Homeಕರ್ನಾಟಕಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

ಬಹುತ್ವ ನಾಶ ಮಾಡಲು ಹೊರಟವರಿಗೆ ‘ಚೆ’ ಅಭಿಮಾನಿಗಳು ಉತ್ತರಿಸುತ್ತೇವೆ: ಪ್ರೊ. ಬರಗೂರು ರಾಮಚಂದ್ರಪ್ಪ

- Advertisement -
- Advertisement -

‘ಚೆ’ ಎಲ್ಲಾ ಸಂಸ್ಕೃತಿಯವರನ್ನು ಸೆಳೆದ ಕ್ರಾಂತಿಕಾರಿಯಾಗಿದ್ದಾರೆ. ಬಹುತ್ವವನ್ನು ಪ್ರತಿಪಾದಿಸುವ ಈ ನೆಲದಲ್ಲಿ ಬಹುಸಂಸ್ಕೃತಿಯನ್ನು ನಾಶ ಮಾಡಲು ಹೊರಟ್ಟಿದ್ದಾರೆ. ಅಂತವರ ಅಟಾಟೋಪಕ್ಕೆ ‘ಚೆ’ ಅಭಿಮಾನಿಗಳು ಉತ್ತರ ಕೊಡುತ್ತೇವೆ ಎಂದು ಚಿಂತಕ ಮತ್ತು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಅವರು ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸ್ಕೌಟ್ ಮತ್ತು ಗೈಡ್‌ ಸಭಾಂಗಣದಲ್ಲಿ ‘ಚೆ ಗೆವಾರ’ ಅವರ ಮಗಳು ಡಾ. ಅಲಿಡಾ ಗೆವಾರ ಮತ್ತು ಮೊಮ್ಮಗಳು ಎಸ್ತೆಫಾನಿಯಾ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

“ಚೇ ಗೆವೆರಾ ಅವರ ಮಗಳು ಮತ್ತು ಮೊಮ್ಮಗಳಿಗೆ ಕನ್ನಡದ ನೆಲದಲ್ಲಿ ನಾಗರಿಕ ಸನ್ಮಾನ ಮಾಡಿದ್ದು ಚಾರಿತ್ರಿಕ ಸಂದರ್ಭವಾಗಿದೆ. ಕರ್ನಾಟಕ ಹುಸಿ ಸಂಸ್ಕೃತಿಯ ಪರವಾಗಿಲ್ಲ, ಜನಸಂಸ್ಕೃತಿಯ ಪರವಾಗಿದೆ, ಸಂವೇದನೆಗೆ ಪೂರಕವಾಗಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ” ಎಂದು ಬರಗೂರು ಹೇಳಿದರು.

ಹಿರಿಯ ವಿದ್ವಾಂಸರಾದ ಜಿ. ರಾಮಕೃಷ್ಣ ಅವರು ಮಾತನಾಡಿ, “ಯಾರದ್ದೊ ಶ್ರಮವನ್ನು ಇನ್ಯಾರೊ ಕಬಳಿಸುತ್ತಿದ್ದ ಸಂದರ್ಭದಲ್ಲಿ, ‘ಚೆ’ ತಲೆ ಮೇಲೆ ನಕ್ಷತ್ರ ಚಿಹ್ನೆಯ ಟೋಪಿ ಹಾಕಿದ ಭರವಸೆಯ ಆಶಾಕಿರಣವಾಗಿದ್ದ. ವಿಶ್ವದ ಯಾವುದೇ ಮೂಲೆಯಲ್ಲಿ ಅನ್ಯಾಯವಾಗುತ್ತಿದ್ದರೆ, ಅದರ ವಿರುದ್ಧ ದನಿ ಎತ್ತುವ ಮನುಜರು ನನ್ನ ಸಂಗಾತಿಗಳು ಎಂದು ಹೇಳಿದ್ದ” ಎಂದು ಹೇಳಿದರು.

‘‘ಇಂದು ‘ಚೆ’ ಎಂದರೇ ಇಡೀ ವಿಶ್ವ ಇವ ನಮ್ಮವ ಎನ್ನುತ್ತಿದೆ. ವಿಶ್ವಮಾನವ ಪರಿಕಲ್ಪನೆ ಹೊಂದಿದ್ದ ‘ಚೆ’ ಕ್ಯೂಬಾದ ಹವಾನದಲ್ಲಿ ‘ಪ್ರತಿಯೊಬ್ಬ ಕ್ರಾಂತಿಕಾರಿಯ ಕೆಲಸ ಕ್ರಾಂತಿ ಮಾಡುವುದೆ ಹೊರತು ಸಾಮ್ರಾಜ್ಯಶಾಹಿ ಎಂಬ ಹೆಣ ಬೀಳುತ್ತದೆ, ಅದನ್ನು ಹೊರೋಣ ಎಂದು ಕಾಯುವುದಲ್ಲ. ಗೆಲ್ಲುವವರೆಗೂ ಹೋರಾಡುತ್ತಿರಬೇಕು’ ಎಂಬ ಸಂದೇಶ ಕೊಟ್ಟಿದ್ದರು” ಎಂದು ಹೇಳಿದರು.

