Homeಆ ವಾರದ ಕಣ್ಣೋಟಸ್ವಾತಂತ್ರ್ಯವೀರ ಟಿಪ್ಪುಗೆ ಇದೆಂಥಾ ಅನ್ಯಾಯ!

ಸ್ವಾತಂತ್ರ್ಯವೀರ ಟಿಪ್ಪುಗೆ ಇದೆಂಥಾ ಅನ್ಯಾಯ!

- Advertisement -
- Advertisement -

ಕರ್ನಾಟಕದ ವೀರಾಧಿವೀರ, ಧೀರಾಧಿದೀರ ಟಿಪ್ಪು ಸುಲ್ತಾನನನ್ನು ಸಂಘ ಪರಿವಾರದವರು ಟೀಕಿಸಿದಷ್ಟೂ ಆತ ಜನರಿಗೆ ಹತ್ತಿರವಾಗುತ್ತಾನೆ, ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಾನೆ. ಯಾಕೆಂದರೆ ಆತನನ್ನು ವಿರೋಧಿಸಲು ಸಂಘಿಗಳು ಪ್ರಯೋಗಿಸುತ್ತಿರುವ ತರ್ಕಗಳೇ ಅಷ್ಟು ಹಾಸ್ಯಾಸ್ಪದವಾಗಿವೆ!

ಉದಾಹರಣೆಗೆ ಗೋ ಮಧುಸೂದನ ಮಂಡಿಸಿರುವ ತರ್ಕವನ್ನೇ ತೆಗೆದುಕೊಳ್ಳಿ. `ಟಿಪ್ಪು ಭಾರತಕ್ಕೆ ಅಫಘಾನಿಸ್ತಾನದ ರಾಜ ಅಹಮದ್ ಷಾ ಅಬ್ದಾಲಿಯನ್ನು ಆಹ್ವಾನಿಸಿದ್ದ ಎಂಬುದನ್ನು ಮರೆಯಬಾರದು. ಇದರಿಂದಲೇ ಆತ ದೇಶದ್ರೋಹಿ ಆಗಿದ್ದ ಎಂಬುದು ಸಾಬೀತಾಗುತ್ತದೆ’’ ಎಂದು ಅಬ್ಬರಿಸಿದ್ದಾನೆ. ಹಲವು ಇತಿಹಾಸ ತಜ್ಞರು ಸ್ಪಷ್ಟಪಡಿಸಿರುವಂತೆ ಅಫಘಾನಿಸ್ತಾನದ ರಾಜ ಅಹಮದ್ ಷಾ ಅಬ್ದಾಲಿ ಭಾರತದ ಮೇಲೆ ಮೊದಲು ದಾಳಿ ಇಟ್ಟದ್ದು 1748ರಲ್ಲಿ. ಆಗಿನ್ನೂ ಟಿಪ್ಪು ಹುಟ್ಟೇ ಇರಲಿಲ್ಲ! ಅಷ್ಟೇ ಅಲ್ಲ, ಅಹಮದ್ ಷಾ ಅಬ್ದಾಲಿ 1761ರಲ್ಲಿ ಮರಾಠರನ್ನು ಪಾಣಿಪಟ್ ಯುದ್ಧದಲ್ಲಿ ಸೋಲಿಸಿದಾಗ ಟಿಪ್ಪು ಹತ್ತು ವರ್ಷದ ಬಾಲಕ!!

