ್ರಯಾನ -2 ಕೊನೆಗೆ ಯಶಸ್ವಿಯಾಗಿ ಬೆಂಗಳೂರಿನ ಚಾಮರಾಜಪೇಟೆಯ ವಿಜಯವಾಣಿ ಕಚೇರಿ ಒಳಗಿಂದ ಹಾರಿಸಲ್ಪಟ್ಟಿರುವುದು ತಿಳಿದು ಬಂದಿದೆ….. ಈ ಸುಸಂದರ್ಭದಲ್ಲಿ ಮಾನ್ಯ ವಿಜಯ ಸಂಕೇಶ್ವರ ಅವರು ಉಪಸ್ಥಿತರಿದ್ದು ಈ ಯಶಸ್ವಿ ಚಂದ್ರಯಾನ್ -2 ಉಡಾವಣೆಯನ್ನು ನೆರವೇರಿಸಿಕೊಟ್ಟರು ಎಂದು ಬಲ್ಲ ಮೂಲಗಳು ತಿಳಿಸಿವೆ…. ಎಂದು ಪತ್ರಕರ್ತರಾದ ಹರ್ಷಕುಮಾರ್ ಕುಗ್ವೆಯವರು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ಪೇಪರ್ ಓದುವವರಿಗೆ, ಅದನ್ನು ಮನೆಗೆ ಹಾಕಿಸುವವರಿಗೆ – ನೆನ್ನೆ ಚಂದ್ರಯಾನ ನೌಕೆ ಯಶಸ್ವಿ ಉಡ್ಡಯನದ ಸುಳ್ಳು ಸುದ್ದಿ ಮುಖಪುಟದಲ್ಲಿ ಓದಿ ‘ಈ ಪೇಪರ್ ಹಾಕಿಸಿ ಬೆಂಬಲ ಕೊಡ್ತಾ ಇರೋದಕ್ಕೆ ನಮ್ ಮೆಟ್ ತಗಂಡು ನಾವೇ ಹೋಡ್ಕೊಬೇಕು’ ಅನ್ನಿಸಲಿಲ್ವಾ? ಎಂದು ಬರೆಯುವ ಮೂಲಕ ಗರುವೇ ಹೆಜ್ಜಾಜಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಇದು ಯಾವ ಪತ್ರಿಕೆ ? ಇವರಿಗಿಂತ ನಮ್ಮ ರಂಗಣ್ಣ ಸರೇ Better.. ನಿನ್ನೆ ನೇರವಾಗಿ ಚಂದ್ರನ ಮೇಲೆ ನಿಂತು ವರದಿ ಮಾಡಿದ್ರು..” ಎಂದು ರಾಘವೇಂದ್ರ ಗೋಪಾಡಿಯವರು ಕಿಚಾಯಿಸಿದ್ದಾರೆ.

“ಯಾವ ಮೀಡಿಯಾವು ಯಾವಾಗ ತಾನು ಪ್ರಕಟಿಸುವ ಸುದ್ದಿಯನ್ನು ಮಾರಿದ ಆದಾಯವನ್ನಷ್ಟೇ ನೆಚ್ಚಿ ಬದುಕುವುದು ಬಿಡುತ್ತಾ ಬಂದಿತೋ ಆಗಲೇ ಈ ಅಹಂಕಾರದ ನಶೆಯೂ ಏರುತ್ತಾ ಹೋಯಿತು.” ಎಂದು ಬರಹಗಾರ್ತಿ ಕಾದಂಬಿನಿ ರಾವಿಯವರು ಬರೆದಿದ್ದಾರೆ.

ಇನ್ನು ವಿಜಯವಾಣಿ ಪತ್ರಿಕೆಯ ಸಿಬ್ಬಿಂದಿಯೊಬ್ಬರು “ನಾವೇನು ಕಾಲದರ್ಶಕರಲ್ಲ, ಮುಂದಿನದನ್ನು ಮೊದಲೆ ತಿಳಿದು ಬರೆಯಲು, ತಾಂತ್ರಿಕ ದೋಷ ಇದೆ ಎಂದು, ನಿಗದಿತ ಸಮಯಕ್ಕೆ ಉಡಾವನೆ ಮಾಡಲು ಆಗುವುದಿಲ್ಲ ಎಂದು ಅಲ್ಲಿರುವವರಿಗೇನೇ ಗೊತ್ತಿಲ್ಲದಿರುವಾಗ ಇನ್ನು ನಮಗೇನು ಗೊತ್ತಾಗ್ವೇಕು. ಇಸ್ರೋ ಮೇಲಿನ ನಂಬಿಕೆ, ವಿಶ್ವಾಸದಿಂದ ನಿಗದಿತ ಸಮಯಕ್ಕೆ ಉಡಾವಣೆ ಆಗಲಿದೆ ಎಂದು ಬರೆದಿದ್ದೇವೆ” ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದಕ್ಕೆ ತೀಷ್ಣವಾಗಿ ಪ್ರತಿಕ್ರಿಯಿಸಿರುವ ಹಿರಿಯ ಪತ್ರಕರ್ತರು ಮತ್ತು ಪ್ರಸಿದ್ದ ಕಾರ್ಟೂನಿಷ್ಟ್ ಆದ ಪಂಜು ಗಂಗೊಳ್ಳಿಯವರು “ಒಂದು ಘಟನೆ ನಡೆದ ನಂತರವಷ್ಟೇ ಅದು ಸುದ್ದಿ ಅಂತಾಗುತ್ತದೆ. ಒಂದು ವೇಳೆ ೨.೫೫ ಕ್ಕೆ ನಿಗದಿಯಾಗಿದ್ದ ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದರೂ ಬೆಳಗ್ಗಿನ ಎರಡು ಗಂಟೆಗಳೊಳಗೆ ಮುದ್ರಣಗೊಂಡು ಹೊರ ಬರುವ ಪತ್ರಿಕೆಯಲ್ಲಿ ಅದು ಸುದ್ದಿಯಾಗಿ ಬರುವುದೂ ಉಡಾಫೆಯಾಗುತ್ತದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...