“ಅಮೆರಿಕದ ಸಿಎಎ ‘ಚೆ’ಯನ್ನು ಕೊಲೆ ಮಾಡಿದ್ದು ಇತಿಹಾಸದಲ್ಲಿ ಹಲವರು ರಂಜನೀಯವಾಗಿ ಚಿತ್ರಿಸಿದರೆ, ಕೆಲವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮೂರನೇ ಬಾರಿಗೂ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿರುವ ಮೋದಿಯನ್ನು ಮಹಾನಾಯಕ ಎಂದರೆ ಅಂತಹ ದೇಶ ಭ್ರಮಾತ್ಮಕವಾಗಿದೆ ಎಂದರ್ಥ. ಈ ವೇಳೆ ‘ಚೆ’ ಎಂಬ ಮಹಾನ್ ವ್ಯಕ್ತಿಯನ್ನು ಅನುಕರಿಸಲು ಎಲ್ಲರೂ ಸಾಮೂದಾಯಿಕವಾಗಿ ಪಾಲ್ಗೊಳ್ಳುವುದು ಒಂದೇ ದಾರಿ” ಎಂದು ವಿಧ್ವಾಂಸ ಜಿ. ರಾಮಕೃಷ್ಣ ಅವರು ಕರೆ ಕೊಟ್ಟಿದ್ದಾರೆ.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್ ಎಲ್ ಪುಷ್ಪ ಮಾತನಾಡಿ, “ಎಲ್ಲ ತಲೆಮಾರಿನ ಜನರು ‘ಚೆ’ಗೆ ಆಕರ್ಷಿತರಾಗಿದ್ದಾರೆ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ‘ಚೆ’ ವ್ಯಕ್ತಿತ್ವ ಬಹುಮುಖ್ಯ. ಕಾವ್ಯ ಮತ್ತು ಕೋವಿಯನ್ನು ಪ್ರೀತಿಯಿಂದ ಜೊತೆಗಿರಿಸಿಕೊಂಡ ಚೇತನ ನಮ್ಮೊಳಗೂ ಮೂಡಲಿ” ಎಂದು ಆಶಿಸಿದರು.

ಅಪ್ಪನ ನೆನಪಿನ ಬುತ್ತಿ ತೆರೆದು ಹಾಡು ಹಾಡಿದ ಚೆ ಗೆವಾರ ಪುತ್ರಿ!

“ನನ್ನಪ್ಪ ತುಂಬಾ ಒಳ್ಳೆಯ ಕವಿಯಾಗಿದ್ದರು, ಹಲವು ಪುಸ್ತಕಗಳನ್ನು, ಕವಿತೆಗಳನ್ನು ಓದುತ್ತಿದ್ದರು. ಆದರೆ ಅವರು ತಮ್ಮ ಕವಿತೆಗಳನ್ನು ತಾವೆ ಓದುತ್ತಿರಲಿಲ್ಲ. ಯಾಕೆಂದರೆ ಅವರೊಳಗೊಬ್ಬ ವಿಮರ್ಶಕನಿದ್ದ” ಎಂದು 7ನೇ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿರುವ ಅಲಿಡಾ, ತಮ್ಮ ನೆನಪುಗಳ ಬುತ್ತಿಯನ್ನು ತೆರೆದಿಟ್ಟರು.

“ಅಸ್ತಮಾ ಇದ್ದ ಕಾರಣ ವೈದ್ಯರು ದಿನಕ್ಕೆ ಒಂದೇ ಸಿಗಾರ್ ಸೇದುವಂತೆ ಅಪ್ಪನಿಗೆ ಸೂಚಿಸಿದ್ದರು. ಆದರೆ, ಅಪ್ಪನಿಗೆ ತಂಬಾಕು ತೋಟದ ಕಾರ್ಮಿಕರು ದೊಡ್ಡ ಗಾತ್ರದ ಸಿಗಾರ್ ಮಾಡಿಕೊಟ್ಟಿದ್ದರು. ಅದನ್ನು ಸೇದಿ ವೈದ್ಯರಿಗೆ ಒಂದೇ ಸಿಗಾರ್ ಸೇದಿದೆ ಎಂದು ಫೋನ್ ಮಾಡಿ ಹೇಳುತ್ತಿದ್ದರು” ಎಂದು ಅಪ್ಪ ಅದೆಷ್ಟು ಉಡಾಫೆತನ ತೋರುತ್ತಿದ್ದರೆಂಬುದನ್ನು ಅವರು ವಿವರಿಸಿದರು.

“ಕೊರೋನಾ ಸೋಂಕು‌ ನಿಯಂತ್ರಿಸಲು ಕ್ಯೂಬಾ ತನ್ನದೆ ಆದ ವ್ಯಾಕ್ಸಿನ್ ಕಂಡು ಹಿಡಿದಿತ್ತು. ಆದರೆ ಅಮೇರಿಕಾ ಪೇಟೆಂಟ್ ಕಾರಣಕ್ಕೆ ಸಿರಿಂಜ್ ಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಮೂಗಿನ ಮೂಲಕ ಹಾಕುವ ವ್ಯಾಕ್ಸಿನ್ ಅನ್ನು ಕಂಡುಕೊಂಡೆವು. ನಾವು ಯಾವಾಗಲೂ ಪರ್ಯಾಯವನ್ನು ಹುಡುಕುತ್ತೇವೆ” ಎಂದು ತಮ್ಮ ದೇಶದ ಸ್ವಾಭಿಮಾನದ ಬಗ್ಗೆ ಅಭಿಮಾನದಿಂದ ನುಡಿದರು. ಭಾಷಣದ ಕೊನೆಯಲ್ಲಿ ಅಲಿಡಾ ಹಾಡನ್ನು ಕೂಡಾ ಹಾಡಿದರು.

ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಹಿರಿಯ ಲೇಖಕಿ ಡಾ. ವಿಜಯಾ, ಕೇರಳದ ಮಾಜಿ ಸಚಿವ ಎಂ.ಎ. ಬೇಬಿ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ದಲಿತ ಹಕ್ಕುಗಳ ಮುಖಂಡ ಮಾವಳ್ಳಿ ಶಂಕರ್, ಜನವಾದಿ ಮಹಿಳಾ ಸಂಘಟನೆ ನಾಯಕಿ ವಿಮಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...