ಇದನ್ನು ಓದಿ: ಟಿಪ್ಪು ಜಯಂತಿ ಆಚರಣೆ ರದ್ದು ಮಾಡಿರುವುದು ಅಪರಾಧ: ಮಾಜಿ ಸಿಎಂ ಸಿದ್ದರಾಮಯ್ಯ

ಟಿಪ್ಪು ಭಾರತಕ್ಕೆ ಆಹ್ವಾನಿಸಿದ್ದು ಅಹಮದ್ ಷಾ ಅಬ್ದಾಲಿಯ ಮೊಮ್ಮಗ ಜಮನ್ ಷಾ ದುರ್ರಾನಿಯನ್ನು. ಅಷ್ಟೇ ಅಲ್ಲ, ಟಿಪ್ಪು ಫ್ರಾನ್ಸಿನ ನೆಪೋಲಿಯನ್ ಬೋನಾಪಾರ್ಟೆಯನ್ನೂ, ಟರ್ಕಿಯ ಒಟ್ಟಮಾನ್ ಸಾಮ್ರಾಜ್ಯದ ದೊರೆಯನ್ನೂ ಭಾರತಕ್ಕೆ ಆಹ್ವಾನಿಸಿದ್ದ ಎಂಬುದೂ ಐತಿಹಾಸಿಕ ವಾಸ್ತವ. ಅದನ್ನು ಯಾರೂ ನಿರಾಕರಿಸಲಾಗುವುದಿಲ್ಲ. ಆದರೆ ಅವರೆಲ್ಲರನ್ನು ಟಿಪ್ಪು ಯಾತಕ್ಕೆ ಆಹ್ವಾನಿಸಿದ್ದ ಎಂಬುದು ಮುಖ್ಯ. ಆತ ಅವರೆಲ್ಲರೊಂದಿಗೆ ಜೊತೆಗೂಡಿ `ಮಹಾಮೈತ್ರಿಕೂಟ’ವನ್ನು ನಿರ್ಮಿಸಲು ಹೊರಟಿದ್ದು ಭಾರತದಿಂದ ಬ್ರಿಟಿಷರನ್ನು ಒದ್ದೋಡಿಸುವ ಉದ್ದೇಶದಿಂದಾಗಿ ಎಂಬುದು ವಾಸ್ತವ.

ಇಲ್ಲಿ ಸಂಘಿಗಳ ತರ್ಕದಲ್ಲಿ ಎರಡು ದೋಷಗಳು ಎದ್ದುಕಾಣುತ್ತವೆ.

ಒಂದು: ಬ್ರಿಟಿಷರ ವಿರುದ್ಧ ಯುದ್ಧ ಮಾಡಲು ಅಫಘಾನಿಸ್ತಾನ, ಫ್ರಾನ್ಸ್ ಮತ್ತು ಟರ್ಕಿಯ ಸೈನ್ಯಗಳನ್ನು ಭಾರತಕ್ಕೆ ಟಿಪ್ಪು ಆಹ್ವಾನಿಸಿದ್ದು `ದೇಶದ್ರೋಹ’ ಕೆಲಸವಾದರೆ ಸಂಘಿ ಮತ್ತು ಗೋ-ಮ ಪ್ರಕಾರ ಬ್ರಿಟಿಷರು ನ್ಯಾಯಸಮ್ಮತವಾಗಿ ಭಾರತದ ದೊರೆಗಳಾಗಿದ್ದರು! ಆ ಕಾರಣಕ್ಕೇ ಆತ ಮಾಡಿದ್ದು ದೇಶದ್ರೋಹದ ಕೆಲಸ!! ಇದಕ್ಕಿಂತ ಹುಚ್ಚುತನ ಮತ್ತೊಂದಿರಲು ಸಾಧ್ಯವೇ?

ಇದನ್ನು ಓದಿ: ಇತಿಹಾಸ ಮರೆತ ‘ಟಿಪ್ಪುವಿನ ಹಿಂದೂ ವೀರಸಂಗಾತಿಗಳು’ 

