Homeಕರ್ನಾಟಕಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

ಒಳಮೀಸಲಾತಿ ಹೋರಾಟದ ನಾಯಕ ಅಂಬಣ್ಣರವರ ತಂದೆ ಷಣ್ಮುಖಪ್ಪ ನಿಧನ

- Advertisement -
- Advertisement -

ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಜಾರಿಯಾಗಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ನಾಯಕರಾದ ಅಂಬಣ್ಣ ಅರೋಲಿಕರ್‌ ಅವರ ತಂದೆ ಷಣ್ಮುಖಪ್ಪ ಅರೋಲಿ ನಿಧನರಾಗಿದ್ದಾರೆ.

ಶತಾಯುಷಿಯಾಗಿದ್ದ ಷಣ್ಮುಖಪ್ಪ ಅವರು ವಯೋಸಹಜ ಅನಾರೋಗ್ಯದಲ್ಲಿದ್ದರು. ಮಂಗಳವಾರ ರಾತ್ರಿ ಕೊನೆಯುಸಿರೆಳೆದರು. ಬುಧವಾರ 2.30ಕ್ಕೆ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಅರೋಲಿಯಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ನಿಧನದ ಕುರಿತು ‘ಒಳಮೀಸಲಾತಿ’ ಫೇಸ್‌ಬುಕ್‌ ಪುಟದಲ್ಲಿ ತಿಳಿಸಲಾಗಿದ್ದು, “ವಯಸ್ಸಾದ, ಅನಾರೋಗ್ಯದಲ್ಲಿದ್ದ ತಂದೆಯನ್ನು ಮನೆಯಲ್ಲಿ ಬಿಟ್ಟು ಶೋಷಿತ, ಅವಕಾಶ ವಂಚಿತ ಜನರ ಹಕ್ಕುಗಳಿಗಾಗಿ ಹಲವಾರು ದಿನ, ನೂರಾರು ಊರು ಕೇರಿ ಸುತ್ತಿ ಅಂಬಣ್ಣ ಅರೋಲಿಕರ್‌‌ ಪಾದಯಾತ್ರೆ ಮಾಡಿದರು. ಸಾಮಾಜಿಕ ನ್ಯಾಯಕ್ಕಾಗಿ ಒಳಮೀಸಲಾತಿ ಹೋರಾಟದಲ್ಲಿದ್ದ ಅಂಬಣ್ಣ ಅವರ ತಂದೆ ಈಗ ನಮ್ಮನ್ನ ಅಗಲಿದ್ದಾರೆ. ಇವರಿಗೆ ಎಲ್ಲಾ ರೀತಿಯಲ್ಲೂ ಅನೇಕ ಹೋರಾಟದ ಸಂಗಾತಿಗಳು ಜೊತೆ ನಿಂತಿದ್ದಾರೆ. ಹೋರಾಟವೂ ಮುಂದುವರೆಯುತ್ತಿದೆ. ಇಂತಹ ಹೊತ್ತಲ್ಲಿ ತಂದೆಯ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಅಂಬಣ್ಣ ಮತ್ತು ಅವರ ಕುಟುಂಬಕ್ಕೆ ಬರಲಿ. ನಿಮ್ಮ ದುಃಖದಲ್ಲಿ ನಾವೆಲ್ಲ ಭಾಗಿ, ನಿಮ್ಮ ಜೊತೆಯಲ್ಲಿ ನಾವಿದ್ದೇವೆ” ಎಂದು ಸಂತಾಪ ಸೂಚಿಸಲಾಗಿದೆ.

ಚಿಂತಕರಾದ ಹುಲಿಕುಂಟೆಮೂರ್ತಿಯವರು ಪ್ರತಿಕ್ರಿಯಿಸಿ, “ಒಳಮೀಸಲಾತಿ ಕಾಲ್ನಡಿಗೆ ಜಾಥಾ ತುಮಕೂರಿಗೆ ಬಂದ ದಿನವೇ ಅಂಬಣ್ಣ ಅವರ ತಂದೆ ಆರೋಗ್ಯದಲ್ಲಿ ಹೆಚ್ಚೇ ಏರುಪೇರಾಗಿತ್ತು. ಅಂಬಣ್ಣ ಹೋಗಿ ಜಾಥಾ ನೆಲಮಂಗಲ ತಲುಪುವಷ್ಟರಲ್ಲಿ ಬಂದುಬಿಟ್ಟರು. ಅವರಿಗೆ ತಂದೆಯ ಅನಾರೋಗ್ಯ ಮತ್ತು ಹೋರಾಟದ ದಿಕ್ಕು ಎರಡೂ ತಲೆಯಲ್ಲಿ ಕೊರೆಯುತ್ತಿದ್ದವು. ಜೈಲಿಗೂ ಹೋಗಿಬಂದರು. ಒಳಗಿನ ಕಾರಣಗಳಿಗೆ‌ ಕಣ್ಣೀರು ಹಾಕಿದರು. ಅಪ್ಪ ಅಂಬಣ್ಣನನ್ನು ಬಿಟ್ಟು ಹೋಗೇಬಿಟ್ಟರು. ಅಂತ್ಯಕ್ರಿಯೆ ಮುಗಿಸಿ ಅಂಬಣ್ಣ ನಾಳೆಯೇ ಬೆಂಗಳೂರಿಗೆ ಬರ್ತಿದಾರೆ. ಹೋರಾಟ ನಿಲ್ಲುವುದಿಲ್ಲ” ಎಂದಿದ್ದಾರೆ.

ಮುಖಂಡರಾದ ಉದಯ್ ಅರೋಲಿಕರ್‌ ಅವರು ಅಂಬಣ್ಣ ಅವರ ಪ್ರತಿಕ್ರಿಯೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನನ್ನಪ್ಪ ಡಿಸೆಂಬರ್ 11 ರ ಹೋರಾಟಕ್ಕೂ ಮುನ್ನವೇ ಕೊನೆಯುಸಿರು ಬಿಡಬಹುದೆಂಬ ಆತಂಕ ನನ್ನ ಕುಟುಂಬಕ್ಕಿತ್ತು. ಭರವಸೆಯನ್ನು ತಂದೆ ಹುಸಿಗೊಳಿಸಿ ಹೋರಾಟದ ಗಡುವಿಗೆ ಜೀವತುಂಬಿ ಇಂದು ಜೀವ ಬಿಟ್ಟಿದ್ದಾರೆ. ಅಪ್ಪನ ಅಂತಿಮ ಪಯಣಕ್ಕೆ ನಾವುಗಳು ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸೋಣ. ನನ್ನ ತಾಯಿ ನಾನು 11 ವರ್ಷದವನಿದ್ದಾಗಲೇ ಕಾಲರಾಕ್ಕೆ ಬಲಿಯಾದಾಗಿನಿಂದ ನನಗೆ ತಂದೆಯೇ ನನಗೆ ತಾಯಿಯಾಗಿದ್ದರು.  ಮಾರ್ಗದರ್ಶಕನಾಗಿರುವುದಲ್ಲದೇ ನನ್ನ ಹೋರಾಟದ ಹಾದಿಗೆ ಎಂದು ಅಡ್ಡಿಪಡಿಸದೇ ಕುಟುಂಬದ ಸಂಪೂರ್ಣ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ನನ್ಪಪ್ಪನದು ಸಹ ಅವಿಶ್ರಾಂತ ಹೋರಾಟದ ದಾರಿಯೆನ್ನುವುದರಲ್ಲಿ ಸಂಶಯವಿಲ್ಲ” ಎಂದು ಅಂಬಣ್ಣ ಸ್ಮರಿಸಿದ್ದಾರೆ.

“ಸಾಲಿ ಮಾಸ್ತಾರನಾಗಬೇಕೆಂಬ ನನ್ನ ತಂದೆಯ ಆಶಯಕ್ಕೆ ತದ್ವಿರುದ್ಧವಾಗಿ ತಮಟೆ ಬಾರಿಸಿದ ನನ್ನ ಮೇಲೆ ಹಾಗೂ ನನ್ನ ಹೋರಾಟದ ಸ್ಫೂರ್ತಿಯಾದ ಪ್ರಜಾಯುದ್ದನೌಕೆ ಗದ್ದರ್ ವಿರುದ್ಧದ ಕೋಪ ಇಂದಿಗೂ ಶಮನವಾಗದಿದ್ದರೂ ನಾನು ನಡೆವ ದಾರಿ ನೂರಾರು ಜನರಿಗೆ ಉಪಯುಕ್ತ ಮಾರ್ಗವೆಂಬ ಖಾತರಿ ಇರುವುದರಿಂದ ನನಗೆ ಸಂಪೂರ್ಣ ವಿನಾಯಿತಿ ಸಿಕ್ಕಿತ್ತು” ಎಂದು ನೆನೆದಿದ್ದಾರೆ.

“ಮೂರು ದಿನಗಳ ಹಿಂದೆ ಹೋರಾಟದ ಒತ್ತಡಗಳ ಮಧ್ಯೆ ಒಮ್ಮೆ ನೋಡಿ ಕಣ್ತುಂಬಿಸಿಕೊಂಡಿದ್ದೆ. ಡಿಸೆಂಬರ್ 11ರ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಡಿಸೆಂಬರ್‌‌ 19ರ ಅಧಿವೇಶನದಲ್ಲಿ ಒಳಮೀಸಲಾತಿ ಪ್ರಸ್ತಾಪಕ್ಕೆ ಸರ್ಕಾರದ ಗಮನಸೆಳೆಯುವ ಬಿರುಸಿನ ಪ್ರಯತ್ನಕ್ಕಾಗಿ ಇಂದು ಒಡನಾಡಿಗಳು ಖಾಯಂ ಹೋರಾಟದ ಬಿಡಾರ ಸಜ್ಜುಗೊಳಿಸುವ ಪ್ರಯತ್ನದಲ್ಲಿದ್ದೆವು. ಈ ಸಂದರ್ಭದಲ್ಲಿ ನನ್ನ ಪತ್ನಿ ಸುಜಾತಾ ಅಘಾತಕರ ಸುದ್ದಿಯನ್ನು ತಿಳಿಸಿದರು. ರಾಜಧಾನಿಯಿಂದ ರಾಯಚೂರಿಗೆ ಪಯಣ ಬೆಳೆಸಿರುವೆ” ಎಂದು ಹೇಳಿದ್ದಾರೆ.

“ನನ್ನ ಅನುಪಸ್ಥಿತಿಯಲ್ಲಿ ನನ್ನ ಮಡದಿ ಸುಜಾತಳ ಹಾರೈಕೆಯಿಂದಾಗಿ ಅಪ್ಪ ಇಷ್ಟು ವರ್ಷ ನಮ್ಮೊಂದಿಗಿರಲು ಸಾಧ್ಯವಾಗಿದೆ. ಸರ್ಕಾರ ಪ್ರಕಟಿಸಿರುವ ಒಳಮೀಸಲಾತಿ ಕುರಿತ ಉಪಸಮಿತಿ ಹಾಗೂ ಉಪಸಮಿತಿಯ ಮೊದಲ ಸಭೆ ಘೋಷಣೆಯ ಹಿನ್ನೆಲೆಯಲ್ಲಿ ಮುಂದೆ ಹಮ್ಮಿಕೊಳ್ಳಬೇಕಾದ ಹೋರಾಟದ ಹೆಜ್ಜೆಗಳನ್ನು ಅತ್ಯಂತ ಜಾಗರೂಕತೆಯಿಂದ ಮುಂದುವರೆಸೋಣ ಎಂದು ತಮ್ಮಲ್ಲಿ ಕೋರುತ್ತಾ ಅಪ್ಪನ ಅಂತಿಮ ಪಯಣಕ್ಕೆ ಹೋಗಿಬರುವೆ” ಎಂದು ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...