Homeದಲಿತ್ ಫೈಲ್ಸ್ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು. ದಲಿತ ಚಳವಳಿಯ ಸ್ಥಿತಿಗತಿ ಮತ್ತು ದಲಿತರ ಪರ್ಯಾಯ ರಾಜಕೀಯ ನಿಲುವುಗಳನ್ನು ನಾವು ಮರುಅವಲೋಕಿಸಿಕೊಳ್ಳಲು ಇದು ಸಕಾಲ ಅನಿಸುತ್ತದೆ. ಭಾರತವೆಂಬ ಮುಚ್ಚಲ್ಪಟ್ಟ ಸಮಾಜದೊಳಗೆ ಸಾವಿರಾರು ವರ್ಷಗಳಿಂದ ಹಲವು ರೀತಿಯ ದಬ್ಬಾಳಿಕೆ, ತಾರತಮ್ಯ ಮತ್ತು ಶೋಷಣೆಗಳನ್ನು ಅನುಭವಿಸಿದ ಅಸ್ಪೃಶ್ಯ ಜಾತಿಗಳ ಸ್ಥಿತಿಗಳಲ್ಲಿ ಇಂದೇನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಅವಲೋಕಿಸಿದರೆ, ದಬ್ಬಾಳಿಕೆ-ತಾರತಮ್ಯ-ಶೋಷಣೆಗಳ ಸ್ವರೂಪ ಬದಲಾಗಿದೆಯೇ ಹೊರತು ಸ್ಥಿತಿ-ಗತಿ ಹಾಗೆಯೇ ಇರುವುದನ್ನು ನಾವು ಗಮನಿಸಬಹುದು. ಜಾತಿ ವ್ಯವಸ್ಥೆ ತನ್ನ ಸ್ವರೂಪವನ್ನು ಸಮಯಕ್ಕೆ ತಕ್ಕಂತೆ ಬದಲಿಸಿಕೊಂಡು, ಇವತ್ತಿಗೂ ನಿರಂತರವಾಗಿ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲಿ ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿಯಾದ ಚೋಮನ ದುಡಿಯಲ್ಲಿ ಬರುವ ದಲಿತರ ಬದುಕಿನ ಚಿತ್ರಣ ನೆನಪಿಗೆ ಬರುತ್ತಿದೆ. 1931ರಲ್ಲಿ ಪ್ರಕಟಗೊಂಡ ಈ ಕೃತಿ ಕನ್ನಡದಲ್ಲಿ ಬಹುಚರ್ಚಿತವಾದ ಕಾದಂಬರಿಯಾಗಿದ್ದು ಅಸ್ಪೃಶ್ಯ ಸಮುದಾಯದ ಚೋಮನನ್ನು ಕೇಂದ್ರಪಾತ್ರದಲ್ಲಿಟ್ಟು ನಿರೂಪಿಸಲ್ಪಟ್ಟಿರುವ ಕಥನವಿದೆ; ಈ ಕಥನದಲ್ಲಿ ಸ್ವಾತಂತ್ರ್ಯಪೂರ್ವದ ದಲಿತರ ದಾರುಣ ಬದುಕನ್ನು ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ನೋಡಿದರೆ ಚೋಮನದುಡಿ ಏಕಕಾಲದಲ್ಲಿ ಕಾದಂಬರಿಯೂ ಹೌದು, ಹಾಗೆಯೇ ಭಾರತೀಯ ಸಾಮಾಜಿಕ ಚರಿತ್ರೆಯು ಹೌದು; ಏಕೆಂದರೆ ಸ್ವಾತಂತ್ರ್ಯಪೂರ್ವದ ಅಸ್ಪೃಶ್ಯರ ಬದುಕನ್ನು ಕಾದಂಬರಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಚೋಮನ ಬದುಕೇ ಅಂದಿನ ನಿಜವಾದ ದಲಿತರ ಬದುಕಾಗಿತ್ತು ಎಂಬುದರಮಟ್ಟಿಗೆ ದಲಿತರ ಜೀವನ ಈ ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿದೆ. ಚೋಮ ಒಂದು ತುಂಡು ಭೂಮಿಗಾಗಿ ತನ್ನ ದಣಿಯ ಮುಂದೆ ಎಷ್ಟೇ ಅಧೀರನಾಗಿ ಮತ್ತು ದೈನ್ಯತೆಯಿಂದ ಕೇಳಿಕೊಂಡರೂ ಅದು ಸಾಧ್ಯವಾಗದ ಸ್ಥಿತಿ ಒಂದೆಡೆಯಾದರೆ, ಹೀಗೆ ಭೂಮಿ ಇಲ್ಲದ ನೂರಾರು ಕುಟುಂಬಗಳು ಕೂಲಿ ಕಾರ್ಮಿಕರಾಗಿ ಕಾಫಿ ಎಸ್ಟೇಟ್‌ಗೆ ವಲಸೆ ಹೋಗಿ ಆಳುಗಳಾಗಿ ದುಡಿಯುವ ಮತ್ತೊಂದು ಚಿತ್ರಣ ಕೂಡ ಈ ಕಾದಂಬರಿಯಲ್ಲಿದೆ. ಚೋಮನ ಪಾತ್ರ ಪ್ರಮುಖವಾಗಿ ನಮ್ಮೆದುರಿಗೆ ನಿಂತರೂ ಅವನಂತೆ ಇರುವ ಸಾವಿರಾರು ಕುಟುಂಬಗಳ ಚಿತ್ರಣ ಚೋಮನ ಕುಟುಂಬದ ನೆರಳಿನಂತೆ ನಮಗೆ ಇಲ್ಲಿ ಭಾಸವಾಗುತ್ತದೆ. ಅದೇ ರೀತಿ ಚೋಮನ ಬದುಕು ಮತ್ತು ಅವನನ್ನು ಈ ಸಮಾಜ ನಡೆಸಿಕೊಳ್ಳುವ ಅಂಶವನ್ನು ಗಮನಿಸೋಣ; ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿಹೋಗುವ ಚೋಮನ ಕಿರಿಯ ಮಗನನ್ನು ರಕ್ಷಿಸಲು ಒಬ್ಬ ಬ್ರಾಹ್ಮಣ ಸಮುದಾಯದ ಯುವಕ ಮುಂದಾದಾಗ ಅಲ್ಲೇ ನಡೆದುಹೋಗುತ್ತಿದ್ದ ಮತ್ತೊಬ್ಬ ಬ್ರಾಹ್ಮಣ ಅವನನ್ನು ಮುಟ್ಟಬಾರದು, ಅವನು ಅಸ್ಪೃಶ್ಯ ಎನ್ನುತ್ತಾನೆ. ಆಗ ಆ ಯುವಕ ಬೆಚ್ಚಿದವನಂತೆ ನಿಂತು ಚೋಮನ ಮಗನನ್ನು ರಕ್ಷಿಸಲು ಹೋಗುವುದಿಲ್ಲ. ಎರಡನೆ ಘಟನೆ; ಚೋಮ ಗೇಣಿಗೆ ಭೂಮಿ ಕೊಡುವಂತೆ ತನ್ನ ದಣಿಗಳಲ್ಲಿ ವಿನಂತಿಸಿಕೊಂಡಾಗ ದಣಿ ಸಂಕಪ್ಪಯ್ಯನವರು ತಮ್ಮ ತಾಯಿಯವರ ಅಭಿಪ್ರಾಯವನ್ನು ಕೇಳುತ್ತಾರೆ. ಆಗ ಅವರ ತಾಯಿ ನೀಡುವ ಪ್ರತಿಕ್ರಿಯೆ: “ಏನು ಆ ಹೊಲೆಯನಿಗೆ ಅಷ್ಟು ಸೊಕ್ಕು ಬಂತೆ”, ಹೀಗೆ ಮಗನಿಗೆ ಹೇಳುತ್ತಾ, “ನೋಡು ಇದುವರೆಗೂ ಘಟ್ಟದ ಮೇಲೆ ಯಾರೂ ಅಸ್ಪೃಶ್ಯನಿಗೆ ಭೂಮಿ ಗೇಣಿಗೆ ಕೊಟ್ಟ ಉದಾಹರಣೆಗಳಿಲ್ಲ. ನೀನು ಅಸ್ಪೃಶ್ಯನಿಗೆ ಭೂಮಿಯನ್ನು ಗೇಣಿಗೆ ಕೊಟ್ಟೆ ಎಂಬ ಅಪಕೀರ್ತಿಗೆ ಒಳಗಾಗಬೇಡ” ಎಂದು ತಾಯಿ ಎಚ್ಚರಿಸುತ್ತಾಳೆ. ಈ ಮಾತನ್ನು ಕೇಳುವ ಸಂಕಪ್ಪಯ್ಯ, “ನೋಡು ಚೋಮ ನಮ್ಮ ತಾಯಿ ಇರುವದರೆಗೂ ನಿನಗೆ ಭೂಮಿ ಕೊಡಲು ಸಾಧ್ಯವಾಗುವುದಿಲ್ಲ” ಎನ್ನುತ್ತಾನೆ. ಸ್ವಾತಂತ್ರ್ಯಪೂರ್ವದ ಈ ಸ್ಥಿತಿ ಇಂದಿಗೂ ಬದಲಾಗದೆ ಇರುವುದು ದುರಂತ.