ಎರಡನೆಯದು: ಯುದ್ಧದಲ್ಲಿ ವೈರಿಯ ವೈರಿ ತನ್ನ ಮಿತ್ರ ಎಂಬ ತರ್ಕವನ್ನು ಹಲವರು ಈ ಹಿಂದೆ ಅಳವಡಿಸಿಕೊಂಡಿದ್ದಿದೆ. ಆ ನಿಟ್ಟಿನಲ್ಲೇ ಟಿಪ್ಪು ಸುಲ್ತಾನ ಕೂಡ ಬ್ರಿಟಿಷರ ವಿರುದ್ಧ ಹೋರಾಡಲು ಬೇರೆ ದೇಶಗಳ ಸೈನ್ಯದೊಂದಿಗೆ ಕೈ ಜೋಡಿಸಲು ಯತ್ನಿಸಿದ್ದು. ಟಿಪ್ಪುವಿನ ಈ ಯತ್ನವೂ ದೇಶದ್ರೋಹಕ್ಕೆ ಸಮಾನವಾದರೆ, ಸುಭಾಷ್ ಚಂದ್ರ ಬೋಸ್ ಅವರೂ ಬ್ರಿಟಿಷರನ್ನು ಭಾರತದಿಂದ ಒದ್ದೋಡಿಸಲು ಜರ್ಮನಿ, ಇಟಲಿ ಮತ್ತು ಜಪಾನ್ ಜೊತೆ ಕೈಜೋಡಿಸಿದ್ದೂ ದೇಶಕ್ಕೆ ಬಗೆದ ದ್ರೋಹವಾಗತ್ತದೆ ತಾನೆ? ಟಿಪ್ಪುಗೆ ಮಾತ್ರ ಯಾಕೆ ಅವಮಾನ ಮತ್ತು ಬೋಸ್ ಅವರಿಗೆ ಮಾತ್ರ ಯಾಕೆ ಸ್ಥಾನಮಾನ?

ಇನ್ನು ಸಿ.ಟಿ.ರವಿ `ಇವತ್ತು ಟಿಪ್ಪುವಿನ ಜನ್ಮೋತ್ಸವವನ್ನು ಆಚರಿಸಿದಂತೆ ನೂರು ವರ್ಷಗಳ ನಂತರ ಒಸಾಮಾ ಬಿನ್ ಲಾಡನ್ ಮತ್ತು ದಾವೂದ್ ಇಬ್ರಾಹಿಂ ಅವರ ಜನ್ಮೋತ್ಸವವನ್ನೂ ಆಚರಿಸಬೇಕು ಎನ್ನುತ್ತೀರಾ’’ ಎಂದು ಹಲುಬಿದ್ದಾನೆ. ಈ ಸಿ.ಟಿ. ರವಿಗೆ ಸ್ವಾತಂತ್ರ ಹೋರಾಟದಲ್ಲಿ ಮಡಿದವರಿಗೂ, ಭಯೋತ್ಪಾದಕರಿಗೂ ವ್ಯತ್ಯಾಸವೇ ಗೊತ್ತಿಲ್ಲ. ಅದಕ್ಕೆ ಕಾರಣಗಳೂ ಹಲವಾರು ಇವೆ. ಮೊದಲನೆಯದಾಗಿ, ಈ ರವಿ ಮತ್ತಾತನ ಬಳಗ ಮೆಚ್ಚಿಕೊಂಡಾಡುವ ಮತ್ತು ಹಿಂಬಾಲಿಸುವ ಆರೆಸ್ಸೆಸ್‍ನ ಯಾವ ನಾಯಕನೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿಯುವುದಿರಲಿ, ತಮ್ಮನ್ನು ತೊಡಗಿಸಿಕೊಳ್ಳುವುದಿರಲಿ, ಕನಿಷ್ಠ ಕೈಯೆತ್ತಿ ಧಿಕ್ಕಾರ ಕೂಗುವಷ್ಟು ಧೈರ್ಯವನ್ನಾಗಲಿ, ದಿಟ್ಟತನವನ್ನಾಗಲಿ ಪ್ರದರ್ಶಿಸಿದವರಲ್ಲ. ಅಷ್ಟೇ ಅಲ್ಲ, ಇವರ ಮುಖ್ಯ ನೇತಾರ ವಿ.ಡಿ.ಸಾವರ್ಕರ್ ಬ್ರಿಟಿಷರಿಗೆ ಶರಣಾಗಿ, ಅವರೇ ತನ್ನ ದೊರೆಗಳೆಂದು ಒಪ್ಪಿಕೊಂಡು, ಬ್ರಿಟಿಷರ ವಿರುದ್ಧ ಹೋರಾಡುವುದಿಲ್ಲವೆಂದು ಮುಚ್ಚಳಿಕೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯನ್ನು ಗಿಟ್ಟಿಸಿಕೊಂಡ `ಪುಣ್ಯಾತ್ಮ.’

