Homeಮುಖಪುಟವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

ವಿಶ್ವದಲ್ಲಿ ಭಾರತದ ಮಾನ ತೆಗೆದ ನಿಜವಾದ ಅಪರಾಧಿ ಯಾರು?

- Advertisement -
- Advertisement -

ಹಿಂದಿಯಲ್ಲೊಂದು ಗಾದೆಯಿದೆ; ’ಛಾಜ್ ಬೊಲೆ ತೊ ಬೋಲೆ, ಛಲನಿ ಭಿ ಬೋಲಿ ಜಿಸ್‌ಮೆ ಸತ್ತರ್ ಛೇದ್’ ಎಂದು. ಅದಕ್ಕೆ ಕನ್ನಡದಲ್ಲಿ ’ತನ್ನ ತಟ್ಟೆಯಲ್ಲಿ ಸತ್ತ ಹೆಗ್ಗಣ ಇಟ್ಟುಕೊಂಡು, ಪಕ್ಕದವನ ತಟ್ಟೆಯಲ್ಲಿನ ನೊಣ ಓಡಿಸಿದನಂತೆ’ ಎಂಬ ಗಾದೆ ಸೂಕ್ತವಾಗಿದೆ. ರಾಹುಲ್ ಗಾಂಧಿ ಇಂಗ್ಲೆಂಡಿನ ಪ್ರವಾಸದಲ್ಲಿ ನೀಡಿದ ಹೇಳಿಕೆಗಳ ಮೇಲೆ ಸೃಷ್ಟಿಸುತ್ತಿರುವ ಗಲಾಟೆ ನೋಡಿದರೆ ಈ ಗಾದೆಯೇ ನೆನಪಾಗುವುದು.

ನಿಸ್ಸಂಶಯವಾಗಿ ದೇಶದ ಆಂತರಿಕ ವಿಷಯಗಳ ಬಗ್ಗೆ ವಿದೇಶದಲ್ಲಿ ಮಾಡುವ ಹೇಳಿಕೆಗಳಲ್ಲಿ ಒಂದು ಮಟ್ಟದ ಘನತೆ ಇರಲೇಬೇಕು. ವಿರೋಧಪಕ್ಷದ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಈ ಘನತೆಯ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದರು; ಆದರೆ ಯಾವುದೇ ಪಕ್ಷದ ಯಾವ ನಾಯಕರೂ ಇಂದು ಆ ಹಂತಕ್ಕೆ ತಲುಪುವುದಿಲ್ಲ. ಅಂದಹಾಗೆ ಈಗ ಮನೆಯ ಮಾತು ಮನೆಯಲ್ಲಿಯೇ ಮುಚ್ಚಿಡಬಹುದಾದ ಆ ದಿನಗಳೂ ಇಲ್ಲ. ಇಂಟರ್‌ನೆಟ್ ಮತ್ತು ಜಾಗತಿಕ ಮಾಧ್ಯಮಗಳ ಕಾಲದಲ್ಲಿ ಅಂತರಿಕ ಗೌಪ್ಯ ವಿಷಯಗಳನ್ನು ಹೊರಗೆ ಹೇಳಬೇಕಾದ-ಹೇಳಬಾರದ ಸಂಗತಿಗಳೆಂದೂ ಉಳಿದಿಲ್ಲ. ಆದರೂ, ಕನಿಷ್ಠ ಮೂರು ಘನತೆಯ ಸೂತ್ರಗಳನ್ನು ವ್ಯಾಖ್ಯಾನಿಸಬಹುದಾಗಿದೆ. ಮೊದಲನೆಯದಾಗಿ. ಯಾವುದೇ ಪಕ್ಷ ಇತರ ಪಕ್ಷಗಳನ್ನು ಟೀಕೆ ಮಾಡಲಿ, ಆದರೆ ಯಾವುದೇ ಕೆಳಮಟ್ಟ ಅಗ್ಗದ ಗಾಸಿಪ್‌ಅನ್ನು ಹೊರಗೆ ಹೋಗಿ ಹರಡಬಾರದು. ಎರಡನೆಯದಾಗಿ, ಇತರ ಪಕ್ಷಗಳ ಆಡಳಿತದ ಬಗ್ಗೆ ಟೀಕೆ ಮಾಡಬಹುದು, ಆದರೆ ಇಡೀ ದೇಶದ ಗೌರವವನ್ನು ತಗ್ಗಿಸುವ ಮಾತುಗಳನ್ನು ಆಡಬಾರದು. ಮೂರನೆಯದಾಗಿ, ನಮ್ಮ ಸಮಸ್ಯೆಗಳು ಏನೇ ಇರಲಿ, ವಿದೇಶಿಯರ ಹಸ್ತಕ್ಷೇಪದ ಬೇಡಿಕೆ ಇಡಬಾರದು ಹಾಗೂ ಅವರ ವಿಷಯಗಳಲ್ಲಿ ನಾವು ತಲೆತೂರಿಸಬಾರದು.