ಇತ್ತೀಚಿಗೆ ಕೋಲಾರ ಜಿಲ್ಲೆಯ ಟೇಕಲ್ ಹೋಬಳಿಯ ಹುಳ್ಳೇರಹಳ್ಳಿ ಗ್ರಾಮದಲ್ಲಿ ಒಬ್ಬ ದಲಿತ ಬಾಲಕ ದೇವರ ಕೋಲನ್ನು ಮುಟ್ಟಿದ ಎಂಬ ಕಾರಣಕ್ಕೆ ಆ ಬಾಲಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ದಂಡ ವಿಧಿಸಲಾಯಿತು; ಈ ಮನಸ್ಥಿತಿಗೂ ಚೋಮನ ಮಗ ನೀರಿನಲ್ಲಿ ಕೊಚ್ಚಿ ಹೋಗುವಾಗ ಅವನು ಅಸ್ಪೃಶ್ಯ, ಅವನನ್ನು ಮುಟ್ಟಬಾರದು ಎಂದು ಆ ಮಗುವಿನ ಸಾವಿಗೆ ಕಾರಣವಾದ ಮನಸ್ಥಿತಿಗೂ ಅಂತಹ ಯಾವ ವ್ಯತ್ಯಾಸಗಳೂ ಇಲ್ಲ. ಇನ್ನು ಭೂಮಿಯ ಪ್ರಶ್ನೆ ಬಂದಾಗ ಚೋಮನಂತೆ ಇವತ್ತಿಗೂ ಗೇಣು ಭೂಮಿಗಾಗಿ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಪರದಾಡುತ್ತಿರುವ ಕೋಟ್ಯಂತರ ಚೋಮರನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದು ಏಳು ದಶಕಗಳೇ ಕಳೆದುಹೋದರೂ ಅಸ್ಪೃಶ್ಯ ಜನಾಂಗಗಳ ಬದುಕುಗಳಲ್ಲಿ ಯಾವ ಮಟ್ಟದ ಸುಧಾರಣೆಗಳು ಸಾಧ್ಯವಾಗಿವೆ ಎಂಬುದು ಇವತ್ತಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

ಅಂದ ಮಾತ್ರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಶೋಷಿತ ಸಮುದಾಯಗಳ ಬದುಕಿಗೆ ಆಸರೆಯಾಗಿಲ್ಲವೇ ಎಂಬ ಪ್ರಶ್ನೆಯು ಬರುತ್ತದೆ; ಸಂವಿಧಾನ ಮತ್ತು ಪ್ರಜಾಪ್ರಭುತ್ವ ಈ ಸ್ಥಗಿತ ಸಮಾಜವು ಚಲನೆಗೊಳ್ಳಲು ನೆರವಾಗಿವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ದಲಿತರ ಮೇಲೆ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳು ಮಾತ್ರ ದಿನೇದಿನೇ ಹೆಚ್ಚಾಗುತ್ತಲೇ ಇವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆದ ಪ್ರಮಾಣ ಅತ್ಯಂತ ಕಡಿಮೆ ಎಂಬುದು ದುರಂತ ಸಂಗತಿ. ಇವತ್ತಿಗೂ ಪತ್ರಿಕೆಗಳಲ್ಲಿ ಮತ್ತು ಇತರ ಸುದ್ದಿ ಮಾಧ್ಯಮಗಳಲ್ಲಿ ದಿನಕ್ಕೊಂದಾದರು ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಲಿತ ಹೆಣ್ಣು ಮಕ್ಕಳನ್ನು ಮೇಲೆ ಅತ್ಯಾಚಾರ ಮುಂತಾದ ಸುದ್ದಿಗಳು ಇದ್ದೇ ಇರುತ್ತವೆ. ದಲಿತ ಸಮುದಾಯಗಳ ವ್ಯಕ್ತಿಗಳ ಮೇಲಿನ ಈ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಗಳನ್ನು ತಡೆಯುವಲ್ಲಿ ಸರ್ಕಾರಗಳಿಗಾಗಲೀ, ದಲಿತ ಚಳವಳಿಗಳಿಗಾಗಲೀ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಕರ್ನಾಟಕದ ದಲಿತ ಚಳವಳಿಗಳು ಇಲ್ಲಿನ ದಮನಿತ ಜನಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿರುವುದು ನಿಜವೇ ಆದರೂ ದಲಿತರನ್ನು ರಾಜಕೀಯವಾಗಿ ಪ್ರಬಲಗೊಳಿಸುವಲ್ಲಿ ಯಶಸ್ವಿಯಾಗಿಲ್ಲ. ಇದಕ್ಕಿಂತ ಮುಖ್ಯವಾದ ಸಂಗತಿ, ದಲಿತ ಚಳವಳಿ ಬದಲಾದ ಕಾಲಘಟ್ಟಕ್ಕೆ ಬೇಕಿರುವ ಹೊಸ ನಾಯಕತ್ವವನ್ನು ಬೆಳೆಸದಿರುವುದರ ಜೊತೆಗೆ ಚಳವಳಿಯಲ್ಲಿ ಬೆಳೆದ ನಾಯಕತ್ವದ ಬಿಕ್ಕಟ್ಟು ಮತ್ತು ಉಪಜಾತಿಗಳ ಸಂಘರ್ಷಗಳು ಈ ಚಳವಳಿಯ ಪರಿಣಾಮವನ್ನು ಕುಂಠಿಸುವುದಕ್ಕೆ ಕಾರಣವಾದವು. ಇವೆಲ್ಲವುದರಿಂದ ದಲಿತರ ಬಗೆಗಿನ ನೈಜ ಕಾಳಜಿ ಹಿನ್ನೆಲೆಗೆ ಸರಿದಿರುವುದು ನಮ್ಮೆಲ್ಲರಿಗೂ ತಿಳಿಯದಿರುವ ವಿಚಾರವೇನಲ್ಲ.

ಇವೆಲ್ಲವೂ ಚಳವಳಿಯ ಧ್ವನಿ ಕಡಿಮೆಯಾಗಲು ಮುಖ್ಯ ಕಾರಣವಾಗಿದ್ದರೆ, ಇದರ ದುಷ್ಪರಿಣಾಮಗಳು ನೇರವಾಗಿ ದಲಿತ ಸಮುದಾಯದ ಮೇಲೆ ಆಗುತ್ತಿದ್ದು, ದೌರ್ಜನ್ಯಗಳು ಹೆಚ್ಚಾಗಲೂ ಕಾರಣವಾಗುತ್ತಿದೆ. ಈ ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಂಡು ದಲಿತ ಚಳವಳಿ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಮರುರೂಪುಗೊಳ್ಳಬೇಕಿದೆ ಹಾಗೂ ಅದರ ಜೊತೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಬಲಗೊಳ್ಳಬೇಕಾದ ಅನಿವಾರ್ಯತೆಯ ಕಾಲದಲ್ಲಿ ನಾವಿದ್ದೇವೆ. ಇಲ್ಲದಿದ್ದರೆ ದಲಿತರ ಅಮೂಲ್ಯವಾದ ಮತಗಳು ಎಂದಿನಂತೆ ಉಳ್ಳವರ ಸರಕಾಗಿ ದಲಿತರ ಶತಮಾನಗಳ ಸ್ಥಿತಿ-ಗತಿ ಯಥಾಸ್ಥಿತಿಯಾಗಿಯೇ ಉಳಿದುಕೊಳ್ಳಲಿದೆ.

ಡಾ. ನಾರಾಯಣ್ ಕ್ಯಾಸಂಬಳ್ಳಿ

ಡಾ. ನಾರಾಯಣ್ ಕ್ಯಾಸಂಬಳ್ಳಿ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಹಲವು ಚಳವಳಿ ಮತ್ತು ಹೋರಾಟಗಳ ಸಂಗಾತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...