ಎರಡನೆಯದಾಗಿ, ರವಿಯ ಅಚ್ಚುಮೆಚ್ಚಿನ ವಿಶ್ವಹಿಂದೂ ಮಹಾಸಭಾ ಗಾಂಧಿಯವರ `ಭಾರತ ಬಿಟ್ಟು ತೊಲಗಿ’ ಸಂಗ್ರಾಮವನ್ನು ವಿರೋಧಿಸಿತ್ತಲ್ಲದೆ `ಯಾವ ಹಿಂದೂ ಕೂಡ ತಮ್ಮ ಕೆಲಸಗಳನ್ನು ಬಿಟ್ಟು ಬ್ರಿಟಿಷರ ವಿರುದ್ಧದ ಸಂಗ್ರಾಮದಲ್ಲಿ ಭಾಗವಹಿಸಕೂಡದು’’ ಎಂದು ಠರಾವು ಹೊರಡಿಸಿದ್ದ `ಧೀರ’ರ ಸಂಘಟನೆ!!

ಇದನ್ನು ಓದಿ: ಆಧುನಿಕ ಶಿಕ್ಷಣದ ಪ್ರವಾದಿ, ವೈಚಾರಿಕ ಚಿಂತಕ : ಸೈಯದ್ ಅಹ್ಮದ್ ಖಾನ್  

ಹಿಂದೂತ್ವವಾದಿಗಳ ತರ್ಕರಹಿತ ವಾದದಲ್ಲಿ ಮತ್ತೊಂದು ಯಾವುದೆಂದರೆ ಟಿಪ್ಪು 800 ರಿಂದ 8000 ದೇವಸ್ಥಾನಗಳನ್ನು ಧ್ವಂಸ ಮಾಡಿದ್ದರಿಂದ ಆತನನ್ನು ಮೆಚ್ಚಲಾಗದು ಎಂಬುದು. ಟಿಪ್ಪು ಹಲವಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದು ನಿಜವಾದರೂ ನಿಖರವಾಗಿ ಆತ ಎಷ್ಟು ದೇವಸ್ಥಾನಗಳನ್ನು ನಾಶಮಾಡಿದ ಎಂಬುದನ್ನು ಲೆಕ್ಕ ಇಟ್ಟವರಿಲ್ಲ. ಇರಲಿ, ದೇವಸ್ಥಾನಗಳನ್ನು ನಾಶ ಮಾಡಿದವರನ್ನು ಮೆಚ್ಚಲಾಗುವುದಿಲ್ಲ ಎನ್ನುವ ಹಿಂದೂತ್ವವಾದಿಗಳ ನಿಲುವು ಸರಿಯಾದದ್ದೇ ಆದರೆ ಅವರು ಮರಾಠರನ್ನು ಅದು ಹೇಗೆ ಮೆಚ್ಚುತ್ತಾರೆ?
ಈ ಪ್ರಶ್ನೆ ಯಾಕೆ ಮುಖ್ಯ ಎಂದರೆ ಇದೇ ಮರಾಠರು ಕರ್ನಾಟಕದಲ್ಲಿರುವ ಒಂದು ದೇವಸ್ಥಾನವನ್ನು ನಾಶ ಮಾಡಿದ್ದರು. ಅದೂ ಯಾವ ದೇವಸ್ಥಾನವನ್ನು ಎನ್ನುತ್ತೀರಿ? ದೇಶದಾದ್ಯಂತ ಬೌದ್ಧ ಧರ್ಮವನ್ನು ದಮನ ಮಾಡಿ ಪುರೋಹಿತಶಾಹಿಗಳ ಹಿತಾಸಕ್ತಿ ಕಾಪಾಡುವ ಹಿಂದೂ ಧರ್ಮಕ್ಕೆ ಮರುಜೀವ ಕೊಟ್ಟ ಶಂಕರಾಚಾರ್ಯರೇ ಶೃಂಗೇರಿಯಲ್ಲಿ ಸ್ಥಾಪಿಸಿದ್ದ ಪೀಠದಲ್ಲಿರುವ ಶಾರದಾ ದೇವಿ ಪೂಜಾಮಂದಿರವನ್ನು!