ಅಟಲ್ ಬಿಹಾರಿ ವಾಜಪೇಯಿ

ಮೊದಲ ಮಾನದಂಡವನ್ನು ತೆಗೆದುಕೊಂಡರೆ, ರಾಹುಲ್ ಗಾಂಧಿಯ ಹೇಳಿಕೆಯಲ್ಲಿ ಅಗ್ಗದ ಅಥವಾ ತೀರಾ ಕೆಳಮಟ್ಟದ ಅಂತಹ ಯಾವ ಮಾತೂ ಕಾಣಿಸಲಿಲ್ಲ. ಅವರು ಸಂಸತ್ತಿನಲ್ಲಿ ವಿರೋಧಪಕ್ಷಗಳ ನಾಯಕರ ಮೈಕ್ ಬಂದ್ ಮಾಡುವುದರ ಬಗ್ಗೆ ಹೇಳಿದರು, ವಿರೋಧಪಕ್ಷದವರ ಮೇಲೆ ತನಿಖಾ ಸಂಸ್ಥೆಗಳು ಮಾಡುತ್ತಿರುವ ರೇಡ್‌ಗಳ ಬಗ್ಗೆ ಹೇಳಿದರು ಹಾಗೂ ವಿರೋಧಪಕ್ಷಗಳ ನಾಯಕರ ಮೇಲೆ ಪೆಗಸಸ್ ಮೂಲಕ ಕಣ್ಗಾವಲು ಇಟ್ಟಿದ್ದರ ಬಗ್ಗೆ ಹೇಳಿದರು. ಈ ವಾಸ್ತವಗಳು ಜಗಜ್ಜಾಹೀರಾಗಿರುವ ವಾಸ್ತವಗಳು. ರಾಹುಲ್ ಗಾಂಧಿ ಗೌಪ್ಯವಾಗಿದ್ದ ಏನನ್ನೂ ಹೇಳಿಲ್ಲ. ಭಾರತವಷ್ಟೇ ಅಲ್ಲ, ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ಇಂತಹದ್ದೇ ರೀತಿಯಲ್ಲಿ ದಾಳಿಗಳು ಆಗುತ್ತಿವೆ. ಒಂದು ವೇಳೆ ಒಂದು ದೇಶದ ಒಬ್ಬ ಸಂಸದ, ಇನ್ನೊಂದು ದೇಶದ ಸಂಸದರೊಂದಿಗೆ ಮುಚ್ಚಿದ ಕೋಣೆಯಲ್ಲಿ ಮಾತನಾಡಿದರೆ, ಅವರು ಈ ಪ್ರಶ್ನೆಗಳ ಮೇಲೆ ಚರ್ಚೆ ಮಾಡದೇ ಇದ್ದರೆ ಮತ್ಯಾವುದರ ಬಗ್ಗೆ ಚರ್ಚೆ ಮಾಡಿಯಾರು?

ಈ ಹೇಳಿಕೆಯನ್ನು ನೀವು 2022ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬರ್ಲಿನ್‌ನ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣದೊಂದಿಗೆ ಹೋಲಿಸಿ. ಅಲ್ಲಿ ಮೋದಿಯವರು ರಾಜೀವ್ ಗಾಂಧೀಯನ್ನು ಟೀಕಿಸುತ್ತ ಹೇಳಿದ್ದೇನೆಂದರೆ, ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಕೆಳಗೆ ತಲುಪುವ ಆ ದಿನಗಳು ಈಗಿಲ್ಲ ಎಂದರು. ಅಷ್ಟೇ ಅಲ್ಲ, ಅಲ್ಲಿ ಸೇರಿದ ಜನರಿಗೆ ಅತ್ಯಂತ ಅಸಭ್ಯ ರೀತಿಯಲ್ಲಿ ’ಆ 85 ಪೈಸೆಗಳನ್ನು ಸವೆಸುತ್ತಿದ್ದ ’ಕೈ’ ಯಾವುದಿತ್ತು’ ಎಂದು ಕೇಳಿದರು. ವಿದೇಶದಲ್ಲಿ ಮಾಡಿದ ಈ ಅಗ್ಗದ ಚುನಾವಣಾ ಭಾಷಣದ ಬಗ್ಗೆ ಪ್ರಧಾನಮಂತ್ರಿಯವರು ಕ್ಷಮೆಯನ್ನೂ ಕೇಳಲಿಲ್ಲ, ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಯಾವ ಉತ್ತರವನ್ನೂ ನೀಡಲಿಲ್ಲ.