1791ರಲ್ಲಿ ರಘುನಾಥರಾವ್ ಪಟ್ಟವರ್ಧನ್ ನೇತೃತ್ವದಲ್ಲಿ ಶೃಂಗೇರಿಯ ಮೇಲೆ ದಾಳಿ ಮಾಡಿದ ಮರಾಠರು ಹಲವಾರು ಬ್ರಾಹ್ಮಣರನ್ನು ಕೊಂದು, ಮಠದಲ್ಲಿದ್ದ ಹಣ ಮತ್ತು ಆಭರಣಗಳನ್ನು ಲೂಟಿ ಮಾಡಿದ್ದರಲ್ಲದೆ ಪವಿತ್ರ ಶಾರದಾ ದೇವಿಯ ಮೂರ್ತಿಯನ್ನೂ ಕಿತ್ತು ಬಿಸಾಡುವಷ್ಟು ಉದ್ಧಟತನವನ್ನು ಮೆರೆದಿದ್ದರು. ಅಷ್ಟೇ ಅಲ್ಲ, ದಿಲೀಪ್ ಮೆನನ್ ಎಂಬ ಇತಿಹಾಸ ತಜ್ಞ ಹೇಳುವ ಪ್ರಕಾರ “ಟಿಪ್ಪು ಇದ್ದ 18ನೇ ಶತಮಾನದಲ್ಲಿ ವಿವಿಧ ಸೈನ್ಯಗಳು ದೇವಸ್ಥಾನಗಳ ಮೇಲೆ ದಾಳಿ ಮಾಡುವುದು ಸಹಜವಾಗಿತ್ತು. ಯಾಕೆಂದರೆ ಆಗ ದೇವಸ್ಥಾನಗಳ ಗರ್ಭಗುಡಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಡುತ್ತಿದ್ದರು. ಹಾಗೆ ನೋಡಿದರೆ, ಆ ಶತಮಾನದಲ್ಲಿ ಮರಾಠರು ಪೂರ್ವ ಮತ್ತು ದಕ್ಷಿಣ ಭಾರತದಲ್ಲಿದ್ದ ದೇವಸ್ಥಾನಗಳನ್ನು ನಿರಂತರವಾಗಿ ಕೊಳ್ಳೆಹೊಡೆಯುತ್ತಿದ್ದರು. ಅವರು ಗರ್ಭಗುಡಿಯಲ್ಲೇ ಸೈನ್ಯಗಳ ತುಕಡಿಗಳನಿಟ್ಟು ದೇವಸ್ಥಾನದಲ್ಲಿ ಸಿಗುವ ಲೋಹಗಳನ್ನೆಲ್ಲ ಕರಗಿಸಿ ಯುದ್ಧಕ್ಕೆ ಬೇಕಾದ ಅಸ್ತ್ರಗಳನ್ನು ತಯಾರಿಸುತ್ತಿದ್ದರು.”

ಈ ಕಾರಣಕ್ಕೆ ಟಿಪ್ಪುವನ್ನು ಹಿಂದೂತ್ವವಾದಿಗಳು ವಿರೋಧಿಸುವುದಾದರೆ ಶೃಂಗೇರಿ ದೇವಸ್ಥಾನದ ಮೇಲೆ ದಾಳಿ ಮಾಡಿದ ಮರಾಠರನ್ನೇ ಮೊದಲು ವಿರೋಧಿಸಬೇಕಲ್ಲವೇ? ಯಾಕೆ ಮರಾಠರಿಗೆ ಒಂದು ನ್ಯಾಯ, ಟಿಪ್ಪುಗೆ ಇನ್ನೊಂದು ನ್ಯಾಯ?

25 ನವೆಂಬರ್, 2015 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...