ಇದನ್ನೂ ಓದಿ: ರೌಡಿಶೀಟರ್ ಫೈಟರ್ ರವಿ ಎದುರು ಕೈಮುಗಿದು ನಿಂತ ಮೋದಿ, ಇದು ಪ್ರಧಾನಿ ಹುದ್ದೆಗೆ ಕಳಂಕ ಎಂದ ಕಾಂಗ್ರೆಸ್

ಬಹುಶಃ ಬಿಜೆಪಿಯ ನಾಯಕರ ದೂರು ಎರಡನೆಯ ಮಾನದಂಡದ ಬಗ್ಗೆ ಇದೆ; ಅದು ರಾಹುಲ್ ಗಾಂಧಿ ಮಾತುಗಳಲ್ಲಿ, ಭಾರತದಲ್ಲಿ ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ಘನತೆಯ ಪತನದ ಬಗ್ಗೆ ವ್ಯಕ್ತಪಡಿಸಿದ ಕಾಳಜಿಯಿಂದ ದೇಶದ ಇಮೇಜ್ ಕುಸಿದಿದೆ ಎಂದು. ಒಂದು ವೇಳೆ ರಾಹುಲ್ ಗಾಂಧಿ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಣೆ ಮಾಡುವ ಶಕ್ತಿಗಳು ಇಲ್ಲವಾಗಿವೆ ಅಥವಾ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಡೆಸುವುದು ಭಾರತೀಯರಿಗೆ ಆಗುವುದಿಲ್ಲ ಎಂದು ಹೇಳಿದ್ದರೆ, ಆ ಮಾನದಂಡ ಉಲ್ಲಂಘಿಸಿದ್ದಾರೆ ಎನ್ನಬಹುದಾಗಿತ್ತು. ಆದರೆ ಅವರು ಇಂಥದ್ದೇನೂ ಹೇಳಲಿಲ್ಲ, ಅದರ ಬದಲಿಗೆ ಭಾರತದ ಜನರಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯು ಆಳವಾಗಿ ಬೇರುಬಿಟ್ಟಿದ್ದನ್ನು ಎತ್ತಿತೋರಿಸಿದರು. ಅವರ ಈ ಹೇಳಿಕೆಯನ್ನು, ನೀವು ಪ್ರಧಾನಮಂತ್ರಿ ನರೇಂದ್ರ ಮೋದಿ 2015ರಲ್ಲಿ ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ನೀಡಿದ ಭಾಷಣದೊಂದಿಗೆ ಹೋಲಿಕೆ ಮಾಡಿನೋಡಿ. ಅಲ್ಲಿ ಹಿಂದಿನ ಸರಕಾರಗಳ ಮೇಲೆ ದಾಳಿ ಮಾಡುತ್ತ ಮೋದಿಯವರು ’ಹೀಗೂ ಒಂದು ಸಮಯವಿತ್ತು, ಆಗ ಜನರು ತಮ್ಮ ಕಳೆದ ಜನ್ಮದಲ್ಲಿ ಯಾವ ಪಾಪ ಮಾಡಿದ್ದೆವೋ ಏನೋ, ಅದಕ್ಕಾಗಿ ಹಿಂದುಸ್ತಾನದಲ್ಲಿ ಹುಟ್ಟಿದ್ದೀವಿ ಎಂದು ಯೋಚಿಸುತ್ತಿದ್ದರು’ ಎಂದು ಹೇಳಿದರು. ದೇಶದ ಪ್ರತಿಷ್ಠೆಯನ್ನು ತಗ್ಗಿಸುವ ಮಾನದಂಡದಲ್ಲಿ ದೇಶವನ್ನು ಅವಮಾನಿಸುವ ದೊಡ್ಡ ದೋಷಿ ಮೋದಿಜಿಯ ಈ ಹೇಳಿಕೆ ಎಂದು ನಿಸ್ಸಂಶಯವಾಗಿ ಹೇಳಬೇಕಿದೆ.

ಮೂರನೆಯ ಮಾನದಂಡ ವಿದೇಶಿಯರ ಹಸ್ತಕ್ಷೇಪವನ್ನು ಆಹ್ವಾನಿಸುವುದರ ಬಗ್ಗೆ. ತುರ್ತುಪರಿಸ್ಥಿತಿಯ ಸಮಯದಲ್ಲಿ ಅಂದಿನ ಜನಸಂಘದ ಸಂಸದ ಸುಬ್ರಮಣ್ಯಂ ಸ್ವಾಮಿಯೊಂದಿಗೆ ಅನೇಕ ವಿರೋಧಪಕ್ಷದ ನಾಯಕರು ಅಮೆರಿಕ ಮತ್ತು ಇತರ ದೇಶಗಳಿಗೆ ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಹಸ್ತಕ್ಷೇಪ ಮಾಡುವ ಬೇಡಿಕೆ ಇಟ್ಟಿದ್ದರು. ಅಂತಹ ವಿಪತ್ತಿನ ಕಾಲದಲ್ಲಿ ಹೀಗೆ ಮಾಡಬೇಕೇ ಇಲ್ಲವೇ ಎಂಬುದು ಚರ್ಚೆಯ ವಿಷಯವಾಗಿದೆ, ಆದರೆ ಸದ್ಯಕ್ಕೆ ಇಂತಹದ್ದೇನೂ ಆಗಿಲ್ಲ. ಬಿಜೆಪಿಯ ನಾಯಕರು ಆರೋಪವನ್ನಂತೂ ಮಾಡುತ್ತಿದ್ದಾರೆ, ಆದರೆ ಇಂಗ್ಲೆಂಡಿನ ಸಂಸದರು ಭಾರತೀಯ ಪ್ರಜಾಪ್ರಭುತ್ವದ ರಕ್ಷಣೆ ಮಾಡಬೇಕು ಎಂಬ ಮನವಿ ಮಾಡಿರುವಂತಹ ಯಾವ ಹೇಳಿಕೆಗಳೂ ರಾಹುಲ್ ಗಾಂಧಿಯ ಮಾತುಗಳಲ್ಲಿ ಕಾಣಸಿಗುತ್ತಿಲ್ಲ. ಸ್ವಾಭಾವಿಕವಾಗಿಯೇ, ಇಂತಹ ಆರೋಪ ಮೋದಿಯವರ ಮೇಲೆಯೂ ಇಲ್ಲ. ಆದರೆ, ಇನ್ನೊಂದು ದಿಕ್ಕಿನಿಂದ ಅವರು ಖಂಡಿತವಾಗಿಯೂ ಈ ಘನತೆಯ ಉಲ್ಲಂಘನೆ ಮಾಡಿದ್ದಾರೆ; ಅದು ಅವರು ಅಮೆರಿಕದ ಹೂಸ್ಟನ್ ನಗರದಲ್ಲಿ 2019ರಲ್ಲಿ ಆದ ರ್‍ಯಾಲಿಯಲ್ಲಿ ’ಅಬ್ ಕಿ ಬಾರ್ ಟ್ರಂಪ್ ಸರಕಾರ್’ (ಈ ಬಾರಿ ಟ್ರಂಪ್ ಸರಕಾರ) ಎಂಬ ಘೋಷಣೆಯನ್ನು ಕೂಗಿ, ಸುಮ್‌ಸುಮ್ನೆ ಅಮೇರಿಕದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಕೆಲಸ ಮಾಡಿದರು. ಈ ಅಸಫಲ ಮತ್ತು ಹಾಸ್ಯಾಸ್ಪದ ಪ್ರಯತ್ನದ ಪರಿಣಾಮಗಳನ್ನು ದೇಶ ಅನುಭವಿಸಬೇಕಾಯಿತು.

ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಮೂರು ಮಾನದಂಡಗಳು ರಾಹುಲ್ ಗಾಂಧಿಯ ಮೇಲೆ ಅನ್ವಯ ಆಗುವುದಿಲ್ಲ ಎಂದಮೇಲೆ ಬಿಜೆಪಿ ಇಷ್ಟು ವಿಚಲಿತವಾಗಿದ್ದು ಏಕೆ? ಒಂದೋ, ಅದಾನಿ ಪ್ರಕರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಈ ಗಲಾಟೆ ಸೃಷ್ಟಿಸುತ್ತಿದ್ದಾರೆ, ಅಥವಾ ರಾಹುಲ್ ಗಾಂಧಿಯು ಮೋದಿ ಸರಕಾರದ ಮರ್ಮಸ್ಥಾನದ ಮೇಲೆಯೇ ಪೆಟ್ಟುಕೊಟ್ಟಿದ್ದಾರೆಯೇ? ನಿಜ ಏನೆಂದರೆ, ಭಾರತದ ಪ್ರಜಾಸತ್ತಾತ್ಮಕ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಭಾರತ ಸರಕಾರವು ಬಿಬಿಸಿಯ ಸಾಕ್ಷ್ಯಚಿತ್ರವನ್ನು ಬ್ಯಾನ್ ಮಾಡಿದಾಗ ಹಾಗೂ ಬಿಬಿಸಿ ಕಚೇರಿಗಳ ಮೇಲೆ ರೇಡ್ ಮಾಡಿದ್ದಾರೆ ಎಂದು ಇಡೀ ಜಗತ್ತಿಗೆ ಗೊತ್ತಾದಾಗ. ಭಾರತೀಯ ಅರ್ಥವ್ಯವಸ್ಥೆಯ ಪ್ರತಿಷ್ಠೆ ಕುಸಿಯುವುದು ಯಾವಾಗ ಅಂದರೆ, ಹಿಂಡನ್‌ಬರ್ಗ್ ವರದಿಯಿಂದ ಷೇರು ಮಾರುಕಟ್ಟೆಯಲ್ಲಿ ಆದ ಹಗರಣ ತಡೆಯಲು ಭಾರತ ಸರಕಾರ ಮತ್ತು ಅದರ ಸಂಸ್ಥೆಗಳು ಏನನ್ನೂ ಮಾಡಿಲ್ಲ ಎಂಬುದು ಇಡೀ ಜಗತ್ತಿಗೆ ಗೊತ್ತಾದಾಗ. ಒಂದು ಸಶಕ್ತ ದೇಶದ ರೂಪದಲ್ಲಿ ಭಾರತದ ಪ್ರತಿಷ್ಠೆ ಯಾವಾಗ ಕುಸಿಯುತ್ತೆ ಎಂದರೆ, ಚೀನಾ ದೇಶವು ಭಾರತದ 2000 ಚದರ ಕಿಲೊಮೀಟರ್ ಆಕ್ರಮಿಸಿದೆ ಎಂದು ಸೆಟಲೈಟ್ ಮೂಲಕ ಜಗತ್ತಿಗೆ ತಿಳಿದಾಗ ಹಾಗೂ ಸರಕಾರ ಅದರ ಬಗ್ಗೆ ಮೌನವಹಿಸಿದ್ದನ್ನು ನೋಡಿದಾಗ. ಯಾರೂ ನಮ್ಮ ಗಡಿಯಲ್ಲಿ ಪ್ರವೇಶಿಸಿಲ್ಲ ಎಂದು ಪ್ರಧಾನಮಂತ್ರಿ ಹೇಳ್ತಾರೆ ಹಾಗೂ ಚೀನಾದ ಬಳಿ ಎಷ್ಟು ಆರ್ಥಿಕ ಶಕ್ತಿ ಇದೆಯೆಂದರೆ, ನಾವು ಅವರೊಂದಿಗೆ ಕಾಲ್ಕೆರೆದು ಜಗಳವಾಡಲು ಸಾಧ್ಯವಿಲ್ಲ ಎಂದು ವಿದೇಶ ಮಂತ್ರಿ ಹೇಳುತ್ತಾರೆ. ಒಂದು ವೇಳೆ ಸಂಸತ್ತಿನಲ್ಲಿ ರಾಹುಲ್ ಗಾಂಧಿಯ ಮೇಲೆ ದೇಶದ ಪ್ರತಿಷ್ಠೆ ಕಡಿಮೆ ಮಾಡಿದ ಆರೋಪ ಹೊರಿಸುವ ಬದಲಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚೀನಾದ ಆಕ್ರಮಣದ ಬಗ್ಗೆ ಬಾಯ್ಬಿಟ್ಟಿದ್ದರೆ ದೇಶದ ಘನತೆ ಖಂಡಿತವಾಗಿಯೂ ಹೆಚ್ಚುತ್ತಿತ್ತು.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...